Saturday, June 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

  • Bengaluru Focus
    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

    BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    GBA News | ಗ್ರೇಟರ್ ಬೆಂಗಳೂರು: ಕಸದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ, ವಾರ್ಡ್ ರಸ್ತೆಗಳ ಅಭಿವೃದ್ಧಿಗೆ ₹2000 ಕೋಟಿ ಅನುದಾನ

    ಬೆಂಗಳೂರಿನಲ್ಲಿ ಬೇಕರಿ ಮತ್ತು ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ: ಅಧಿಕಾರಿಗಳ ಕಿರುಕುಳಕ್ಕೆ ತೀವ್ರ ಆಕ್ರೋಶ

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

  • Bengaluru Focus
    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

    BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    GBA News | ಗ್ರೇಟರ್ ಬೆಂಗಳೂರು: ಕಸದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ, ವಾರ್ಡ್ ರಸ್ತೆಗಳ ಅಭಿವೃದ್ಧಿಗೆ ₹2000 ಕೋಟಿ ಅನುದಾನ

    ಬೆಂಗಳೂರಿನಲ್ಲಿ ಬೇಕರಿ ಮತ್ತು ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ: ಅಧಿಕಾರಿಗಳ ಕಿರುಕುಳಕ್ಕೆ ತೀವ್ರ ಆಕ್ರೋಶ

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Public interest

Ganesh Chaturthi | ಗಣೇಶ ಚತುರ್ಥಿ ಕೇವಲ ಒಂದು ಹಬ್ಬವಲ್ಲ : ಇದಕ್ಕೆ ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಧಾರ್ಮಿಕ ಹಿನ್ನಲೆಯಿದೆ

by Bengaluru Wire Desk
August 30, 2022
in Public interest
Reading Time: 1 min read
0
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಸನಾತನ ಧರ್ಮದಲ್ಲಿ ಎಲ್ಲ ಹಬ್ಬಗಳಿಗೂ ತನ್ನದೇ ಆದ ಮಹತ್ವವಿದೆ. ಪ್ರತಿಯೊಂದು ಹಬ್ಬಗಳನ್ನು ಆಚರಿಸುವ ಕಾಲ, ಮಾಸ, ತಿಥಿ, ನಕ್ಷತ್ರಗಳಲ್ಲಿಯೇ ನಾವು ಹಬ್ಬಗಳನ್ನು ಆಚರಿಸುತ್ತೇವೆ ಮತ್ತು ಅದರ ವಿಧಾನಗಳ ಬಗ್ಗೆಯೂ ವೈಜ್ಞಾನಿಕ, ಐತಿಹಾಸಿಕ, ಐಕ್ಯತೆ ಮೂಡಿಸುವ ಹಾಗೂ ಪರಂಪರೆಯ ಹಿನ್ನಲೆಯಿದೆ ಎಂಬುದು ಅವುಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿದಾಗ ಅರಿವಾಗುತ್ತದೆ. ಅಷ್ಟೆ ಅಲ್ಲ ಹಬ್ಬ ಮಾಡುವುದಕ್ಕಾಗಿ ನಾವು ಹಬ್ಬವನ್ನು ಆಚರಿಸುತ್ತಿಲ್ಲ ಎಂಬ ಸತ್ಯದ ಅರಿವಾಗುತ್ತದೆ.

ನಮ್ಮ ಸನಾತನ ಧರ್ಮದಲ್ಲಿ ಗಣಪತಿಗೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ. ಗಣಪತಿಯನ್ನು ಬುದ್ಧಿ, ಜ್ಞಾನ, ವಿವೇಕ, ವಿನಯ ಹೀಗೆ ಗುಣಸಂಪನ್ನನಾಗಿಯೂ ಕಾಣುವುದರ ಜೊತೆಗೆ ಏಕದಂತನ ಪೂಜೆ ನಿರ್ಲಕ್ಷಿಸಿದರೆ, ಹೇಗೆ ನಮಗೆ  ಒಳಿತಾಗುತ್ತದೆ? ಎಂಬ ಧ್ವನಿ ಸಂಕೇತವೇ ಗಣಪತಿಯ ಆರಾಧನೆ ಎಷ್ಟು ಮುಖ್ಯವಾದದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆಗಲೇ ಲಂಬೋದರ ಎನ್ನುವ ಶಕ್ತಿಯ ದಿವ್ಯತೆಯ ಅರಿವಾಗುತ್ತದೆ.

ಪ್ರತಿವರ್ಷ ಭಾದ್ರಪದ ಶುಕ್ಲಪಕ್ಷ ಚತುರ್ಥಿಯ ದಿನದಂದು ಗಣಪತಿಯ ಹಬ್ಬವನ್ನು ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಭೂಮಿಯು ನೆನೆದು ಹಸನಾಗಿ, ಬೆಳೆದ ಫಸಲು ಸಂವೃದ್ಧಿಯಾಗಿ, ಹಚ್ಚಹಸಿರು ಎಲ್ಲೆಡೆ ಕಂಗೊಳಿಸುವ ಸುಸಂದರ್ಭವಾಗಿರುತ್ತದೆ. ಇಂತಹ ಸಮಯದಲ್ಲಿ ತಾಯಿ ಗೌರಿಯ ಜೊತೆಗೆ ಆಕೆಯ ಮಾನಸಪುತ್ರ, ಭವಿಷ್ಯವನ್ನು ರೂಪಿಸುವ ವಿನಾಯಕ ನಮ್ಮ ಭೂಮಿಗೆ ಬರುತ್ತಿದ್ದಾನೆ ಎನ್ನುವ ವಿಚಾರದಲ್ಲೂ ಅರ್ಥವಿದೆ, ಮಹತ್ವವಿದೆ. ಜಗನ್ಮಾತೆ ಎನಿಸಿದ ಪಾರ್ವತಿಯ ಮೈಬೆವರಿನಿಂದ ಹುಟ್ಟಿದವನು ನಮ್ಮ ಗಣಪ.

ಸಾಂದರ್ಭಿಕ ಚಿತ್ರ

ಅಂದರೆ ಪ್ರಕೃತಿ ಮಾತೆ ಪಾರ್ವತಿ ಈ ಭೂಮಿ. ಈ ಭೂಮಿಯಿಂದ ಮಾಡಲ್ಪಡುವ ಮಣ್ಣಿನ ಮೂರ್ತಿಯ ಗಣಪತಿ ನಮ್ಮೆಲ್ಲರ ಶ್ರಮದ ಸಂಕೇತ. ಬೆಳೆಯುವ ಫಸಲು ಆಗಬಹುದು, ನಮ್ಮ ಇನ್ಯಾವುದೇ ರೂಪದ ದುಡಿಮೆಯಾಗಿರಬಹುದು, ಅದು ನಮ್ಮ ಕೈಗೆ ಎಟುಕಬೇಕಾದರೆ ಶ್ರಮವು ಫಲಕಾರಿಯಾಗಬೇಕಾದರೆ, ಭರವಸೆ ಎನ್ನುವ ಗಣಪತಿಯನ್ನು ಆರಾಧಿಸುವುದು, ನಮ್ಮ ಪೂರ್ವಿಕರ ನಂಬಿಕೆಯಾಗಿ ಗಣೇಶ ಚತುರ್ಥಿಯ ಹಬ್ಬದ ಆಚರಣೆ ಪರಂಪರೆಯಾಗಿ ನಡೆದುಕೊಂಡು ಬಂದಿದೆ.

ಆದುದರಿಂದಲೇ ಮಳೆಗಾಲದಲ್ಲಿ ಮಳೆಯ ಮೋಡ ತುಂಬಿ ಆಕಾಶವು ಕಪ್ಪಾಗಿರಬೇಕೇ ಹೊರತು, ಬೆಳ್ಳಗಿರುವ ಆಕಾಶದಲ್ಲಿ ಚಂದ್ರ ಕಾಣಿಸಿಕೊಳ್ಳುವಂತಾದರೆ, ಆ ಮಾಸ, ಆ ಕಾಲ ಮಳೆಯಿಂದ ವಂಚಿತವಾಗಿ, ಫಸಲಿಗೆ ಧಕ್ಕೆಯಾದರೆ, ಅದು ಅಕಾಲವಲ್ಲದೆ ಮತ್ತಿನ್ನೇನು ಆಗಲು ಸಾಧ್ಯ? ಹಾಗಾಗಿಯೇ ಶ್ರಮಿಕ ರೂಪದ ಸಂಕೇತದ ಗಣೇಶ. ಗಣೇಶ ಹಬ್ಬದಂದು ಚಂದ್ರನನ್ನು ಕಂಡರೆ, ಅದು ಅಶುಭದ ಸಂಕೇತವೆಂದು ಅಂದು ಯಾರು ಚಂದ್ರನನ್ನು ಕಾಣಲು ಯಾರೂ ಇಷ್ಟಪಡುವುದಿಲ್ಲ.

ಇನ್ನು ಇಂತಹ ಗಣಪತಿಯನ್ನು ಸೃಷ್ಟಿಸಿದ ಪ್ರಕೃತಿ ಮಾತೆ ಪಾರ್ವತಿಯು ಭೂಮಿಗೆ ಬರುವುದು ಸಹ, ಜನರ ಸುಖ, ನೆಮ್ಮದಿ, ಸೌಭಾಗ್ಯವನ್ನು ಕಾಣುವುದಕ್ಕಾಗಿಯೇ. ಆದ್ದರಿಂದ ಯಾವುದೇ ತಾರತಮ್ಯವಿಲ್ಲದೆ, ಬೇಧಬಾವವಿಲ್ಲದೆ, ಎಲ್ಲಾ ವರ್ಗದ ಜನರು ಸಹ ಪೂಜಿಸಿ, ಬರ ಮಾಡಿಕೊಳ್ಳುವ, ಆರಾಧಿಸುವ ಹಬ್ಬವೇ ಗಣೇಶ ಚತುರ್ಥಿ ಎನಿಸಿದೆ. ಗಣೇಶ ಹಬ್ಬದ ದಿನದಂದು, ಗಣಪತಿ ವೃತವನ್ನು ಆಚರಿಸುವವರು, ಪುರೋಹಿತರ ಮುಖಾಂತರವಾಗಲಿ ಅಥವಾ ತಾವೇ ಸ್ವತಃ ಮಾಡುವವರಾಗಲೀ, ‘ಸಂಕಲ್ಪ’ ಮಾಡಬೇಕು.

ಮಣ್ಣಿನ ಗಣಪತಿಗೆ ವಿಶೇಷ ಪೂಜೆ- ಪುನಸ್ಕಾರ ಮಾಡಿ, ಭಕ್ಷ್ಯ ಭೋಜ್ಯಗಳಿಂದ, ಗೀತ ಗಾಯನಗಳಿಂದ ಆರಾಧಿಸಿ, ನಂತರ ಖುಷಿ ಖುಷಿಯಾಗಿ ಗಣಪತಿ ಭಪ್ಪಾ ಮೋರಿಯಾ ಎಂದು ನೀರಿನಲ್ಲಿ ವಿಸರ್ಜನೆ ಮಾಡುವುದರಲ್ಲೂ ಬದುಕಿನ ರಹಸ್ಯ ಅಡಗಿದೆ. ನಮ್ಮ ಬದುಕು ಸಹ ಅಷ್ಟೆ, ಈ ದೇಹ ಪಂಚಭೂತಗಳಿಂದ ಆಗಿದ್ದು, ಇರುವಷ್ಟು ದಿನ ಖುಷಿಯಾಗಿ ಬದುಕಿ ನಂತರ ಮಣ್ಣಿನಲ್ಲಿ ಲೀನವಾಗುವಂತೆ, ಮಣ್ಣಿಂದ ಕಾಯ ಮಣ್ಣಿಗೆ ಎನ್ನುವ ಸತ್ಯವನ್ನು ಈ ಗಣೇಶ ಹಬ್ಬ ಧ್ವನಿಸುತ್ತದೆ.

ಗಣಪತಿಯ ಮಣ್ಣಿನ ವಿಗ್ರಹದಲ್ಲಿ, ಪಂಚಭೂತವೆನಿಸಿದ ಭೂಮಿ, ಜಲ, ಅಗ್ನಿ, ವಾಯು ಹಾಗೂ ಆಕಾಶ ತತ್ವವು ಅಡಗಿದೆ. ನಾವು ಅಷ್ಟೆ, ಪಂಚಭೂತಗಳಿಂದ ಹುಟ್ಟಿ, ಪಂಚಭೂತಗಳಲ್ಲಿಯೇ ನಮ್ಮ ದೇಹ ಲೀನವಾಗುತ್ತದೆ. ಲಂಬೋದರನ ಪ್ರತಿ ಅಂಗಾಂಗಗಳೂ ಸಹ ಜ್ಞಾನ, ಬುದ್ದಿವಂತಿಕೆ, ಏಕಾಗ್ರತೆ, ದಕ್ಷತೆಯನ್ನು ಪ್ರತಿ ಪಾದಿಸುತ್ತದೆ. ಅವನ ಆಯುಧಗಳಾದ ಸಹ ಪಾಶ, ಅಂಕುಶ, ಸಂಯಮದೊಂದಿಗೆ ಆಧ್ಯಾತ್ಮಿಕ ಮಾರ್ಗದತ್ತ ಸೂಚಿಸುವ ಸಂಕೇತಗಳಾಗಿದೆ.

ಗಣಪತಿಯ ಕಥೆಗಳು ಸಹ ಹೇಗೆ ತಂದೆ- ತಾಯಿಯರಿಗೆ ಗೌರವ ನೀಡಬೇಕು ಎಂಬುದನ್ನು ಪ್ರತಿಪಾದಿಸಿದರೆ, ಅವನ ನಡೆ-ನುಡಿಯು ಎಂತೆಂತಹ ಸಂದರ್ಭದಲ್ಲಿ ಜಾಣ್ಮೆ, ವಿವೇಕ, ಸಹನೆಯನನು ಬಳಸಬೇಕು ಎಂಬುದನ್ನು ಕಥೆಯ ರೂಪದಲ್ಲಿ ಸ್ವಾರಸ್ಯಕರವಾಗಿ ನಿರೂಪಿಸಲಾಗಿದೆ. ಇಲಿಯು ವಾಹನವೆನಿಸಿದರೂ, ಅದರಲ್ಲೂ ವಿಶೇಷ ಅರ್ಥವಿದೆ. ಇಲಿಯೆಂಬ ವಾಹನ  ಚಂಚಲವೆನ್ನುವ ಆಸೆಗಳಾಗಿದ್ದು, ಅದನ್ನು ನಾವು ಹಿಡಿತದಲ್ಲಿಟ್ಟುಕೊಂಡು ಸವಾರಿ ಮಾಡಬೇಕು. ಕತ್ತಲೆಯಂತಹ ಅಜ್ಞಾನದಲ್ಲಿ ಕಣ್ಣರಳಿಸಿ ಓಡುವ ಇಲಿಯಂತೆ, ಅಂಧಕಾರದಿಂದ ಹೊರಬಂದು ಬೆಳಕಿನತ್ತ ಬರುವ ಸೂಚನೆಯನ್ನು ಕೂಡುತ್ತದೆ.

ಮಾರ್ಪಳ್ಳಿ ಆರ್.ಮಂಜುನಾಥ್, ಅಂಕಣಕಾರರು

ಹೀಗೆ ಗಣಪತಿಯು ವಿಘ್ನನಿವಾರಕನಾಗಿಯೂ, ಸಕಲ ಗುಣ ಸಂಪನ್ನನಾಗಿ ಸಮಷ್ಠಿ ರೂಪದಲ್ಲಿ ನಮಗೆ ಕಾಣುವುದರಿಂದಲೇ ಚಿಕ್ಕಮಕ್ಕಳಿಂದ ವೃದ್ಧರವರೆಗೂ, ಪಾಮರರಿಂದ ಪಂಡಿತರವರೆಗೂ, ಯಾವುದೇ ಬೇಧಬಾವವಿಲ್ಲದೆ ಮೆಚ್ಚುಗೆಯಾಗುತ್ತಾನೆ. ಎಲ್ಲರಿಗೂ ಪ್ರಿಯವಾಗುತ್ತಾನೆ. ‘ಭಕ್ತಾನಾಂ ಕಂಪಿನಂ ದೇವಂ ಜಗತ್ಕಾರಣಮಚ್ಯುತಂ’ ಎನ್ನುವ ನಂಬಿಕೆ, ಶ್ರದ್ಧೆಯಲ್ಲಿ ಗಣೇಶನ ಆರಾಧನೆ, ಪೂಜೆಯಿದೆ.

  • ಮಾರ್ಪಳ್ಳಿ ಆರ್.ಮಂಜುನಾಥ್, ಅಂಕಣಕಾರರು

 (ಆಹಾರ ಇಲಾಖೆ ನಿವೃತ್ತ ಉಪ ನಿರ್ದೇಶಕ ಹಾಗೂ ಸಾಹಿತಿಗಳು)

WhatsApp Join our WhatsApp Channel
Previous Post

KMF MILK RATE HIKE PROPOSAL | ಕೆಎಂಎಫ್ ಪ್ರತಿ ಲೀಟರ್ ಹಾಲಿನ ದರ 3 ರೂ. ಏರಿಕೆಗೆ ಪ್ರಸ್ತಾಪ

Next Post

#Sandalwood News | ಚಿತ್ರರಂಗಕ್ಕೆ ಹೊಸ ಜವಾಬ್ದಾರಿಯೊಂದಿಗೆ ರೀ ಎಂಟ್ರಿ ಕೊಡುತ್ತಿರುವ ನಟಿ ರಮ್ಯಾ ; ಅವರ ಹೊಸ ರೋಲ್ ಏನು?

Next Post

#Sandalwood News | ಚಿತ್ರರಂಗಕ್ಕೆ ಹೊಸ ಜವಾಬ್ದಾರಿಯೊಂದಿಗೆ ರೀ ಎಂಟ್ರಿ ಕೊಡುತ್ತಿರುವ ನಟಿ ರಮ್ಯಾ ; ಅವರ ಹೊಸ ರೋಲ್ ಏನು?

KIAL Airport | ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಹಿನ್ನಲೆ ; ಪೂರ್ವಭಾವಿ ಉದ್ಘಾಟನಾ ಅಭಿಯಾನಕ್ಕೆ ಸಿಎಂ ಚಾಲನೆ

Please login to join discussion

Like Us on Facebook

Follow Us on Twitter

Recent News

ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

June 20, 2026

BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

June 19, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

June 20, 2026

BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

June 19, 2026

ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

June 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group