Sunday, August 2, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Bengaluru Focus

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Bengaluru Focus

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

BW SPECIAL | Bangalore Flyover | ಮಾಗಡಿ ರಸ್ತೆ “Y” ಜಂಕ್ಷನ್ ಮೇಲ್ಸೇತುವೆ ಸದ್ಯದಲ್ಲೇ ಸಾರ್ವಜನಿಕರಿಗೆ ಮುಕ್ತ…!

2020 ಇಸವಿಯಲ್ಲಿ ಮುಗಿಯಬೇಕಿದ್ದ ಕಾಮಗಾರಿ ಎರಡು ವರ್ಷಗಳ ಬಳಿಕ 2023ರ ಜನವರಿಗೆ ಸಾರ್ವಜನಿಕರ ವಾಹನ ಸಂಚಾರಕ್ಕೆ ಲಭ್ಯವಾಗಲಿದೆ.

by Bengaluru Wire Desk
November 9, 2022
in Bengaluru Focus, BW Special
Reading Time: 2 mins read
0

ಬೆಂಗಳೂರು, ನ.9 www.bengaluruwire.com : ಮಾಗಡಿ ರಸ್ತೆಯಿಂದ ಮೆಜಿಸ್ಟಿಕ್ ಓಕಳಿಪುರದ ಕಡೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ಮಿಸುತ್ತಿರುವ  “Y” ಆಕಾರದ ಮೇಲ್ಸೇತುವೆ ಕಾರ್ಯ ಗಜಪ್ರಸವದಂತೆ ಎರಡು ವರ್ಷಗಳ ಬಳಿಕ 2023ರ ಜನವರಿಗೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.

ಮಾಗಡಿ ರಸ್ತೆಯಿಂದ ಮೆಜಿಸ್ಟಿಕ್ ಓಕಳಿಪುರದ ಕಡೆಗೆ 390 ಮೀಟರ್ ಫ್ಲೈಓವರ್ ಸೇರಿದಂತೆ 520 ಮೀಟರ್ ಗ್ರೇಡ್ ಸಪರೇಟರ್ ಹಾಗೂ ಓಕಳಿಪುರ ನಿಂದ ರಾಜಾಜಿನಗರದ ಕಡೆಗೆ ಸಂಚರಿಸುವ 420 ಮೀಟರ್ ಕೆಳಸೇತುವೆ (Underpass) ಕಾಮಗಾರಿ 2019 ಏಪ್ರಿಲ್ ನಲ್ಲಿ ಪ್ರಾರಂಭವಾಗಿತ್ತು. 24-04-2020ಕ್ಕೆ ಮೇಲ್ಸೇತುವೆ ಹಾಗೂ ಕಳಸೇತುವೆ ಕಾಮಗಾರಿ ಸಂಪೂರ್ಣವಾಗಬೇಕಿತ್ತು. ಆದರೆ ಎರಡು ವರ್ಷ ತಡವಾದರೂ 33 ಕೋಟಿ ರೂ. ಯೋಜನೆ ಸಮಯಕ್ಕೆ ಸರಿಯಾಗಿ ಮುಗಿದಿಲ್ಲ.

ಮಾಗಡಿ ರಸ್ತೆ (ಹಳೆಯ ಮೈಸೂರು ರಸ್ತೆ) ಮಿನರ್ವ ಮಿಲ್ ಬಳಿ ಬಿಬಿಎಂಪಿಯ ಗ್ರೇಡ್ ಸಪರೇಟರ್ ಕಾಮಗಾರಿ ಆರಂಭವಾದ ಮೇಲಿಂದ ಈ ರಸ್ತೆಯಿಂದ ಮೆಜಿಸ್ಟಿಕ್ ಹೋಗಬೇಕೆಂದರೆ ವಾಹನ ಸವಾರರು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಸುಜಾತ ಥಿಯೇಟರ್ ರಸ್ತೆಯಲ್ಲಿ ಸಂಚರಿಸಿ, ರಾಜಾಜಿನಗರ ಪ್ರವೇಶದ್ವಾರದ ಮೇಲ್ಭಾಗ ಯೂ ಟರ್ನ್ ಹೊಡೆದು ಓಕಳಿಪುರದ ಕಡೆಗೆ ಹೋಗಬೇಕಿತ್ತು. ಇದರಿಂದ ಒಂದೆರಡು ನಿಮಿಷದಲ್ಲಿ ಸಾಗಬೇಕಾದ ಹಾದಿ ವಾಹನ ದಟ್ಟಣೆ ಅವಧಿಯಲ್ಲಿ 5-10 ನಿಮಿಷದಿಂದ ಕಾಲುಗಂಟೆ ಆಗುತ್ತಿತ್ತು. ಇದರಿಂದ ವಾಹನ ಸವಾರರಂತೂ ಹೈರಾಣಾಗಿದ್ದಾರೆ. ಯಾವಗಪ್ಪಾ ಈ ಯೋಜನೆ ಪೂರ್ಣವಾಗುತ್ತೆ ಅಂತ ಕಾಯುತ್ತಿದ್ದವರಿಗೆ ಈ ವಿಷ್ಯ ಸ್ವಲ್ಪ ರಿಲೀಫ್ ನೀಡಿಲಿದೆ.

ವೈ ಜಂಕ್ಷನ್ ಫ್ಲೈಓವರ್ ಪಕ್ಷಿನೋಟ (ಸಂಗ್ರಹ ಚಿತ್ರ)

“ಮಿನರ್ವ ಮಿಲ್ ಬಳಿ ಮಾಗಡಿ ರಸ್ತೆಯಿಂದ ಮೆಜಿಸ್ಟಿಕ್ ವರೆಗಿನ ವೈ ಜಂಕ್ಷನ್ ಕಾಮಗಾರಿ ಕೆಪಿಟಿಸಿಎಲ್, ಬೆಸ್ಕಾಂ ಹೆವಿ ವೋಲ್ಟೇಜ್ ಮಾರ್ಗ ಬದಲಾವಣೆ, ಕರೋನಾ ಸೋಂಕು, ಲಾಕ್ ಡೌನ್ ಮತ್ತಿತರ ಕಾರಣಾಂತರಗಳಿಂದ ವಿಳಂಬವಾಗಿದೆ ನಿಜ. 2016-17ರ ನಗರೋತ್ಥಾನ ಅನುದಾನದಡಿ 33 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಆದರೆ ಮುಂದಿನ ವರ್ಷ ಜನವರಿ 2023ರ ವೇಳೆಗೆ ಈ ಮೇಲ್ಸೇತುವೆ ಸಾರ್ವಜನಿಕ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.”

– ರವೀಂದ್ರ, ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ)

ಕಾಮಗಾರಿ ಆರಂಭವಾದಾಗ ಈ ಸ್ಥಳದಲ್ಲಿ ವಾಹನಗಳು ಗಂಟೆಗೆ   6 ಸಾವಿರ ಚಲಿಸುತ್ತಿದ್ದಿದ್ದು ಪ್ರಸ್ತುತ 10 ಸಾವಿರ ವಾಹನಗಳಿಗೆ ಏರಿಕೆಯಾಗಿದೆ. ಆದರೆ  ವೈ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಮುಗಿದರೆ ಕೇವಲ ಮೂರು ನಿಮಿಷದಲ್ಲಿ ಓಕಳಿಪುರದ ಕಡೆಗೆ ಸಾಗಬಹುದು. ಪ್ರಸ್ತುತ ವೈ ಜಂಕ್ಷನ್ ಮೇಲ್ಸೇತುವೆಗೆ ಬಣ್ಣ ಬಳಿಯಲಾಗುತ್ತಿದ್ದು, ಡಾಂಬರ್ ಮತ್ತು ಎಲೆಕ್ಟ್ರಿಕ್ ಕೆಲಸಗಳು ಬಾಕಿಯಿದೆ ಎನ್ನುತ್ತಾರೆ ಬಿಬಿಎಂಪಿ ರಸ್ತೆ ವಿಭಾಗದ ಅಧಿಕಾರಿಗಳು.

ನಗರದಲ್ಲಿ ಪ್ರಥಮ ಬಾರಿಗೆ ಕ್ಲಿಷ್ಟಕರ ಎಂಜಿನಿಯರಿಂಗ್ ವಿನ್ಯಾಸದ 110 ಮೀ. ಕಾಂಕ್ರಿಟ್ ಸ್ಲಾಬ್ ನಿರ್ಮಾಣ :

ಬೆಂಗಳೂರಿನಲ್ಲೇ ಮೊದಲ ಬಾರಿಗೆ ವೈ ಜಂಕ್ಷನ್ ಮೇಲು ಸೇತುವೆಯಲ್ಲಿ 390 ಮೀಟರ್ ಉದ್ದದ ಮೇಲುಸೇತುವೆ (ಒಟ್ಟು ಫ್ಲೈಓವರ್ ಉದ್ದ 520 ಮೀ.)ಯ ಪೈಕಿ 110 ಮೀಟರ್ ಉದ್ದದ ಆಬ್ಲಿಗೇಟರಿ ಸ್ಪಾನ್ (Obligatory Span) ಎಂಬ ಕ್ಲಿಷ್ಟ ಎಂಜಿನಿಯರಿಂಗ್ ವಿನ್ಯಾಸದ ದೊಡ್ಡ ಕಾಂಕ್ರೀಟ್ ಸ್ಲಾಬ್ ಹಾಕಲಾಗಿದೆ. ಈ ಸ್ಲಾಬ್ ನ ಕಬ್ಬಿಣ ಕಟ್ಟುವ ವಿನ್ಯಾಸ ಪ್ರತಿ ಒಂದು ಮೀಟರ್ ಗೆ ಬದಲಾಗುತ್ತೆ. ಕೇವಲ ಈ ಫ್ಲೈಓವರ್ ನ ಕಬ್ಬಿಣ ಕಟ್ಟಲು 6 ತಿಂಗಳು ಸಮಯ ಹಿಡಿಯಿತು ಎನ್ನುತ್ತಾರೆ ರಸ್ತೆ ವಿಭಾಗದ ಎಂಜಿನಿಯರ್ ಒಬ್ಬರು.

ಕ್ಲಿಷ್ಟಕರ ಎಂಜಿನಿಯರಿಂಗ್ ವಿನ್ಯಾಸ

ಭಾರೀ ವಿದ್ಯುತ್ ಕೇಬಲ್ ಗಳ ಸ್ಥಳಾಂತರ ವಿಳಂಬ :
ಬಿಬಿಎಂಪಿ ಮಾಗಡಿ ರಸ್ತೆ – ಓಕಳಿಪುರದ ಮಧ್ಯೆ ಕಾಮಗಾರಿ ಆರಂಭಿಸುವ ಪ್ರಾರಂಭದಲ್ಲೇ ಕೆಪಿಟಿಸಿಎಲ್ 440 ವೋಲ್ಟ್ಸ್ ಸಾಮರ್ಥ್ಯದ ಕೇಬಲ್ ಹಾಗೂ ಬೆಸ್ಕಾಂ ಕೇಬಲ್ ಇದ್ದ ಕಾರಣ ಆ ಕೇಬಲ್ ವರ್ಗಾವಣೆ ಮಾಡುವ ವಿಚಾರದಲ್ಲೆ ಒಂದು ವರ್ಷ ಸಮಯ ವ್ಯರ್ಥವಾಯಿತು. ಹೀಗಾಗಿ ಓಕಳಿಪುರದ ಕಡೆಯಿಂದ ರಾಜಾಜಿನಗರ ಕಡೆಗೆ ಸಾಗುವ ಅಂಡರ್ ಪಾಸ್ ಕಾಮಗಾರಿ ವಿಳಂಬವಾಗಿ ಕೊನೆಗೆ ಕಳೆದ ವರ್ಷ ಸೆಪ್ಟೆಂಬರ್ 11ರಿಂದ ಅಂಡರ್ ಪಾಸ್ ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆನಂತರವಷ್ಟೆ ಟ್ರಾಫಿಕ್ ಪೊಲೀಸರು ವಾಟಾಳ್ ನಾಗರಾಜ್ ರಸ್ತೆಯ ಭಾಗದಲ್ಲಿ ವೈ ಜಂಕ್ಷನ್ ನಿರ್ಮಿಸಲು ಅನುವು ಮಾಡಿಕೊಟ್ಟರು.

ಕರೋನಾ ಸೋಂಕಿನಿಂದ ಮೊದಲ ಅಲೆಯಲ್ಲಿ ಮೂರು ಲಾಕ್ ಡೌನ್ ನಿಂದ 8 ತಿಂಗಳು ಸಮಯ ವ್ಯರ್ಥವಾಯಿತು. ಆನಂತರವಷ್ಟೇ ಕಾರ್ಮಿಕರಿಂದ ಕಾಮಗಾರಿ ನಡೆಸಲು ಅನುಮತಿ‌ ದೊರೆಯಿತು ಎಂದು ಪ್ರಾಜೆಕ್ಟ್ ವಿಳಂಬಕ್ಕೆ ಅಧಿಕಾರಿಗಳು ಕಾರಣ ನೀಡಿದ್ದಾರೆ.

ವೈ ಜಂಕ್ಷನ್ ಮೇಲ್ಸೇತುವೆ ಮತ್ತು ಕೆಳಸೇತುವೆ ಯೋಜನೆ ನಕ್ಷೆ

ಲುಲು ಮಾಲ್ ಮತ್ತೊಂದು ಅಂಡರ್ ಪಾಸ್ ಕೆಲಸ ಬಾಕಿ :
ಇನ್ನು ರಸ್ತೆ ಪಕ್ಕದಲ್ಲೇ ಇರುವ ಲುಲು ಮಾಲ್ ಗೆ ತೆರಳಲು ಈಗಾಗಲೇ ಮಾಲ್ ನವರೇ ರಾಜಾಜಿನಗರದ ಕಡೆಯಿಂದ ಮಾಲ್ ತನಕ ಸಾಕಲು ಅಂಡರ್ ಪಾಸ್ ನಿರ್ಮಿಸಿ ವಾಹನ ಸಂಚಾರಕ್ಕೆ ಬಳಕೆಯಾಗುತ್ತಿದೆ. ಆದರೆ ಲಾಲು ಮಾಲ್‌ನಿಂದ ಮಾಗಡಿ ರಸ್ತೆ ಕಡೆಗೆ ಸಾಗುವ ಕೆಳಸೇತುವೆ (ಇಂಟಿಗ್ರೇಟೆಡ್) ಕಾಮಗಾರಿ ಇನ್ನು ಬಾಕಿಯಿದೆ. ಆದರೆ ಈ ಎರಡು ಕಾಮಗಾರಿಗಳನ್ನು ಲುಲು ಮಾಲ್ ನವರೇ ವಹಿಸಿಕೊಂಡಿದ್ದರು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಒಟ್ಟಾರೆ 2020ರಲ್ಲಿ ಮುಗಿಯಬೇಕಿದ್ದ ಕಾಮಗಾರಿ ಎರಡು ವರ್ಷದ ಬಳಿಕ ಮುಗಿಯುತ್ತಿದೆ. ಈ ರೀತಿ ದೊಡ್ಡ ದೊಡ್ಡ ಯೋಜನೆಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಬೆಂಗಳೂರಿಗೆ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿ ನೇಮಕವಾಗಬೇಕು :
“ಬೆಂಗಳೂರು ಮೆಟ್ರೋ ಸಿಟಿ. ಸಾಕಷ್ಟು ಬೆಳೆಯುತ್ತಿದೆ. ಇಷ್ಟು ದೊಡ್ಡ ರಾಜಧಾನಿಗೆ ಪ್ರತ್ಯೇಕ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿ ಉಸ್ತುವಾರಿ ಅಗತ್ಯವಿದೆ. ಹಿಂದೆ ಮುಖ್ಯ ಕಾರ್ಯದರ್ಶಿಗಳಾಗಿದ್ದ ಟಿ.ಎಂ.ವಿಜಯ್ ಭಾಸ್ಕರ್ ತಿಂಗಳಿಗೊಮ್ಮೆ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಬಿಎಂಟಿಸಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯ ಸಮತಿ ಸಭೆ ನಡೆಸುತ್ತಿದ್ದರು. ಆ ಸಭೆಗಳು ಪುನಃ ಪ್ರಾರಂಭವಾಗಬೇಕು. ಇಲ್ಲವಾದಲ್ಲಿ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ವೈ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ರೀತಿ ಹಲವು ಯೋಜನೆಗಳ ಜಾರಿಯು ವಿಳಂಬವಾಗಲಿದೆ. ಇದರಿಂದ ತೆರಿಗೆದಾರರ ಹಣ, ಸಮಯ ವ್ಯರ್ಥವಾಗಿ, ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಕಾರಣವಾಗಲಿದೆ.” – ಡಾ.ಭಾಸ್ಕರ್ ರಾವ್, ಆಪ್ ಪಕ್ಷದ ಮುಖಂಡ (ಮಾಜಿ ಪೊಲೀಸ್ ಆಯುಕ್ತ)

WhatsApp Join our WhatsApp Channel
Previous Post

ಬಿಬಿಎಂಪಿ ಕನ್ನಡ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ : ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

Next Post

PM News Updates | ಪ್ರಧಾನಿಯಿಂದ ನಾಳೆ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ ; ಪಿಎಂ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

Next Post

PM News Updates | ಪ್ರಧಾನಿಯಿಂದ ನಾಳೆ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ ; ಪಿಎಂ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

BW EXCLUSIVE | ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಿದ ಶಿಲ್ಪಿಗಳು ಹೇಳಿದ ಕುತೂಹಲಕಾರಿ ವಿಷಯಗಳೇನು?

Please login to join discussion

Like Us on Facebook

Follow Us on Twitter

Recent News

Science News | ವಿಶ್ವದ ಬೃಹತ್ ಡಿಜಿಟಲ್ ಕ್ಯಾಮೆರಾದಲ್ಲಿ 5 ಲಕ್ಷ ಗ್ಯಾಲಕ್ಸಿಗಳ ಮಹಾದರ್ಶನ

August 2, 2026

GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

August 2, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Science News | ವಿಶ್ವದ ಬೃಹತ್ ಡಿಜಿಟಲ್ ಕ್ಯಾಮೆರಾದಲ್ಲಿ 5 ಲಕ್ಷ ಗ್ಯಾಲಕ್ಸಿಗಳ ಮಹಾದರ್ಶನ

August 2, 2026

GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

August 2, 2026

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 2, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group