ಚೆನ್ನೈ, ಮೇ.21 www.bengaluruwire.com: ತಮಿಳುನಾಡು ಮುಖ್ಯಮಂತ್ರಿ ಸಿ.ವಿಜಯ್ ಜೋಸೆಫ್ ನೇತೃತ್ವ ಸಚಿವ ಸಂಪುಟಕ್ಕೆ ಇಂದು 23 ಹೊಸ ಶಾಸಕರನ್ನು ಸೇರ್ಪಡೆಗೊಳಿಸಲಾಗಿದೆ.
ಮುಖ್ಯಮಂತ್ರಿ ವಿಜಯ್ ಅವರು ಮಾಡಿದ ಶಿಫಾರಸಿನ ಮೇರೆಗೆ ಈ 23 ಶಾಸಕರನ್ನು ಸಚಿವರನ್ನಾಗಿ ನೇಮಿಸಲು ತಮಿಳುನಾಡು ರಾಜ್ಯಪಾಲರು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ.
ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಇಂದು (21.05.2026), ಗುರುವಾರ ಬೆಳಗ್ಗೆ 10 ಗಂಟೆಗೆ ಚೆನ್ನೈನ ಲೋಕ್ ಭವನದಲ್ಲಿ ನೆರವೇರಿತು.
ಸಂಪುಟಕ್ಕೆ ಸೇರ್ಪಡೆಯಾದ 23 ನೂತನ ಸಚಿವರ ಹೆಸರು ಹಾಗೂ ಪ್ರತಿನಿಧಿಸುವ ಕ್ಷೇತ್ರಗಳ ವಿವರ:

1. ಶ್ರೀನಾಥ್ (214 ತೂತುಕುಡಿ ವಿಧಾನಸಭಾ ಕ್ಷೇತ್ರ)
2. ಕಮಲಿ. ಎಸ್ (112 ಅವಿನಾಶಿ ವಿಧಾನಸಭಾ ಕ್ಷೇತ್ರ)
3. ಸಿ. ವಿಜಯಲಕ್ಷ್ಮಿ (97 ಕುಮಾರಪಾಳ್ಯಂ ವಿಧಾನಸಭಾ ಕ್ಷೇತ್ರ)
4. ಆರ್.ವಿ. ರಂಜಿತ್ಕುಮಾರ್ (37 ಕಾಂಚೀಪುರಂ ವಿಧಾನಸಭಾ ಕ್ಷೇತ್ರ)
5. ವಿನೋದ್ (171 ಕುಂಭಕೋಣಂ ವಿಧಾನಸಭಾ ಕ್ಷೇತ್ರ)
6. ರಾಜೀವ್ (210 ತಿರುವಡಾನೈ ವಿಧಾನಸಭಾ ಕ್ಷೇತ್ರ)
7. ಬಿ. ರಾಜ್ಕುಮಾರ್ (155 ಕಡಲೂರು ವಿಧಾನಸಭಾ ಕ್ಷೇತ್ರ)
8. ವಿ. ಗಾಂಧಿರಾಜ್ (38 ಅರಕ್ಕೋಣಂ ವಿಧಾನಸಭಾ ಕ್ಷೇತ್ರ)
9. ಮಥನ್ ರಾಜಾ. ಪಿ (217 ಒಟ್ಟಪಿಡಾರಂ ವಿಧಾನಸಭಾ ಕ್ಷೇತ್ರ)
10. ಜಗದೇಶ್ವರಿ. ಕೆ (202 ರಾಜಪಾಳ್ಯಂ ವಿಧಾನಸಭಾ ಕ್ಷೇತ್ರ)
11. ರಾಜೇಶ್ ಕುಮಾರ್. ಎಸ್ (234 ಕಿಳ್ಳಿಯೂರು ವಿಧಾನಸಭಾ ಕ್ಷೇತ್ರ)
12. ಎಂ. ವಿಜಯ್ ಬಾಲಾಜಿ (98 ಈರೋಡ್ ಈಸ್ಟ್ ವಿಧಾನಸಭಾ ಕ್ಷೇತ್ರ)
13. ಲೋಕೇಶ್ ತಮಿಳ್ಸೆಲ್ವನ್ ಡಿ (92 ರಾಸಿಪುರಂ ವಿಧಾನಸಭಾ ಕ್ಷೇತ್ರ)
14. ತಮಿಳನ್ ಪಾರ್ಥಿಬನ್. ಎ (90 ಸೇಲಂ ಸೌತ್ ವಿಧಾನಸಭಾ ಕ್ಷೇತ್ರ)
15. ವಿಜಯ್ (139 ಶ್ರೀರಂಗಂ ವಿಧಾನಸಭಾ ಕ್ಷೇತ್ರ)
16. ರಮೇಶ್ (188 ಮೇಲೂರು ವಿಧಾನಸಭಾ ಕ್ಷೇತ್ರ)
17. ಪಿ. ವಿಶ್ವನಾಥನ್ / ಕುಮಾರ್. ಆರ್ (26 ವೇಲಚೇರಿ / 29 ಶ್ರೀಪೆರಂಬದೂರ್ ವಿಧಾನಸಭಾ ಕ್ಷೇತ್ರ)
18. ತೆನ್ನರಸು. ಕೆ (ಶ್ರೀಪೆರಂಬದೂರ್ ವಿಧಾನಸಭಾ ಕ್ಷೇತ್ರ)
19. ವಿ. ಸಂಪತ್ ಕುಮಾರ್ (118 ಕೊಯಮತ್ತೂರು ನಾರ್ತ್ ವಿಧಾನಸಭಾ ಕ್ಷೇತ್ರ)
20. ಮೊಹಮ್ಮದ್ ಫರ್ವಾಸ್. ಜೆ (183 ಅರಂತಾಂಗಿ ವಿಧಾನಸಭಾ ಕ್ಷೇತ್ರ)
21. ಡಿ. ಶರತ್ಕುಮಾರ್ (31 ತಾಂಬರಂ ವಿಧಾನಸಭಾ ಕ್ಷೇತ್ರ)
22. ಎನ್. ಮೇರಿ ವಿಲ್ಸನ್ (11 ಡಾ. ರಾಧಾಕೃಷ್ಣನ್ ನಗರ್ ವಿಧಾನಸಭಾ ಕ್ಷೇತ್ರ)
23. ವಿಘ್ನೇಶ್ ಕೆ (122 ಕಿಣತ್ತುಕಡವು ವಿಧಾನಸಭಾ ಕ್ಷೇತ್ರ)
ಒಟ್ಟಿನಲ್ಲಿ ತಮಿಳಿಗ ವೆಟ್ರಿ ಕಳಗಮ್ ಪಕ್ಷ ಸ್ಥಾಪನೆ ಮಾಡಿ ಅತಿ ಕಡಿಮೆ ಅವಧಿಯಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಪ್ರಾದೇಶಿಕ ಪಕ್ಷಗಳಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆಯೊಡ್ಡಿ ಅನಾಯಾಸ ಗೆಲುವು ಸಾಧಿಸಿದ ಜೋಸೆಫ್ ವಿಜಯ್ ಅವರ ಸರ್ಕಾರದಲ್ಲಿ ನೂತನವಾಗಿ ಸಚಿವ ಸಂಪುಟ ಸದಸ್ಯರ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ. ಮೇ.10ರಂದು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ 11 ದಿನಗಳ ನಂತರ ನೂತನ ಸಚಿವ ಸಂಪುಟ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ನೆರವೇರಿದೆ.























