Saturday, April 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

  • Bengaluru Focus

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

  • Bengaluru Focus

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

15th BIFFES Film Festival 2024 | ಸಿನಿಮಾಸಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಯ್ತು 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ 2ನೇ ದಿನ : ಗಮನ ಸೆಳೆಯುವಂತಿತ್ತು “ಡ್ಯಾಮೇಜ್”  ಚಿತ್ರ

ಈ ಬಾರಿಯ ಚಲನಚಿತ್ರೋತ್ಸವದಲ್ಲಿ ದೇಶದಲ್ಲಿ ಅತಿ ಕಡಿಮೆ ಮಾತನಾಡುವ ಅಪರೂಪದ ಭಾಷೆಗಳಾಗಿರುವ ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ, ಗಾಲೊ, ರಾಭ, ಸಂತಾಲಿ, ತಾಯಿಫಾಕೆ ಭಾಷೆಗಳ 9 ಚಿತ್ರಗಳು ಪ್ರದರ್ಶನವಾಗುತ್ತಿದೆ.

by Bengaluru Wire Desk
March 1, 2024
in Bengaluru Focus, News Wire, Public interest
Reading Time: 2 mins read
0
ಆಸ್ಟ್ರೇಲಿಯಾ ದೇಶದ ಡ್ಯಾಮೇಜ್ ಚಿತ್ರದ ದೃಶ್ಯ.

ಆಸ್ಟ್ರೇಲಿಯಾ ದೇಶದ ಡ್ಯಾಮೇಜ್ ಚಿತ್ರದ ದೃಶ್ಯ.

ಬೆಂಗಳೂರು, ಮಾ.1 www.bengaluruwire.com : ಬೆಂಗಳೂರಿನ 15ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗುರುವಾರ ಚಾಲನೆ ದೊರತಿದ್ದು, ಒರಾಯನ್ ಮಾಲ್, ಸುಚಿತ್ರ ಸಿನಿಮಾ ಅಕಾಡೆಮಿ, ಕಲಾವಿದರ ಸಂಘಗಳ 14 ಸ್ಕ್ರೀನ್ ಗಳಲ್ಲಿ ಚಿತ್ರಗಳು ಪ್ರದರ್ಶನ ಆರಂಭವಾಗಿದೆ. ಇಂದು ಚಲನಚಿತ್ರರಂಗದ ನಿರ್ದೇಶಕರು, ನಟ, ನಟಿಯರು, ಸಹಕಲಾವಿದರು, ರಂಗಭೂಮಿ ಕಲಾವಿದರು, ಸಿನಿಮಾ ಆಸಕ್ತರು ಸೇರಿದಂತೆ ಸಾವಿರಾರು ಮಂದಿ ದೇಶ ವಿದೇಶಗಳ ಸಿನಿಮಾವನ್ನು ಕಣ್ತುಂಬಿಕೊಂಡರು.

15 ವಿಭಾಗಗಳಲ್ಲಿ 60 ದೇಶಗಳ 200ಕ್ಕೂ ಹೆಚ್ಚು ಚಲನಚಿತ್ರಗಳು ಫೆ.29ರಿಂದ ಮಾರ್ಚ್ 7ನೇ ತಾರೀಖಿನವರೆಗೆ ನಗರದಲ್ಲಿ ಸಿನಿಪ್ರಿಯರಿಗೆ ವಿವಿಧ ಪ್ರಯೋಗತ್ಮಕ, ಮನರಂಜನಾ, ಮಾನವೀಯ ನೆಲೆಯುಳ್ಳ ಹೀಗೆ ನಾನಾ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಇಂದು ಚಲನಚಿತ್ರೋತ್ಸವದ ಎರಡನೇ ದಿನ ಒರಿಯನ್ ಮಾಲ್ ಸೇರಿದಂತೆ ಹಲವು ಸ್ಕ್ರೀನ್ ಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಲು ಸಾವಿರಾರು ಮಂದಿ ಸಾಲಲ್ಲಿ ನಿಂತು ಚಿತ್ರ ವೀಕ್ಷಿಸಿದರು. ನಾವು ಆಸ್ಟ್ರೇಲಿಯಾದ ಡ್ಯಾಮೇಜ್ ಚಲನಚಿತ್ರ, ಫಿನ್ಲಾಂಡ್ ದೇಶದ ಫಿನಿಶ್ ಭಾಷೆಯಲ್ಲಿ ತಯಾರಾದ ಫಾಲನ್ ಲೀವ್ಸ್ ಹಾಗೂ ನೆದರ್ ಲ್ಯಾಂಡ್ ದೇಶದ ಸ್ವೀಟ್ ಡ್ರೀಮ್ಸ್ ಚಲನಚಿತ್ರವನ್ನು ವೀಕ್ಷಿಸಿದೆವು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಫಿಲಮ್ ಗಳನ್ನು ನೋಡಲು ಒರಾಯನ್ ಮಾಲ್ ಪಿವಿಆರ್ ಸಿನಿಮಾಸ್ ನಲ್ಲಿ ಸಾಲಲ್ಲಿ ನಿಂತಿರುವ ಚಿತ್ರ ರಸಿಕರು.

ಆಸ್ಟ್ರೇಲಿಯಾದ ನಿರ್ದೇಶಕಿ ಮೆಡಿಲಿನ್ ಬ್ಲಾಕ್ ವೆಲ್ ಅವರ 84 ನಿಮಿಷಗಳ “ಡ್ಯಾಮೇಜ್” ಚಿತ್ರವು 2023ರಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಬ್ರಿಟನ್ ಚಲನಚಿತ್ರೋತ್ಸವದಲ್ಲಿ ವಿಶೇಷವಾಗಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಈ ಚಿತ್ರವು ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಚಿತ್ರದ ಈ ಕುರಿತಂತೆ ಹೇಳುವುದಾದರೆ ;

ಚಿತ್ರ : ಡ್ಯಾಮೇಜ್

ಅಲಿ ಸ್ಥಳೀಯನಲ್ಲ. ಬೇರೊಬ್ಬನ ಹೆಸರಿನಲ್ಲಿರುವ ಲೈಸೆನ್ಸ್ ಇಟ್ಟುಕೊಂಡು ಟ್ಯಾಕ್ಸಿ ಓಡಿಸುತ್ತಿರುತ್ತಾನೆ. ಆ ಊರಿನ ರಸ್ತೆಗಳ ಪರಿಚಯವೇ ಇಲ್ಲದ ಕಾರಣ ಆತ ಆ ಟ್ಯಾಕ್ಸಿಗೆ ಜಿಪಿಎಸ್ ಅಳವಡಿಸಿಕೊಂಡಿರುತ್ತಾನೆ. ಅವನ ಟ್ಯಾಕ್ಸಿಯನ್ನು ಹತ್ತಿರುವ ಎಸ್ತರ್ ಎಂಬ ವೃದ್ಧೆಗೆ ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವುದೇ ಗೊತ್ತಿಲ್ಲ. ಮರವಿನ ಗುಣ. ತನ್ನದೆಲ್ಲವನ್ನೂ ಕಳೆದುಕೊಂಡ, ತನಗೆ ಪರಿಚಿತವಾದದ್ದನ್ನೇ ಗುರುತಿಸಲಾಗದ ಸ್ಥಿತಿಯಲ್ಲಿರುವ ವೃದ್ಧೆಯು ಅದ್ಹೇಗೋ, ಪ್ರಯಾಣಿಕರ ನಿರೀಕ್ಷೆಯಲ್ಲಿದ್ದಾಗ ಅಚಾನಕ್ಕಾಗಿ ಅಲಿಯ ಕಾರನ್ನು ಏರುವ ವಯಸ್ಸಾದ ಮಹಿಳೆಯು ತಾನು ತಲುಪಬೇಕಾದ ಗಮ್ಯ ಎಲ್ಲೆಂದು ಹೇಳಲು ಆಗದೆ, ಚಾಲಕ ಎಸ್ತರ್ ನೀಡಿದೆ ಸಣ್ಣ ವಿಳಾಸದ ಸುಳಿವನ್ನು ಹಿಡಿದು ಇಡೀ ರಾತ್ರಿ ಆ ಟ್ಯಾಕ್ಸಿ ಚಾಲಕ ವೃದ್ಧೆಯ ಜೊತೆ ಸಂಚರಿಸುತ್ತಾನೆ. ಆ ಸಂದರ್ಭದಲ್ಲಿ ನಡೆಯುವ ಅವರ ಮಧ್ಯದ ಸಂಭಾಷಣೆ, ಜಗಳ, ನಾಟಕೀಯ ಬೆಳವಣಿಗೆಗಳು, ಆ ವಯೋವೃದ್ಧ ಮಹಿಳೆಯ ಅಸಹಾಯಕತೆ ನೋಡುಗರನ್ನು ಆವರಿಸುತ್ತದೆ. ಸಿಸಿ ಕ್ಯಾಮರಾಗಳು ಈ ಅಡ್ಡಾದಿಡ್ಡಿ ಸಂಚಾರವನ್ನು ಸೆರೆ ಹಿಡಿದು, ಹಿಂಬಾಲಿಸುತ್ತಿರುತ್ತವೆ. ಪೊಲೀಸರು ಎಸ್ತರ್ ಮನೆಯವರ ದೂರಿನ ಹಿನ್ನಲೆಯಲ್ಲಿ ಹುಡುಕಾಟ ನಡೆಸುತ್ತಿರುತ್ತಾರೆ.

ಈ ಮಧ್ಯೆ ಒಂದೆಡೆ ತನ್ನ ವಯೋಸಹಜ ಅಸಹಾಯಕತೆ, ಮರೆವಿನ ಖಾಯಿಲೆ, ಸ್ವತಂತ್ರ್ಯವಾಗಿರಬೇಕೆಂಬ ತುಡಿತ ಅಜ್ಜಿಯ ಒಳಮನಸ್ಸಿನದ್ದಾದರೆ, ಯುದ್ಧದಿಂದ ತನ್ನವರನ್ನು, ತನ್ನ ನೆಲೆ ಕಳೆದುಕೊಂಡ ಇರಾಕ್ ದೇಶದ ಪ್ರಜೆ ಅಲಿ ತನ್ನ ಜೀವನ ಕಟ್ಟಿಕೊಳ್ಳುವ ಮಧ್ಯೆ ಮರೆವಿನ ಅಜ್ಜಿಯನ್ನು ದಡ ಮುಟ್ಟಿಸುವಲ್ಲಿ ಯಶಸ್ವಿಯಾಗುತ್ತಾರಾ? ಎಂಬ ಕಥಾ ಹಂದರವನ್ನು ಬಹಳ ಮನೋಜ್ಞವಾಗಿ ನಿರ್ದೇಶಕಿ ಮೆಡಿಲಿನ್ ಬ್ಲಾಕ್ ವೆಲ್ ನೋಡುಗರಿಗೆ ಕಟ್ಟಿಕೊಟ್ಟಿದ್ದಾರೆ.

ಚಿತ್ರ : ಸ್ವೀಟ್ ಡ್ರೀಮ್ಸ್

ಸ್ವೀಟ್ ಡ್ರೀಮ್ಸ್ ಸಿನಿಮಾದ ದೃಶ್ಯ.

ನೆದರ್ ಲ್ಯಾಂಡಿನ ನಿರ್ದೇಶಕಿ ಎನಾ ಸೆಂಡಿಜಾರ್ವಿಕ್ ನಿರ್ದೇಶನದ ಡಚ್ ಮತ್ತು ಇಂಡೋನೇಷ್ಯಾ ಭಾಷೆಯಲ್ಲಿ 2023ರಲ್ಲಿ ನಿರ್ಮಾಣವಾಗಿರುವ ಸ್ವೀಟ್ ಡ್ರೀಮ್ಸ್ ಒಟ್ಟು 102 ನಿಮಿಷಗಳ ಚಿತ್ರ. ಈ ಚಿತ್ರವು ಲೊಕಾರ್ನೋ ಐಎಫ್ಎಫ್, ಚಿಕಾಗೋ ಐಎಫ್ಎಪ್ ಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸ್ವೀಟ್ ಡ್ರೀಮ್ಸ್ ಚಿತ್ರದ ಕುರಿತು ಹೇಳುವುದಾದರೆ ;

ದೂರದ ಇಂಡೋನೇಷಿಯಾ ದ್ವೀಪದಲ್ಲಿ ವಸಾಹತುಶಾಹಿ ಆಳ್ವಿಕೆಯಿದ್ದ ಕಾಲ. ಡಚ್‌ನ ಸಕ್ಕರೆ ಕಾರ್ಖಾನೆಯ ಮಾಲಿಕ ಜಾನ್‌ನ ಹಠಾತ್ ನಿಧನದಿಂದಾಗಿ ವಾರಸುದಾರರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ಅವನ ಪತ್ನಿ ಅಗಾಥೆಗೆ ತನ್ನ ಸವಲತ್ತುಗಳನ್ನು ಉಳಿಸಿಕೊಳ್ಳುವ ಆಸೆ. ಅದಕ್ಕಾಗಿ ಅವಳು ಪ್ರತ್ಯೇಕವಾಗಿ ದೂರದ ಯೂರೋಪಿನಲ್ಲಿ ವಾಸಿಸುತ್ತಿರುವ ತನ್ನ ಮಗ ಕಾರ್ನೆಲಿಸ್ ಹಾಗೂ ಅವನ ಗರ್ಭಿಣಿ ಪತ್ನಿ ಜೋಸೆಫಿನ್ ಅವರನ್ನು ಕುಟುಂಬದ ಆಸ್ತಿಯನ್ನು ನಿರ್ವಹಿಸುವಂತೆ ಪತ್ರ ಬರೆದು ಆಹ್ವಾನಿಸುತ್ತಾಳೆ. ಪತಿಯ ಅಗಲಿಕೆಯ ನಂತರ ಸಕ್ಕರೆ ಕಾರ್ಖಾನೆಯಲ್ಲಿ ಪರಿಸ್ಥಿತಿ ಕೆಟ್ಟು, ಕಾರ್ಮಿಕರು ಮುಷ್ಕರದ ಹಾದಿ ಹಿಡಿದಿರುತ್ತಾರೆ. ಅಂತಹ ಸಮಯದಲ್ಲಿ ಕಾರ್ನೆಲಿಸ್ ಪ್ರಗತಿಪರ ಯೋಜನೆಯೊಂದನ್ನು ಮುಂದಿಡುತ್ತಾನೆ.

ಆದರೆ ಅಲ್ಲಿ ಜಾನ್‌ ಉಪಪತ್ನಿ ಸಿತಿ, ಕುಟುಂಬದ ಎಸ್ಟೇಟಿನ ಉಸ್ತುವಾರಿಯನ್ನು ಈಗಾಗಲೇ ಕೈಗೆತ್ತಿಕೊಂಡಿರುತ್ತಾಳೆ. ಸಿತಿ, ತನ್ನ ಅನಧಿಕೃತ ಪತಿ ಹಾಗೂ ಕೆಲಸದ ಮಾಲೀಕ ಜಾನ್ ನಿಂದ ಹುಟ್ಟಿದ ತನ್ನ ಮಗನಿಗೆ ಸಮಸ್ತ ಆಸ್ತಿ ಸಿಗುವಂತೆ ಮಾಡುವಲ್ಲಿ ಯಾವೆಲ್ಲಾ ಹಾದಿ ಹಿಡಿಯುತ್ತಾಳೆ? ಅಗಾಥೆಯ ಮಗ ಕಾರ್ನೆಲಿಸ್ ಗೆ ತನ್ನ ತಂದೆಯ ಆಸ್ತಿ ಲಭಿಸುತ್ತಾ? ಎಂಬ ಪ್ರಶ್ನೆಗೆ ಚಿತ್ರದಲ್ಲಿ ಉತ್ತರ ಲಭಿಸುತ್ತೆ.

ಚಿತ್ರ : ಫಾಲನ್ ಲೀವ್ಸ್

ಫಿನ್ಲೆಂಡಿನ ನಿರ್ದೇಶಕ ಅಕಿ ಕೌರಿಸ್ಮಕಿ ನಿರ್ದೇಶನದ ಫಿನ್ನಿಶ್ ಭಾಷೆಯಲ್ಲಿ 2023ರಲ್ಲಿ ನಿರ್ಮಾಣವಾಗಿರುವ ಫಾಲನ್ ಲೀವ್ಸ್ ಒಟ್ಟು 81 ನಿಮಿಷಗಳ ಚಿತ್ರ. ಈ ಚಿತ್ರವು ಖ್ಯಾನೆ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ, ಮ್ಯೂನಿಚ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.  ಫಿನ್ನಿಶ್ ಭಾಷೆಯಲ್ಲಿ ತಯಾರಾದ ಫಾಲನ್ ಲೀವ್ಸ್ ಕುರಿತು ಹೇಳುವುದಾದರೆ ;

ಫಾಲನ್ ಲೀವ್ಸ್ ಚಿತ್ರದ ದೃಶ್ಯ.

ಫಿನ್ಲೆಂಡಿನ ಹೆಲ್ಸಿನ್ಕಿ ನಗರದಲ್ಲೊಂದು ದಿನ ಏಕಾಂಗಿತನ ಅನುಭವಿಸುತ್ತಿರುವ ಇಬ್ಬರು ಯುವಕ ಮತ್ತು ಯುವತಿ ಆಕಸ್ಮಿಕವಾಗಿ ಮುಖಾಮುಖಿಯಾಗುತ್ತಾರೆ. ಜೀವನದಲ್ಲಿ ಸಿಕ್ಕ ಮೊದಲ ಪ್ರೀತಿಯನ್ನೂ ತಮ್ಮದಾಗಿಸಿಕೊಳ್ಳಲು ಹಾತೊರೆಯುತ್ತಾರೆ. ಇದೇ ಸಂದರ್ಭದಲ್ಲಿ ಮೊದಲ ನೋಟದಲ್ಲೇ ತನ್ನನ್ನು ಸೆಳೆದಿದ್ದ ಪ್ರಿಯಕರನಿಗೆ ತನ್ನನ್ನು ಭೇಟಿ ಮಾಡಲು ಆಕೆ ನೀಡಿದ ದೂರವಾಣಿ ಸಂಖ್ಯೆಯು ಇಬ್ಬರ ಪ್ರೀತಿಗೆ ತೊಡಕಾಗುತ್ತೆ. ಅದ್ಹೇಗೋ ಇಬ್ಬರು ಮತ್ತೆ ಭೇಟಿಯಾಗಿ ಎಲ್ಲವೂ ಸರಿಯಾಯಿತು ಎನ್ನುವಷ್ಟರದಲ್ಲಿ, ಜೀವನಕ್ಕಾಗಿ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡುವ ಪ್ರಿಯಕರನ ವಿಪರೀತ ಮಧ್ಯಪಾನ ಚಟ ಪ್ರೀತಿಯಲ್ಲಿ ಬಿದ್ದಿದ್ದ ಮಹಿಳೆಯು ಕಂಡ ಕನಸಿಗೆ ಇನ್ನಿಲ್ಲದ ಘಾಸಿ ಮಾಡುತ್ತೆ. ಜೀವನದಲ್ಲಿ ಸಂತೋಷದ ಹಾದಿ ಹುಡುಕಿಕೊಳ್ಳುವ ಮಾರ್ಗದಲ್ಲಿ ಎದುರಾಗುವ ಅಡೆತಡೆಗಳನ್ನು ದಾಟಿ ಅವರಿಬ್ಬರು ಒಂದಾಗ್ತಾರಾ? ಎಂಬಲ್ಲಿಗೆ ಒಂದು ಸಾಮಾನ್ಯ ಕಥೆಯನ್ನು ಸೊಗಸಾಗಿ ಚಿತ್ರದಲ್ಲಿ ತೋರಿಸಿದ್ದಾರೆ ಫಿನ್ಲೆಂಡಿನ ನಿರ್ದೇಶಕ ಅಕಿ ಕೌರಿಸ್ಮಕಿ.

90 ವರ್ಷ ಪೂರೈಸಿದ ಕನ್ನಡ ಚಿತ್ರರಂಗ:

ಕನ್ನಡ, ಏಷಿಯನ್ ಸಿನಿಮಾ ಸ್ಪರ್ಧಾತ್ಮಕ ವಿಭಾಗ, ಸಮಕಾಲಿನ ವಿಶ್ವ ಸಿನಿಮಾ, ವಿಮರ್ಶಕರ ವಾರ, ಸಾಕ್ಷ್ಯ ಚಿತ್ರ ವಿಭಾಗ, ಜೀವನ ಚರಿತ್ರೆ, ಸಂಸ್ಮರಣೆ ಹಲವು ವಿಭಾಗಗಳಲ್ಲಿ ಚಿತ್ರಗಳು ಪ್ರದರ್ಶನ ಕಾಣಲಿದೆ. ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳುತ್ತಿದೆ. ಫೆ.29ರಂದು ಆರಂಭವಾಗಿರುವ ಬಿಐಐಇಎಸ್ ಸಿನಿಮಾ ಹಬ್ಬವು ಮಾ.7ರಂದು ವಿಧಾನಸೌಧದ ಬ್ಯಾಂಕ್ವಿಟ್ ಹಾಲ್ ನಲ್ಲಿ ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಚಲನಚಿತ್ರಗಳಿಗೆ ಪ್ರಶಸ್ತಿ ಪ್ರದಾನವಾಗಲಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ದೇಶದಲ್ಲಿ ಅತಿ ಕಡಿಮೆ ಮಾತನಾಡುವ ಅಪರೂಪದ ಭಾಷೆಗಳಾಗಿರುವ ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ, ಗಾಲೊ, ರಾಭ, ಸಂತಾಲಿ, ತಾಯಿಫಾಕೆ ಭಾಷೆಗಳ 9 ಚಿತ್ರಗಳು ಪ್ರದರ್ಶನವಾಗುತ್ತಿದೆ.

ಬೆಂಗಳೂರು 15ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಚಲನಚಿತ್ರ ಪ್ರದರ್ಶನ ಕುರಿತ ಕೈಪಿಡಿಯನ್ನು ಹಿರಿಯ ನಟಿ ಜಯಮಾಲಾ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ಹಿರಿಯ ಚಿತ್ರ ವಿಮರ್ಶಕ ಬಿ.ಎನ್.ಸುಬ್ರಮಣ್ಯ, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಿ.ಹಿಮಂತರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಲನಚಿತ್ರೋತ್ಸವದ ಎರಡನೆಯ ದಿನವಾದ ಇಂದು ಸಂವಿಧಾನದ ಮೌಲ್ಯಗಳು ಹಾಗೂ ಭಾರತೀಯ ಸಿನಿಮಾ ಕುರಿತಂತೆ ಡಾ.ಜಬ್ಬಾರ್ ಪಟೇಲ್ ಅವರಿಂದ ಒರಿಯನ್ ಮಾಲ್ ನಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ನಟಿ ಜಲಮಾಲ ಅವರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಡೈಲಿ ಬುಲಿಟಿನ್ ಕೈಪಿಡಿ ಬಿಡುಗಡೆ ಮಾಡಿದರು.

WhatsApp Join our WhatsApp Channel
Previous Post

Karnataka Caste Census Report | ಜಾತಿ ಗಣತಿ ವರದಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ : ಕೊನೆಗೂ ರಿಪೋರ್ಟ್ ಕೊಟ್ಟು ನಿಟ್ಟುಸಿರು ಬಿಟ್ಟ ಜಯಪ್ರಕಾಶ್ ಹೆಗಡೆ

Next Post

Slum Development Board Flats Allotment | ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ಇಂದು 36,789 ಮನೆಗಳ ಲೋಕಾರ್ಪಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ

Next Post
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಿರುವ ಫ್ಲಾಟ್ ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಗೊಳಿಸಲು ಆಗಮಿಸಿದಾಗ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತ ಕೋರಿದರು.

Slum Development Board Flats Allotment | ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ಇಂದು 36,789 ಮನೆಗಳ ಲೋಕಾರ್ಪಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ

ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿನ ಕಬ್ಬನ್ ಪೇಟೆ 11ನೇ ಅಡ್ಡರಸ್ತೆಯಲ್ಲಿನ ಸುಸ್ಥಿತಿಯಲ್ಲಿದ್ದ ಕಾಂಕ್ರಿಟ್ ರಸ್ತೆಯನ್ನು ಗುತ್ತಿಗೆದಾರರು ಜೆಸಿಬಿಯಿಂದ ಅಗೆದು ಹಾಕಿರುವುದು.

BW EXCLUSIVE | BBMP Concrete Road | ದುಡ್ಡಿನಾಸೆಗೆ ಚೆನ್ನಾಗಿದ್ದ ಕಬ್ಬನ್ ಪೇಟೆ ಕಾಂಕ್ರೀಟ್ ರಸ್ತೆ ಚಿಂದಿ ಚಿಂದಿ...!! ರಸ್ತೆ ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿದ್ಯಾ ಹಗಲು ದರೋಡೆ?

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026

BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

April 25, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026

BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

April 25, 2026

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group