Saturday, August 22, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2026

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

  • Bengaluru Focus

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

    ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಿಹಿಸುದ್ದಿ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಮಂಡನೆ

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2026

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

  • Bengaluru Focus

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

    ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಿಹಿಸುದ್ದಿ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಮಂಡನೆ

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

BW Analysis | ಗ್ಯಾರೆಂಟಿ ಭಾಗ್ಯ : ಸಿಎಂ- ಡಿಕೆಶಿ ಜಾಣ ನಡೆಯೂ, ಬೂದಿ ಮುಚ್ಚಿದ ಕೆಂಡವೂ…!

ನಾಡಿನ ಹಿರಿಯ ಪತ್ರಕರ್ತ ಕೆ.ಎಸ್. ರಾಜಮನ್ನಾರ್ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದ ಗ್ಯಾರಂಟಿ ಭಾಗ್ಯದ ಅನುಷ್ಠಾನದ ಹಿಂದೆ ಮುಂದಿನ ರಾಜಕೀಯ ಲೆಕ್ಕಾಚಾರದ ಬಗ್ಗೆ ಬರೆದ ವಿಶ್ಲೇಅಷಣಾತ್ಮಕ ಬರಹ ಇಲ್ಲಿದೆ.

by Bengaluru Wire Desk
June 10, 2023
in BW Special, Public interest
Reading Time: 1 min read
0
  • – ಲೇಖನ : ಕೆ.ಎಸ್. ರಾಜಮನ್ನಾರ್, ಹಿರಿಯ ಪತ್ರಕರ್ತರು

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದಿದೆ. ಹೊಸ ಸರ್ಕಾರದ ಮೇಲೆ ಭಾರೀ ನಿರೀಕ್ಷೆಯಿದೆ.ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷವೇ ಹೊರತು ಜನರಲ್ಲ.! ಸಿದ್ದರಾಮಯ್ಯನವರ ಸರ್ಕಾರಕ್ಕಿಂತ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಗ್ಯಾರೆಂಟಿಗಳೆ ಹೆಚ್ಚು ಸದ್ದು, ಗದ್ದಲ ಮಾಡುತ್ತಿವೆ. ಇದು ಎಲ್ಲಿಗೆ ಯಾವ ಮಟ್ಟಕ್ಕೆ ಹೋಗುತ್ತದೆ, ಇದರಿಂದ ಮುಂದೆ ಉಂಟಾಗಬಹುದಾದ ಅಸಮಾಧಾನ, ಆಕ್ರೋಶ, ಅಸ್ಟೋಟ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಗ್ಯಾರೆಂಟಿ ಭಾಗ್ಯ ಮುಖ್ಯಮಂತ್ರಿಗೆ ಮತ್ತು ಅಧಿಕಾರಿಗಳಿಗೆ ತಲೆನೋವು ಮತ್ತು ಕಿರಿಕಿರಿ ತಂದಿರುವುದು ಸತ್ಯ.

ಗ್ಯಾರೆಂಟಿ ಭಾಗ್ಯ ಜಾರಿಗೆ ತರುವುದು ಹೇಳಿದಷ್ಟು ಸುಲಭವಲ್ಲ. ಎಂಬುದು 13 ಬಜೆಟ್ ಮಂಡಿಸಿ, ತಮ್ಮ ರಾಜಕೀಯ ಗುರು ರಾಮಕೃಷ್ಣ ಹೆಗ್ಗಡೆ ಅವರನ್ನು ಬಜೆಟ್ ಮಂಡನೆಯ ವಿಚಾರದಲ್ಲಿ ಸರಿಗಟ್ಟಿರುವ ಸಿದ್ದರಾಮಯ್ಯ ನವರಿಗೆ ಏನೆಲ್ಲಾ ಕಷ್ಟ-ನಷ್ಟಗಳಿವೆ ಎಂಬ ಅರಿವಿದೆ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಅದಕ್ಕೆ ಪೂರಕವಾಗಿಲ್ಲ.

ಹೊಸದಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಿ ಜಾರಿಗೆ ತರಲು ಹೋದರೆ ಜನರ ಆಕ್ರೋಶ ಸಿಟ್ಟು, ಅಸಮಾಧಾನ ಸರ್ಕಾರವನ್ನೇ ಅಪೋಶನ ತೆಗೆದುಕೊಳ್ಳುವ ಹೋದರೆ ಎಂಬ ಅಳುಕು- ಆತಂಕ ಇನ್ನೊಂದು ಕಡೆ. ಮೇಲಾಗಿ ದೇಶದ ಹೊಸ ತೆರಿಗೆ ಆಡಳಿತ ಜಿಎಸ್ ಟಿ ವ್ಯವಸ್ಥೆ ಜಾರಿಯನಂತರ ರಾಜ್ಯ ಸರ್ಕಾರಗಳಿಗೆ ತೆರಿಗೆ ವಿಧಿಸುವ ಅಧಿಕಾರ, ಅವಕಾಶ ಎರಡು ಕಡಿಮೆ ಹೀಗಾಗಿ ಪ್ರತಿದಿನ ಹೇಗಾದರೂ ಒಂದು ಕುಂಟುನೆಪ, ಇಲ್ಲ-ಸಲ್ಲದ ಷರತ್ತುಗಳು, ನಿಬಂಧನೆಗಳನ್ನು ಹಾಕಿ ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ ಹೋದರೆ ಸಾಕಪ್ಪ ಎನ್ನುವ ಸ್ಥಿತಿಯಿದೆ.

ಕಾಂಗ್ರೆಸ್ ಕೊಟ್ಟ ಮಾತಿನಂತೆ ಗ್ಯಾರೆಂಟಿ ಭಾಗ್ಯ ಜಾರಿಗೆ ತರದೇ ಹೋದರೆ ರಾಜಕೀಯ ಅಶಾಂತಿಗೆ ಕಾರಣವಾಗಲಿದೆ. ಏಕೆಂದರೆ ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯ ಸಿದ್ದರಾಮಯ್ಯ ವಿರುದ್ಧ ಅಸಮಾಧಾನದಿಂದ ಕುದಿಯುತ್ತಿದೆ. ಇದನ್ನೇ ಪ್ರಬಲ ಅಸ್ತ್ರವಾಗಿ ಮಾಡಿಕೊಳ್ಳಲು ಹೊಂಚು ಹಾಕುತ್ತಿದೆ. ಇದೊಂದು ಬಾರಿ ನನಗೆ ಅವಕಾಶ ಕೊಡಿ . ನಾನು ನಿಮ್ಮ ಮನೆಯ ಮಗ ಎಂದು ಡಿ.ಕೆ.ಶಿವಕುಮಾರ್ ಕೈಮುಗಿದು ಮಾಡಿದ ಪ್ರಾರ್ಥನೆ ಫಲ ಕೊಟ್ಟಿದ್ದು ವಿಶೇಷವಾಗಿ ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಅಪ್ಪಿಕೊಂಡಿತು. ಇದರ ಪರಿಣಾಮ ಮತಗಳಿಕೆ ಪ್ರಮಾಣ ಶೇ.೫ರಷ್ಟು ಹೆಚ್ಚಾಗಲು ಕಾರಣವಾಯಿತು.

ಜೆಡಿಎಸ್ 36 ಸ್ಥಾನಗಳಿಂದ 19 ಸ್ಥಾನಕ್ಕೆ ಕುಸಿದು ಮುಂದಿನ ಭವಿಷ್ಯ ಹೇಗೆ ಎಂದು ತಲೆಮೇಲೆ ಕೈಇಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಈಗ ಗ್ಯಾರೆಂಟಿ ಭಾಗ್ಯಗಳನ್ನು ಜಾರಿಗೆ ತರುವುದು ಹೇಗೆ ಎಂಬ ಚಿಂತೆ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಜನರಿಗೆ ಮತ್ತು ಶಾಸಕರಿಗೆ ಹತ್ತಿರವಾಗಿ ಮತ್ತಷ್ಟು ಜನಾನುರಾಗಿಯಾಗುವುದು ಹೇಗೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೆಕ್ಕಾಚಾರದ ಹೆಜ್ಜೆ ಇಡುತ್ತಿದ್ದಾರೆ . ಇದರ ತಾತ್ಪರ್ಯ ಇಷ್ಟೆ. ಶಿವಕುಮಾರ್ ಮುಂದಿನ ನಡೆ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ ಎಂಬುದು ಸ್ಪಷ್ಟ. ಒಕ್ಕಲಿಗ, ಲಿಂಗಾಯಿತ ಸಮುದಾಯಕ್ಕೆ ಇದ್ದ ಸುವರ್ಣ ಅವಕಾಶವನ್ನು ಸಿದ್ದರಾಮಯ್ಯ ತಪ್ಪಿಸಿಬಿಟ್ಟರು ಎಂಬ ಒಳಬೇಗುದಿ ಆಯಾ ಸಮುದಾಯವನ್ನು ಕಾಡುತ್ತಿದೆ. ಹೀಗಾಗಿ ಅಧಿಕಾರದಲ್ಲಿ ಎರಡು ಪವರ್ ಸೆಂಟರ್ ಗಳು ಮುಂದಿನ ಅವಕಾಶಕ್ಕಾಗಿ ಒಳಗೊಳಗೆ ಕತ್ತಿ ಮಸೆಯುತ್ತಿರುವುದು ಗೊತ್ತಿಲ್ಲದ ಸಂಗತಿಯೇನಲ್ಲ.! ಆದರೆ ಇದು ಯಾವಾಗ ಅಸ್ಪೋಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕಾಂಗ್ರೆಸ್ ಪಕ್ಷದ ಲಾಂಛನ

ಎರಡುವರೆ ವರ್ಷಗಳ ಆಡಳಿತದ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡುತ್ತಾರೆ ಎಂದು ಘಂಟಾಘೋಷವಾಗಿ ಹೇಳುವ ಸ್ಥಿತಿಯಲ್ಲಿ ಯಾರು ಇಲ್ಲ. ಮೇಲಾಗಿ ಹೈಕಮಾಂಡ್ ಮಟ್ಟದಲ್ಲಿ ಇಂತಹ ಅಧಿಕಾರ ಹಸ್ತಾಂತರದ ರಾಜಿ ಸೂತ್ರ ಅಧಿಕೃತವಾಗಿ, ಮನಃಸಾಕ್ಷಿಯಾಗಿ, ಸರ್ವಸಮ್ಮತವಾಗಿ ರೂಪುಗೊಂಡಿದೆ ಎಂಬುದೇ ಅನುಮಾನ.!

ಸಿದ್ದು ದಾಳಕ್ಕೆ ಹೈಕಮಾಂಡ್ ಸಮ್ಮತಿ:
ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಮುಂದಿನ ನಾಯಕ ಯಾರಾಗಬೇಕು ಎಂಬುದಕ್ಕೆ ಹಸ್ತಿನಾವತಿಯಲ್ಲಿ 3-4 ದಿನ ರಾಜಕೀಯ ಜಿದ್ದಾಜಿದ್ದಿ ನಡೆಯಿತು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಿಗಿಪಟ್ಟನ್ನು ಸಡಿಲ ಮಾಡದೇ ಕಡೆಯವರೆಗೆ ಹಠ ಸಾಧಿಸಿಕೊಂಡೆ ಬಂದರು . ಕಡೆಗೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ. ಇದರ ಸಂಪೂರ್ಣ ಜವಾಬ್ದಾರಿ ನನ್ನದೆ, ಇಲ್ಲವಾದರೆ ನನ್ನ ದಾರಿ ನನಗೆ, ನಿಮ್ಮ ದಾರಿ ನಿಮಗೆ ಎಂಬ ಸಿದ್ದರಾಮಯ್ಯ ಬಿಗಿಪಟ್ಟಿಗೆ ಹೈಕಮಾಂಡ್ ತಲೆಬಾಗಿ ಇಷ್ಟವೋ, ಕಷ್ಟವೋ ಹೈಕಮಾಂಡ್ ದೇಶ ಆಡಳಿತ ಚುಕ್ಕಾಣಿ ಹಿಡಿಯುವ ಮುಂದಿನ ಲೆಕ್ಕವನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ದರಾಮಯ್ಯ ಬೇಡಿಕೆಗೆ ತಥಾಸ್ತು ಎಂದಿದೆ.

ನಂತರ ಡಿಕೆಶಿ ಸಮಾಧಾನಕ್ಕಾಗಿ ಮೊದಲ ಎರಡುವರೆ ವರ್ಷ ಸಿದ್ದರಾಮಯ್ಯ ಅವರಿಗೂ ನಂತರದ ಎರಡೂವರೆ ವರ್ಷದ ನಾಯಕ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡುವುದು ಎಂಬ ಒಗ್ಗರಣೆಯ ಸಾಲನ್ನು ಸೇರಿಸಲಾಗಿದೆ ಎಂಬ ಮಾತು ಹರಿದಾಡುತ್ತಿದೆ.
ಗ್ಯಾರೆಂಟಿಗೆ ಬೇಕು ಒಂದು ಲಕ್ಷ ಕೋಟಿ:
ಚುನಾವಣಾ ಪೂರ್ವದಲ್ಲಿ ಜನತೆಗೆ ಕೊಟ್ಟಿರುವ ಎಲ್ಲಾ ವಾಗ್ದಾನಗಳನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ ಜಾರಿಗೆ ತರಬೇಕಾದರೆ ಸರ್ಕಾರಕ್ಕೆ ಪ್ರತಿ ವರ್ಷ ಒಂದು ಲಕ್ಷ ಕೋಟಿ ರೂಪಾಯಿ . ಹಣ ಬೇಕಾಗಬಹುದು. ರಾಜ್ಯದ ಬಜೆಟ್ ಗಾತ್ರ ಮೂರನೆ ಒಂದು ಭಾಗದ ಹಣ ಗ್ಯಾರೆಂಟಿ ಯೋಜನೆಗಳ ಜಾರಿಗೆ ಹೋಗಲಿದೆ.

ಇನ್ನೂ ಸಾಲ ಮರುಪಾವತಿಸಲು ವಾರ್ಷಿಕವಾಗಿ 70 ರಿಂದ 80 ೦ಸಾವಿರ ಕೋಟಿ ರೂ. ಬೇಕಾಗಲಿದೆ . ಇನ್ನು ನೌಕರರ ಸಂಬಳ, ಆಡಳಿತದ ವೆಚ್ಚ ಇವೆಲ್ಲವನ್ನೂ ಲೆಕ್ಕ ಹಾಕಿದರೆ ರಾಜ್ಯದ ವರಮಾನಕ್ಕಿಂತ ಖರ್ಚು ಹೆಚ್ಚಾಗಲಿದೆ. ಇದನ್ನು ಸರಿದೂಗಿಸುವುದು ಸುಲಭದ ಮಾತಲ್ಲ. ಬೇಕಾಬಿಟ್ಟಿ ಜನರ ಮೇಲೆ ತೆರಿಗೆ ಹಾಕಿ ಸಂಕಟಕ್ಕೆ ನೂಕಿದರೆ ಅದರ ಪರಿಣಾಮ ಮುಂಬರುವ ಚುನಾವಣೆಗಳ ಮೇಲೆ ಬೀರುವುದು ಶತಸಿದ್ದ. ಗ್ಯಾರೆಂಟಿ ಭಾಗ್ಯ ಈಡೇರಿಸದಿದ್ದರೆ ಜನ ಸಿಟ್ಟಿಗೇಳುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 25 ಸ್ಥಾನಗಳನ್ನು ಗೆಲ್ಲಿಸಿಕೊಡದೇ ಹೋದರೆ ಸಿದ್ದರಾಮಯ್ಯನವರ ಕುರ್ಚಿ ಅಲುಗಾಡಲಿದೆ. ಹೀಗಾಗಿ ಗ್ಯಾರಂಟಿ ಭಾಗ್ಯವನ್ನು ಜಾರಿಗೆ ಲೆಕ್ಕಾಚಾರ ಹಾಕುತ್ತಿದ್ದಾರೆ, ಆದರೆ ದಾರಿ ಸ್ಪಷ್ಟವಾಗಿಲ್ಲ.

ಜಿಎಸ್ ಟಿ ತೆರಿಗೆ ಕುರಿತ ಗ್ರಾಫಿಕ್ಸ್ ಚಿತ್ರ (ಸಾಂದರ್ಭಿಕ ಚಿತ್ರ)

ಸಂಪನ್ಮೂಲದ ಮಾರ್ಗಗಳು:
ಜಿಎಸ್ಟಿ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯದ ಮೂಲಗಳೇ ಇಲ್ಲವಾಗಿದೆ.!! ಈಗ ಹೆಚ್ಚೆಂದರೆ ಸ್ಟಾಂಪ್ ಮತ್ತು ರಿಜಿಸ್ಟ್ರೇಷನ್, ಪೆಟ್ರೋಲ್ ಮತ್ತು ಡೀಸೆಲ್, ಮದ್ಯದ ಮೇಲೆ ತೆರಿಗೆಯನ್ನು ಹೆಚ್ಚಿಸಿ ಹೆಚ್ಚುವರಿ ವೆಚ್ಚ ಸರಿದೂಗಿಸಬೇಕಾಗಿದೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ಗಾದೆ ಮಾತಿನಂತೆ ಗ್ಯಾರೆಂಟಿ ಭಾಗ್ಯವನ್ನು ಪೂರ್ಣವಾಗಿ ಜಾರಿಗೆ ತರುವಷ್ಟು ಸಂಪನ್ಮೂಲ ಕ್ರೋಡೀಕರಣವಾಗುವುದಿಲ್ಲ. ಹೀಗಾಗಿ ಸರ್ಕಾರಕ್ಕೆ ಗ್ಯಾರಂಟಿ ಭಾಗ್ಯವೇ ಒಂದು ರೀತಿ ಮುಳುವಾಗುತ್ತಿದೆ.

ಇನ್ನು ಸಿದ್ದರಾಮಯ್ಯ ಗಮನವೆಲ್ಲಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಲೋಕಸಭಾ ಸ್ಥಾನಗಳನ್ನು ಗೆದ್ದು ಹೈಕಮಾಂಡಿಗೆ ಮತ್ತಷ್ಟು ಹತ್ತಿರವಾಗುವುದು , 5 ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಬೇಕು ಎಂಬುದರ ಕಡೆಗೆ ಹೆಚ್ಚು ಗಮನ. ಎಷ್ಟು ಬೇಗ ಹೈಕಮಾಂಡ್ ಅವ ಕೃಪೆಗೆ ಸಿದ್ದರಾಮಯ್ಯ ಗುರಿಯಾಗಿ ಅಧಿಕಾರ ಬಿಟ್ಟುಕೊಡುತ್ತಾರೋ ಎಂಬ ಲೆಕ್ಕಚಾರದಲ್ಲಿ ಡಿ.ಕೆ. ಶಿವಕುಮಾರ್ ನಾಳೆಗಳನ್ನು ಕಳೆಯುತ್ತಿದ್ದಾರೆ….!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷದ ಕಡೆಗೆ ವಾಲುವಂತೆ ಮಾಡುವಲ್ಲಿ ಶಿವಕುಮಾರ್ ಮಾಡಿದ ತಂತ್ರ ಫಲಕೊಟ್ಟಿದೆ. ಪರಿಣಾಮ ಒಕ್ಕಲಿಗರು, ಲಿಂಗಾಯಿತರು ಮತ್ತು ಮುಸ್ಲಿಂ ಸಮುದಾಯ ಸಾರಾಸಗಟಾಗಿ ಜೆಡಿಎಸ್ ತಿರಸ್ಕರಿಸಿ ಕಾಂಗ್ರೆಸ್ ಅನ್ನು ಅಪ್ಪಿಕೊಂಡಿತು. ಇನ್ನು ಖರ್ಗೆ ಎಐಸಿಸಿ ಅದ್ಯಕ್ಷರಾದ ನಂತರ ಪರಿಶಿಷ್ಟ ಸಮುದಾಯ ಸಹ ಕಾಂಗ್ರೆಸ್ ಕಡೆ ವಾಲಿದೆ. ಇದರ ಒಟ್ಟು ಪರಿಣಾಮ ಕಾಂಗ್ರೆಸ್ 135 ಗಡಿ ದಾಟಲು ನೆರವಾಗಿದೆ.

39 ಲಿಂಗಾಯಿತ ಹಾಗೂ 21 ಒಕ್ಕಲಿಗ ಶಾಸಕರು ಸಿಡಿದು ನಿಂತರೆ ಮುಂದಿನ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ರಾಜಕೀಯ ನಿಂತ ನೀರಲ್ಲ. ನಾಳೆ ಇದು ಹೀಗೆಯೇ ಇರುವುದಿಲ್ಲ. ಬೂದಿ ಮುಚ್ಚಿದ ಕೆಂಡದಂತಿರುವ ಪ್ರಬಲ ಸಮುದಾಯದ ಆಕ್ರೋಶ ಲೋಕಸಭಾ ಚುನಾವಣೆಗೆ ಮೊದಲು ಅಥವಾ ನಂತರ ಯಾವಾಗ ಬೇಕಾದರು ಆಸ್ಪೋಟವಾಗಿ, ರಾಜಕೀಯ ಅಶಾಂತಿಗೂ ಕಾರಣವಾಗಬಹುದು.

WhatsApp Join our WhatsApp Channel
Previous Post

Karnataka District In Charge Ministers List | ಸಿದ್ದರಾಮಯ್ಯ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ

Next Post

Electricity Bill Hike Actual Facts | ಜೂನ್ ತಿಂಗಳ ವಿದ್ಯುತ್ ಬಿಲ್ ಕಂಡು ಹೌಹಾರಿದ್ರಾ? ಇಲ್ಲಿದೆ ಬೆಸ್ಕಾಂ ಬಿಲ್ ಲೆಕ್ಕಾಚಾರದ ಮಾಹಿತಿ

Next Post

Electricity Bill Hike Actual Facts | ಜೂನ್ ತಿಂಗಳ ವಿದ್ಯುತ್ ಬಿಲ್ ಕಂಡು ಹೌಹಾರಿದ್ರಾ? ಇಲ್ಲಿದೆ ಬೆಸ್ಕಾಂ ಬಿಲ್ ಲೆಕ್ಕಾಚಾರದ ಮಾಹಿತಿ

ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬಿಬಿಎಂಪಿ ಪುನರ್ ರಚನೆಗೆ ತಜ್ಞರ ಸಮಿತಿ ರಚಿಸಿ ಆದೇಶಿಸಿದ ರಾಜ್ಯ ಸರ್ಕಾರ : ಸಮಿತಿಯ ಕಾರ್ಯಗಳೇನು? ಇಲ್ಲಿದೆ ವಿವರ

Please login to join discussion

Like Us on Facebook

Follow Us on Twitter

Recent News

​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

August 22, 2026

ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

August 22, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

August 22, 2026

ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

August 22, 2026

ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

August 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group