Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

#100YearsOfMTR | 100 ವರ್ಷ ತಲುಪಿದ ಬೆಂಗಳೂರಿನ ಮಾವಳ್ಳಿ ಟಿಫನ್ ರೂಮ್ ಹೋಟೆಲ್ – MTR!!!

ಮೂರ್ನಾಲ್ಕು ತಲೆಮಾರಿನ ಗ್ರಾಹಕರಿಗೆ ತಾಜಾ ಹಾಗೂ ಶುಚಿ-ರುಚಿಯಾದ ತಿಂಡಿ ಉಣಬಡಿಸಿದ ಕೀರ್ತಿ ಎಂಟಿಆರ್ ಗೆ ಸಲ್ಲುತ್ತೆ | ಕರ್ನಾಟಕದಲ್ಲಿ ಪ್ರಥಮ ಫಾಸ್ಟ್ ಫುಡ್ ರೆಸ್ಟೋರೆಂಟ್ ಎಂದು ಹೆಸರು ಪಡೆಯಲು, ಎಮ್.ಟಿ.ಆರ್ ನ ಮಾಲೀಕ ಹರಿಶ್ಚಂದ್ರ ಮಯ್ಯರು ಕಾರಣಕರ್ತರಾದರು.

by Bengaluru Wire Desk
January 2, 2024
in Bengaluru Focus, BW Special, Public interest
Reading Time: 2 mins read
0
ಬೆಂಗಳೂರಿನ ಪ್ರಸಿದ್ಧ ಮಾವಳ್ಳಿ ಟಿಫನ್ ರೂಮ್ (ಎಂಟಿಆರ್) ಹೋಟೆಲ್ 100 ವರ್ಷ ತಲುಪಿದ ಹಿನ್ನಲೆಯಲ್ಲಿ ಹೋಟೆಲ್ ದ್ವಾರವನ್ನು ಹೂವಿನಿಂದ ಅಲಂಕಾರ ಮಾಡಿರುವ ಚಿತ್ರ.

ಬೆಂಗಳೂರಿನ ಪ್ರಸಿದ್ಧ ಮಾವಳ್ಳಿ ಟಿಫನ್ ರೂಮ್ (ಎಂಟಿಆರ್) ಹೋಟೆಲ್ 100 ವರ್ಷ ತಲುಪಿದ ಹಿನ್ನಲೆಯಲ್ಲಿ ಹೋಟೆಲ್ ದ್ವಾರವನ್ನು ಹೂವಿನಿಂದ ಅಲಂಕಾರ ಮಾಡಿರುವ ಚಿತ್ರ.

  • – ಶ್ಯಾಮ್ ಹೆಬ್ಬಾರ್.ಎಸ್

ಬೆಂಗಳೂರು, ಜ.2 www.bengaluruwire.com : ಒಂದು ಪ್ಲೇಟ್ ಇಡ್ಲಿ, ಮಸಾಲೆ ದೋಸೆ ತಿಂದು ಕಾಫಿ ಕುಡಿದ್ರೆ ಲಾಲ್ ಬಾಗ್ ನಲ್ಲಿ ವಾಕಿಂಗ್ ಮಾಡಿ ಬಂದು ಕೂತವರಿಗೆ ದಣಿವು ಹೋಗಿ ಇಡೀ ದಿನ ಉಲ್ಲಾಸಭರಿತವಾಗುತ್ತೆ. ಸಾವಿರಾರು ಮಂದಿಗೆ ಈ ರೀತಿ ಪ್ರತಿದಿನದ ಆರಂಭ ಇದೇ ಹೋಟೆಲ್ ನಿಂದ. ಲಕ್ಷಾಂತರ ಜನರಿಗೆ ತಮ್ಮ ಅನುಪಮ ನೆನಪಿನ ಗ್ಯಾಲರಿಯಲ್ಲಿ ಮಾವಳ್ಳಿ ಟಿಫನ್ ರೂಮ್ (MTR) ಎಂಬ ಹೋಟೆಲ್ ಒಂದು ಅಚ್ಚಳಿಯದ ಅನುಭವಾಗಿ ಉಳಿದಿದೆ. ರಾಜಧಾನಿಯ ಕೇಂದ್ರ ಭಾಗದಲ್ಲಿ ಈ ಹೋಟೆಲ್ ಶುರುವಾಗಿ ನೂರನೇ ವರ್ಷ ತಲುಪಿದೆ!!!

ಹೌದು 100 ವರ್ಷಗಳ ಹಿಂದೆ ಲಾಲ್ ಬಾಗ್ ಬಳಿ 1924ರಲ್ಲಿ ಆರಂಭವಾದ ಶುದ್ಧ ಶಾಖಾಹಾರಿ, ಫಲಾಹಾರಮಂದಿರ ಎಂಟಿಆರ್. ಒಂದು ಹೋಟೆಲ್ ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ 5 ವರ್ಷ ನಡೆದರೆ ಹೆಚ್ಚೆಚ್ಚು. ಅಂತಹುದರಲ್ಲಿ ಒಂದು ಶತಮಾನ ಪೂರೈಸಿದೆ ಎಂದಾದರೆ ಮೂರ್ನಾಲ್ಕು ತಲೆಮಾರುಗಳ ಕಾಲದ ಜನರ ಆಹಾರದ ಅವಶ್ಯಕತೆಗಳನ್ನು ಪೂರೈಸಿ ಆಗಿನ ಸಂಸ್ಕೃತಿ, ಕಾಲಘಟ್ಟಕ್ಕೆ ತಕ್ಕಂತೆ ನಾಗರೀಕ ಸಮಾಜದಲ್ಲಿ ಬೆಸೆದುಕೊಂಡಿರುವ ಕಾರಣದಿಂದಲೇ ಎಂಟಿಆರ್ ದೇಶ ವಿದೇಶಗಳಲ್ಲೂ ಮನೆ ಮಾತಾಗಿ ಉಳಿದಿದೆ. ಅತಿಥಿ ಸತ್ಕಾರ ಮಾಡುತ್ತಲೇ ಒಂದೀಡಿ ಸಮುದಾಯವನ್ನು ರುಚಿ- ಶುಚಿಯಾದ ತಿಂಡಿ ತಿನಿಸು ನೀಡುತ್ತಾ ಪೋಷಿಸುವುದು ಸಾಮಾನ್ಯದ ಮಾತಲ್ಲ.

ಎಂಟಿಆರ್ ಹೋಟೆಲ್ 100ನೇ ವರ್ಷದ ಸಂಭ್ರಮಕ್ಕಾಗಿ ಜ.2ರಂದು ಬೆಳಗ್ಗೆ ಹೋಟೆಲ್ ದ್ವಾರವನ್ನು ಹೂವಿನಿಂದ ಅಲಂಕರಿಸಲಾಗಿತ್ತು.

ಲಾಲ್ ಬಾಗ್ ಎಂಟಿಆರ್ ನಲ್ಲಿ ಪೂರಿ, ವಡೆ ಬಿಟ್ಟರೆ ಉಳಿದೆಲ್ಲ ತಿಂಡಿಗಳನ್ನು ತುಪ್ಪದಲ್ಲೇ ಮಾಡುವುದು ವಿಶೇಷ. ಚಿಕೋರಿ ರಹಿತ ಕಾಫಿ, ತುಪ್ಪದ ಜೊತೆಗಿನ ರವೆಇಡ್ಲಿ, ಗಮ ಗಮಿಸುವ ತುಪ್ಪದ ದೋಸೆ, ವಾರಕ್ಕೊಮ್ಮೆ ಮಾಡುವ ಸಿಹಿ ತಿಂಡಿ ಚಂದ್ರಾಹಾರ ಲಕ್ಷಾಂತರ ತಿಂಡಿ ಪ್ರಿಯರ ರುಚಿಗೆ ಫಿದಾ ಆಗುವಂತೆ ಮಾಡಿದೆ. ದಕ್ಷಿಣ ಭಾರತದ ಅದರಲ್ಲೂ ಉಡುಪಿ ಶೈಲಿಯ ಶುಚಿ-ರುಚಿಯಾದ ಊಟಕ್ಕೆ ಕುಟುಂಬ, ಸ್ನೇಹಿತರ ಸಮೇತ ಬಂದು ಊಟ ಮಾಡಿ ಹೋಗುತ್ತಾರೆ. ಬೆಳಗ್ಗೆ 6.30ರಿಂದ ರಾತ್ರಿ 8.30ರ ತನಕ ಮಧ್ಯೆ ಕೆಲವು ಸಮಯದ ಹೋಟೆಲ್ ಬಾಗಿಲು ಹಾಕಿರುವುದು ಬಿಟ್ಟರೆ ವಾರದ ಆರು ದಿನವೂ ಬೆಂಗಳೂರಿನ ಜನರ ಊಟ ತಿಂಡಿಯ ಅವಶ್ಯಕತೆಯನ್ನು ಪೂರೈಸುತ್ತಾ ಬಂದಿದೆ. ಸೋಮವಾರ ಹೋಟೆಲ್ ಗೆ ರಜಾದಿನವಾಗಿದೆ.

ಎಂಟಿಆರ್ ವಿಧ ವಿಧವಾದ ತಿಂಡಿ, ತಿನಿಸು, ಮಸಾಲೆ ಪದಾರ್ಧಗಳನ್ನು ತಯಾರಿಸುವ ತನ್ನ ಬ್ರಾಂಡ್ ನಡಿ ದೊಡ್ಡ ಆಹಾರ ಕಾರ್ಖಾನೆಯನ್ನು ಸಾವಿರಾರು ಜನರಿಗೆ ಉದ್ಯೋಗ ನೀಡಿತು. ಈಗ್ಗೆ 2007ರಲ್ಲಿ ನಾರ್ವೆ ರಾಷ್ಟ್ರ ಓರ್ಕ್ಲಾ ಎಂಬ ಹೂಡಿಕೆ ಕಂಪನಿಯು ಎಂಟಿಆರ್ ಫುಡ್ಸ್ ಕಂಪನಿಗೆ ನೂರಾರು ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಿತು. ಆದರೆ ಎಂಟಿಆರ್ ಲಾಲ್ ಬಾಗ್ ನಲ್ಲಿರುವ ತನ್ನ ಮೂಲ ಎಂಟಿಆರ್ ಹೋಟೆಲ್ ಅನ್ನು ಹಾಗೆ ಉಳಿಸಿಕೊಂಡು ಎಂದಿನಂತೆ ಎಂಟಿಆರ್ ಬ್ರಾಂಡ್ ನಡಿ ಬೆಂಗಳೂರಿನಲ್ಲೇ ಇತರ 8 ಬ್ರಾಂಚ್ ಗಳನ್ನು ತೆರೆದಿದೆ. ಇಷ್ಟೆ ಅಲ್ಲದೆ ಉಡುಪಿ, ಹಾಸನ ಹೆದ್ದಾರಿ ಬೆಳ್ಳೂರು ಕ್ರಾಸ್ ಬಳಿ ಮತ್ತು ವಿದೇಶದ ಲಂಡನ್, ಸಿಂಗಾಪುರ, ದುಬೈ, ಮಲೇಷ್ಯಾ, ಅಮೆರಿಕಾದ ಸಿಯಾಟೆಲ್ ನಲ್ಲೂ ಎಂಟಿಆರ್ ಹೋಟೆಲ್ ಜನರಿಗೆ ದೇಶೀಯ ಸವಿರುಚಿಯನ್ನು ಉಣಬಡಿಸುತ್ತಿದೆ. ನೇಪಾಳದಲ್ಲಿ ಸದ್ಯದಲ್ಲೇ ಹೋಟೆಲ್ ಆರಂಭವಾಗಲಿದೆ ಎಂದು ಎಂಟಿಆರ್ ಮೂಲಗಳು ತಿಳಿಸಿವೆ.

1924ರಲ್ಲಿ ಯಜ್ಞನಾರಾಯಣ ಮಯ್ಯ ಹಾಗೂ ಪರಮೇಶ್ವರ ಮಯ್ಯ ಸಹೋದರರು ಆರಂಭಿಸಿದ ಹೋಟೆಲ್ ಅನ್ನು ಇದೀಗ ಮೂರನೇ ತಲೆಮಾರಿನ ಹೇಮಾಮಾಲಿನಿ ಮಯ್ಯ ಅವರು ಮುನ್ನೆಡಿಸಿಕೊಂಡು ಹೋಗುತ್ತಿದ್ದಾರೆ. ಎಂಟಿಆರ್ ಹೋಟೆಲ್ ದೇಶೀಯವಾಗಿ 600ಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ.

ಒಂದು ವರ್ಷ ಶತಮಾನ ಪೂರೈಸಿದ ಎಂಟಿಆರ್ ಬಗ್ಗೆ ಇನ್ನು ಮೂರ್ನಾಲ್ಕು ತಿಂಗಳ ಒಳಗಾಗಿ ದೊಡ್ಡ ಕಾರ್ಯಕ್ರಮ ನಡೆಸಿ, ಅದರಲ್ಲಿ ಈ ಹೋಟೆಲ್ ಬೆಳೆದು ಬಂದ ರೀತಿ, ಆಯಾ ಕಾಲಮಾನದಲ್ಲಿ ಗಣ್ಯರು, ಪ್ರಮುಖ ಗ್ರಾಹಕರು ಭೇಟಿ ಕೊಟ್ಟಾಗಿನ ಕ್ಷಣಗಳು ಮತ್ತಿತರ ವಿವರಗಳನ್ನು ಒಳಗೊಂಡು ಪುಸ್ತಕವನ್ನು ಹೊರತರುವ ತಯಾರಿ ನಡೆದಿದೆ. ಅದೇ ರೀತಿ 100 ವರ್ಷ ಹಳೆಯದಾದ ಲಾಲ್ ಬಾಗಿನ ಬಳಿಯಿರುವ ಎಂಟಿಆರ್ ಕಟ್ಟಡವನ್ನು ಗ್ರಾಹಕರಿಗೆ ತೊಂದರೆಯಾಗದಂತೆ ಅಲ್ಲಲ್ಲಿ ನವೀಕರಣ ಮಾಡುವ ಕಾರ್ಯವು ನಡೆಯುತ್ತಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ.

ರವೇ ಇಡ್ಲಿ ರೂವಾರಿ ಎಂಟಿಆರ್ :

ಎರಡನೇ ವಿಶ್ವ ಯುದ್ಧ ನಡೆದ ಸಂದರ್ಭದಲ್ಲಿ,  ಅಕ್ಕಿ ಸಿಗುವುದು ಬಹಳ ದುರ್ಲಭವಾಗಿತ್ತು. ಇದರಿಂದಾಗಿ ಇಡ್ಲಿ, ತಯಾರಿಸಲು ಬೇರೆ ಪದ್ಧತಿಯನ್ನು ಹುಡುಕಿಕೊಳ್ಳಬೇಕಾಯಿತು. ಆಗ ಎಮ್.ಟಿ.ಆರ್, ಸಣ್ಣಗೆ ಒಡೆದ ಗೋಧಿಯ ರವೆಯಿಂದ ಇಡ್ಲಿ ಮಾಡಿ ಬಡಿಸುತ್ತಿದ್ದರು. ರವೆಯಿಂದ ಮಾಡಿದ್ದ ಇಡ್ಲಿಗಳು ಜನರಿಗೆ ಹೆಚ್ಚು ಪ್ರಿಯವಾಯಿತು. ರವೆಇಡ್ಲಿ, ಅದರ ಮೇಲೆ ಸವರಿದ ತುಪ್ಪ, ಮತ್ತು ಚಟ್ಣಿ, ಸಾಗು, ದಿಢೀರನೆ ಪ್ರಸಿದ್ಧಿಯಾಯಿತು. ಕರ್ನಾಟಕದಲ್ಲಿ ಪ್ರಥಮ ಫಾಸ್ಟ್ ಫುಡ್ ರೆಸ್ಟೋರೆಂಟ್ ಎಂದು ಹೆಸರು ಪಡೆಯಲು, ಎಮ್.ಟಿ.ಆರ್ ನ ಮಾಲೀಕ ಹರಿಶ್ಚಂದ್ರ ಮಯ್ಯಾರವರು, ಕಾರಣಕರ್ತರಾದರು. ಕೇವಲ 7 ಗಂಟೆಗಳಲ್ಲಿ 21,000 ಸಾವಿರ ಇಡ್ಲಿ ಗಳನ್ನು ಮಾಡಿ ಗಿರಾಕಿಗಳಿಗೆ ಬಡಿಸಿದ್ದರು.

ಜಗತ್ತಿನ 150 ಐತಿಹಾಸಿಕ ರೆಸ್ಟೋರೆಂಟ್ ಪಟ್ಟಿಯಲ್ಲಿ ಎಂಟಿಆರ್ :

ಟೇಸ್ಟ್ ಅಟ್ಲಾಸ್ ಎಂಬ ಸಂಸ್ಥೆ ಇತ್ತೀಚೆಗೆ ಜಗತ್ತಿನ 150 ಐತಿಹಾಸಿಕ ರೆಸ್ಟೋರೆಂಟ್ ಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಎಂಟಿಆರ್ ಹೋಟೆಲ್ 32ನೇ ಪಟ್ಟಿಯಲ್ಲಿದ್ದು ಹಾಗೂ ಇಲ್ಲಿನ ಪ್ರಸಿದ್ಧವಾದ ರವೆ ಇಡ್ಲಿ ತಿಂಡಿಯ ಬಗ್ಗೆಯೂ ತಿಳಿಸಿದೆ. ಮೈಸೂರು ನಗರದಲ್ಲಿನ ರಕ್ಷಣಾ ಇಲಾಖೆಯ “ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟೊರಿ”(DFRL) ಯಿಂದ ‘ಫುಡ್ ಪ್ಯಾಕೇಜ್ ಟೆಕ್ನೋಲಜಿ,’ ಯನ್ನು ಎಂಟಿಆರ್ ಬಹು ಹಿಂದೆಯೇ ಖರೀದಿ ಮಾಡಿತ್ತು. ಆಹಾರ ಪ್ಯಾಕ್ ಮಾಡುವಾಗ ‘ಪ್ರಿಸರ್ವೇಟರ್’ಗಳನ್ನು ಸೇರಿಸದ ರೀತಿ ಆಹಾರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಭಾರತದ ಪ್ರಥಮ ‘ಪ್ರಮಾಣಿತ, ಪ್ರೋಸೆಸ್ಡ್ ಫುಡ್ ಕಂಪೆನಿ,’ ಎಂಬ ಹೆಗ್ಗಳಿಕೆಯೂ ಎಮ್.ಟಿ.ಆರ್ ಸಂಸ್ಥೆಯದ್ದಾಗಿದೆ.

ಒಂದು ವರ್ಷವಿಡೀ ಎಂಟಿಆರ್ 100ರ ಸಂಭ್ರಮ ಆಚರಣೆ :

“ಹೋಟೆಲ್ ಉದ್ಯಮದಲ್ಲಿ ಮಾವಳ್ಳಿ ಟಿಫನ್ ರೂಮ್ ಒಂದು ಶತಮಾನದ ಕಾಲ ತನ್ನ ಗ್ರಾಹಕರಿಗೆ ವಿವಿಧ ಕಾಲಘಟ್ಟದಲ್ಲಿ ಗುಣಮಟ್ಟ, ಶುಚಿ-ರುಚಿಯಾದ ಆಹಾರವನ್ನು ಒದಗಿಸುತ್ತಾ ಬಂದಿರುವುದು ನಿಜಕ್ಕೂ ನಮಗೆ ಖುಷಿಯಾಗಿದೆ. ಈ 100 ವರ್ಷದಲ್ಲಿ ದೇಶ-ವಿದೇಶಗಳ ಲಕ್ಷಾಂತರ ಗ್ರಾಹಕರು ನಮ್ಮ ಅಡುಗೆಯ ಸವಿಯನ್ನು ಸವಿದು ಸಂತೋಷ ವ್ಯಕ್ತಪಡಿಸಿದ್ದಾರೆ. ನಮಗೆ ಬೆಂಬಲ ನೀಡಿದ್ದಾರೆ. ಅವರಿಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಎಂಟಿಆರ್ 100 ವರ್ಷದ ಸಂಭ್ರಮವನ್ನು ಒಂದು ವರ್ಷವಿಡೀ ಹಮ್ಮಿಕೊಳ್ಳಲು ತಯಾರಿ ನಡೆಯುತ್ತಿದೆ. ಸಂಸ್ಥೆಯು ಬೆಳೆದು ಬಂದ ಬಗೆಯ ಬಗ್ಗೆ ವಿಭಿನ್ನವಾದ ಪುಸ್ತಕವನ್ನು ಹೊರತರುತ್ತಿದ್ದೇವೆ. ಎಂಟಿಆರ್ 100 ವರ್ಷ ಪೂರೈಸಲು ಪ್ರಮುಖ ಕಾರಣ ಶಿಸ್ತು ಅಳವಡಿಸಿಕೊಂಡು ಗುಣಮಟ್ಟದ ಆಹಾರ, ರಾಜಿಯಿಲ್ಲದೆ ಕೆಲಸ ಮಾಡುತ್ತಾ ಬಂದಿರುವುದಾಗಿದೆ. ನಮ್ಮ ಬಲದ ಮೇಲೆ ನಂಬಿಕೆಯಿಟ್ಟು ಅದರ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ.”

– ಹೇಮಾಮಾಲಿನಿ, ಎಂಟಿಆರ್ ಮಾಲೀಕರು

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

BBMP Property Tax | ಆಸ್ತಿ ತೆರಿಗೆ ಬಾಕಿಯಿದ್ಯಾ? : ಬಿಬಿಎಂಪಿ ಕಾಯ್ದೆ 2020 ರ ಪ್ರಕಾರ ಅಂತಹ ಸ್ಥಿರಾಸ್ತಿ ಮಾರಾಟ ಮಾಡಲಿದೆ ಪಾಲಿಕೆ ; ಹೊಸ ಎಸ್ ಎಂಎಸ್ ಸಂದೇಶದಲ್ಲೇನಿದೆ?

Next Post

Karnataka Forest Land Encroachment | ರಾಜ್ಯದಲ್ಲಿ 2 ಲಕ್ಷ ಎಕರೆ ಅರಣ್ಯ ಒತ್ತುವರಿ : ಶಿವಮೊಗ್ಗ, ಉತ್ತರ ಕನ್ನಡದಲ್ಲೇ ಹೆಚ್ಚು

Next Post

Karnataka Forest Land Encroachment | ರಾಜ್ಯದಲ್ಲಿ 2 ಲಕ್ಷ ಎಕರೆ ಅರಣ್ಯ ಒತ್ತುವರಿ : ಶಿವಮೊಗ್ಗ, ಉತ್ತರ ಕನ್ನಡದಲ್ಲೇ ಹೆಚ್ಚು

BBMP News | ಮಹದೇವಪುರ ವಲಯದಲ್ಲಿ "ಬಾಗಿಲಿಗೆ ಬಂತು ಸರ್ಕಾರ - ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮ : ನಾಗರೀಕರಿಂದ ಅಹವಾಲು ಸ್ವೀಕರಿಸಿದ ಡಿಸಿಎಂ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group