Friday, August 21, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

  • Bengaluru Focus
    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

  • Bengaluru Focus
    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

#Ejipura Flyover | ಅರ್ಧಕ್ಕೆ ನಿಂತಿದ್ದ ಈಜಿಪುರ ಫ್ಲೈ ಓವರ್ ಮುಂದಿನ ವರ್ಷಕ್ಕೆ ರೆಡಿ….!

2017ರ ಮೇ 4ರಂದು ಕಾಮಗಾರಿ ಆರಂಭವಾಗಿ 2019ರ ನವೆಂಬರ್ 4ರ ವೇಳೆಗೆ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ ಈ ಕಾಮಗಾರಿಯು 5 ವರ್ಷವಾದರೂ ಪೂರ್ಣವಾಗಿಲ್ಲ

by Bengaluru Wire Desk
January 3, 2023
in Bengaluru Focus, Public interest
Reading Time: 1 min read
1
ಕೋರಮಂಗಲ ಈಜಿಪುರ ಮೇಲ್ಸೇತುವೆ ಕಾಮಗಾರಿ ಸ್ಧಗಿತಗೊಂಡಿರುವ ಸಾಂದರ್ಭಿಕ ಚಿತ್ರ

ಕೋರಮಂಗಲ ಈಜಿಪುರ ಮೇಲ್ಸೇತುವೆ ಕಾಮಗಾರಿ ಸ್ಧಗಿತಗೊಂಡಿರುವ ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.03 www.bengaluruwire.com : ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಅರ್ಧಕ್ಕೆ ನಿಂತಿದ್ದ 2.4 ಕಿ.ಮೀ ಉದ್ದದ ಈಜಿಪುರ ಮೇಲ್ಸೇತುವೆ (Ejipur Flyover) ಕಾಮಗಾರಿ ಮುಂದಿನ ವರ್ಷದ ವೇಳೆಗೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಕೋರಮಂಗಲ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.

ಮಂಗಳವಾರ ಕೋರಮಂಗಲದ ವಾರ್ಡ್ ಕಚೇರಿಯಲ್ಲಿ ಸ್ಥಳೀಯ ವಿವಿಧ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನಿವಾಸಿಗಳೊಂದಿಗೆ ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ ಜಗದೀಶ್ ನಾಯಕ್ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಈಜಿಪುರ ಮುಖ್ಯರಸ್ತೆ –ಒಳವರ್ತುಲ ರಸ್ತೆ ಜಂಕ್ಷನ್ ನಿಂದ ಸೋನಿ ವರ್ಡ್ ಜಂಕ್ಷನ್ ಮಾರ್ಗವಾಗಿ ಕೇಂದ್ರಯ ಸದನ ಜಂಕ್ಷನ್ ವರೆಗೆ ಮೇಲ್ಸೇತುವೆ ನಿರ್ಮಾಣವಾಗುತ್ತಿರುವ ಬಾಕಿ ಕಾಮಗಾರಿಗೆ ನಿಯಮಾವಳಿಯಂತೆ ಟೆಂಡರ್ ಕರೆದು ಮುಂದಿನ ವರ್ಷದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕೋರಮಂಗಲ ನಿವಾಸಿಗಳಿಗೆ ತಿಳಿಸಿದರು.

ಕೋರಮಂಗಲ ಬಿಬಿಎಂಪಿ ಕಚೇರಿಯಲ್ಲಿ ಈಜಿಪುರ ಮೇಲ್ಸೇತುವೆ ಕಾಮಗಾರಿ ಕುರಿತಂತೆ ವಿವಿಧ ನಾಗರೀಕ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ನಡೆಸಿದ ಸಭೆಯ ಚಿತ್ರ

ಇದೇ ವೇಳೆ ಕೋರಮಂಗಲ ಎಸ್.ಟಿ.ಬೆಡ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಬಾಬು, ಹಿಂದೆ ಈಜಿಪುರ ಮೇಲ್ಸೇತುವೆ ಕಾಮಗಾರಿ ಕೈಗೊಂಡ ಸಿಂಪ್ಲೆಕ್ಸ್ ಸಂಸ್ಥೆಯು ಸೂಕ್ತ ರೀತಿ ಕಾಮಗಾರಿ ನಡೆಸದೆ ಅರ್ಧಕ್ಕೆ ನಿಲ್ಲಿಸಿದ್ದರಿಂದ ಈ ಭಾಗದಲ್ಲಾಗುತ್ತಿರುವ ಸಂಚಾರ ದಟ್ಟಣೆ ಹಾಗೂ ಅದರಿಂದ ಇಲ್ಲಿನ ನಾಗರೀಕರಿಗಾಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಅಧಿಕಾರಿಗಳ ಎದುರು ಬಿಚ್ಚಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಕೇಂದ್ರ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ವಿನಾಯಕ್ ಸೂಗೂರ್, ಈಜಿಪುರ ಮೇಲ್ಸೇತುವೆ ಕಾಮಗಾರಿ ಈತನಕ ಶೇ.40ರಷ್ಟು ಪೂರ್ಣವಾಗಿದೆ. ಉಳಿದ ಶೇ.60ರಷ್ಟು ಕಾಮಗಾರಿಗೆ ಬಾಕಿಯಿದ್ದು, 144 ಕೋಟಿ ರೂ. ಯೋಜನಾ ಮೊತ್ತದಲ್ಲಿ ಟೆಂಡರ್ ಅನ್ನು ಮುಂದಿನ ವಾರ ಕರೆಯಲಾಗುವುದು. ಈ ಹಿಂದೆ ಕರೆದ ಟೆಂಡರ್ ನಲ್ಲಿ ಎರಡು ಕಂಪನಿಗಳು ಪಾಲ್ಗೊಂಡಿದ್ದವು. ಆದರೆ ತಾಂತ್ರಿಕ ಮೌಲ್ಯಮಾಪನದ ವೇಳೆ ಅನರ್ಹರಾಗಿದ್ದವು. ಹಾಗಾಗಿ ಈ ಬಾರಿ ಸೂಕ್ತ ಕಂಪನಿ ಟೆಂಡರ್ ನಲ್ಲಿ ಭಾಗವಹಿಸುವ ವಿಶ್ವಾಸವಿದೆ. ಮುಂದಿನ ತಿಂಗಳ ಫೆಬ್ರವರಿ 15ರ ಒಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ. ಬಳಿಕ 12 ರಿಂದ 15 ತಿಂಗಳಲ್ಲಿ ಮೇಲ್ಸೇತುವೆ ನಿರ್ಮಾಣ ಯೋಜನೆ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.

ಮೇಲ್ಸೇತುವೆಗೆ ಭೂಸ್ವಾಧೀನ ಬಾಕಿ :

ಸಭೆಯ ಬಳಿಕ ಬೆಂಗಳೂರು ವೈರ್ ಜೊತೆ ಮಾತನಾಡಿದ ಕೋರಮಂಗಲ ಎಸ್.ಟಿ.ಬೆಡ್ ಕ್ಷೇಮಾಭಿವೃದ್ಧಿ ಸಂಘದ ರಾಜೇಂದ್ರಬಾಬು, ಈಜಿಪುರ ಮೇಲ್ಸೇತುವೆ ಯೋಜನೆಯಲ್ಲಿ 4 ಜಾಗಗಳಲ್ಲಿ ಭೂ ಸ್ವಾಧೀನ ಬಾಕಿಯಿದೆ. ಅದಕ್ಕಾಗಿ ಬಿಬಿಎಂಪಿಯು 35 ಕೋಟಿ ರೂ. ಹಣ ಮೀಸಲಿಟ್ಟಿದೆ. ಈಗಾಗಲೇ ಪೂರ್ವಿಕ ಮೊಬೈಲ್ ಕಂಪನಿ ಹತ್ತಿರ, ಸೆಂಟ್ ಜಾನ್ ಆಸ್ಪತ್ರೆ ಆಡಿಟೋರಿಯಮ್ ಹತ್ತಿರ, ಈಜಿಪುರ ಸಿಗ್ನಲ್ 4 ಸಣ್ಣ ಆಸ್ತಿಗಳನ್ನು ಬಿಬಿಎಂಪಿ ಭೂಸ್ವಾಧೀನಪಡಿಸಿಕೊಳ್ಳಲು ಟಿಡಿಆರ್ ಅಥವಾ ಹಣ ಪಾವತಿ ಬಿಬಿಎಂಪಿ ಸಿದ್ಧವಿದೆ. ಇದಕ್ಕಾಗಿ ಭೂಸ್ವಾಧೀನ ಅಧಿಕಾರಿಯನ್ನು ನೇಮಕ ಮಾಡಿದ್ದೇವೆ. ಒಟ್ಟಾರೆ ಈಜಿಪುರ ಫ್ಲೈ ಓವರ್ ಸಿವಿಲ್ ಕಾಮಗಾರಿ, ಸಂಚಾರ ನಿರ್ವಹಣೆ, ಭೂಸ್ವಾಧೀನ ಪ್ರಕ್ರಿಯೆಗಳು ಎಲ್ಲವೂ ಪರ್ಯಾಯವಾಗಿ ನಡೆಯಲಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾಗಿ ಅವರು ಹೇಳಿದರು.

ಅರ್ಧಕ್ಕೆ ನಿಂತಿರುವ ಕೋರಮಂಗಲ ಈಜಿಪುರ ಫ್ಲೈಓವರ್ ಕಾಮಗಾರಿ ಸ್ಥಳದಲ್ಲಿ ಸದಾ ವಾಹನ ದಟ್ಟಣೆಯಾಗುತ್ತಿರುವ ಸಾಂದರ್ಭಿಕ ಚಿತ್ರ

ಸದ್ಯ ದೊಮ್ಮಲೂರು ರಿಂಗ್ ರಸ್ತೆಯಲ್ಲಿ ಎಂಬೆಸಿ ಗಾಲ್ಫ್ ಲಿಂಕ್  ಸಾಫ್ಟ್ ವೇರ್ ಪಾರ್ಕ್ ನಲ್ಲಿ ಸುಮಾರು 25 ಸಾವಿರ ಕೆಲಸ ಮಾಡುತ್ತಾರೆ. ಅಲ್ಲಿಗೆ ದಿನನಿತ್ಯ ಕೆಲಸಕ್ಕಾಗಿ ಜನರು ವಾಹನದಲ್ಲಿ ಬಂದು ಹೋಗುವುದರಿಂದ ಇಂದಿರಾ ನಗರದಿಂದ ಕೋರಮಂಗಲ ಒಳವರ್ತುಲ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಆದಷ್ಟು ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಿದರೆ ಸ್ಥಳೀಯ ಹಾಗೂ ಸುತ್ತಮುತ್ತಲ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈಜಿಪುರ ಫ್ಲೈಓವರ್ ವಿಳಂಬಗತಿಯ ಹಿನ್ನಲೆ :

ಈಜಿಪುರ ಜಂಕ್ಷನ್, ಸೋನಿ ವರ್ಡ್ ಜಂಕ್ಷನ್, ಕೇಂದ್ರೀಯ ಸದನ, ಕೋರಮಂಗಲ 8ನೇ ಮುಖ್ಯರಸ್ತೆ, ಕೋರಮಂಗಲ 60 ಅಡಿ ರಸ್ತೆಯ ವೃತ್ತ, 5ನೇ ಬ್ಲಾಕ್ 1-ಎ ಕ್ರಾಸ್ ಜಂಕ್ಷನ್ ಹಾಗೂ ಬಿಡಿಎ ಜಂಕ್ಷನ್ ಗಳಲ್ಲಿ ಸಿಗ್ನಲ್ ದಾಟಲು ಜನರು ಸಾಕಷ್ಟು ಹರಸಾಹಸ ಪಡುತ್ತಿದ್ದರು. ಹಾಗಾಗಿ ಈ ಭಾಗದಲ್ಲಿ 2.4 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿಯು ಯೋಜನೆ ರೂಪಿಸಿತ್ತು. ಅದರಂತೆ ಈ ಕಾಮಗಾರಿಯ ಗುತ್ತಿಗೆಯನ್ನು ಸಿಂಪ್ಲೆಕ್ಸ್ ಇನ್ ಫ್ರಾಸ್ಟ್ರೆಕ್ಚರ್ ಕಂಪನಿಯು ಪಡೆದುಕೊಂಡಿತ್ತು. 2017ರ ಮೇ 4ರಂದು ಕಾಮಗಾರಿ ಆರಂಭವಾಗಿ 2019ರ ನವೆಂಬರ್ 4ರ ವೇಳೆಗೆ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ ಈ ಕಾಮಗಾರಿಯು 5 ವರ್ಷವಾದರೂ ಪೂರ್ಣವಾಗಿಲ್ಲ. ಕಾಮಗಾರಿ ಕಾರಣಾಂತರಗಳಿಂದ ಸ್ಥಗಿತಗೊಂಡ ಮೇಲೆ ಈ ಯೋಜನೆ ಕುರಿತಂತೆ ಹೈಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ನಡೆದು, ಪುನಃ ಹೊಸದಾಗಿ ಟೆಂಡರ್ ಕರೆಯಲು ಕೋರ್ಟ್ ಸಮ್ಮತಿ ಸೂಚಿಸಿದ ಬಳಿಕ ಇದೀಗ ಬಿಬಿಎಂಪಿಯು ಬಾಕಿ ಕಾಮಗಾರಿಗೆ ಹೊಸದಾಗಿ ಕಾಮಗಾರಿ ಕರೆಯಲು ಪ್ರಕ್ರಿಯೆ ನಡೆಸಿದೆ.

ಕೋರಮಂಗಲದಲ್ಲಿನ ಬಿಬಿಎಂಪಿ ಎಂಜಿನಿಯರಿಂಗ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಪಾಲಿಕೆ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ,  ಕೋರಮಂಗಲ ಕ್ಷೇಮಾಭಿವೃದ್ಧಿ ಸಂಘದ ವಿವಿಧ ಬ್ಲಾಕ್ ಗಳ ಅಧ್ಯಕ್ಷರುಗಳಾದ ನಿತಿನ್, ಪಾರ್ವತಿ, ನೀರಜ್ ಶೆಟ್ಟಿ, ಜಾನ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

WhatsApp Join our WhatsApp Channel
Previous Post

Online Gaming | ಆನ್ ಲೈನ್ ಗೇಮಿಂಗ್ ಗೆ ಕೇಂದ್ರ ಸರ್ಕಾರದ ಅಂಕುಶ….!

Next Post

BWSSB News | ಬೆಂಗಳೂರು ಜಲಮಂಡಳಿಯಲ್ಲಿ ಗ್ರಾಹಕರ ಬಿಲ್ ಹಣ ದುರ್ಬಳಕೆ : 13 ಮಂದಿ ಅಮಾನತು

Next Post
BWSSB Head Office

BWSSB News | ಬೆಂಗಳೂರು ಜಲಮಂಡಳಿಯಲ್ಲಿ ಗ್ರಾಹಕರ ಬಿಲ್ ಹಣ ದುರ್ಬಳಕೆ : 13 ಮಂದಿ ಅಮಾನತು

Online Use

Cyber Crime | ಬೆಂಗಳೂರಿನಲ್ಲಿ 2022ರ ಒಂದೇ ವರ್ಷ 8773 ಸೈಬರ್ ಕ್ರೈಮ್ ಪ್ರಕರಣ ದಾಖಲು…! ಹುಷಾರಾಗಿರಿ ನೀವು

Please login to join discussion

Like Us on Facebook

Follow Us on Twitter

Recent News

Karnataka Assembly

ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

August 21, 2026

Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

August 21, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
Karnataka Assembly

ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

August 21, 2026

Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

August 21, 2026

Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

August 21, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group