ಬೆಂಗಳೂರು, ಜೂ.20 www.bengaluruwire.com: ಹೆಬ್ಬಾಳ ಮೇಲ್ಸೇತುವೆಯು ಬಿಬಿಎಂಪಿಯಿಂದ ಡಾಂಬರೀಕರಣ ಕಾಮಗಾರಿಗಳ ಕಾರಣದಿಂದಾಗಿ ಜೂನ್ 20 ಮತ್ತು 21ನೇ ನೇ ತಾರೀಖಿನಂದು ಎರಡು ದಿನವೂ ರಾತ್ರಿ 11:30 ರಿಂದ ಬೆಳಿಗ್ಗೆ 5 ರವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಸಂಚಾರಕ್ಕೆ ಅವಕಾಶವಿರುವುದಿಲ್ಲ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರದ ಕಡೆಗೆ ಬರುವ ವಾಹನಗಳ ಸಂಚಾರವನ್ನು ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ ಮೇಲ್ಸೇತುವೆಯ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಸಾಗುವ ವಾಹನ ಸವಾರರು ಈ ಮೇಲ್ಕಂಡ ಎರಡು ದಿನ ಈ ಪರ್ಯಾಯ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ:
* ಹೆಬ್ಬಾಳ ಸರ್ಕಲ್ನಲ್ಲಿ ಬಲ ತಿರುವು ಪಡೆದು ತುಮಕೂರು ಕಡೆ ಹೊರ ವರ್ತುಲ ರಸ್ತೆ ಮುಖಾಂತರ ಸಾಗಿ, ಕುವೆಂಪು ಸರ್ಕಲ್ನಲ್ಲಿ ಎಡ ತಿರುವು ಪಡೆದು, ನ್ಯೂ ಬಿಇಎಲ್ ರಸ್ತೆ ಮೂಲಕ ಸಾಗಬೇಕು. ನಂತರ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಮೇಖ್ರಿ ಸರ್ಕಲ್ ತಲುಪಿ ಬೆಂಗಳೂರು ನಗರಕ್ಕೆ ತೆರಳಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















