Thursday, August 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

  • Bengaluru Focus

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

  • Bengaluru Focus

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

BW SPECIAL | #Covid19 Bengaluru | ಬೆಂಗಳೂರಿನಲ್ಲಿ ಕೋವಿಡ್ ನ ರೂಪಾಂತರಿ XBB ತಳಿ ತೀವ್ರ ಏರಿಕೆ…! : ಸ್ಟ್ರಾಂಡ್ ಲೈಫ್ ಸೈನ್ಸ್ ವರದಿಯಲ್ಲಿ ಬಹಿರಂಗ

ಸ್ಟ್ರಾಂಡ್ ಲೈಫ್ ಸೈನ್ಸ್ ಪ್ರಾಮಾಣಿಕೃತ ಪ್ರಯೋಗಾಲದಲ್ಲಿ ಕೋವಿಡ್ ಮಾದರಿಗಳನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಒಳಪಡಿಸಿದಾಗ ನವೆಂಬರ್ ತಿಂಗಳಿನಲ್ಲಿ ಕಂಡು ಬಂದ ಫಲಿತಾಂಶವೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್...!

by Bengaluru Wire Desk
December 22, 2022
in Bengaluru Focus, BW Special
Reading Time: 2 mins read
0
ಕರೋನಾ ವೈರಸ್ ಗ್ರಾಫಿಕ್ ಚಿತ್ರ

ಕರೋನಾ ವೈರಸ್ ಗ್ರಾಫಿಕ್ ಚಿತ್ರ

ಬೆಂಗಳೂರು, ಡಿ.22 www.bengaluruwire.com : ಚೈನಾದಲ್ಲಿ ಕೋವಿಡ್ ರುದ್ರ ನರ್ತನ ಮತ್ತೊಮ್ಮೆ ಹೆಚ್ಚುತ್ತಿದೆ. ಮತ್ತೊಂದೆಡೆ ರಾಜಧಾನಿ ಬೆಂಗಳೂರಿನಲ್ಲಿ ಸ್ಟ್ರಾಂಡ್ ಲೈಫ್ ಸೈನ್ಸ್ ಎಂಬ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕೃತ ಪ್ರಯೋಗಾಲಯವು ನವೆಂಬರ್ ತಿಂಗಳಿನಲ್ಲಿ ಕರೋನಾ ಸೋಂಕಿನ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆ (Genome sequencing) ಕುರಿತು ಪರೀಕ್ಷೆಗೊಳಪಡಿಸಿದ್ದು, ಕರೋನಾ ವೈರಸ್ ಓಮಿಕ್ರಾನ್ ನ ಉಪತಳಿ ಎಕ್ಸ ಬಿಬಿ (XBB) ಹಾಗೂ ಅದರ ಹೆಚ್ಚುವರಿ ಉಪತಳಿ ಏರಿಕೆಯಾಗುತ್ತಿರುವುದನ್ನು ಪತ್ತೆಹಚ್ಚಿದೆ.

ಬೆಂಗಳೂರಿನಲ್ಲಿ ತ್ಯಾಜ್ಯ ನೀರು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಮತ್ತು ಮತ್ತಿತರ ಮೂಲಗಳಿಂದ ಪಡೆದ ಮಾದರಿಗಳನ್ನು ಪ್ರಯೋಗಾಲಯದಲ್ಲಿ ವೈರಾಣು ಸಂರಚನೆ ವಿಶ್ಲೇಷಣೆಗೆ ಒಳಪಡಿಸಿದಾಗ ಎಕ್ಸ್ ಬಿಬಿ ರೂಪಾಂತರ ತಳಿಗಳು ಹಾಗೂ ಅದರ ಉಪತಳಿಗಳು ನವೆಂಬರ್ ಒಂದೇ ತಿಂಗಳಿನಲ್ಲಿ ಶೇ.16ರಿಂದ 57 ರಷ್ಟು ಏರಿಕೆಯಾಗಿರುವುದು ಕಂಡುಬಂದಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಓಮೈಕ್ರಾನ್ ನ ಉಪತಳಿ ಎಕ್ಸ್ ಬಿಬಿಯ ಆರು ರೂಪಾಂತರ ವಂಶವಳಿಗಳು ಸೃಷ್ಟಿಯಾಗಿದ್ದು ಅವುಗಳನ್ನು ಎಕ್ಸ್ ಬಿಬಿ.1 (XBB.1) ಎಕ್ಸ್ ಬಿಬಿ.2 (XBB.2), ಎಕ್ಸ್ ಬಿಬಿ.3 ( XBB.3), ಎಕ್ಸ್ ಬಿಬಿ.3.1 ( XBB.3.1), ಎಕ್ಸ್ ಬಿಬಿ.4  (XBB.4) ಹಾಗೂ ಎಕ್ಸ್ ಬಿಬಿ.5 (XBB.5) ಎಂದು ಗುರುತಿಸಲಾಗಿದೆ. ಆ ಪೈಕಿ ಶೇ.50.4ರಷ್ಟು ಎಕ್ಸ್ ಬಿಬಿ.3, ಎಕ್ಸ್ ಬಿಬಿ ಶೇ.22ರಷ್ಟು, ಎಕ್ಸ್ ಬಿಬಿ.1 ಶೇ.14.5ರಷ್ಟು ಹಾಗೂ ಎಕ್ಸ್ ಬಿಬಿ.2 ರೂಪಾಂತರ ತಳಿ ಶೇ.9.7ರಷ್ಟು ಇರುವುದನ್ನು ಸ್ಟ್ರಾಂಡ್ ಲೈಫ್ ಸೈನ್ಸ್ ಪ್ರಯೋಗಾಲದ ವರದಿಗಳಲ್ಲಿ ಹೇಳಲಾಗಿದೆ.

ಚೈನಾದಲ್ಲಿ ಕಂಡುಬಂದ ಬಿಎಫ್.7 ಬೆಂಗಳೂರಿನಲ್ಲಿ ಕಂಡು ಬಂದಿಲ್ಲ :

ಇದೇ ವೇಳೆ ಓಮಿಕ್ರಾನ್ ನ ಬಿಎ.2.75 (BA.2.75) ಶೇ.15ರಷ್ಟು, ಬಿ.ಎ.2 (BA.2) ಶೇ.3ರಷ್ಟು, ಬಿ.ಎ.3 (BA.3) ಶೇ.2ರಷ್ಟು ಇಳಿಕೆಯಾಗುತ್ತಿರುವುದನ್ನು ಗಮನಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಮಾಣಿಕೃತವಾದ ಪ್ರಯೋಗಾಲಯವಾದ ಸ್ಟ್ರಾಂಡ್ ಲೈಫ್ ಸೈನ್ಸ್ ಬಿಕ್ಯೂ.1 (BQ.1) ಹಾಗೂ ಸಿಎಚ್.1.1 (CH.1.1) ರೂಪಾಂತರ ತಳಿಯು ಬೆಂಗಳೂರಿನಲ್ಲಿ ಕಂಡು ಬಂದಿರುವುದನ್ನು ದೃಢಪಡಿಸಿದೆ. ಆದರೆ ಚೀನಾದಲ್ಲಿ ಕರೋನಾ ಸೋಂಕು ಉಲ್ಭಣಗೊಳ್ಳಲು ಕಾರಣವಾದ ಓಮಿಕ್ರಾನ್ ನ ಉಪತಳಿಯಾದ ಬಿಎಫ್.7 ನವೆಂಬರ್ ತಿಂಗಳಿನಲ್ಲಿ ನಮ್ಮಲ್ಲಿ ಕಂಡು ಬಂದಿಲ್ಲ ಎಂದು ತಿಳಿಸಿದೆ.

ಕಳೆದ ಒಂದು ವರ್ಷದಿಂದ ಕೋವಿಡ್ ಸೋಂಕಿನ ರೂಪಾಂತರ ತಳಿ ಓವಿಕ್ರಾನ್ ಕಾಣುತ್ತಿದ್ದೇವೆ. ಅದರಲ್ಲಿ ಬಿಎ.2, ಬಿಎ4, ಬಿಎ.5 ಸೋಂಕು ಹರಡುವ ಸ್ವಭಾವ ಜಾಸ್ತಿಯಿದೆ. ಆದರೂ ಇದರಿಂದ ಸಾಯುವ ಸಂದರ್ಭ ಅಥವಾ ಆಸ್ಪತ್ರೆ ಸೇರುವ ಸಂದರ್ಭ ಬಂದಿಲ್ಲ. ಆದರೆ ಓಮಿಕ್ರಾನ್ ನ ಬಿಎ.2.75 (BA.2.75), ಬಿಕ್ಯೂ.1 (BQ.1), ಎಕ್ಸ್ ಬಿಬಿ (XBB) ಹೊಸ ಉಪತಳಿಗಳು 3-4 ತಿಂಗಳಿನಿಂದ ದೇಶದಲ್ಲಿ ಕಂಡು ಬರುತ್ತಿದೆ. ಈಗ ಎಕ್ಸ್ ಬಿಬಿ ಉಪತಳಿಗಳು ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಸ್ಟ್ರಾಂಡ್ ಲೈಫ್ ಸೈನ್ಸ್ ಕರೋನಾ ಸೋಂಕಿನ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಒಳಪಡಿಸಿದಾಗ ಕಂಡುಬಂದ ಮಾಹಿತಿ (ಚಿತ್ರದಲ್ಲಿ ಕೆಂಪುಬಣ್ಣದಲ್ಲಿರುವುದು ಎಕ್ಸ್ ಬಿಬಿ ರೂಪಾಂತರ ತಳಿ)

“ಬೆಂಗಳೂರಿನಲ್ಲಿ ಓಮಿಕ್ರಾನ್ ನ ಹೊಸ ರೂಪಾಂತರ ತಳಿಗಳು ಕಂಡು ಬರುತ್ತಲೇ ಇರುತ್ತದೆ. ಇದಕ್ಕೆ ವೈದ್ಯಕೀಯ ಮಹತ್ವವಿಲ್ಲ. ಎರಡು ಡೋಸ್ ತೆಗೆದುಕೊಂಡ ನಾಗರೀಕರು ಮುನ್ನೆಚ್ಚರಿಕೆ ಡೋಸ್ ಅಗತ್ಯವಾಗಿ ತೆಗೆದುಕೊಳ್ಳಲಿ. ಬಿಬಿಎಂಪಿ ಬಳಿ ಅಗತ್ಯವಿರುವಷ್ಟು ಡೋಸ್ ಗಳು ಲಭ್ಯವಿದೆ. ಚೈನಾ ಸೇರಿದಂತೆ ಮತ್ತಿತರ ದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನೀಡುವ ಸೂಚನೆಗಳನ್ನು ತಪ್ಪದೇ ಬೆಂಗಳೂರಿನಲ್ಲಿ ಜಾರಿಗೆ ತರುತ್ತೇವೆ.”

  • ಡಾ.ತ್ರಿಲೋಕ್ ಚಂದ್ರ, ಬಿಬಿಎಂಪಿ ವಿಶೇಷ ಆಯುಕ್ತರು (ಆರೋಗ್ಯ)

ಎಷ್ಟು ಪ್ರಿಕಾಷನರಿ ಡೋಸ್ ಗಳು ಬಿಬಿಎಂಪಿ ಬಳಿ ಲಭ್ಯವಿದೆ ಹಾಗೂ ಹೀಗೆ ಲಭ್ಯವಿರುವ ಬಹಳಷ್ಟು ಡೋಸ್ ಗಳು ತನ್ನ ಎಕ್ಸ್ ಪೈರಿ ಆಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಈ ಬಗ್ಗೆ ಏನು ಹೇಳುತ್ತೀರಾ ಎಂದು ಬೆಂಗಳೂರು ವೈರ್ ಪ್ರಶ್ನೆಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಅವರು ಸೂಕ್ತ ರೀತಿ ಉತ್ತರಿಸಲಿಲ್ಲ.

ಹಳೆಯ ಮಾದರಿ ವೈರಾಣು ಆಧಾರಿತ ಲಸಿಕೆ ಕೆಲಸ ಮಾಡುತ್ತಾ? :

“ಕೋವಿಡ್  ಸೋಂಕಿನ ಎರಡು ತಳಿಗಳು ಶರೀರದ ಒಳಗೆ ಹೋಗಿ ಜೀವಾಂಶದಲ್ಲಿ ಮೂರನೇ ಹೊಸ ತಳಿ  (recombinant Linages) ಅಂದರೆ ಮರು ಸಂಯೋಜಕ ವಂಶಾವಳಿಯ ಹೊಸ ಮಾದರಿ ವೈರಸ್ ಸೃಷ್ಟಿಯಾಗುತ್ತಿದೆ. ಇದನ್ನು ಬಿಟ್ಟು ಕರೋನಾ ಸೋಂಕಿನಿಂದ ಪ್ರತಿಕಾಯ ವರ್ಧಿತ ರೋಗಗಳು (Antybody enhanced disease) ಕಂಡು ಬರುತ್ತಿದೆ. ಚೀನಾದ ವೂಹಾನ್ ನಲ್ಲಿ 2019ರಲ್ಲಿ ಕಂಡು ಬಂದ ಮೊಟ್ಟ ಮೊದಲ ಕರೋನಾ ಸೋಂಕಿನ ವೈರಾಣು ಡಿ.614.ಜಿ ಆಧಾರದ ಮೇಲೆಯೇ ಜಗತ್ತಿನ ಎಲ್ಲೆಡೆ ಕೋವಿಡ್ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಆದರೆ ಈ ಲಸಿಕೆಗಳು ಹಳೆಯ ಕರೋನಾ ಸೋಂಕಿನ ತಳಿಯ ಆಧಾರದ ಮೇಲೆ ತಯಾರಿಸಲ್ಪಟ್ಟಿದೆ. ಬರುವ ದಿನಗಳಲ್ಲಿ ಈ ಲಸಿಕೆಯು ರೋಗನಿರೋಧಕ ಶಕ್ತಿಯು ಮುಂದಿನ ಹೊಸ ಮಾದರಿಯ ಉಪತಳಿಗೆ ಕೆಲಸ ಮಾಡುತ್ತಾ? ಅಥವಾ ಇಲ್ಲವಾ? ಎಂಬ ವಿಚಾರ ಮುಂದಿನ ಒಂದೂವರೆ ವರ್ಷ ಬಹುಮುಖ್ಯವಾಗಿರುತ್ತದೆ” ಎಂದು ರಾಜ್ಯದ ವೈರಾಣು ಸಂರಚನೆ ವಿಶ್ಲೇಷಣಾ ಸಮಿತಿ ಸದಸ್ಯ ಡಾ.ವಿಶಾಲ್ ರಾವ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

“ತ್ಯಾಜ್ಯ ನೀರು, ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಣ್ಗಾವಲು ನಡೆಸಬೇಕಾದ ಅಗತ್ಯವಿದೆ. ಬರುವ ಎರಡು ವರ್ಷಗಳಲ್ಲಿ ಕೆಮ್ಮು, ನೆಗಡಿ ಬಂದಂತೆ ಕೋವಿಡ್ ಜೊತೆ ಸಹ ಜೀವನ ನಡೆಸುವ ಅಗತ್ಯವಿದೆ. ಅದು ಬಿಟ್ಟು ಬೇರೆ ಉಪಾಯವಿಲ್ಲ. ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಂದ ನರಳುತ್ತಿರುವ ಹೈರಿಸ್ಕ್ ವರ್ಗದವರು ಮುನ್ನಚ್ಚರಿಕೆ ಕ್ರಮವಾಗಿ ಮೂರನೇ ಲಸಿಕೆ ತೆಗೆದುಕೊಳ್ಳದಿದ್ದವರು ಕೂಡಲೇ ಮುನ್ನಚ್ಚರಿಕಾ ಲಸಿಕೆ (Pre Cautionary Dose) ತೆಗೆದುಕೊಳ್ಳಬೇಕು.” ಎಂದು ಅವರು ಮನವಿ ಮಾಡಿದ್ದಾರೆ.

ಕೋವಿಡ್ ಕಣ್ಗಾವಲು ಪ್ರಮಾಣ ಹೆಚ್ಚಳವಾಗಬೇಕು :

ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೇ ಡೋಸ್ ಲಸಿಕೆ ಪ್ರಯೋಗ ಪ್ರಯೋಜನವಿಲ್ಲ ಎಂದು ಹಲವು ವರದಿಗಳು ತಿಳಿಸಿವೆ. ಮಾನವನ ದೇಹದಲ್ಲಿ ಟ್ರಾನ್ಸ್ ಮೆಂಬ್ರೇನ್ ಪ್ರೊಟಿನ್ ನಿಂದ ಮಾಡಲ್ಪಟ್ಟ ಅನುವಂಶಿಕ ಧಾತುವನ್ನು (TMTRSS Protin) ಕೋವಿಡ್ ನ ತಳಿಯಾದ ಓಮಿಕ್ರಾನ್ ಬಳಸುತ್ತಿಲ್ಲ. ಹಾಗಾಗಿ ರೋಗಿಗಳ ಗಂಟಲಿನಲ್ಲೇ ಈ ವೈರಾಣು ಉಳಿಯು ತ್ತಿದ್ದು, ಶ್ವಾಸಕೋಶಕ್ಕೆ ಹೋಗುತ್ತಿಲ್ಲ. ಹೀಗಾಗಿ ಜಗತ್ತಿನಲ್ಲಿ ಕರೋನಾ ಸೋಂಕು ಹೆಚ್ಚಾದರೂ ಸಾವಿನೋವಿನ ಸಂಖ್ಯೆ ಹೆಚ್ಚಾಗುತ್ತಿಲ್ಲ. ಹೀಗಿದ್ದರೂ ಜನರು ಮಾಸ್ಕ್ ಹಾಕ್ಕೊಂಡು ಓಡಾಡಿ ತಮ್ಮ ದಿನನಿತ್ಯ ಕೆಲಸ ಕಾರ್ಯ ಮಾಡಿಕೊಳ್ಳಬಹುದು. ರಾಜ್ಯದಲ್ಲಿ ವೈರಾಣು ಸಂರಚನೆ ವಿಶ್ಲೇಷಣೆ ಹೆಚ್ಚಾಗಬೇಕು. ಕೋವಿಡ್ ಕಣ್ಗಾವಲು ಪ್ರಮಾಣವು ಏರಿಕೆಯಾಗಬೇಕಿದೆ. ಕರೋನಾ ಸೋಂಕು ಮುಂದಿನ ಒಂದೂವರೆ ವರ್ಷದ ತನಕ ಜನ ಸಾಮಾನ್ಯರು ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್ ಲಸಿಕೆ :

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1,222 (ಡಿ.21ರವರೆಗೆ) ಕೋವಿಡ್ ಪ್ರಕರಣಗಳು ಸಕ್ರಿಯವಾಗಿದೆ. ನಗರದಲ್ಲಿ ಇದುವರೆಗೆ 96.79 ಲಕ್ಷ ಕೋವಿಡ್ ಮೊದಲ ಡೋಸೆಜ್ ಪಡೆದುಕೊಂಡಿದ್ದರೆ, 94.84 ಲಕ್ಷ ಎರಡನೇ ಡೋಸೆಜ್ ಹಾಗೂ ಕೇವಲ 13.31 ಲಕ್ಷ ಮಂದಿ ಮುನ್ನಚ್ಚರಿಕೆಯ ಮೂರನೇ ಡೋಸ್ ಪಡೆದಿದ್ದಾರೆ. ಮೂರನೇ ಡೋಸ್ ಪಡೆದವರ ಸಂಖ್ಯೆ ಸಾಕಷ್ಟು ಕಡಿಮೆಯಿದೆ. ವಿದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲಯಲ್ಲಿ ಪುನಃ ನಗರದಲ್ಲಿ ಕೋವಿಡ್ ಮೂರನೇ ಡೋಸೆಜ್ ಹಾಕಿಸಿಕೊಳ್ಳಲು ಜನರು ಮುಂದು ಬರುತ್ತಾರೆಂದು ನಿರೀಕ್ಷಿಸಲಾಗಿದೆ.

WhatsApp Join our WhatsApp Channel
Previous Post

AyodhyaTemple | ಅಯೋಧ್ಯೆ ಮಾದರಿಯಲ್ಲಿ ತ್ರೇತಾಯುಗದ ರಾಮದೇವರ ಬೆಟ್ಟ ಅಭಿವೃದ್ಧಿ: ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವರ ಪತ್ರ

Next Post

BW Special | Yettinahole Water Project | ಎತ್ತಿನಹೊಳೆ ತಿರುವು ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣ : ಇದೇ ಡಿಸೆಂಬರ್ ಅಂತ್ಯದಿಂದ ಪ್ರಾಯೋಗಿಕವಾಗಿ ನೀರು ಪೂರೈಕೆ

Next Post
ಎತ್ತಿನಹೊಳೆ ಯೋಜನೆಯಡಿ ನಿರ್ಮಾಣಗೊಂಡಿರುವ ಎತ್ತರಿಸಿದ ನೀರಿನ ಕಾಲುವೆಯ ಚಿತ್ರ

BW Special | Yettinahole Water Project | ಎತ್ತಿನಹೊಳೆ ತಿರುವು ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣ : ಇದೇ ಡಿಸೆಂಬರ್ ಅಂತ್ಯದಿಂದ ಪ್ರಾಯೋಗಿಕವಾಗಿ ನೀರು ಪೂರೈಕೆ

ನಮ್ಮ ಮೆಟ್ರೊ ರೈಲಿನ ಸಾಂದರ್ಭಿಕ ಚಿತ್ರ

BW Special | Namma Metro Rail | ನಮ್ಮ ಮೊಟ್ರೊ ಆದಾಯ- ಪ್ರಯಾಣಿಕರ ಸಂಖ್ಯೆಯಲ್ಲಿ ವೃದ್ಧಿ : 11 ತಿಂಗಳಲ್ಲಿ 339 ಕೋಟಿ ರೂ. ಸಂಪಾದಿಸಿದ BMRCL

Please login to join discussion

Like Us on Facebook

Follow Us on Twitter

Recent News

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group