Tuesday, July 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

    National Anthem New Guidelines | ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ನಿಯಮ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಪ್ರಕಟ 

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    Power News | ಎಲ್ ನಿನೋ ಎದುರಿಸಲು ಇಂಧನ ಇಲಾಖೆ ಸಜ್ಜು: ಸಮರ್ಪಕ ವಿದ್ಯುತ್ ಪೂರೈಕೆಗೆ ಕಾರ್ಯತಂತ್ರ

    ಶಿವಮೊಗ್ಗ, ಧಾರವಾಡ ಕೃಷಿ ವಿವಿ ಉಪಕುಲಪತಿ ಆಯ್ಕೆ: ‘ಕುರ್ಚಿಗಾಗಿ ಗೌರವ ಕಳೆದುಕೊಳ್ಳಬೇಡಿ’ – ನಿವೃತ್ತ ಪ್ರಾಧ್ಯಾಪಕರ ಎಚ್ಚರಿಕೆ

    NIA Raids | ​ಆನ್‌ಲೈನ್ ಉಗ್ರ ಸಂಚು: ಕರ್ನಾಟಕ ಸೇರಿ 10 ರಾಜ್ಯಗಳ 20 ಕಡೆ ಎನ್‌ಐಎ ಭರ್ಜರಿ ದಾಳಿ

    ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ: ಪೂರ್ವಾನುಮತಿಯಿಲ್ಲದೆ ಮಾಹಿತಿ, ಸಂದರ್ಶನ ನೀಡುವಂತಿಲ್ಲ

    SIR News | ಎಸ್‌ಐಆರ್ ಕಾರ್ಯದೊತ್ತಡಕ್ಕೆ ಮೂವರು ನೌಕರರ ಬಲಿ: ಅಧಿಕಾರಿಗಳ ವಿರುದ್ಧ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಆಕ್ರೋಶ

    ಹೆಚ್ಎಂಟಿ ಪುನಶ್ಚೇತನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಅಡ್ಡಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

  • Bengaluru Focus

    ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

    ಬೆಂಗಳೂರು ಟ್ರಾಫಿಕ್‌ಗೆ ಮಾಸ್ಟರ್ ಪ್ಲಾನ್: ಸಿಟಿ ಒಳಗೆ ಬರುವ 600 ಪೆಟ್ರೋಲ್ ಟ್ಯಾಂಕರ್‌ಗಳ ದಿಕ್ಕು ಬದಲಿಸಲು ಎನ್ಐಪಿಡಿಎ ಮನವಿ

    39 ಅಗತ್ಯ ಔಷಧಗಳ ಬೆಲೆ ಕಡಿತ: ಬಿಪಿ, ಶುಗರ್, ಹಾರ್ಟ್ ರೋಗಿಗಳಿಗೆ ಕೇಂದ್ರದಿಂದ ಭರ್ಜರಿ ರಿಲೀಫ್

    ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

    BUWJ Pressday-2026 | ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಬದಲಾಗುವುದು ಅನಿವಾರ್ಯ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

    ಬೆಂಗಳೂರು ವಿವಿ ನೂತನ ಕುಲಪತಿಯಾಗಿ ಪ್ರೊ.ಸಿ.ಶಿವರಾಜು ಅಧಿಕಾರ ಸ್ವೀಕಾರ

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    ನೆಲಮಂಗಲ ಬಳಿ ಭೀಕರ ಅಪಘಾತ: ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಐಒಸಿಎಲ್ ಟ್ಯಾಂಕರ್

    GBA News | ಬೆಳ್ಳಂದೂರು ರಾಜಕಾಲುವೆ ಹಾಗೂ ಬಫರ್ ರಸ್ತೆ ಅಭಿವೃದ್ಧಿಗೆ ಸಮಗ್ರ ಯೋಜನೆ: ಆಯುಕ್ತ ಡಿ.ಎಸ್. ರಮೇಶ್ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

    National Anthem New Guidelines | ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ನಿಯಮ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಪ್ರಕಟ 

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    Power News | ಎಲ್ ನಿನೋ ಎದುರಿಸಲು ಇಂಧನ ಇಲಾಖೆ ಸಜ್ಜು: ಸಮರ್ಪಕ ವಿದ್ಯುತ್ ಪೂರೈಕೆಗೆ ಕಾರ್ಯತಂತ್ರ

    ಶಿವಮೊಗ್ಗ, ಧಾರವಾಡ ಕೃಷಿ ವಿವಿ ಉಪಕುಲಪತಿ ಆಯ್ಕೆ: ‘ಕುರ್ಚಿಗಾಗಿ ಗೌರವ ಕಳೆದುಕೊಳ್ಳಬೇಡಿ’ – ನಿವೃತ್ತ ಪ್ರಾಧ್ಯಾಪಕರ ಎಚ್ಚರಿಕೆ

    NIA Raids | ​ಆನ್‌ಲೈನ್ ಉಗ್ರ ಸಂಚು: ಕರ್ನಾಟಕ ಸೇರಿ 10 ರಾಜ್ಯಗಳ 20 ಕಡೆ ಎನ್‌ಐಎ ಭರ್ಜರಿ ದಾಳಿ

    ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ: ಪೂರ್ವಾನುಮತಿಯಿಲ್ಲದೆ ಮಾಹಿತಿ, ಸಂದರ್ಶನ ನೀಡುವಂತಿಲ್ಲ

    SIR News | ಎಸ್‌ಐಆರ್ ಕಾರ್ಯದೊತ್ತಡಕ್ಕೆ ಮೂವರು ನೌಕರರ ಬಲಿ: ಅಧಿಕಾರಿಗಳ ವಿರುದ್ಧ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಆಕ್ರೋಶ

    ಹೆಚ್ಎಂಟಿ ಪುನಶ್ಚೇತನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಅಡ್ಡಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

  • Bengaluru Focus

    ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

    ಬೆಂಗಳೂರು ಟ್ರಾಫಿಕ್‌ಗೆ ಮಾಸ್ಟರ್ ಪ್ಲಾನ್: ಸಿಟಿ ಒಳಗೆ ಬರುವ 600 ಪೆಟ್ರೋಲ್ ಟ್ಯಾಂಕರ್‌ಗಳ ದಿಕ್ಕು ಬದಲಿಸಲು ಎನ್ಐಪಿಡಿಎ ಮನವಿ

    39 ಅಗತ್ಯ ಔಷಧಗಳ ಬೆಲೆ ಕಡಿತ: ಬಿಪಿ, ಶುಗರ್, ಹಾರ್ಟ್ ರೋಗಿಗಳಿಗೆ ಕೇಂದ್ರದಿಂದ ಭರ್ಜರಿ ರಿಲೀಫ್

    ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

    BUWJ Pressday-2026 | ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಬದಲಾಗುವುದು ಅನಿವಾರ್ಯ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

    ಬೆಂಗಳೂರು ವಿವಿ ನೂತನ ಕುಲಪತಿಯಾಗಿ ಪ್ರೊ.ಸಿ.ಶಿವರಾಜು ಅಧಿಕಾರ ಸ್ವೀಕಾರ

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    ನೆಲಮಂಗಲ ಬಳಿ ಭೀಕರ ಅಪಘಾತ: ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಐಒಸಿಎಲ್ ಟ್ಯಾಂಕರ್

    GBA News | ಬೆಳ್ಳಂದೂರು ರಾಜಕಾಲುವೆ ಹಾಗೂ ಬಫರ್ ರಸ್ತೆ ಅಭಿವೃದ್ಧಿಗೆ ಸಮಗ್ರ ಯೋಜನೆ: ಆಯುಕ್ತ ಡಿ.ಎಸ್. ರಮೇಶ್ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

ಬೆಂಗಳೂರು ಟ್ರಾಫಿಕ್‌ಗೆ ಮಾಸ್ಟರ್ ಪ್ಲಾನ್: ಸಿಟಿ ಒಳಗೆ ಬರುವ 600 ಪೆಟ್ರೋಲ್ ಟ್ಯಾಂಕರ್‌ಗಳ ದಿಕ್ಕು ಬದಲಿಸಲು ಎನ್ಐಪಿಡಿಎ ಮನವಿ

ನಗರದ ಸಂಚಾರ ದಟ್ಟಣೆಯನ್ನು ಶೇ.10 ರಷ್ಟು ಕಡಿಮೆ ಮಾಡಲು ಎಸ್‌ಟಿಆರ್‌ಆರ್ ಹಾಗೂ ನೈಸ್ ರಸ್ತೆ ಬಳಕೆ ಮಾಡುವಂತೆ ಪೊಲೀಸ್ ಕಮಿಷನರ್‌ಗೆ ತೈಲ ವಿತರಕರ ಸಂಘದಿಂದ ಅಧಿಕೃತ ಪ್ರಸ್ತಾವನೆ.

by Bengaluru Wire Desk
July 13, 2026
in Bengaluru Focus
Reading Time: 1 min read
0

ಬೆಂಗಳೂರು, ಜು.13 www.bengaluruwire.com: ಐಟಿ ಸಿಟಿ ಬೆಂಗಳೂರಿನ ಜನರನ್ನು ಹೈರಾಣಾಗಿಸುತ್ತಿರುವ ಸಂಚಾರ ದಟ್ಟಣೆಗೆ (Traffic Congestion) ಮುಕ್ತಿ ಹಾಡಲು ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (NIPDA) ಭರ್ಜರಿ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ. 

ನಗರದ ರಸ್ತೆಗಳಲ್ಲಿ ಪ್ರತಿದಿನ ಸಂಚರಿಸುವ ನೂರಾರು ಭಾರೀ ತೈಲ ಟ್ಯಾಂಕರ್‌ಗಳನ್ನು ಪೆರಿಫೆರಲ್ ಕಾರಿಡಾರ್‌ಗಳ ಮೂಲಕ ಡೈವರ್ಟ್ ಮಾಡುವುದರಿಂದ ಸಿಟಿಯ ಟ್ರಾಫಿಕ್ ಕಿರಿಕಿರಿಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಬಹುದು ಎಂದು ಸಂಘವು ತಿಳಿಸಿದೆ.

​ಈ ಕುರಿತು “ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್” (Greater Bengaluru District & Neighbouring Districts) ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸ್ ಕಮಿಷನರ್‌ ಅವರಿಗೆ ಅಧಿಕೃತ ಮನವಿಯೊಂದನ್ನು ಸಲ್ಲಿಸಿದೆ.

​ದೇವನಗೊಂದಿ ಐಓಸಿಎಲ್ (IOCL) ಟರ್ಮಿನಲ್ ಸೇರಿದಂತೆ ವಿವಿಧ ತೈಲ ಕಂಪನಿಗಳ ಘಟಕಗಳಿಂದ ಹೊರಡುವ ಪೆಟ್ರೋಲ್, ಡೀಸೆಲ್ ಹಾಗೂ ಎಥನಾಲ್ ಹೊತ್ತ ಟ್ಯಾಂಕರ್‌ಗಳನ್ನು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR), ನೈಸ್ (NICE) ರಸ್ತೆ ಹಾಗೂ ಇತರ ಬೈಪಾಸ್ ರಸ್ತೆಗಳ ಮೂಲಕ ಮರುಮಾರ್ಗಗೊಳಿಸುವಂತೆ ಸಂಘವು ಒತ್ತಾಯಿಸಿದೆ.

​ಸಿಟಿ ಟ್ರಾಫಿಕ್‌ಗೆ ತಲೆನೋವಾದ ಹೊರ ಜಿಲ್ಲೆಯ ಟ್ಯಾಂಕರ್‌ಗಳು:

​ಪ್ರಸ್ತುತ ದೇವನಗೊಂಡಿ ಟರ್ಮಿನಲ್‌ನಿಂದ ಲೋಡ್ ಮಾಡಿಕೊಳ್ಳುವ ನೂರಾರು ಟ್ಯಾಂಕರ್‌ಗಳು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ ಹಾಗೂ ಚಿತ್ರದುರ್ಗ ಸೇರಿದಂತೆ ವಿವಿಧ ಹೊರ ಜಿಲ್ಲೆಗಳಿಗೆ ತಲುಪಬೇಕಿದೆ. ಆದರೆ, ಈ ವಾಹನಗಳು ಬೆಂಗಳೂರು ನಗರದ ಹೃದಯಭಾಗದ ಮೂಲಕವೇ ಹಾದು ಹೋಗುತ್ತಿರುವುದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ದುಸ್ತರವಾಗುತ್ತಿದೆ.

​ವಿಶೇಷವಾಗಿ ಕೆ.ಆರ್. ಪುರಂ, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಯಶವಂತಪುರ, ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗಳಲ್ಲಿ ಪೀಕ್ ಅವರ್‌ಗಳಲ್ಲಿ ಈ ಭಾರೀ ವಾಹನಗಳು ಸಂಚರಿಸುವುದರಿಂದ ಇಡೀ ಟ್ರಾಫಿಕ್ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದೆ. ಒಂದು ಭಾರೀ ಟ್ಯಾಂಕರ್ ರಸ್ತೆಯಲ್ಲಿ ಸುಮಾರು 3 ಕಾರುಗಳಷ್ಟು ಜಾಗವನ್ನು ಆಕ್ರಮಿಸಿಕೊಳ್ಳುವುದರಿಂದ ಸಂಚಾರ ದಟ್ಟಣೆ ಮತ್ತಷ್ಟು ತೀವ್ರಗೊಳ್ಳುತ್ತಿದೆ.

​ಎಸ್‌ಟಿಆರ್‌ಆರ್ (STRR) ಬಳಕೆಯಿಂದ ಸಿಗುವ ಲಾಭಗಳು:

​NIPDA ನೀಡಿರುವ ಅಂಕಿ-ಅಂಶಗಳ ಪ್ರಕಾರ, ಪ್ರತಿದಿನ ಸುಮಾರು 400 ರಿಂದ 600 ತೈಲ ಟ್ಯಾಂಕರ್‌ಗಳು ಬೆಂಗಳೂರು ನಗರದ ಒಳಗೆ ಪ್ರವೇಶಿಸುತ್ತವೆ ಅಥವಾ ನಗರದ ಮೂಲಕ ಹಾದುಹೋಗುತ್ತವೆ. ಇವುಗಳನ್ನು ನಗರದ ಹೊರವಲಯದ ರಸ್ತೆಗಳಿಗೆ ಡೈವರ್ಟ್ ಮಾಡುವುದರಿಂದ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು:

​ಶೇ. 10 ರಷ್ಟು ಟ್ರಾಫಿಕ್ ಕಡಿತ: ಪ್ರಮುಖ ಕಾರಿಡಾರ್‌ಗಳಲ್ಲಿ ಭಾರೀ ವಾಹನಗಳ ಸಂಚಾರ ಶೇ. 8 ರಿಂದ 12 ರಷ್ಟು ಕಡಿಮೆಯಾಗಲಿದ್ದು, ಪೀಕ್ ಅವರ್‌ಗಳಲ್ಲಿ ಒಟ್ಟಾರೆ ನಗರದ ಟ್ರಾಫಿಕ್ ದಟ್ಟಣೆ ಶೇ. 10 ರಷ್ಟು ಇಳಿಕೆಯಾಗಲಿದೆ.

​ಕೋಟಿ ಮೌಲ್ಯದ ಇಂಧನ ಉಳಿತಾಯ: ಟ್ರಾಫಿಕ್‌ನಲ್ಲಿ ಸಿಲುಕುವ ಟ್ಯಾಂಕರ್‌ಗಳ ಐಡ್ಲಿಂಗ್ ಸಮಯ 30 ರಿಂದ 60 ನಿಮಿಷ ಕಡಿಮೆಯಾಗಲಿದೆ. ಇದರಿಂದ ದಿನಕ್ಕೆ 2,500 ರಿಂದ 5,000 ಲೀಟರ್ ಡೀಸೆಲ್ ಉಳಿತಾಯವಾಗಲಿದ್ದು, ವಾರ್ಷಿಕವಾಗಿ ಸುಮಾರು 9 ರಿಂದ 18 ಲಕ್ಷ ಲೀಟರ್ ಇಂಧನ ರಾಷ್ಟ್ರಕ್ಕೆ ಉಳಿಯಲಿದೆ.

​ಮಾಲಿನ್ಯ ಮುಕ್ತ ಬೆಂಗಳೂರು: ಈ ಯೋಜನೆಯಿಂದಾಗಿ ವಾರ್ಷಿಕವಾಗಿ ಸುಮಾರು 2,500 ರಿಂದ 5,000 ಟನ್ ಇಂಗಾಲದ ಡೈಆಕ್ಸೈಡ್ (CO₂) ಹೊರಸೂಸುವಿಕೆ ಕಡಿಮೆಯಾಗಲಿದ್ದು, ನಗರದ ವಾಯು ಗುಣಮಟ್ಟ ಸುಧಾರಿಸಲಿದೆ.

​ಸಾರ್ವಜನಿಕ ಸುರಕ್ಷತೆ: ಜನನಿಬಿಡ ಪ್ರದೇಶಗಳಲ್ಲಿ ಅತ್ಯಂತ ಜ್ವಲನಕಾರಿ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊತ್ತ ವಾಹನಗಳು ಸಂಚರಿಸುವುದು ತಪ್ಪುವುದರಿಂದ ದೊಡ್ಡ ಮಟ್ಟದ ಅಪಘಾತದ ಅಪಾಯಗಳು ಇಲ್ಲವಾಗುತ್ತವೆ.

​ಜಂಟಿ ಕಾರ್ಯಪಡೆ ರಚನೆಗೆ ಎನ್ಐಪಿಡಿಎ ಆಗ್ರಹ:

​ಈ ಬೃಹತ್ ಬದಲಾವಣೆಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಬೆಂಗಳೂರು ಸಂಚಾರ ಪೊಲೀಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಪ್ರಮುಖ ತೈಲ ಕಂಪನಿಗಳಾದ IOCL, BPCL, HPCL ಮತ್ತು ಸಾರಿಗೆ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ “ಜಂಟಿ ಕಾರ್ಯಪಡೆ” (Joint Task Force) ಒಂದನ್ನು ರಚಿಸಬೇಕು ಎಂದು ಅಸೋಸಿಯೇಷನ್ ವಿನಂತಿಸಿದೆ.

​ನಗರದ ಒಳಗಿರುವ ಪೆಟ್ರೋಲ್ ಬಂಕ್‌ಗಳಿಗೆ ಬರುವ ಟ್ಯಾಂಕರ್‌ಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಹೊರ ಜಿಲ್ಲೆಯ ಟ್ಯಾಂಕರ್‌ಗಳಿಗೆ ಜಿಪಿಎಸ್ ಆಧಾರಿತ ರೂಟ್ ಮಾನಿಟರಿಂಗ್ ಅಳವಡಿಸಿ, ಕಡ್ಡಾಯವಾಗಿ STRR ಮತ್ತು ನೈಸ್ ರಸ್ತೆ ಬಳಸುವಂತೆ ನಿಯಮ ರೂಪಿಸಬೇಕೆಂದು ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪೊಲೀಸ್ ಕಮಿಷನರ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿದೆ.

WhatsApp Join our WhatsApp Channel
Previous Post

39 ಅಗತ್ಯ ಔಷಧಗಳ ಬೆಲೆ ಕಡಿತ: ಬಿಪಿ, ಶುಗರ್, ಹಾರ್ಟ್ ರೋಗಿಗಳಿಗೆ ಕೇಂದ್ರದಿಂದ ಭರ್ಜರಿ ರಿಲೀಫ್

Next Post

ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

Next Post

ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

Please login to join discussion

Like Us on Facebook

Follow Us on Twitter

Recent News

ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

July 13, 2026

ಬೆಂಗಳೂರು ಟ್ರಾಫಿಕ್‌ಗೆ ಮಾಸ್ಟರ್ ಪ್ಲಾನ್: ಸಿಟಿ ಒಳಗೆ ಬರುವ 600 ಪೆಟ್ರೋಲ್ ಟ್ಯಾಂಕರ್‌ಗಳ ದಿಕ್ಕು ಬದಲಿಸಲು ಎನ್ಐಪಿಡಿಎ ಮನವಿ

July 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

July 13, 2026

ಬೆಂಗಳೂರು ಟ್ರಾಫಿಕ್‌ಗೆ ಮಾಸ್ಟರ್ ಪ್ಲಾನ್: ಸಿಟಿ ಒಳಗೆ ಬರುವ 600 ಪೆಟ್ರೋಲ್ ಟ್ಯಾಂಕರ್‌ಗಳ ದಿಕ್ಕು ಬದಲಿಸಲು ಎನ್ಐಪಿಡಿಎ ಮನವಿ

July 13, 2026

39 ಅಗತ್ಯ ಔಷಧಗಳ ಬೆಲೆ ಕಡಿತ: ಬಿಪಿ, ಶುಗರ್, ಹಾರ್ಟ್ ರೋಗಿಗಳಿಗೆ ಕೇಂದ್ರದಿಂದ ಭರ್ಜರಿ ರಿಲೀಫ್

July 12, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group