Friday, June 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Health News | ​ಜೂ. 28ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ: 64 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ನೇಮಕ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

    ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

  • Bengaluru Focus

    ಕೃಷಿ ವಿವಿ ಕುಲಪತಿ ನೇಮಕದಲ್ಲಿ ಭಾರಿ ಭ್ರಷ್ಟಾಚಾರ ಆರೋಪ: ಶೋಧನಾ ಸಮಿತಿ ರದ್ದತಿಗೆ ಆಗ್ರಹಿಸಿ ಮಧ್ಯಪ್ರವೇಶಕ್ಕೆ ಲೋಕಾಯುಕ್ತಕ್ಕೆ ಮನವಿ

    PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

    ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಎಆರ್ ರಸ್ತೆ ಕುಸಿತ: ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಬಿಡಿಎ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

    Metro News | ​ಸಿಲಿಕಾನ್ ವ್ಯಾಲಿಯೋ ಅಥವಾ ಮೂಲಸೌಕರ್ಯ ವೈಫಲ್ಯದ ರಾಜಧಾನಿಯೋ? ಜೂ.23 ಮೆಟ್ರೋ ಸ್ಥಗಿತವಾದ ಬೆನ್ನಲ್ಲೇ ಲಾರಿ, ಟ್ರಾಕ್ಟರ್ ಹತ್ತಿದ್ದರು ಐಟಿ ಉದ್ಯೋಗಿಗಳು!

    15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ: ಹಸಿರು ಬೆಂಗಳೂರು ನಿರ್ಮಾಣಕ್ಕೆ ಮೆಗಾ ಡ್ರೈವ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    GBA Head Office Image

    GBA News | ಬೆಂಗಳೂರಿನಲ್ಲಿ ಇ-ಖಾತಾ ಸೇವೆ ಮತ್ತಷ್ಟು ಸುಲಭ: 6 ವಾರಗಳಲ್ಲಿ 6,169 ಅರ್ಜಿಗಳ ಯಶಸ್ವಿ ವಿಲೇವಾರಿ

    ಬಿಡದಿ ಟೌನ್‌ಶಿಪ್ ವಿರೋಧಿ ರೈತರ ಹೋರಾಟ 450 ದಿನಕ್ಕೆ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ  ನಾಳೆ ಬೃಹತ್ ಪಾದಯಾತ್ರೆ 

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    Health News | ​ಜೂ. 28ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ: 64 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ನೇಮಕ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

    ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

  • Bengaluru Focus

    ಕೃಷಿ ವಿವಿ ಕುಲಪತಿ ನೇಮಕದಲ್ಲಿ ಭಾರಿ ಭ್ರಷ್ಟಾಚಾರ ಆರೋಪ: ಶೋಧನಾ ಸಮಿತಿ ರದ್ದತಿಗೆ ಆಗ್ರಹಿಸಿ ಮಧ್ಯಪ್ರವೇಶಕ್ಕೆ ಲೋಕಾಯುಕ್ತಕ್ಕೆ ಮನವಿ

    PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

    ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಎಆರ್ ರಸ್ತೆ ಕುಸಿತ: ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಬಿಡಿಎ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

    Metro News | ​ಸಿಲಿಕಾನ್ ವ್ಯಾಲಿಯೋ ಅಥವಾ ಮೂಲಸೌಕರ್ಯ ವೈಫಲ್ಯದ ರಾಜಧಾನಿಯೋ? ಜೂ.23 ಮೆಟ್ರೋ ಸ್ಥಗಿತವಾದ ಬೆನ್ನಲ್ಲೇ ಲಾರಿ, ಟ್ರಾಕ್ಟರ್ ಹತ್ತಿದ್ದರು ಐಟಿ ಉದ್ಯೋಗಿಗಳು!

    15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ: ಹಸಿರು ಬೆಂಗಳೂರು ನಿರ್ಮಾಣಕ್ಕೆ ಮೆಗಾ ಡ್ರೈವ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    GBA Head Office Image

    GBA News | ಬೆಂಗಳೂರಿನಲ್ಲಿ ಇ-ಖಾತಾ ಸೇವೆ ಮತ್ತಷ್ಟು ಸುಲಭ: 6 ವಾರಗಳಲ್ಲಿ 6,169 ಅರ್ಜಿಗಳ ಯಶಸ್ವಿ ವಿಲೇವಾರಿ

    ಬಿಡದಿ ಟೌನ್‌ಶಿಪ್ ವಿರೋಧಿ ರೈತರ ಹೋರಾಟ 450 ದಿನಕ್ಕೆ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ  ನಾಳೆ ಬೃಹತ್ ಪಾದಯಾತ್ರೆ 

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

BW Special | PM Suryaghar Scheme | ಸೂರ್ಯಘರ್ ‘ಮುಫ್ತ್ ಬಿಜಲಿ’ ಯ ಹೆಸರಲ್ಲಿದೆಯಾ ಗೊಂದಲ?: ರಾಜ್ಯದಲ್ಲಿ ಹೇಗೆ ಸಾಗುತ್ತಿದೆ ಗೊತ್ತಾ ಕೇಂದ್ರದ ಯೋಜನೆ?

ಗೃಹಜ್ಯೋತಿಯ ನೆರಳಲ್ಲಿ ‘ಸೂರ್ಯಘರ್’ ಯೋಜನೆ: ಉಚಿತವೆಂಬ ತಪ್ಪು ಕಲ್ಪನೆ, ವಿಳಂಬಕ್ಕೆ ಕಾರಣವಾದ ಗೊಂದಲಮಯ ಶೀರ್ಷಿಕೆ

by Bengaluru Wire Desk
October 9, 2025
in BW Special, Public interest
Reading Time: 2 mins read
0
ಬೆಂಗಳೂರಿನ ಮನೆಯೊಂದರ ಮೇಲ್ಛಾವಣಿ ಮೇಲೆ ಸೌರ ಫಲಕ ಅಳವಡಿಸಿರುವ ಸಾಂದರ್ಭಿಕ ಚಿತ್ರ (ಕೃಪೆ : ಬೆಸ್ಕಾಂ)

ಬೆಂಗಳೂರಿನ ಮನೆಯೊಂದರ ಮೇಲ್ಛಾವಣಿ ಮೇಲೆ ಸೌರ ಫಲಕ ಅಳವಡಿಸಿರುವ ಸಾಂದರ್ಭಿಕ ಚಿತ್ರ (ಕೃಪೆ : ಬೆಸ್ಕಾಂ)

ಬೆಂಗಳೂರು, ಅ.09 www.bengaluruwire.com : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿಎಂ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ’ (PM Surya Ghar Muft Bijli Yojana) ಕರ್ನಾಟಕದಲ್ಲಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಯೋಜನೆಗೆ ಕೇಂದ್ರ ಸರ್ಕಾರ ಇಟ್ಟಿರುವ ‘ಮುಫ್ತ್ ಬಿಜಲಿ ಯೋಜನೆ’ (Free Power Scheme) ಎಂಬ ಹೆಸರಿನ ಸುತ್ತ ಹರಡಿರುವ ಗೊಂದಲ, ಮತ್ತು ರಾಜ್ಯ ಸರ್ಕಾರದ ಜನಪ್ರಿಯ ‘ಗೃಹ ಜ್ಯೋತಿ’ ಯೋಜನೆಯ ಪ್ರಭಾವ, ಈ ಎರಡೂ ಪ್ರಮುಖ ಕಾರಣಗಳು ಯೋಜನೆ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ ಎನ್ನಲಾಗುತ್ತಿದೆ.

2024ರ ಫೆಬ್ರವರಿಯಲ್ಲಿ ರಾಜ್ಯದಲ್ಲಿ ಆರಂಭವಾದ ಈ ಯೋಜನೆಯ ಅನುಷ್ಠಾನದಲ್ಲಿ ಭಾರೀ ಹಿನ್ನಡೆಯಾಗಿದ್ದು, ಇಂಧನ ಇಲಾಖೆಯ ಸೆಪ್ಟೆಂಬರ್ ಮೊದಲ ವಾರದ ತನಕದ ವರದಿಯ ಪ್ರಕಾರ, ಎಸ್ಕಾಂಗಳಾದ್ಯಂತ ಸರಾಸರಿ ಶೇ. 94.5 ರಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಒಟ್ಟಾರೆ 2,24,923 ಅರ್ಜಿಗಳು ಯೋಜನೆಯಡಿ ಸೌರ ವಿದ್ಯುತ್ ಅಳವಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರೆ, ಕೇವಲ 12,207 ಅರ್ಜಿಗಳನ್ನು ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಅನುಮೋದಿಸಲಾಗಿದೆ. ಅಂದರೆ, ಪ್ರತಿ 100 ಅರ್ಜಿಗಳಲ್ಲಿ ಕೇವಲ 5 ಅರ್ಜಿಗಳು ಮಾತ್ರ ಇದುವರೆಗೆ ಪ್ರಕ್ರಿಯೆಗೊಂಡಿವೆ. 

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (CESCOM) ಶೇ. 96.54 ರೊಂದಿಗೆ ಅತಿ ಹೆಚ್ಚು ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದ್ದರೆ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (Hescom) ಶೇ. 95.75, ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (Bescom) ಶೇ. 93.82 ರಷ್ಟು ಬಾಕಿ ಉಳಿಸಿಕೊಂಡಿವೆ. ಇರುವ ಐದು ಎಸ್ಕಾಮ್ ಗಳ ಪೈಕಿ ಬೆಸ್ಕಾಂನಲ್ಲಿ 5,145 ಅರ್ಜಿಗಳಿಗೆ ಅನುಮೋದನೆ ನೀಡಿದ್ದು, ಅತಿ ಹೆಚ್ಚು  ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದೆ. 

ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

‘ಮುಫ್ತ್’ ಪದವೇ ಮುಳುವಾಯಿತೆ? :

ಹಿರಿಯ ಇಂಧನ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, “ಸುಮಾರು ಶೇ. 60ರಷ್ಟು ಅರ್ಜಿಗಳು ‘ಮುಫ್ತ್’ (ಉಚಿತ) ಎಂಬ ಪದದ ತಪ್ಪರ್ಥದಿಂದಾಗಿ ಸ್ಥಗಿತಗೊಂಡಿವೆ. ಯೋಜನೆ ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಅರ್ಜಿ ಸಲ್ಲಿಸುವುದಷ್ಟೇ ಸಾಕು ಎಂದು ಅನೇಕರು ಭಾವಿಸಿದ್ದಾರೆ. ಈ ತಪ್ಪು ಕಲ್ಪನೆಯಿಂದಾಗಿ ಸಾವಿರಾರು ಅರ್ಜಿಗಳು ಮುಂದಕ್ಕೆ ಸಾಗಲು ಸಾಧ್ಯವಾಗುತ್ತಿಲ್ಲ.” ಎಂದು ತಿಳಿಸಿದ್ದಾರೆ.

ಈ ತಪ್ಪು ಮಾಹಿತಿ ಹರಡಲು ಯೋಜನೆಯ ಆರಂಭದಲ್ಲಿ ಮೀಟರ್ ರೀಡರ್‌ಗಳು ಮತ್ತು ಅಂಚೆ ಸಿಬ್ಬಂದಿಯನ್ನು ಪ್ರಚಾರಕ್ಕೆ ಬಳಸಿದ್ದು, ಅವರು ನೀಡಿದ ಅಪೂರ್ಣ ಮಾಹಿತಿಯು ನಾಗರಿಕರಲ್ಲಿ ಗೊಂದಲವನ್ನು ಸೃಷ್ಟಿಸಿತು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಸಂಘದ (KREA) ಅಧ್ಯಕ್ಷರಾದ ಎಸ್. ಎಸ್. ರಘುನಂದನ್ ಅವರು ಅಭಿಪ್ರಾಯಪಟ್ಟಿದ್ದಾರೆ. “ಯೋಜನೆಯು ಸಂಪೂರ್ಣ ಉಚಿತ ಎಂದು ಎಲ್ಲರೂ ಭಾವಿಸಿ ಪೋರ್ಟಲ್‌ಗೆ ಧಾವಿಸಿದರು. ಮೊದಲ ವರ್ಷದಲ್ಲಿ, ಹೆಚ್ಚಿನ ಅರ್ಜಿಗಳು ಜಂಕ್ (Junk) ಆಗಿ ಪರಿಣಮಿಸಿದವು,” ಎಂದು ಅವರು ವಿವರಿಸಿದ್ದಾರೆ.

ಗೃಹಜ್ಯೋತಿಯ ಪ್ರಭಾವ ಮತ್ತು ಗುತ್ತಿಗೆದಾರರ ಗೊಂದಲ :

ಮನೆಯ ಮೇಲ್ಭಾಗ ಸ್ಥಾಪಿಸಲಾದ ಸೋಲಾರ್ ಘಟಕದ ನೋಟ.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರು ಮತ್ತು 300 ಯೂನಿಟ್‌ವರೆಗೆ ವಿದ್ಯುತ್ ಬಳಸುವವರು ಸೂರ್ಯಘರ್ ಯೋಜನೆಯಡಿ ರೂಫ್‌ಟಾಪ್ ಸೌರಶಕ್ತಿ ಅಳವಡಿಸಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಗೃಹಜ್ಯೋತಿ ವ್ಯಾಪ್ತಿಗೆ ಬರುವ ಜನಸಂಖ್ಯೆಯೇ ಹೆಚ್ಚಿರುವುದು ಕೂಡ ಇದಕ್ಕೆ ಕಾರಣ.

ಇದಕ್ಕೆ ಹೆಚ್ಚುವರಿಯಾಗಿ, ಸುಮಾರು ಶೇ. 20ರಷ್ಟು ಅರ್ಜಿಗಳು ಗುತ್ತಿಗೆದಾರರ (Vendor) ಆಯ್ಕೆ ಪ್ರಕ್ರಿಯೆಯಲ್ಲಿ ನಿಂತಿವೆ. ಆರಂಭದಲ್ಲಿ 100 ಗುತ್ತಿಗೆದಾರರಿದ್ದ ಪಟ್ಟಿಯನ್ನು ನಂತರ ರಾಜ್ಯಾದ್ಯಂತ 528 ಗುತ್ತಿಗೆದಾರರಿಗೆ ವಿಸ್ತರಿಸಲಾಯಿತು. ಆದರೆ, ಅರ್ಜಿದಾರರು ಪ್ರತಿ ಗುತ್ತಿಗೆದಾರರಿಗೂ ಕರೆ ಮಾಡಿ ಸೌರ ವಿದ್ಯುತ್ ದರದ (Quote) ಬಗ್ಗೆ ಕೇಳಿ, ಅಂತ್ಯವಿಲ್ಲದೆ ಹೋಲಿಕೆ ಮಾಡಿ, ಅಂತಿಮವಾಗಿ ಯಾವುದನ್ನೂ ಅಂತಿಮಗೊಳಿಸದೆ ಗೊಂದಲದಲ್ಲಿ ಉಳಿದಿದ್ದಾರೆ ಎಂದು ಇಂಧನ ಇಲಾಖೆಯ ಎಂಜಿನಿಯರ್ ಹೇಳಿದ್ದಾರೆ.

ಇನ್ನು ಕೆಲವರು ಸೂಕ್ತ ಕೋಟ್ ಪಡೆದ ನಂತರವೂ, ಕಡ್ಡಾಯವಾಗಿ ಪಾವತಿಸಬೇಕಾದ ಮುಂಗಡ ಠೇವಣಿಯನ್ನು (Upfront Deposit) ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ.

ಭರವಸೆಯ ಕಿರಣ ಮತ್ತು ಮುಂದಿನ ಹಾದಿ :

ಸದ್ಯಕ್ಕೆ, ಹೊಸದಾಗಿ ಮನೆ ಕಟ್ಟುತ್ತಿರುವವರು, ಎಲೆಕ್ಟ್ರಿಕ್ ಕಾರು ಖರೀದಿಸಿದವರು, ಮತ್ತು ಪರಿಸರ ಕಾಳಜಿ ಇರುವ ವರ್ಗದ ಜನರು ಮಾತ್ರ ಮೇಲ್ಛಾವಣಿ ಸೌರಶಕ್ತಿಯ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಈ ವರ್ಗದವರ ಸಂಖ್ಯೆ ಕಡಿಮೆಯಿದೆ. ಭವಿಷ್ಯದಲ್ಲಿ ವಿದ್ಯುತ್ ದರ ಏರಿಕೆಯಾದಾಗ ಕಡಿಮೆ ವೆಚ್ಚದ ಸೌರ ವಿದ್ಯುತ್ ಇಂಧನಕ್ಕೆ ಬೇಡಿಕೆ ಬರಲಿದೆ ಎಂದು ಕೆಆರ್‌ಇಎ ಅಧ್ಯಕ್ಷ ರಘುನಂದನ್ ಆಶಾವಾದ ವ್ಯಕ್ತಪಡಿಸಿದ್ದಾರೆ.

ಗೃಹಜ್ಯೋತಿ ಯೋಜನೆ ವ್ಯಾಪ್ತಿಗೆ ಬಾರದ ಗ್ರಾಹಕರನ್ನು ಕೇಂದ್ರೀಕರಿಸಿ, ಬೆಸ್ಕಾಂ ಸೇರಿದಂತೆ ರಾಜ್ಯದ ಐದು ಎಸ್ಕಾಂಗಳು ಸೂರ್ಯಘರ್ ಯೋಜನೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುತ್ತಿವೆ.

ಯೋಜನೆಯು ಸಾರ್ವಜನಿಕರಿಗೆ ದೀರ್ಘಾವಧಿಗೆ ಹೆಚ್ಚು ಅನುಕೂಲವಾಗುತ್ತದೆ (25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ) ಮತ್ತು ಹೆಚ್ಚುವರಿ ವಿದ್ಯುತ್ತನ್ನು ಗ್ರಿಡ್‌ಗೆ ನೀಡಲು ಅವಕಾಶವಿದ್ದು ಅದಕ್ಕೆ ಹಣ ಪಡೆಯಬಹುದು ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಗಳು ನಡೆಯುತ್ತಿವೆ.

ಸೂರ್ಯಘರ್ ಯೋಜನೆಯಿಂದ ರಾಜ್ಯದಲ್ಲಿ 44.68 ಮೆ.ವ್ಯಾ ವಿದ್ಯುತ್ ಉತ್ಪಾದನೆ :

ಈ ಪ್ರಯತ್ನಗಳ ಫಲವಾಗಿ, ಸೆಪ್ಟೆಂಬರ್ ಮೊದಲ ವಾರದವರೆಗೆ ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯ 12,207 ಮನೆಗಳಲ್ಲಿ ಸೌರ ವಿದ್ಯುತ್ ಪ್ಯಾನಲ್‌ಗಳನ್ನು ಅಳವಡಿಸಿ, ಸುಮಾರು 44.68 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದಕ್ಕಾಗಿ ಗ್ರಾಹಕರಿಗೆ ₹88.14 ಕೋಟಿ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗಿದೆ.

ಇಂಧನ ಸಚಿವ ಕೆ.ಜೆ.ಜಾರ್ಜ್.

ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, “ಪರಿಸರ ಸ್ನೇಹಿಯಾದ ಸೂರ್ಯಘರ್ ಯೋಜನೆ ದೀರ್ಘ ಕಾಲ ಬಾಳಿಕೆ ಬರುತ್ತದೆ ಮತ್ತು ಹಣ ಉಳಿತಾಯ ಆಗುತ್ತದೆ. ನಗರ ಪ್ರದೇಶಗಳಲ್ಲಿ ಜನರು ಒಲವು ತೋರುತ್ತಿದ್ದು, ಸಬ್ಸಿಡಿಯ ಲಾಭ ಪಡೆಯುತ್ತಿದ್ದಾರೆ. ಹೆಚ್ಚಿನ ಜನರು ಪ್ರಯೋಜನ ಪಡೆಯಬೇಕೆಂಬುದು ನಮ್ಮ ಉದ್ದೇಶ,” ಎಂದು ತಿಳಿಸಿದ್ದಾರೆ.

ಗೃಹಬಳಕೆದಾರರು ಕೇಂದ್ರ ಸರ್ಕಾರದ pmsuryaghar.gov.in ವೆಬ್‌ಸೈಟ್‌ನಲ್ಲಿ ರೂಫ್‌ ಟಾಪ್ ಸೋಲಾರ್ ವ್ಯವಸ್ಥೆಗೆ ಅರ್ಜಿ ಸಲ್ಲಿಸಬಹುದು. ಇಂಧನ ಇಲಾಖೆ ಈಗ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದು, ಯೋಜನೆಯ ಸೂಕ್ಷ್ಮ ವ್ಯತ್ಯಾಸಗಳನ್ನು, ವಿಶೇಷವಾಗಿ ಸಬ್ಸಿಡಿ ಮತ್ತು ಆರ್ಥಿಕ ಪ್ರಯೋಜನಗಳನ್ನು ಸ್ಪಷ್ಟವಾಗಿ ವಿವರಿಸುವ ಅಗತ್ಯವಿದೆ.

ಯೋಜನೆಯ ಸಬ್ಸಿಡಿ ವಿವರ:

 * 1 ಕಿ.ವ್ಯಾ. ಸಾಮರ್ಥ್ಯಕ್ಕೆ: ₹30,000

 * 2 ಕಿ.ವ್ಯಾ. ಸಾಮರ್ಥ್ಯಕ್ಕೆ: ₹60,000

 * 3 ಕಿ.ವ್ಯಾ. ಮತ್ತು ಮೇಲ್ಪಟ್ಟ ಸಾಮರ್ಥ್ಯಕ್ಕೆ: ಗರಿಷ್ಠ ₹78,000.

WhatsApp Join our WhatsApp Channel
Previous Post

ಡಿ.ಕೆ.ಶಿವಕುಮಾರ್ ಮಧ್ಯಸ್ಥಿಕೆ: ‘ಬಿಗ್ ಬಾಸ್’ ಮನೆಗೆ ಮರಳಿದ 17 ಸ್ಪರ್ಧಿಗಳು; ಜಾಲಿವುಡ್ ಸ್ಟುಡಿಯೋ ಸೀಲ್ ತೆರವು

Next Post

ಮಹಿಳೆಯರಿಗೆ ಬಂಪರ್‌ ಗಿಫ್ಟ್: ಇನ್ನು ಮುಂದೆ ಮಹಿಳೆಯರಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆ

Next Post

ಮಹಿಳೆಯರಿಗೆ ಬಂಪರ್‌ ಗಿಫ್ಟ್: ಇನ್ನು ಮುಂದೆ ಮಹಿಳೆಯರಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆ

Kidwai Hospital | ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 450 ಹಾಸಿಗೆಯ ಹೊಸ ಬ್ಲಾಕ್ ನಿರ್ಮಾಣಕ್ಕೆ ಸರ್ಕಾರ ಕ್ರಮ

Please login to join discussion

Like Us on Facebook

Follow Us on Twitter

Recent News

Health News | ​ಜೂ. 28ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ: 64 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

June 25, 2026

ಕೃಷಿ ವಿವಿ ಕುಲಪತಿ ನೇಮಕದಲ್ಲಿ ಭಾರಿ ಭ್ರಷ್ಟಾಚಾರ ಆರೋಪ: ಶೋಧನಾ ಸಮಿತಿ ರದ್ದತಿಗೆ ಆಗ್ರಹಿಸಿ ಮಧ್ಯಪ್ರವೇಶಕ್ಕೆ ಲೋಕಾಯುಕ್ತಕ್ಕೆ ಮನವಿ

June 25, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Health News | ​ಜೂ. 28ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ: 64 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

June 25, 2026

ಕೃಷಿ ವಿವಿ ಕುಲಪತಿ ನೇಮಕದಲ್ಲಿ ಭಾರಿ ಭ್ರಷ್ಟಾಚಾರ ಆರೋಪ: ಶೋಧನಾ ಸಮಿತಿ ರದ್ದತಿಗೆ ಆಗ್ರಹಿಸಿ ಮಧ್ಯಪ್ರವೇಶಕ್ಕೆ ಲೋಕಾಯುಕ್ತಕ್ಕೆ ಮನವಿ

June 25, 2026

PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

June 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group