ಬೆಂಗಳೂರು, ಜು.7 www.bengaluruwire.com : ಸೈಕಲ್ ನಲ್ಲಿ ಇಡೀ ದೇಶ ಸುತ್ತಿ ಏಡ್ಸ್ ಬಗ್ಗೆ ಜಾಗೃತಿ (HIV Awareness) ಮೂಡಿಸುತ್ತಿದ್ದ ವ್ಯಕ್ತಿ ಕಳ್ಳತನದ ದಾರಿ ಹಿಡಿದು ನಗರದ ದೇವಸ್ಥಾನದಲ್ಲಿ ವಿಗ್ರಹ ಕಳ್ಳತನ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ವಿವಿ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಾಸವಿ ದೇವಸ್ಥಾನದಲ್ಲಿ ವಿಗ್ರಹ ಕಳವುವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಇತ್ತೀಚೆಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ವಿವಿಪುರ ಪೊಲೀಸರು, ದೇವಸ್ಥಾನ ಸೇರಿದಂತೆ ಸುಮಾರು ಇನ್ನೊರು ಸಿಸಿಟಿವಿಗಳ ಪರಿಶೀಲನೆ ನಡೆಸಿ ಕೊನೆಗೆ ರವಿ ನಾಯ್ಡು ಅನ್ನುವನ್ನು ಬಂಧಿಸಿದ್ದಾರೆ.
ರವಿನಾಯ್ಡು ದೇವರ ಬೆಳ್ಳಿ ವಿಗ್ರಹ ಕದ್ದು ಮಾರಾಟಕ್ಕೆ ಯತ್ನಿಸಿದ್ದ. ದೇವಸ್ಥಾನದಲ್ಲಿ ವಿಗ್ರಹ ಕದಿಯುವ ದೃಶ್ಯ 28-06-2023 ರಂದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ವಿಚಾರಣೆ ವೇಳೆ ರವಿ ನಾಯ್ಡು ಯಾರು ಅಂತಾ ಕೇಳಿ ಪೊಲೀಸರೇ ಶಾಕ್ ಆದರು, ಯಾಕಂದ್ರೆ, ರವಿನಾಯ್ಡು, ಸೈಕಲ್ ನಲ್ಲೇ ಇಡೀ ದೇಶ ಸುತ್ತಿ ಏಡ್ಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಹಲವರು ಪ್ರಶಸ್ತಿ ಗಳನ್ನು ತಗೊಂಡಿದ್ದ. ಇಷ್ಟೆಲ್ಲಾ ಸಾಮಾಜಿಕ ಕೆಲಸಗಳನ್ನು ಮಾಡಿದ ರವಿ ನಾಯ್ಡು ಗೆ ಇತ್ತೀಚೆಗೆ ಕೆಲಸ ಇರಲಿಲ್ಲ. ಜೀವನಕ್ಕೆ ಕಷ್ಟ ವಾಗಿತ್ತು. ಈ ಹಿನ್ನಲೆಯಲ್ಲಿ ಜೀವನ ನಡೆಸಲು ವಿಗ್ರಹ ಕಳವು ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ.

ಈತ 2000 ಇಸವಿಯಿಂದ 2006ರವೆರಗೂ ಸೈಕಲ್ನಲ್ಲೇ ದೇಶ ಸುತ್ತಿ ಹೆಚ್ಐವಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದ. ಈ ಸಾಮಾಜಿಕ ಸೇವೆಯನ್ನು ಗುರ್ತಿಸಿದ ಮಹಾರಾಷ್ಟ್ರ ಸರ್ಕಾರ (Maharastra Govt) 2016ರಲ್ಲಿ ಈತನಿಗೆ ಬೈಕೊಂದನ್ನು ಉಡುಗೊರೆಯಾಗಿ ನೀಡಿತ್ತು.





















