Thursday, July 16, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಕೇಂದ್ರ ಚುನಾವಣಾ ಆಯೋಗದ ಕಚೇರಿ - ಸಾಂದರ್ಭಿಕ ಚಿತ್ರ

    ಕರ್ನಾಟಕ ಮತದಾರರ ಪಟ್ಟಿಯ ಪರಿಷ್ಕರಣೆ: ಎಸ್‌ಐಆರ್ ಗಡುವು ವಿಸ್ತರಣೆ, ರಾಜ್ಯದಲ್ಲಿ ಶೇ. 95.58 ರಷ್ಟು ನಮೂನೆ ಹಂಚಿಕೆ

    Defence News | ಕಾರ್ಗಿಲ್ ವಿಜಯ್ ದಿವಸ್ 2026: ದೆಹಲಿಯಿಂದ ಕಾರ್ಗಿಲ್‌ಗೆ ಬೈಕ್ ರ್ಯಾಲಿ; ಚಾಲನೆ ನೀಡಿದ ರಕ್ಷಣಾ ಸಚಿವ

    ಆದಾಯ ತೆರಿಗೆ ವಂಚಕರ ಪಾಲಿಗೆ ಸಿಂಹಸ್ವಪ್ನ, ರಂಗಭೂಮಿ ಸವ್ಯಸಾಚಿ: ಐಆರ್‌ಎಸ್ ಅಧಿಕಾರಿ ಜಯರಾಮ್ ರಾಯಪುರ ಎಂಬ ಬಹುಮುಖ ಪ್ರತಿಭೆ

    S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

    National Anthem New Guidelines | ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ನಿಯಮ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಪ್ರಕಟ 

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    Power News | ಎಲ್ ನಿನೋ ಎದುರಿಸಲು ಇಂಧನ ಇಲಾಖೆ ಸಜ್ಜು: ಸಮರ್ಪಕ ವಿದ್ಯುತ್ ಪೂರೈಕೆಗೆ ಕಾರ್ಯತಂತ್ರ

    ಶಿವಮೊಗ್ಗ, ಧಾರವಾಡ ಕೃಷಿ ವಿವಿ ಉಪಕುಲಪತಿ ಆಯ್ಕೆ: ‘ಕುರ್ಚಿಗಾಗಿ ಗೌರವ ಕಳೆದುಕೊಳ್ಳಬೇಡಿ’ – ನಿವೃತ್ತ ಪ್ರಾಧ್ಯಾಪಕರ ಎಚ್ಚರಿಕೆ

    NIA Raids | ​ಆನ್‌ಲೈನ್ ಉಗ್ರ ಸಂಚು: ಕರ್ನಾಟಕ ಸೇರಿ 10 ರಾಜ್ಯಗಳ 20 ಕಡೆ ಎನ್‌ಐಎ ಭರ್ಜರಿ ದಾಳಿ

  • Bengaluru Focus

    ಬೆಂಗಳೂರು: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು, ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ

    BDA News | ಬಿಡಿಎಯಿಂದ ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಶೀಘ್ರದಲ್ಲೇ ಅರ್ಜಿ ಆಹ್ವಾನ

    ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

    ಬೆಂಗಳೂರು ಟ್ರಾಫಿಕ್‌ಗೆ ಮಾಸ್ಟರ್ ಪ್ಲಾನ್: ಸಿಟಿ ಒಳಗೆ ಬರುವ 600 ಪೆಟ್ರೋಲ್ ಟ್ಯಾಂಕರ್‌ಗಳ ದಿಕ್ಕು ಬದಲಿಸಲು ಎನ್ಐಪಿಡಿಎ ಮನವಿ

    39 ಅಗತ್ಯ ಔಷಧಗಳ ಬೆಲೆ ಕಡಿತ: ಬಿಪಿ, ಶುಗರ್, ಹಾರ್ಟ್ ರೋಗಿಗಳಿಗೆ ಕೇಂದ್ರದಿಂದ ಭರ್ಜರಿ ರಿಲೀಫ್

    ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

    BUWJ Pressday-2026 | ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಬದಲಾಗುವುದು ಅನಿವಾರ್ಯ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

    ಬೆಂಗಳೂರು ವಿವಿ ನೂತನ ಕುಲಪತಿಯಾಗಿ ಪ್ರೊ.ಸಿ.ಶಿವರಾಜು ಅಧಿಕಾರ ಸ್ವೀಕಾರ

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಕೇಂದ್ರ ಚುನಾವಣಾ ಆಯೋಗದ ಕಚೇರಿ - ಸಾಂದರ್ಭಿಕ ಚಿತ್ರ

    ಕರ್ನಾಟಕ ಮತದಾರರ ಪಟ್ಟಿಯ ಪರಿಷ್ಕರಣೆ: ಎಸ್‌ಐಆರ್ ಗಡುವು ವಿಸ್ತರಣೆ, ರಾಜ್ಯದಲ್ಲಿ ಶೇ. 95.58 ರಷ್ಟು ನಮೂನೆ ಹಂಚಿಕೆ

    Defence News | ಕಾರ್ಗಿಲ್ ವಿಜಯ್ ದಿವಸ್ 2026: ದೆಹಲಿಯಿಂದ ಕಾರ್ಗಿಲ್‌ಗೆ ಬೈಕ್ ರ್ಯಾಲಿ; ಚಾಲನೆ ನೀಡಿದ ರಕ್ಷಣಾ ಸಚಿವ

    ಆದಾಯ ತೆರಿಗೆ ವಂಚಕರ ಪಾಲಿಗೆ ಸಿಂಹಸ್ವಪ್ನ, ರಂಗಭೂಮಿ ಸವ್ಯಸಾಚಿ: ಐಆರ್‌ಎಸ್ ಅಧಿಕಾರಿ ಜಯರಾಮ್ ರಾಯಪುರ ಎಂಬ ಬಹುಮುಖ ಪ್ರತಿಭೆ

    S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

    National Anthem New Guidelines | ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ನಿಯಮ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಪ್ರಕಟ 

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    Power News | ಎಲ್ ನಿನೋ ಎದುರಿಸಲು ಇಂಧನ ಇಲಾಖೆ ಸಜ್ಜು: ಸಮರ್ಪಕ ವಿದ್ಯುತ್ ಪೂರೈಕೆಗೆ ಕಾರ್ಯತಂತ್ರ

    ಶಿವಮೊಗ್ಗ, ಧಾರವಾಡ ಕೃಷಿ ವಿವಿ ಉಪಕುಲಪತಿ ಆಯ್ಕೆ: ‘ಕುರ್ಚಿಗಾಗಿ ಗೌರವ ಕಳೆದುಕೊಳ್ಳಬೇಡಿ’ – ನಿವೃತ್ತ ಪ್ರಾಧ್ಯಾಪಕರ ಎಚ್ಚರಿಕೆ

    NIA Raids | ​ಆನ್‌ಲೈನ್ ಉಗ್ರ ಸಂಚು: ಕರ್ನಾಟಕ ಸೇರಿ 10 ರಾಜ್ಯಗಳ 20 ಕಡೆ ಎನ್‌ಐಎ ಭರ್ಜರಿ ದಾಳಿ

  • Bengaluru Focus

    ಬೆಂಗಳೂರು: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು, ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ

    BDA News | ಬಿಡಿಎಯಿಂದ ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಶೀಘ್ರದಲ್ಲೇ ಅರ್ಜಿ ಆಹ್ವಾನ

    ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

    ಬೆಂಗಳೂರು ಟ್ರಾಫಿಕ್‌ಗೆ ಮಾಸ್ಟರ್ ಪ್ಲಾನ್: ಸಿಟಿ ಒಳಗೆ ಬರುವ 600 ಪೆಟ್ರೋಲ್ ಟ್ಯಾಂಕರ್‌ಗಳ ದಿಕ್ಕು ಬದಲಿಸಲು ಎನ್ಐಪಿಡಿಎ ಮನವಿ

    39 ಅಗತ್ಯ ಔಷಧಗಳ ಬೆಲೆ ಕಡಿತ: ಬಿಪಿ, ಶುಗರ್, ಹಾರ್ಟ್ ರೋಗಿಗಳಿಗೆ ಕೇಂದ್ರದಿಂದ ಭರ್ಜರಿ ರಿಲೀಫ್

    ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

    BUWJ Pressday-2026 | ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಬದಲಾಗುವುದು ಅನಿವಾರ್ಯ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

    ಬೆಂಗಳೂರು ವಿವಿ ನೂತನ ಕುಲಪತಿಯಾಗಿ ಪ್ರೊ.ಸಿ.ಶಿವರಾಜು ಅಧಿಕಾರ ಸ್ವೀಕಾರ

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home News Wire

ಕರ್ನಾಟಕ ಮತದಾರರ ಪಟ್ಟಿಯ ಪರಿಷ್ಕರಣೆ: ಎಸ್‌ಐಆರ್ ಗಡುವು ವಿಸ್ತರಣೆ, ರಾಜ್ಯದಲ್ಲಿ ಶೇ. 95.58 ರಷ್ಟು ನಮೂನೆ ಹಂಚಿಕೆ

ರಾಜ್ಯದಲ್ಲಿ ಶೇ. 95.58ರಷ್ಟು ಮತದಾರರಿಗೆ ನಮೂನೆ ಹಂಚಿಕೆ ಪೂರ್ಣ: ಸಿಇಒ ಅನ್ಬುಕುಮಾರ್ ಮಾಹಿತಿ

by Bengaluru Wire Desk
July 15, 2026
in News Wire, Public interest
Reading Time: 1 min read
0
ಕೇಂದ್ರ ಚುನಾವಣಾ ಆಯೋಗದ ಕಚೇರಿ - ಸಾಂದರ್ಭಿಕ ಚಿತ್ರ

ಕೇಂದ್ರ ಚುನಾವಣಾ ಆಯೋಗದ ಕಚೇರಿ - ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.15 www.bengaluruwire.com: ಕೇಂದ್ರ ಚುನಾವಣಾ ಆಯೋಗವು ಅಕ್ಟೋಬರ್ 10 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 

ಇದರ ಜೊತೆಗೆ, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಅಂಗವಾಗಿ ರಾಜ್ಯದ 5.54 ಕೋಟಿ ಮತದಾರರ ಪೈಕಿ ಶೇ. 95.58 ರಷ್ಟು ಜನರಿಗೆ ನಮೂನೆಗಳನ್ನು ವಿತರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿ. ಅನ್ಬುಕುಮಾರ್ ಬುಧವಾರ ತಿಳಿಸಿದ್ದಾರೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

​ಪರಿಷ್ಕೃತ ವೇಳಾಪಟ್ಟಿಯ ವಿವರಗಳು:

​ಭಾರತ ಚುನಾವಣಾ ಆಯೋಗವು ದಿನಾಂಕ 15ನೇ ಜುಲೈ 2026 ರಂದು ಹೊರಡಿಸಿರುವ ಆದೇಶದಂತೆ ವಿಶೇಷ ಸಮಗ್ರ ಪರಿಷ್ಕರಣೆಯ ಚಟುವಟಿಕೆಗಳ ಪರಿಷ್ಕೃತ ವೇಳಾಪಟ್ಟಿ ಈ ಕೆಳಗಿನಂತಿದೆ:

​ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ: 30.06.2026 ರಿಂದ 08.08.2026 ರವರೆಗೆ

​ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ/ಮರುಜೋಡಣೆ: 08.08.2026

​ಕರಡು ಮತದಾರರ ಪಟ್ಟಿಯ ಪ್ರಕಟಣೆ: 17.08.2026 (ಸೋಮವಾರ)

​ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ: 17.08.2026 ರಿಂದ 16.09.2026 ರವರೆಗೆ

​ನೋಟಿಸ್ ಹಂತ / ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ: 17.08.2026 ರಿಂದ 15.10.2026 ರವರೆಗೆ

​ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ: 19.10.2026 (ಸೋಮವಾರ)

​ನಮೂನೆ ವಿತರಣೆ ಮತ್ತು ಡಿಜಿಟಲೀಕರಣದಲ್ಲಿ ಮುನ್ನಡೆ:

​ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಇಒ ಅನ್ಬುಕುಮಾರ್, “ರಾಜ್ಯದ 5,54,32,314 ನೋಂದಾಯಿತ ಮತದಾರರ ಪೈಕಿ 5,29,82,909 ಮತದಾರರಿಗೆ ನಮೂನೆಗಳನ್ನು ವಿತರಿಸಲಾಗಿದ್ದು, ಶೇ. 95.58 ರಷ್ಟು ವಿತರಣೆ ಪೂರ್ಣಗೊಂಡಿದೆ” ಎಂದರು.

 “ಈವರೆಗೆ 2,20,77,772 ಮತದಾರರ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಒಟ್ಟು ನಮೂನೆಗಳ ಶೇ. 39.83 ರಷ್ಟಾಗಿದೆ. ಅಲ್ಲದೆ, 4,26,233 ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ” ಎಂದು ಅವರು ವಿವರಿಸಿದರು.

​ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿ, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು, ಉತ್ತರ ಕನ್ನಡ, ವಿಜಯನಗರ, ಯಾದಗಿರಿ, ಕೊಡಗು ಮತ್ತು ಹಾಸನ ಸೇರಿದಂತೆ ಒಟ್ಟು 13 ಜಿಲ್ಲೆಗಳು ಶೇ. 100 ರಷ್ಟು ನಮೂನೆ ವಿತರಣೆಯನ್ನು ಪೂರ್ಣಗೊಳಿಸಿವೆ.

ಉಳಿದಂತೆ ಸುಮಾರು 11 ಜಿಲ್ಲೆಗಳು ಶೇ. 99ರ ಗಡಿ ದಾಟಿದ್ದು, ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಅನ್ಬುಕುಮಾರ್ ಅವರು ಮಾಹಿತಿ ನೀಡಿದರು.

ಡಿಜಿಟಲೀಕರಣದಲ್ಲಿ ಶೇ. 64 ರೊಂದಿಗೆ ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿದ್ದರೆ, ಹಾವೇರಿ (ಶೇ. 62), ದಾವಣಗೆರೆ (ಶೇ. 59), ಕೊಪ್ಪಳ (ಶೇ. 58), ಹಾಸನ (ಶೇ. 57) ಮತ್ತು ಚಿತ್ರದುರ್ಗ (ಶೇ. 56) ನಂತರದ ಸ್ಥಾನಗಳಲ್ಲಿವೆ. ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಯಕೊಂಡ ಶೇ. 83.36 ರಷ್ಟು ಡಿಜಿಟಲೀಕರಣದೊಂದಿಗೆ ಮುಂಚೂಣಿಯಲ್ಲಿದೆ.

​ಬೆಂಗಳೂರಿನ ಸ್ಥಿತಿಗತಿ ಹಾಗೂ ASDO ಪಟ್ಟಿ:

​ಬೆಂಗಳೂರು ನಗರದ 1.03 ಕೋಟಿ ಮತದಾರರ ಪೈಕಿ ಸುಮಾರು 82 ಲಕ್ಷ ಮತದಾರರಿಗೆ ನಮೂನೆಗಳನ್ನು ಹಂಚಲಾಗಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ನಿಧಾನವಾಗಿದ್ದರೂ, ಪ್ರಸ್ತುತ ವೇಗ ಪಡೆದುಕೊಂಡಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

​ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಈವರೆಗೆ 1,31,626 ಬೂತ್ ಮಟ್ಟದ ಏಜೆಂಟರನ್ನು (BLA) ನೇಮಿಸಿದ್ದು, ಪರಿಶೀಲನೆಗಾಗಿ ASDO (ಗೈರುಹಾಜರಾದ, ಸ್ಥಳಾಂತರಗೊಂಡ, ನಕಲಿ, ಮೃತ ಮತ್ತು ಇತರ) ಪಟ್ಟಿಗಳನ್ನು ಅವರೊಂದಿಗೆ ಹಂಚಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ಎಎಸ್‌ಡಿಒ ಪಟ್ಟಿಯಲ್ಲಿ 13,96,012 ನಮೂದುಗಳಿವೆ. ಅರ್ಹ ಮತದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಪಟ್ಟಿಗಳನ್ನು ಪರಿಶೀಲಿಸುವಂತೆ ರಾಜಕೀಯ ಪಕ್ಷಗಳು ಹಾಗೂ ಬಿಎಲ್‌ಎಗಳಿಗೆ ಅವರು ಮನವಿ ಮಾಡಿದರು.

ಇನ್ನು ನಮೂನೆಗಳನ್ನು ಸ್ವೀಕರಿಸದ ಮತದಾರರಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ಅವುಗಳನ್ನು ತಲುಪಿಸಲಾಗುವುದು ಹಾಗೂ ಸ್ವೀಕರಿಸಿದವರು ಅದನ್ನು ಭರ್ತಿಮಾಡಿ ಹಿಂದಿರುಗಿಸುವಂತೆ ಅವರು ತಿಳಿಸಿದರು.

WhatsApp Join our WhatsApp Channel
Previous Post

BDA News | ಬಿಡಿಎಯಿಂದ ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಶೀಘ್ರದಲ್ಲೇ ಅರ್ಜಿ ಆಹ್ವಾನ

Next Post

ಬೆಂಗಳೂರು: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು, ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ

Next Post

ಬೆಂಗಳೂರು: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು, ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ

Please login to join discussion

Like Us on Facebook

Follow Us on Twitter

Recent News

ಬೆಂಗಳೂರು: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು, ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ

July 15, 2026
ಕೇಂದ್ರ ಚುನಾವಣಾ ಆಯೋಗದ ಕಚೇರಿ - ಸಾಂದರ್ಭಿಕ ಚಿತ್ರ

ಕರ್ನಾಟಕ ಮತದಾರರ ಪಟ್ಟಿಯ ಪರಿಷ್ಕರಣೆ: ಎಸ್‌ಐಆರ್ ಗಡುವು ವಿಸ್ತರಣೆ, ರಾಜ್ಯದಲ್ಲಿ ಶೇ. 95.58 ರಷ್ಟು ನಮೂನೆ ಹಂಚಿಕೆ

July 15, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರು: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು, ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ

July 15, 2026
ಕೇಂದ್ರ ಚುನಾವಣಾ ಆಯೋಗದ ಕಚೇರಿ - ಸಾಂದರ್ಭಿಕ ಚಿತ್ರ

ಕರ್ನಾಟಕ ಮತದಾರರ ಪಟ್ಟಿಯ ಪರಿಷ್ಕರಣೆ: ಎಸ್‌ಐಆರ್ ಗಡುವು ವಿಸ್ತರಣೆ, ರಾಜ್ಯದಲ್ಲಿ ಶೇ. 95.58 ರಷ್ಟು ನಮೂನೆ ಹಂಚಿಕೆ

July 15, 2026

BDA News | ಬಿಡಿಎಯಿಂದ ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಶೀಘ್ರದಲ್ಲೇ ಅರ್ಜಿ ಆಹ್ವಾನ

July 15, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group