Sunday, July 12, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

    National Anthem New Guidelines | ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ನಿಯಮ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಪ್ರಕಟ 

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    Power News | ಎಲ್ ನಿನೋ ಎದುರಿಸಲು ಇಂಧನ ಇಲಾಖೆ ಸಜ್ಜು: ಸಮರ್ಪಕ ವಿದ್ಯುತ್ ಪೂರೈಕೆಗೆ ಕಾರ್ಯತಂತ್ರ

    ಶಿವಮೊಗ್ಗ, ಧಾರವಾಡ ಕೃಷಿ ವಿವಿ ಉಪಕುಲಪತಿ ಆಯ್ಕೆ: ‘ಕುರ್ಚಿಗಾಗಿ ಗೌರವ ಕಳೆದುಕೊಳ್ಳಬೇಡಿ’ – ನಿವೃತ್ತ ಪ್ರಾಧ್ಯಾಪಕರ ಎಚ್ಚರಿಕೆ

    NIA Raids | ​ಆನ್‌ಲೈನ್ ಉಗ್ರ ಸಂಚು: ಕರ್ನಾಟಕ ಸೇರಿ 10 ರಾಜ್ಯಗಳ 20 ಕಡೆ ಎನ್‌ಐಎ ಭರ್ಜರಿ ದಾಳಿ

    ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ: ಪೂರ್ವಾನುಮತಿಯಿಲ್ಲದೆ ಮಾಹಿತಿ, ಸಂದರ್ಶನ ನೀಡುವಂತಿಲ್ಲ

    SIR News | ಎಸ್‌ಐಆರ್ ಕಾರ್ಯದೊತ್ತಡಕ್ಕೆ ಮೂವರು ನೌಕರರ ಬಲಿ: ಅಧಿಕಾರಿಗಳ ವಿರುದ್ಧ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಆಕ್ರೋಶ

    ಹೆಚ್ಎಂಟಿ ಪುನಶ್ಚೇತನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಅಡ್ಡಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

  • Bengaluru Focus

    ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

    BUWJ Pressday-2026 | ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಬದಲಾಗುವುದು ಅನಿವಾರ್ಯ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

    ಬೆಂಗಳೂರು ವಿವಿ ನೂತನ ಕುಲಪತಿಯಾಗಿ ಪ್ರೊ.ಸಿ.ಶಿವರಾಜು ಅಧಿಕಾರ ಸ್ವೀಕಾರ

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    ನೆಲಮಂಗಲ ಬಳಿ ಭೀಕರ ಅಪಘಾತ: ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಐಒಸಿಎಲ್ ಟ್ಯಾಂಕರ್

    GBA News | ಬೆಳ್ಳಂದೂರು ರಾಜಕಾಲುವೆ ಹಾಗೂ ಬಫರ್ ರಸ್ತೆ ಅಭಿವೃದ್ಧಿಗೆ ಸಮಗ್ರ ಯೋಜನೆ: ಆಯುಕ್ತ ಡಿ.ಎಸ್. ರಮೇಶ್ ಸೂಚನೆ

    ಶಿವಮೊಗ್ಗ, ಧಾರವಾಡ ಕೃಷಿ ವಿವಿ ಉಪಕುಲಪತಿ ಆಯ್ಕೆ: ‘ಕುರ್ಚಿಗಾಗಿ ಗೌರವ ಕಳೆದುಕೊಳ್ಳಬೇಡಿ’ – ನಿವೃತ್ತ ಪ್ರಾಧ್ಯಾಪಕರ ಎಚ್ಚರಿಕೆ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಲಾಂಛನ

    BUWJ PRESS DAY-2026 | ಜುಲೈ 11 ರಂದು  ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ: 10 ಹಿರಿಯ ಪತ್ರಕರ್ತರಿಗೆ ಸನ್ಮಾನ

    ಸಿಎಂ ಮಾಧ್ಯಮ ಕಾರ್ಯದರ್ಶಿಗಳಾಗಿ ತ್ಯಾಗರಾಜ್, ಜಯಪ್ರಕಾಶ್, ರಾಘವೇಂದ್ರ ಭಟ್ ನೇಮಕ: ಕೆಯುಡಬ್ಲ್ಯೂಜೆ ಅಭಿನಂದನೆ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

    National Anthem New Guidelines | ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ನಿಯಮ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಪ್ರಕಟ 

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    Power News | ಎಲ್ ನಿನೋ ಎದುರಿಸಲು ಇಂಧನ ಇಲಾಖೆ ಸಜ್ಜು: ಸಮರ್ಪಕ ವಿದ್ಯುತ್ ಪೂರೈಕೆಗೆ ಕಾರ್ಯತಂತ್ರ

    ಶಿವಮೊಗ್ಗ, ಧಾರವಾಡ ಕೃಷಿ ವಿವಿ ಉಪಕುಲಪತಿ ಆಯ್ಕೆ: ‘ಕುರ್ಚಿಗಾಗಿ ಗೌರವ ಕಳೆದುಕೊಳ್ಳಬೇಡಿ’ – ನಿವೃತ್ತ ಪ್ರಾಧ್ಯಾಪಕರ ಎಚ್ಚರಿಕೆ

    NIA Raids | ​ಆನ್‌ಲೈನ್ ಉಗ್ರ ಸಂಚು: ಕರ್ನಾಟಕ ಸೇರಿ 10 ರಾಜ್ಯಗಳ 20 ಕಡೆ ಎನ್‌ಐಎ ಭರ್ಜರಿ ದಾಳಿ

    ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ: ಪೂರ್ವಾನುಮತಿಯಿಲ್ಲದೆ ಮಾಹಿತಿ, ಸಂದರ್ಶನ ನೀಡುವಂತಿಲ್ಲ

    SIR News | ಎಸ್‌ಐಆರ್ ಕಾರ್ಯದೊತ್ತಡಕ್ಕೆ ಮೂವರು ನೌಕರರ ಬಲಿ: ಅಧಿಕಾರಿಗಳ ವಿರುದ್ಧ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಆಕ್ರೋಶ

    ಹೆಚ್ಎಂಟಿ ಪುನಶ್ಚೇತನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಅಡ್ಡಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

  • Bengaluru Focus

    ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

    BUWJ Pressday-2026 | ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಬದಲಾಗುವುದು ಅನಿವಾರ್ಯ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

    ಬೆಂಗಳೂರು ವಿವಿ ನೂತನ ಕುಲಪತಿಯಾಗಿ ಪ್ರೊ.ಸಿ.ಶಿವರಾಜು ಅಧಿಕಾರ ಸ್ವೀಕಾರ

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    ನೆಲಮಂಗಲ ಬಳಿ ಭೀಕರ ಅಪಘಾತ: ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಐಒಸಿಎಲ್ ಟ್ಯಾಂಕರ್

    GBA News | ಬೆಳ್ಳಂದೂರು ರಾಜಕಾಲುವೆ ಹಾಗೂ ಬಫರ್ ರಸ್ತೆ ಅಭಿವೃದ್ಧಿಗೆ ಸಮಗ್ರ ಯೋಜನೆ: ಆಯುಕ್ತ ಡಿ.ಎಸ್. ರಮೇಶ್ ಸೂಚನೆ

    ಶಿವಮೊಗ್ಗ, ಧಾರವಾಡ ಕೃಷಿ ವಿವಿ ಉಪಕುಲಪತಿ ಆಯ್ಕೆ: ‘ಕುರ್ಚಿಗಾಗಿ ಗೌರವ ಕಳೆದುಕೊಳ್ಳಬೇಡಿ’ – ನಿವೃತ್ತ ಪ್ರಾಧ್ಯಾಪಕರ ಎಚ್ಚರಿಕೆ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಲಾಂಛನ

    BUWJ PRESS DAY-2026 | ಜುಲೈ 11 ರಂದು  ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ: 10 ಹಿರಿಯ ಪತ್ರಕರ್ತರಿಗೆ ಸನ್ಮಾನ

    ಸಿಎಂ ಮಾಧ್ಯಮ ಕಾರ್ಯದರ್ಶಿಗಳಾಗಿ ತ್ಯಾಗರಾಜ್, ಜಯಪ್ರಕಾಶ್, ರಾಘವೇಂದ್ರ ಭಟ್ ನೇಮಕ: ಕೆಯುಡಬ್ಲ್ಯೂಜೆ ಅಭಿನಂದನೆ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home News Wire

S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ಗಾಯಕಿ ಎಸ್. ಜಾನಕಿ (88) ಶನಿವಾರ ನಿಧನರಾಗಿದ್ದು, ಕಾಲಿನ ಸೋಂಕು ತೀವ್ರಗೊಂಡು ಹೃದಯಾಘಾತ ಸಂಭವಿಸಿದೆ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.

by Bengaluru Wire Desk
July 11, 2026
in News Wire, Public interest
Reading Time: 1 min read
0

ಮೈಸೂರು, ಜು.11 www.bengaluruwire.com: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ‘ಗಾನಕೋಗಿಲೆ’ ಎಸ್. ಜಾನಕಿ (88) ಅವರು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಶನಿವಾರ (ಜುಲೈ 11) ಸಂಜೆ ಹಠಾತ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 

ಆರು ದಶಕಗಳ ಕಾಲ ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ದ ‘ಜಾನಕಮ್ಮ’ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

​ಪ್ರಧಾನಿ ನರೇಂದ್ರ ಮೋದಿ ಸಂತಾಪ:

​ಸಂಗೀತ ಲೋಕದ ದಿಗ್ಗಜರ ಸಾವಿಗೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಎಕ್ಸ್ (X) ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

​”ಎಸ್. ಜಾನಕಿ ಅಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಅಸಾಧಾರಣ ಧ್ವನಿ ಭಾರತೀಯ ಸಂಗೀತವನ್ನು ಶ್ರೀಮಂತಗೊಳಿಸಿದೆ. ಆರು ದಶಕಗಳ ಕಾಲ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಶಾಸ್ತ್ರೀಯ, ಭಕ್ತಿ ಮತ್ತು ಜಾನಪದ ಸಂಯೋಜನೆಗಳ ಮೇಲೆ ಅವರು ಸಮಾನ ಪಾಂಡಿತ್ಯವನ್ನು ಪ್ರದರ್ಶಿಸಿದ್ದರು. ಅವರ ನಿಧನ ರಾಷ್ಟ್ರದ ಕಲಾತ್ಮಕ ಪರಂಪರೆಗೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ.

ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರಕ್ಕೆ ಸಿಎಂ  ಡಿ ಕೆ ಶಿವಕುಮಾರ್ ಸೂಚನೆ:

ಮೈಸೂರಿನಲ್ಲಿ ನಿಧನರಾಗಿರುವ ಗಾನಕೋಗಿಲೆ ಎಸ್ ಜಾನಕಿ ಅವರ ಕುಟುಂಬ ಸದಸ್ಯರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ರಾತ್ರಿ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು.

ಮೇರುಗಾಯಕಿ ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸಿಎಂ ಅವರು ಸೂಚನೆ ನೀಡಿದ್ದಾರೆ. ಸರಕಾರದ ಪರವಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ನಿಯೋಜಿಸಲಾಗಿದೆ.

​ಮರಣಕ್ಕೆ ನಿಖರ ಕಾರಣವೇನು? ಆಸ್ಪತ್ರೆ ಪ್ರಕಟಣೆ:

​ಜಾನಕಿ ಅವರ ಸಾವಿನ ಕುರಿತು ಇದ್ದ ಗೊಂದಲಗಳಿಗೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಅಧಿಕೃತ ವೈದ್ಯಕೀಯ ಬುಲೆಟಿನ್ ಮೂಲಕ ತೆರೆ ಎಳೆದಿದೆ:

​ದಾಖಲಾತಿ: ಜುಲೈ 11ರಂದು ಮಧ್ಯಾಹ್ನ 12:49ಕ್ಕೆ ತೀವ್ರ ಕಾಲಿನ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.

​ಸೋಂಕು ಮತ್ತು ಗ್ಯಾಂಗ್ರೀನ್: ಕಾಲಿಗೆ ಆಗಿದ್ದ ಗಾಯ ಗ್ಯಾಂಗ್ರೀನ್ ಆಗಿ ಪರಿವರ್ತನೆಯಾಗಿ ಇಡೀ ದೇಹಕ್ಕೆ ಸೋಂಕು (Infection) ಭಾರಿ ಪ್ರಮಾಣದಲ್ಲಿ ಹರಡಿತ್ತು.

​ಐಸಿಯು ಚಿಕಿತ್ಸೆ: ಆಸ್ಪತ್ರೆಗೆ ತಂದಾಗ ಸ್ಥಿತಿ ಗಂಭೀರವಾಗಿದ್ದ ಕಾರಣ, ತಕ್ಷಣವೇ ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಿ ತಜ್ಞ ವೈದ್ಯರ ಬಹುಶಿಸ್ತೀಯ ತಂಡ (Multidisciplinary Team) ಚಿಕಿತ್ಸೆ ಆರಂಭಿಸಿತ್ತು.

​ಹೃದಯ ಸ್ತಂಭನ (Cardiac Arrest): ಚಿಕಿತ್ಸೆ ಪ್ರಗತಿಯಲ್ಲಿರುವಾಗಲೇ ಸಂಜೆ ವೇಳೆಗೆ ಹಠಾತ್ ಹೃದಯಾಘಾತ ಸಂಭವಿಸಿದ್ದು, ವೈದ್ಯರ ಸತತ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7:30ಕ್ಕೆ ಅವರು ಕೊನೆಯುಸಿರೆಳೆದರು.

ಪುತ್ರನ ಅಗಲಿಕೆಯ ದುಃಖದಲ್ಲಿದ್ದ ತಾಯಿ:

​88ರ ಇಳಿವಯಸ್ಸಿನಲ್ಲಿ ಜಾನಕಿ ಅವರು ತಮ್ಮ ಏಕೈಕ ಪುತ್ರ ಮುರಳಿ ಕೃಷ್ಣ (65) ಅವರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದರು. ಕಳೆದ ಜನವರಿಯಲ್ಲಿ ಮುರಳಿ ಕೃಷ್ಣ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. ಕಲಾ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದ ಮುರಳಿ ಕೃಷ್ಣ ಅವರೇ ಇಳಿವಯಸ್ಸಿನಲ್ಲಿ ತಾಯಿಗೆ ಏಕೈಕ ಆಸರೆಯಾಗಿದ್ದರು. ಕಣ್ಣೆದುರೇ ಮಗನ ಶವ ಕಂಡ ಜಾನಕಮ್ಮ ಅಕ್ಷರಶಃ ಜೀವಚ್ಛವವಾಗಿದ್ದರು. ಈ ಘಟನೆಯ ನಂತರ ಅವರು ತೀವ್ರ ಮಾನಸಿಕ ಖಿನ್ನತೆ ಮತ್ತು ದೈಹಿಕ ಬಳಲಿಕೆಗೆ ಒಳಗಾಗಿದ್ದರು ಎನ್ನಲಾಗಿದೆ.

​ಸಂಗೀತ ಸಾಮ್ರಾಜ್ಯದ ಧ್ರುವತಾರೆ:

​1950ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ಜಾನಕಿ ಅವರು ‘ಧ್ವನಿ ಬದಲಾವಣೆಯ’ (Voice Modulation) ಮಾಂತ್ರಿಕಿಯಾಗಿದ್ದರು. ಮಗುವಿನ ಧ್ವನಿಯಿಂದ ಹಿಡಿದು ಪ್ರೌಢ ಮಹಿಳೆಯ ಧ್ವನಿಯವರೆಗೂ ಏಕಾಏಕಿ ಬದಲಾಗುವ ವಿಶೇಷ ಕಲೆ ಅವರಿಗೆ ಒಲಿದಿತ್ತು. ಕೇವಲ ಗಾಯನದಲ್ಲೇ ನಟನೆಯ ಭಾವನೆಗಳನ್ನು ತುಂಬುತ್ತಿದ್ದ ಗಾಯಕಿ, 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಅಜರಾಮರ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ.

WhatsApp Join our WhatsApp Channel
Previous Post

ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

Please login to join discussion

Like Us on Facebook

Follow Us on Twitter

Recent News

S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

July 11, 2026

ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

July 11, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

July 11, 2026

ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

July 11, 2026

BUWJ Pressday-2026 | ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಬದಲಾಗುವುದು ಅನಿವಾರ್ಯ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

July 11, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group