ಬೆಂಗಳೂರು ವೈರ್ ವರದಿ ಪರಿಣಾಮ ಬೀರಿದ ಸುದ್ದಿಗಳು :
BW SPECIAL | ಉಲ್ಲಾಳ ವಾರ್ಡಿನ 100 ಅಡಿ ರಸ್ತೆಯಲ್ಲಿದೆ ಸ್ಪಾಟ್ ಔಟ್ ಪಾಯಿಂಟ್!! : ಕಣ್ಣೂರು ಡಾಂಬರ್ ಮಿಕ್ಸ್ ಪ್ಲಾಂಟ್ ಕಣ್ಮುಚ್ಚಿ 1 ವಾರ : ನಗರದಲ್ಲಿ ಸಾವಿಗೆ ಕಾದು ಕುಳಿತಿವೆ ಸಾವಿರಾರು ರಸ್ತೆಗುಂಡಿಗಳು
https://bengaluruwire.com/2025/07/29/bengaluru-potholes-accidents-bbmp-negligence/ 29-07-2025 ರಂದು ಬೆಂಗಳೂರು ವೈರ್ ಮಾಡಿದ ವಿಶೇಷ ಸುದ್ದಿಯಿಂದ ಎಚ್ಚೆತ್ತುಕೊಂಡ ಹಿಂದಿನ ಬಿಬಿಎಂಪಿ (ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಅಧಿಕಾರಿಗಳು ಹಾಗೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಅಪಾಯಕಾರಿಯಾಗಿದ್ದ ಉಲ್ಲಾಳ ವಾರ್ಡಿನ 100 ಅಡಿ ರಸ್ತೆಯ ಸ್ಪಾಟ್ ಔಟ್ ಪಾಯಿಂಟ್ ರಸ್ತೆ ಗುಂಡಿಯನ್ನು ಮುಚ್ಚಿದರು.
ಇದು ಬೆಂಗಳೂರು ವೈರ್ ಸ್ಪೆಷಲ್ ಸ್ಟೋರಿ ಇಂಪ್ಯಾಕ್ಟ್. ಮುಂದಿರುವ ಲಿಂಕ್ ಆ ಸುದ್ದಿಗೆ ಸಂಬಂಧಿಸಿದ್ದು :

BW IMPACT | ಬೆಂಗಳೂರು ವೈರ್ ವರದಿ ಪರಿಣಾಮ : ಉಲ್ಲಾಳ 100 ಅಡಿ ರಸ್ತೆಯ ಗುಂಡಿ ತಾತ್ಕಾಲಿಕ ದುರಸ್ತಿ; 2 ವಾರದಲ್ಲಿ ಕಣ್ಣೂರು ಡಾಂಬರು ಮಿಶ್ರಣ ಘಟಕ ಪುನರಾರಂಭ
- BW SPECIAL | GPS VIDEO | “ಜಾಗ ಬಿಡಿ…ಇದು ಗುಂಡಿಗಳ ರಾಜ ರಸ್ತೆ” : ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಸ್ತೆ ದುರವಸ್ಥೆ
https://bengaluruwire.com/2025/09/19/bengaluru-road-potholes-bengaluruwire-special/ 19-09-2025 ರಂದು ಬೆಂಗಳೂರಿನಲ್ಲಿನ ರಸ್ತೆ ಗುಂಡಿ ಸಮಸ್ಯೆಗಳ ಬಗ್ಗೆ ತಿಳಿಸುತ್ತಾ ಹೊಸದಾಗಿ ಅಸ್ಥಿತ್ವಕ್ಕೆ ಬಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಮುದ್ರಣಾಲಯದಲ್ಲಿನ ರಸ್ತೆಯೊಂದಕ್ಕೆ ರಸ್ತೆಗೆ ಟಾರ್ ಅಥವಾ ರಸ್ತೆ ಗುಂಡಿ ಮುಚ್ಚದೆ 4-5 ವರ್ಷಗಳಾಗಿತ್ತು. ಈ ಬಗ್ಗೆ ಸ್ಥಳೀಯರು ಅನುಭವಿಸುತ್ತಿದ್ದ ತೊಂದರೆಗಳ ಬಗ್ಗೆ ಪಶ್ಚಿಮ ನಗರ ಪಾಲಿಕೆ ಅಧಿಕಾರಿಗಳ ಸೆಳೆಯಲಾಗಿತ್ತು. ರಾಜ್ಯಾದ್ಯಂತ ನಡೆಯುತ್ತಿದ್ದ ಸಾಮಾಜಿಕ ಗಣತಿಗೆ ನಿಯೋಜಿತರಾಗಿದ್ದ ಅಧಿಕಾರಿಗಳು ಪಾಲಿಕೆ ಕೆಲಸಕ್ಕೆ ನಿಯುಕ್ತಿಗೊಂಡ ತಕ್ಷಣವೇ ಹಾಳಾಗಿದ್ದ ರಸ್ತೆಗೆ ಡಾಂಬರ್ ಕಾಯಕಲ್ಪ ನೀಡಿದರು.
ಇದು ಬೆಂಗಳೂರು ವೈರ್ ಸ್ಪೆಷಲ್ ಸ್ಟೋರಿ ಇಂಪ್ಯಾಕ್ಟ್. ಮುಂದಿರುವ ಲಿಂಕ್ ಆ ಸುದ್ದಿಗೆ ಸಂಬಂಧಿಸಿದ್ದು :
BW IMPACT | ಬೆಂಗಳೂರು ವೈರ್ ವರದಿ ಫಲಶ್ರುತಿ: ‘ಗುಂಡಿಗಳ ರಾಜ ರಸ್ತೆ’ಗೆ ಕೊನೆಗೂ ಡಾಂಬರ್ ಕಾಯಕಲ್ಪ
- BW Special | ಇದು, ಬೆಂಗಳೂರಿನ ಕಡಲೆ ಕಾಯಿ ಪರಿಷೆಯಾ? ಬಾಂಗ್ಲಾ ಬ್ಯಾಂಗಲ್ ಪರಿಷೆಯಾ?
https://bengaluruwire.com/2025/11/17/basavanagudi-kadalekai-parishe-bangla-encroachment/ 17-11-2025 ರಂದು ರಾಜಧಾನಿ ಬೆಂದಕಾಳೂರಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾದ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ನಡೆಯುವ ಬಸವನಗುಡಿ ದೇಗುಲದ ಮುಂಭಾಗ ಕಡಲೆಕಾಯಿ ವ್ಯಾಪಾರಿಗಳಿಗಿಂತ ಬಾಂಗ್ಲಾ ನುಸುಳುಕೋರರು ಬೀದಿ ವ್ಯಾಪಾರಿಗಳ ಸೋಗಿನಲ್ಲಿ ಬಳೆ, ಕಿವಿಯೋಲೆ, ಫೊಟೊ ಫ್ರೇಮ್, ಬಲೂನು ಮಾರಾಟ ಮಾಡುವವರಿಂದ ತುಂಬಿ ಹೋಗಿದೆ ಎಂದು ಸಾಕ್ಷಾತ್ ವರದಿ ಮಾಡಿತ್ತು.
ಕಡಲೆಕಾಯಿ ಪರಿಷೆ ಮೊದಲ ದಿನವೇ ಪರಿಷೆ ಎಂಬುದಕ್ಕಿಂತ ಅಕ್ರಮ ಒಳನುಸುಳು ಕೋರರ ಪರಿಷೆ ಎಂಬುವಂತಿತ್ತು ಎಂದು ಈ ಬಾರಿ ಜಾತ್ರೆಗೆ ಬಂದ ಬಹುತೇಕರ ಅಭಿಪ್ರಾಯವನ್ನು ಸಂಗ್ರಹಿಸಿ, ಸಾಕ್ಷಿ ಸಮೇತ ಸುದ್ದಿ ಪ್ರಸಾರ ಮಾಡಿತ್ತು. ಈ ವಿಶೇಷ ವರದಿ ಪ್ರಕಟಿಸಿದ ಬಳಿಕ ಎಚ್ಚೆತ್ತುಕೊಂಡ ಮುಜರಾಯಿ ಇಲಾಖೆಯ ಅಧಿಕಾರಿಗಳು, ಪರಿಷೆ ನಡೆಯುವ ದೊಡ್ಡ ಗಣೇಶ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗಿಂತ ಸ್ಥಳೀಯರಲ್ಲದ, ಅನ್ಯ ವಸ್ತುಗಳನ್ನು ಮಾರುವ ಬೀದಿ ವ್ಯಾಪಾರಿಗಳನ್ನು ಬೇರೆ ಕಡೆ ಸ್ಥಳಾಂತರಿಸಿ, ಆ ಜಾಗದಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟರು.
ಇದು ಬೆಂಗಳೂರು ವೈರ್ ಸ್ಪೆಷಲ್ ಸ್ಟೋರಿ ಇಂಪ್ಯಾಕ್ಟ್. ಮುಂದಿರುವ ಲಿಂಕ್ ಆ ಸುದ್ದಿಗೆ ಸಂಬಂಧಿಸಿದ್ದು :
BW IMPACT | ಬಸವನಗುಡಿ ದೊಡ್ಡಗಣೇಶ ದೇವಸ್ಥಾನ ಮುಂಭಾಗ ಕಡಲೆಕಾಯಿ ವ್ಯಾಪಾರಿಗಳಿಗೆ ಆದ್ಯತೆ : ಬೆಂಗಳೂರು ವೈರ್ ವರದಿ ಪರಿಣಾಮ
ಬೆಂಗಳೂರು ವೈರ್ ಎಕ್ಸ್ ಕ್ಲೂಸಿವ್ ಸುದ್ದಿಗಳು :

- BW Exclusive | ದೇಶದ ರಕ್ಷಣೆಯಲ್ಲಿ ಸೈನಿಕರ ಕೆಲಸ ಮಾಡಲಿದೆ ಹ್ಯುಮನೈಡ್ ರೋಬೋಟ್ : ಬೆಂಗಳೂರಲ್ಲೇ ನಡೆಯುತ್ತಿದೆ ಸಂಶೋಧನೆ!!
- BW EXCLUSIVE | ಬೆಂಗಳೂರಲ್ಲಿ ಕಟ್ಟಡದ ಒಳಗಿನ ಪಾರ್ಕಿಂಗ್ ಟ್ಯಾಕ್ಸ್ ಲೆಕ್ಕಾಚಾರ : ರಿಯಲ್ ಎಸ್ಟೇಟ್ ಕುಳಗಳಿಗೆ ಭಾರೀ ಅನುಕೂಲ – ಸಾಮಾನ್ಯರಿಗೆ ಬರೆ ; ಅಸಲಿಯತ್ತೇನು?
- BW EXCLUSIVE | Bangalore Lakes | ಬತ್ತಿ ಹೋಗುತ್ತಿವೆ ಬೆಂಗಳೂರಿನ ಕೆರೆಗಳು : ಪ್ರಸ್ತುತ ಶೇ.34 ರಷ್ಟು ಮಾತ್ರ ನೀರು ಸಂಗ್ರಹ ; ಎಲ್ಲೆಲ್ಲಿ ಕೆರೆಗಳು ಬರಿದಾಗಿವೆ?
- BW EXCLUSIVE | ಸರ್ಕಾರ ಬದಲಾಗಿದ್ದಕ್ಕೆ ಬೆಂಗಳೂರಿನ ಕೆರೆಗಳ ಪ್ರವಾಹ ನಿಯಂತ್ರಿಸುವ ಸ್ಲೂಸ್ ಗೇಟ್ ಯೋಜನೆಗೆ ಕತ್ತರಿ ಬಿದ್ದಿದೆ!!
- BW EXCLUSIVE | ಬೆಂಗಳೂರು ಮಾಸ್ಟರ್ ಪ್ಲಾನ್ ತಿದ್ದುಪಡಿ -2025 ಅಧಿಸೂಚನೆ : ಹೊಸದಾಗಿ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಲಾಭವೇ? ನಷ್ಟವೇ?
- BW EXCLUSIVE | ಬಿಡಿಎ ಮಾಸ್ಟರ್ಪ್ಲಾನ್: PRR-2 ಭೂಸ್ವಾಧೀನಕ್ಕೆ 40: 60 ಸೂತ್ರ, ರೈತರಿಗೆ ಬಂಪರ್ ಆಫರ್?
- BW EXCLUSIVE | ಉಡುಪಿ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ: ರಾಜ್ಯದಲ್ಲಿ ಇದು ಎರಡನೇ ಪ್ರಕರಣ
- BW EXCLUSIVE | ಕೆ.ಆರ್.ಮಾರ್ಕೆಟ್ ಪಾರ್ಕಿಂಗ್ ಟೆಂಡರ್ ನಿಂದ ನಗರ ಪಾಲಿಕೆಗೆ ನಷ್ಟ? ಡಬಲ್ ಕಾಮಗಾರಿ? ವಾಹನ ನಿಲ್ದಾಣ ಬಂದ್, ವ್ಯಾಪಾರ ಡಲ್!!
- BW Exclusive | ಬೆಸ್ಕಾಂನಿಂದ ಜಿಬಿಎ ವ್ಯಾಪ್ತಿಯ ಸಣ್ಣ ವಸತಿ ಕಟ್ಟಡಗಳ ಮಾಲೀಕರಿಗೆ ನೆಮ್ಮದಿ: ಒಸಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕಕ್ಕೆ ಅವಕಾಶ






















