Saturday, September 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

  • Bengaluru Focus

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

  • Bengaluru Focus

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

BW INVESTIGATION | MAYOR FUND MISUSE –PART 2 | ಮೇಯರ್ ಫಂಡ್ 5% ರಿಂದ 10% “ಕಿಕ್ ಬ್ಯಾಕ್ ” ಪಡೆದು ಜಾಬ್ ಕೋಡ್ ನೀಡಲಾಗಿತ್ತಾ ?!!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗೌತಮ್ ಕುಮಾರ್ ಅವಧಿಯಲ್ಲಿ ಬರೋಬ್ಬರಿ 273.25 ಕೋಟಿ ಮೊತ್ತ ಮೇಯರ್ ಫಂಡ್ ಹಂಚಿಕೆಯಲ್ಲಿ ಪರ್ಸಂಟೇಜ್ ಗೆ ಅನುದಾನ ಹಂಚಿಕೆ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆದರೆ ಸತ್ಯ ಬಯಲಾಗುವ ಸಾಧ್ಯತೆ. ಮುಂದಿನ ತಿಂಗಳ ಸೆಪ್ಟೆಂಬರ್ ವೇಳೆಗೆ ಟೆಂಡರ್ ಕರೆಯದಿದ್ದರೆ ವಿವೇಚನಾ ಕೋಟಾದಡಿ ಹಂಚಿದ ಕಾಮಗಾರಿಗಳು ಫ್ರೀಜ್ ಆಗಲಿದೆ |

by Bengaluru Wire Desk
January 14, 2022
in Bengaluru Focus, BW Special
Reading Time: 3 mins read
0
ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬೆಂಗಳೂರು ( www.bengaluruwire.com ) :  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 53ನೆಯ ಮೇಯರ್ ಗೌತಮ್ ಕುಮಾರ್, ಅವಧಿಯಲ್ಲಿ ಬರೋಬ್ಬರಿ 273.25 ಕೋಟಿ ರೂ. ಮೊತ್ತದ ಮೇಯರ್ ಫಂಡ್ ಹಣವನ್ನು 198 ವಾರ್ಡ್ ಗಳ ಪೈಕಿ 75 ವಾರ್ಡ್ ಗಳಿಗಷ್ಟೆ ಹಂಚಿಕೆ ಮಾಡಿದ್ದಾರೆ. ಆ ಕಾಮಗಾರಿಗಳು ಶೇ.5 ರಿಂದ 10ರಷ್ಟು ಪರ್ಸೆಂಟೇಜ್ ಗೆ ಮಾರಾಟವಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು,  ವ್ಯಾಪಕ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಗತ್ಯ ಕೆಲಸಗಳಿಗೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮೇಯರ್ ಫಂಡ್, ಮಹಾಪೌರರ ವಿವೇಚನಾ ಕೋಟಾದಡಿ ಬಳಸಲಾಗುತ್ತದೆ. ಆದರೆ ಜಾಬ್ ಕೋಡ್ ಹಂಚಿಕೆಯಲ್ಲಿ ಪರ್ಸಂಟೇಜ್ ಪಡೆದು ಮೇಯರ್ ಗೌತಮ್ ಕುಮಾರ್ ಅವಧಿಯಲ್ಲಿ 273.25 ಕೋಟಿ ರೂ.ಗಳ 352 ಕಾಮಗಾರಿಗಳ ಜಾಬ್ ಕೋಡ್ ಗಳನ್ನು ಹಂಚಿಕೆ ಮಾಡಿರುವುದು ಮಾಹಿತಿ ಹಕ್ಕು ದಾಖಲೆಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಕಂಡು ಬಂದಿದೆ.

ಬೆಂಗಳೂರು ವೈರ್ ಜೂ.7 ರಂದು BW INVESTIGATION | MAYOR FUND MISUSE? | ಮೇಯರ್ ಫಂಡ್ ಹಂಚಿಕೆಯಲ್ಲಿ “ಪರ್ಸಂಟೇಜ್” ಪಾರ್ಕ್ ಪ್ರೀತಿ ಎಂದು ಪ್ರಕಟಿಸಿದ ಸುದ್ದಿಯಲ್ಲಿ ನಗರದಲ್ಲಿ 198 ವಾರ್ಡ್ ಗಳಿದ್ದರೂ ಕೇವಲ 37 ವಾರ್ಡ್ ಪಾರ್ಕ್ ಗಳ ಅಭಿವೃದ್ಧಿಗೆ 137 ಕಾಮಗಾರಿಗಳನ್ನು ಹಂಚಿಕೆ ಮಾಡಿರುವುದರಲ್ಲಿ ಅಕ್ರಮ ನಡೆದಿರುವ ಸಾಧ್ಯತೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಇದೀಗ ಮೇಯರ್ ಗೌತಮ್ ಕುಮಾರ್ ಅವಧಿಯಲ್ಲಿ ಮಹಾಪೌರರ ವಿವೇಚನೆ ಅಡಿಯಲ್ಲಿ 273.25 ಕೋಟಿ ರೂ.ಗಳ 352 ಕಾಮಗಾರಿಗಳ ಜಾಬ್ ಕೋಡ್ ಗಳನ್ನು ಹಂಚಿಕೆ ಮಾಡಿರುವ ಪರಿಯನ್ನು ನಿಮ್ಮ ಮುಂದಿಡಲಿದೆ.

ಗೌತಮ್ ಕುಮಾರ್ ಪಾಲಿಕೆಯ 15ನೇ ಅವಧಿಯ ಕೊನೆಯ ಮೇಯರ್ ಆಗಿದ್ದು, 1 ಅಕ್ಟೋಬರ್ 2019 ರಿಂದ ಸೆಪ್ಟೆಂಬರ್ 2020 ನೆಯ ಒಂದು ವರ್ಷದ ಅವಧಿವರೆಗೆ ಆ ಹುದ್ದೆಯಲ್ಲಿದ್ದರು. ಈ ಸಂದರ್ಭದಲ್ಲಿ ರಸ್ತೆ ಮೂಲಭೂತ ಸೌಕರ್ಯ, ಕಾಂಕ್ರಿಟ್ ರಸ್ತೆ, ಚರಂಡಿಗಳ ಅಭಿವೃದ್ಧಿ, ಅವುಗಳ ಮೇಲೆ ಸ್ಲಾಬ್ ಅಳವಡಿಕೆ, ಕುಡಿಯುವ ನೀರು ಪೂರೈಕೆ, ಸಮುದಾಯ ಕೇಂದ್ರಗಳ ಒಳಾಂಗಣ ವಿನ್ಯಾಸ, ಫುಟ್ ಪಾತ್ ಅಭಿವೃದ್ಧಿ, ಬೋರ್ ವೆಲ್ ಕೊರೆಸುವಿಕೆ ಹಾಗೂ ಪ್ಯಾಕೇಜ್ ಕೆಲಸ ಕೊಡಬೇಕೆನ್ನುವ ಕಡೆ ರಸ್ತೆ, ಚರಂಡಿ, ಕಾಂಕ್ರಿಟ್, ಡಾಂಬರ್ ಹಾಕುವ ಕಾಮಗಾರಿ ಸೇರಿದಂತೆ ಸಮಗ್ರ ಅಭಿವೃದ್ಧಿ ಕೆಲಸದ ಹೆಸರಿನಲ್ಲಿ ಜಾಬ್ ಕೋಡ್ ಹಂಚಿಕೆ ಮಾಡಿದ್ದಾರೆ.

ಗೌತಮ್ ಕುಮಾರ್ ಜೈನ್ ಮೇಯರ್ ಆಗಿದ್ದಾಗ ಮಹಾಪೌರರ ಅನುದಾನದಡಿ 273.25 ಕೋಟಿ ರೂ. ಮೌಲ್ಯದ ಜಾಬ್ ಕೋಡ್ ಹಂಚಿಕೆ ಮಾಡಿದ ಆರ್ ಟಿಐ ದಾಖಲೆ

ಜಾಬ್ ಕೋಡ್ ಹಂಚಿಕೆ ಮಾಡುವಾಗ ಬಹಳ ಜಾಣತನದಿಂದ ಎಲ್ಲ ಕ್ಷೇತ್ರಗಳನ್ನು ಕವರ್ ಅಪ್ ಏನೋ ಮಾಡಿದ್ದಾರೆ. ಆದರೆ ಇಂತಿಷ್ಟು ಪರ್ಸಂಟೇಜ್ ಇಲ್ಲದೆ ಅಂತಹ ಕಾಮಗಾರಿಗಳನ್ನು ಸೇರಿಸೋಕೆ ಗೌತಮ್ ಕುಮಾರ್ ಮೇಯರ್ ಕಚೇರಿ ಸುತಾರಾಮ್ ಒಪ್ಪಿಲ್ಲ ಎಂದು ಹೇಳುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುತ್ತಿಗೆದಾರರೊಬ್ಬರು.

ಪರ್ಸಂಟೇಜ್ ಹಣ ಕೊಟ್ಟು ಇಕ್ಕಟಿಗೆ ಸಿಲುಕಿರುವ ಕಾಂಟ್ರಾಕ್ಟರ್ಸ್ :

ಬಿಬಿಎಂಪಿ ಮೇಯರ್ ಗೌತಮ್ ಅವಧಿಯ ಬಹಳಷ್ಟು ಕಾಮಗಾರಿಗಳನ್ನು ಕ್ರೆಡೆಲ್ ಮೂಲಕ ಟೆಂಡರ್ ಕರೆಯದೆ ಪರೋಕ್ಷವಾಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಕಾಮಗಾರಿ ಜಾಬ್ ಕೋಡ್ ಪಡೆಯಲು ಪ್ರಭಾವಿ ಕಾಂಟ್ರಾಕ್ಟರ್ ಗಳು ಆಯಾ ಕಾಮಗಾರಿ ಸ್ವರೂಪದ ಆಧಾರದ ಮೇಲೆ ಶೇ.5 ರಿಂದ 10ರಷ್ಟು

ಲಂಚದ ಹಣ ಮೇಯರ್ ಕಚೇರಿಗೆ ನೀಡಿ ಈಗ ಕಾಮಗಾರಿ ಆರಂಭಕ್ಕೆ ಪಾಲಿಕೆಯಲ್ಲಿ ಟೆಂಡರ್ ಕರೆಯದ ಕಾರಣ ಹಣಕೊಟ್ಟು ಹಲವು ಕಾಂಟ್ರಾಕ್ಟರ್ ಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಪಾಲಿಕೆಯ ಹಣಕಾಸು ವಿಭಾಗದಲ್ಲಿ ಬಿಬಿಎಂಪಿ ಲೆಕ್ಕಶೀರ್ಷಿಕೆಯಡಿ ಕಾಮಗಾರಿ ಮುಗಿಸಿ 26 ತಿಂಗಳು ಕಳೆದು ಹಿರಿಯ ಕ್ರಮಾಂಕದಲ್ಲಿರುವ ಗುತ್ತಿಗೆದಾರರಿಗೆ ಹಣ ಪಾವತಿಸಲಾಗುತ್ತಿದೆ. ಸದ್ಯ ಪಾಲಿಕೆ ಕಾಂಟ್ರಾಕ್ಟರ್ ಗಳಿಗೆ 2,900 ಕೋಟಿ ರೂ.ಗಳಷ್ಟು ಬಿಲ್ ಪಾವತಿ ಮಾಡಬೇಕಾಗಿದೆ ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.

 “ಪ್ರಭಾವಿ ಗುತ್ತಿಗೆದಾರರು ಆಯಾ ವಾರ್ಡ್ ಗಳಲ್ಲಿ ಕಾಮಗಾರಿ ಅವಶ್ಯಕತೆ ಇಲ್ಲದಿದ್ದರೂ ಮೇಯರ್ ಫಂಡ್ ಅಡಿ ಕಾಮಗಾರಿ ಪಡೆದುಕೊಳ್ಳಲು ಒಟ್ಟಾರೆ ಕಾಮಗಾರಿ ಮೊತ್ತದಲ್ಲಿ ಇಂತಿಷ್ಟು ಪರ್ಸಂಟೇಜ್ ನೀಡಿ ಸ್ಥಳೀಯ ಶಾಸಕರು ಹಾಗೂ ಆಗಿನ ಕಾರ್ಪೊರೇಟರ್ ಗಳ ಗಮನಕ್ಕೆ ತಂದು ಮೇಯರ್ ಫಂಡ್ ತೆಗೆದುಕೊಂಡಿದ್ದರು. ಆದರೆ ಜಾಬ್ ಕೋಡ್ ಹಂಚಿಕೆ ವಿಚಾರದಲ್ಲಿ ಗೌತಮ್ ಜೈನ್ ಕೇವಲ ಬಿಜೆಪಿ ವಾರ್ಡ್ ಗಳಿಗೆ ಹೆಚ್ಚಿನ ಮೇಯರ್ ಫಂಡ್ ನೀಡಿ, ಅಸಮಾನತೆ ತೋರಿದ್ದರು. ಕಾಂಗ್ರೆಸ್ ಕಾರ್ಪೊರೇಟರ್ ಇರುವ ವಾರ್ಡ್ ಗಳಿಗೆ ಕಣ್ಣೊರೆಸಲು ಅನುದಾನ ಹಂಚಿಕೆ ಮಾಡಿದ್ದರು. ಮಾಜಿ ಮೇಯರ್ ಆದ ತಮಗೆ ಸ್ವತಃ ತಮ್ಮ ವಾರ್ಡ್ ಕಾಮಗಾರಿಯೊಂದರ ಪ್ರಸ್ತಾವನೆಗೆ ಜಾಬ್ ಕೋಡ್ ನೀಡಲು ಮನವಿ ಮಾಡಿದ್ದರೂ ಸ್ಪಂದಿಸಿರಲಿಲ್ಲ. ”

–ಮಂಜುನಾಥರೆಡ್ಡಿ, ಬಿಬಿಎಂಪಿ ಮಾಜಿ ಮೇಯರ್

ಅತಿಹೆಚ್ಚು ಮೇಯರ್ ಫಂಡ್ ಪಡೆದ ಟಾಪ್ 10 ವಿಧಾನಸಭಾ ಕ್ಷೇತ್ರಗಳು :

ವಿಧಾನಸಭಾ ಕ್ಷೇತ್ರ/ಬಿಬಿಎಂಪಿ ಕೇಂದ್ರ ಕಚೇರಿ ಜಾಬ್ ಕೋಡ್ ಗಳ ಸಂಖ್ಯೆಕಾಮಗಾರಿ ಮೌಲ್ಯ ಕೋಟಿ ರೂ.ಗಳಲ್ಲಿಕಾಮಗಾರಿ ಹಂಚಿಕೆಯಾದ ಒಟ್ಟು ವಾರ್ಡ್ ಗಳು
ಯಶವಂತಪುರ3568.964
ಕೆ.ಆರ್.ಪುರ53415
ಬೆಂಗಳೂರು ಕೇಂದ್ರ (ಪಾಲಿಕೆ ಕೇಂದ್ರ ಕಚೇರಿ)2119.25 
ಚಾಮರಾಜಪೇಟೆ2015.983
ದಾಸರಹಳ್ಳಿ2915.744
ಬೊಮ್ಮನಹಳ್ಳಿ1314.173
ಯಲಹಂಕ612.754
ಸಿ.ವಿ.ರಾಮನ್ ನಗರ128.952
ಪದ್ಮನಾಭನಗರ158.394
ಗಾಂಧಿನಗರ68.203
ಒಟ್ಟಾರೆ210213.2932
ಬಿಬಿಎಂಪಿ 53ನೇ ಮೇಯರ್ ಆಗಿದ್ದ ಎಂ.ಗೌತಮ್ ಕುಮಾರ್ ಸಾಂದರ್ಭಿಕ ಚಿತ್ರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 27 ವಿಧಾನಸಭಾ ಕ್ಷೇತ್ರಗಳಿದ್ದರೂ ಆಗಿನ ಮೇಯರ್ ಗೌತಮ್ ತಮ್ಮ ವಿವೇಚನಾ ಕೋಟಾದಲ್ಲಿ ಸರ್ವಜ್ಞನಗರ, ರಾಜಾಜಿನಗರ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿನ ಒಂದೇ ಒಂದು ವಾರ್ಡಿಗೂ ಮೇಯರ್ ಫಂಡ್ ಕಾಮಗಾರಿ ಹಂಚಿಕೆ ಮಾಡಿಲ್ಲ. ಇಡೀ ಬೆಂಗಳೂರಿಗೆ ಹಂಚಿಕೆ ಮಾಡಲಾದ 273.25 ಕೋಟಿ ರೂ. ಮೇಯರ್ ಫಂಡ್ ನಲ್ಲಿ ಶೇ.77.88 ರಷ್ಟು ಮೊತ್ತದ 210 ಕಾಮಗಾರಿಗಳನ್ನು ಕೇವಲ 9 ವಿಧಾನಸಭಾ ಕ್ಷೇತ್ರದಲ್ಲಿ 63 ವಾರ್ಡ್ ಗಳಿದ್ದರೂ ಅವುಗಳ ಪೈಕಿ ಕೇವಲ 32 ವಾರ್ಡ್ ಗಳಿಗೆ ಮೇಯರ್ ಗೌತಮ್ ಕುಮಾರ್ ಜೈನ್ ಹಂಚಿಕೆ ಮಾಡಿದ್ದಾರೆ. ಒಟ್ಟಾರೆ 27 ವಿಧಾನಸಭಾ ಕ್ಷೇತ್ರದಲ್ಲಿ 198 ವಾರ್ಡ್ ಗಳಿದ್ದರೂ ಕೇವಲ 75 ವಾರ್ಡ್ ಗಳಿಗೆ ತಮ್ಮ ಅನುದಾನ ಹಂಚಿಕೆ ಮಾಡಿರೋದು ಕಿಕ್ ಬ್ಯಾಕ್ ಪಡೆದಿರುವ ಸಾಧ್ಯತೆ ಬಗ್ಗೆ ಇಂಬು ನೀಡುವಂತಿದೆ.

“ರಾಜ್ಯ ಸರ್ಕಾರ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ ಐಡಿಎಲ್) ಮೂಲಕ ಟೆಂಡರ್ ಕರೆಯದೇ ನೇರವಾಗಿ ಕಾಮಗಾರಿ ನೀಡಲು ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಸೂಚಿಸಿದೆ. ಆದರೆ ಬಿಬಿಎಂಪಿ ಮುಖ್ಯ ಆಯುಕ್ತರು 2019-20ನೇ ಸಾಲಿನ ಮೇಯರ್, ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಆಡಳಿತ ಮತ್ತು ವಿರೋಧ ಪಕ್ಷದ ನಾಯಕ ವಿವೇಚನಾ ಕೋಟಾದಡಿಯಲ್ಲಿ ಜಾಬ್ ಕೋಡ್ ಹಂಚಿಕೆ ಮಾಡಲಾಗಿದೆ. ಆದರೆ ಆ ಅನುದಾನವನ್ನು ಬಳಸಿ ಕಾಮಗಾರಿಗಳನ್ನು ಆರಂಭಿಸಲು ಕಚೇರಿ ಆದೇಶ ಮಾಡಿಲ್ಲ. ಇದರಿಂದ ವಾರ್ಡ್ ಕಾಮಗಾರಿಗಳು ಕುಂಠಿತಗೊಂಡಿದೆ.”

–ಕೆ.ಟಿ.ಮಂಜುನಾಥ್, ಅಧ್ಯಕ್ಷ, ಬಿಬಿಎಂಪಿ ಗುತ್ತಿಗೆದಾರರ ಸಂಘ

ಕಳಪೆ ಬೆಂಗಳೂರು ನಿರ್ಮಾಣಕ್ಕೆ ನಾಂದಿ ಹಾಡಿರುವ ರಾಜ್ಯ ಸರ್ಕಾರ :

ಕೆಆರ್ ಐಡಿಎಲ್ ಮೂಲಕ ಕಾಮಗಾರಿಗಳನ್ನು ನಿರ್ವಹಿಸುವುದು ಅನ್ನೋದು ಕಾರ್ಪೊರೇಟರ್ ಹಾಗೂ ಶಾಸಕರ ಹಿಂಬಾಲಕರಿಗೆ ಪ್ರಾಜೆಕ್ಟ್ ಹಂಚಿಕೆ ಮಾಡೋದು ಅಥವಾ ಪರೋಕ್ಷವಾಗಿ ಗುತ್ತಿಗೆದಾರರ ಮುಖೇನ ಕಾಮಗಾರಿಯನ್ನು ಜನಪ್ರತಿನಿಧಿಗಳು ಕೈಗೊಳ್ಳುವುದು ಅಂತ ಬಹುತೇಕರಿಗೆ ತಿಳಿದಿರುವ ವಿಚಾರ. ಕ್ರೆಡಲ್ ನಿಂದ ಕೈಗೊಂಡ ನೂರಾರು ಕೋಟಿ ರೂಪಾಯಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಅಂತ ಈ ಹಿಂದೆ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಹೀಗಿದ್ದರೂ ಪುನಃ ರಾಜ್ಯ ಸರ್ಕಾರ, ಪರ್ಸಂಟೇಜ್ ಕೊಟ್ಟು ಕಮಿಟ್ ಆದ ಕಾಂಟ್ರಾಕ್ಟರ್ ಆ ಮೂಲಕ ಜನಪ್ರತಿನಿಧಿಗಳ ಜೋಬು ತುಂಬಿಸಲು ಟೆಂಡರ್ ನಿಂದ ವಿನಾಯಿತಿ ನೀಡಿ ಕ್ರೆಡಲ್ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸಲು ಅಧಿಕೃತ ಒಪ್ಪಿಗೆ ನೀಡಿದೆ. ಇದು ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳು ಮತ್ತಷ್ಟು ಕಳಪೆಯಾಗಿ “ಕಳಪೆ ಬೆಂಗಳೂರು” ಎಂದು ಅಪಖ್ಯಾತಿ ಪಡೆಯಲು ಮತ್ತೆ ದಾರಿ ಮಾಡಿಕೊಡಲಿದೆ ಎಂಬ ಅಭಿಪ್ರಾಯಗಳು ನಾಗರೀಕರಿಂದ ವ್ಯಕ್ತವಾಗುತ್ತಿದೆ.

ಎರಡು ವರ್ಷದೊಳಗೆ ಟೆಂಡರ್ ಕರೆಯದಿದ್ದರೆ ಆ ಕಾಮಗಾರಿ ಫ್ರೀಜ್ :

ಬಿಬಿಎಂಪಿ ವ್ಯಾಪ್ತಿಯಲ್ಲಿ “ಜಾಬ್ ಕೋಡ್ ವಿತರಿಸಿದ ಎರಡು ವರ್ಷದ ಒಳಗಾಗಿ ಕಾಮಗಾರಿಗೆ ಟೆಂಡರ್ ಕರೆದು, ಕಾರ್ಯಾದೇಶ ನೀಡದಿದ್ದಲ್ಲಿ ಅಂತಹ ಕಾಮಗಾರಿಯ ಜಾಬ್ ಕೋಡ್ ಸಂಖ್ಯೆಯನ್ನು ಐ.ಎಫ್.ಎಂ.ಎಸ್. ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಬ್ಲಾಕ್ ಆಗುವಂತೆ ಮಾರ್ಪಾಡು ಮಾಡುವುದು. ಎರಡು ವರ್ಷ ಮೀರಿದ ಪ್ರಕರಣಗಳಿಗೆ ಸಂಬಂಧಿಸಿಂತೆ ಅನ್ ಬ್ಲಾಕ್ ಮಾಡಲು ಯಾವುದೇ ಪ್ರಸ್ತಾವನೆಗಳನ್ನು ಸಲ್ಲಿಸದೇ ಇರುವಂತೆ ವಿಭಾಗೀಯ ಕಾರ್ಯಪಾಲಕ ಅಭಿಯಂತರುಗಳಿಗೆ ಸೂಚಿಸಿದೆ.”

 “ವಿಶೇಷ ಪ್ರಕರಣಗಳ ಸಂದರ್ಭದಲ್ಲಿ ಮಾತ್ರ ಅನ್ ಬ್ಲಾಕ್ ಮಾಡುವ ಪ್ರಸ್ತಾವನೆಗಳನ್ನು ಸೂಕ್ತ ವಿವರಣೆಗಳೊಂದಿಗೆ ಸಲ್ಲಿಸುವುದು. ಇಂತಹ ಕಾಮಗಾರಿಗಳ ಪ್ರಸ್ತಾವನೆಗಳನ್ನು ಅನುಷ್ಠಾನದ ಅವಶ್ಯಕತೆಯಿದ್ದಲ್ಲಿ ಮಾತ್ರ ಸ್ಥಳ ಪರಿಶೀಲನೆ ಮಾಡಿ, ಈ ಬಗ್ಗೆ ಸಂಬಂಧಪಟ್ಟ ಮುಖ್ಯ ಅಭಯಂತರರಿಂದ ಪರಿಶೀಲಿಸಿ, ದೃಢೀಕರಿಸಿಕೊಂಡು ಪ್ರಧಾನ ಅಭಯಂತರರ ಶಿಫಾರಸ್ಸಿನ ಮೇರೆಗೆ ವಿಶೇಷ ಆಯುಕ್ತರು (ಯೋಜನೆ)ರವರ ಹಂತದಲ್ಲಿ ಅನ್ ಬ್ಲಾಕ್ ಮಾಡುವ ಪ್ರಕರಣಗಳನ್ನು ತೀರ್ಮಾನಿಸಿ, ಇತ್ಯರ್ಥಗೊಳಿಸಲು ಅಧಿಕಾರ ಪ್ರತ್ಯಾಯೋಜನೆ ಮಾಡಿ, ಆದೇಶಿಸಲಾಗಿದೆ.” ಎಂದು ಆದೇಶ ಸಂಖ್ಯೆ : ಮುಲೆಅ/ಪಿಆರ್/4415/2017-18 ರಂತೆ ಬಿಬಿಎಂಪಿಯ ಈ ಹಿಂದಿನ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಕಚೇರಿ ಆದೇಶ ಹೊರಡಿಸಿದ್ದರು.

ಕ್ರೆಡಲ್ ಮೂಲಕ ಕಾಮಗಾರಿ ಪಡೆದುಕೊಳ್ಳಲು ಹಿಂಬಾಗಿಲ ಸರ್ಕಸ್ :

ಇದರಂತೆ 2019-20ನೇ ಅವಧಿಯಲ್ಲಿ ಮೇಯರ್ ಗೌತಮ್ ಅವಧಿಯಲ್ಲಿನ ಮೇಯರ್ ಫಂಡ್, ಡೆಪ್ಯುಟಿ ಮೇಯರ್ ಸೇರಿದಂತೆ ಮತ್ತಿತರ ಫಂಡ್ ಗಳ ಜಾಬ್ ಕೋಡ್ ಗಳಿಗೆ ಟೆಂಡರ್ ಕರೆದು ಕಾರ್ಯಾದೇಶ ನೀಡದಿದ್ದರೆ ಆ ಕಾಮಗಾರಿಗಳು ಸ್ವಯಂಚಾಲಿತವಾಗಿ ಬ್ಲಾಕ್ ಆಗಲಿದೆ. ಹೀಗಾಗಿಯೇ ಪರ್ಸೆಂಟೇಜ್ ಪಡೆದ ಗುತ್ತಿಗೆದಾರರು ಹಾಗೂ ಅವರ ಬೆಂಬಲಕ್ಕೆ ನಿಂತ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಪ್ರಭಾವ ಬಳಸಿ ಕ್ರೆಡಲ್ ಮೂಲಕ ಈ ಕಾಮಗಾರಿಗಳನ್ನು ನಿರ್ವಹಿಸಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಅತಿಮುಖ್ಯವಲ್ಲದ ಜಾಬ್ ಕೋಡ್ ಬ್ಲಾಕ್ ಆದರೆ ಅನ್ ಬ್ಲಾಕ್ ಅಗತ್ಯವಿಲ್ಲ :

ಜಾಬ್ ಕೋಡ್ ಹಂಚಿಕೆಯಲ್ಲೂ ಪ್ರಭಾವೀ ಕೌನ್ಸಿಲರ್, ಗುತ್ತಿಗೆದಾರರಿಗೆ ಮಣೆ ಹಾಕಿದ್ದಾರೆ ಎಂದು ಪಾಲಿಕೆ ಅಂಗಳದಲ್ಲಿ ಕೇಳಿಬಂದಿದೆ. ಒಟ್ಟಾರೆ 53ನೆಯ ಮೇಯರ್ ಅವಧಿಯಲ್ಲಿ ಮೇಯರ್ ಫಂಡ್ ಅನುದಾನದಡಿ ಹಂಚಿಕೆಯಾದ ಜಾಬ್ ಕೋಡ್ ಗಳ ಬಗ್ಗೆ ಸಮಗ್ರ ತನಿಖೆ ನಡೆದರೆ ಜಾಬ್ ಕೋಡ್ ಹಂಚಿಕೆಯಲ್ಲಿ ಪರ್ಸಂಟೇಜ್ ಕಿಕ್ ಬ್ಯಾಕ್ ಅವ್ಯವಹಾರ ಬೆಳಕಿಗೆ ಬರುವ ಸಾಧ್ಯತೆಯಿದೆ. ಸಾಕಷ್ಟು ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಅತಿಮುಖ್ಯ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳಿಗೆ ಟೆಂಡರ್ ಕರೆಯದೇ ಪಾಲಿಕೆಯ ಐ.ಎಫ್.ಎಂ.ಎಸ್ ತಂತ್ರಾಂಶದಲ್ಲಿ ಬ್ಲಾಕ್ ಆದ ನಂತರ ಅನ್ ಬ್ಲಾಕ್ ಮಾಡದಿರುವುದೇ ಒಳಿತು ಎನ್ನುವ ಮಾತುಗಳು ಕೇಳಿಬರುತ್ತಿದೆ.

ಈ ಬಗ್ಗೆ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತಾ, ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ, ಯೋಜನೆ ವಿಭಾಗದ ವಿಶೇಷ ಆಯುಕ್ತ ಮನೋಜ್ ರವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ನಾಗರೀಕ ಸಮಾಜ ಎದುರು ನೋಡುತ್ತಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಪೀಣ್ಯ ಕೈಗಾರಿಕಾ‌ ಪ್ರದೇಶದಲ್ಲಿ ಆದ್ಯತೆ ಮೇಲೆ ಮೂಲಭೂತ ಸೌಕರ್ಯ ಕಲ್ಪಿಸಿ : ಬಿಬಿಎಂಪಿ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚನೆ

Next Post

GOLD JEWELLS H.U.I.D TRACKING | ನೀವು ಕೊಂಡ ಚಿನ್ನಾಭರಣದಲ್ಲಿನ ಎಚ್.ಯು.ಐ.ಡಿ ಗ್ರಾಹಕರ ಜಾಡು ಪತ್ತೆ ಮಾಡುತ್ತಾ?

Next Post

GOLD JEWELLS H.U.I.D TRACKING | ನೀವು ಕೊಂಡ ಚಿನ್ನಾಭರಣದಲ್ಲಿನ ಎಚ್.ಯು.ಐ.ಡಿ ಗ್ರಾಹಕರ ಜಾಡು ಪತ್ತೆ ಮಾಡುತ್ತಾ?

ಬಿಬಿಎಂಪಿ ಶಾಲಾ ಮಕ್ಕಳ ಸ್ವೆಟರ್ ಹಂಚಿಕೆಯಲ್ಲಿ ಭ್ರಷ್ಟಾಚಾರ ಆರೋಪ : ಪಾಲಿಕೆ ಅಧಿಕಾರಿಗಳ ವಿರುದ್ಧ ನೂತನ ಪ್ರತಿಭಟನೆ

Please login to join discussion

Like Us on Facebook

Follow Us on Twitter

Recent News

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026

​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

September 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026

​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

September 19, 2026

ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

September 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d