Saturday, August 22, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2026

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

  • Bengaluru Focus

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

    ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಿಹಿಸುದ್ದಿ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಮಂಡನೆ

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2026

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

  • Bengaluru Focus

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

    ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಿಹಿಸುದ್ದಿ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಮಂಡನೆ

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home News Wire

Odisha Train Accident Updates | 20 ವರ್ಷಗಳಲ್ಲಿ ದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ 261 ಮಂದಿ ಸಾವು : ಸ್ಥಳಕ್ಕೆ ಪಿಎಂ ಮೋದಿ ಭೇಟಿ ; 33 ರೈಲು ಸೇವೆ ರದ್ದು

ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಪುನಃಸ್ಥಾಪನೆ ಕಾರ್ಯ ಆರಂಭವಾಗಿದೆ.‌ | ಅಪಘಾತ ಹಿನ್ನಲೆಯಲ್ಲಿ 33 ರೈಲುಗಳನ್ನು ರದ್ದುಪಡಿಸಿದೆ ರೈಲ್ವೇ ಇಲಾಖೆ

by Bengaluru Wire Desk
June 3, 2023
in News Wire, Public interest
Reading Time: 2 mins read
0

ಕೋಲ್ಕತಾ, ಜೂ.3 www.bengaluruwire.com :
ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳ ಭೀಕರ ಅಪಘಾತದಲ್ಲಿ ಕನಿಷ್ಠ 261 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ. ಇಷ್ಟು ದೊಡ್ಡ ರೈಲು ಅವಘಡವು ಕಳೆದ 20 ವರ್ಷಗಳಲ್ಲಿ ನಡೆದ ದೇಶದ ಅತ್ಯಂತ ಭೀಕರ ರೈಲು ಅಪಘಾತವಾಗಿದೆ ಎಂದು ರೈಲ್ವೇ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಕಟಕ್‌ನ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲಿದ್ದಾರೆ. ಅಪಘಾತದಲ್ಲಿ ಬೆಂಗಳೂರು- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಪುನಃಸ್ಥಾಪನೆ ಕಾರ್ಯ ಆರಂಭವಾಗಿದೆ.‌

ರೈಲು ನಂ.12841 ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ರೈಲು ನಂ.12864 ಸರ್ ಎಂ ವಿಶ್ವೇಶ್ವರಯ್ಯ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಜೂ.2 ರಂದು ಸುಮಾರು 6.55 ಗಂಟೆಗೆ ಬಹನಾಗ ಬಜಾರ್ ರೈಲು ನಿಲ್ದಾಣದ ಬಳಿ ಹಳಿತಪ್ಪಿತು.

ಇತ್ತೀಚಿನ ವರ್ಷಗಳಲ್ಲೆ ಅತಿದೊಡ್ಡ ರೈಲು ದುರಂತ ನಡೆದ ಸ್ಥಳದಲ್ಲಿ ರೈಲುಗಳು ಪರಸ್ಪರ ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿರುವುದು.

ಇಲ್ಲಿಯವರೆಗೆ ಬಂದಿರುವ ಮಾಹಿತಿ ಪ್ರಕಾರ 261 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಗೋಪಾಲ್‌ಪುರ, ಖಾಂತಪಾರಾ, ಬಾಲಸೋರ್, ಭದ್ರಕ್ ಮತ್ತು ಸೊರೊ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರೈಲ್ವೇ ಸಚಿವರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮತ್ತು ಪುನಃಸ್ಥಾಪನೆ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ರೈಲ್ವೇ ಮಂಡಳಿಯ ಅಧ್ಯಕ್ಷರು ಕಟಕ್ ಆಸ್ಪತ್ರೆಯಲ್ಲಿದ್ದಾರೆ ಮತ್ತು ಡಿಜಿ/ಆರೋಗ್ಯ, ರೈಲ್ವೇ ಮಂಡಳಿಯು ಬಾಲಸೋರ್ ಆಸ್ಪತ್ರೆಯಲ್ಲಿ ಗಾಯಗೊಂಡಿರುವ ಪ್ರಯಾಣಿಕರ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ವೈಷ್ಣವ್ ಘೋಷಿಸಿದ್ದಾರೆ.

ದುರ್ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ರೈಲು ದುರಂತದ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದ ಬಗ್ಗೆ ತಮ್ಮ ದುಖಃ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಘೋಷಿಸಿದರು.

ಅಪಘಾತವು ಒಂದು ರೈಲು ಇನ್ನೊಂದಕ್ಕೆ ತುಂಬಾ ಬಲವಾಗಿ ಡಿಕ್ಕಿ ಹೊಡೆದು, ರೈಲು ಗಾಡಿಗಳು ಗಾಳಿಯಲ್ಲಿ ಎತ್ತರಕ್ಕೆ ಹಾರಿ ತಿರುಚಿದ ನಂತರ ಹಳಿಗಳು ಸಂಪೂರ್ಣವಾಗಿ ಜಖಂಗೊಂಡವು. ಅಲ್ಲದೆ ಮತ್ತೊಂದು ರೈಲು ಗಾಡಿಯನ್ನು ಸಂಪೂರ್ಣವಾಗಿ ಅದರ ಛಾವಣಿಯ ಮೇಲೆ ಎಸೆಯಲ್ಪಟ್ಟಿದ್ದರಿಂದ, ಪ್ರಯಾಣಿಕರ ವಿಭಾಗದ ಕೋಚ್ ಗಳಿಗೆ ತೀವ್ರ ರೀತಿಯ ಹಾನಿಯಾಯಿತು.

ಅಪಘಾತ ಸ್ಥಳದಲ್ಲಿ ಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಗೂಡ್ಸ್ ವ್ಯಾಗನ್‌ಗಳು

ರೈಲ್ವೆ ಮಂಡಳಿ ಮೂಲಸೌಕರ್ಯ ಸದಸ್ಯರು ಹಳಿತಪ್ಪಿದ ಸ್ಥಳದಲ್ಲಿ ಉಪಸ್ಥಿತರಿದ್ದು, ಪುನಃಸ್ಥಾಪನೆ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ.

“ಎಲ್ಲವೂ ಅಲುಗಾಡುತ್ತಿದೆ ಮತ್ತು ಕೋಚ್ ಉರುಳುತ್ತಿರುವುದನ್ನು ನಾವು ನೋಡುತ್ತಿದ್ದೆವು” ಎಂದು ಕೋರಮಂಡಲ್-ಶಾಲಿಮಾರ್ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದ ದಿನಗೂಲಿ ಕೆಲಸಗಾರನೊಬ್ಬ ತನಗಾದ ಗಾಯಗಳನ್ನು ತೋರಿಸುತ್ತಾ ಹೇಳಿದರು.

ಇನ್ನೊಬ್ಬ ಬದುಕುಳಿದವರ ಪ್ರಕಾರ, “ಸೀಳಿರುವ ಲೋಹದ ಅವಶೇಷಗಳ ಮೇಲೆ ಕತ್ತರಿಸಿದ ಕೈಕಾಲುಗಳು ಚದುರಿಹೋಗಿದ್ದವು ಎಂದಿದ್ದಾರೆ. “ರೈಲು ಹಳಿತಪ್ಪಿದಾಗ ನಾನು ಮಲಗಿದ್ದೆ. ಸುಮಾರು 10-15 ಜನರು ನನ್ನ ಮೇಲೆ ಬಿದ್ದಿದ್ದರು. ನಾನು ಕೋಚ್‌ನಿಂದ ಹೊರಬಂದಾಗ, ಸುತ್ತಲೂ ಕೈಕಾಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿದೆ. ಇಲ್ಲಿ ಒಂದು ಕಾಲು, ಅಲ್ಲಿ ಒಂದು ಕೈ, ಹಲವು ಮುಖಗಳು ವಿರೂಪಗೊಂಡಿತ್ತು” ಬದುಕುಳಿದವರೊಬ್ಬರು ರಣಭೀಕರ ಮೃತ್ಯು ಬಂದೆರಗಿದ ಸಂದರ್ಭದವನ್ನು ತೆರೆದಿಟ್ಟರು.

ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಈಗ ಆ ಸ್ಥಳದಲ್ಲಿ ರೈಲು ಸೌಕರ್ಯಗಳನ್ನು ಪುನಃಸ್ಥಾಪನೆ ಮಾಡುವ ಕಾರ್ಯದತ್ತ ಗಮನ ಹರಿಸಲಾಗಿದೆ ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ತಿಳಿಸಿದ್ದಾರೆ.

ಒಡಿಶಾಗೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಹೊರಟ ಸಂತೋಷ್ ಲಾಡ್ :
ಬೆಂಗಳೂರು ಎಚ್ ಎಎಲ್ ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ಸಚಿವ ಸಂತೋಷ್ ಲಾಡ್, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಮನೋಜ್ ರಾಜನ್ ಸೇರಿದಂತೆ ಐದು ಮಂದಿಯ ತಂಡ ಕರ್ನಾಟಕವನ್ನು ಪ್ರತಿನಿಧಿಸಿ ಘಟನೆ ನಡೆದ ಸ್ಥಳಕ್ಕೆ ತೆರಳಿ ರಾಜ್ಯದ ಪ್ರಯಾಣಿಕರ ಸಂಬಂಧಿಕರ ಜೊತೆ ಸಂವಹನ ಹಾಗೂ ಪರಿಹಾರ ಕೈಗೊಳ್ಳಲು ಮಧ್ಯಾಹ್ನ 2.30ಕ್ಕೆ ತೆರಳಿದರು.

ಖರಗ್ ಪುರ ವಿಭಾಗದಲ್ಲಿ ಶುಕ್ರವಾರ ಸಂಜೆ ನಡೆದ ಭೀಕರ ಅಪಘಾತದ ಹಿನ್ನಲೆಯಲ್ಲಿ ಈ ಕೆಳಕಂಡ 33 ರೈಲುಗಳನ್ನು ಜೂ.3 ಹಾಗೂ 4ರಂದು ರದ್ದುಪಡಿಸಲಾಗಿದೆ.

WhatsApp Join our WhatsApp Channel
Previous Post

Congress 5 Guarantee Schemes | ಕಾಂಗ್ರೆಸ್ ಐದು ಗ್ಯಾರಂಟಿ ಇದೇ ಆರ್ಥಿಕ ವರ್ಷದಲ್ಲಿ ಜಾರಿ : ಸಿಎಂ ಸಿದ್ದರಾಮಯ್ಯ – ಯೋಜನೆಯ ಷರತ್ತುಗಳೇನು ಗೊತ್ತಾ?

Next Post

ಸಮಾಜದಲ್ಲಿ‌ ಜ್ಞಾನ ಮತ್ತು ವೈಚಾರಿಕ ಪ್ರಜ್ಞೆ ಬೆಳೆಯಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

Next Post

ಸಮಾಜದಲ್ಲಿ‌ ಜ್ಞಾನ ಮತ್ತು ವೈಚಾರಿಕ ಪ್ರಜ್ಞೆ ಬೆಳೆಯಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಧಾನಸೌಧದ ಸಾಂದರ್ಭಿಕ ಚಿತ್ರ

Guarantee Schemes Guidelines | 'ಯುವನಿಧಿ' ಮತ್ತು 'ಅನ್ನಭಾಗ್ಯ' ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ : ಗ್ಯಾರಂಟಿ ಷರತ್ತುಗಳೇನು? ಇಲ್ಲಿದೆ ಮಾಹಿತಿ

Please login to join discussion

Like Us on Facebook

Follow Us on Twitter

Recent News

​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

August 22, 2026

ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

August 22, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

August 22, 2026

ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

August 22, 2026

ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

August 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group