Saturday, August 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

  • Bengaluru Focus

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

  • Bengaluru Focus

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Public interest

Ganesh Chaturthi | ಗಣೇಶ ಚತುರ್ಥಿ ಕೇವಲ ಒಂದು ಹಬ್ಬವಲ್ಲ : ಇದಕ್ಕೆ ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಧಾರ್ಮಿಕ ಹಿನ್ನಲೆಯಿದೆ

by Bengaluru Wire Desk
August 30, 2022
in Public interest
Reading Time: 1 min read
0
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಸನಾತನ ಧರ್ಮದಲ್ಲಿ ಎಲ್ಲ ಹಬ್ಬಗಳಿಗೂ ತನ್ನದೇ ಆದ ಮಹತ್ವವಿದೆ. ಪ್ರತಿಯೊಂದು ಹಬ್ಬಗಳನ್ನು ಆಚರಿಸುವ ಕಾಲ, ಮಾಸ, ತಿಥಿ, ನಕ್ಷತ್ರಗಳಲ್ಲಿಯೇ ನಾವು ಹಬ್ಬಗಳನ್ನು ಆಚರಿಸುತ್ತೇವೆ ಮತ್ತು ಅದರ ವಿಧಾನಗಳ ಬಗ್ಗೆಯೂ ವೈಜ್ಞಾನಿಕ, ಐತಿಹಾಸಿಕ, ಐಕ್ಯತೆ ಮೂಡಿಸುವ ಹಾಗೂ ಪರಂಪರೆಯ ಹಿನ್ನಲೆಯಿದೆ ಎಂಬುದು ಅವುಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿದಾಗ ಅರಿವಾಗುತ್ತದೆ. ಅಷ್ಟೆ ಅಲ್ಲ ಹಬ್ಬ ಮಾಡುವುದಕ್ಕಾಗಿ ನಾವು ಹಬ್ಬವನ್ನು ಆಚರಿಸುತ್ತಿಲ್ಲ ಎಂಬ ಸತ್ಯದ ಅರಿವಾಗುತ್ತದೆ.

ನಮ್ಮ ಸನಾತನ ಧರ್ಮದಲ್ಲಿ ಗಣಪತಿಗೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ. ಗಣಪತಿಯನ್ನು ಬುದ್ಧಿ, ಜ್ಞಾನ, ವಿವೇಕ, ವಿನಯ ಹೀಗೆ ಗುಣಸಂಪನ್ನನಾಗಿಯೂ ಕಾಣುವುದರ ಜೊತೆಗೆ ಏಕದಂತನ ಪೂಜೆ ನಿರ್ಲಕ್ಷಿಸಿದರೆ, ಹೇಗೆ ನಮಗೆ  ಒಳಿತಾಗುತ್ತದೆ? ಎಂಬ ಧ್ವನಿ ಸಂಕೇತವೇ ಗಣಪತಿಯ ಆರಾಧನೆ ಎಷ್ಟು ಮುಖ್ಯವಾದದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆಗಲೇ ಲಂಬೋದರ ಎನ್ನುವ ಶಕ್ತಿಯ ದಿವ್ಯತೆಯ ಅರಿವಾಗುತ್ತದೆ.

ಪ್ರತಿವರ್ಷ ಭಾದ್ರಪದ ಶುಕ್ಲಪಕ್ಷ ಚತುರ್ಥಿಯ ದಿನದಂದು ಗಣಪತಿಯ ಹಬ್ಬವನ್ನು ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಭೂಮಿಯು ನೆನೆದು ಹಸನಾಗಿ, ಬೆಳೆದ ಫಸಲು ಸಂವೃದ್ಧಿಯಾಗಿ, ಹಚ್ಚಹಸಿರು ಎಲ್ಲೆಡೆ ಕಂಗೊಳಿಸುವ ಸುಸಂದರ್ಭವಾಗಿರುತ್ತದೆ. ಇಂತಹ ಸಮಯದಲ್ಲಿ ತಾಯಿ ಗೌರಿಯ ಜೊತೆಗೆ ಆಕೆಯ ಮಾನಸಪುತ್ರ, ಭವಿಷ್ಯವನ್ನು ರೂಪಿಸುವ ವಿನಾಯಕ ನಮ್ಮ ಭೂಮಿಗೆ ಬರುತ್ತಿದ್ದಾನೆ ಎನ್ನುವ ವಿಚಾರದಲ್ಲೂ ಅರ್ಥವಿದೆ, ಮಹತ್ವವಿದೆ. ಜಗನ್ಮಾತೆ ಎನಿಸಿದ ಪಾರ್ವತಿಯ ಮೈಬೆವರಿನಿಂದ ಹುಟ್ಟಿದವನು ನಮ್ಮ ಗಣಪ.

ಸಾಂದರ್ಭಿಕ ಚಿತ್ರ

ಅಂದರೆ ಪ್ರಕೃತಿ ಮಾತೆ ಪಾರ್ವತಿ ಈ ಭೂಮಿ. ಈ ಭೂಮಿಯಿಂದ ಮಾಡಲ್ಪಡುವ ಮಣ್ಣಿನ ಮೂರ್ತಿಯ ಗಣಪತಿ ನಮ್ಮೆಲ್ಲರ ಶ್ರಮದ ಸಂಕೇತ. ಬೆಳೆಯುವ ಫಸಲು ಆಗಬಹುದು, ನಮ್ಮ ಇನ್ಯಾವುದೇ ರೂಪದ ದುಡಿಮೆಯಾಗಿರಬಹುದು, ಅದು ನಮ್ಮ ಕೈಗೆ ಎಟುಕಬೇಕಾದರೆ ಶ್ರಮವು ಫಲಕಾರಿಯಾಗಬೇಕಾದರೆ, ಭರವಸೆ ಎನ್ನುವ ಗಣಪತಿಯನ್ನು ಆರಾಧಿಸುವುದು, ನಮ್ಮ ಪೂರ್ವಿಕರ ನಂಬಿಕೆಯಾಗಿ ಗಣೇಶ ಚತುರ್ಥಿಯ ಹಬ್ಬದ ಆಚರಣೆ ಪರಂಪರೆಯಾಗಿ ನಡೆದುಕೊಂಡು ಬಂದಿದೆ.

ಆದುದರಿಂದಲೇ ಮಳೆಗಾಲದಲ್ಲಿ ಮಳೆಯ ಮೋಡ ತುಂಬಿ ಆಕಾಶವು ಕಪ್ಪಾಗಿರಬೇಕೇ ಹೊರತು, ಬೆಳ್ಳಗಿರುವ ಆಕಾಶದಲ್ಲಿ ಚಂದ್ರ ಕಾಣಿಸಿಕೊಳ್ಳುವಂತಾದರೆ, ಆ ಮಾಸ, ಆ ಕಾಲ ಮಳೆಯಿಂದ ವಂಚಿತವಾಗಿ, ಫಸಲಿಗೆ ಧಕ್ಕೆಯಾದರೆ, ಅದು ಅಕಾಲವಲ್ಲದೆ ಮತ್ತಿನ್ನೇನು ಆಗಲು ಸಾಧ್ಯ? ಹಾಗಾಗಿಯೇ ಶ್ರಮಿಕ ರೂಪದ ಸಂಕೇತದ ಗಣೇಶ. ಗಣೇಶ ಹಬ್ಬದಂದು ಚಂದ್ರನನ್ನು ಕಂಡರೆ, ಅದು ಅಶುಭದ ಸಂಕೇತವೆಂದು ಅಂದು ಯಾರು ಚಂದ್ರನನ್ನು ಕಾಣಲು ಯಾರೂ ಇಷ್ಟಪಡುವುದಿಲ್ಲ.

ಇನ್ನು ಇಂತಹ ಗಣಪತಿಯನ್ನು ಸೃಷ್ಟಿಸಿದ ಪ್ರಕೃತಿ ಮಾತೆ ಪಾರ್ವತಿಯು ಭೂಮಿಗೆ ಬರುವುದು ಸಹ, ಜನರ ಸುಖ, ನೆಮ್ಮದಿ, ಸೌಭಾಗ್ಯವನ್ನು ಕಾಣುವುದಕ್ಕಾಗಿಯೇ. ಆದ್ದರಿಂದ ಯಾವುದೇ ತಾರತಮ್ಯವಿಲ್ಲದೆ, ಬೇಧಬಾವವಿಲ್ಲದೆ, ಎಲ್ಲಾ ವರ್ಗದ ಜನರು ಸಹ ಪೂಜಿಸಿ, ಬರ ಮಾಡಿಕೊಳ್ಳುವ, ಆರಾಧಿಸುವ ಹಬ್ಬವೇ ಗಣೇಶ ಚತುರ್ಥಿ ಎನಿಸಿದೆ. ಗಣೇಶ ಹಬ್ಬದ ದಿನದಂದು, ಗಣಪತಿ ವೃತವನ್ನು ಆಚರಿಸುವವರು, ಪುರೋಹಿತರ ಮುಖಾಂತರವಾಗಲಿ ಅಥವಾ ತಾವೇ ಸ್ವತಃ ಮಾಡುವವರಾಗಲೀ, ‘ಸಂಕಲ್ಪ’ ಮಾಡಬೇಕು.

ಮಣ್ಣಿನ ಗಣಪತಿಗೆ ವಿಶೇಷ ಪೂಜೆ- ಪುನಸ್ಕಾರ ಮಾಡಿ, ಭಕ್ಷ್ಯ ಭೋಜ್ಯಗಳಿಂದ, ಗೀತ ಗಾಯನಗಳಿಂದ ಆರಾಧಿಸಿ, ನಂತರ ಖುಷಿ ಖುಷಿಯಾಗಿ ಗಣಪತಿ ಭಪ್ಪಾ ಮೋರಿಯಾ ಎಂದು ನೀರಿನಲ್ಲಿ ವಿಸರ್ಜನೆ ಮಾಡುವುದರಲ್ಲೂ ಬದುಕಿನ ರಹಸ್ಯ ಅಡಗಿದೆ. ನಮ್ಮ ಬದುಕು ಸಹ ಅಷ್ಟೆ, ಈ ದೇಹ ಪಂಚಭೂತಗಳಿಂದ ಆಗಿದ್ದು, ಇರುವಷ್ಟು ದಿನ ಖುಷಿಯಾಗಿ ಬದುಕಿ ನಂತರ ಮಣ್ಣಿನಲ್ಲಿ ಲೀನವಾಗುವಂತೆ, ಮಣ್ಣಿಂದ ಕಾಯ ಮಣ್ಣಿಗೆ ಎನ್ನುವ ಸತ್ಯವನ್ನು ಈ ಗಣೇಶ ಹಬ್ಬ ಧ್ವನಿಸುತ್ತದೆ.

ಗಣಪತಿಯ ಮಣ್ಣಿನ ವಿಗ್ರಹದಲ್ಲಿ, ಪಂಚಭೂತವೆನಿಸಿದ ಭೂಮಿ, ಜಲ, ಅಗ್ನಿ, ವಾಯು ಹಾಗೂ ಆಕಾಶ ತತ್ವವು ಅಡಗಿದೆ. ನಾವು ಅಷ್ಟೆ, ಪಂಚಭೂತಗಳಿಂದ ಹುಟ್ಟಿ, ಪಂಚಭೂತಗಳಲ್ಲಿಯೇ ನಮ್ಮ ದೇಹ ಲೀನವಾಗುತ್ತದೆ. ಲಂಬೋದರನ ಪ್ರತಿ ಅಂಗಾಂಗಗಳೂ ಸಹ ಜ್ಞಾನ, ಬುದ್ದಿವಂತಿಕೆ, ಏಕಾಗ್ರತೆ, ದಕ್ಷತೆಯನ್ನು ಪ್ರತಿ ಪಾದಿಸುತ್ತದೆ. ಅವನ ಆಯುಧಗಳಾದ ಸಹ ಪಾಶ, ಅಂಕುಶ, ಸಂಯಮದೊಂದಿಗೆ ಆಧ್ಯಾತ್ಮಿಕ ಮಾರ್ಗದತ್ತ ಸೂಚಿಸುವ ಸಂಕೇತಗಳಾಗಿದೆ.

ಗಣಪತಿಯ ಕಥೆಗಳು ಸಹ ಹೇಗೆ ತಂದೆ- ತಾಯಿಯರಿಗೆ ಗೌರವ ನೀಡಬೇಕು ಎಂಬುದನ್ನು ಪ್ರತಿಪಾದಿಸಿದರೆ, ಅವನ ನಡೆ-ನುಡಿಯು ಎಂತೆಂತಹ ಸಂದರ್ಭದಲ್ಲಿ ಜಾಣ್ಮೆ, ವಿವೇಕ, ಸಹನೆಯನನು ಬಳಸಬೇಕು ಎಂಬುದನ್ನು ಕಥೆಯ ರೂಪದಲ್ಲಿ ಸ್ವಾರಸ್ಯಕರವಾಗಿ ನಿರೂಪಿಸಲಾಗಿದೆ. ಇಲಿಯು ವಾಹನವೆನಿಸಿದರೂ, ಅದರಲ್ಲೂ ವಿಶೇಷ ಅರ್ಥವಿದೆ. ಇಲಿಯೆಂಬ ವಾಹನ  ಚಂಚಲವೆನ್ನುವ ಆಸೆಗಳಾಗಿದ್ದು, ಅದನ್ನು ನಾವು ಹಿಡಿತದಲ್ಲಿಟ್ಟುಕೊಂಡು ಸವಾರಿ ಮಾಡಬೇಕು. ಕತ್ತಲೆಯಂತಹ ಅಜ್ಞಾನದಲ್ಲಿ ಕಣ್ಣರಳಿಸಿ ಓಡುವ ಇಲಿಯಂತೆ, ಅಂಧಕಾರದಿಂದ ಹೊರಬಂದು ಬೆಳಕಿನತ್ತ ಬರುವ ಸೂಚನೆಯನ್ನು ಕೂಡುತ್ತದೆ.

ಮಾರ್ಪಳ್ಳಿ ಆರ್.ಮಂಜುನಾಥ್, ಅಂಕಣಕಾರರು

ಹೀಗೆ ಗಣಪತಿಯು ವಿಘ್ನನಿವಾರಕನಾಗಿಯೂ, ಸಕಲ ಗುಣ ಸಂಪನ್ನನಾಗಿ ಸಮಷ್ಠಿ ರೂಪದಲ್ಲಿ ನಮಗೆ ಕಾಣುವುದರಿಂದಲೇ ಚಿಕ್ಕಮಕ್ಕಳಿಂದ ವೃದ್ಧರವರೆಗೂ, ಪಾಮರರಿಂದ ಪಂಡಿತರವರೆಗೂ, ಯಾವುದೇ ಬೇಧಬಾವವಿಲ್ಲದೆ ಮೆಚ್ಚುಗೆಯಾಗುತ್ತಾನೆ. ಎಲ್ಲರಿಗೂ ಪ್ರಿಯವಾಗುತ್ತಾನೆ. ‘ಭಕ್ತಾನಾಂ ಕಂಪಿನಂ ದೇವಂ ಜಗತ್ಕಾರಣಮಚ್ಯುತಂ’ ಎನ್ನುವ ನಂಬಿಕೆ, ಶ್ರದ್ಧೆಯಲ್ಲಿ ಗಣೇಶನ ಆರಾಧನೆ, ಪೂಜೆಯಿದೆ.

  • ಮಾರ್ಪಳ್ಳಿ ಆರ್.ಮಂಜುನಾಥ್, ಅಂಕಣಕಾರರು

 (ಆಹಾರ ಇಲಾಖೆ ನಿವೃತ್ತ ಉಪ ನಿರ್ದೇಶಕ ಹಾಗೂ ಸಾಹಿತಿಗಳು)

WhatsApp Join our WhatsApp Channel
Previous Post

KMF MILK RATE HIKE PROPOSAL | ಕೆಎಂಎಫ್ ಪ್ರತಿ ಲೀಟರ್ ಹಾಲಿನ ದರ 3 ರೂ. ಏರಿಕೆಗೆ ಪ್ರಸ್ತಾಪ

Next Post

#Sandalwood News | ಚಿತ್ರರಂಗಕ್ಕೆ ಹೊಸ ಜವಾಬ್ದಾರಿಯೊಂದಿಗೆ ರೀ ಎಂಟ್ರಿ ಕೊಡುತ್ತಿರುವ ನಟಿ ರಮ್ಯಾ ; ಅವರ ಹೊಸ ರೋಲ್ ಏನು?

Next Post

#Sandalwood News | ಚಿತ್ರರಂಗಕ್ಕೆ ಹೊಸ ಜವಾಬ್ದಾರಿಯೊಂದಿಗೆ ರೀ ಎಂಟ್ರಿ ಕೊಡುತ್ತಿರುವ ನಟಿ ರಮ್ಯಾ ; ಅವರ ಹೊಸ ರೋಲ್ ಏನು?

KIAL Airport | ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಹಿನ್ನಲೆ ; ಪೂರ್ವಭಾವಿ ಉದ್ಘಾಟನಾ ಅಭಿಯಾನಕ್ಕೆ ಸಿಎಂ ಚಾಲನೆ

Please login to join discussion

Like Us on Facebook

Follow Us on Twitter

Recent News

Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

August 7, 2026

BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

August 7, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

August 7, 2026

BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

August 7, 2026

ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

August 7, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group