Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

BW SPECIAL | BESCOM Electric Poles | ಬೆಂಗಳೂರು : ವಿದ್ಯುತ್ ಕಂಬದ ಮೇಲೆ ಹಾಕಲಾಗಿದ್ದ 762 ಕಿ.ಮೀ ಉದ್ದದ ಅನಧಿಕೃತ ಕೇಬಲ್  ಕಡಿತ : ಕೇಬಲ್ ಮಾಫಿಯಾಕ್ಕೆ ಚುರುಕು ಮುಟ್ಟಿಸಿದ ಬೆಸ್ಕಾಂ

ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕೇಬಲ್ ಅಳವಡಿಕೆಯಿಂದ ಜೀವಹಾನಿ, ಅಪಘಾತಕ್ಕೆ ಕಾರಣ | ಬೆಸ್ಕಾಂ, ಬಿಬಿಎಂಪಿಗೆ ಕೋಟ್ಯಾಂತರ ರೂ. ಆದಾಯಕ್ಕೆ ಕತ್ತರಿ. | ಬೆಸ್ಕಾಂ ಡಕ್ಟ್ ಗಳಲ್ಲಿ ಖಾಸಗಿ ಒಎಫ್ ಸಿ, ಡೇಟಾ ಹಾಗೂ ಡಿಶ್ ಕಂಪನಿಗಳು ಕೇಬಲ್ ಗಳನ್ನು ಅಳವಡಿಸಲು 4 ಬಾರಿ ಟೆಂಡರ್ ಕರೆದರೂ ಪ್ರತಿಕ್ರಿಯಿಸಿಲ್ಲ

by Bengaluru Wire Desk
July 15, 2024
in Bengaluru Focus, BW Special, Public interest
Reading Time: 2 mins read
0
ಅನಧಿಕೃತ ಕೇಬಲ್ ಗಳ ಪ್ರಾತಿನಿಧಿಕ ಚಿತ್ರ.

ಅನಧಿಕೃತ ಕೇಬಲ್ ಗಳ ಪ್ರಾತಿನಿಧಿಕ ಚಿತ್ರ.

ಬೆಂಗಳೂರು, ಜು.15 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಇಂಟರ್ ನೆಟ್, ಮೊಬೈಲ್ ಬಳಕೆ ಹೆಚ್ಚಾದಂತೆ ಹಾಗೂ ಸೇವೆಯಲ್ಲಿ ಅಂತರ್ಜಾಲದ ವೇಗ ಜಾಸ್ತಿಯಾದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕ ಸಿಕ್ಕ ಕರೆಂಟ್ ಕಂಬ, ಮರಗಿಡ, ಕಟ್ಟಡಗಳ ಮೇಲೆಲ್ಲಾ ಒಎಫ್ ಸಿ ಕೇಬಲ್, ಡಾಟಾ ಮತ್ತು ಡಿಶ್ ಕೇಬಲ್ ಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಬೆಸ್ಕಾಂ ನಗರದಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬಗಳ ಮೇಲೆ ಹಾಕಲಾಗಿದ್ದ 821 ಕಿ.ಮೀ ಅನಧಿಕೃತ ಕೇಬಲ್ ಗಳನ್ನು ಗುರ್ತಿಸಿ ಆ ಪೈಕಿ 761.71 ಕಿ.ಮೀ ಕೇಬಲ್ ಗಳನ್ನು ಮುಲಾಜಿಲ್ಲದೆ ಕಿತ್ತುಹಾಕಿದೆ.

ಈ ಅನಧಿಕೃತ ಕೇಬಲ್ ಗಳಿಂದ ವಿದ್ಯುತ್ ಅಪಘಾತ ಒಂದು ಕಡೆಯಾದರೆ ಮತ್ತೊಂದೆಡೆ ಸಾರ್ವಜನಿಕ ಸ್ಥಳಗಳಲ್ಲಿ ಮಳೆಗಾಳಿ ಮತ್ತಿತರ ಕಾರಣಕ್ಕೆ ಮರಗಿಡ, ಕಟ್ಟಡ ಮತ್ತಿತರ ಸ್ಥಳಗಳಲ್ಲಿ ಕೇಬಲ್ ಕಟ್ಟಾಗಿ ಬಿದ್ದು, ವಾಹನ ಚಾಲಕರು, ಪಾದಚಾರಿಗಳ ಪಾಲಿಗೆ ಮೃತ್ಯುಪಾಶವಾಗಿದೆ. ಇದರಿಂದ ಹಲವು ಬಾರಿ ಅಪಘಾತ, ಜೀವಹಾನಿ ಆದ ಉದಾಹರಣೆಯಿದೆ.

ಅನಧಿಕೃತವಾಗಿ ಹಾಕಲಾಗಿತ್ತು 401 ಕಿ.ಮೀ ಉದ್ದದ ಒಎಫ್ ಸಿ ಕೇಬಲ್ :

ಈ ನಿಟ್ಟಿನಲ್ಲಿ ಬೆಸ್ಕಾಂ ಇತ್ತೀಚೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್‌, ಡಾಟ ಕೇಬಲ್‌ ಹಾಗೂ ಡಿಶ್ ಕೇಬಲ್‌ ಗಳನ್ನು ಜು.08 ರ ಒಳಗೆ ತೆರವುಗೊಳಿಸಲು ಸಂಬಂಧಿಸಿದ ಇಂಟರ್‌ ನೆಟ್‌ ಸೇವಾ ಕಂಪನಿಗಳು, ಟಿವಿ ಕೇಬಲ್‌ ಆಪರೇಟರ್‌ ಗಳಿಗೆ ಬೆಸ್ಕಾಂ ಗಡವು ನೀಡಿತ್ತು. ಇದೀಗ ಆ ಗಡುವು ಮುಗಿದ ಹಿನ್ನಲೆಯಲ್ಲಿ ಜುಲೈ 8 ರಿಂದ 14ನೇ ತಾರೀಖಿನ ವೇಳೆಗೆ ನಗರದ ಉತ್ತರ ವೃತ್ತ, ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವೃತ್ತಗಳಲ್ಲಿನ ಬೆಸ್ಕಾಂ ವಿದ್ಯುತ್ ಕಂಬದ ಮೇಲೆ ಅನಧಿಕೃತವಾಗಿ 401.611 ಕಿ.ಮೀ ಒಎಫ್ ಸಿ ಕೇಬಲ್ ಗಳ ಪೈಕಿ 358.05 ಕಿ.ಮೀ ವೈರ್ ಗಳನ್ನು ಬೆಸ್ಕಾಂ ಸಿಬ್ಬಂದಿ ತೆರವು ಮಾಡಿದ್ದಾರೆ.

231 ಕಿ.ಮೀ ಅನಧಿಕೃತ ಡಿಶ್ ವೈರ್, 172 ಕಿ.ಮೀ ಇಂಟರ್ ನೆಟ್ ಕೇಬಲ್ ಗಳು ಕಡಿತ :

ಇನ್ನು ನಗರದ 4 ವೃತ್ತಗಳಲ್ಲಿನ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬದ ಮೇಲೆ 235.35 ಕಿ.ಮೀ ಉದ್ದದ ಡಿಶ್ ಕೇಬಲ್ ಗಳನ್ನು ಹಾಕಿರುವುದನ್ನು ಪತ್ತೆ ಹಚ್ಚಿರುವ ಬೆಸ್ಕಾಂ ಸಿಬ್ಬಂದಿ ಆ ಪೈಕಿ 231.33 ಕಿ.ಮೀ ಕೇಬಲ್ ಗಳನ್ನು ಕಿತ್ತು ಹಾಕಿದೆ. ಅದೇ ರೀತಿ 184.474 ಕಿ.ಮೀ ಉದ್ದದ ಅನಧಿಕೃತವಾಗಿ ಹಾಕಲಾದ ಇಂಟರ್ ನೆಟ್ ಕೇಬಲ್ ಗಳನ್ನು ಪತ್ತೆ ಹಚ್ಚಿ ಅವುಗಳ ಪೈಕಿ 172.32 ಕಿ.ಮೀ ಕೇಬಲ್ ಗಳನ್ನು ಕಿತ್ತುಹಾಕಿದೆ. ಬೆಸ್ಕಾಂ ತಾನೇ ಡಕ್ಟ್ ಗಳನ್ನು ಬಿಬಿಎಂಪಿ ರಸ್ತೆಗಳಲ್ಲಿ ನೂರಾರು ಕಿ.ಮೀ ಮಾಡಿದ್ದರೂ, ಇದರಲ್ಲಿ ಇಂತಿಷ್ಟು ಶುಲ್ಕ ನೀಡಿ ಕೇಬಲ್ ಅಳವಡಿಸಲು ಸರ್ವೀಸ್ ಪ್ರೊವೈಡರ್ ಸಂಸ್ಥೆಗಳಿಗೆ ಸಮಸ್ಯೆಯೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮರವೊಂದರ ಮೇಲೆ ಅನಧಿಕೃತವಾಗಿ ಕೇಬಲ್ ಗಳನ್ನು ಹಾಕಿರುವುದು ಬೆಂಗಳೂರಿನಲ್ಲಿ ಸಾಮಾನ್ಯ ವಿದ್ಯಮಾನ ಎಂಬಂತಾಗಿರುವುದು ದುರದೃಷ್ಟಕರ.

ಬೆಸ್ಕಾಂ ಡಕ್ಟ್ ನಲ್ಲಿ ಖಾಸಗಿಯವರು ಕೇಬಲ್ ಹಾಕಲು ನಿರ್ಲಕ್ಷ್ಯವೇಕೆ? :

ಬೆಸ್ಕಾಂ ಕಳೆದ 2- 3 ವರ್ಷಗಳ ಹಿಂದೆ ನಗರದಾದ್ಯಂತ ಹೈಟೆನ್ಶನ್ ವೈರ್ ಕೇಬಲ್ ಗಳನ್ನು ನೆಲದಡಿಯಲ್ಲಿ ಹಾಕಲು ಡಕ್ಟ್ ಗಳನ್ನು ಮಾಡಿದ್ದು, ಅದರ ಪಕ್ಕದಲ್ಲಿಯೇ ಇಂಟರ್ ನೆಟ್, ಒಎಫ್ ಸಿ ಮತ್ತಿತರ ಕೇಬಲ್ ಗಳನ್ನು ಅಳವಡಿಸುವ ಸಂಸ್ಥೆಗಳಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡಲು ಪ್ರತ್ಯೇಕ ಖಾಲಿ ಡಕ್ಟ್ ಗಳನ್ನು ಅಳವಡಿಸಿದೆ. ಆದರೂ ಕೇಬಲ್ ಟಿವಿ, ಇಂಟರ್ ನೆಟ್ ಸೇವೆ ನೀಡುವ ಸಂಸ್ಥೆಗಳು ಕೋಟ್ಯಾಂತರ ರೂಪಾಯಿ ಹಣ ಮಾಡುತ್ತಿವೆಯಷ್ಟೆ. ಡಿಶ್ ಕೇಬಲ್, ಡಾಟಾ ಕೇಬಲ್ ಹಾಗೂ ಒಎಫ್ ಸಿ ಕೇಬಲ್ ಗಳನ್ನು ಬಿಬಿಎಂಪಿ ಅಥವಾ ಬೆಸ್ಕಾಂ ಗೆ ಯಾವುದೇ ಶುಲ್ಕವನ್ನು ನೀಡದೆ ಉಚಿತವಾಗಿ ಹಾಗೂ ಅನಧಿಕೃತವಾಗಿ ಕಟ್ಟಡ, ಮರ, ವಿದ್ಯುತ್ ಕಂಬ, ಬಸ್ ಸ್ಟಾಪ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುತ್ತಾ ಬರುವುದನ್ನು ರೂಢಿಸಿಕೊಂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಗೆ ಭ್ರಷ್ಟ ಎಂಜಿನಿಯರ್ ಗಳ ಕೈಬಿಸಿ ಮಾಡಿ ಒಪ್ಪಿಗೆ ಪಡೆದಕ್ಕಿಂತ ಹೆಚ್ಚಿನ ಕೇಬಲ್ ಗಳನ್ನು ನೆಲದಡಿಯಲ್ಲಿ ಅಳವಡಿಸಿ ಏಮಾರಿಸುವ ವರ್ಗವೇ ಸೃಷ್ಟಿಯಾಗಿದೆ. ಅದನ್ನು ಬುಡ ಸಮೇತ ಕಿತ್ತು ಎಸೆಯುವಲ್ಲಿ ಪಾಲಿಕೆ ಆಡಳಿತ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಎಷ್ಟೋ ವೇಳೆ ಮಳೆಗಾಳಿಗೆ ಇಂತಹ ಕೇಬಲ್ ಗಳು ಕಿತ್ತು ಬಂದು, ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರ ಕುತ್ತಿಗೆ, ಮೈಗೆ, ವಾಹನಕ್ಕೆ ಸಿಲುಕಿ ಅಪಘಾತವಾಗಿ ಜೀವಹಾನಿಯಾದ ಬಗ್ಗೆ ವರದಿಗಳಾಗಿದೆ. ಹೀಗಿದ್ದರೂ ಟೆಲಿಕಾಂ ಸಂಸ್ಥೆಗಳಾಗಲಿ, ಇಂಟರ್ ನೆಟ್ ಸೇವೆ ನೀಡುವ ಸಂಸ್ಥೆಗಳಗಾಲಿ ತಾವು ಅನಧಿಕೃತವಾಗಿ ಅಳವಡಿಸಿದ ಕೇಬಲ್ ಗಳನ್ನು ತೆಗೆಯುವ ಗೋಜಿಗೆ ಹೋಗಿಲ್ಲ.

ಬೆಸ್ಕಾಂ ಡೆಕ್ಟ್ ನಲ್ಲಿ ಕೇಬಲ್ ಹಾಕೋಕೆ 4 ಬಾರಿ ಟೆಂಡರ್!!

ಕಡಿಮೆ ದರದ ನೆಲ ಬಾಡಿಗೆ ವಿಧಿಸಿದ್ದರೂ ಕೇಬಲ್ ಮಾಫಿಯಾಕ್ಕೆ ಬೇಕಿಲ್ಲ!!

ಬಿಎಂಆರ್ ಸಿಎಲ್ ತನ್ನ ಮಾರ್ಗದಲ್ಲಿ ಒಎಫ್ ಸಿ ಸೇರಿದಂತೆ ಮತ್ತಿತರ ಕೇಬಲ್ ಗಳನ್ನು ತನ್ನ ಡಕ್ಟ್ ನಲ್ಲಿ ಅಳವಡಿಸಲು ಪ್ರತಿ ಕಿ.ಮೀಗೆ ಪ್ರತಿ ತಿಂಗಳಿಗೆ 2 ಸಾವಿರ ರೂ. ನೆಲಬಾಡಿಗೆಯನ್ನು ನಿಗದಿಪಡಿಸಿದೆ. ಇದೇ ದರವನ್ನು ಆಧಾರವಾಗಿಟ್ಟುಕೊಂಡು ಬೆಸ್ಕಾಂ ಕೂಡ ಮೊದಲ ಬಾರಿಗೆ ನಗರದಾದ್ಯಂತ ತಾನು ರಸ್ತೆ ಬದಿಯಲ್ಲಿ ಅಳವಡಿಸಿರುವ ಡಕ್ಟ್ ಗಳಲ್ಲಿ (ನೆಲದಡಿಯಲ್ಲಿ ಹಾಕಲಾದ ಡಬ್ಬಿ) ಒಎಫ್ ಸಿ, ಡಾಟಾ ಹಾಗೂ ಡಿಶ್ ಕೇಬಲ್ ಗಳನ್ನು ಅಳವಡಿಸಲು ತಾನೇ ಕೇಬಲ್ ಗಳನ್ನು ಹಾಕಿಕೊಟ್ಟು, ತಾವು ಕೇವಲ ಮಾಸಿಕ ಬಾಡಿಗೆ ನೀಡಿ ಎಂದು ಸೇವಾದಾತರಿಗಾಗಿ ಟೆಂಡರ್ ಕರೆದಿತ್ತು. ಇದಕ್ಕೂ ಸರ್ವೀಸ್ ಪ್ರೊವೈಡರ್ಸ್ ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಕೊನೆಗೆ ವಿದ್ಯುತ್ ಸರಬರಾಜು ಸಂಸ್ಥೆಯೇ ನಿಮಗೆ ಡಕ್ಟ್ ಒದಗಿಸಲಿದೆ, ನೀವೇ ಕೇಬಲ್ ಅಳವಡಿಸಿಕೊಂಡು ಇಂತಿಷ್ಟು ಬಾಡಿಗೆ ನೀಡಿ ಅಂತ ದರವನ್ನು ಕಡಿಮೆ ಮಾಡಿ ಟೆಂಡರ್ ಕರೆದಿತ್ತು. ಅದಕ್ಕೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕೊನೆಗೆ ಮೂರನೇ ಬಾರಿಗೆ ಸೇವಾದಾತರ ಜೊತೆ ಸಭೆ ನಡೆಸಿ ಅವರು ಬೇಡಿಕೆಯಿಟ್ಟಂತೆ ಬೆಸ್ಕಾಂ ವೃತ್ತದ ವ್ಯಾಪ್ತಿಯ ಬದಲಿಗೆ ಸಣ್ಣ ಮಟ್ಟದಲ್ಲಿ ಕೇಬಲ್ ಅಳವಡಿಸಲು ಅವಕಾಶ ನೀಡಿ ಪುನಃ ಟೆಂಡರ್ ಕರೆದರೂ ಕೇಬಲ್ ಮಾಫಿಯಾ ಅದಕ್ಕೂ ಬಗ್ಗಲಿಲ್ಲ ಎಂದು ಬೆಸ್ಕಾಂ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ. ಈ ರೀತಿ ಒಟ್ಟು ನಾಲ್ಕು ಬಾರಿ ಟೆಂಡರ್ ಕರೆದರೂ ಕೇಬಲ್ ಮಾಫಿಯಾದವರು ಬಗ್ಗದಿದ್ದಾಗ ಬೆಸ್ಕಾಂ, ಅನಧಿಕೃತವಾಗಿ ತನ್ನ ವಿದ್ಯುತ್ ಕಂಬದ ಮೇಲೆ ಹಾಕಿರುವ ಕೇಬಲ್ ಗಳನ್ನು ಕಡಿತ ಮಾಡುವ ಕೆಲಸಕ್ಕೆ ಇಳಿದು ಅಕ್ರಮ ಎಸಗುವವರಿಗೆ ಚುರುಕು ಮುಟ್ಟಿಸಿದೆ.

ಅಲ್ಲದೇ ಇದಕ್ಕೂ ಮುನ್ನ ನಾಲ್ಕನೇ ಬಾರಿಗೆ ಬೆಸ್ಕಾಂ ತನ್ನ ಡೆಕ್ಟ್ ಗಳಲ್ಲಿ ವಿವಿಧ ರೀತಿಯ ಕೇಬಲ್ ಗಳನ್ನು ಅಳವಡಿಸಲು ಆಸಕ್ತಿ ವ್ಯಕ್ತಪಡಿಸುವಿಕೆಯನ್ನು ವಿವಿಧ ಟೆಲಿಕಾಂ, ಇಂಟರ್ ನೆಟ್ ಹಾಗೂ ಡಿಶ್ ಸೇವೆ ಒದಗಿಸುವ ಸೇವಾದಾತರಿಗಾಗಿ ಕರೆದಿದ್ದು, ಇದೇ ಜುಲೈ 20 ಈ ಅವಧಿ ಕೊನೆಯಾಗಲಿದೆ.

2023ನೇ ಇಸವಿಯಲ್ಲೂ ನಡೆದಿತ್ತು ವಿಶೇಷ ಕಾರ್ಯಾಚರಣೆ :

ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ ಸಿ, ಕೇಬಲ್‌, ಡಾಟ ಕೇಬಲ್‌ ಹಾಗೂ ಡಿಶ್‌ ಕೇಬಲ್‌ ಗಳನ್ನು ತೆರವುಗೊಳಿಸುವ ಸಂಬಂಧ ಬೆಸ್ಕಾಂ 2023ರ ಆಗಸ್ಟ್‌ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡು, ಅನಧಿಕೃತ ಡಾಟ ಕೇಬಲ್‌, ಓಎಫ್‌ಸಿ ಕೇಬಲ್‌ ಹಾಗೂ ಡಿಶ್‌ ಕೇಬಲ್‌ ಗಳನ್ನು ತೆರವುಗೊಳಿಸಲು ಒಂದು ವಾರಗಳ ಗಡುವು ವಿಧಿಸಿತ್ತು. ಬೆಸ್ಕಾಂನ ವಿಶೇಷ ಕಾರ್ಯಾಚರಣೆ ಹೊರತಾಗಿಯೂ ಅನಧಿಕೃತ ಕೇಬಲ್‌ ಗಳನ್ನು ವಿದ್ಯುತ್‌ ಕಂಬಗಳ ಮೇಲೆ ಮತ್ತೆ ಕೇಬಲ್ ಮಾಫಿಯಾ ಕೆಲಸ ಮಾಡಿ ಪುನಃ ಕೇಬಲ್ ಅಳವಡಿಸಿದೆ. ವಿದ್ಯುತ್ ಕಂಬ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಈ ರೀತಿಯ ಅನಧಿಕೃತ ಕೇಬಲ್ ಅಳವಡಿಕೆ ಮಾಡುವ ಸರ್ವೀಸ್ ಪ್ರೊವೈಡರ್ ಸಂಸ್ಥೆಯ ಪ್ರತಿನಿಧಿಗಳು ನೂರಾರು ಕಿ.ಮೀ ಅಳವಡಿಸಿದ ಕೇಬಲ್ ಗಳನ್ನು ಬೆಸ್ಕಾಂ ಕಿತ್ತು ಹಾಕಿದರೂ ಇನ್ನು ಕೆಲವೇ ದಿನಗಳಲ್ಲಿ ಪುನಃ ಅಕ್ರಮವಾಗಿ ಕೇಬಲ್ ಅಳವಡಿಸುವುದನ್ನು ಶಾಶ್ವತವಾಗಿ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಠಿಣ ಕ್ರಮಗಳನ್ನು ತರಲು ಕಾನೂನು ಅಥವಾ ಚಾಲ್ತಿಯಲ್ಲಿರುವ ಕಾನೂನಿಗೆ ಸೂಕ್ತ ತಿದ್ದಪಡಿ ತಂದು ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ.

View this post on Instagram

A post shared by DrSayed Mujahid Husain (@dr_hifive)

Previous Post

Actor Rakshit Shetty Against FIR | ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಮೇಲೆ ಎಫ್ಐಆರ್ ದಾಖಲು : ಕಾಪಿರೈಟ್ ಉಲ್ಲಂಘನೆ ಆರೋಪ

Next Post

BDA Published 172 Illegal Layouts List | ಬೆಂಗಳೂರಿನಲ್ಲಿದೆ 172 ಅನಧಿಕೃತ ಬಡಾವಣೆಗಳು ಎಚ್ಚರ!! : ಬಿಡಿಎ, ಕಾನೂನು ಬದ್ಧವಲ್ಲದ ಖಾಸಗಿ ಲೇಔಟ್ ಗಳ ಸಂಪೂರ್ಣ ವಿವರ ಪ್ರಕಟಿಸಿದೆ : ಇಲ್ಲಿದೆ ಅವುಗಳ ಪಟ್ಟಿ

Next Post
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

BDA Published 172 Illegal Layouts List | ಬೆಂಗಳೂರಿನಲ್ಲಿದೆ 172 ಅನಧಿಕೃತ ಬಡಾವಣೆಗಳು ಎಚ್ಚರ!! : ಬಿಡಿಎ, ಕಾನೂನು ಬದ್ಧವಲ್ಲದ ಖಾಸಗಿ ಲೇಔಟ್ ಗಳ ಸಂಪೂರ್ಣ ವಿವರ ಪ್ರಕಟಿಸಿದೆ : ಇಲ್ಲಿದೆ ಅವುಗಳ ಪಟ್ಟಿ

ಕಲಾವಿದ ಕೆ.ಸೋಮಶೇಖರ್ ರಚಿಸಿದ ನಾಡದೇವತೆಯ ಚಿತ್ರವನ್ನು ರಾಜ್ಯ ಸರ್ಕಾರ ಅಧಿಕೃತವೆಂದು ಆದೇಶಿಸಿದೆ.

Private Industries Job Reservation | ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ : ಸೋಮವಾರದ ಒಳಗೆ ಮಸೂದೆ ಮಂಡನೆ ; ಕನ್ನಡಿಗರಿಗೆ ಹೇಗೆ ಅನುಕೂಲ?

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group