ನವದೆಹಲಿ, ಅ.10 www.bengaluruwire.com : ಕೇಂದ್ರ ಸರ್ಕಾರವು ಇಂದು ಕರ್ನಾಟಕ ಸೇರಿದಂತೆ ಒಟ್ಟಾರೆ ವಿವಿಧ ರಾಜ್ಯಗಳಿಗೆ ₹1,78,173 ಕೋಟಿ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ. ಇದು ನಿಯಮಿತ ಕಂತಿಗೆ ಹೆಚ್ಚುವರಿಯಾಗಿ ಅಕ್ಟೋಬರ್ ತಿಂಗಳ ₹89,086.50 ಕೋಟಿ ಮುಂಗಡ ಕಂತು ಒಳಗೊಂಡಿದೆ.
ಈ ಬಿಡುಗಡೆಯು ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ಬಂಡವಾಳ ವೆಚ್ಚವನ್ನು ವೇಗಗೊಳಿಸಲು ರಾಜ್ಯಗಳನ್ನು ಸಕ್ರಿಯಗೊಳಿಸಲು ಮತ್ತು ಅವುಗಳ ಅಭಿವೃದ್ಧಿ ಹಾಗೂ ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸುತ್ತದೆ ಎಂದು ಹಣಕಾಸು ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ (6,498 ಕೋಟಿ ರೂ.), ತಮಿಳುನಾಡು (7,268 ಕೋಟಿ ರೂ.), ಆಂಧ್ರಪ್ರದೇಶ (7,211 ಕೋಟಿ ರೂ.), ತೆಲಂಗಾಣ (3,745 ಕೋಟಿ ರೂ.) ಹಾಗೂ ಕೇರಳ (3,430 ಕೋಟಿ ರೂ.) ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಈ ಬಾರಿ ಒಟ್ಟಾರೆ 28,152 ಕೋಟಿ ರೂ.ಬಿಡುಗಡೆಯಾಗಿದೆ.




















