Wednesday, May 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಕರ್ನಾಟಕ ಬಾವುಟದ ಸಾಂದರ್ಭಿಕ ಚಿತ್ರ

    ಸಿಬಿಎಸ್ಇಯಿಂದ ಕಡ್ಡಾಯ ಕನ್ನಡ ಕಲಿಕೆಗೆ ಅಡ್ಡಗಾಲು: ಎನ್ಒಸಿ ನಿಯಮ ಪರಿಷ್ಕರಣೆಗೆ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ

    ದೇವಸ್ಥಾನಗಳ ಚಿನ್ನದ ಮೇಲೆ ಸರ್ಕಾರದ ಕಣ್ಣು? ಸಾಮಾಜಿಕ ಜಾಲತಾಣಗಳ ಸುದ್ದಿ ಸಂಪೂರ್ಣ ಸುಳ್ಳು ಎಂದ ಪಿಐಬಿ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ತೈಲ ಬೆಂಕಿ: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ವಾರದಲ್ಲೇ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ

    Agriculture News | ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು: ಸಚಿವ ಎನ್. ಚಲುವರಾಯಸ್ವಾಮಿ ಭರವಸೆ

    ​ಮೇ 20ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ‘ಕೆಲಸ ಮಾಡದಿದ್ದಾಗ, ವೇತನವಿಲ್ಲ’ ಎಚ್ಚರಿಕೆ ನೀಡಿದ ನಿಗಮ

    ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೆ ವರವಾದ ಹೊಸ ಇಂಜೆಕ್ಷನ್: ಇನ್ಮುಂದೆ ಗಂಟೆಗಟ್ಟಲೆ ಕಾಯಬೇಕಿಲ್ಲ, ಕೇವಲ 7 ನಿಮಿಷದಲ್ಲಿ ಚಿಕಿತ್ಸೆ

    ರಾಜ್ಯಕ್ಕೆ 1,122 ಹೊಸ ವೈದ್ಯಕೀಯ ಸೀಟುಗಳ ಬಂಪರ್; ‘ನೀಟ್’ ರದ್ದತಿಗೆ ಸರ್ಕಾರದ ಬಲವಾದ ಆಗ್ರಹ

    ಮಾಲಿನ್ಯಕ್ಕೆ ಬ್ರೇಕ್: ದೆಹಲಿಯಲ್ಲಿ ಇನ್ನು ಮುಂದೆ ಇ-ಆಟೋಗಳದ್ದೇ ಪಾರುಪತ್ಯ

    ​ಮೇ 26 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ

  • Bengaluru Focus

    GBA News | ಬೆಂಗಳೂರು: ನಾಗರಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಖಡಕ್ ಸೂಚನೆ

    ಇಂದಿನಿಂದ ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂಪಾಯಿ ಏರಿಕೆ: ವಾಹನ ಸವಾರರ ಜೇಬಿಗೆ ಕತ್ತರಿ

    ಬನಶಂಕರಿ ಬಿಡಿಎ ವಾಣಿಜ್ಯ ನಿವೇಶನ ವಿವಾದ: 26 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    GBA Head Office Image

    ಬೆಂಗಳೂರಿನ 7 ಲಕ್ಷ ‘ಬಿ’ ಖಾತೆ ಆಸ್ತಿ ಮಾಲೀಕರೇ ಗಮನಿಸಿ: ಬಿ-ಖಾತಾದಿಂದ ಎ-ಖಾತಾಗೆ ಬದಲಾಯಿಸಲು ಶೇ.60ರಷ್ಟು ರಿಯಾಯಿತಿ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

    ಬಡವರ ‘ಬಾಟಲಿ’ಗೆ ಬರೆ: ರಾಜ್ಯದಲ್ಲಿ ಮದ್ಯದ ದರ ಭಾರೀ ಏರಿಕೆ

    ಬೆಂಗಳೂರು: ಅಪಾಯಕಾರಿ ಕಟ್ಟಡಗಳ ತೆರವಿಗೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಕಟ್ಟುನಿಟ್ಟಿನ ಆದೇಶ

    ಬೆಂಗಳೂರು ಉಪನಗರ ರೈಲಿಗೆ ಹೈಟೆಕ್ ಸ್ಪರ್ಶ: 153 ಮೆಟ್ರೋ ಮಾದರಿ ಬೋಗಿಗಳ ಖರೀದಿಗೆ ಐಸಿಎಫ್‌ ಜೊತೆ ಒಪ್ಪಂದ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಕರ್ನಾಟಕ ಬಾವುಟದ ಸಾಂದರ್ಭಿಕ ಚಿತ್ರ

    ಸಿಬಿಎಸ್ಇಯಿಂದ ಕಡ್ಡಾಯ ಕನ್ನಡ ಕಲಿಕೆಗೆ ಅಡ್ಡಗಾಲು: ಎನ್ಒಸಿ ನಿಯಮ ಪರಿಷ್ಕರಣೆಗೆ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ

    ದೇವಸ್ಥಾನಗಳ ಚಿನ್ನದ ಮೇಲೆ ಸರ್ಕಾರದ ಕಣ್ಣು? ಸಾಮಾಜಿಕ ಜಾಲತಾಣಗಳ ಸುದ್ದಿ ಸಂಪೂರ್ಣ ಸುಳ್ಳು ಎಂದ ಪಿಐಬಿ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ತೈಲ ಬೆಂಕಿ: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ವಾರದಲ್ಲೇ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ

    Agriculture News | ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು: ಸಚಿವ ಎನ್. ಚಲುವರಾಯಸ್ವಾಮಿ ಭರವಸೆ

    ​ಮೇ 20ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ‘ಕೆಲಸ ಮಾಡದಿದ್ದಾಗ, ವೇತನವಿಲ್ಲ’ ಎಚ್ಚರಿಕೆ ನೀಡಿದ ನಿಗಮ

    ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೆ ವರವಾದ ಹೊಸ ಇಂಜೆಕ್ಷನ್: ಇನ್ಮುಂದೆ ಗಂಟೆಗಟ್ಟಲೆ ಕಾಯಬೇಕಿಲ್ಲ, ಕೇವಲ 7 ನಿಮಿಷದಲ್ಲಿ ಚಿಕಿತ್ಸೆ

    ರಾಜ್ಯಕ್ಕೆ 1,122 ಹೊಸ ವೈದ್ಯಕೀಯ ಸೀಟುಗಳ ಬಂಪರ್; ‘ನೀಟ್’ ರದ್ದತಿಗೆ ಸರ್ಕಾರದ ಬಲವಾದ ಆಗ್ರಹ

    ಮಾಲಿನ್ಯಕ್ಕೆ ಬ್ರೇಕ್: ದೆಹಲಿಯಲ್ಲಿ ಇನ್ನು ಮುಂದೆ ಇ-ಆಟೋಗಳದ್ದೇ ಪಾರುಪತ್ಯ

    ​ಮೇ 26 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ

  • Bengaluru Focus

    GBA News | ಬೆಂಗಳೂರು: ನಾಗರಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಖಡಕ್ ಸೂಚನೆ

    ಇಂದಿನಿಂದ ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂಪಾಯಿ ಏರಿಕೆ: ವಾಹನ ಸವಾರರ ಜೇಬಿಗೆ ಕತ್ತರಿ

    ಬನಶಂಕರಿ ಬಿಡಿಎ ವಾಣಿಜ್ಯ ನಿವೇಶನ ವಿವಾದ: 26 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    GBA Head Office Image

    ಬೆಂಗಳೂರಿನ 7 ಲಕ್ಷ ‘ಬಿ’ ಖಾತೆ ಆಸ್ತಿ ಮಾಲೀಕರೇ ಗಮನಿಸಿ: ಬಿ-ಖಾತಾದಿಂದ ಎ-ಖಾತಾಗೆ ಬದಲಾಯಿಸಲು ಶೇ.60ರಷ್ಟು ರಿಯಾಯಿತಿ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

    ಬಡವರ ‘ಬಾಟಲಿ’ಗೆ ಬರೆ: ರಾಜ್ಯದಲ್ಲಿ ಮದ್ಯದ ದರ ಭಾರೀ ಏರಿಕೆ

    ಬೆಂಗಳೂರು: ಅಪಾಯಕಾರಿ ಕಟ್ಟಡಗಳ ತೆರವಿಗೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಕಟ್ಟುನಿಟ್ಟಿನ ಆದೇಶ

    ಬೆಂಗಳೂರು ಉಪನಗರ ರೈಲಿಗೆ ಹೈಟೆಕ್ ಸ್ಪರ್ಶ: 153 ಮೆಟ್ರೋ ಮಾದರಿ ಬೋಗಿಗಳ ಖರೀದಿಗೆ ಐಸಿಎಫ್‌ ಜೊತೆ ಒಪ್ಪಂದ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home News Wire

ಸಿಬಿಎಸ್ಇಯಿಂದ ಕಡ್ಡಾಯ ಕನ್ನಡ ಕಲಿಕೆಗೆ ಅಡ್ಡಗಾಲು: ಎನ್ಒಸಿ ನಿಯಮ ಪರಿಷ್ಕರಣೆಗೆ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ

by Bengaluru Wire Desk
May 19, 2026
in News Wire
Reading Time: 1 min read
0
ಕರ್ನಾಟಕ ಬಾವುಟದ ಸಾಂದರ್ಭಿಕ ಚಿತ್ರ

ಕರ್ನಾಟಕ ಬಾವುಟದ ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ.19 www.bengaluruwire.com: ರಾಜ್ಯದಲ್ಲಿ 2015ರಿಂದ ಜಾರಿಯಲ್ಲಿರುವ ಕಡ್ಡಾಯ ಕನ್ನಡ ಭಾಷಾ ಕಲಿಕಾ ಕಾಯ್ದೆಗೆ ಸಿಬಿಎಸ್ಇ (CBSE) ಮಂಡಳಿ ತಣ್ಣೀರೆರಚಿದ್ದು, ಈ ಕೂಡಲೇ ಕೇಂದ್ರದ ಮೇಲೆ ಒತ್ತಡ ಹೇರಿ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

​ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದರೂ, ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಿಬಿಎಸ್ಇ ಮಂಡಳಿಯು 2026ರ ಮೇ 15ರಂದು ತನ್ನ ಅಧೀನದ ಶಾಲಾ ಮುಖ್ಯಸ್ಥರಿಗೆ ನೀಡಿರುವ ಸೂಚನೆಯು ಆಕ್ಷೇಪಾರ್ಹವಾಗಿದೆ. ಈ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಪತ್ರ ಬರೆದಿರುವ ಅವರು, ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ನೀಡಿಕೆ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.

​ಭಾಷಾ ಕಾನೂನು ದುರ್ಬಲಗೊಳಿಸುವ ಯತ್ನ:

ಕನ್ನಡ ಭಾಷಾ ಕಲಿಕಾ ಕಾಯ್ದೆಯನ್ವಯ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಸಿಬಿಎಸ್ಇ ಶಾಲೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಒಮ್ಮೆ ಎನ್.ಒ.ಸಿ ನೀಡಿದ ಬಳಿಕ ಶಿಕ್ಷಣ ಇಲಾಖೆಯ ನಿಯಂತ್ರಣ ಸೀಮಿತವಾಗುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದ ಭಾಷಾ ಕಾನೂನುಗಳನ್ನು ದುರ್ಬಲಗೊಳಿಸುವ ಮಂಡಳಿಯ ಏಕಪಕ್ಷೀಯ ನಿರ್ಣಯ ಸ್ವೀಕಾರಾರ್ಹವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಸರ್ಕಾರಕ್ಕೆ ಡಾ. ಬಿಳಿಮಲೆ ನೀಡಿದ ಪ್ರಮುಖ 5 ಸಲಹೆಗಳು:

​ಕನ್ನಡ ಕಡ್ಡಾಯಗೊಳಿಸಿ: ಸಿಬಿಎಸ್ಇ ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಬದಿಗಿಡುವ ವ್ಯವಸ್ಥೆಗೆ ಕೂಡಲೇ ಕಡಿವಾಣ ಹಾಕಬೇಕು. ಆರ್ 1/ ಆರ್ 2 (R1/R2) ವಿಷಯ ಕಡ್ಡಾಯವಾಗಿ ಕನ್ನಡವೇ ಆಗಿರಬೇಕು.

​ಎನ್.ಒ.ಸಿ ವಾರ್ಷಿಕ ನವೀಕರಣ: ರಾಜ್ಯ ಸರ್ಕಾರವು ನೀಡುವ ಎನ್.ಒ.ಸಿ ವ್ಯವಸ್ಥೆಯನ್ನು ವಾರ್ಷಿಕ ನವೀಕರಣಕ್ಕೆ ಒಳಪಡಿಸಬೇಕು. ಕನ್ನಡ ಬೋಧನೆ, ಶಿಕ್ಷಕರ ನೇಮಕಾತಿ ಮತ್ತು ಭಾಷಾ ಅನುಷ್ಠಾನದ ವರದಿ ಆಧಾರದ ಮೇಲೆಯೇ ನವೀಕರಣ ಮಾಡಬೇಕು.

​ಎನ್.ಒ.ಸಿ ರದ್ದು ಅಧಿಕಾರ: ಕನ್ನಡ ಅನುಷ್ಠಾನದಲ್ಲಿ ಯಾವುದೇ ರೀತಿಯ ಲೋಪ ಕಂಡುಬಂದಲ್ಲಿ, ಶಾಲೆಯ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ರದ್ದುಪಡಿಸುವ ಪರಮಾಧಿಕಾರವನ್ನು ರಾಜ್ಯ ಸರ್ಕಾರ ಕಾಯ್ದಿರಿಸಿಕೊಳ್ಳಬೇಕು.

​ಅರ್ಹ ಕನ್ನಡ ಶಿಕ್ಷಕರ ನೇಮಕ: ಎಲ್ಲ ಸಿ.ಬಿ.ಎಸ್.ಇ ಶಾಲೆಗಳಲ್ಲಿ ಕೇವಲ ಪಠ್ಯಕ್ರಮದಲ್ಲಿ ಕನ್ನಡ ಸೇರಿಸುವುದಷ್ಟೇ ಅಲ್ಲ, ಅದನ್ನು ಸಮರ್ಪಕವಾಗಿ ಬೋಧಿಸಲು ಅರ್ಹ ಕನ್ನಡ ಶಿಕ್ಷಕರ ನೇಮಕಾತಿಯನ್ನು ಕಡ್ಡಾಯಗೊಳಿಸಬೇಕು.

​ಕಠಿಣ ಕಾನೂನು ಕ್ರಮ: ಭಾಷಾ ನೀತಿಯನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸದನ ಸಮಿತಿ ಅಥವಾ ತಜ್ಞರ ಸಮಿತಿಯನ್ನು ರಚಿಸಿ, ಅದರ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು.

​ಕರ್ನಾಟಕದಲ್ಲಿ ಓದುವ ಪ್ರತಿಯೊಂದು ವಿದ್ಯಾರ್ಥಿಯು ಕನ್ನಡದೊಂದಿಗೆ ಬಾಂಧವ್ಯ ಹೊಂದುವುದು ಅತ್ಯಗತ್ಯ. ಹೀಗಾಗಿ ಕನ್ನಡದ ಹಿತಾಸಕ್ತಿಗೆ ವಿರುದ್ಧವಾಗಿರುವ ಯಾವುದೇ ಕ್ರಮದ ಎದುರು ರಾಜ್ಯ ಸರ್ಕಾರವು ದೃಢ ನಿಲುವು ತಾಳಬೇಕು ಎಂದು ಡಾ. ಪುರುಷೋತ್ತಮ ಬಿಳಿಮಲೆ ಸ್ಪಷ್ಟಪಡಿಸಿದ್ದಾರೆ.

WhatsApp Join our WhatsApp Channel
Previous Post

ದೇವಸ್ಥಾನಗಳ ಚಿನ್ನದ ಮೇಲೆ ಸರ್ಕಾರದ ಕಣ್ಣು? ಸಾಮಾಜಿಕ ಜಾಲತಾಣಗಳ ಸುದ್ದಿ ಸಂಪೂರ್ಣ ಸುಳ್ಳು ಎಂದ ಪಿಐಬಿ

Please login to join discussion

Like Us on Facebook

Follow Us on Twitter

Recent News

ಕರ್ನಾಟಕ ಬಾವುಟದ ಸಾಂದರ್ಭಿಕ ಚಿತ್ರ

ಸಿಬಿಎಸ್ಇಯಿಂದ ಕಡ್ಡಾಯ ಕನ್ನಡ ಕಲಿಕೆಗೆ ಅಡ್ಡಗಾಲು: ಎನ್ಒಸಿ ನಿಯಮ ಪರಿಷ್ಕರಣೆಗೆ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ

May 19, 2026

ದೇವಸ್ಥಾನಗಳ ಚಿನ್ನದ ಮೇಲೆ ಸರ್ಕಾರದ ಕಣ್ಣು? ಸಾಮಾಜಿಕ ಜಾಲತಾಣಗಳ ಸುದ್ದಿ ಸಂಪೂರ್ಣ ಸುಳ್ಳು ಎಂದ ಪಿಐಬಿ

May 19, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಕರ್ನಾಟಕ ಬಾವುಟದ ಸಾಂದರ್ಭಿಕ ಚಿತ್ರ

ಸಿಬಿಎಸ್ಇಯಿಂದ ಕಡ್ಡಾಯ ಕನ್ನಡ ಕಲಿಕೆಗೆ ಅಡ್ಡಗಾಲು: ಎನ್ಒಸಿ ನಿಯಮ ಪರಿಷ್ಕರಣೆಗೆ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ

May 19, 2026

ದೇವಸ್ಥಾನಗಳ ಚಿನ್ನದ ಮೇಲೆ ಸರ್ಕಾರದ ಕಣ್ಣು? ಸಾಮಾಜಿಕ ಜಾಲತಾಣಗಳ ಸುದ್ದಿ ಸಂಪೂರ್ಣ ಸುಳ್ಳು ಎಂದ ಪಿಐಬಿ

May 19, 2026
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ತೈಲ ಬೆಂಕಿ: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ವಾರದಲ್ಲೇ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ

May 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group