Thursday, July 30, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

    Kargil Vijay Diwas | ಕಾರ್ಗಿಲ್ ವಿಜಯ್ ದಿವಸ್: ದೇಶದ ವೀರ ಯೋಧರಿಗೆ ಪ್ರಧಾನಿ ನಮನ

    ನೀಟ್ ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

  • Bengaluru Focus

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

    ಜಕ್ಕೂರು ವೈಮಾನಿಕ ತರಬೇತಿ ಶಾಲೆ ಲೈಸೆನ್ಸ್‌ ನವೀಕರಣ: ಮೈಸೂರು, ಹಾಸನದಲ್ಲಿ ಸ್ಯಾಟಲೈಟ್ ಬೇಸ್

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

    GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

    Kargil Vijay Diwas | ಕಾರ್ಗಿಲ್ ವಿಜಯ್ ದಿವಸ್: ದೇಶದ ವೀರ ಯೋಧರಿಗೆ ಪ್ರಧಾನಿ ನಮನ

    ನೀಟ್ ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

  • Bengaluru Focus

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

    ಜಕ್ಕೂರು ವೈಮಾನಿಕ ತರಬೇತಿ ಶಾಲೆ ಲೈಸೆನ್ಸ್‌ ನವೀಕರಣ: ಮೈಸೂರು, ಹಾಸನದಲ್ಲಿ ಸ್ಯಾಟಲೈಟ್ ಬೇಸ್

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

    GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

BW INVESTIGATION | ಬೋಗಸ್ ಖಾತೆ- ಬಂಡಲ್ ಭ್ರಷ್ಟರು ಭಾಗ-1 | ಬಿಬಿಎಂಪಿ ಯಲಚೇನಹಳ್ಳಿ ಎಆರ್ ಒ ಕಚೇರಿ : ಬ್ರೋಕರ್ – ಡೂಪ್ಲಿಕೇಟ್ ಖಾತಾ ಫ್ಯಾಕ್ಟರಿ : ಬೆಂಗಳೂರು ವೈರ್ ತನಿಖೆಯಲ್ಲಿ ಬಯಲಾಯ್ತು ನಕಲಿ ಖಾತೆಗಳು

ಡೂಪ್ಲಿಕೇಟ್ ಖಾತಾ ದಂಧೆ ಯಲಚೇನಹಳ್ಳಿ ಕಂದಾಯ ಉಪವಿಭಾಗದ ಕಚೇರಿಯಲ್ಲಿ ನಿರ್ವಿಘ್ನವಾಗಿ ನಡೆಯುತ್ತದೆ | ಇಲ್ಲಿನ ಪಾಲಿಕೆ ಸ್ಥಳ ಬ್ರೋಕರ್ ಅಡ್ಡ ಹಾಗೂ ಭ್ರಷ್ಟ ಅಧಿಕಾರಿಗಳ ಸ್ವರ್ಗದಂತಾಗಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರಿದೆ | ಈ ಆರೋಪಕ್ಕೆ ಬೆಂಗಳೂರು ವೈರ್ ತನಿಖೆಯು ವಾಸ್ತವ ಬಿಚ್ಚಿಡುವ ಪ್ರಯತ್ನ ಮಾಡಿದೆ.

by Bengaluru Wire Desk
November 5, 2023
in Bengaluru Focus, BW Special, Public interest
Reading Time: 2 mins read
2
ಬಿಬಿಎಂಪಿ ಯಲಚೇನಹಳ್ಳಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ ಹಾಗೂ ಬೆಂಗಳೂರು ದಕ್ಷಿಣ ಶಾಸಕರ ಕಚೇರಿ ಕಟ್ಟಡದ ಚಿತ್ರ.

ಬಿಬಿಎಂಪಿ ಯಲಚೇನಹಳ್ಳಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ ಹಾಗೂ ಬೆಂಗಳೂರು ದಕ್ಷಿಣ ಶಾಸಕರ ಕಚೇರಿ ಕಟ್ಟಡದ ಚಿತ್ರ.

ಬೆಂಗಳೂರು, ನ.03 www.bengaluruwire.com :  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ಇಲಾಖೆಯಲ್ಲಿ ಬೋಗಸ್ ಎ ಖಾತಾಗಳನ್ನು ಮಾಡಲಾಗುತ್ತಿದೆ ಎಂಬ ಬಗ್ಗೆ ಪಾಲಿಕೆ ಪರಿಶೀಲನಾ ಸಮಿತಿಯಿಂದ ಪರಿಶೀಲನೆ ನಡೆಯುತ್ತಿರುವ ಸಂದರ್ಭದಲ್ಲೇ  ಬೆಂಗಳೂರು ವೈರ್ ನಡೆಸಿದ ತನಿಖೆಯಲ್ಲಿ ಡೂಪ್ಲಿಕೇಟ್ ಖಾತೆಗಳಿಗೆ ಸ್ವರ್ಗದಂತಿರುವ ಬೊಮ್ಮನಹಳ್ಳಿ ವಲಯದ ಯಲಚೇನಹಳ್ಳಿ ಕಂದಾಯ ಉಪವಿಭಾಗದಲ್ಲಿ ಅಧಿಕಾರಿ – ಸಿಬ್ಬಂದಿ ಸೇರಿಕೊಂಡು ಎರಡು ಅಕ್ರಮ ಎ ಖಾತೆ ಮಾಡಿರುವುದನ್ನು ದಾಖಲೆ ಸಹಿತ ಪತ್ತೆ ಹಚ್ಚಿದೆ.

ಬ್ರೋಕರ್ ಗಳ ಅಡ್ಡೆಯಾಗಿರುವ ಯಲಚೇನಹಳ್ಳಿ ಕಂದಾಯ ಉಪವಿಭಾಗದಲ್ಲಿ ಯಾವಾಗ ನೋಡಿದರೂ, ಸಾರ್ವಜನಿಕರು ದೈನಂದಿನ ಕೆಲಸ ಕಾರ್ಯಗಳಿಗಾಗಿ ಬರುವ ಸಂಖ್ಯೆಗಿಂತ ಮಧ್ಯವರ್ತಿಗಳ ಸಂಖ್ಯೆಯೇ ಹೆಚ್ಚು. ಯಲಚೇನಹಳ್ಳಿ ಉಪ ವಿಭಾಗದಲ್ಲಿ ಪ್ರಮುಖವಾಗಿ ಯಲಚೇನಹಳ್ಳಿ ವಾರ್ಡ್ ಹಾಗೂ ಕೋಣನಕುಂಟೆ ವಾರ್ಡ್ ಗಳು ಬರುತ್ತದೆ. 2007ರಲ್ಲಿ ಪಾಲಿಕೆಗೆ ನೂತನವಾಗಿ ಇಲ್ಲಿನ ಅನೇಕ ಪ್ರದೇಶಗಳು ಸೇರ್ಪಡೆಯಾಗಿದ್ದವು. ಕಂದಾಯ ಭೂಮಿಯೇ ಹೆಚ್ಚಿರುವ ಈ ಸ್ಥಳದಲ್ಲಿ ಭೂಮಿ ಬೆಲೆ ಹೆಚ್ಚಾಗಿ ಇಲ್ಲಿನ ಏರಿಯಾ ಪಾಶ್ ಆಗುತ್ತಿದ್ದಂತೆ ಎ ಖಾತೆಗೆ ಬೇಡಿಕೆ ಹೆಚ್ಚಾಗಿದೆ. ಅದೇ ರೀತಿ ಬೋಗಸ್ ಎ ಖಾತಾ ಎಂಟ್ರಿಗಳು ಹೆಚ್ಚಾಗಿದೆ. ಇದಕ್ಕೆ ತಾಜಾ ಉದಾಹರಣ ಈ ಪ್ರಕರಣವಾಗಿದೆ.

ಕೆ.ಕೆ.ನಂಜಪ್ಪನವರ 40/4ರ ಖಾತೆಗೆ ಸಂಬಂಧಿಸಿಂತೆ 2023-24 ಹಾಗೂ ಕೆಳಭಾಗ ಚಿತ್ರ 2016ರ ಇಸವಿಯಲ್ಲಿ ನೀಡಿದಂತೆ ಸೃಷ್ಟಿಸಲಾದ ನಕಲಿ ಖಾತಾ ಎಕ್ಸ್ ಟ್ರಾಕ್ಟ್.

ಬೆಂಗಳೂರು ವೈರ್ ಈ ಕುರಿತಂತೆ ತನಿಖೆ ಕೈಗೊಂಡಾಗ, ಒಬ್ಬನೇ ವ್ಯಕ್ತಿಗೆ ಆತನ ಎರಡು ಸೈಟ್ ಗಳಿಗೆ ಹಿಂದಿನ ಬ್ಯಾಕ್ ಡೇಟ್ ನಲ್ಲಿ ಖಾತಾ ಪ್ರಮಾಣಪತ್ರ ಹಾಗೂ ಖಾತಾ ಎಕ್ಸ್ ಟ್ರಾಕ್ಟ್ (ಮನೆಗಳು ಮತ್ತು ಖಾಲಿ ಜಾಗಗಳ ದಾಖಲೆ ಪುಸ್ತಕ) ನೀಡಿರುವಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಆ ನಕಲಿ ದಾಖಲೆಯ ಅಸಲಿಯತ್ತನ್ನು ಪರಿಶೀಲಿಸದೆ 2023ರ ಆಗಸ್ಟ್ 14 ಮತ್ತು 17 ರಂದು ಯಲಚೇನಹಳ್ಳಿ ಸಹಾಯಕ ಕಂದಾಯ ಅಧಿಕಾರಿ ಸಹಿ ಹಾಕಿ ಖಾತೆದಾರರಿಗೆ ನೀಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

ಯಲಚೇನಹಳ್ಳಿ ವಾರ್ಡಿನ  ಕೆ.ಕೆ ನಂಜಪ್ಪ ಎಂಬುವರಿಗೆ ಸೇರಿದ 2,355 ಚದರ ಅಡಿ ವಿಸ್ತೀರ್ಣದ ಖಾತೆ ಸಂಖ್ಯೆ : 40/4 ರ ಸ್ವತ್ತಿಗೆ ಹಾಗೂ 30×40 ಅಳತೆಯ 8/39ರ ಸ್ವತ್ತಿಗೆ 31-03-2016ರಂದು ಖಾತಾ ಪ್ರಮಾಣಪತ್ರ ಹಾಗೂ ಹಾಗೂ ಖಾತಾ ಎಕ್ಸ್ ಟ್ರಾಕ್ಟ್ ಅನ್ನು ಬಿಬಿಎಂಪಿಯ ಯಲಚೇನಹಳ್ಳಿ ಕಂದಾಯ ಉಪವಿಭಾಗದಿಂದ ಹಂಚಿಕೆ ಮಾಡಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಕೊನೆಗೆ ಅದೇ ಆಧಾರದ ಮೇಲೆ 2023ರ ಆಗಸ್ಟ್ 14 ಮತ್ತು 17ರಂದು ಕ್ರಮವಾಗಿ ಎರಡು ದಿನಾಂಕಗಳಲ್ಲಿ ಎಆರ್ ಒ ಶ್ರೀನಿವಾಸಯ್ಯ (ಪ್ರಸ್ತುತ ನಿವೃತ್ತ) ಎಂಬುವರು ಖಾತಾ ಅಸೆಸ್ ಮೆಂಟ್ ರಿಜಿಸ್ಟರ್ ನೋಡಿದ್ದಾರೋ ಅಥವಾ ಇಲ್ಲವೋ, ಅಥವಾ ಅದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಕೇಸ್ ವರ್ಕರ್ ರವಿ ಕುಮಾರ್ ತಂದಿಟ್ಟ ಖಾತಾ ಪ್ರಮಾಣ ಪತ್ರ ಹಾಗೂ ಖಾತಾ ಎಕ್ಸ್ ಟ್ರಾಕ್ಟ್ ಗೆ ಕಣ್ಣುಮುಚ್ಚಿ ಸಹಿ ಹಾಕಿದ್ರಾ? ಒಟ್ಟಿನಲ್ಲಿ ಆ ದಿನಾಂಕಗಳಂದು ಕೆ.ಕೆ ನಂಜಪ್ಪ ಎಂಬುವರ ಹೆಸರಿನಲ್ಲಿ ಖಾತಾ ಸರ್ಟಿಫಿಕೇಟ್ ಮತ್ತು ಖಾತಾ ಎಕ್ಸ್ ಟ್ರಾಕ್ಟ್ ನೀಡಲಾಗಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.

ಕೆ.ಕೆ.ನಂಜಪ್ಪನವರ 8/39 ಖಾತೆಗೆ ಸಂಬಂಧಿಸಿಂತೆ 2023-24 ಹಾಗೂ ಕೆಳಭಾಗ ಚಿತ್ರ 2016ರ ಇಸವಿಯಲ್ಲಿ ನೀಡಿದಂತೆ ಸೃಷ್ಟಿಸಲಾದ ನಕಲಿ ಖಾತಾ ಎಕ್ಸ್ ಟ್ರಾಕ್ಟ್.

ಈ ಬಗ್ಗೆ ಬೆಂಗಳೂರು ವೈರ್ ಮತ್ತಷ್ಟು ತನಿಖೆ ಕೈಗೊಂಡಾಗ, ಕಂದಾಯ ಇಲಾಖೆಯಲ್ಲಿ ಸ್ವತ್ತಿನ ಮಾಲೀಕರ ಎ ಖಾತಾ ಮೌಲ್ಯಮಾಪನಾ ರಿಜಿಸ್ಟರ್ ನಲ್ಲಿ ವಾಲ್ಯೂಮ್-1ರ ಪುಸ್ತಕದ 94ನೇ ಪೇಜ್ ನಲ್ಲಿ 40/4 ಖಾತೆ ಸಂಖ್ಯೆ ಹಾಗೂ ಆ ಸ್ವತ್ತಿನ ಮಾಲೀಕರಾದ ಕೆ.ಕೆ.ನಂಜಪ್ಪ ಅವರ ಹೆಸರನ್ನು ನಮೂದಿಸಿ ಬಳಿಕ ಅದನ್ನು ಹೊಡೆದು ಹಾಕಲಾಗಿದೆ. ಅದೇ ರೀತಿ ವಾಲ್ಯೂಮ್-1ರ ರಿಜಿಸ್ಟರ್ ಪುಸ್ತಕದ 172 ಪೇಜ್ ನಲ್ಲಿ 8/39 ಕೆ.ಕೆ.ನಂಜಪ್ಪ ಹೆಸರನ್ನು ನಮೂದಿಸಿ ಬಳಿಕ ಅದನ್ನು ಹೊಡೆದು ಹಾಕಲಾಗಿದೆ. ಸಾಮಾನ್ಯವಾಗಿ ಒಮ್ಮೆ ಎ- ಖಾತಾ ರಿಜಿಸ್ಟರ್ ನಲ್ಲಿ ಅಧಿಕೃತವಾಗಿ ಖಾತೆ ಸಂಖ್ಯೆ, ಸ್ವತ್ತಿನ ಮಾಲೀಕರ ಹೆಸರು, ವಿಸ್ತೀರ್ಣ, ಸ್ವತ್ತಿಗೆ ಕಂದಾಯ ಬೇಡಿಕೆ, ಉಪಕರ ಮತ್ತಿತರ ಮಾಹಿತಿಗಳನ್ನು ನಮೂದಿಸಿ ಸಂಬಂಧಿಸಿದ ಎಆರ್ ಒ ತಮ್ಮ ಹೆಸರು, ಕಚೇರಿ ಸೀಲು ಮತ್ತು ದಿನಾಂಕವನ್ನು ನಮೂದಿಸುತ್ತಾರೆ. ಆದರೆ ಈ ಎರಡು ಪ್ರಕರಣಗಳಲ್ಲಿ ಕೇವಲ ಸ್ವತ್ತಿನ ಮಾಲೀಕನಾದ ಕೆಕೆ ನಂಜಪ್ಪ ಹೆಸರನ್ನಷ್ಟೇ ನಮೂದಿಸಲಾಗಿದೆ.

ಅಸೆಸ್ ಮೆಂಟ್ ರಿಜಿಸ್ಟರ್ ನಲ್ಲಿ ತಿದ್ದು- ಅಳಿಸು- ಅಂಟಿಸು ಕರಾಮತ್ತು :

ಆದರೆ ಈ ಕೆಕೆ ನಂಜಪ್ಪ ಪ್ರಕರಣದಲ್ಲಿ ಪ್ರಥಮ ದರ್ಜೆ ಸಹಾಯಕ ಹಾಗೂ ಕೇಸ್ ವರ್ಕರ್ ರವಿಕುಮಾರ್, ಸ್ವತ್ತಿನ ಮಾಲೀಕರಿಂದ ಬ್ರೋಕರ್ ಗಳ ಮೂಲಕ ಲಕ್ಷಾಂತರ ರೂ. ಹಣ ಪಡೆದು 2016ರಲ್ಲಿ ಇದೇ ಸ್ವತ್ತಿಗೆ ಖಾತಾ ಪ್ರಮಾಣಪತ್ರ, ಖಾತಾ ಎಕ್ಸ್ ಟ್ರಾಕ್ಟ್ ಇದೇ ಕಚೇರಿಯಿಂದ ನೀಡಿದಂತೆ ದಾಖಲಾತಿ ಸೃಷ್ಟಿಸಿ, ಅಕ್ರಮವಾಗಿ ಈ ಎರಡು ಸ್ವತ್ತಿನಲ್ಲಿ ಕೆಕೆ ನಂಜಪ್ಪ ಎಂಬ ಮಾಲೀಕರ ಹೆಸರನ್ನು ನಮೂದಿಸಿದ್ದಾರೆ. ಈ ವಿಚಾರ ಕೊನೆಗೆ ಸಂಬಂಧಿಸಿದ ಮೌಲ್ಯಮಾಪಕ ಗೋವಿಂದಪ್ಪ ಎಂಬುವರಿಗೆ ವಿಷಯ ತಿಳಿದು ಇಬ್ಬರಿಗೂ ಜಗಳವಾಗಿ, ಇದೇ ರಿಜಿಸ್ಟರ್ ಬುಕ್ ನಲ್ಲಿ ಕೆಕೆ ನಂಜಪ್ಪ ಎಂಬುವರ ಹೆಸರನ್ನು ಪೆನ್ನಿನಿಂದ ಹೊಡೆದು ಹಾಕಿದ್ದಾರೆ ಎಂದು ಗೊತ್ತಾಗಿದೆ.

ಬೆಂಗಳೂರು ವೈರ್ ಗೆ ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತು ಕೊಂಡ ದುಷ್ಟ ಪಟಾಲಮ್, ಒಂದೊಮ್ಮೆ ಯಾರಾದರೂ ಮೇಲಧಿಕಾರಿಗಳು ತಮ್ಮನ್ನ ಪ್ರಶ್ನಿಸಿದರೆ, ಸಬೂಬು ಹೇಳಲು, 2016ರ ನಕಲಿ ಖಾತಾ ಎಕ್ಸ್ ಟ್ರಾಕ್ಟ್ ಅನ್ನು ಈ ಹಿಂದೆಯೇ ನೀಡಲಾಗಿತ್ತು ಎಂದು ತಿಳಿಸಲೆಂದು ಇದೇ ರಿಜಿಸ್ಟರ್ ನಲ್ಲಿ ಆ ಖಾತಾ ಎಕ್ಸ್ ಟ್ರಾಕ್ಟ್ ಅಂಟಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ತಿಳಿದ ಬಳಿಕ ಆ ದಾಖಲೆಯನ್ನು ಕಿತ್ತು ಹಾಕಿದರೂ ಆಶ್ಚರ್ಯವಿಲ್ಲ ಬಿಡಿ.

ಖಾತಾ ಪ್ರಮಾಣಪತ್ರ ನೀಡಿ ತಪ್ಪಾಗಿದೆ ಎಂದ ಕೆ.ಶ್ರೀನಿವಾಸ್ :

ಈ ಡೂಪ್ಲಿಕೇಟ್ ಖಾತಾ ನಮೂದಿನ ಬಗ್ಗೆ ನಿರ್ಗಮಿತ ಎಆರ್ ಒ ಕೆ.ಶ್ರೀನಿವಾಸಯ್ಯ ಅವರನ್ನು ಪ್ರಶ್ನಿಸಿದಾಗ, “ಕೆ.ಕೆ.ನಂಜಪ್ಪ ಎಂಬುವರ ಸ್ವತ್ತಿಗೆ ಎ- ಖಾತಾ ರಿಜಿಸ್ಟರ್ ನಲ್ಲಿ ಅಕ್ರಮವಾಗಿ ನಮೂದು ಮಾಡಿರುವುದು ತಪ್ಪು. ಆನಂತರ ಆ ಹೆಸರನ್ನು ಹೊಡೆದು ಹಾಕಲಾಗಿದೆ. ಈ ಬಗ್ಗೆ ತಾವು ಪರಿಶೀಲನೆ ನಡೆಸದೆ ಈ ವರ್ಷದ ಆಗಸ್ಟ್ 14 ಮತ್ತು 17ರಂದು ಖಾತಾ ಪ್ರಮಾಣಪತ್ರ ಹಾಗೂ ಖಾತಾ ಎಕ್ಸ್ ಟ್ರಾಕ್ಟ್ ಸಹಿ ಹಾಕಿ ನೀಡಿದ್ದೇನೆ. ಈ ನಕಲಿ ಖಾತಾ ತಾವು ಮಾಡಿಲ್ಲ” ಎಂದಷ್ಟೇ ಹೇಳಿದ್ದಾರೆ.

ನಿವೃತ್ತಿ ವಯಸ್ಸು ಬರೋ ತನಕವಷ್ಟು ದಿನವೂ ಪಾಲಿಕೆಯಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಿರ್ಗಮಿತ ಕೆ.ಶ್ರೀನಿವಾಸಯ್ಯ ಅವರಿಗೆ ಡೂಪ್ಲಿಕೇಟ್ ಖಾತೆ ಯಾವುದು? ಅದು ಹೇಗೆ ಮಾಡ್ತಾರೆ? ಎಂಬುದರ ಅರಿವಿಲ್ಲವೇನೋ ಪಾಪ. ಖಾತಾ ಪ್ರಮಾಣಪತ್ರ ಮತ್ತು ಖಾತಾ ಎಕ್ಸ್ ಟ್ರಾಕ್ಟ್ ಸೈನ್ ಮಾಡಿ ವಿತರಿಸುವಾಗ ಸಾಕಷ್ಟು ಅನುಭವಿರುವ ಅಧಿಕಾರಿಗೆ, ಕನಿಷ್ಠ ಪರಿಶೀಲಿಸುವ ಗೋಜಿಗೆ ಹೋಗದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇದು ಅವರ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ.

ಕಂದಾಯ ಡಿಸಿ ಡಿ.ಕೆ.ಬಾಬು ಅವರಿಗೆ ದಾಖಲೆ ಪರಿಶೀಲನೆಗೆ ಟೈಮ್ ಕೂಡಿ ಬಂದಿಲ್ಲ :

ಈ ಎರಡು ಪ್ರಕರಣಗಳ ಬಗ್ಗೆ ಏನು ಕ್ರಮ ಕೈಗೊಳ್ಳುವಿರಿ ಎಂದು ಬೊಮ್ಮನಹಳ್ಳಿ ಕಂದಾಯ ಉಪ ಆಯುಕ್ತ ಡಿ.ಕೆ.ಬಾಬು ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಿದಾಗ, “ಯಲಚೇನಹಳ್ಳಿ ಉಪವಿಭಾಗದಲ್ಲಿ ಅಕ್ರಮವಾಗಿ ಎ-ಖಾತಾ ಮಾಡಿಕೊಡಲಾಗಿದೆ ಎಂಬುದರ ವಿಚಾರದ ಬಗ್ಗೆ ಸ್ಥಳಕ್ಕೆ ಹೋಗಿ ದಾಖಲೆ ಪರಿಶೀಲಿಸಿ ತಿಳಿಸುತ್ತೇನೆ” ಎಂದು ಹೇಳಿದ ಆ ಅಧಿಕಾರಿ ಈ ತನಕ ಕ್ರಮ ಕೈಗೊಂಡಿಲ್ಲ. ಬೋಗಸ್ ಖಾತೆಗಳು ಮತ್ತು ಬ್ರೋಕರ್ ಗಳ ಅಡ್ಡವಾಗಿರುವ ಸ್ಥಳದಲ್ಲಿ ಇದೆಲ್ಲಾ ಕಾಮನ್ ಅಂತ ಸುಮ್ಮನಾಗಿರಬೇಕು. ಈ ಯಲಚೇನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ ಮತ್ತು ಪ್ರಭಾವ ಎಷ್ಟಿದೆ ಎಂದರೆ, ಇವರು ಬಂದರೆ ಇಲ್ಲಿ ರಾಜ ಮರ್ಯಾದೆ, ಕೂರಲು ಪ್ರತ್ಯೇಕ ಚೇರ್, ಯಾವುದೇ ಮುಲಾಜಿಲ್ಲದೆ ಯಾವಾಗ ಬೇಕಾದರೂ ಖಾತಾ ಅಸೆಸ್ ಮೆಂಟ್ ರಿಜಿಸ್ಟರ್ ಚೆಕ್ ಮಾಡಿ ನೋಡುವ ಸವಲತ್ತುಗಳಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಡೂಪ್ಲಿಕೇಟ್ ಖಾತಾ ಮಾಡಿಸಿದಲ್ಲಿ ತೊಂದರೆ ತಪ್ಪಿದ್ದಲ್ಲ :

ನಗರದಾದ್ಯಂತ 19 ಲಕ್ಷಕ್ಕೂ ಹೆಚ್ಚು ಸ್ವತ್ತುಗಳು ಪಾಲಿಕೆ ವ್ಯಾಪ್ತಿಯಲ್ಲಿದೆ. ಬಿ –ಖಾತಾ ಸೈಟ್ ಅಥವಾ ಆಸ್ತಿಗಳೆಂದರೆ ಬ್ಯಾಂಕಿನಲ್ಲಿ ಸರಿಯಾಗಿ ಸಾಲ ಸಿಗುವುದಿಲ್ಲ ಹಾಗೂ ಆ ಸ್ವತ್ತಿನ ಮೌಲ್ಯವು ಎ-ಖಾತಾ ಸ್ವತ್ತಿಗಿಂತ ಕಡಿಮೆಯಿರುತ್ತದೆ. ಹೀಗಾಗಿ ಸ್ವತ್ತಿನ ಮಾಲೀಕರು ಬ್ರೋಕರ್ ಹಾಗೂ ಭ್ರಷ್ಟ ಕಂದಾಯ ಅಧಿಕಾರಿಗಳ ಮೊರೆ ಹೋಗಿ ಒಂದೊಂದು ಖಾತೆಗೂ ಲಕ್ಷಾಂತರ ರೂಪಾಯಿ ಕರ್ಚು ಮಾಡಿ ಎ-ಖಾತಾ ಎಂಬ ಬೋಗಸ್ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಪಾಲಿಕೆಯು ಸಂಪೂರ್ಣವಾಗಿ ಇಂತಹ ಅಕ್ರಮಗಳನ್ನು ಪತ್ತೆ ಹಚ್ಚಿ ಎ- ಖಾತೆಯಲ್ಲಿ ಡೂಪ್ಲಿಕೇಟ್ ಎಂಟ್ರಿಗಳನ್ನು ಬಿ- ವಹಿಗೆ ಪುನಃ ವರ್ಗಾಯಿಸಿದಲ್ಲಿ, ಲಕ್ಷಾಂತರ ರೂಪಾಯಿ ಕೊಟ್ಟು ಎ-ಖಾತಾ ಮಾಡಿಸಿಕೊಂಡವರು ಸಿಡಿದೆದ್ದು, ಕೋರ್ಟ್, ಪ್ರತಿಭಟನೆ, ಹೋರಾಟ ಎಂಬುದರತ್ತ ಮುಖ ಮಾಡದಿದ್ದರೆ ಆಶ್ಚರ್ಯವಿಲ್ಲ.

ಮುನೀಷ್ ಮೌದ್ಗಿಲ್ ಈ ಬಗ್ಗೆ ಕ್ರಮ ಕೈಗೊಳ್ತಾರಾ? :

ಎ- ಖಾತೆ ಆಸೆಗಾಗಿ ಇತ್ತ ಲಕ್ಷಾಂತರ ರೂಪಾಯಿ ಹಣ ಕಳೆದು ಕೊಂಡಿದ್ದಾರೆ ಎನ್ನಲಾದ ಕೆಕೆ ನಂಜಪ್ಪನವರಿಗೆ ಎಫ್ ಡಿಎ ರವಿ ಕುಮಾರ್ ಮತ್ತು ಕಂದಾಯ ಮೌಲ್ಯ ಮಾಪಕ ಗೋವಿಂದಪ್ಪನವರ ನಡುವಿನ ಜಗಳದಲ್ಲಿ ಹಾಗೂ ನಿರ್ಗಮಿತ ಎಆರ್ ಒ ಕೆ.ಶ್ರೀನಿವಾಸಯ್ಯ ಅವರ ಕರ್ತವ್ಯ ಲೋಪ ಆ ಕಡೆ ಹಣ ಮತ್ತು ಈ ಕಡೆ ಖಾತೆಯೂ ಇಲ್ಲದೆ ನರಳುವ ಪರಿಸ್ಥಿತಿ. ಇದು ಯಲಚೇನಹಳ್ಳಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ ಬೋಗಸ್ ಖಾತೆಗೆ ಹಿಡಿದ ಕೈಗನ್ನಡಿ. ಈ ಪ್ರಕರಣದ ವಿಚಾರದಲ್ಲಿ ಇತ್ತೀಚೆಗಷ್ಟೇ ಬಿಬಿಎಂಪಿಯ ಕಂದಾಯ ವಿಭಾಗಕ್ಕೆ ವಿಶೇಷ ಆಯುಕ್ತರಾಗಿ ಬಂದಿರುವ ಖಡಕ್ ಅಧಿಕಾರಿ ಮುನೀಷ್ ಮೌದ್ಗಿಲ್ ತುರ್ತಾಗಿ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವರಾ ಎಂದು ಕಾದು ನೋಡಬೇಕಾಗಿದೆ.

WhatsApp Join our WhatsApp Channel
Previous Post

Black Hornet UAV | ಈ ನ್ಯಾನೋ ಹೆಲಿಕಾಪ್ಟರ್ ದೇಶದ ಭದ್ರತೆಗೆ ತೀರಾ ಮುಖ್ಯ…!! ಪ್ರಚಂಡ ಶಕ್ತಿಯುಳ್ಳ ಈ ಪುಟ್ಟ ಹೆಲಿಕಾಪ್ಟರ್ ವಿಶೇಷತೆಯೇನು?

Next Post

ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ-2024 : ಸಾಮೂಹಿಕ ನೋಂದಣಿ ವಿಶೇಷ ಅಭಿಯಾನಕ್ಕೆ ಚಾಲನೆ

Next Post

ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ-2024 : ಸಾಮೂಹಿಕ ನೋಂದಣಿ ವಿಶೇಷ ಅಭಿಯಾನಕ್ಕೆ ಚಾಲನೆ

ಬಿಬಿಎಂಪಿಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ಪಾಲಿಕೆಯ ಎಲ್ಲಾ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಸ್ವತ್ತಿನ ರಿಜಿಸ್ಟರ್ ವಲಯ ಕಚೇರಿಗಳಿಗೆ ನ.4ರ ಮಧ್ಯಾಹ್ನ 12 ಗಂಟೆಯೊಳಗೆ ರವಾನಿಸುವಂತೆ ಬರೆದ ಪತ್ರದ ದಾಖಲೆ.

BW INVESTIGATION BIG IMPACT | ಯಲಚೇನಹಳ್ಳಿ ಎಆರ್ ಒ ಕಚೇರಿ ಖಾತಾ ಅಕ್ರಮ : ಬೆಂಗಳೂರು ವೈರ್ ತನಿಖಾ ವರದಿ ಫಲಶ್ರುತಿ : ಇಡೀ ಬೆಂಗಳೂರಿನ ಪ್ರಾಪರ್ಟಿ ರಿಜಿಸ್ಟರ್ ವಲಯ ಕಚೇರಿಗಳಿಗೆ ರವಾನೆ

Please login to join discussion

Like Us on Facebook

Follow Us on Twitter

Recent News

​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

July 30, 2026

ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

July 29, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

July 30, 2026

ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

July 29, 2026

1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

July 29, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group