Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

HEALTH TIPS | ಚಳಿಗಾಲದಲ್ಲಿ ಇಂತಹ ತಪ್ಪುಗಳನ್ನು ಮಾಡಲು ಹೋಗದಿರಿ : ಆರೋಗ್ಯ ಹದಗೆಡಲಿದೆ ; ಆಯುರ್ವೇದಲ್ಲಿನ ಸರಳ ಪರಿಹಾರವೇನು? ಇಲ್ಲಿದೆ ತಜ್ಞ ವೈದ್ಯರ ಸಲಹೆ

ಚಳಿಗಾಲದಲ್ಲಿ ಸಾಮಾನ್ಯವಾಗಿ ಅಸ್ತಮಾ, ಸೋರಿಯಾಸಿಸ್, ನೆಗಡಿ- ಕೆಮ್ಮು, ಬ್ರಾಂಕೈಟಿಸ್ ನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಎಚ್ಚರಿಕೆ ವಹಿಸಿ ಮನೆ ಮದ್ದು ಮಾಡಿ. ಮನೆಮದ್ದು ಮಾಡಿ ಆರೋಗ್ಯ ನಿರ್ವಹಣೆ ಮಾಡಿಕೊಂಡರು ಉತ್ತಮ. ರೋಗ ಉಲ್ಬಣವಾಗಿದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಒಳಿತು ಅಂತಾರೆ ಆಯುರ್ವೇದ ತಜ್ಞರಾದ ಡಾ.ಮಂಗಳಾ ಜ್ಯೋತ್ಸ್ನಾ.

by Bengaluru Wire Desk
October 6, 2022
in BW Special, Public interest
Reading Time: 7 mins read
0
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ಹವಾಮಾನಕ್ಕೆ ತಕ್ಕಂತೆ ಆಯುರ್ವೇದದಲ್ಲಿ ಒಂದು ವರ್ಷವನ್ನು ಆರು ಋತುಗಳಾಗಿ ವಿಂಗಡಿಸಲಾಗಿದೆ. ವಸಂತ, ಗ್ರೀಷ್ಮ, ವರ್ಷ , ಶರದ್‌, ಹೇಮಂತ, ಶಿಶಿರ ಋತು, ಇವುಗಳಲ್ಲಿ ಶಿಶಿರ-ವಸಂತ-ಗ್ರೀಷ್ಮ ಋತುಗಳು ಆದಾನಕಾಲ(ಉತ್ತರಾಯಣ) ಹಾಗೂ ವರ್ಷ-ಶರದ್-ಹೇಮಂತ ಋತುಗಳು ವಿಸರ್ಗಾಕಾಲ(ದಕ್ಷಿಣಾಯನ). ಹೇಮಂತ-ಶಿಶಿರ ಋತುಗಳು ಚಳಿಗಾಲ – ಸಾಮಾನ್ಯವಾಗಿ ನವೆಂಬರ್‌ಮಧ್ಯದಿಂದ ಮಾರ್ಚ್‌ಮಧ್ಯದವರೆಗೆ ಇರುತ್ತದೆ. ಈ ಋತುವಿನಲ್ಲಿ ವಾತಾವರಣ ತಣ್ಣಗಿರುತ್ತದೆ ಮತ್ತು ಗಾಳಿಯ ತೀಕ್ಷ್ಣತೆ ಹೆಚ್ಚಿರುತ್ತದೆ.

ಆದ್ದರಿಂದ ಜೀರ್ಣ ಶಕ್ತಿಯೂ ಸಹ ಜಾಸ್ತಿಯಾಗಿರುತ್ತದೆ. ಹಾಗಾಗಿ ಸರಿಯಾದ ಆಹಾರವನ್ನು ನೀಡದೇ ಹೋದಲ್ಲಿ ಈ ವೃದ್ಧಿಯಾಗಿರುವ ಜೀರ್ಣ ಶಕ್ತಿ ಅನೇಕ ಶಾರೀರಿಕ ತೊಂದರೆಗಳಿಗೆ ಎಡೆಮಾಡಿಕೊಡುತ್ತದೆ. ಈ ಋತುವಿನಲ್ಲಿ ಹೇಳಿರುವ ಆಹಾರ – ವಿಹಾರಗಳನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳದೇ ಹೋದಲ್ಲಿ ನಂತರದ ಋತುಗಳಲ್ಲಿ ಅಥವಾ ಅದೇ ಋತುವಿನಲ್ಲಿ ವಾತ ಮತ್ತು ಕಫದ ತೊಂದರೆಗಳು ಉಂಟಾಗುತ್ತದೆ.

 ಸಾಮಾನ್ಯವಾಗಿ ಚಳಿಗಾಲದಲ್ಲಿ (Winter Season) ಕಂಡುಬರುವ ಆರೋಗ್ಯ ಸಮಸ್ಯೆಗಳೆಂದರೆ, ಗಂಟಲು ಕೆರೆತ, ಗಂಟಲು ನೋವು, ನೆಗಡಿ – ಕೆಮ್ಮು, ಸೈನಸೈಟಿಸ್‌, ಕಿವಿಯ ಸೋಂಕಿನ ತೊಂದರೆಗಳು, ಮೈಗ್ರೇನ್‌ ತೊಂದರೆಗಳು, ನ್ಯುಮೋನಿಯಾ, ಬ್ರಾಂಕೈಟಿಸ್‌, ಅಸ್ತಮಾ ತೊಂದರೆಗಳು, ವಯಸ್ಸಾದವರಲ್ಲಿ ಮಂಡಿನೋವು,ಕೀಲು ನೋವು, ಚರ್ಮದ ತೊಂದರೆಗಳಂದರೆ – ಒಣಗಿದ ಚರ್ಮ, ಅತಿಯಾದ ಚರ್ಮದ ಕೆರೆತ, ಮೊದಲೇ ಸೋರಿಯಾಸಿಸ್‌ ಅಥವಾ ಅಟೋಪಿಕ್‌ ಡರ್ಮಟೈಟಿಸ್‌ ನಂತಹ ತೊಂದರೆಗಳಿಂದ ಬಳಲುತ್ತಿದ್ದರೆ ಅವು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.

ಆರೋಗ್ಯವನ್ನು ಕಾಪಾಡಿಕೊಳ್ಳಲು ಏನನ್ನು ಮಾಡಬೇಕು?

ಆಹಾರ –

•             ಹುಳಿ, ಲವಣ, ಮಧುರ ಆಹಾರಗಳು. (ದಾಳಿಂಬೆ, ಕಿತ್ತಳೆಹಣ್ಣು, ಅನ್ನ, ಪಾಯಸ ಇತ್ಯಾದಿ)

ಸಾಂದರ್ಭಿಕ ಚಿತ್ರ

•             ಜಿಡ್ಡಿನ ಅಂಶವುಳ್ಳ ಪದಾರ್ಥಗಳು. (ತುಪ್ಪ, ಬೆಣ್ಣೆ, ಎಣ್ಣೆ, ಎಳ್ಳು, ಹಾಲು ಇತ್ಯಾದಿ)

•             ನಿಧಾನವಾಗಿ ಜೀರ್ಣವಾಗುವ ಪದಾರ್ಥಗಳು. (ಮಾಂಸ, ಪನ್ನೀರ್‌, ಉದ್ದಿನ ಪದಾರ್ಥಗಳು)

•             ಉಷ್ಣ ಪದಾರ್ಥಗಳು. (ಬಿಸಿ ಆಹಾರ, ದೇಹದ ಉಷ್ಣ ಹೆಚ್ಚಿಸುವ ಪದಾರ್ಥಗಳು)

•             ಹಾಲಿನ ಪದಾರ್ಥಗಳು. (ಪಾಯಸ, ಪನ್ನೀರ್‌, ತುಪ್ಪ, ಬೆಣ್ಣೆ ಇತ್ಯಾದಿ)

•             ಕಬ್ಬಿನ ಪದಾರ್ಥಗಳು. (ಬೆಲ್ಲ, ಜೋನಿ ಬೆಲ್ಲ, ಸಕ್ಕರೆ, ಕಲ್ಲು ಸಕ್ಕರೆ)

•             ಅಕ್ಕಿ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು. (ರೊಟ್ಟಿ, ದೋಸೆ, ಲಡ್ಡು)

•             ಗೋಧಿ ಹಿಟ್ಟಿನಿಂದ ತಯಾರಿಸಲ್ಪಟ್ಟ ಆಹಾರಗಳು. (ಪಾಯಸ, ಲಡ್ಡು, ಮೋದಕ, ಚಪಾತಿ)

•             ಮಾಂಸದ ರಸ(ಸೂಪ್‌). (ಪೌಷ್ಟಿಕಾಂಶವುಳ್ಳ ಪ್ರಾಣಿಯ ಮಾಂಸ, ಕೊಬ್ಬಿನಂಶವುಳ್ಳ ಪ್ರಾಣಿಯ ಮಾಂಸದ ರಸ)

ಈ ಆಹಾರಗಳನ್ನು ಹಸಿವೆಯನ್ನು ಗಮನದಲ್ಲಿರಿಸಿ ಸೇವಿಸಬೇಕು. ಒಮ್ಮೆ ಸೇವಿಸಿದ ಆಹಾರ ಜೀರ್ಣವಾದ ನಂತರವೇ ಪುನಃ ಆಹಾರ ಸೇವಿಸಬೇಕು. ಮತ್ತು ಈ ಋತುವಿನಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸದಿದ್ದರೆ ಶರೀರದ ಧಾತುಗಳಿಗೆ ಹಾನಿ ಉಂಟಾಗುತ್ತದೆ.

ವಿಹಾರ –

•             ಪ್ರತಿನಿತ್ಯ ಎಳ್ಳೆಣ್ಣೆಯಿಂದ ಅಭ್ಯಂಗ ಮಾಡಿ – ಶರೀರದ ಅಂಗ ಮರ್ದನ ಮಾಡಿಸಿಕೊಳ್ಳಬೇಕು – ನಂತರ ಔಷಧೀಯ ಪುಡಿಗಳಿಂದ ಉತ್ಸಾದನ ಮಾಡಿಕೊಳ್ಳಬೇಕು.

•             ನಿಯಮಿತವಾಗಿ ಮೂರ್ಧ್ನಿ ತೈಲ(ಎಣ್ಣೆ ಹಚ್ಚುವುದು, ಪಿಚು, ಬಸ್ತಿ, ಶಿರೋಧಾರಾ) ಅಭ್ಯಾಸ ಮಾಡಬೇಕು.

•             ಎಳೆ ಬಿಸಿಲಿಗೆ ಮೈ ಒಡ್ಡಬೇಕು.

•             ತಮ್ಮ ಶಕ್ತಿಯನ್ನು ಗಮನದಲ್ಲಿರಿಸಿಕೊಂಡು ವ್ಯಾಯಾಮ ಮಾಡಬಹುದು.

•             ಪಾದಾಘಾತ ಮಾಡಿಸಿಕೊಳ್ಳಬಹುದು.

•             ಹೆಚ್ಚು ಚಳಿಗಾಳಿಗೆ ಮೈಯನ್ನು ಒಡ್ಡಬಾರದು.

•             ಬೆಚ್ಚಗಿರಿಸುವ ಬಟ್ಟೆಗಳನ್ನು(ಹತ್ತಿಯ ಬಟ್ಟೆ/ದಪ್ಪಗೆ ಹೆಣೆದಿರುವ ಬಟ್ಟೆಗಳು/ವುಲ್ಲನ್‌ ಬಟ್ಟೆಗಳು) ಧರಿಸಬೇಕು.

•             ಮನೆಯೊಳಗೆ ನೇರವಾಗಿ ಗಾಳಿ ಬರುವುದನ್ನು ತಡೆಯಬೇಕು, ಮನೆಯ ವಾತಾವರಣ ಬೆಚ್ಚಗಿರಿಸಬೇಕು, ರೂಮ್‌ ಹೀಟರ್‌ಗಳನ್ನು ಮಿತವಾಗಿ ಬಳಸಬಹುದು.

•             ಎಲ್ಲ ಕೆಲಸಗಳಿಗೂ ಬಿಸಿ ನೀರನ್ನು ಉಪಯೋಗಿಸಬಹುದು.

•             ಕುಡಿಯುವುದಕ್ಕೆ ಹೆಚ್ಚು ಬಿಸಿ ಇರುವ ನೀರಿಗಿಂತ ಉಗುರು ಬೆಚ್ಚಗಿರುವ ನೀರನ್ನು ಉಪಯೋಗಿಸಬಹುದು.

ಈ ಮೇಲೆ ಹೇಳಿದ ವಿಷಯಗಳಲ್ಲಿ ಅಂಗ ಮರ್ದನ, ಉತ್ಸಾದನ, ಶಿರೋಪಿಚು-ಬಸ್ತಿ-ಧಾರಾ, ಪಾದಾಘಾತ ಇವುಗಳನ್ನು ಆಯುರ್ವೇದ ತಜ್ಞ ವೈದ್ಯರನ್ನು ಕಂಡು ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬಹುದು.

ಏನನ್ನು ಮಾಡಬಾರದು?

•             ತಣ್ಣಗಿನ ವಸ್ತುಗಳನ್ನು ಸೇವಿಸುವುದು.(ಐಸ್‌ಕ್ರೀಮ್‌, ಫ್ರಿಡ್ಜ್‌ನಲ್ಲಿ ಇರಿಸಿದ ವಸ್ತುಗಳು, ಮೊಸರು)

•             ಒಣ ಆಹಾರ ವಸ್ತುಗಳು. (ಬಿಸ್ಕೆಟ್‌, ರಸ್ಕ್‌, ಒಣಮೀನು – ಮಾಂಸ, ಬ್ರೆಡ್‌, ಕೇಕ್‌)

•             ಚಳಿಗಾಳಿಗೆ ಮೈ ಒಡ್ಡುವುದು.

•             ಹಸಿ ತರಕಾರಿ, ಹಸಿ ಮೊಳಕೆಕಾಳುಗಳು.

•             ಊಟ ಮಾಡದೇ ಇರುವುದು.

ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಕೆಲ ಔಷಧಿಗಳು –

•             ಗಂಟಲು ಕೆರೆತ/ನೋವು –

         ಉಪ್ಪು ಬಿಸಿ ನೀರಿನಲ್ಲಿ ಗಂಟಲು ಮುಕ್ಕಳಿಸುವುದು.

         ಬಿಸಿ ನೀರಿನ ಶಾಖ ತೆಗೆದು ಕೊಳ್ಳಬಹುದು.

         ಕಾಳು ಮೆಣಸು ಕಲ್ಲುಪ್ಪುಗಳನ್ನು ಬಾಯಲ್ಲಿ ಇಟ್ಟುಕೊಳ್ಳಬಹುದು.

ಸಾಂದರ್ಭಿಕ ಚಿತ್ರ

•             ನೆಗಡಿ ಮತ್ತು ಕೆಮ್ಮು –

         ಶುಂಠಿ, ಅರಿಶಿಣ, ಬೆಲ್ಲ, ಕಾಳುಮೆಣಸು ಹಾಕಿ ಕಷಾಯ ಮಾಡಿ ಸೇವಿಸಬಹುದು.

         ದೊಡ್ಡಪತ್ರೆ ಎಲೆಯನ್ನು ಉಪ್ಪು ಅಥವಾ ಜೇನುತುಪ್ಪದೊಂದಿಗೆ ಸೇವಿಸಬಹುದು.

         ಬಿಸಿ ನೀರಿನ ಶಾಖ/ಆವಿ ತೆಗೆದು ಕೊಳ್ಳಬಹುದು.

         ತುಳಸಿ ಎಲೆಯ ರಸವನ್ನು ಜೇನುತುಪ್ಪದೊಟ್ಟಿಗೆ ತೆಗೆದುಕೊಳ್ಳಬಹುದು.

         ಈರುಳ್ಳಿ ಮತ್ತು ಬೆಲ್ಲವನ್ನು ತಿನ್ನಬಹುದು.

ಜ್ವರ, ನ್ಯುಮೋನಿಯಾ, ಬ್ರಾಂಕೈಟಿಸ್‌, ಅಸ್ತಮಾ ತೊಂದರೆಗಳಿಗೆ ಅಧಿಕ ತಪಾಸಣೆಯ ಅಗತ್ಯವಿರುವುದರಿಂದ ವೈದ್ಯರನ್ನು ಕಾಣುವುದು ಸೂಕ್ತ.

•             ಕಿವಿನೋವು –

         ಬಿಸಿ ನೀರಿನ ಹಬೆ/ಆವಿ ತೆಗೆದು ಕೊಳ್ಳಬಹುದು.

         ಕಿವಿಯ ಸುತ್ತ ಬಿಸಿ ಬಟ್ಟೆಯ ಶಾಖ ತೆಗೆದುಕೊಳ್ಳಬಹುದು.

         ತಲೆಗೆ ಟೊಪ್ಪಿಯನ್ನು ಧರಿಸಬೇಕು.

         ಉಪ್ಪು ಬಿಸಿನೀರಿನಲ್ಲಿ ಗಂಟಲು ಮುಕ್ಕಳಿಸುವುದು.

ಕಿವಿಯಿಂದ ಕೀವು/ನೀರು ಸೋರುವುದು, ಕಿವಿ ಕೇಳಿಸದೇ ಇರುವುದು ಈ ತೊಂದರೆಗಳು ಉಂಟಾದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು.

•             ಸೈನಸ್‌ ತಲೆನೋವು –

         ಬಿಸಿ ನೀರಿನ ಶಾಖ/ಹಬೆ.

         ಪಿಪ್ಪಲಿಯೊಂದಿಗೆ ಜೇನುತುಪ್ಪ.

•             ಮೈಗ್ರೇನ್‌ ತಲೆನೋವು –

         ಖಾರ- ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.

         ಹಸಿವೆಯನ್ನು ಗಮನದಲ್ಲಿಟ್ಟುಕೊಂಡು ಊಟ ಮಾಡಬೇಕು.

         ಅಳಲೇಕಾಯಿ ಪುಡಿ ಅರ್ಧ ಚಮಚ ಬಿಸಿನೀರಿನೊಟ್ಟಿಗೆ ಸೇವಿಸಬಹುದು.

         ಜೀರಿಗೆ ಮತ್ತು ಓಂ ಕಾಳು ಕಷಾಯ ಮಾಡಿ ಸೇವಿಸಬಹುದು.

•             ಮಂಡಿನೋವು/ಕೀಲುನೋವು –

         ಎಳ್ಳೆಣ್ಣೆಯಲ್ಲಿ ಅಭ್ಯಂಗ ಮಾಡಿ ಪ್ರತಿನಿತ್ಯ ಸ್ನಾನ ಮಾಡುವುದು.

         ನಿಯಮಿತ ವ್ಯಾಯಾಮ ಮಾಡುವುದು.

         ಕೀಲುಗಳು ಹಿಡಿದುಕೊಂಡಂತಾದಲ್ಲಿ – ಉಪ್ಪನ್ನು ಬಿಸಿಮಾಡಿ ದಪ್ಪ ಬಟ್ಟೆಯಲ್ಲಿ ಕಟ್ಟಿ ಶಾಖ ಕೊಡಬಹುದು.

ಕೀಲುಗಳಲ್ಲಿ ಊತ ಕಂಡುಬಂದಲ್ಲಿ ವೈದ್ಯರನ್ನು ಕಾಣೂವುದು ಸೂಕ್ತ.

•             ಅತಿಯಾಗಿ ಒಣಗಿದ ಚರ್ಮ –

         ಅಭ್ಯಂಗ ಮಾಡಿ ಸ್ನಾನ ಮಾಡುವುದು.

         ಒಣಗಿದ ಹಿಮ್ಮಡಿ – ನಿಯಮಿತವಾಗಿ ಎಣ್ಣೆ ಹಚ್ಚಿ – ಬಿಸಿನೀರಿನಲ್ಲಿ 15-20 ನಿಮಿಷದವರೆಗೆ ಇಟ್ಟು ತೆಗೆಯಬಹುದು.

         ಒಣಗಿದ ತುಟಿ – ತುಪ್ಪ/ಬೆಣ್ಣೆ/ಹಾಲಿನ ಕೆನೆ ಹಚ್ಚಬಹುದು.

ಸಾಂದರ್ಭಿಕ ಚಿತ್ರ

•             ಅತಿಯಾದ ಚರ್ಮದ ಕೆರೆತ –

         ನೆಲನೆಲ್ಲಿ ಗಿಡದ ಕಷಾಯ ಮಾಡಿ ಸೇವಿಸಬಹುದು.

         ದೊಡ್ಡ ಪತ್ರೆ ಎಲೆಯೊಂದಿಗೆ ಉಪ್ಪು/ಜೇನುತುಪ್ಪ ಸೇರಿಸಿ ಸೇವಿಸಬಹುದು.

         ಬೇವಿನ ಎಲೆಯನ್ನು ಸ್ನಾನದ ಬಿಸಿ ನೀರಿಗೆ ಸೇರಿಸಿ ಸ್ನಾನ ಮಾಡಬಹುದು.

         ಜೀರಿಗೆ ಕಷಾಯ ಸೇವಿಸಬಹುದು.

ಸೋರಿಯಾಸಿಸ್‌/ಅಟೋಪಿಕ್‌ ಡರ್ಮಾಟೈಟಿಸ್‌ ನಂತಹ ತೊಂದರೆಗಳಿಗೆ ಪಂಚಕರ್ಮ ಚಿಕಿತ್ಸೆಯ ಅಗತ್ಯವಿರುವುದರಿಂದ ವೈದ್ಯರನ್ನು ಕಾಣುವುದು ಸೂಕ್ತ.

ಮಕ್ಕಳ ಬಗ್ಗೆ ವಹಿಸಿ ವಿಶೇಷ ಕಾಳಜಿ :

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಮತ್ತು ಶರೀರದ ಬಲ ಕಡಿಮೆ ಇರುವುದರಿಂದ ರೋಗಗಳು ಬೇಗನೆ ಹರಡುತ್ತವೆ. ಹಾಗಾಗಿ ಮಕ್ಕಳಿಗೆ ವಿಶೇಷವಾಗಿ ಗಮನ ನೀಡಬೇಕು.

         ಬೆಚ್ಚಗಿನ ವಾತಾವರಣದಲ್ಲಿ ಇರಿಸಬೇಕು.

         ಸ್ವೆಟರ್‌/ಟೋಪ್ಪಿ/ಕೈ-ಕಾಲು ಗವಸುಗಳನ್ನು ಹಾಕಬೇಕು.

         ಎಲ್ಲ ಕೆಲಸಗಳಿಗೂ ಬಿಸಿನೀರನ್ನು ಉಪಯೋಗಿಸಬೇಕು.

         ಹೊರಗಿನ ತಿಂಡಿ/ಬೇಕರಿ ತಿಂಡಿ/ ಫ್ರಿಡ್ಜ್‌ನಲ್ಲಿ ಇರಿಸಿದ ತಿಂಡಿಗಳನ್ನು ಕೊಡಬಾರದು.

         ಹಣ್ಣು/ಬೇಯಿಸಿದ ತರಕಾರಿ-ಸೊಪ್ಪು/ತುಪ್ಪ/ಹಾಲು ಗಳನ್ನು ಕೊಡಬೇಕು.

         ನಿಯಮಿತವಾಗಿ ಅಭ್ಯಂಗ ಮಾಡಿಸಿ ಸ್ನಾನ ಮಾಡಿಸಬೇಕು.

         ಹಾಲು, ಅರಿಶಿಣ, ಬೆಲ್ಲದೊಂದಿಗೆ ಕೊಡಬಹುದು.

         ಅಳಲೇಕಾಯಿಯನ್ನು ತುಪ್ಪದಲ್ಲಿ ತೇಯ್ದು ಕೊಡಬಹುದು.

–

  • ಲೇಖನ ಬರಹಗಾರರು – ಡಾ.ಮಂಗಳ ಜ್ಯೋತ್ಸ್ನಾ ಜಿ.ಪಿ
    ಮಕ್ಕಳ ತಜ್ಞರು ಮತ್ತು ಉಪನ್ಯಾಸಕರು, ಶ್ರೀ ಕಾಲಭೈರವೇಶ್ವರ ಸ್ವಾಮಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು
WhatsApp Join our WhatsApp Channel
Previous Post

BBMP Election 2022 | ಬಿಬಿಎಂಪಿ ವಾರ್ಡ್ ಮೀಸಲಾತಿ ನ.30 ರ ಒಳಗೆ ಪ್ರಕಟಿಸಿ ಡಿ.31ರ ಒಳಗೆ ಚುನಾವಣೆ ನಡೆಸಿ : ಹೈಕೋರ್ಟ್ – ಇಲ್ಲಿದೆ ಕಂಪ್ಲೀಟ್ ನ್ಯೂಸ್

Next Post

Kashmir Sri Sharada Temple Idol | ಕಾಶ್ಮೀರ ಗಡಿಯ ಪುರವಾಸಿನಿ ಗುಡಿಗೆ ಶೃಂಗೇರಿ ಶಾರದಾ ವಿಗ್ರಹ ಅ.5ಕ್ಕೆ ಹಸ್ತಾಂತರ

Next Post
ಕಾಶ್ಮೀರದ ತೀತ್ವಾಲ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಾರದಾ ದೇವಸ್ಥಾನ ಕಾಮಗಾರಿಯ ಚಿತ್ರ

Kashmir Sri Sharada Temple Idol | ಕಾಶ್ಮೀರ ಗಡಿಯ ಪುರವಾಸಿನಿ ಗುಡಿಗೆ ಶೃಂಗೇರಿ ಶಾರದಾ ವಿಗ್ರಹ ಅ.5ಕ್ಕೆ ಹಸ್ತಾಂತರ

ವಾರ್ತಾ ಇಲಾಖೆ ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಸ್ವೀಕರಿಸಿದ ರಜತ ಕಮಲ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರದರ್ಶಿಸುತ್ತಿರುವ ಇಲಾಖೆ ಆಯುಕ್ತ ಡಾ.ಹರ್ಷ ಪಿ.ಎಸ್

ಇಲಾಖೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಜತ ಕಮಲ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ವಾರ್ತಾ ಇಲಾಖೆ : ಸಿಎಂ ಬೊಮ್ಮಾಯಿ ಶ್ಲಾಘನೆ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group