Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

BW EXCLUSIVE | #Lithium | ಜಮ್ಮು ಮತ್ತು ಕಾಶ್ಮೀರದಲ್ಲಿ ಲೀಥಿಯಂ ಖನಿಜ ನಿಕ್ಷೇಪ ಕಂಡು ಬಂದಿದ್ದು ಈಗಲ್ಲ 1997ರಲ್ಲಿ!! : ಜಿಎಸ್ಐ ನೀಡಿದ್ದ ಆ ವರದಿಯಲ್ಲೇನಿತ್ತು?

350 ಚ.ಕಿ.ಮೀ. ಭೂರಾಸಾಯನಿಕ ಸಮೀಕ್ಷೆ ನಡೆಸಲಾಗಿತ್ತು | ಜಿ-4, ಜಿ-3, ಜಿ-2 ಹಾಗೂ ಜಿ-1 ಎಂಬ ಹಂತಗಳಲ್ಲಿ ಅಧ್ಯಯನ | ಈಗ ಅಂದಾಜು ಮಾಡಿರುವ 59 ಲಕ್ಷ ಟನ್ ಲೀಥಿಯಮ್ ಪ್ರಮಾಣ ಕಡಿಮೆಯಾಗಬಹುದು!! | 2025ರ ಇಸವಿ ವೇಳೆಗೆ ಗಣಿಕಾರಿಗೆ ಶುರು?

by Bengaluru Wire Desk
February 12, 2023
in BW Special, News Wire, Public interest
Reading Time: 2 mins read
1

ಬೆಂಗಳೂರು/ಜಮ್ಮು, ಫೆ.12 www.bengaluruwire.com :  ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಹಾಗೂ ಸೌರ ಫಲಕಗಳ ತಯಾರಿಕೆಯಲ್ಲಿ ಮಹತ್ವದ ಖನಿಜ ಲೀಥಿಯಮ್ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಗ್ರಾಮದಲ್ಲಿ ಪತ್ತೆಯಾಗಿದ್ದು ಈಗಲ್ಲ ಬರೋಬ್ಬರಿ 25 ವರ್ಷಗಳ ಹಿಂದೆಯೇ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI)ಯು ಅಧ್ಯಯನ ನಡೆಸಿ ವರದಿ ನೀಡಿತ್ತು.

ಆದರೀಗ ಲೀಥಿಯಮ್ ನಿಕ್ಷೇಪಕ್ಕೆ ಸಾಕಷ್ಟು ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ 2021-22ನೇ ಇಸವಿಯಲ್ಲಿ ಇದರ ಬಗ್ಗೆ ಎರಡನೇ ಹಂತದ ಅಧ್ಯಯನ (G-3) ಕೈಗೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಗ್ರಾಮದಲ್ಲಿ ಕಂಡು ಬಂದಿರುವ 59 ಲಕ್ಷ ಟನ್ ಗಳಷ್ಟು ಲೀಥಿಯಮ್ ನಿಕ್ಷೇಪ ಉತ್ಕೃಷ್ಟ ಗುಣಮಟ್ಟದ್ದು ಎಂಬ ಅಂಶವು ಬೆಂಗಳೂರು ವೈರ್ ಗೆ ಲಭ್ಯವಾಗಿದೆ.

ಜಿಎಸ್ ಐ ಇಲಾಖೆ 1997ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿ

ಬ್ರೆಜಿಲ್, ಕೊಲಂಬಿಯಾ, ರಷ್ಯಾ ಹಾಗೂ ಚೈನಾ ರಾಷ್ಟ್ರಗಳಲ್ಲಿ ಮಾತ್ರ ಲೀಥಿಯಂ ಖನಿಜ ನಿಕ್ಷೇಪವಿದೆ. ಆದರೆ ಈ ಪಟ್ಟಿಗಳ ಸಾಲಿಗೆ ಈಗ ಭಾರತವೂ ಸೇರ್ಪಡೆಯಾದಂತಾಗಿದೆ. 1995-96 ಹಾಗೂ 1996-97ರ ತನಿಖೆಯ ಸಂದರ್ಭದಲ್ಲಿ, 350 ಚ.ಕಿ. ಕಿಮೀ ಭೂರಾಸಾಯನಿಕವಾಗಿ ಸಮೀಕ್ಷೆ ನಡೆಸಲಾಗಿತ್ತು. 1:50,000 ಮಾಪಕದಲ್ಲಿ ಕತ್ರಾ- ಮುತ್ತಲ್- ಪ್ರೆಸ್- ಸೆರ್ಸಂದು- ಸಲಾಲ್- ಪನಾಸ- ಪಯೋನಿ- ರಂಸುಹ್- ಚಕರ್ ಪ್ರದೇಶದಲ್ಲಿ ಬೇಸ್ ಮೆಟಲ್ ಮತ್ತು ಲಿಥಿಯಂ ನಿಕ್ಷೇಪ ಪತ್ತೆಗಾಗಿ ಈ ಪ್ರದೇಶಗಳಲ್ಲಿ 804 ಮಾದರಿಗಳ ಸಂಗ್ರಹದೊಂದಿಗೆ 17 Cu.m ಗುಂಡಿ ಅಥವಾ ಕಂದಕವನ್ನು ನೋಡಿ ಜಿಎಎಸ್ಐ ಅಧ್ಯಯನ ಕೈಗೊಂಡಿತ್ತು. ಭೂವಿಜ್ಞಾನಿಗಳಾದ ಕೆ.ಕೆ.ಶರ್ಮ ಹಾಗೂ ಎಸ್.ಸಿ.ಉಪ್ಪಲ್ ನವರು ಈ ಕುರಿತಂತೆ ಸರ್ಕಾರಕ್ಕೆ 1997ರಲ್ಲಿ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದ್ದರು.

ಬಾಕ್ಸೈಟ್ ನಿಕ್ಷೇಪದಲ್ಲಿ ಅಲ್ಯುಮಿನಿಯಂ ಜೊತೆ ಸಿಕ್ಕ ಲೀಥಿಯಮ್ :

“1997ರಲ್ಲಿ ಜಿಎಸ್ಐ ಅಧಿಕಾರಿಗಳು ಈ ಪ್ರದೇಶದಲ್ಲಿ ವೈಜ್ಞಾನಿಕ ಸರ್ವೇಕ್ಷಣಾ ಅಧ್ಯಯನ ಕೈಗೊಂಡಾಗ ಲೀಥಿಯಮ್ ಖನಿಜವು ಬಾಕ್ಸೈಟ್ ನಿಕ್ಷೇಪದಲ್ಲಿ ಅಲ್ಯೂಮಿನಿಯಂ ಖನಿಜದೊಂದಿಗೆ ಲಭ್ಯವಾಗಿತ್ತು. ಈ ಕುರಿತಂತೆ ಆಗಿನ ಜಿಎಸ್ಐ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆಗ ಲೀಥಿಯಮ್ ಖನಿಜಕ್ಕೆ ಹೆಚ್ಚಿನ ಬೇಡಿಕೆಯಿರದ ಕಾರಣ ಈ ವರದಿಯು ಸರ್ಕಾರಿ ಕಪಾಟಿನಲ್ಲೇ ಭದ್ರವಾಗಿತ್ತು. ಯಾವಾಗ ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗಾಗಿ ಲೀಥಿಯಂ ಖನಿಜಕ್ಕೆ ಬೇಡಿಕೆ ಬಂದಿತ್ತೋ ಆಗ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಜಿಎಸ್ ಐನ ಅಧಿಕಾರಿಗಳು 2021-22ರಲ್ಲಿ ಸಲಾಲ್ ಗ್ರಾಮದಲ್ಲಿರುವ ವೈಷ್ಣವೋದೇವಿ ದೇಗುಲದ ತಪ್ಪಲಿನ ಸುತ್ತಮುತ್ತ ಅಧ್ಯಯನ ಜಿ-3 ಉನ್ನತ ಮಟ್ಟದ ಅಧ್ಯಯನ ಕೈಗೊಂಡಿತ್ತು” ಎಂದು ಜಿಎಸ್ಐ ಇಲಾಖೆ (ಬೆಂಗಳೂರು)ಯ ನಿವೃತ್ತ ಉಪ ಮಹಾನಿರ್ದೇಶಕರಾದ ಡಾ.ಪ್ರಕಾಶ್.ಎಚ್.ಎಸ್.ಎಮ್ ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.

ಖನಿಜ ನಿಕ್ಷೇಪ ಪತ್ತೆಗೆ ನಾಲ್ಕು ಹಂತದ ಅಧ್ಯಯನ :

ಯಾವುದೇ ಖನಿಜ ನಿಕ್ಷೇಪದ ಕುರಿತಂತೆ ಭೂವೈಜ್ಞಾನಿಕ ಸರ್ವೇಕ್ಷಣಾ ನಡೆಸುವಾಗ ನಾಲ್ಕು ಹಂತಗಳ ಅಧ್ಯಯನವನ್ನು ಕೈಗೊಳ್ಳಲಾಗುತ್ತದೆ. ಜಿ-4, ಜಿ-3, ಜಿ-2 ಹಾಗೂ ಜಿ-1 ಎಂಬ ಹಂತಗಳಲ್ಲಿ ಅಧ್ಯಯನ ಕೈಗೊಂಡ ಮೇಲಷ್ಟೇ, ಗಣಿಗಾರಿಕೆ ನಡೆಸಬೇಕಾ? ಅಥವಾ ಬೇಡವೇ? ಎಂಬ ನಿರ್ಧಾರ ಕೈಗೊಳ್ಳಲಾಗುತ್ತದೆ.

ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಜಮ್ಮು ಮತ್ತು ಕಾಶ್ಮೀರದ ಆಗಿನ ಉಧಾಮ್ ಪುರ ಜಿಲ್ಲೆಯಲ್ಲಿ ಸರ್ವೆ ನಡೆಸಿದ ಸ್ಥಳದ ನಕ್ಷೆ

ಖನಿಜ ನಿಕ್ಷೇಪ ಅಧ್ಯಯನದಲ್ಲಿ ಪ್ರಥಮವಾಗಿ ಜಿ-4 ಅಧ್ಯಯನದ ಮೂಲಕ ಆರಂಭವಾಗುತ್ತದೆ. ಈ ಸ್ಟೇಜ್ ನಲ್ಲಿ ಖನಿಜ ನಿಕ್ಷೇಪ ಪತ್ತೆಯಾಗಿರುವ ಸ್ಥಳಧ ಮ್ಯಾಪಿಂಗ್ ಮಾಡಲಾಗುತ್ತದೆ. 1: 50,000 ಸ್ಕೇಲಿಂಗ್ ನಲ್ಲಿ 350 ಚದರ ಕಿ.ಮೀ ವ್ಯಾಪ್ತಿಯಲ್ಲಿ ಅಧ್ಯಯನ ಆರಂಭಿಸಲಾಗುತ್ತದೆ. ಸ್ಥಳದಲ್ಲಿ 200 ಮೀಟರ್ * 200 ಮೀಟರ್ ಗ್ರಿಡ್ ನಲ್ಲಿ ಮಾದರಿಯನ್ನು ಸಂಗ್ರಹಿಸಿ, ಅವುಗಳನ್ನು ವೈಜ್ಞಾನಿಕ ಪ್ರಕ್ರಿಯೆಗೆ ಒಳಪಡಿಸಿ ವಿಶ್ಲೇಷಣೆ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ಸಲಾಲ್ ಗ್ರಾಮದಲ್ಲಿನ ಭೂಮಿಯಲ್ಲಿ ಸರಾಸರಿಯಾಗಿ 300 ರಿಂದ 340 ಪಾರ್ಟ್ಸ್ ಪರ್ ಮಿಲಿಯನ್ (PPM) ಗ್ರೇಡ್ ಲೀಥಿಯಂ ಖನಿಜವಿರುವುದು ತಿಳಿದು ಬಂದಿತ್ತು. ಈ ಅಧ್ಯಯನ ನಡೆಸಲು ಭೂವಿಜ್ಞಾನಿಗಳಿಗೆ 1 ವರ್ಷ ಸಮಯ ಹಿಡಿದಿತ್ತು.

ಇದಾದ ಬಳಿಕ ಜಿಎಸ್ಐನ ಭೂವಿಜ್ಞಾನಿಗಳು ಜಿ-3 ಅಧ್ಯಯನವನ್ನು 2021-22ರಲ್ಲಿ ಆರಂಭಿಸಿದರು. ಈ ಸಂದರ್ಭದಲ್ಲಿ ಖನಿಜ ನಿಕ್ಷೇಪ ಪತ್ತೆಯಾದ ಸ್ಥಳದಲ್ಲಿ 8 ರಿಂದ 10 ಮೀಟರ್ ಆಳದಲ್ಲಿ ಭೂಮಿಯನ್ನು ಕೊರೆದು ಅರ್ಧ ಮೀಟರ್ ನಷ್ಟು ಮಾದರಿಯನ್ನು ಸಂಗ್ರಹಿಸಿ, ಅವುಗಳನ್ನು ಸಹ ಹಲವು ಹಂತದ ಪ್ರಕ್ರಿಯೆಗಳಿಗೆ ಒಳಪಡಿಸಿ, ವೈಜ್ಞಾನಿಕ ವಿಶ್ಲೇಷಣೆ ನಡೆಸಿದ ಬಳಿಕವಷ್ಟೇ ಲೀಥಿಯಮ್ ಖನಿಜ 550 ಪಾರ್ಟ್ಸ್ ಪರ್ ಮಿಲಿಯನ್ ಗ್ರೇಡ್ ಉತ್ಕೃಷ್ಣ ಗುಣಮಟ್ಟ ಹೊಂದಿರುವುದು ಪತ್ತೆಯಾಗಿದೆ. ಈ ಅಧ್ಯಯನ ನಡೆಸಲು 1 ವರ್ಷ ಕಾಲಾವಧಿ ಹಿಡಿದಿದೆ ಎಂದು ಹಿರಿಯ ಭೂವಿಜ್ಞಾನಿ ಡಾ.ಪ್ರಕಾಶ್.ಎಚ್.ಎಸ್.ಎಮ್ ಹೇಳಿದ್ದಾರೆ.

ಇನ್ನು ಎರಡು ಹಂತದ ಅಧ್ಯಯನ ಬಾಕಿಯಿದೆ :

ಮುಂದಿನ ದಿನಗಳಲ್ಲಿ ಜಿಎಸ್ ಐ ವಿಜ್ಞಾನಿಗಳು ಜಿ-2 ಅಧ್ಯಯನವನ್ನು ಆರಂಭಿಸಲಿದ್ದಾರೆ. ಇದಕ್ಕೆ ಏನಿಲ್ಲವೆಂದರೂ 1 ರಿಂದ 2 ವರ್ಷ ಕಾಲಾವಧಿ ಬೇಕಾಗಬಹುದು. ಕೇಂದ್ರ ಸರ್ಕಾರ ಹೆಚ್ಚಿನ ಒತ್ತಾಸೆ ನೀಡಿ, ವೇಗವಾಗಿ ಕಾರ್ಯ ನಡೆಸಿದರೆ ಒಂದು ವರ್ಷದಲ್ಲಿ ಜಿ-2 ಅಧ್ಯಯನ ಪೂರ್ಣಗೊಳ್ಳಬಹುದು. ಈ ಹಂತದಲ್ಲಿ ಲಿಥಿಯಂ ಖನಿಜ ನಿಕ್ಷೇಪದ ಕುರಿತಂತೆ ವಿಸ್ತಾರವಾದ ವಿಶ್ಲೇಷಣೆ ನಡೆಸಲಾಗುತ್ತದೆ.

ಇನ್ನು ಖನಿಜ ನಿಕ್ಷೇಪದ ಕುರಿತಂತೆ ಜಿ-1 ಕೊನೆಯ ಹಂತವಾಗಿದ್ದು, ಖನಿಜ ನಿಕ್ಷೇಪವನ್ನು ವರ್ಗೀಕರಿಸುವ, ಈ ಖನಿಜದ ಅಂಶ, ಗುಣಮಟ್ಟ, ಲಭ್ಯತೆಯ ಪ್ರಮಾಣವನ್ನು ಪರಿಶೀಲನೆ ನಡೆಸಿ ಗಣಿಕಾರಿಕೆ ನಡೆಸಲು ಸೂಕ್ತವಾಗಿರುವ ಸ್ಥಳಗಳು ಯಾವುದು? ಯಾವ ರೀತಿಯಲ್ಲಿ ಗಣಿಕಾರಿಕೆಯನ್ನು ನಡೆಸಬಹುದು? ಈ ಖನಿಜದ ಗುಣಮಟ್ಟದ ಮಾರುಕಟ್ಟೆ ಮೌಲ್ಯವನ್ನು ಲೆಕ್ಕಹಾಕಿ, ಲಾಭವನ್ನು ಅಳೆದು ತೂಗಿ ಹಾಕಿ ಗಣಿಕಾರಿ ನಡೆಸಲು ಸೂಕ್ತವೇ ಎಂಬಂತಹ ಸಂಪೂರ್ಣ ವಿಶ್ಲೇಷಣೆ ನಡೆಸಲಾಗುತ್ತದೆ. ಇದಾದ ನಂತರ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ತನ್ನ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಕುರಿತಂತೆ ಲೀಥಿಯಮ್ ಗಣಿಗಾರಿಕೆ ಕುರಿತಂತೆ ತನ್ನಲ್ಲಿನ ನಿಕ್ಷೇಪಗಳಿಗೆ ರಾಯಧನ (Royalty) ನಿಗದಿ ಮಾಡಿ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡುವ ಕಾರ್ಯ ನಡೆಸಲಿದೆ.

ಸಲಾಲ್ ಗ್ರಾಮದಲ್ಲಿ ಕಂಡು ಬಂದಿರುವ ಲೀಥಿಯಮ್ ಖನಿಜದ ಚಿತ್ರ

59 ಲಕ್ಷ ಟನ್ ಲೀಥಿಯಮ್ ಪ್ರಮಾಣ ಕಡಿಮೆಯಾಗಬಹುದು!! :

ಸದ್ಯ ಜಿಎಸ್ ಐ ಭೂವಿಜ್ಞಾನಿಗಳು ಸಲಾಲ್ ಗ್ರಾಮದಲ್ಲಿ 59 ಲಕ್ಷ ಟನ್ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಅಂದಾಜಿಸಿದ್ದಾರೆ. ಆದರೆ ಜಿ-1 ಹಂತದ ಉನ್ನತ ಅಧ್ಯಯನದ ಬಳಿಕ ಗಣಿಕಾರಿಕೆ ನಡೆಸಬಹುದಾದ ಲೀಥಿಯಂ ನಿಕ್ಷೇಪದ ಪ್ರಮಾಣ 10 ಲಕ್ಷ ಟನ್ ನಷ್ಟು ಇಳಿಕೆಯಾಗಲೂ ಬಹುದು. ಇದಲ್ಲಾ ಅಧ್ಯಯನದಿಂದ ತಿಳಿದು ಬರಬೇಕಿದೆ ಎಂದು ಡಾ.ಪ್ರಕಾಶ್.ಎಚ್.ಎಸ್.ಎಮ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

2-3 ವರ್ಷಗಳ ದೇಶದ ಬೇಡಿಕೆ ಪೂರೈಸುವ ಸಾಧ್ಯತೆಯಿದೆ :

ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಬಾಕಿ ಉಳಿದ ಜಿ-2 ಹಾಗೂ ಜಿ-1 ಅಧ್ಯಯನವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿದರೂ 2025ನೇ ಇಸವಿಯ ವೇಳೆಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಗ್ರಾಮದಲ್ಲಿ ಲೀಥಿಯಮ್ ಗಣಿಗಾರಿಕೆ ಆರಂಭಿಸುವ ಸಾಧ್ಯತೆಯಿದೆ. ಈ ಇಡೀ ಲೀಥಿಯಂ ನಿಕ್ಷೇಪವನ್ನು ಹೊರತೆಗೆದರೆ ಅಂದಾಜು ಎರಡು ಮೂರು ವರ್ಷಗಳ ತನಕ ದೇಶದ ಲೀಥಿಯಂ ಬೇಡಿಕೆಯನ್ನು ಪೂರೈಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಮೊಗದಲ್ಲಿ ಸಂತಸ :

ಲೀಥಿಯಮ್ ನಿಕ್ಷೇಪ ಪತ್ತೆಯಾಗಿರುವುದಕ್ಕೆ ಸ್ಥಳೀಯರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಸ್ಥಳೀಯರು ತಮ್ಮ ಬದುಕು ಹಸನಾಗುವ ನಿರೀಕ್ಷೆಯಲ್ಲಿದ್ದು, ಈ ಯೋಜನೆಯಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ಕೊಡಲಾಗುತ್ತದೆ. ಲಿಥಿಯಂ ನಿಕ್ಷೇಪ ಗಣಿಗಾರಿಕೆ ಯೋಜನೆಯಲ್ಲಿ ಮನೆ, ಭೂಮಿ ಕಳೆದುಕೊಳ್ಳುವವರಿಗೆ ಕಾನೂನು, ನಿಯಮಾವಳಿಯ ಪ್ರಕಾರ ಪರಿಹಾರ ನೀಡಲಾಗುತ್ತದೆ. ಅದೇ ರೀತಿ ಪುನರ್ವಸತಿ ಕಲ್ಪಿಸಲಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಗಣಿ ಇಲಾಖೆ ಕಾರ್ಯದರ್ಶಿ ಅಮಿತ್ ಶರ್ಮ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಲಾಲ್ ಗ್ರಾಮದಲ್ಲಿ ಕಂಡು ಬಂದಿರುವ ಲೀಥಿಯಮ್ ಖನಿಜವು, ದೇಶದ ಎಲೆಕ್ಟ್ರಾನಿಕ್ ವಾಹನಗಳು ಮತ್ತು ಸೌರ ಫಲಕಗಳ ತಯಾರಿಕೆಗೆ ಮಹತ್ವದ ಕೊಡುಗೆ ನೀಡುವಂತಾದರೆ ಅಷ್ಟರ ಮಟ್ಟಿಗೆ ದೇಶದ ಅರ್ಥವ್ಯವಸ್ಥೆಗೆ ಸಹಾಯಕವಾಗಲಿದೆ.

WhatsApp Join our WhatsApp Channel
Previous Post

AeroIndia2023 | ಏರೊ ಇಂಡಿಯಾ ಚಮತ್ಕಾರಿಕ ವೈಮಾನಿಕ ಪೂರ್ವಾಭ್ಯಾಸಕ್ಕೆ ನೋಡುಗರು ಫಿದಾ !!

Next Post

Aeroindia2023 |ಗಮನಿಸಿ…!! : ಫೆ.13 ರಿಂದ ಏರ್ ಶೋ ಹಿನ್ನಲೆ – ಹಲವು ಕಡೆ ತಾತ್ಕಾಲಿಕ ವಾಹನ ಸಂಚಾರದಲ್ಲಿ ಬದಲಾವಣೆ

Next Post

Aeroindia2023 |ಗಮನಿಸಿ…!! : ಫೆ.13 ರಿಂದ ಏರ್ ಶೋ ಹಿನ್ನಲೆ - ಹಲವು ಕಡೆ ತಾತ್ಕಾಲಿಕ ವಾಹನ ಸಂಚಾರದಲ್ಲಿ ಬದಲಾವಣೆ

PM at the 14th edition of Aero India 2023, in Bengaluru on February 13, 2023.

Aero India 2023 | 14ನೇ ಆವೃತ್ತಿಯ ಏರೊ ಇಂಡಿಯಾ ಪ್ರದರ್ಶನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group