Monday, June 9, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ದೇಶದ ರಾಷ್ಟ್ರೀಯ ಆರೋಗ್ಯ ನೀತಿಯ ಗಮನ “ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆ” ಅಭಿವೃದ್ಧಿಪಡಿಸುವುದಾಗಿದೆ : ಜೆ.ಪಿ.ನಡ್ಡಾ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

  • Bengaluru Focus

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ದೇಶದ ರಾಷ್ಟ್ರೀಯ ಆರೋಗ್ಯ ನೀತಿಯ ಗಮನ “ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆ” ಅಭಿವೃದ್ಧಿಪಡಿಸುವುದಾಗಿದೆ : ಜೆ.ಪಿ.ನಡ್ಡಾ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

  • Bengaluru Focus

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home Bengaluru Focus

ಬಿಎಲ್ ಡಿಸಿ ಸೀಲಿಂಗ್ ಫ್ಯಾನ್ ಬಳಸಿದ್ರೆ ಕರೆಂಟ್ ಬಿಲ್ ಫುಲ್ ಕಡಿಮೆ : ಇಂಧನ ದಕ್ಷತೆಯ ಫ್ಯಾನ್ ಬಿಡುಗಡೆ ಮಾಡಿದ ಬೆಸ್ಕಾಂ

by Bengaluru Wire Desk
February 27, 2025
in Bengaluru Focus, Public interest
Reading Time: 1 min read
0
ಬಿಎಲ್ ಡಿಸಿ ಸೀಲಿಂಗ್ ಫ್ಯಾನ್ ಬಳಕೆಯಿಂದ ಮಾಸಿಕ ವಿದ್ಯುತ್ ಬಿಲ್ ಕಡಿಮೆಯಾಗಲಿದೆ ಎಂಬುದನ್ನು ತೋರ್ಪಡಿಸುವ ಸಾಂದರ್ಭಿಕ ಚಿತ್ರ.

ಬಿಎಲ್ ಡಿಸಿ ಸೀಲಿಂಗ್ ಫ್ಯಾನ್ ಬಳಕೆಯಿಂದ ಮಾಸಿಕ ವಿದ್ಯುತ್ ಬಿಲ್ ಕಡಿಮೆಯಾಗಲಿದೆ ಎಂಬುದನ್ನು ತೋರ್ಪಡಿಸುವ ಸಾಂದರ್ಭಿಕ ಚಿತ್ರ.

ಬೆಂಗಳೂರು, ಫೆ.27 www.bengaluruwire.com : ಇಂಧನ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬೆಸ್ಕಾಂ, ಕಡಿಮೆ ವಿದ್ಯುತ್‌ ಬಳಸುವ ಬಿ.ಎಲ್.ಡಿ.ಸಿ. ಫ್ಯಾನ್ ಅನ್ನು ಗುರುವಾರ ಲೋಕಾರ್ಪಣೆಗೊಳಿಸಿದೆ.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ), ಕ್ರೆಡಲ್ ಸಹಭಾಗಿತ್ವದಲ್ಲಿ ನಡೆದ ಡಿಸ್ಕಾಂಗಳ ಸಾಮರ್ಥ್ಯಾಭಿವೃದ್ದಿ ಕಾರ್ಯಕ್ರಮದ ಭಾಗವಾಗಿ ಬೆಸ್ಕಾಂನ ಬೇಡಿಕೆ ನಿರ್ವಹಣಾ ವಿಭಾಗದ (ಡಿಎಸ್‌ಎಂ) ವತಿಯಿಂದ ಗುರುವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಸಿ. ಸೀಲಿಂಗ್ ಫ್ಯಾನ್ ಅನ್ನು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ಶಿವಶಂಕರ್‌ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ಶಿವಶಂಕರ್‌ “ಬೇಸಿಗೆ ಆರಂಭದಲ್ಲೇ ಬಿ.ಎಲ್‌.ಡಿ.ಸಿ. ಫ್ಯಾನ್‌ಗಳನ್ನು ಬಿಡುಗಡೆ ಮಾಡಿ, ಬಳಕೆಗೆ ಗ್ರಾಹಕರನ್ನು ಉತ್ತೇಜಿಸಲಾಗುತ್ತಿದೆ. ಸಾಮಾನ್ಯ ಫ್ಯಾನ್‌ಗಳಿಗಿಂತ ಅತಿ ಕಡಿಮೆ ವಿದ್ಯುತ್ ಬಳಸಿಕೊಳ್ಳುವಂತೆ ಈ ಫ್ಯಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ವಿದ್ಯುತ್ ಬೇಡಿಕೆ ಕಡಿತಗೊಳಿಸುವ ನಮ್ಮ ಈ ಪ್ರಯತ್ನ ಗ್ರಾಹಕರ ವಿದ್ಯುತ್ ವೆಚ್ಚವನ್ನೂ ಕಡಿಮೆ ಮಾಡಲಿದೆ. ಸುಸ್ಥಿರ ಹಾಗೂ ಇಂಧನ ದಕ್ಷತೆಯ ಭವಿಷ್ಯಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ,” ಎಂದು ಹೇಳಿದರು.

“ಇಂಧನ ದಕ್ಷತೆಯೆಡೆಗಿನ ನಮ್ಮ ಪ್ರಯತ್ನವು ಪಾಲುದಾರರ ಸಹಕಾರವಿಲ್ಲದೇ ಸಾಧ್ಯವಾಗುತ್ತಿರಲಿಲ್ಲ. ಆ ನಿಟ್ಟಿನಲ್ಲಿ ಬಿಇಇ, ಕ್ರೆಡಲ್, ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್‌ಸಿ) ಹಾಗೂ ಇನ್ನಿತರ ಪಾಲುದಾರರ ಪ್ರೋತ್ಸಾಹಕ್ಕೆ ಧನ್ಯವಾದ. ವಿದ್ಯುತ್ ಬಳಕೆಯಲ್ಲಿ ಜಾಗೃತಿ ಹಾಗೂ ಸುಸ್ಥಿರ ನಾಳೆಗಾಗಿ, ನಾವು ಒಂದಾಗಿ ನಡೆಯಬೇಕಿದೆ,” ಎಂದು ಡಾ. ಎನ್‌. ಶಿವಶಂಕರ್‌ ಕರೆ ನೀಡಿದರು.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ), ಕ್ರೆಡಲ್ ಸಹಭಾಗಿತ್ವದಲ್ಲಿ ನಡೆದ ಡಿಸ್ಕಾಂಗಳ ಸಾಮರ್ಥ್ಯಾಭಿವೃದ್ದಿ ಕಾರ್ಯಕ್ರಮವನ್ನು ಬೆಸ್ಕಾಂ ಎಂಡಿ ಶಿವಶಂಕರ್, ಕ್ರೆಡಲ್ ವ್ಯವಸ್ಥಾಪಕ ನಿರ್ದೆಶಕ ಕೆ.ಪಿ.ರುದ್ರಪ್ಪಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬೆಸ್ಕಾಂ ಡಿಎಸ್‌ಎಂ ಪ್ರಧಾನ ವ್ಯವಸ್ಥಾಪಕರಾದ ರಮೇಶ್ ವಿ.ಎಸ್. ಉಪಸ್ಥಿತರಿದ್ದರು.

ಕ್ರೆಡಲ್ ವ್ಯವಸ್ಥಾಪಕ ನಿರ್ದೆಶಕ ಕೆ.ಪಿ.ರುದ್ರಪ್ಪಯ್ಯ ಮಾತನಾಡಿ, “ಒಂದು ಯೂನಿಟ್ ವಿದ್ಯುತ್‌ ಉಳಿಸಿದರೆ, ಎರಡು ಯೂನಿಟ್ ವಿದ್ಯುತ್‌ ಉತ್ಪಾದಿಸಿದಂತೆ. ವಿದ್ಯುತ್ ಉತ್ಪಾದನೆ ಎಷ್ಟು ಮುಖ್ಯವೋ, ಅದನ್ನು ಸಂರಕ್ಷಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂರಕ್ಷಣೆ ಮತ್ತು ದಕ್ಷತೆ ನೀತಿ-2022-27 ಜಾರಿಗೊಳಿಸಿದ ಹೆಮ್ಮೆ ಕರ್ನಾಟಕದ್ದು . ಈ ನೀತಿಯು 744 ಬಿಲಿಯನ್ ಕಿಲೋ ವ್ಯಾಟ್ ಅವರ್ ವಿದ್ಯುತ್ ಉಳಿತಾಯ ಜತೆಗೆ 6 ಲಕ್ಷ ಟನ್ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಡೆಯುವ ಗುರಿ ಹೊಂದಿದೆ. ಇಂಧನ ದಕ್ಷತೆ ಹಾಗೂ ಸಂರಕ್ಷಣೆಯ ಗುರಿ ತಲುಪಲು ವಿವಿಧ ವಲಯಗಳಿಗೆ ಗುರಿಗಳನ್ನು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಬೆಸ್ಕಾಂ ಸಾಧನೆ ಮಹತ್ವದ್ದಾಗಿದೆ. ಬಿ.ಎಲ್‍.‍‍‍ಡಿ.ಸಿ. ಫ್ಯಾನ್‌ಗಳ ಬಳಕೆ ಹೆಚ್ಚಬೇಕಿದ್ದು, ವಿದ್ಯುತ್ ಉಳಿತಾಯ ಪ್ರಯತ್ನಗಳು ನಮ್ಮಿಂದಲೇ ಆರಂಭವಾಗಲಿ” ಎಂದು ತಿಳಿಸಿದರು.

ಪಿ.ಡ್ಲ್ಯೂ.ಸಿ. ಭಾರತದ ಕ್ಲೀನ್ ಎನರ್ಜಿ ವಿಭಾಗದ ಮುಖ್ಯಸ್ಥರಾದ ರಾಜೀವ್ ರಲ್ಹಾನ್ ಮಾತನಾಡಿ, ” ಸದ್ಯ ಬಳಕೆಯಲ್ಲಿರುವ ಹಳೆಯ ತಂತ್ರಜ್ಞಾನದ ಫ್ಯಾನ್‌ಗಳಿಗೆ ಹೋಲಿಸಿದರೆ ಬಿ.ಎಲ್.ಡಿ.ಸಿ. ಫ್ಯಾನ್ ಬಳಕೆಯಿಂದ ಶೇಕಡ 50ರಷ್ಟು ವಿದ್ಯುತ್ ಬಳಕೆ ಕಡಿಮೆಗೊಳಿಸಬಹುದಾಗಿದೆ. ಬಿ.ಎಲ್.ಡಿ.ಸಿ. ಫ್ಯಾನ್ ಬಳಕೆ ಉತ್ತೇಜಿಸುತ್ತಿರುವ ಸರ್ಕಾರದ ಜತೆ ಸಹಕರಿಸಲು ಹೆಮ್ಮೆಯಾಗುತ್ತಿದೆ,” ಎಂದು ಹೇಳಿದರು.

ಇಇಎಸ್‌ಎಲ್ ರಾಜ್ಯ ಮುಖ್ಯಸ್ಥರಾದ ದೀಪಕ್ ಸಹನಿ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್‌.ಜೆ. ರಮೇಶ್‌, ಬೆಸ್ಕಾಂ ಡಿಎಸ್‌ಎಂ ಪ್ರಧಾನ ವ್ಯವಸ್ಥಾಪಕರಾದ ರಮೇಶ್ ವಿ.ಎಸ್., ಪಿಎಂಎಸ್ ನಿರ್ದೇಶಕರಾದ ಅಮೇಯ ಸುಬೋಧ್ ಉದ್ಘಾಂವ್ಕರ್ ಸೇರಿದಂತೆ ಬೆಸ್ಕಾಂನ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಬಿಎಲ್ ಡಿಸಿ ಎಂದರೇನು? :

ಬಿಎಲ್ ಡಿಸಿ ಎಂದರೆ ಬ್ರಷ್‌ಲೆಸ್ ಡೈರೆಕ್ಟ್ ಕರೆಂಟ್ (Brushless Direct Current – BLDC) ಬಿಎಲ್ ಡಿಸಿ ಮೋಟಾರ್‌ಗಳು ಶಾಶ್ವತ ಆಯಸ್ಕಾಂತಗಳು ಮತ್ತು ಎಲೆಕ್ಟ್ರಾನಿಕ್ ಕಮ್ಯುಟೇಶನ್ ಅನ್ನು ಬಳಸಿಕೊಂಡು ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಒಂದು ರೀತಿಯ ಮೋಟಾರ್ ಆಗಿದೆ. ಸೀಲಿಂಗ್ ಫ್ಯಾನ್‌ಗಳು, ರೊಬೊಟಿಕ್ಸ್ ಮತ್ತು ಹೆವಿ ಡ್ಯೂಟಿ ವಾಹನಗಳು ಸೇರಿದಂತೆ ಹಲವು ಅನ್ವಯಿಕೆಗಳಲ್ಲಿ ಅವುಗಳನ್ನು ಬಳಸಲಾಗುತ್ತದೆ.

ಬಿ.ಎಲ್‌.ಡಿ.ಸಿ. ಸೀಲಿಗ್‌ ಫ್ಯಾನ್‌ ಖರೀದಿ ಹೇಗೆ?:
ಹೆಚ್ಎಸ್ಆರ್‌ ಲೇಔಟ್‌ನಲ್ಲಿರುವ ಬೆಸ್ಕಾಂನ ಸೆಂಟರ್ ಆಫ್ ಎಕ್ಸಲೆನ್ಸ್ ಕಚೇರಿ ಮತ್ತು ಬೆಸ್ಕಾಂ ಅಧಿಕೃತ ಜಾಲತಾಣದಲ್ಲಿನ ಇಇಎಸ್‌ಎಲ್‌ ಲಿಂಕ್ (https://eeslmart.in/fan?affiliateid=13285)
(website link: eeslmart.in) ಮೇಲೆ ಕ್ಲಿಕ್ ಮಾಡುವುದರ ಮೂಲಕ ಆನ್‌ಲೈನ್‌ನಲ್ಲಿ ಫ್ಯಾನ್ ಖರೀದಿಸಬಹುದಾಗಿದೆ. 5 ಸ್ಟಾರ್ ಪ್ರಮಾಣೀಕೃತ ಬಿ.ಎಲ್.ಡಿ.ಸಿ. ಸೀಲಿಂಗ್ ಫ್ಯಾನ್ ಬೆಲೆ 2,699 ರೂ. ಇದೆ.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...
Previous Post

ಲಿಂಗಾಯತರನ್ನು ಒಡೆದು ಆಳುವ ಅಜೆಂಡಾ ಇದೆ : ಎಂ ಬಿ ಪಾಟೀಲ ಕಳವಳ

Next Post

ದಾಸರಹಳ್ಳಿ ವಲಯದ IKEA ಟ್ರೇಡ್ ಲೈಸೆನ್ಸ್ : ದಂಡ ಸಮೇತ 65 ಲಕ್ಷ ರೂ. ಶುಲ್ಕ ವಸೂಲಿ ಮಾಡಿದ ಬಿಬಿಎಂಪಿ

Next Post
ಬಿಬಿಎಂಪಿ ಕೇಂದ್ರ ಕಚೇರಿ ಚಿತ್ರ

ದಾಸರಹಳ್ಳಿ ವಲಯದ IKEA ಟ್ರೇಡ್ ಲೈಸೆನ್ಸ್ : ದಂಡ ಸಮೇತ 65 ಲಕ್ಷ ರೂ. ಶುಲ್ಕ ವಸೂಲಿ ಮಾಡಿದ ಬಿಬಿಎಂಪಿ

ಬೇಸಿಗೆಯಲ್ಲಿ 19 ಸಾವಿರ ಮೆ.ವ್ಯಾ. ವಿದ್ಯುತ್ ಬೇಡಿಕೆ  ನಿರೀಕ್ಷೆ : ಲೋಡ್ ಶೆಡ್ಡಿಂಗ್ ಇಲ್ಲದೆ ಕರೆಂಟ್ ಕೊಡ್ತೀವಿ ಎಂದ ಸಚಿವ ಕೆಜೆ ಜಾರ್ಜ್

Please login to join discussion

Like Us on Facebook

Follow Us on Twitter

Recent News

ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

June 9, 2025

Inspirational News | ಎನ್‌ಸಿಸಿ ಕೆಡೆಟ್‌ಗಳ ಎವರೆಸ್ಟ್ ವಿಜಯ: ಅಸಾಧ್ಯವನ್ನು ಸಾಧಿಸಿದ ಹದಿಹರೆಯದ ವೀರರು : ಕೆಡೆಟ್ ಗಳ ಅನುಭವ ಇಲ್ಲಿದೆ

June 9, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

June 9, 2025

Inspirational News | ಎನ್‌ಸಿಸಿ ಕೆಡೆಟ್‌ಗಳ ಎವರೆಸ್ಟ್ ವಿಜಯ: ಅಸಾಧ್ಯವನ್ನು ಸಾಧಿಸಿದ ಹದಿಹರೆಯದ ವೀರರು : ಕೆಡೆಟ್ ಗಳ ಅನುಭವ ಇಲ್ಲಿದೆ

June 9, 2025

ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

June 8, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d