ಬೆಂಗಳೂರು, ಅ.10 www.bengaluruwire.com : ನಾಡು-ನುಡಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಜ್ಞಾನ ಹೆಚ್ಚಿಸಲು ರಾಷ್ಟೋತ್ಥಾನ ಸಾಹಿತ್ಯವು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1 ರಿಂದ ಡಿಸೆಂಬರ್ 7ರವರೆಗೆ ‘ಕನ್ನಡ ಪುಸ್ತಕ ಹಬ್ಬ’ವನ್ನು ಹಮ್ಮಿಕೊಂಡಿದೆ. ಈ ಬೃಹತ್ ಹಬ್ಬದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಪ್ರಚಾರ ಪ್ರಮುಖ ರಾಜೇಶ್ ಪದ್ಮಾರ್ ಹಾಗೂ ರಾಷ್ಟೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಸ್ಪರ್ಧೆಗಳ ಪೋಸ್ಟರ್ಗಳನ್ನು ಬಿಡುಗಡೆ ಮಾಡಿ, ಯಶಸ್ಸಿಗೆ ಶುಭ ಹಾರೈಸಿದರು.
10 ಸ್ಪರ್ಧೆ, ಮೂರು ವಿಭಾಗಗಳು :
ವಿದ್ಯಾರ್ಥಿಗಳಿಗೆ ಒಟ್ಟು ಮೂರು ವಿಭಾಗಗಳಲ್ಲಿ 10 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅವುಗಳ ವಿವರ ಇಲ್ಲಿದೆ:

5 ರಿಂದ 8ನೇ ತರಗತಿ : ದೇಶಭಕ್ತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದ ಗೀತಗಾಯನ ಮತ್ತು ಚಿತ್ರಕಲಾ ಸ್ಪರ್ಧೆ. 9 ರಿಂದ 12ನೇ ತರಗತಿ : ಗೀತಗಾಯನ, ಚರ್ಚಾಸ್ಪರ್ಧೆ, ವಿಡಿಯೊ ಭಾಷಣ ಸ್ಪರ್ಧೆ ಮತ್ತು ಲೇಖನ ಸ್ಪರ್ಧೆ. ಪದವಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ -ಪುಸ್ತಕ ಪರಿಚಯ ಮತ್ತು ಭಾಷಣ ಸ್ಪರ್ಧೆ.
ಈ ಸ್ಪರ್ಧೆಗಳು ರಾಜ್ಯೋತ್ಸವದ ಸಂದರ್ಭದಲ್ಲಿ ನಾಡು-ನುಡಿಯ ಮಹತ್ವ, ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸಲು ಸಹಾಯಕವಾಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ಸ್ಪರ್ಧೆಗಳ ಕುರಿತು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 95911 55622 ಅನ್ನು ಸಂಪರ್ಕಿಸಬಹುದು.





















