Saturday, August 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

Temple News | ಬಾರ್ಕೂರಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ ಹಿನ್ನಲೆ : ಭಕ್ತರಿಂದ ಬೆಳ್ಳಿ ಪಲ್ಲಕ್ಕಿ ಸಮರ್ಪಣೆ

ಇದೇ ತಿಂಗಳ ಮಾ.29ರಂದು ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ | ಸುಮಾರು 18 ಸೀಮೆಯ ಜನರ ಆರಾಧ್ಯ ದೇವರು | ವೇದಮೂರ್ತಿ ಬಿ.ಹೃಷಿಕೇಶ ಬಾಯರಿ ಮನೆಯವರಿಂದ ದೇವಳಕ್ಕೆ ರಜತ ಪಲ್ಲಕ್ಕಿ ಸೇವಾ ರೂಪದಲ್ಲಿ ಸಲ್ಲಿಕೆ

by Bengaluru Wire Desk
March 20, 2023
in BW Special, News Wire
Reading Time: 2 mins read
0

ಉಡುಪಿ, ಮಾ.20 www.bengaluruwire.com : ಕರಾವಳಿಯಲ್ಲಿನ ಬ್ರಹ್ಮಾವರ ತಾಲ್ಲೂಕಿನ ಬಾರಕೂರಿನ ಪುರಾಣ ಕಾಲದ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ ಇದೇ ತಿಂಗಳ ಮಾ.29 ರಂದು ನಡೆಯಲಿದೆ. ಇದಕ್ಕು ಮುನ್ನ, ಶ್ರೀ‌ ದೇವಸ್ಥಾನಕ್ಕೆ ನೂತನ ರಜತ ಪಲ್ಲಕ್ಕಿ ಸಮರ್ಪಣೆ ಮಾಡಲಾಯಿತು.

ದೇವಾಲಯಗಳ ಪಟ್ಟಣ ಎಂದೇ ಕರೆಯಲ್ಪಡುವ ಬಾರಕೂರು ಸಂಸ್ಥಾನದಲ್ಲಿ 365 ದೇವಸ್ಥಾನಗಳಿದ್ದು ವಿಶಿಷ್ಟವಾದ ವಾಸ್ತುಶಿಲ್ಪವನ್ನು ಹೊಂದಿದ್ದು, ವರ್ಷದ ಎಲ್ಲ ದಿನವೂ ಇಲ್ಲಿ ಪೂಜೆಯಾಗುತ್ತಿತ್ತು. ಬಾರ್ಕೂರಿನ ದೇವಾಲಯಗಳು ಇಳಿಜಾರಾದ ಟೆರಾಕೋಟಾ ಹೆಂಚಿನ ಛಾವಣಿಗಳು ಕೇರಳದ ದೇವಾಲಯಗಳನ್ನು ಹೋಲುತ್ತವೆ, ಆದರೆ ಅವುಗಳು ಗೋಪುರಗಳನ್ನು ಹೊಂದಿಲ್ಲ, ಇದು ದ್ರಾವಿಡ ಶೈಲಿಯ ದಕ್ಷಿಣ ಭಾರತದ ದೇವಾಲಯಗಳ ಸಾಮಾನ್ಯ ಲಕ್ಷಣವಾಗಿದೆ. ಇಂತಹ ಊರಿನಲ್ಲಿ ಪುರಾಣ ಕಾಲದ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಪ್ರಮುಖವಾದುದು. ಇಲ್ಲಿನ ಬ್ರಹ್ಮರಥೋತ್ಸವವನ್ನು ಬಾರಕೂರಿನ ಊರ ಹಬ್ಬವಾಗಿ ಸ್ಥಳೀಯರು ಆಚರಿಸುತ್ತಾರೆ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಒಂದೇ ಪಾಣಿಪೀಠದಲ್ಲಿ ಸ್ಥಾಪಿಸಲ್ಪಟ್ಟಿರುವ ಪಂಚಲಿಂಗಗಳು

ಇದೇ ಪ್ರಥಮ ಬಾರಿಗೆ ಬಾರ್ಕೂರಿನ ಹಿರಿಯ ಪುರೋಹಿತರಾದ ವೇದಮೂರ್ತಿ ಬಿ.ಹೃಷಿಕೇಶ ಬಾಯರಿ ಹಾಗೂ ಅವರ ಮನೆಯವರು ಇತಿಹಾಸ ಪ್ರಸಿದ್ಧ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮಾ.19ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಬೆಳ್ಳಿ ಪಲ್ಲಕ್ಕಿಯನ್ನು ಸೇವಾ ರೂಪದಲ್ಲಿ ಮಾ.19ರಂದು  ಸಮರ್ಪಿಸಿದ್ದಾರೆ.

ಸೇವಾ ರೂಪದಲ್ಲಿ ದೇವಸ್ಥಾನಕ್ಕೆ ಬೆಳ್ಳಿ ಪಲ್ಲಕ್ಕಿ ಸಮರ್ಪಿಸಿದ ವೇದಮೂರ್ತಿ ಬಿ.ಹೃಷಿಕೇಶ ಬಾಯರಿ (ಎಡದಿಂದ ಮೊದಲನೆಯವರು)

ದೇವಸ್ಥಾನದ ಸ್ಥಳ ಪುರಾಣವೇನು? :
ಪುರಾಣಕಾಲದಲ್ಲಿ ಮಾರ್ಕಾಂಡೇಯ ಮುನಿಗಳು ಭೂ ಸಂಚಾರದಲ್ಲಿರುವಾಗ ಶಿವನ ತಪಸ್ಸಿಗೆ ಯೋಗ್ಯ ಸ್ಥಳದ ಅನ್ವೇಷಣೆಯಲ್ಲಿರುವಾಗ ಉತ್ತರಗಾಮಿನಿ ಸೀತಾ ನದಿಯ ತಟ ಬಾರಕನ್ಯಾಪರ ಪ್ರಶಸ್ತ ಸ್ಥಳ ಎಂದು ಅಶರೀರವಾಣಿ ಕೇಳಿಬಂತು. ಅದರಂತೆ ಈಗಿನ ಈ ಬಾರಕೂರಿನಲ್ಲಿ ತಪಸ್ಸನ್ನು ಮಾಡಿ ಈಶ್ವರನನ್ನು ಭೂಮಿಗೆ ಬರುವಂತೆ ಮಾಡಿದರು.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹೊರ ನೋಟ

ಮಾರ್ಕಾಂಡೇಯರಿಗೆ ಒಲಿದ ಶಿವ ಶ್ರೀ ಪಂಚಲಿಂಗೇಶ್ವರನಾಗಿ ಪ್ರತಿಷ್ಠಿತನಾದನೆಂದು ಪ್ರತೀತಿ ಇದೆ. ಪಾರ್ವತಿ ಸಹಿತನಾದ ಶ್ರೀ ಶಿವನು ಇಲ್ಲಿ ಒಂದೇ ಪಾಣಿ ಪೀಠದಲ್ಲಿ 5 ಲಿಂಗಗಳಲ್ಲಿ ಅವಿರ್ಭೂತನಾಗಿದ್ದಾನೆ. 1. ವಾಮದೇವ 2. ಸದ್ಯೋಜಾತ 3. ಈಶಾನಾ 4. ತತ್ಪುರುಷ 5. ಅಘೋರ ಎಂಬ ಐದು ಹೆಸರುಗಳಿಂದ ಪ್ರತಿಷ್ಠಿತನಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ.

ಪುರಾಣ ಕಾಲದಿಂದ ಕಲಿಯುಗದವರೆಗೆ ಇಲ್ಲಿ ಆಳ್ವಿಕೆ ಮಾಡಿದ ಹಲವು ಚಕ್ರವರ್ತಿಗಳು, ಮಹಾರಾಜರು  ಬಾರಕೂರನ್ನು ರಾಜಧಾನಿಯಾಗಿ ಮಾಡಿಕೊಂಡು ಪಂಚಲಿಂಗೇಶ್ವರನನ್ನು ಸಂಸ್ಥಾನದ ಪ್ರಮುಖ ದೇವರಾಗಿ ಸೀಮೆಯ ಒಡೆಯನಾಗಿ ಪೂಜೆ ಮಾಡುತ್ತಾ ಬಂದರು. ದ್ವಾಪರಾಯುಗದಲ್ಲಿ ಧರ್ಮರಾಯನು ಕೂಡಾ ಪೂಜಿಸಿದ ಬಗ್ಗೆ ಕಥೆಗಳಲ್ಲಿ ಉಲ್ಲೇಖಗಳಿವೆ. ತುಳುನಾಡಿನ ಅಳಿಯಕಟ್ಟಳೆ ಪರಂಪರೆಯ ಕೊನೆಯಲ್ಲಿ ವಿಜಯನಗರದ ಅರಸರು, ಅಳುಪರು, ಪಂಚಲಿಂಗೇಶ್ವರನನ್ನು ಆರಾಧಿಸಿ ರಾಜ್ಯಭಾರ ಮಾಡಿದರು.

ರಜತ ಪಲ್ಲಕ್ಕಿ ಹಸ್ತಾಂತರಕ್ಕೂ ಮುನ್ನ ಮಾ.19ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಸುಮಾರು 18 ಸೀಮೆಯ ಜನರ ಆರಾಧ್ಯ ದೇವರು :
ಸುಮಾರು 18 ಸೀಮೆ (ಹಳ್ಳಿಯ) ಜನರ ಆರಾಧ್ಯ ದೇವರಾದ ಶ್ರೀ ಪಂಚಲಿಂಗೇಶ್ವರ ಸ್ವಾಮಿಯ ಉತ್ಸವದ ದಿನದಂದು ಬಿಲ್ಲ ಸೀಮೆಯಿಂದ-ವಡೇರ ಹೋಬಳಿ ಬೈಂದೂರಿನವರೆಗೆ ಸಾಮಂತರನ್ನು ಪ್ರಸಾದ ಸ್ವೀಕಾರಕ್ಕಾಗಿ ಆಮಂತ್ರಿಸುವ ಪದ್ಧತಿ ಇಂದು ಕೂಡಾ ಚಾಲ್ತಿಯಲ್ಲಿದೆ. ಕಣ್ಣೂರು, ಹೊಸಾಳ, ಹನೇಹಳ್ಳಿ, ಹೇರಾಡಿ, ಪಾಂಡೇಶ್ವರ, ಹಂದಾಡಿ, ಐರೋಡಿ, ಬಾಳೇಕುದ್ರು, ಚಾಂತಾರು, ಯಡ್ತಾಡಿ, ಕಾವಡಿ, ಕೋಡಿ- ಕನ್ಯಾನ, ಕುಮ್ರಗೋಡು ಯಡಬೆಟ್ಟು-ಕಚ್ಚೂರು ಹೆಬ್ರಿ-ಪೆರ್ಡೂರು ಶಿವಪುರ-ಸೂರಾಲು, ಅಲ್ಲಾರು ಮುಂತಾದ ಅನುಪಾಸಿನ ಹಳ್ಳಿಗಳಿಂದ (ಪತಿ ಮನೆಯಿಂದ ಕಾಣಿಕೆ ನೀಡಿ) ಶಿವಾನುಗ್ರಹಕ್ಕೆ ಪಾತ್ರರಾಗುತ್ತಿದ್ದರು.

ಯಾವೆಲ್ಲ ರೀತಿಯ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ?:
ಅಭಿಷೇಕ ಪ್ರಿಯನಾದ ಈಶ್ವರನಿಗೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿನಿತ್ಯ ತ್ರಿಕಾಲಪೂಜೆ ಆಚರಣೆ ಇದ್ದು, ಯುಗಾದಿ, ಸಿಂಹ ಮಾಸದಲ್ಲಿ ಸೋಣೆ ಆರತಿ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಧನುರ್ಮಾಸದಲ್ಲಿ ಧನು ಪೂಜೆ, ಮಕರ ಸಂಕ್ರಾಂತಿ, ಶಿವರಾತ್ರಿ ಹಾಗೂ ವಾರ್ಷಿಕ ರಥೋತ್ಸವ ಪ್ರಮುಖ ಉತ್ಸವವಾಗಿರುತ್ತದೆ. ರುದಾಭಿಷೇಕ, ಬಿಲ್ವಾರ್ಚನೆ,
ಏಕಾದಶರುದ್ರ, ಕಿರಿರಂಗ ಪೂಜೆ, ಓಲಿರಂಗ ಪೂಜೆ, ಶತರುದ್ರಾಭಿಷೇಕ ಪ್ರಮುಖ ಸೇವೆಯಾಗಿರುತ್ತದೆ.

ಮಾ.19ರಂದು ಸಂಜೆ ಬಾರಕೂರಿನ ಕಲ್ಲು ಚಪ್ಪರದಿಂದ ರಥಬೀದಿಯಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ಪಂಚಲಿಂಗೇಶ್ವರ ಪಲ್ಲಕ್ಕಿ ಉತ್ಸವ ನೆರವೇರಿತು.

ಗರ್ಭಗುಡಿಯ ಒಳಗೆ 5 ಲಿಂಗಗಳಿದ್ದರೂ ಭಕ್ತರಿಗೆ 3 ಲಿಂಗಗಳು ಮಾತ್ರ ಗೋಚರಿಸುತ್ತವೆ. ಗರ್ಭಗುಡಿಯ ಹೊರ ಭಾಗದಲ್ಲಿ ಶ್ರೀ ಗಣಪತಿ ಹಾಗೂ ಲಕ್ಷ್ಮೀನಾರಾಯಣ ಸ್ವಾಮಿಯ ವಿಗ್ರಹಗಳದ್ದು, ಈಶ್ವರನ ಜತೆಯಲ್ಲಿ ವಿಷ್ಣು ಕೂಡಾ ಬಂದು ನೆಲೆಸಿದನೆಂಬ ಪುರಾಣ ಕಥೆ ಇದೆ.

ಬಾರ್ಕೂರು ಅಲುಪ ಸಾಮ್ರಾಜ್ಯದ ಪ್ರಾಚೀನ ರಾಜಧಾನಿಯಾಗಿತ್ತು. ಇದನ್ನು ಬಾರಹಕನ್ಯಾಪುರ ಎಂದು ಕರೆಯಲಾಗುತ್ತಿತ್ತು ಮತ್ತು ನಂತರ ಬರಕ್ಕನೂರು ಎಂದು ಕರೆಯಲಾಯಿತು. ಇಲ್ಲಿನ ಅರಸರನ್ನು ತುಳುವ ಅರಸರು ಎನ್ನಲಾಗುತ್ತಿತ್ತು. ಅವರು ತುಳು ಭಾಷೆಯನ್ನು ಮಾತನಾಡುತ್ತಿದ್ದರು. ಬಾರ್ಕೂರಿನಲ್ಲಿ ಕಂಡುಬರುವ ಅನೇಕ ಪ್ರಾಚೀನ ಶಾಸನಗಳು ತುಳು ಭಾಷೆಯಲ್ಲಿವೆ. ಇವು ತುಳುನಾಡಿನ ಇತಿಹಾಸದ ಅವಿಭಾಜ್ಯ ಅಂಗಗಳಾಗಿವೆ.

WhatsApp Join our WhatsApp Channel
Previous Post

Obscene Content On OTT |”ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸೃಜನಶೀಲತೆ ಹೆಸರಲ್ಲಿ ಅಶ್ಲೀಲ ದೂರು ಗಂಭೀರ ಪರಿಗಣನೆ”

Next Post

Injaz International Scam | ಇಂಜಾಜ್ ಇಂಟರ್ ನ್ಯಾಷನಲ್ ಬಹುಕೋಟಿ ಹಗರಣ : ಇ.ಡಿ.ಯಿಂದ 20.16 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

Next Post
ಜಾರಿ ನಿರ್ದೇಶನಾಲಯದ ಲಾಂಛನ

Injaz International Scam | ಇಂಜಾಜ್ ಇಂಟರ್ ನ್ಯಾಷನಲ್ ಬಹುಕೋಟಿ ಹಗರಣ : ಇ.ಡಿ.ಯಿಂದ 20.16 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರಿನ ಹೆಸರಘಟ್ಟ ಕೆರೆಯ ಚಿತ್ರ

BW Special | 75 Heritage Water Sites | ದೇಶದ 75 ಪಾರಂಪರಿಕ ಜಲಮೂಲ ಪಟ್ಟಿ : ಹೆಸರಘಟ್ಟ ಕೆರೆ ಸೇರಿ ರಾಜ್ಯದ 5 ಜಲತಾಣಗಳಿಗೆ ಪಟ್ಟ

Please login to join discussion

Like Us on Facebook

Follow Us on Twitter

Recent News

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group