Wednesday, August 5, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

  • Bengaluru Focus
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

  • Bengaluru Focus
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

NAMMA METRO 2ND PHASE TUNNEL | ಭೂಮಿಯಡಿಯ ಮೆಟ್ರೊ ಸುರಂಗಮಾರ್ಗದಿಂದ ಹೊರಬರಲಿದೆ ಊರ್ಜಾ ಟಿಬಿಎಮ್ ಯಂತ್ರ….!

13 ತಿಂಗಳ ಬಳಿಕ ಶಿವಾಜಿನಗರ ಮೆಟ್ರೊ ಸುರಂಗ ನಿಲ್ದಾಣದ ಟನಲ್ ನಲ್ಲಿ ಬುಧವಾರ ಕಾಣಿಸಲಿದೆ ಊರ್ಜಾ | ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ | ಅಕ್ಟೋಬರ್ ನಲ್ಲಿ ನೆಲದೊಳಗಿಂದ ಹೊರಬಲಿದೆ ವಿಂದ್ಯ ಟಿಬಿಎಮ್

by Bengaluru Wire Desk
September 21, 2021
in Bengaluru Focus, News Wire
Reading Time: 2 mins read
0

ಬೆಂಗಳೂರು, (www.bengaluruwire.com) : ನಮ್ಮ ಮೆಟ್ರೊ ಎರಡನೇ ಹಂತದ ಸುರಂಗ ಮಾರ್ಗ ನಿರ್ಮಾಣದಲ್ಲಿ ತೊಡಗಿರುವ 9 ಟನಲ್ ಬೋರಿಂಗ್ ಮೆಷಿನ್ (ಟಿಬಿಎಮ್) ಪೈಕಿ ಶಿವಾಜಿನಗರ ಮೆಟ್ರೊ ಸುರಂಗ ನಿಲ್ದಾಣದಿಂದ ಊರ್ಜಾ ಸುರಂಗ ಕೊರೆಯುವ ಯಂತ್ರ ನಾಳೆ ಹೊರಬರಲಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಕ್ಷಿಯಾಗಲಿದ್ದಾರೆ.

ಒಟ್ಟು 805.50 ಮೀಟರ್ ಉದ್ದದ ಸುರಂಗ ಮಾರ್ಗವನ್ನು ಕೊರೆಯುವ ಕೆಲಸವನ್ನು ಊರ್ಜಾ ಟನಲ್ ಬೋರಿಂಗ್ ಮೆಷಿನ್ ಕಳೆದ ವರ್ಷದ ಆಗಸ್ಟ್ ನಲ್ಲಿ ಕೆಲಸ ಆರಂಭಿಸಿತ್ತು. ಕೊರೊನಾ ಸಂಕಷ್ಟ ಸಂದರ್ಭದಿಂದಾಗಿ ಕೆಲಸ ತಡವಾಗಿ ಸುರಂಗ ನಿರ್ಮಾಣ ಕೆಲಸ ಆರಂಭವಾದ ಹದಿಮೂರುವರೆ ತಿಂಗಳ ನಂತರ ಊರ್ಜಾ ಬೃಹತ್ ಯಂತ್ರ ನಾಳೆ ಶಿವಾಜಿನಗರ ಮೆಟ್ರೊ ಸುರಂಗ ನಿಲ್ದಾಣದ ಬಳಿ ಹೊರಬರಲಿದೆ. ಬೆಳಗ್ಗೆ 10 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಊರ್ಜಾ ಟಿಬಿಎಮ್ ಮೆಷಿನ್ ಸುರಂಗ ಕೊರೆಯುವ ಒಂದು ಭಾಗದ ಕೆಲಸವನ್ನು ಪೂರ್ಣಗೊಳಿಸಿ ಆಚೆ ಬರಲಿದೆ.

ಪ್ಯಾಕೇಜ್- 3 ರಲ್ಲಿ ಎಲ್ ಅಂಡ್ ಟಿ ಸಂಸ್ಥೆಯು 2.88 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಶಿವಾಜಿನಗರದಿಂದ ಶಾಧಿ ಮಹಲ್ ಶಾಫ್ಟ್ ವರೆಗೆ ನಿರ್ಮಿಸಿ ಕಂಟೋನ್ಮೆಂಟ್ ಹಾಗೂ ಪಾಟರಿಟೌನ್ ಎರಡು ಸ್ಥಳದಲ್ಲಿ ನೆಲದೊಳಗಿನ ಮೆಟ್ರೊ ನಿಲ್ದಾಣ ನಿರ್ಮಾಣ ಮಾಡುವ ಟೆಂಡರ್ ಅನ್ನು ಪಡೆದುಕೊಂಡಿತ್ತು. ಈ ವಿಭಾಗದಲ್ಲಿ ಟಿಬಿಎಮ್ ಊರ್ಜಾ ಕಳೆದ ವರ್ಷ ಮೊದಲಿಗೆ ಸುರಂಗ ಕೊರೆಯುವ ಕೆಲಸ ಆರಂಭಿಸಿತ್ತು. ತದನಂತರ 1ನೇ ಆಗಸ್ಟ್ 2020ರಂದು ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ಸುರಂಗ ಮಾರ್ಗದಲ್ಲಿ ಆಳೆತ್ತರದ ಭಾರೀ ರಿಂಗ್ ಅಳವಡಿಸುವ ಕಾರ್ಯವನ್ನು ಆರಂಭಿಸಿತ್ತು.

“ನಮ್ಮ ಮೆಟ್ರೊನ ಶಿವಾಜಿನಗರ ಸುರಂಗ ಮೆಟ್ರೊ ನಿಲ್ದಾಣದಲ್ಲಿ ಊರ್ಜಾ ಟಿಬಿಎಮ್ ಮೆಷಿನ್ ತನ್ನ ನಿಗಧಿತ ಗುರಿಯ ಸುರಂಗ ನಿರ್ಮಾಣ ಕಾರ್ಯವನ್ನು ಮುಗಿಸಿ ಹೊರಬರುತ್ತಿದೆ. ನಮ್ಮ ಮೆಟ್ರೊಗೆ ಇದು ಅತ್ಯಂತ ಪ್ರಮುಖ ಕ್ಷಣವಾಗಿದೆ. ಮೆಟ್ರೊ ಮೊದಲ ಹಂತದಲ್ಲೂ ಸುರಂಗ ನಿರ್ಮಾಣ ಕಾರ್ಯವನ್ನು ಬಿಎಂಆರ್ ಸಿಎಲ್ ಯಶಸ್ವಿಯಾಗಿ ಕೈಗೊಂಡಿತ್ತು. ಇದೀಗ ಅತ್ಯಂತ ಸವಾಲಿನ ಮಾರ್ಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಏಕಂದರೆ ಶಿವಾಜಿನಗರ ಮಾರ್ಗದ ಈ ಉತ್ತರ ಸರಹದ್ದಿನಲ್ಲಿ ಭೂಮಿಯ ಅಡಿ ಸಡಿಲ ಮಣ್ಣು ಹಾಗೂ ಹಳೆಯ ಬೋರ್ ವೆಲ್, ಬಾವಿಗಳು ಸಾಕಷ್ಟು ಇದ್ದು, ಅವುಗಳಿಗೆ ಭೂಮೇಲ್ಭಾಗದಲ್ಲಿನ ಆಸ್ತಿಗಳಿಗೆ ಹಾನಿಯಾಗದಂತೆ ಭೂಮಿಯನ್ನು ಕೊರೆದು ಸುರಂಗ ನಿರ್ಮಿಸುವುದು ಸಾಕಷ್ಟು ತ್ರಾಸದಾಯಕ ಹಾಗೂ ಅತ್ಯಂತ ಸವಾಲಿನಿಂದ ಕೂಡಿತ್ತು. ಈ ಕ್ಲಿಷ್ಟ ಪರಿಸ್ಥಿತಿಯನ್ನು ಮೆಟ್ರೊ ಯಶಸ್ವಿಯಾಗಿ ನಿಭಾಯಿಸಿದೆ. ”

– ಅಂಜುಮ್ ಪರ್ವೇಜ್, ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರು

ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಗೊಟ್ಟಿಗೆರೆಯಿಂದ ನಾಗಾವರ ವರೆಗಿನ ರೀಚ್-6 ಮಾರ್ಗ ಒಟ್ಟು 21 ಕಿ.ಮೀ ಇದ್ದು ಆ ಪೈಕಿ 13.9 ಕಿ.ಮೀ ಸುರಂಗ ಮಾರ್ಗವು ಬರಲಿದ್ದು, ಒಟ್ಟು 13 ಸುರಂಗ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗಲಿದೆ. ಒಟ್ಟು 4 ಪ್ಯಾಕೇಜ್ ನಲ್ಲಿ 3 ಕಂಪನಿಗಳು ಈ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದೆ. ಪ್ಯಾಕೇಜ್ -3ರಲ್ಲಿ ಶಿವಾಜಿನಗರದಿಂದ ಶಾಧಿ ಮಹಲ್ ವರೆಗಿನ 2.88 ಕಿ.ಮೀ ಮಾರ್ಗದಲ್ಲಿ ಟಿಬಿಎಮ್-1 ಮೆಷಿನ್ ಊರ್ಜಾ ಹಾಗೂ ಟಿಬಿಎಮ್-2 ವಿಂದ್ಯ ಎಂಬ ಸುರಂಗ ಕೊರೆಯುವ ಯಂತ್ರವು ನೆಲದೊಳಗೆ ಸುರಂಗವನ್ನು ಕೊರೆಯುವ ಕಾರ್ಯದಲ್ಲಿ ನಿರತವಾಗಿದೆ. ಸಾಮಾನ್ಯವಾಗಿ ಟನಲ್ ಬೋರಿಂಗ್ ಮೆಷಿನ್ ಪ್ರತಿದಿನಕ್ಕೆ ಸರಾಸರಿ 3.5 ಮೀಟರ್ ನಷ್ಟು ಸುರಂಗ ಕೊರೆಯುತ್ತದೆ. ಕೆಲವೊಮ್ಮೆ ಭೂಗತ ಮಾರ್ಗದಲ್ಲಿ ಸಡಿಲ ಮಣ್ಣು, ಗಡ್ಡಿ ಬಂಡೆಗಳು ಇರದಿದ್ದ ಪಕ್ಷದಲ್ಲಿ ದಿನವೊಂದಕ್ಕೆ 600 ಮೀಟರ್ ನಿಂದ ಒಂದು ಕಿಲೋ ಮೀಟರ್ ತನಕವೂ ಟನಲ್ ಕೊರೆದ ಉದಾಹರಣೆಗಳಿವೆ. ಊರ್ಜಾ ಟಿಬಿಎಮ್ ಯಂತ್ರ ಸಾಗಿದ 805 ಮೀಟರ್ ಮಾರ್ಗದಲ್ಲಿ 355 ಮೀಟರ್ ಗೂ ಹೆಚ್ಚು ಉದ್ದದಲ್ಲಿ ಕಠಿಣವಾದ ಕಲ್ಲುಬಂಡೆಗಳು, ಉಳಿದ ಭಾಗದಲ್ಲಿ ಸಡಿಲ ಮತ್ತು ಬಂಡೆ ಮಿಶ್ರಿತ ಮಣ್ಣು ಎದುರಾಗಿತ್ತು ಎಂದು ಹೇಳುತ್ತಾರೆ ಮೆಟ್ರೊ ಅಧಿಕಾರಿಗಳು.

ಕೋವಿಡ್ ಕಾರಣದಿಂದ ಕಾಮಗಾರಿ ವಿಳಂಬ :

ಊರ್ಜಾ ಟಿಬಿಎಮ್ ಯಂತ್ರವು 805 ಮೀಟರ್ ಉದ್ದದ ಸುರಂಗ ಮಾರ್ಗವನ್ನು ಕೊರೆಯಲು ಬರೋಬ್ಬರಿ 13 ತಿಂಗಳು ತೆಗೆದುಕೊಂಡಿದೆ. ಕೋವಿಡ್ ಸೋಂಕು ಹೆಚ್ಚಾದ ಕಾರಣ ಸುರಕ್ಷತೆಯ ಕಾರಣದಿಂದ ಕಾಮಗಾರಿಯು ನಾಲ್ಕೈದು ತಿಂಗಳು ನಡೆದಿರಲಿಲ್ಲ. ಹಾಗಾಗಿ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಕೊಂಚ ವಿಳಂಬವಾಯಿತು ಎಂದು ಹೇಳುತ್ತಾರೆ ಮೆಟ್ರೊ ಎಂಡಿ ಅಂಜುಮ್ ಪರ್ವೇಜ್.

ಅಕ್ಟೋಬರ್ ನಲ್ಲಿ ಸುರಂಗದಿಂದ ಆಚೆ ಬರಲಿದೆ ವಿಂದ್ಯ ಟಿಬಿಎಮ್ :

ಮುಂದಿನ ತಿಂಗಳು ಇದೇ ಮಾರ್ಗದ ದಕ್ಷಿಣ ಸರಹದ್ದಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಂದ್ಯ ಹೆಸರಿನ ಟಿಬಿಎಮ್ ಯಂತ್ರವೂ ತನ್ನ ನಿಗಧಿತ ಮಾರ್ಗದಲ್ಲಿ ಸುರಂಗ ನಿರ್ಮಾಣ ಕೆಲಸವನ್ನು ಪೂರ್ಣಗೊಳಿಸಲಿದೆ. ಬಳಿಕ ಊರ್ಜಾ ಹಾಗೂ ವಿಂದ್ಯ ಹೆಸರಿನ ಈ ಎರಡು ಟಿಬಿಎಮ್ ಯಂತ್ರವನ್ನು ಬಿಡಿ ಬಿಡಿಯಾಗಿ ಬಿಚ್ಚಿ ಮೇಲಕ್ಕೆತ್ತಿ ಬೇರೆ ಕಡೆ ಸಾಗಿಸಿ ಅನ್ಯ ದಿಕ್ಕಿನಲ್ಲಿ ಸುರಂಗ ನಿರ್ಮಾಣ ಕಾಮಗಾರಿಗೆ ಬಳಸಲಾಗುತ್ತದೆ. ಅದರಲ್ಲೂ ಊರ್ಜಾ ಟಿಬಿಎಮ್ ಯಂತ್ರವನ್ನು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ಸುರಂಗ ಮೆಟ್ರೋ ನಿಲ್ದಾಣದ ಮಾರ್ಗದಲ್ಲಿ ಸುರಂಗ ತೋಡಲು ಬಳಸಲಾಗುತ್ತದೆ. ಇನ್ನು ಒಂದು ಅಥವಾ ಎರಡು ತಿಂಗಳ ಅಂತರದಲ್ಲಿ ವಿವಿಧ ಟಿಬಿಎಮ್ ಯಂತ್ರಗಳು ತಮಗೆ ವಹಿಸಿದ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿ ಒಂದೊಂದಾಗಿ ಹೊರಬರಲಿದೆ ಎಂದು ಅವರು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.

ರೀಚ್ -6 ಸುರಂಗ ಮಾರ್ಗ ಕಾಮಗಾರಿಗಳ ಪ್ರಗತಿ ಹೀಗಿದೆ :

ಪ್ಯಾಕೇಜ್- 1 (ದಕ್ಷಿಣ ರ್ಯಾಂಪ್ ನಿಂದ ಡೈರಿ ವೃತ್ತದವರೆಗಿನ 3.65 ಕಿ.ಮೀ ಸುರಂಗ ಮಾರ್ಗ)

ರುದ್ರ, ವಮಿಕ ಹಾಗೂ ವರದ ಎಂಬ ಮೂರು ಟಿಬಿಎಮ್ ಯಂತ್ರಗಳು ಆಗಸ್ಟ್ ಅಂತ್ಯದ ತನಕ ಶೇ.17.77 ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಈ ಮಾರ್ಗದಲ್ಲಿ ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್ ಫೋರ್ಡ್ ಟೌನ್ ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆ ಎಂಬ 4 ಸುರಂಗ ಮೆಟ್ರೊ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ.

ಪ್ಯಾಕೇಜ್- 2 (ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿನಗರದವರೆಗಿನ 2.62 ಕಿ.ಮೀ ಸುರಂಗ ಮಾರ್ಗ)

ಅವನಿ ಹಾಗೂ ಲವಿ ಎಂಬ ಎರಡು ಸುರಂಗ ಕೊರೆಯುವ ಯಂತ್ರಗಳು ಆಗಸ್ಟ್ ಅಂತ್ಯದ ವೇಳೆಗೆ ಶೇ. 22.05ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಈ ಲೈನ್ ನಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ.ರಸ್ತೆ ಹಾಗೂ ಶಿವಾಜಿನಗರ ಮೆಟ್ರೊ ಸುರಂಗ ನಿಲ್ದಾಣದ ಕಾಮಗಾರಿ ವಿವಿಧ ಹಂತದಲ್ಲಿ ಸಾಗಿದೆ.

ಪ್ಯಾಕೇಜ್ – 3 (ಶಿವಾಜಿನಗರದಿಂದ ಶಾದಿ ಮಹಲ್ ಶಾಫ್ಟ್ ವರೆಗಿನ 2.88 ಕಿ.ಮೀ ಸುರಂಗ ಮಾರ್ಗ)

ಊರ್ಜ ಮತ್ತು ವಿಂದ್ಯ ಎರಡು ಟಿಬಿಎಂ ಯಂತ್ರಗಳು ಆಗಸ್ಟ್ ಅಂತ್ಯದ ವೇಳೆಗೆ ಶೇ. 29.70ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಈ ಮಾರ್ಗದಲ್ಲಿ ಕಂಟೋನ್ಮೆಂಟ್ ಹಾಗೂ ಪಾಟರಿ ಟೌನ್  ಮೆಟ್ರೊ ಸುರಂಗ ನಿಲ್ದಾಣದ ಕಾಮಗಾರಿಗಳು ನಡೆಯುತ್ತಿದೆ.

ಪ್ಯಾಕೇಜ್ -4  (ದಕ್ಷಿಣ ಟ್ಯಾನರಿ ರಸ್ತೆ ನಿಲ್ದಾಣದಿಂದ ಉತ್ತರ ರ್ಯಾಂಪ್ ವರೆಗಿನ 4.59 ಕಿ.ಮೀ ಸುರಂಗ ಮಾರ್ಗ)

ಈ ಮಾರ್ಗದಲ್ಲಿ ತುಂಗಾ ಮತ್ತು ಭದ್ರಾ ಎರಡು ಟಿಬಿಎಮ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು ಆಗಸ್ಟ್ ಅಂತ್ಯದ ವೇಳೆಗೆ ಶೇ.4.59 ಕಿ.ಮೀ ಮಾರ್ಗದ ಪೈಕಿ ಶೇ.2.37ರಷ್ಟು ಕಾಮಗಾರಿಯನ್ನು ಮಾತ್ರ ಪೂರ್ಣಗೊಳಿಸಿದೆ. ತುಂಗ ಮತ್ತು ಭದ್ರಾ ಎರಡು ಟನಲ್ ಬೋರಿಂಗ್ ಮೆಷಿನ್ ಗಳು ಇದೇ ವರ್ಷದ ಜೂನ್ ನಿಂದ ಕಾರ್ಯಾರಂಭ ಮಾಡಿವೆ. ಈ ಮಾರ್ಗದಲ್ಲಿ ಟ್ಯಾನರಿ ರಸ್ತೆ ನಿಲ್ದಾಣ, ವೆಂಕಟೇಶಪುರ ನಿಲ್ದಾಣ, ಕಾಡುಗೊಂಡನಹಳ್ಳಿ ನಿಲ್ದಾಣ ಹಾಗೂ ನಾಗಾವರ ನಿಲ್ದಾಣ ಸೇರಿದಂತೆ ಒಟ್ಟು ನಾಲ್ಕು ಸುರಂಗ ನಿಲ್ದಾಣಗಳು ನಿರ್ಮಾಣ ಹಂತದಲ್ಲಿದೆ.

WhatsApp Join our WhatsApp Channel
Previous Post

KSRTC NEWS | ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಐದು ಪ್ರಶಸ್ತಿಗಳಿಗೆ ಪಾತ್ರವಾದ ಕೆಎಸ್ ಆರ್ ಟಿಸಿ

Next Post

Namma Metro URJA TBM | ಭೂಮಿ ಸೀಳಿ ಸುರಂಗ ಕೊರೆದು ಹೊರಬಂದ ಊರ್ಜಾ….!

Next Post

Namma Metro URJA TBM | ಭೂಮಿ ಸೀಳಿ ಸುರಂಗ ಕೊರೆದು ಹೊರಬಂದ ಊರ್ಜಾ....!

BBMP TREE BRANCH MISHAP | ಮರದಕೊಂಬೆ ಬಿದ್ದು ಸಾವನ್ನಪ್ಪಿದ ಕುಟುಂಬಕ್ಕೆ 1 ವರ್ಷವಾದರೂ ಪರಿಹಾರ ನೀಡದ ಬಿಬಿಎಂಪಿ

Please login to join discussion

Like Us on Facebook

Follow Us on Twitter

Recent News

ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

August 5, 2026
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

August 5, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

August 5, 2026
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

August 5, 2026

Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

August 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group