Thursday, August 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

  • Bengaluru Focus

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

  • Bengaluru Focus

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Photo Gallery

Chandanavana Film Critics Awards -2022 | ಮೂರನೇ ವರ್ಷದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ -2022 ಟ್ರೋಫಿ ಅನಾವರಣ

ಚಲನಚಿತ್ರ ವಿಮರ್ಶಕರು ಹಾಗೂ ಪತ್ರಕರ್ತರಿಂದ ತಲಾ ಒಂದು ವಿಭಾಗಗಳಲ್ಲಿ 5 ನಾಮನಿರ್ದೇಶನದಂತೆ 20 ವಿಭಾಗಗಳಲ್ಲಿ ಚಲನಚಿತ್ರ ಪಟ್ಟಿ ಪ್ರಕಟ

by Bengaluru Wire Desk
February 27, 2022
in Photo Gallery, Public interest
Reading Time: 1 min read
0

ಬೆಂಗಳೂರು, (www.bengaluruwire.com) : ಮೂರನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್- 2022ನ ಟ್ರೋಫಿ ಅನಾವರಣ ಮತ್ತು ನಾಮನಿರ್ದೇಶನಗೊಂಡ ಚಲನಚಿತ್ರ, ನಟ, ನಟಿಯರು, ನಿರ್ದೇಶಕರು ಸೇರಿದಂತೆ 20 ವಿಭಾಗಗಳಲ್ಲಿ ಸ್ಪರ್ಧೆಯಲ್ಲಿರುವ ಪಟ್ಟಿಯನ್ನು ಭಾನುವಾರ ಪ್ರಕಟಿಸಲಾಗಿದೆ.

ಮಲ್ಲೇಶ್ವರದಲ್ಲಿನ ಎಸ್‌ಆರ್‌ವಿ ಥಿಯೇಟರ್ ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ, ನಟಿ ರಾಗಿಣಿ ದ್ವಿವೇದಿ, ನಟ ರಿಷಿ ಅವರುಗಳು ಮೂರನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್- 2022ನ ಟ್ರೋಫಿ ಅನಾವರಣ ಮಾಡಿದರು.

ಇದೇ ಸಂದರ್ಭದಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಸಂಸ್ಥಾಪಕ ಹಾಗೂ ಪತ್ರಕರ್ತ ಶ್ಯಾಮ್ ಪ್ರಸಾದ್, ಪ್ರತಿಯೊಂದು ಕ್ಯಾಟಗರಿಯಲ್ಲಿ 5 ನಾಮನಿರ್ದೇಶನದಂತೆ 20 ಕ್ಯಾಟಗರಿಯಲ್ಲಿ ಕನ್ನಡ ಚಲನಚಿತ್ರ ವಿಮರ್ಶಕರು ಹಾಗೂ ಪತ್ರಕರ್ತರು ಸೇರಿ ಆಯ್ಕೆ ಮಾಡಿದ ಪಟ್ಟಿಯನ್ನು ಬಿಡುಗಡೆ ಮಾಡಿದರು.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ಯಾಮ್ ಪ್ರಸಾದ್, ಬೃಹತ್ ಬೆಂಗಳೂರಿನ ನಮ್ಮ ಕಸ ನಮ್ಮ ಜವಾಬ್ದಾರಿ ಅಭಿಯಾನಕ್ಕೆ ಈ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಟ ನಟಿಯರು ಕೂಡ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ. ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ‌ ಎಂದು ಮಾಹಿತಿ ನೀಡಿದರು.

ನಟಿ ರಾಗಿಣಿ ದ್ವಿವೇದಿ

ಬಡವ ರಾಸ್ಕಲ್,‌ ಗರುಡ ಗಮನ ವೃಷಭ ವಾಹನ, ಪುಗ್ಸಟ್ಟೆ ಲೈಫ್, ರತ್ನನ್ ಪ್ರಪಂಚ ಚಲನಚಿತ್ರಗಳು ಎಲ್ಲಾ ವಿಭಾಗಗಳಲ್ಲೂ ಹೆಚ್ಚಿನ ನಾಮಿನೇಷನ್ ಆಗಿದೆ.

ಮೂರನೇ ಚಂದನವ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್- 2022ಕ್ಕೆ ನಾಮ ನಿರ್ದೇಶನಗೊಂಡ ಚಲನಚಿತ್ರಗಳು, ನಟ, ನಟಿಯರು, ನಿರ್ದೇಶಕರ ವಿವರ ಈ ಕೆಳಕಂಡಂತಿದೆ :

  1. ಅತ್ಯುತ್ತಮ ಚಿತ್ರ : ಬಡವ ರಾಸ್ಕಲ್,‌ ಗರುಡ ಗಮನ ವೃಷಭ ವಾಹನ, ಪುಗ್ಸಟ್ಟೆ ಲೈಫ್, ರತ್ನನ್ ಪ್ರಪಂಚ, ಸಲಗ
  2. ಅತ್ಯುತ್ತಮ ನಿರ್ದೇಶಕ : ರಾಜ್ .ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ), ಅರವಿಂದ್ ಕುಪ್ಲಿಕರ್ (ಪುಗ್ಸಟ್ಟೆ ಲೈಫ್)
    ತರುಣ್ ಸುಧೀರ್ (ರಾಬರ್ಟ್), ಬಿ.ಎಂ. ಗಿರಿರಾಜ್ (ಕನ್ನಡಿಗ)
    ದುನಿಯಾ ವಿಜಯ್ (ಸಲಗ)
  3. ಅತ್ಯುತ್ತಮ ನಟ : ರಾಜ್. ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ), ಧನಂಜಯ್ (ಬಡವ ರಾಸ್ಕಲ್), ಸಂಚಾರಿ ವಿಜಯ್ (ಪುಗ್ಸಟ್ಟೆ ಲೈಫು), ವಿ.ರವಿಚಂದ್ರನ್ (ದೃಶ್ಯ 2) ಲ, ಧನಂಜಯ್ (ರತ್ನನ್ ಪ್ರಪಂಚ)
  4. ಅತ್ಯುತ್ತಮ ನಟಿ : ರಚಿತಾ ರಾಮ್ (ಲವ್ ಯೂ ರಚ್ಚು),
    ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್), ಗಾನವಿ ಲಕ್ಷ್ಮಣ್ (ಹೀರೋ), ನಿಶ್ವಿಕಾ ನಾಯ್ಡು ( ಸಖತ್), ಆಶಿಕಾ ರಂಗನಾಥ್ (ಮದಗಜ)
  5. ಅತ್ಯುತ್ತಮ ಚಿತ್ರಕಥೆ : ಅರವಿಂದ್ ಕುಪ್ಲಿಕರ್ – ಪುಗ್ಸಟ್ಟೆ ಲೈಫು, ರಾಜ್. ಬಿ ಶೆಟ್ಟಿ- ಗರುಡ ಗಮನ ವೃಷಭ ವಾಹನ,
    ತರುಣ್ ಶ್ರೀಧರ್ – ರಾಬರ್ಟ್, ದುನಿಯಾ ವಿಜಯ್, ಮಾಸ್ತಿ ಉಪ್ಪಾರಹಳ್ಳಿ – ಸಲಗ, ರೋಹಿತ್ ಪದಕಿ – ರತ್ನನ್ ಪ್ರಪಂಚ
  6. ಅತ್ಯುತ್ತಮ ಪೋಷಕ ನಟ : ಪ್ರಮೋದ್ (ರತ್ನನ್ ಪ್ರಪಂಚ),
    ರಂಗಾಯಣ ರಘು (ಬಡವ ರಾಸ್ಕಲ್), ಅಚ್ಯುತ್ ಕುಮಾರ್ (ಪುಗ್ಸಟ್ಟೆ ಲೈಫು), ಗೋಪಾಲ್ ದೇಶಪಾಂಡೆ (ಗರುಡ ಗಮನ ವೃಷಭ ವಾಹನ), ಸಂಪತ್ ಕುಮಾರ್ (ದೃಶ್ಯ 2)
  7. ಅತ್ಯುತ್ತಮ ಪೋಷಕ ನಟಿ : ಸ್ಪರ್ಶ ರೇಖಾ (ಬಡವ ರಾಸ್ಕಲ್), ಉಮಾಶ್ರೀ (ರತ್ನನ್ ಪ್ರಪಂಚ), ತಾರಾ (ಬಡವ ರಾಸ್ಕಲ್), ಶ್ರುತಿ (ಭಜರಂಗಿ 2), ಎಸ್ತರ್ ನರೋನಾ (ಲಂಕೆ)
  8. ಅತ್ಯುತ್ತಮ ಬಾಲ ಕಲಾವಿದ : ಜಾನ್ಸನ್ ಡಿಸೋಜಾ (ರಾಬರ್ಟ್), ಆದ್ಯ (ಕೋಟಿಗೊಬ್ಬ 3), ಪ್ರಾಣ್ಯ ಪಿ. ರಾವ್ (ರೈಡರ್), ಮಾಸ್ಟರ್ ಮಿಥುನ್ (ಅಕ್ಷಿ), ಪರಮ್ ಸ್ವಾಮಿ (ಮೋಹನ್ ದಾಸ್)
  9. ಅತ್ಯುತ್ತಮ ಸಂಗೀತ ನಿರ್ದೇಶಕ : ಚರಣ್ ರಾಜ್ (ಸಲಗ)
    ಅರ್ಜುನ್ ಜನ್ಯ (ರಾಬರ್ಟ್), ಮಿಥುನ್ ಮುಕುಂದನ್ (ಗರುಡ ಗಮನ ವೃಷಭ ವಾಹನ), ವಾಸುಕಿ ವೈಭವ್ (ಬಡವ ರಾಸ್ಕಲ್), ಮಣಿಕಾಂತ್ ಕದ್ರಿ (ಲವ್ ಯೂ ರಚ್ಚು)
  10. ಅತ್ಯುತ್ತಮ ಹಿನ್ನೆಲೆ ಸಂಗೀತ : ಮಿಥುನ್ ಮುಕುಂದನ್ (ಗರುಡ ಗಮನ ವೃಷಭ ವಾಹನ), ಪೂರ್ಣಚಂದ್ರ ತೇಜಸ್ವಿ (ಪುಕ್ಸಟ್ಟೆ ಲೈಫು), ಅರ್ಜುನ್ ಜನ್ಯ.. (ಭಜರಂಗಿ 2)
    ಚರಣ್ ರಾಜ್ (ಸಲಗ), ವಿ.ಹರಿಕೃಷ್ಣ (ರಾಬರ್ಟ್)
  11. ಅತ್ಯುತ್ತಮ ಗೀತ ಸಾಹಿತ್ಯ : ಯೋಗರಾಜ್ ಭಟ್ (ಕಣ್ಣು ಹೊಡಿಯಾಕೆ, ರಾಬರ್ಟ್), ಕೆ.ಕಲ್ಯಾಣ್ (ನೀ ಸಿಗೋವರೆಗೂ, ಭಜರಂಗಿ 2), ರಾಘವೇಂದ್ರ ಕಾಮತ್ (ಕನವರಿಕೆ.. ಅರ್ಜುನ್ ಗೌಡ), ಸಂತೋಷ್ ಆನಂದ್ ರಾಮ್ (ಪಾಠಶಾಲಾ, ಯುವರತ್ನ), ಧನಂಜಯ್ (ಗಿಣಿಯೇ, ಬಡವ ರಾಸ್ಕಲ್)
  12. ಅತ್ಯುತ್ತಮ ಗಾಯಕ : ವಾಸುಕಿ ವೈಭವ್ ( ಆಗಾಗ ನೆನಪಾಗುತಾಳೆ, ಬಡವ ರಾಸ್ಕಲ್), ವಿಜಯ ಪ್ರಕಾಶ್ (ನೆನಪಿನ ಹುಡುಗಿಯೇ, ಹೀರೋ), ಸಂಜಿತ್ ಹೆಗಡೆ (ಕೀಲಿ ಕೊಟ್ಟ ಗೊಂಬೆ, ರತ್ನನ್ ಪ್ರಪಂಚ), ಸಿದ್ ಶ್ರೀರಾಮ್ (ಹಾಯಾಗಿದೆ.. ಟಾಮ್ ಅಂಡ್ ಜರ್ರಿ), ವಿಜಯ ಪ್ರಕಾಶ್ (ಉಡುಪಿ ಹೋಟಲ್, ಬಡವ ರಾಸ್ಕಲ್)
  13. ಅತ್ಯುತ್ತಮ ಗಾಯಕಿ :
    ಚೈತ್ರಾ ಆಚಾರ್ಯ (ಸೋಜಿಗದ, ಗರುಡ ಗಮನ ವೃಷಭ ವಾಹನ), ಶ್ರೇಯಾ ಘೋಶಾಲ್ (ನೀ ನಾದೆನಾ, ಯುವರತ್ನ),
    ಗಿರಿಜಾ ಸಿದ್ದಿ (ಟಿನಿಂಗ್ ಮಿನಿಂಗ್, ಸಲಗ), ಐಶ್ವರ್ಯ ರಂಗರಾಜನ್ (ಬೇಬಿ ಡಾನ್ಸ್, ರಾಬರ್ಟ್), ಅನುರಾಧ ಭಟ್ (ಪಟಾಕಿ ಪೋರಿಯೋ, ಕೋಟಿಗೊಬ್ಬ 3)
  14. ಅತ್ಯುತ್ತಮ ಛಾಯಾಗ್ರಹಣ : ಪ್ರೀತಾ ಜಯರಾಮನ್ (ಬಡವ ರಾಸ್ಕಲ್), ಸುಧಾಕರ್ ರಾಜ್ (ರಾಬರ್ಟ್)
    ಸ್ವಾಮಿ ಗೌಡ (ಭಜರಂಗಿ 2), ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ), ಅದ್ವೈತ ಗುರುಮೂರ್ತಿ (ಪುಕ್ಸಟ್ಟೆ ಲೈಫು)
  15. ಅತ್ಯುತ್ತಮ ಸಂಭಾಷಣೆ : ಸಂತೋಷ್ ಆನಂದ್ ರಾಮ್ (ಯುವರತ್ನ), ಸುಮನ್ ಜಾದುಗಾರ್ ಮತ್ತು ಪ್ರವೀಣ್ ಕುಮಾರ್ (ನಿನ್ನ ಸನಿಹಕೆ), ಮಾಸ್ತಿ (ಸಲಗ), ರೋಹಿತ್ ಪದಕಿ (ರತ್ನನ್ ಪ್ರಪಂಚ), ಶಂಕರ್ ಗುರು (ಬಡವ ರಾಸ್ಕಲ್)
  16. ಅತ್ಯುತ್ತಮ ಸಂಕಲನ : ಸುರೇಶ್ ಆರ್ಮುಗಂ (ಪುಕ್ಸಟ್ಟೆ ಲೈಫು), ಪ್ರತೀಕ್ ಶೆಟ್ಟಿ (ಹೀರೋ), ಕೆ.ಎಂ. ಪ್ರಕಾಶ್ (ರೈಡರ್),
    ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ),
    ದೀಪು ಎಸ್ ಕುಮಾರ್ (ಸಲಗ)
  17. ಅತ್ಯುತ್ತಮ ಕಲಾ ನಿರ್ದೇಶನ : ಮೋಹನ್ ಬಿ ಕೆರೆ (ಪೊಗರು), ಮೋಹನ್ ಬಿ ಕೆರೆ (ರಾಬರ್ಟ್), ರವಿ ಸಂತೆಹೈಕ್ಳು ( ಭಜರಂಗಿ 2), ರಾಜೇಶ್ ಸಜಿಪ ಮತ್ತು ವಿಕ್ರಮ್ ದೇವಾಡಿಗ (ಗರುಡ ಗಮನ ವೃಷಭ ವಾಹನ ), ಮೋಹನ್ ಬಿ ಕೆರೆ (ರೈಡರ್)
  18. ಅತ್ಯುತ್ತಮ ನೃತ್ಯ ನಿರ್ದೇಶಕ : ಭೂಷಣ್ (ಬೇಬಿ ಡಾನ್ಸ್, ರಾಬರ್ಟ್), ಮುರುಳಿ (ಕರಾಬು, ಪೊಗರು), ಎ.ಹರ್ಷ (ಭಜರಂಗಿ 2), ಜಾನಿ ಮಾಸ್ಟರ್ (ಫೀಲ್ ದಿ ಪವರ್, ಯುವರತ್ನ), ಭೂಷಣ್ (ಡವ ಡವ, ರೈಡರ್)
  19. ಅತ್ಯುತ್ತಮ ಸಾಹಸ ನಿರ್ದೇಶಕ :
    ಡಿಫರೆಂಟ್ ಡ್ಯಾನಿ (ಕಲಿವೀರ), ರವಿ ವರ್ಮಾ (ಭಜರಂಗಿ 2),
    ವಿಕ್ರಮ್ (ಹೀರೋ), ರಾಮ ಲಕ್ಷ್ಮಣ (ರಾಬರ್ಟ್), ವಿನೋದ್ (ಸಲಗ)
  20. ಅತ್ಯುತ್ತಮ ವಿಎಫ್ಎಕ್ಸ್ ಚಲನಚಿತ್ರ :
    ಹೀರೋ, ಭಜರಂಗಿ 2, ಪೊಗರು, 100, ರಾಬರ್ಟ್

ಮೂರನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್- 2022ನ ಟ್ರೋಫಿ ಅನಾವರಣ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಹಾಗೂ ಹಿರಿಯ ಸಿನಿಮಾ ಪತ್ರಕರ್ತರಾದ ಸದಾಶಿವ ಶಣೈ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಕಾಡೆಮಿ ನಿರ್ದೇಶಕರಾದ ಶರಣು ಹುಲ್ಲೂರು, ಎಸ್.ಎಂ.ಶಶಿಪ್ರಸಾದ್ ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

KUWJ Election | ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2022-2025ನೇ ಸಾಲಿನ ಚುನಾವಣೆ : ಹನ್ನೆರಡು ಜಿಲ್ಲೆಗಳಿಗೆ ಅವಿರೋಧ ಆಯ್ಕೆ

Next Post

KSRTC NEWS | ಉಕ್ರೇನ್ ನಿಂದ ರಾಜ್ಯಕ್ಕೆ ಆಗಮಿಸುವ ನಾಡಿನ ಜನತೆಗೆ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ಉಚಿತ

Next Post

KSRTC NEWS | ಉಕ್ರೇನ್ ನಿಂದ ರಾಜ್ಯಕ್ಕೆ ಆಗಮಿಸುವ ನಾಡಿನ ಜನತೆಗೆ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ಉಚಿತ

South Western Railway News | ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗಕ್ಕೆ ಸಮಗ್ರ ದಕ್ಷತಾ ಪ್ರಶಸ್ತಿ ಫಲಕ

Please login to join discussion

Like Us on Facebook

Follow Us on Twitter

Recent News

BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

August 6, 2026

GI Tag | ಭಾರತದಲ್ಲಿ ಜಿಐ ಟ್ಯಾಗ್‌ ಕ್ರಾಂತಿ: ಪಟ್ಟಿಯಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ, ಚನ್ನಪಟ್ಟಣ ಬೊಂಬೆ ಸೇರಿ 49 ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ

August 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

August 6, 2026

GI Tag | ಭಾರತದಲ್ಲಿ ಜಿಐ ಟ್ಯಾಗ್‌ ಕ್ರಾಂತಿ: ಪಟ್ಟಿಯಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ, ಚನ್ನಪಟ್ಟಣ ಬೊಂಬೆ ಸೇರಿ 49 ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ

August 6, 2026

80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

August 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group