Thursday, June 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

HAL- BMTC #PushpakaVimana | ಪ್ರಾಜೆಕ್ಟ್ ಪುಷ್ಪಕ ವಿಮಾನ : ಒಂಟಿ ಹೋರಾಟದಿಂದ ಎಚ್ಎಎಲ್ ಗಾಗಿ 10 ಬಿಎಂಟಿಸಿ ಬಸ್ಸುಗಳ ಸೇವೆ ಒದಗಿಸಿದ ಸಾಮಾನ್ಯ ನೌಕರ !!

HAL – BMTC ಎರಡಕ್ಕೂ ಅನುಕೂಲ ಕಲ್ಪಿಸಿದ ಸಂಸ್ಥೆಯ ಸಾಮಾನ್ಯ ನೌಕರನ ಆಲೋಚನೆ | ಎರಡು ವರ್ಷಗಳ ಪ್ರಯತ್ನದ ಫಲದಿಂದ ಇಂದು 10 ಮಾರ್ಗದ 10 ಬಸ್ ನಲ್ಲಿ ಸಾಗುತ್ತಿದ್ದಾರೆ 400 ಎಚ್ಎಎಲ್ ನೌಕರರು

by Bengaluru Wire Desk
July 19, 2022
in Bengaluru Focus, BW Special, Public interest
Reading Time: 2 mins read
0

ಬೆಂಗಳೂರು, ಜು.3 www.bengaluruwire.com : ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (HAL) ಸಂಸ್ಥೆಯ ಸಾಮಾನ್ಯ ಸಿಬ್ಬಂದಿ ತಮ್ಮ ಸಹದ್ಯೋಗಿಗಳು ಕಚೇರಿಗೆ ಬಂದು ಹೋಗಲು ಪರಿತಪಿಸುತ್ತಿರುವುದನ್ನು ಮನಗೊಂಡು ಏಕಾಂಗಿಯಾಗಿ ಹೋರಾಟ ಮಾಡಿ, ಬಿಎಂಟಿಸಿಯಿಂದ ವಿವಿಧ ರೂಟ್ ಗಳಲ್ಲಿ ಬಸ್ ಓಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬಿಎಂಟಿಸಿಗೆ ಆದಾಯ ಮೂಲವೊಂದನ್ನು ಕಲ್ಪಿಸಿ, ಇನ್ನೊಂದೆಡೆ ಬಸ್ ಸೌಕರ್ಯವಿಲ್ಲದ ನೂರಾರು ಎಚ್ಎಎಲ್ ನೌಕರರಿಗೆ ಅನುಕೂಲವಾಗುವಂತಾಗಿದೆ.

ಇಂತಹ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದು ಹಳೇ ವಿಮಾನ ನಿಲ್ದಾಣದ ಬಳಿಯ ಹೆಲಿಕಾಪ್ಟರ್ ಡಿವಿಷನ್ ನಲ್ಲಿ ಕೆಲಸ ಮಾಡುತ್ತಿರುವ ಅಶೋಕ್. ಇಂತಹ ಸಾಹಸಕ್ಕೆ ಅಶೋಕ್ ಕೈಹಾಕಲು ಪ್ರಮುಖ ಕಾರಣವೆಂದರೆ, 8 ವರ್ಷಗಳ ಹಿಂದೆಯೇ ಎಚ್ಎಎಲ್ ತನ್ನ ಕಾರ್ಮಿಕರಿಗೆ ತಾವಿರುವ ಸ್ಥಳದಿಂದ ವಿವಿಧ ಕಚೇರಿಗಳಿಗೆ ಕರೆತರುತ್ತಿದ್ದ 50 ಬಸ್ ವ್ಯವಸ್ಥೆಯನ್ನು ರದ್ದುಪಡಿಸಿ ಕೇವಲ ಸಾರಿಗೆ ಭತ್ಯೆ ನೀಡಿ ಕೈತೊಳೆದುಕೊಂಡಿತ್ತು. ಇದರಿಂದ ನಗರದ ಎಚ್ಎಎಲ್ ನ 13 ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ 2,500ಕ್ಕೂ ಹೆಚ್ಚು ಕಾರ್ಮಿಕರು ಬಸ್ ಬದಲು, ಟಿಟಿ, ದ್ವಿಚಕ್ರ ವಾಹನ ಮತ್ತಿತರ ವಾಹನಗಳಲ್ಲಿ ಬಂದು ಹೋಗುತ್ತಿದ್ದರು. ಕಾರ್ಮಿಕರ ಹಾಜರಾತಿ ಐದಾರು ನಿಮಿಷ ತಡವಾದರೂ ಆರ್ಥಿಕ ತೊಂದರೆಯಾಗುತ್ತಿತ್ತು. ಕೆಲವರು ತಮ್ಮ ಸ್ವಂತ ವಾಹನಗಳಲ್ಲಿ ಬರುವಾಗ ಅಪಘಾತಗಳಿಂದ ಕೈಕಾಲು ಕಳೆದು ಕೊಂಡರೆ, ಇನ್ನು ಕೆಲವರು ಅಪಘಾತದಿಂದ ಸಾವನ್ನಪ್ಪಿದ್ದರು. ಆದ್ದರಿಂದ ಸಂಸ್ಥೆಯ ನೌಕರರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಗೆ ಏನಾದರೂ ಮಾಡಬೇಕೆಂದು ಪಣತೊಟ್ಟರು ಅಶೋಕ್.

ನೆರೆಯ ಸಹೋದರ ಸಂಸ್ಥೆಗಳಾದ ಬಿಇಎಂಎಲ್ (BEML), ಬಿಇಎಲ್ (BEL), ಐಟಿಐ (ITI ) ಕಾರ್ಖಾನೆಯ ಉದ್ಯೋಗಿಗಳು ಇಂದಿಗೂ ತಮ್ಮ ಸಂಸ್ಥೆಯ ಸಾರಿಗೆ ವ್ಯವಸ್ಥೆಯ ಮೂಲಕ ಗೌರವಯುತವಾಗಿ ಕಾರ್ಖಾನೆಗೆ ಬರುತ್ತಿರುವುದನ್ನು ಹಲವು ವರ್ಷಗಳಿಂದ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅಶೋಕ್ ಅವರು ಕಾರ್ಖಾನೆಗೆ ಹಾಗೂ ಕಾರ್ಮಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ಸಿದ್ಧಪಡಿಸತೊಡಗಿದರು.

ಬಿಎಂಟಿಸಿಯು ನೂತನ ಪುಷ್ಪಕ ವಿಮಾನ ಸೇವೆ ಒದಗಿಸಿದ ಬಸ್ ಮುಂಭಾಗದಲ್ಲಿ ನಿಂತಿರುವ ಎಚ್ಎಎಲ್ ಉದ್ಯೋಗಿಗಳು. ಎಂ.ಎನ್.ಅಶೋಕ್ ಕೂಡ ಚಿತ್ರದಲ್ಲಿದ್ದಾರೆ. (ಎಡದಿಂದ ಬಲಕ್ಕೆ ಆರನೆಯವರು)

ಪ್ರಾಜೆಕ್ಟ್ ಪುಷ್ಪಕ ವಿಮಾನ ಕಾರ್ಯಗತ ಆಗಿದ್ದು ಹೇಗೆ ?

ಆಗ ಹುಟ್ಟಿದ್ದೇ “ಪುಷ್ಪಕ ವಿಮಾನ” ಪ್ರಾಜೆಕ್ಟ್. “ಪುಷ್ಪಕ” ಅಂದರೆ ಈ ಹಿಂದೆ ಬಿಎಂಟಿಸಿ ಒದಗಿಸುತ್ತಿದ್ದ ಬಸ್ ಸೇವೆಯಾಗಿತ್ತು. ಇನ್ನು “ವಿಮಾನ” ಎಂಬುದು, ಎಚ್ಎಎಲ್ ಸಂಸ್ಥೆಯ ವಿಮಾನ ತಯಾರಿಕೆಯನ್ನು ಸಂಕೇತಿಸುತ್ತದೆ. ಈ ಹೆಸರಿನಲ್ಲಿ 2020ರ ಕೋವಿಡ್ ಪ್ರಾರಂಭವಾದ ಸಂದರ್ಭದಲ್ಲಿ ಅಶೋಕ್, ಸಂಸ್ಥೆಯ ಸಿಬ್ಬಂದಿ ಯಾವ ಕಡೆಗಳಿಂದ ಯಾವ ಸಾರಿಗೆ ಬಳಸಿ ಕಚೇರಿಗೆ ಬರುತ್ತಿದ್ದಾರೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದರು. ಬಹಳಷ್ಟು ಮಂದಿ ಟೆಂಟೋ ಟ್ರಾವಲರ್ ಗಳಲ್ಲಿ ಬರುತ್ತಿದ್ದರು. ಇನ್ನು ಕೆಲವರು ಕಾರು, ದ್ವಿಚಕ್ರ ವಾಹನ ಸೇರಿದಂತೆ ಮೊದಲಾದ ವಾಹನಗಳ ಮೂಲಕ ಸಂಸ್ಥೆಗೆ ಬರುತ್ತಿರುವುದನ್ನು ಖಚಿತಪಡಿಸಿಕೊಂಡು, ಬಿಎಂಟಿಸಿ ಮೂಲಕ ವಿವಿಧ ರೂಟ್ ಗಳಲ್ಲಿ ಸಮೀಕ್ಷೆ ನಡೆಸಿ ಬಸ್ ವ್ಯವಸ್ಥೆ ಹೇಗೆ ಕಾರ್ಯಗತ ಮಾಡಬಹುದೆಂದು ಯೋಜನೆ ರೂಪಿಸಿಕೊಂಡರು.

ಅದಕ್ಕೆ ಸರಿಯಾಗಿ ಆರು ತಿಂಗಳ ಹಿಂದೆ ಒಂದೇ ಸಮನೆ ತೈಲಬೆಲೆ ಏರಿಕೆಯಾಗುತ್ತಿದ್ದ ಕಾರಣ ಟೆಂಪೋ ಟ್ರಾವಲರ್ ನವರು ಮಾಸಿಕ ಶುಲ್ಕವನ್ನು 2,500ರಿಂದ 3,000 ರೂ.ಗಳಿಗೆ ಏರಿಸಿದರು. ಇದರಿಂದ ಎಚ್ಎಎಲ್ ನೌಕರರ ಮೇಲೆ ಹೆಚ್ಚಿನ ಹೊರೆಯಾಯ್ತು. ಆಗ ಬಿಎಂಟಿಸಿ ಸಂಸ್ಥೆಯಲ್ಲಿ ಚಾಲ್ತಿಯಲ್ಲಿದ್ದ ನಿಗಧಿತ ಬಸ್ ಸೇವೆ (Premium Dedicated Bus Service)ಯ ಬಗ್ಗೆ ತಿಳಿದು, ಆ ಸೇವೆಯಲ್ಲಿ ಪ್ರತಿ ಎಚ್ಎಎಲ್ ಉದ್ಯೋಗಿಗೆ ಮಾಸಿಕ 2,500 ರೂ. ಬಸ್ ಪಾಸ್ ನಲ್ಲಿ, ಮನೆಯಿಂದ ಕಚೇರಿಗೆ ಹೋಗಿ ಬರಬಹುದಲ್ಲದೆ ವೋಲ್ವೋ ಬಸ್ ಬಿಟ್ಟು ಬೇರೆ ಬಿಎಂಟಿಸಿಯ ಎಲ್ಲಾ ಬಸ್ ಗಳಲ್ಲಿ ಓಡಾಡಬಹುದು.

10 ಲಕ್ಷ ರೂಪಾಯಿಗಳ ವೈಯಕ್ತಿಕ ಗುಂಪು ಅಪಘಾತ ವಿಮೆ ಸೌಲಭ್ಯವಿರುವ ಯೋಜನೆಯೂ ಲಭ್ಯವಾಗುತ್ತದೆ ಎಂದು ಈ ಉದ್ಯೋಗಿಗಳಿಗೆ ತಿಳಿಸಿದರು. ಟಿಟಿ ಬಳಸುತ್ತಿದ್ದ ಉದ್ಯೋಗಿಗಳಿಗೆ ಬಿಎಂಟಿಸಿ ಬಸ್ ಸೇವೆಯ ಪ್ರಯೋಜನಗಳನ್ನು ವಿವರಿಸಿದರು. ಇದರಿಂದ ಈ ವರ್ಷದ ಏಪ್ರಿಲ್ ಒಂದರಿಂದ ಬಿಎಂಟಿಸಿಯ ಮೊದಲ ರೂಟ್ ಬಸ್ಸು ಸೇವೆ ಆರಂಭವಾಗಿ, ಸದ್ಯ 10 ರೂಟ್ ಗಳಲ್ಲಿ 10 ಬಸ್ ಗಳು ಸಂಚರಿಸುತ್ತಿದೆ. ಇದರಲ್ಲಿ 400 ಎಚ್ಎಎಲ್ ಉದ್ಯೋಗಿಗಳು ಆರಾಮಾಗಿ ಕಚೇರಿಗೆ ಬಂದು ಹೋಗುತ್ತಿದ್ದಾರೆ. ಬಿಎಂಟಿಸಿ ಸಂಸ್ಥೆಗೆ ಇದರಿಂದ ಮಾಸಿಕ 10.52 ಲಕ್ಷ ರೂ. ಆದಾಯ ಹರಿದು ಬರುತ್ತಿದೆ.

ಪ್ರಾಜೆಕ್ಟ್ ಪುಷ್ಕಕ ವಿಮಾನ ರೂವಾರಿ ಏನಂತಾರೆ ?

ಪ್ರಾಜೆಕ್ಟ್ ಪುಷ್ಪಕ ವಿಮಾನ ರೂವಾರಿ ಎಂ.ಎನ್.ಅಶೋಕ್ ಅವರನ್ನು ಸಂಸ್ಥೆಯ ಸಹದ್ಯೋಗಿಗಳು ಸನ್ಮಾನಿಸಿದ ಸಂದರ್ಭ.

“ಎಚ್ಎಎಲ್ ನಲ್ಲಿನ ನಮ್ಮ ಸಹದ್ಯೋಗಿಗಳು ಸಂಸ್ಥೆಯಲ್ಲಿ ಬಸ್ ಸಾರಿಗೆ ಸೌಲಭ್ಯ ನಿಲ್ಲಿಸಿದಾಗಿನಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಕರೋನಾ ಸಂಕಷ್ಠ ಕಾಲದಲ್ಲಿ ಕಚೇರಿಗೆ ಬಂದು ಹೋಗುವುದು ಒಂದು ಸವಾಲಾಗಿತ್ತು. ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕು ಎಂದು ಮುನ್ನಡಿಯಿಟ್ಟಿದ್ದಕ್ಕೆ ಪುಷ್ಪಕ ವಿಮಾನ ಯೋಜನೆ ರೂಪುಗೊಂಡು ಯಶಸ್ವಿಯಾಗಿ ಅನುಷ್ಟಾನವಾಗಿದೆ. ತಮ್ಮ ಸ್ನೇಹಿತರೊಬ್ಬರ ಕಂಪನಿಯನ್ನು ಬಿಎಂಟಿಸಿ ಸೇವೆ ಪಡೆಯುವ ಸಲುವಾಗಿ ಸೇವಾದತರು ಎಂದು ಸಾರಿಗೆ ಸಂಸ್ಥೆಯಲ್ಲಿ ನೋಂದಾಯಿಸಿ ಎಚ್ಎಎಲ್ ಸಹದ್ಯೋಗಿಗಳಿಗೆ ಬಸ್ ಸೇವೆ ನೀಡಿದ್ದೇವೆ. ಇನ್ನು 2,500 ಉದ್ಯೋಗಿಗಳಿಗೆ ಬಿಎಂಟಿಸಿ ಬಸ್ ಅವಶ್ಯಕತೆಯಿದೆ. ಅದು ಯಶಸ್ವಿಯಾದರೆ ನನ್ನ ಶ್ರಮ ಸಾರ್ಥಕವಾದಂತೆ.”

– ಅಶೋಕ್.ಎಂ.ಎನ್, ಎಚ್ಎಎಲ್ ಹೆಲಿಕಾಪ್ಟರ್ ವಿಭಾಗ ನೌಕರ

ಏಪ್ರಿಲ್ ತಿಂಗಳಿನಲ್ಲಿ ಮೊದಲ ಬಸ್ಸು ಹೊರಡುವುದಕ್ಕೆ ಎಂಟರಿಂದ ಹತ್ತು ತಿಂಗಳುಗಳ ಶ್ರಮದ ಸಮಯ ಹಿಡಿದಿತ್ತು. ಅಶೋಕ್ ಅವರ ಶ್ರಮ ಫಲನೀಡತೊಡಗಿತು. ಕಾರ್ಖಾನೆಯ ಅಧಿಕಾರಿಗಳು ಹಾಗೂ ಕಾರ್ಮಿಕರೆಲ್ಲರೂ ಅಶೋಕ್ ಅವರ ಕಾರ್ಮಿಕ ಕಾಳಜಿಯ ಕೆಲಸವನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಕ್ರಮೇಣವಾಗಿ ಕಾರ್ಖಾನೆಯ ಇತರ ಕಾರ್ಮಿಕರೂ ಕೂಡಾ ನಮ್ಮ ಮಾರ್ಗಕ್ಕೂ ಬಸ್ಸು ಬೇಕೆಂದು ಅಶೋಕ್ ಬಳಿ ಮನವಿ ಮಾಡತೊಡಗಿದ್ದಾರೆ.

“ಪ್ರಾಜೆಕ್ಟ್ ಪುಷ್ಪಕ ವಿಮಾನದ ಬಿಎಂಟಿಸಿ ಬಸ್ ಸೇವೆಯಿಂದ ಈ ಬಸ್ ನಲ್ಲಿ ಓಡಾಡುವವರೆಲ್ಲರಿಗೂ ಸಾಕಷ್ಟು ನೆಮ್ಮದಿ ಸಿಕ್ಕಿದೆ. ಈ ಟೆಂಪೋಟ್ರಾವಲರ್ ಗಾಡಿಯಲ್ಲಿ ಡೀಸೆಲ್ ರೇಟ್ ಹೆಚ್ಚುಕಮ್ಮಿಯಾದಂತೆ ತಿಂಗಳ ರೇಟ್ ಕೂಡ ಎಲ್ಲರಿಗೂ ಹಂಚಿಕೆಯಾಗಿ ಶುಲ್ಕ ಹೆಚ್ಚಾಗುತಿತ್ತು. ಆಗಾಗ ಟಿಟಿ ಕೆಟ್ಟು ಹೋದರೆ ಕಚೇರಿ- ಮನೆಗೆ ಬಂದು ಹೋಗೋದು ಕಷ್ಟ ಆಗುತ್ತಿತ್ತು. ಈಗ ಬಿಎಂಟಿಸಿ ಬಸ್ ನಲ್ಲಿ ನಿಗಧಿತ ಶುಲ್ಕ, ಸಮಯ ಅಲ್ಲದೆ ಎಲ್ಲಾ ಸಹದ್ಯೋಗಿಗಳು ಒಂದೇ ಬಸ್ ನಲ್ಲಿ ಹೋಗುತ್ತಿರುವುದರಿಂದ ನಮ್ಮ ನಡುವಿನ ಬಾಂಧವ್ಯ ಹೆಚ್ಚಾಗಿದೆ. ಸಂತೋಷದಿಂದ ಕೆಲಸಕ್ಕೆ ಹೋಗಿಬರುವಂತಾಗಿದೆ. ಅಶೋಕ್ ಅವರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.”

– ಬಿ.ಎಸ್.ರವಿಶಂಕರ್, ಹಿರಿಯ ಪ್ರಧಾನ ಮೇಲ್ವಿಚಾರಕರು, ಎಚ್ಎಎಲ್ (ಎಆರ್ ಡಿಸಿ ವಿಭಾಗ)

ಸಮೂಹ ಸಾರಿಗೆ – ಇಂಧನ ಉಳಿತಾಯದ ಸಾಮಾಜಿಕ ಕಳಕಳಿ :

ಸಮೂಹ ಸಾರಿಗೆ ಬಿಎಂಟಿಸಿ ಬಸ್ ನಲ್ಲಿ ತೆರಳಲು ಸಿದ್ದರಾಗಿರುವ ಎಚ್ಎಎಲ್ ನೌಕರರು

ಅಶೋಕ್ ಅವರ ಮೂಲಕ ಪರೋಕ್ಷವಾಗಿ ಬಿಎಂಟಿಸಿ ಸಂಸ್ಥೆಗೂ ಆರ್ಥಿಕ ಅನುಕೂಲ ಮಾಡಿದ ಆತ್ಮತೃಪ್ತಿಯನ್ನು ಎಚ್ಎಎಲ್ ನೌಕರರು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸಮೂಹ ಸಾರಿಗೆ ವ್ಯವಸ್ಥೆಯಿಂದ ಇಡೀ ಪರಿಸರ ಮಾಲಿನ್ಯ ತಗ್ಗುವುದಲ್ಲದೆ ಇಂಧನ ಉಳಿತಾಯವೂ ಸಾಧ್ಯವಾಗುವ ಸಾಮಾಜಿಕ ಕಳಕಳಿ ಈ ವ್ಯವಸ್ಥೆಯಲ್ಲಿದೆ. ಒಟ್ಟಿನಲ್ಲಿ ಎಚ್ಎಎಲ್ ನಂಥ ಒಂದು ಪ್ರತಿಷ್ಠಿತ ಸಂಸ್ಥೆಯ ಉದ್ಯೋಗಿಗಳು ಸಂಸ್ಥೆಯ ಸುರಕ್ಷಿತ ಸಾರಿಗೆಯಿಲ್ಲದೆ ಪರಿತಪಿಸುತ್ತಿದ್ದ ಸಮಯದಲ್ಲಿ ಅಶೋಕ್ ಅವರು ತಮ್ಮ ಸ್ವಂತ ಶ್ರಮ, ಹಣ ವ್ಯಯಮಾಡಿ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಅಶೋಕ್ ಅವರು ಒಬ್ಬ ಸಾಮಾನ್ಯ ಕಾರ್ಮಿಕರಾಗಿ ಅಧಿಕಾರವಿಲ್ಲದೆಯೇ ಅಸಾಮಾನ್ಯವಾದುದನ್ನು ಸಾಧಿಸಿ ಯಶಸ್ವಿಯಾಗಿದ್ದಾರೆ.

ಖಾಸಗಿ- ಸರ್ಕಾರಿ ಸಂಸ್ಥೆಗಳೂ ಬಿಎಂಟಿಸಿ ಬಸ್ ಸೇವೆ ಬಳಸಿಕೊಳ್ಳಲಿ :

ಬೆಂಗಳೂರಿನಲ್ಲಿ 2014-15ನೇ ಇಸವಿಯಲ್ಲಿ ಪ್ರತಿದಿನ 51.3 ಲಕ್ಷ ಮಂದಿ ಪ್ರಯಾಣಿಕರು ಬಿಎಂಟಿಸಿ ಬಸ್ ನಲ್ಲಿ ಸಾಗುತ್ತಿದ್ದರು. ಯಾವಾಗ ಮೆಟ್ರೋ, ಸಬ್ ಅರ್ಬನ್ ರೈಲು ಸೇವೆ ವಿಸ್ತರಣೆಯಾಯಿತೋ ಆಗಿನಿಂದ ಬಿಎಂಟಿಸಿಯ ಪ್ರಯಾಣಿಕರ ಸಂಖ್ಯೆ ಕುಸಿದಿದೆ. 2019-20ನೇ ಸಾಲಿನಲ್ಲಿ ಬಿಎಂಟಿಸಿಯಲ್ಲಿ ಪ್ರತಿದಿನ 33 ಲಕ್ಷ ಜನರು ಪ್ರಯಾಣಿಸುತಿದ್ದರು. ಕರೋನಾ ಸೋಂಕಿನ ಮುಕ್ತಾಯದ ಬಳಿಕ ಈ ಸಂಖ್ಯೆಯೀಗ ಮತ್ತಷ್ಟು ಕುಸಿದಿದೆ. ಆದರೂ ಪ್ರತಿದಿನ ಸುಮಾರು 6,763 ವಿವಿಧ ರೀತಿಯ ಬಸ್ ಸೇವೆಯ ಮೂಲಕ 5,600 ಶೆಡ್ಯೂಲ್ ಗಳಲ್ಲಿ 1,800 ರಿಂದ 1,900 ಮಾರ್ಗಗಳ ಮೂಲಕ ಬಿಎಂಟಿಸಿಯು ಸರಾಸರಿ 50 ಸಾವಿರ ಟ್ರಿಪ್ಸ್ ನಲ್ಲಿ ಸಂಚರಿಸುತ್ತಿದೆ. ಇತ್ತೀಚೆಗೆ ಡೀಸೆಲ್ ಸಮಸ್ಯೆಯಿಂದ ಬಿಎಂಟಿಸಿಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ.

ಇಂತಹ ಸಂದರ್ಭದಲ್ಲಿ ಹೆಚ್ಚೆಚ್ಚು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು, ಮಾಸಿಕ ಶುಲ್ಕ ಕಟ್ಟುವ ಬಿಎಂಟಿಸಿಯ ಡಿಡಿಕೇಟೆಡ್ ಬಸ್ ಸರ್ವಿಸ್ ಅಥವಾ ಚಾರ್ಟಡ್ ಸರ್ವೀಸ್ ಬಳಸಿಕೊಳ್ಳುವ ಮೂಲಕ ಸಮೂಹ ಸಾರಿಗೆಗೆ ಉತ್ತೇಜನ ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೊಡುಗೆ ನೀಡಿದರೆ ಉತ್ತಮ. ಇದಲ್ಲದೆ, ಬಿಎಂಟಿಸಿಯ ಆದಾಯವೂ ಹೆಚ್ಚುತ್ತದೆ ಎಂಬ ಅಭಿಪ್ರಾಯ ಪ್ರಜ್ಞ ನಾಗರೀಕರಿಂದ ವ್ಯಕ್ತವಾಗಿದೆ.

WhatsApp Join our WhatsApp Channel
Previous Post

Liquor Sales High In Karnataka | ಮೂರೇ ತಿಂಗಳಲ್ಲಿ 23 ಕೋಟಿ ಲೀ. ಮದ್ಯ ಮಾರಾಟ….! : ರಾಜ್ಯ ಸರ್ಕಾರದ ಖಜಾನೆಗೆ ಸೇರಿತು 7,500 ಕೋಟಿ ರೂ.

Next Post

Bandipur Tiger Reserve | ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ : ಅರಣ್ಯ ಇಲಾಖೆಯಿಂದ 24 ಗಂಟೆಗಳಲ್ಲಿ ರೈತರ ಮೇಲೆ ದಾಳಿ ನಡೆಸಿದ ಹೆಣ್ಣು ಹುಲಿ ಸೆರೆ

Next Post
ಬೇಟೆಯಾಡಿ ಹಿಡಿದ ಹಸುವನ್ನು ಪೊದೆಯತ್ತ ಎಳೆದೊಯ್ಯುತ್ತಿರುವ ಹೆಣ್ಣು ಹುಲಿಯ ಚಿತ್ರ

Bandipur Tiger Reserve | ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ : ಅರಣ್ಯ ಇಲಾಖೆಯಿಂದ 24 ಗಂಟೆಗಳಲ್ಲಿ ರೈತರ ಮೇಲೆ ದಾಳಿ ನಡೆಸಿದ ಹೆಣ್ಣು ಹುಲಿ ಸೆರೆ

#FeminaMissIndia2022 | ಕರ್ನಾಟಕದ ಸಿನಿಶೆಟ್ಟಿಗೆ 2022ರ ಫೆಮಿನಾ ಮಿಸ್ ಇಂಡಿಯಾ ಕಿರೀಟ

Please login to join discussion

Like Us on Facebook

Follow Us on Twitter

Recent News

ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

June 18, 2026

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

June 18, 2026

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group