Tuesday, August 4, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

  • Bengaluru Focus

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

  • Bengaluru Focus

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

World Sparrow Day 2022 | ಚೀವ್ ಚೀವ್… ಗುಬ್ಬಚ್ಚಿ ನೀ ಎಲ್ಲಿ ಹೋದೆ ನಮ್ಮನ್ನು ಬಿಟ್ಟು ?

ನಗರ ಪಟ್ಟಣಗಳ ಪ್ರತಿ ಮನೆ, ಅಂಗಡಿಗಳಲ್ಲಿ ಗೂಡು ಕಟ್ಟಿ ಮರಿಗಳೊಂದಿಗೆ ಆಚೆ ಈಚೆ ಹಾರುತ್ತಿದ್ದ ಗುಬ್ಬಿಗಳು ಮನುಷ್ಯನ ಒಡನಾಡಿಯಾಗಿತ್ತು

by Bengaluru Wire Desk
March 20, 2022
in Bengaluru Focus, Photo Gallery, Public interest
Reading Time: 2 mins read
0
ಚಿತ್ರಕೃಪೆ : ಆಲ್ ಎಬೌಟ್ ಬರ್ಡ್ಸ್

ಚಿತ್ರಕೃಪೆ : ಆಲ್ ಎಬೌಟ್ ಬರ್ಡ್ಸ್

ಬೆಂಗಳೂರು, (www.bengaluruwire.com) : ನಮ್ಮ ಬಾಲ್ಯಕ್ಕೂ – ಗುಬ್ಬಚ್ಚಿಗಳಿಗೂ ಒಂದು ರೀತಿ ಭಾವನಾತ್ಮಕ ನಂಟಿದೆ. ಗುಬ್ಬಚ್ಚಿಗಳನ್ನು ಕಂಡ ಕೂಡಲೇ ಒಂದು ಕ್ಷಣ ನೆನಪಿನ ಹಾಯಿದೋಣಿಯಲ್ಲಿ ಮುಳುಗಿ ವಾಪಸ್ ಬಂದಂತಾಗುತ್ತದೆ.

 ಮನೆಯ ಸುತ್ತಮುತ್ತ, ಉದ್ಯಾನವನ, ಅಂಗಡಿ- ಮುಂಗಟ್ಟು, ಚಿಕ್ಕಪುಟ್ಟ ಮರ-ಗಿಡಗಳ ಟೊಂಗೆಗಳಲ್ಲಿ ಚೀವ್ ಚೀವ್ ಎಂದು ಹಾರುವ ಗುಬ್ಬಚ್ಚಿಗಳು ಆಧುನೀಕರಣ, ನಗರೀಕರಣ ಭರಾಟೆಯಲ್ಲಿ ಕ್ರಮೇಣ ನಗರದಲ್ಲಿ ಮರೆಯಾಗುತ್ತಾ ಬಂದಿದೆ. ಇವುಗಳ ಸಂರಕ್ಷಣೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತ್ತದೆ.

ಗುಬ್ಬಿಗಳ ಚಟುವಟಿಕೆ ನೋಡುವುದೇ ಕಣ್ಣಿಗೊಂದು ಹಬ್ಬ :

2010ರಿಂದ ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತ್ತಿದೆ. ನಿರುಪದ್ರವಿ ಈ ಹಕ್ಕಿಗಳ ಸಂತತಿ ಕಳೆದ ಒಂದೂವರೆ ದಶಕಗಳಿಂದ ನಿರಂತರವಾಗಿ ಕಡಿಮೆಯಾಗುತ್ತಲೇ ಬಂದಿದೆ. ಈ ಹಿಂದೆ ಬೆಂಗಳೂರಿನಲ್ಲಿ ಹಂಚಿನ ಮನೆಗಳು, ಶೀಟ್ ಮನೆಗಳಿದ್ದಾಗ ಮನೆಯೊಳೆಗೆ ಗೂಡು ಕಟ್ಟಿ, ಮನೆಯ ಒಳಗೂ, ಹೊರಗೂ, ಓಡಾಡುವುದನ್ನು ಕಾಣುತ್ತಿದ್ದೆವು. ಪ್ರತಿಯೊಂದು ಮನೆಯಲ್ಲೂ ಗುಬ್ಬಚ್ಚಿಗಳ ಗೂಡು ಕಾಣುತ್ತಿದ್ದವು. ಅಷ್ಟರಮಟ್ಟಿಗೆ ಮನೆಯ ಸದಸ್ಯರಂತೆ ಗುಬ್ಬಿಗಳು ತಮ್ಮ ಚಟುವಟಿಕೆಗಳು ದಿನನಿತ್ಯ ನಡೆಸುತ್ತಿದ್ದವು. ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಧವಸ- ಧಾನ್ಯಗಳನ್ನು ಶುಚಿಗೊಳಿಸಿ ಮನೆ ಮುಂದೆ ಅಥವಾ ಹಿತ್ತಲಲ್ಲಿ ಹಾಕುವ ಈ ವಸ್ತುಗಳೇ ಅವುಗಳಿಗೆ ಆಹಾರವಾಗುತ್ತಿದ್ದವು. ಕಿರಾಣಿ ಅಂಗಡಿ, ಸಣ್ಣ ಸಣ್ಣ ಹಿಟ್ಟು ಮಾಡುವ ಶಾಪ್ ಗಳಲ್ಲಿ ಗುಬ್ಬಚ್ಚಿಗಳ ಕಲರವಕ್ಕೆ ಕೊರತೆ ಇರಲಿಲ್ಲ. ಹಳೆಯ ಶಾಲೆಗಳ ಮಾಡಾದರೇನು? ಶಿಥಿಲವಾದ ಮನೆಯಾದರೇನು? ಅಲ್ಲೊಂದು ಗುಬ್ಬಚ್ಚಿ ಗೂಡು ಇಲ್ಲದಿದ್ದರೆ ನಗರಕ್ಕೆ ಕಳೆಯೇ ಇರುತ್ತಿರಲಿಲ್ಲ. ಗುಬ್ಬಚ್ಚಿಯು ಧಾನ್ಯಗಳು, ಹುಳ-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ತಿನ್ನುತ್ತವೆ. ಬೇಯಿಸಿದ ಆಹಾರ ಸಹ ಅದಕ್ಕೆ ತುಂಬ ಇಷ್ಟ.

ಚಿತ್ರ ಕೃಪೆ : ವಿಶ್ವನಾಥ ಸುವರ್ಣ

ಆ ಪುಟ್ಟ ಹಕ್ಕಿಗಳು ದಶಕಗಳ ಹಿಂದೆ ಬೆಂಗಳೂರಿನಂತಹ ಪಿಂಚಣಿದಾರರ ನಗರಿಯಲ್ಲಿ ನಿಶ್ಯಬ್ದದ ನಡುವೆ ಹಕ್ಕಿಗಳ ಕೂಗು ಹೃದಯಕ್ಕೆ ಅದೇನೋ ಮುದ ಕೊಡುತ್ತಿತ್ತು. ನಗರದಲ್ಲಿನ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ವೇಗವಾದ ನಗರೀಕರಣ, ಉದ್ಯಾನ ನಗರಿಯಲ್ಲಿ ಹಸಿರು ಪರಿಸರ ಕಡಿಮೆಯಾಗುತ್ತಾ ಬಂದಿದ್ದೂ ಹೀಗೆ ಹಲವು ಕಾರಣಕ್ಕೆ ಗುಬ್ಬಚ್ಚಿಗಳ ಸಂತತಿ ಇಳಿಕೆ ಹಾದಿ ಹಿಡಿದವು. ಸೀಸರಹಿತ ಪೆಟ್ರೋಲ್ ದಹಿಸಿದಾಗ ಅದರಿಂದ ಉಂಟಾಗುವ ನೈಟ್ರೇಟ್ ಅಂಶವು ಗುಬ್ಬಿಗಳು ತಮ್ಮ ಮರಿಗಳಿಗೆ ಅವು ಹುಟ್ಟಿದಾಗ ಕೆಲವು ದಿನಗಳು ತಿನ್ನಿಸುವ ಕೀಟಗಳನ್ನು ಕೊಲ್ಲುತ್ತಿವೆ. ಹೀಗಾಗಿ ಗುಬ್ಬಚ್ಚಿಗಳ ಸಂತತಿ ಅಳಿಯುತ್ತಿದೆ ಎಂಬ ವಾದವೂ ಇದೆ. ಈಗಲೂ ಬಹಳ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಗುಬ್ಬಚ್ಚಿಗಳು ನಮಗೆ ಕಾಣಸಿಕ್ಕರೂ ಅದೇ ಪುಣ್ಯ ಅನ್ನುವಂತಾಗಿದೆ.

ವಿಶ್ವ ಗುಬ್ಬಿ ದಿನಾಚರಣೆ ಜಾಗೃತಿಗೆಂದೇ ಇದೆ ವೆಬ್ ಸೈಟ್ :

ಚಿತ್ರ ಕೃಪೆ : ಆಲ್ ಎಬೌಟ್ ಬರ್ಡ್ಸ್

ದಿ ನೇಚರ್ ಫಾರೆವರ್ ಸೊಸೈಟಿ ಆಫ್ ಇಂಡಿಯಾ (The Nature Forever Society of India) ಹಾಗೂ ಫ್ರಾನ್ಸಿನ ಇಕೊ ಸಿಸ್ ಆಕ್ಷನ್ ಫೌಂಡೇಷನ್ (Eco-Sys Action Foundation) ಎಂಬ ಸಂಸ್ಥೆಗಳು ವಿಶ್ವ ಗುಬ್ಬಚ್ಚಿಗಳ ದಿನ ಆಚರಣೆ ಅಸ್ಥಿತ್ವಕ್ಕೆ ಬರಲು ಕಾರಣವಾದವು. ಮಾ.20ರ ಒಂದು ದಿನವನ್ನು ಗುಬ್ಬಚ್ಚಿಗಳ ಸಂರಕ್ಷಣೆ ಬಗ್ಗೆ ವಿಶ್ವದಲ್ಲಿನ ಜನರಿಗೆ ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ದಿ ನೇಚರ್ ಫಾರೆವರ್ ಸೊಸೈಟಿ ವಿಶ್ವ ಗುಬ್ಬಚ್ಚಿಗಳ ದಿನದ ಕುರಿತಂತೆ ಜಾಗೃತಿ ಮೂಡಿಸಲು ಇದಕ್ಕೆಂದೇ ವೆಬ್ ಸೈಟ್ ಸ್ಥಾಪಿಸಿದ್ದಾರೆ. ಈ ವೆಬ್ ತಾಣದಲ್ಲಿ ವಿಶ್ವಾದ್ಯಂತ ಇರುವ ಬಗೆ ಬಗೆಯ ತರಾವರಿ ಗುಬ್ಬಚ್ಚಿಗಳ ಚಿತ್ರ ಹಾಗೂ ಅವುಗಳ ಮಾಹಿತಿಯನ್ನು ಅದರಲ್ಲಿ ಹಂಚಿಕೊಂಡಿದ್ದಾರೆ.

ಪ್ರಾಣಿ- ಪಕ್ಷಿಗಳ ಮೇಲಿರಲಿ ಪ್ರೀತಿ –ಕಾಳಜಿ :

ಒಟ್ಟಿನಲ್ಲಿ ಮಾನವನ ಒಡನಾಡಿಗಳಲ್ಲಿ ಗುಬ್ಬಚ್ಚಿ ಸಂತತಿಯೂ ಒಂದು. ಇವುಗಳ ರಕ್ಷಣೆ ಹಾಗೂ ನಗರಗಳಲ್ಲಿ ಜೀವವೈವಿಧ್ಯತೆ ಕಾಯ್ದುಕೊಳ್ಳುವುದು ಹಿಂದೆಂದಿಗಿಂತ ಮುಖ್ಯವಾಗಿದೆ. ವಿಶ್ವ ಗುಬ್ಬಚ್ಚಿಗಳ ದಿನದಂದು ನಮ್ಮ ಸುತ್ತಮುತ್ತಲಿರುವ ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿ,ಕರುಣೆ ಹಾಗೂ ಕಾಳಜಿ ತೋರುವ. ಹೇಗಿದ್ದರೂ ಬೇಸಿಗೆ ಕಾಲ ಹತ್ತಿರವಾಗುತ್ತಿದೆ. ಬಿಸಿಲಲ್ಲಿ ನಮ್ಮ ಮನೆ ಸುತ್ತಮುತ್ತ ಬರುವ ಪ್ರಾಣಿ- ಪಕ್ಷಿಗಳಿಗೆ ನೀರು, ಆಹಾರ ಇಡುವ ತಮ್ಮ ಹಳೆಯ ಪದ್ಧತಿಯನ್ನು ಮುಂದುವರೆಸೋಣ.

WhatsApp Join our WhatsApp Channel
Previous Post

RBI Assistant Admit Card 2022 | ಆರ್ ಬಿಐ ಸಹಾಯಕ 2022 ಹುದ್ದೆಯ ಪೂರ್ವಭಾವಿ ಪರೀಕ್ಷೆ ಪ್ರವೇಶ ಪತ್ರ ಹೀಗೆ ಡೌನ್ ಲೋಡ್ ಮಾಡಿಕೊಳ್ಳಿ : ಆರ್ ಬಿಐ ಪರೀಕ್ಷೆ ವಿವರ ಹೀಗಿದೆ ನೋಡಿ

Next Post

ಶೀಘ್ರದಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Next Post

ಶೀಘ್ರದಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉಕ್ರೇನ್ ನಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ಬೆಂಗಳೂರಿಗೆ : ಯುದ್ಧಪೀಡಿತ ರಾಷ್ಟ್ರದಿಂದ ಭಾರತಕ್ಕೆ ಶವ ತಂದಿದ್ದು ಹೇಗೆ ಗೊತ್ತಾ?

Please login to join discussion

Like Us on Facebook

Follow Us on Twitter

Recent News

GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

August 4, 2026

PIB FACT CHECK | ​ಎಚ್ಚರ! ನಿರ್ಮಲಾ ಸೀತಾರಾಮನ್ ಅವರ AI ನಕಲಿ ವಿಡಿಯೋ ಬಳಸಿ ಹೂಡಿಕೆ ವಂಚನೆ

August 4, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

August 4, 2026

PIB FACT CHECK | ​ಎಚ್ಚರ! ನಿರ್ಮಲಾ ಸೀತಾರಾಮನ್ ಅವರ AI ನಕಲಿ ವಿಡಿಯೋ ಬಳಸಿ ಹೂಡಿಕೆ ವಂಚನೆ

August 4, 2026

ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

August 3, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group