Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

NASA Live Stream | ನಿಮ್ಮ ಅಂಗೈಗಲ ಮೊಬೈಲ್ ಮೂಲಕ  ಆಗಸದಿಂದ ಭೂಮಿಯ LIVE ದರ್ಶನ – ಇದು ನಾಸಾ ಕಮಾಲ್….!! ಈ ಕುತೂಹಲಕಾರಿ ಸುದ್ದಿ ಓದಿ

ದಿನದ 24 ಗಂಟೆ ಐಎಸ್ಎಸ್ ಉಪಗ್ರಹ ಚಲನೆಯಿಂದ 16 ಸೂರ್ಯೋದಯ ಹಾಗೂ ಸೂರ್ಯಾಸ್ತಗಳನ್ನು ದೃಶ್ಯಗಳ ಸೆರೆಯಾಗುತ್ತದೆ | ನೀವಿರುವ ಸ್ಥಳದ ಆಕಾಶದಲ್ಲೂ ಐಸ್ಎಸ್ ಉಪಗ್ರಹ ಚಲಿಸುತ್ತಿರುತ್ತೆ | ಸಾಮಾನ್ಯ ಜನರೂ ಅಸಮಾನ್ಯ ವೈಜ್ಞಾನಿಕ ಕೌತುಕವನ್ನು ಕಣ್ತುಂಬಿಕೊಳ್ಳಬಹುದು

by Bengaluru Wire Desk
June 6, 2022
in BW Special, Public interest, Video
Reading Time: 2 mins read
0
ಅಂತರಾಷ್ಟ್ರೀಯ ಬಾಹ್ಯಾಕೇಂದ್ರದಿಂದ ಭೂಮಿಯ ದೃಶ್ಯದ ನೇರಪ್ರಸಾರ
ಚಿತ್ರಕೃಪೆ : ನಾಸಾ

ಅಂತರಾಷ್ಟ್ರೀಯ ಬಾಹ್ಯಾಕೇಂದ್ರದಿಂದ ಭೂಮಿಯ ದೃಶ್ಯದ ನೇರಪ್ರಸಾರ ಚಿತ್ರಕೃಪೆ : ನಾಸಾ

ಮನೆಯಲ್ಲಿಯೇ ಕುಳಿತು ದೂರದ ಆಕಾಶದಿಂದ ನಾವಿರುವ ಭೂಮಿಯ ಸೌಂದರ್ಯವನ್ನು ವಾಸ್ತವಿಕ ಸಮಯದ ಆಧಾರದಲ್ಲಿ  (Real Time Basis) ನೋಡಬಹುದು. ಹೌದು ಇದು ನಿಜ. ಅಂತದ್ದೊಂದು ಅವಕಾಶವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಶೋಧನಾ ಸಂಸ್ಥೆ ನಾಸಾ (NASA) ಕಲ್ಪಿಸಿಕೊಟ್ಟಿದೆ.

ಭೂಮಿಯಿಂದ 420 ಕಿ.ಮೀ ಎತ್ತರದಲ್ಲಿರುವ ಕೆಳಹಂತದ ಭೂಕಕ್ಷೆಯಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station – ISS) ದಿಂದ ನೀವು ದಿನದ 24 ಗಂಟೆಗಳ ಕಾಲ ಕುಳಿತಲ್ಲಿಂದಲೇ ಭುಮಿಯ ದೃಶ್ಯಗಳನ್ನು ನೋಡಬಹುದು. ಈ ಕೃತಕ ಉಪಗ್ರಹವು ಇಡೀ ಭೂಮಿಯನ್ನು 90 ನಿಮಿಷದಲ್ಲಿ ಒಂದು ಸುತ್ತು ಹಾಕುತ್ತದೆ. ಹೀಗೆ ಕಕ್ಷೆಯಲ್ಲಿ ಪ್ರಥ್ವಿಯ ಪರಿಭ್ರಮಣೆಯ ಸಂದರ್ಭದಲ್ಲಿ ಅರ್ಧ ಸಮಯ ಕತ್ತಲೆಯ ಪ್ರದೇಶದಲ್ಲಿ ಸಾಗುತ್ತದೆ. ಹೀಗೆ ಸಾಗುವ ಸಂದರ್ಭದಲ್ಲಿ ಭೂಮಿಯ ಮೇಲ್ಭಾಗ ಸಂಭವಿಸುವ ಸಿಡಿಲು, ವಿವಿಧ ನಗರ ಪಟ್ಟಣಗಳಲ್ಲಿನ ಬೆಳಕನ್ನು ಬಾಹ್ಯಾಕಾಶ ನಿಲ್ದಾಣದ ಉಪಗ್ರಹದಲ್ಲಿ ಅಳವಡಿಸಿರುವ ಅತ್ಯಾಧುನಿಕ ಕ್ಯಾಮರಾಗಳಲ್ಲಿ ಸೆರೆಯಾಗಿರುವುದನ್ನು ಲೈವ್ ಸ್ಟ್ರೀಮಿಂಗ್ ನಲ್ಲಿ ಕಾಣಬಹುದು.

ದಿನದ 24 ಗಂಟೆ 16 ಸೂರ್ಯೋದಯ ಹಾಗೂ ಸೂರ್ಯಾಸ್ತಗಳು :

ಕೆಲವೊಮ್ಮೆ ಸಂಪರ್ಕ ಕಡಿತಗೊಂಡಾಗ ಲೈವ್ ಸ್ಟ್ರೀಮಿಂಗ್ ಸಾಧ್ಯವಾಗದಿರಬಹುದು. ಪುನಃ ಸಂಪರ್ಕ ಲಭ್ಯವಾದಾಗ ಎಂದಿನಂತೆ ಉಪಗ್ರಹ ಚಲಿಸುವಾಗ ಭೂಮಿಯ ದೃಶ್ಯಗಳನ್ನು ಸೆರೆಹಿಡಿದು ಲೈವ್ ಸ್ಟ್ರೀಮಿಂಗ್ ಮೂಲಕ ಪ್ರಸಾರ ಮಾಡುತ್ತದೆ. ಸಂಪರ್ಕ ಕಡಿತಗೊಂಡಾಗ ಸಂಗ್ರಹಿತ ವಿಡಿಯೋ ದೃಶ್ಯಗಳು (Archived video)  ಲೈವ್ ಸ್ಟ್ರೀಮಿಂಗ್ ನಲ್ಲಿ ಪ್ರಸಾರವಾಗುತ್ತದೆ. ನಾವು ಇದುವರೆಗೆ ದಿನವೊಂದಕ್ಕೆ ಕೇವಲ ಒಂದು ಬಾರಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವಿಷಯವನ್ನ ಕೇಳಿದ್ದೆವು. ಆದರೆ ದಿನದ 24 ಗಂಟೆ ಐಎಸ್ಎಸ್ ಉಪಗ್ರಹ ಚಲನೆಯಿಂದಾಗಿ 16 ಸೂರ್ಯೋದಯ ಹಾಗೂ ಸೂರ್ಯಾಸ್ತಗಳನ್ನು ನೀವು ಈ ಲೈಫ್ ಸ್ಟ್ರೀಮಿಂಗ್ ಮೂಲಕ ಕಣ್ತುಂಬಿಕೊಳ್ಳಬಹುದು. ಬಾಹ್ಯಾಕಾಶದ ಬಗ್ಗೆ ಅತೀವ ಆಸಕ್ತಿ ಇರುವವರಿಗೆ ಇದೊಂದು ವರದಾನವೇ ಸರಿ.

ಯೂಬ್ಯೂಟ್ ನಲ್ಲಿ ಲೈವ್ ಸ್ಟ್ರೀಮಿಂಗ್ ವಿಡಿಯೋ :

https://youtu.be/86YLFOog4GM
ಯೂಟ್ಯೂಬ್ ನಲ್ಲಿ ಭೂಮಿಯ ಮೇಲ್ಭಾಗದ ನೇರ ಪ್ರಸಾರ ವಿಡಿಯೋ

ಯೂಟ್ಯೂಬ್ ನಲ್ಲಿ ಕಾಣಸಿಗುವ ಲೈವ್ ಸ್ಟ್ರೀಮಿಂಗ್ ವಿಡಿಯೋದ ಡ್ಯಾಷ್ ಬೋರ್ಡ್ ಭಾಗದಲ್ಲಿ ನಿಮಗೆ ಪ್ರಸ್ತುತ ಐಸ್ಎಸ್ ಉಪಗ್ರಹ ಭೂಮಿಯ ಯಾವ ಭಾಗದಲ್ಲಿದೆ ಎಂಬುದನ್ನು ರಿಯಲ್ ಟೈಮ್ ಆಧಾರದಲ್ಲಿ ಅಕ್ಷಾಂಶ ಮತ್ತು ರೇಖಾಂಶದೊಂದಿಗೆ ಅಂತರಾಷ್ಟ್ರೀಯ ಸಮಯದೊಂದಿಗೆ ತಿಳಿಸುತ್ತಿರುತ್ತದೆ. ಈ ವಿಡಿಯೋದ ಕೆಳ ಭಾಗದಲ್ಲಿ ಹಳದಿ ಬಣ್ಣದ ಗೆರೆಯು ಉಪಗ್ರಹ 90 ನಿಮಿಷಗಳ ಹಿಂದೆ ಸಂಚರಿಸಿದ ಮಾರ್ಗ ಹಾಗೂ ಬಿಳಿ ರೇಖೆಯು ಮುಂದೆ 90 ನಿಮಿಷಗಳ ಅವಧಿಯಲ್ಲಿ ಸಂಚರಿಸುವ ಪಥವನ್ನು ಸೂಚಿಸುತ್ತೆ. ಅಲ್ಲದೆ ಸದ್ಯ ಉಪಗ್ರಹವು ಯಾವ ದೇಶದ ಮೇಲಿದೆ? ಯಾವ ವೇಗದಲ್ಲಿ ಈ ಸ್ಪೇಸ್ ಕ್ರಾಫ್ಟ್ ಚಲಿಸುತ್ತಿದೆ? ನೀವು ನೋಡುತ್ತಿರುವುದು ಲೈವ್ ದೃಶ್ಯವೇ? (Red Box- Live Now) ಅಥವಾ ಆಫ್ ಲೈನ್ ದೃಶ್ಯವೇ? (Blue box – Offline) ಎಂಬುದನ್ನು ಈ ವಿಡಿಯೋ ಸ್ಟ್ರೀಮಿಂಗ್ ನಲ್ಲಿ ಸೂಚಿಸುತ್ತದೆ.

ಬಾಹ್ಯಾಕಾಶ ಕೇಂದ್ರವನ್ನು ನಾವು ಬರಿಗಣ್ಣಿನಲ್ಲೂ ನೋಡಬಹುದು….!

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಕಕ್ಷೆಯ ಆಧಾರದಲ್ಲಿ ಈ ಉಪಗ್ರಹವು ಭೂಮಿಯನ್ನು ಪಶ್ಚಿಮದಿಂದ ಪೂರ್ವ ಭಾಗದ ಮೂಲಕ ಹಾದು ಹೋಗುತ್ತಿರುವಂತೆ ತೋರುತ್ತದೆ. ಆದರೆ ಭೂಮಿಯ ತನ್ನ ಸ್ವಂತ ಗತಿಯಲ್ಲಿ ಸುತ್ತುತ್ತಿದ್ದು, ಐಸ್ಎಸ್ ತನ್ನ ಪ್ರತಿ ಪರಿಭ್ರಮಣೆಯ ಸಮಯದಲ್ಲಿ 2200 ಕಿ.ಮೀ ಪಶ್ಚಿಮ ದಿಕ್ಕಿನತ್ತ ಚಲಿಸುತ್ತಿರುತ್ತದೆ. ನೀವು ರಾತ್ರಿ ಹೊತ್ತಿನಲ್ಲಿ ಸರಿಯಾದ ದಿಕ್ಕಿನಲ್ಲಿ ಐಸ್ಎಸ್ ಸುತ್ತುತ್ತಿರುವ ಸ್ಥಳವನ್ನು ಖಚಿತಪಡಿಸಿಕೊಂಡಿದ್ದಲ್ಲಿ ಬರಿಗಣ್ಣಿನಲ್ಲಿ ಈ ಉಪಗ್ರಹವನ್ನು ತಲೆ ಎತ್ತಿ ನೋಡಬಹುದು…!

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸದಲ್ಲಿ ನಿರತರಾಗಿರುವ ಗಗನಯಾತ್ರಿಗಳು

ಆಫ್ ಲೈನ್ ವಿಡಿಯೋದಲ್ಲೂ ಭರ್ಜರಿ ಸರ್ ಪ್ರೈಸ್ :

ಬಾಹ್ಯಾಕಾಶ ಕೇಂದ್ರದ ಉಪಗ್ರಹದಲ್ಲಿ ಅಳವಡಿಸಿರುವ ಕ್ಯಾಮರಾವು ಭೂಮಿ ಮತ್ತು ಸ್ಟೇಸ್ ಸ್ಟೇಷನ್ ಮುಂಭಾಗದ ದೃಶ್ಯಗಳನ್ನು ಪ್ರಸಾರ ಮಾಡಲಿದೆ. ಅಥವಾ ಐಎಸ್ಎಸ್ ಕೇಂದ್ರದಲ್ಲಿರುವ ಗಗನಯಾತ್ರಿಗಳು ಕೆಲಸ ಮಾಡುತ್ತಿರುವ ವಿಡಿಯೋಗಳನ್ನು ಪ್ರಸಾರ ಮಾಡಲಿದೆ. ಲೈವ್ ದೃಶ್ಯಗಳು ಲಭ್ಯವಾಗದ ಸಂದರ್ಭಲ್ಲಿ, ಸೌರ ಬಿರುಗಾಳಿ, ಸೌರಜ್ವಾಲೆಗಳು, ಸೌರ ಕಲೆಗಳು ಕಂಡು ಬಂದಾಗ ನಾಸಾದ ಸೋಲಾರ್ ಡೈನಮಿಕ್ಸ್ ವೀಕ್ಷಣಾಲಯ ತೆಗೆದ ಫೊಟೋಗಳನ್ನು ಪ್ರತಿ ಗಂಟೆಗೊಮ್ಮೆ ನವೀಕರಿಸುತ್ತಿದ್ದು, ಈಗಾಗಲೇ ತೆಗೆದಿರುವ ಸೂರ್ಯನ ಮೇಲ್ಪದರದ ವಿಡಿಯೋಗಳನ್ನು ಪ್ರಸಾರ ಮಾಡಲಿದೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಉದ್ದೇಶವೇನು? :

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕೃತಕ ಉಪಗ್ರಹ ನಿರ್ಮಾಣವು ಅಂತರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಬಾಹ್ಯಾಕಾಶ ಸಂಶೋಧನೆ ಮತ್ತು ಅವಿಷ್ಕಾರ ನಡೆಸುವ ಕಾರಣದಿಂದ 1998ರಲ್ಲಿ ರಚಿಸಲಾಗಿದೆ. ಅಮೆರಿಕ, ರಷ್ಯಾ, ಜಪಾನ್ ಹಾಗೂ ಯುರೋಪ್ ದೇಶಗಳ ಬಾಹ್ಯಾಕಾಶಯಾನಿಗಳು ಈ ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿದ್ದುಕೊಂಡು ನಿರಂತರವಾಗಿ ಆಕಾಶದ ಕುರಿತಂತೆ ವೈಜ್ಞಾನಿಕ ಅಧ್ಯಯನ ಹಾಗೂ ಪ್ರಯೋಗಗಳನ್ನು ನಡೆಸುತ್ತಿರುತ್ತಾರೆ.

ಆರು ಕೊಠಡಿಗಳು- ವಿಜ್ಞಾನದ ಪ್ರಯೋಗಾಲಯ ಐಸ್ಎಸ್ ನಲ್ಲಿದೆ :

ಭೂರಮೆಯ ಶೃಂಗಾರ…..! ಐಎಸ್ಎಸ್ ಅಂತರಿಕ್ಷನೌಕೆಯಲ್ಲಿ ಸೆರೆಯಾಗಿರುವ ಮೋಹಕ ದೃಶ್ಯ

2000 ಇಸವಿಯಿಂದ ಇಲ್ಲಿಯ ತನಕ ಈ ಐಎಸ್ಎಸ್ ನಿಲ್ದಾಣದಲ್ಲಿ 67 ಬಾರಿ ವಿವಿಧ ದೇಶಗಳ ವಿಜ್ಞಾನಿಗಳು ಭೂಮಿಯಿಂದ ಇಲ್ಲಿಗೆ ಹಂತ ಹಂತವಾಗಿ ಗಗನಯಾತ್ರೆಗಳನ್ನು ಕೈಗೊಂಡಿದ್ದಾರೆ. ಹೀಗೆ ಈ ಕೇಂದ್ರಕ್ಕೆ ಬಂದವರು 11 ದಿನದಿಂದ 340 ದಿನಗಳ ಕಾಲ ಈ ಬಾಹ್ಯಾಕಾಶ ಕೇಂದ್ರದಲ್ಲಿ ನೆಲೆಸಿ ಆಗಸದ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಈ ಬಾಹ್ಯಾಕಾಶ ಉಪಗ್ರಹವನ್ನು ಹಂತ ಹಂತವಾಗಿ ಹಲವು ಭಾಗಗಳನ್ನು ಸೇರಿಸಿ ರಚಿಸಲಾಗಿದೆ. 2011ರಲ್ಲಿ ಪೂರ್ಣ ರೂಪದಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಾಣವಾಯಿತು. ಈ ನಿಲ್ದಾಣದಲ್ಲಿ ವಿವಿಧ ವೈಜ್ಞಾನಿಕ ಪ್ರಯೋಗಾಲಯಗಳಿವೆ. 6 ಕೊಠಡಿಗಳನ್ನು ಹೊಂದಿರುವ ಈ ಉಪಗ್ರಹದಲ್ಲಿ ಏಕಕಾಲಕ್ಕೆ 6 ಗಗನಯಾತ್ರಿಗಳು ನೆಲಸಬಹುದಾಗಿದೆ. ಸೌರ ಫಲಕಗಳ ಮೂಲಕ ಉತ್ಪಾದಿಸಲಾದ ವಿದ್ಯುತ್ ನಿಂದ ಈ ನಿಲ್ದಾಣ ಕಾರ್ಯನಿರ್ವಹಿಸುತ್ತದೆ.

ಬಾಹ್ಯಾಕಾಶ ಕೇಂದ್ರ ನಮಗೆಷ್ಟು ಮುಖ್ಯ ?

ಆಕಾಶದಲ್ಲಿ ಮಾನವನು ಹೇಗೆ ಜೀವಿಸಬಹುದು?  ಹೀಗೆ ಜೀವನ ಮಾಡುವಾಗ ಏನೆಲ್ಲಾ ಸವಾಲುಗಳು ಎದುರಾಗಬಹುದು? ಅದನ್ನು ಹೇಗೆ ಸಶಕ್ತವಾಗಿ ಎದುರಿಸಬಹುದು? ಎಂಬೆಲ್ಲಾ ವಿಚಾರವಾಗಿ ಆಕಾಶದಲ್ಲಿನ ಈ ಐಎಸ್ಎಸ್ ನಿಲ್ದಾಣದಲ್ಲಿದ್ದುಕೊಂಡು ನಿರಂತರವಾಗಿ ಸಂಶೋಧನೆ ಕೈಗೊಳ್ಳಲಾಗುತ್ತಿದೆ. ಈ ಸಂಶೋಧನೆಯನ್ನು ಭೂಮಿಯಲ್ಲಿದ್ದುಕೊಂಡು ಕೈಗೊಳ್ಳಲು ಸಾಧ್ಯವಾಗದು ಎಂಬುದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ನಾಸಾ ಸಂಸ್ಥೆಯು ಈ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಉಪಗ್ರಹ ದೀರ್ಘಕಾಲ ಬಾಳಿಕೆ ಬರುವುದು ಹೇಗೆ ಎಂಬುದನ್ನು ಕಲಿತುಕೊಂಡಿದೆ. ಭವಿಷ್ಯದ ದೃಷ್ಟಿಯಲ್ಲಿ ಈ ವಿದ್ಯಮಾನಗಳು ಪ್ರಮುಖವಾಗಿದೆ.

ಮುಂದಿನ ದಿನಗಳಲ್ಲಿ ಗಗನಯಾತ್ರಿಗಳು ವಿವಿಧ ಗ್ರಹಗಳಿಗೆ ತೆರಳಿ ಬಾಹ್ಯಾಕಾಶ ಯಾನ ಕೈಗೊಳ್ಳುವ ನಿಟ್ಟಿನಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿನ ಪ್ರಯೋಗಗಳು ಮೊದಲ ಹೆಜ್ಜೆಯಾಗಿದೆ.

WhatsApp Join our WhatsApp Channel
Previous Post

ನಾಳೆ ಯುಪಿಎಸ್ ಸ್ಸಿ ಪೂರ್ವಭಾವಿ ಪರೀಕ್ಷೆಗಾಗಿ ಒಂದು ಗಂಟೆ ಮುಂಚಿತವಾಗಿ ಮೆಟ್ರೊ ರೈಲು ಸೇವೆ ಆರಂಭ

Next Post

President Visit To Bangalore | ಜೂನ್ 13 ರಂದು ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ

Next Post

President Visit To Bangalore | ಜೂನ್ 13 ರಂದು ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ

ಬೈಯ್ಯಪ್ಪನಹಳ್ಳಿಯಲ್ಲಿ ಸೇವೆ ಆರಂಭಿಸಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದ ಚಿತ್ರ

SMVB AC Railway Station | ದೇಶದ ಮೊದಲ ಎಸಿ ರೈಲ್ವೆ ಸ್ಟೇಷನ್ ಬೆಂಗಳೂರಿನಲ್ಲಿ ಇಂದಿನಿಂದ ಕಾರ್ಯಾರಂಭ - ಹೆಚ್ಚಿನ ಮಾಹಿತಿ ಇಲ್ಲಿದೆ

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group