ಬೆಂಗಳೂರು, ಸೆ.05 www.bengaluruwire.com : ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು 2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕರು, ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ.
ಒಟ್ಟು 31 ಶಿಕ್ಷಕರು, ಇಬ್ಬರು ಪ್ರಾಂಶುಪಾಲರು ಮತ್ತು ಎಂಟು ಉಪನ್ಯಾಸಕರು ಈ ಪ್ರತಿಷ್ಠಿತ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಇಂದು (ಸೆಪ್ಟೆಂಬರ್ 5, 2025) ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆಯಲಿದೆ.
ಪ್ರಶಸ್ತಿ ಆಯ್ಕೆ ಮತ್ತು ನಗದು ಪುರಸ್ಕಾರ
ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು (ಒಬ್ಬ ವಿಶೇಷ ಶಿಕ್ಷಕರೂ ಸೇರಿದಂತೆ) ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ. 25,000 ನಗದು ಪುರಸ್ಕಾರವನ್ನು ನೀಡಲಾಗುವುದು, ಒಟ್ಟು ರೂ. 7,75,000 ಮೊತ್ತವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಈ ವೆಚ್ಚವನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಭರಿಸಲಾಗುವುದು.

ಉತ್ತಮ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಪ್ರಶಸ್ತಿಗಾಗಿ ರಾಜ್ಯಮಟ್ಟದ ಆಯ್ಕೆ ಸಮಿತಿಯ ಸಭೆಯು ಆಗಸ್ಟ್ 30 ಮತ್ತು ಸೆಪ್ಟೆಂಬರ್ 1, 2025 ರಂದು ಈ ಆಯ್ಕೆಯನ್ನು ಸರ್ವಾನುಮತದಿಂದ ನಿರ್ಧರಿಸಿತ್ತು. ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಆಯ್ಕೆಗೆ ತಲಾ 100 ಅಂಕಗಳ ಮಾನದಂಡಗಳನ್ನು ನಿಗದಿಪಡಿಸಲಾಗಿತ್ತು.
ಪ್ರಶಸ್ತಿ ವಿಜೇತ ಪ್ರಾಂಶುಪಾಲರು:
ಆನಂದ ಶಿವಪ್ಪಾ ಕೋಳಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಮಜಲಟ್ಟಿ, ಬೆಳಗಾವಿ ಜಿಲ್ಲೆ.
ಕೃಷ್ಣಯ್ಯ ಹೆಚ್ ಕೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕೃಷ್ಣರಾಜನಗರ, ಮೈಸೂರು ಜಿಲ್ಲೆ.
ಪ್ರಶಸ್ತಿ ವಿಜೇತ ಉಪನ್ಯಾಸಕರು:
ದೇವರಾಜು ಆರ್ (ಜೀವಶಾಸ್ತ್ರ), ಸರ್ಕಾರಿ ಪದವಿ ಪೂರ್ವ ಕಾಲೇಜು, ಕೃಷ್ಣರಾಜಪುರಂ, ಬೆಂಗಳೂರು.
ಡಾ. ಸಪ್ರರಾಜ ಜಿ (ಕನ್ನಡ), ಸರ್ಕಾರಿ ಪದವಿ ಪೂರ್ವ ಕಾಲೇಜು, ಸಾಗರ, ಶಿವಮೊಗ್ಗ ಜಿಲ್ಲೆ.
ಡಾ. ಲಿಂಗಾನಂದ ಕೆ ಗವಿಮರ್ (ಜೀವಶಾಸ್ತ್ರ), ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಜಮಖಂಡಿ, ಬಾಗಲಕೋಟೆ.
ಜ್ಯೋತಿ ಸಿ ಎಂ (ಕನ್ನಡ), ಸರ್ಕಾರಿ ಚಿಂತಾಮಣಿ ರಾವ್ ಪದವಿ ಪೂರ್ವ ಕಾಲೇಜು, ಶಹಾಪುರ, ಬೆಳಗಾವಿ.
ಬಸವರಾಜ ಎಸ್ ಜಲವಾಡಿ (ಸಮಾಜಶಾಸ್ತ್ರ), ಸರ್ಕಾರಿ ಪದವಿ ಪೂರ್ವ ಕಾಲೇಜು, ಕೂಡಗಿ, ವಿಜಯಪುರ ಜಿಲ್ಲೆ.
ಡಾ. ಲೋಕೇಶ್ ಕೆ (ರಸಾಯನಶಾಸ್ತ್ರ), ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ತಿಪಟೂರು, ತುಮಕೂರು ಜಿಲ್ಲೆ.
ವಿಜಯಲಕ್ಷ್ಮಿ ಪಂಡಪ್ಪ ಪೆಟ್ಟೂರು (ರಾಜ್ಯಶಾಸ್ತ್ರ), ಸರ್ಕಾರಿ ಎಸ್ ಎಸ್ ಬಿ ಹೊರಟ್ಟಿ ಪದವಿ ಪೂರ್ವ ಕಾಲೇಜು, ಯಡಹಳ್ಳಿ, ಬಾಗಲಕೋಟೆ ಜಿಲ್ಲೆ.
ವೆಂಕಟಾಚಲ ಸಿ ವಿ (ಭೌತಶಾಸ್ತ್ರ), ಶ್ರೀ ಕೆಎಂಎಂ ರಂಗನಾಥ ಪದವಿ ಪೂರ್ವ ಕಾಲೇಜು, ಶಿರಾ, ತುಮಕೂರು ಜಿಲ್ಲೆ.























