Tuesday, April 28, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

  • Bengaluru Focus

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

  • Bengaluru Focus

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

BW SPECIAL | Rain Shortage In Karnataka | ರಾಜ್ಯಕ್ಕೆ ಬರದ ಕರಿಛಾಯೆ?: ಮಳೆ ಕೊರತೆಯಿಂದ ವೇಗವಾಗಿ ಕುಸಿಯುತ್ತಿದೆ ಪ್ರಮುಖ ಜಲಾಶಯಗಳು – ಕೃಷಿ, ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ

ಕರ್ನಾಟಕದ 13 ಜಲಾಶಯಗಳಲ್ಲಿ ಒಟ್ಟಾರೆ 148.22 ಟಿಎಂಸಿ ನೀರಷ್ಟೇ ಲಭ್ಯ | ಜೂನ್ 1ನೇ ತಾರೀಖಿನಿಂದ ಜುಲೈ 1ನೇ ತಾರೀಖಿನ ಅವಧಿಯಲ್ಲಿ ಶೇ.56ರಷ್ಟು ಮಳೆ ಕೊರತೆ | ಈ ಮಳೆಗಾಲದಲ್ಲಿ ಜೂ.9ರ ತನಕದ ಮಾಹಿತಿಯಂತೆ 5.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

by Bengaluru Wire Desk
September 4, 2023
in BW Special, News Wire, Public interest
Reading Time: 2 mins read
1
ಕಬಿನಿ ಅಣೆಕಟ್ಟಿನ ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ : ಎನ್.ಸತೀಶ)

ಕಬಿನಿ ಅಣೆಕಟ್ಟಿನ ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ : ಎನ್.ಸತೀಶ)

ಬೆಂಗಳೂರು, ಜು.02 www.bengaluruwire.com : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸಿದ್ದು, ತಡವಾಗಿ ಹೀಗಾಗಿ ಒಂದು ಕಡೆ ಮಳೆ ಕೊರತೆ ಹಾಗೂ ಮತ್ತೊಂದು ಕಡೆ ಸುಡುವ ಬೇಸಿಗೆಯಿಂದಾಗಿ ರಾಜ್ಯಾದ್ಯಂತ ಜಲಾಶಯಗಳಲ್ಲಿ ನೀರಿನ ಮಟ್ಟ ಅತ್ಯಂತ ವೇಗವಾಗಿ ಕುಸಿಯುತ್ತಿದೆ.

ರಾಜ್ಯದಲ್ಲಿ ಜು.1ರ ವರದಿ ಪ್ರಕಾರ 13 ಜಲಾಶಯ ಮತ್ತು ಅಣೆಕಟ್ಟಿನ ಪೈಕಿ ಏಳು ಜಲಾಶಯಗಳಲ್ಲಿ ನೀರಿನ ಮಟ್ಟ ಶೇ.21ರಷ್ಟಕ್ಕಿಂತ ಕಡಿಮೆಯಿರುವುದು ಈ ಬಾರಿ ಬರದ ಕರಿ ನೆರಳು ಕರ್ನಾಟಕದ ಮೇಲೆ ಬಿದ್ದಂತೆ ತೋರುತ್ತಿದೆ. 13 ಜಲಾಶಯಗಳ ಒಟ್ಟು ನೀರು ಸಂಗ್ರಹಣಾ ಸಾಮರ್ಥ್ಯ 865.20 ಟಿಎಂಸಿಯಿದ್ದರೆ, ಪ್ರಸ್ತುತ 148.22 ಟಿಎಂಸಿ ಪ್ರಮಾಣದಷ್ಟು ಮಾತ್ರ ನೀರು ಸಂಗ್ರಹವಿದೆ. ಅಂದರೆ ಒಟ್ಟಾರೆ ನೀರು ಸಂಗ್ರಹ ಸಾಮರ್ಥ್ಯದ ಶೇ.17ರಷ್ಟು ಮಾತ್ರ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಹದಿಮೂರು ಜಲಾಶಯಗಳಲ್ಲಿ 293.75 ಟಿಎಂಸಿಯಷ್ಟು (1 ಟಿಎಂಸಿ ಅಂದರೆ ಸಾವಿರ ಮಿಲಿಯನ್ ಘನ ಅಡಿ = 2,831 ಕೋಟಿ ಲೀ. ಸಮ) ನೀರು ಡ್ಯಾಮ್ ಗಳಲ್ಲಿ ಸಂಗ್ರಹವಾಗಿತ್ತು.

ತುಂಗಭದ್ರಾ ಅಣೆಕಟ್ಟಿನಲ್ಲಿ ಕಳೆದ ಬಾರಿ ಇದೇ ಅವಧಿಯಲ್ಲಿ ಶೇ.43.35ರಷ್ಟು ನೀರಿನ ಸಂಗ್ರವಿದ್ದರೆ, ಈ ಬಾರಿ ಶೇ.7.92ಕ್ಕೆ ಕುಸಿದಿದೆ. ಲಿಂಗನಮಕ್ಕಿಯಲ್ಲಿ ಕಳೆದ ಬಾರಿ ಶೇ.14.89ರಷ್ಟು ನೀರಿನ ಸಂಗ್ರವಿದ್ದರೆ, ಈ ಬಾರಿ ಅದು ಶೇ.7.34ಕ್ಕೆ ಇಳಿದಿದೆ. ವರಾಹಿಯಲ್ಲಿ ಕಳೆದ ಬಾರಿ ಶೇ.7.11ರಷ್ಟಿದ್ದು, ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಶೇ.7.68ರಷ್ಟಕ್ಕೆ ತಲುಪಿದೆ. ಇನ್ನು ಘಟಪ್ರಭಾದಲ್ಲಿ ಶೇ.16.31ರಷ್ಟಿದ್ದಿದ್ದು, 7.92ಕ್ಕೆ ಬಂದು ನಿಂತಿದೆ. ಆಲಮಟ್ಟಿಯಲ್ಲಿ ಶೇ.39.17 ಇದ್ದಿದ್ದು, ಶೇ.15.79ಕ್ಕೆ ನೀರಿನ ಸಂಗ್ರಹ ಕುಸಿದಿದೆ. ಇನ್ನು ಮಲಪ್ರಭಾ ಜಲಾಶಯದಲ್ಲಿ ಹಿಂದಿನ ವರ್ಷ ಇದೇ ಅವಧಿಯಲ್ಲಿ ಶೇ.31.06 ನೀರಿದ್ದರೆ, ಈ ಬಾರಿ ಕೇವಲ ಶೇ.18.55ರಷ್ಟಕ್ಕೆ ಇಳಿಕೆಯಾಗಿದೆ. ಇನ್ನು ಕೆಆರ್ ಎಸ್ ಅಣೆಕಟ್ಟಿನಲ್ಲಿ ಕಳೆದ ವರ್ಷ ನೀರಿನ ಸಂಗ್ರಹವು ಶೇ.59.41ರಷ್ಟಿತ್ತು ಆದರೀಗ ಶೇ.20.11ಕ್ಕೆ ಬಂದು ನಿಂತಿದೆ.

ಜಲವಿದ್ಯುತ್ ಉತ್ಪಾದನೆಗೂ ತೊಡಕು :

ಒಂದು ಮಳೆ ಕಡಿಮೆಯಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನೇ ದಿನೇ ಕುಸಿಯುತ್ತಿದ್ದು, ಕುಡಿಯುವ ನೀರು, ಕೃಷಿ, ವಿದ್ಯುತ್ ಉತ್ಪಾದನೆ ಮೇಲೆಯೂ ಕೂಡ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ಸಂಸ್ಥೆ ಅಡಿಯಲ್ಲಿ ಶರಾವತಿ, ನಾಗಜರಿ, ವಾರಾಹಿ, ಕೂಡಸಳ್ಳಿ, ಜೋಗ ಹಾಗೂ ಶಿವನ ಸಮುದ್ರದಲ್ಲಷ್ಟೆ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿರುವುದು ಕೆಪಿಟಿಸಿಎಲ್ ಪ್ರಸ್ತುತ ವಿದ್ಯುತ್ ಉತ್ಪಾದನಾ ವರದಿಯಲ್ಲಿ ಕಂಡು ಬಂದಿದೆ. ಕೆಪಿಸಿಎಲ್ ಸದ್ಯ ಪ್ರಮುಖವಾಗಿ ಉಷ್ಣವಿದ್ಯುತ್ ಉತ್ಪಾದನೆ ಮೇಲೆಯೇ ಹೆಚ್ಚು ಅವಲಂಬಿತವಾಗಿರುವುದು ತಿಳಿದು ಬಂದಿದೆ. ಮಳೆಯ ಕೊರತೆಯ ಪ್ರಮಾಣ ಹೀಗೆ ಮುಂದುವರೆದರೆ, ರಾಜ್ಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.

ಜೂನ್ ತಿಂಗಳಲ್ಲಿ 16 ಜಿಲ್ಲೆಗಳಲ್ಲಿ ಮಳೆ ಕೊರತೆ :

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿಯ ಪ್ರಕಾರ ಜೂನ್ ತಿಂಗಳಿನಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿ ಕೊರತೆಯಿರುವುದಾಗಿ ತಿಳಿಸಿದೆ. ಅದರಲ್ಲೂ 9 ಜಿಲ್ಲೆಗಳಲ್ಲಿ ತೀವ್ರ ಮಳೆಯ ಅಭಾವವಿದೆ. ಕೇವಲ ಕೋಲಾರ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚುವರಿಯಾಗಿ ಶೇ.34ರಷ್ಟು ಅಂದರೆ 88 ಮಿ.ಮೀ ಮಳೆಯಾಗಿದೆ. ಉಳಿದಂತೆ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ ಎಂದು ಹೇಳಿದೆ.

ಮುಂಗಾರು ಪೂರ್ವ ಅವಧಿಯಲ್ಲಿ ಜನವರಿಯಿಂದ ಮೇ ತಿಂಗಳಾಗಿದ್ದು, ಈ ಅಧಿಯಲ್ಲಿ ರಾಜ್ಯದಲ್ಲಿ ವಾಡಿಕೆಯಂತೆ 120 ಮಿ.ಮೀ ಮಳೆಯಾಗಬೇಕಿತ್ತು. ಆದರೆ ವಾಸ್ತವವಾಗಿ 117.4 ಮಿ.ಮೀನಷ್ಟು ಮಾತ್ರ ಮಳೆಯಾಗಿದೆ. ಜನವರಿಯಿಂದ ಮಾರ್ಚ್ ತನಕ 13 ಮಿ.ಮೀ,, ಏಪ್ರಿಲ್ ನಲ್ಲಿ 32 ಮಿ.ಮೀ ಹಾಗೂ ಮೇ ತಿಂಗಳಿನಲ್ಲಿ 74 ಮಿ.ಮೀ ಮಳೆಯಾಗಿದೆ. ಜೂನ್ 1ನೇ ತಾರೀಖಿನಿಂದ ಜುಲೈ 1ನೇ ತಾರೀಖಿನ ಅವಧಿಯಲ್ಲಿ ವಾಡಿಕೆಯಂತೆ 208 ಮಿ.ಮೀ ಮಳೆಯಾಗಬೇಕಿತ್ತು ಆದರೆ 92 ಮಿ.ಮೀ ಅಂದರೆ ಶೇ.56ರಷ್ಟು ಕಡಿಮೆ ಮಳೆಯಾಗಿದೆ.

ಬಿತ್ತನೆಯ ಪ್ರಮಾಣದಲ್ಲೂ ಕುಸಿತ :

ಹೊಲದಲ್ಲಿ ಕೆಲಸ ಮಾಡುತ್ತಿರುವ ರೈತನ ಚಿತ್ರ (ಸಾಂದರ್ಭಿಕ)

ಈ ಬಾರಿ ಮುಂಗಾರು ಪೂರ್ವದಲ್ಲಿ ರಾಜ್ಯದಾದ್ಯಂತ 2.95 ಒಟ್ಟಾರೆ ಕೃಷಿ ಭೂಮಿಯ ಪೈಕಿ ಕೇವಲ 2.48 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿದೆ. ಅದೇ ರೀತಿ ಜೂ.9ರ ಕೃಷಿ ಇಲಾಖೆ ವರದಿಯಂತೆ ಮಳೆಗಾಲದ ಅವಧಿಯಲ್ಲಿ ಒಟ್ಟಾರೆ 82.35 ಲಕ್ಷ ಕೃಷಿ ಭೂಮಿಯ ಪೈಕಿ 5.42 ಲಕ್ಷ ಹೆಕ್ಟೇರ್ (ಶೇ.7) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ರಾಜ್ಯ 13 ವಿವಿಧ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ವಿವರ ಈ ಕೆಳಕಂಡಂತಿದೆ :

ಲಿಂಗನಮಕ್ಕಿ ಜಲಾಶಯ :

ಲಿಂಗನಮಕ್ಕಿ ಜಲಾಶಯ ಪೂರ್ಣ ತುಂಬಿದಾಗ 42,971 ದಶ ಲಕ್ಷ ಲೀ. ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ 3,155 ದಶಲಕ್ಷ ಲೀ. ಅಂದರೆ ಶೇ.7.34 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.14.89 ನಷ್ಟು ನೀರು ಸಂಗ್ರಹವಿತ್ತು.

ಸೂಪಾ ಜಲಾಶಯ :

ಸೂಪಾ ಜಲಾಶಯ ಪೂರ್ಣ ತುಂಬಿದಾಗ 41,143 ದಶ ಲಕ್ಷ ಲೀ. ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ 8,645 ದಶಲಕ್ಷ ಲೀ. ಅಂದರೆ ಶೇ.21.01 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.13.32 ನಷ್ಟು ನೀರು ಸಂಗ್ರಹವಿತ್ತು.

ವರಾಹಿ ಜಲಾಶಯ :

ವರಾಹಿ ಜಲಾಶಯ ಪೂರ್ಣ ತುಂಬಿದಾಗ 8,807 ದಶ ಲಕ್ಷ ಲೀ. ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ 677 ದಶಲಕ್ಷ ಲೀ. ಅಂದರೆ ಶೇ.7.68 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.7.11 ನಷ್ಟು ನೀರು ಸಂಗ್ರಹವಿತ್ತು.

ಹಾರಂಗಿ ಜಲಾಶಯ :

ಹಾರಂಗಿ ಜಲಾಶಯ ಪೂರ್ಣ ಸಾಮರ್ಥ್ಯ 2,407 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 773 ದಶಲಕ್ಷ ಲೀ. ಅಂದರೆ ಶೇ.32.12 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.86 ನಷ್ಟು ನೀರು ಸಂಗ್ರಹವಿತ್ತು.

ಹೇಮಾವತಿ ಅಣೆಕಟ್ಟು (ಗೂರೂರು ಡ್ಯಾಮ್) :

ಹೇಮಾವತಿ ಅಣೆಕಟ್ಟು ಪೂರ್ಣ ಸಾಮರ್ಥ್ಯ 10,506 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 4,018 ದಶಲಕ್ಷ ಲೀ. ಅಂದರೆ ಶೇ.38.25 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.67.76 ನಷ್ಟು ನೀರು ಸಂಗ್ರಹವಿತ್ತು.

ಕೃಷ್ಣ ರಾಜಸಾಗರ ಅಣೆಕಟ್ಟು (KRS) :

ಕೃಷ್ಣ ರಾಜಸಾಗರ ಅಣೆಕಟ್ಟು (KRS) ಪೂರ್ಣ ಸಾಮರ್ಥ್ಯ 14,003 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 2,820 ದಶಲಕ್ಷ ಲೀ. ಅಂದರೆ ಶೇ.20.14 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.59.41 ನಷ್ಟು ನೀರು ಸಂಗ್ರಹವಿತ್ತು.

ಕಬಿನಿ ಅಣೆಕಟ್ಟು :

ಕಬಿನಿ ಅಣೆಕಟ್ಟು ಪೂರ್ಣ ಸಾಮರ್ಥ್ಯ 5,527 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 1,286 ದಶಲಕ್ಷ ಲೀ. ಅಂದರೆ ಶೇ.23.26 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.48.21 ನಷ್ಟು ನೀರು ಸಂಗ್ರಹವಿತ್ತು.

ಭದ್ರಾ ಅಣೆಕಟ್ಟು :

ಭದ್ರಾ ಅಣೆಕಟ್ಟು ಪೂರ್ಣ ಸಾಮರ್ಥ್ಯ 20,258 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 7,037 ದಶಲಕ್ಷ ಲೀ. ಅಂದರೆ ಶೇ.34.74 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.50.82 ನಷ್ಟು ನೀರು ಸಂಗ್ರಹವಿತ್ತು.

ತುಂಗಭದ್ರಾ ಅಣೆಕಟ್ಟು :

ತುಂಗಭದ್ರಾ ಅಣೆಕಟ್ಟು ಪೂರ್ಣ ಸಾಮರ್ಥ್ಯ 29,957 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 875 ದಶಲಕ್ಷ ಲೀ. ಅಂದರೆ ಶೇ.2.92 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.43.35 ನಷ್ಟು ನೀರು ಸಂಗ್ರಹವಿತ್ತು.

ಘಟಪ್ರಭಾ ಜಲಾಶಯ :

ಘಟಪ್ರಭಾ ಜಲಾಶಯ ಪೂರ್ಣ ಸಾಮರ್ಥ್ಯ 14,442 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 1,144 ದಶಲಕ್ಷ ಲೀ. ಅಂದರೆ ಶೇ.7.92 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.16.31 ನಷ್ಟು ನೀರು ಸಂಗ್ರಹವಿತ್ತು.

ಮಲಪ್ರಭಾ ಜಲಾಶಯ :

ಮಲಪ್ರಭಾ ಜಲಾಶಯ ಪೂರ್ಣ ಸಾಮರ್ಥ್ಯ 10,684 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 1,982 ದಶಲಕ್ಷ ಲೀ. ಅಂದರೆ ಶೇ.18.55 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.31.06 ನಷ್ಟು ನೀರು ಸಂಗ್ರಹವಿತ್ತು.

ಆಲಮಟ್ಟಿ ಅಣೆಕಟ್ಟು :

ಆಲಮಟ್ಟಿ ಅಣೆಕಟ್ಟು ಪೂರ್ಣ ಸಾಮರ್ಥ್ಯ 34,853 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 5,505 ದಶಲಕ್ಷ ಲೀ. ಅಂದರೆ ಶೇ.15.79 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.39.17 ನಷ್ಟು ನೀರು ಸಂಗ್ರಹವಿತ್ತು.

ನಾರಾಯಣಪುರ ಜಲಾಶಯ :

ನಾರಾಯಣಪುರ ಜಲಾಶಯ ಪೂರ್ಣ ಸಾಮರ್ಥ್ಯ 9,432 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 4,061 ದಶಲಕ್ಷ ಲೀ. ಅಂದರೆ ಶೇ.43.05 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.83.70 ನಷ್ಟು ನೀರು ಸಂಗ್ರಹವಿತ್ತು.

WhatsApp Join our WhatsApp Channel
Previous Post

Lust Stories 2 | ‘ಲಸ್ಟ್ ಸೋರಿಸ್ 2’ ಸರಣಿ ಚಿತ್ರದಲ್ಲಿ ತಮನ್ನಾ, ವಿಜಯ್ ವರ್ಮಾ ಬೋಲ್ಡ್ ದೃಶ್ಯಗಳು “ಆ” ಸೈಟಿಗೆ ಅಪಲೋಡ್?

Next Post

Automotive News | Model A Flying Car | ಮಾರುಕಟ್ಟೆಗೆ ಸದ್ಯದಲ್ಲೇ ಬರ್ತಿದೆ ಅಮೆರಿಕಾದ ಹಾರುವ ಕಾರು : ಇದು ಸತ್ಯ, ಕಲ್ಪನೆಯಲ್ಲ!!

Next Post

Automotive News | Model A Flying Car | ಮಾರುಕಟ್ಟೆಗೆ ಸದ್ಯದಲ್ಲೇ ಬರ್ತಿದೆ ಅಮೆರಿಕಾದ ಹಾರುವ ಕಾರು : ಇದು ಸತ್ಯ, ಕಲ್ಪನೆಯಲ್ಲ!!

ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

BW BIG EXCLUSIVE | A Khata Scam | ಬಿಬಿಎಂಪಿಯಲ್ಲಿ ಸಾವಿರಾರು ಬೋಗಸ್ ‘ಎ’ ಖಾತೆಗಳು ಪತ್ತೆ : ಅಡ್ಡದಾರಿ ಹಿಡಿದ ಆಸ್ತಿ ಮಾಲೀಕರು, ಅಧಿಕಾರಿಗಳಿಗೆ ಕಾದಿದೆ ಸಂಕಷ್ಟ!! ಇಲ್ಲಿದೆ ಪರಿಶೀಲನಾ ಸಮಿತಿ REPORT

Please login to join discussion

Like Us on Facebook

Follow Us on Twitter

Recent News

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group