Saturday, March 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

Temple News | ಬಾರ್ಕೂರಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ ಹಿನ್ನಲೆ : ಭಕ್ತರಿಂದ ಬೆಳ್ಳಿ ಪಲ್ಲಕ್ಕಿ ಸಮರ್ಪಣೆ

ಇದೇ ತಿಂಗಳ ಮಾ.29ರಂದು ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ | ಸುಮಾರು 18 ಸೀಮೆಯ ಜನರ ಆರಾಧ್ಯ ದೇವರು | ವೇದಮೂರ್ತಿ ಬಿ.ಹೃಷಿಕೇಶ ಬಾಯರಿ ಮನೆಯವರಿಂದ ದೇವಳಕ್ಕೆ ರಜತ ಪಲ್ಲಕ್ಕಿ ಸೇವಾ ರೂಪದಲ್ಲಿ ಸಲ್ಲಿಕೆ

by Bengaluru Wire Desk
March 20, 2023
in BW Special, News Wire
Reading Time: 2 mins read
0

ಉಡುಪಿ, ಮಾ.20 www.bengaluruwire.com : ಕರಾವಳಿಯಲ್ಲಿನ ಬ್ರಹ್ಮಾವರ ತಾಲ್ಲೂಕಿನ ಬಾರಕೂರಿನ ಪುರಾಣ ಕಾಲದ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ ಇದೇ ತಿಂಗಳ ಮಾ.29 ರಂದು ನಡೆಯಲಿದೆ. ಇದಕ್ಕು ಮುನ್ನ, ಶ್ರೀ‌ ದೇವಸ್ಥಾನಕ್ಕೆ ನೂತನ ರಜತ ಪಲ್ಲಕ್ಕಿ ಸಮರ್ಪಣೆ ಮಾಡಲಾಯಿತು.

ದೇವಾಲಯಗಳ ಪಟ್ಟಣ ಎಂದೇ ಕರೆಯಲ್ಪಡುವ ಬಾರಕೂರು ಸಂಸ್ಥಾನದಲ್ಲಿ 365 ದೇವಸ್ಥಾನಗಳಿದ್ದು ವಿಶಿಷ್ಟವಾದ ವಾಸ್ತುಶಿಲ್ಪವನ್ನು ಹೊಂದಿದ್ದು, ವರ್ಷದ ಎಲ್ಲ ದಿನವೂ ಇಲ್ಲಿ ಪೂಜೆಯಾಗುತ್ತಿತ್ತು. ಬಾರ್ಕೂರಿನ ದೇವಾಲಯಗಳು ಇಳಿಜಾರಾದ ಟೆರಾಕೋಟಾ ಹೆಂಚಿನ ಛಾವಣಿಗಳು ಕೇರಳದ ದೇವಾಲಯಗಳನ್ನು ಹೋಲುತ್ತವೆ, ಆದರೆ ಅವುಗಳು ಗೋಪುರಗಳನ್ನು ಹೊಂದಿಲ್ಲ, ಇದು ದ್ರಾವಿಡ ಶೈಲಿಯ ದಕ್ಷಿಣ ಭಾರತದ ದೇವಾಲಯಗಳ ಸಾಮಾನ್ಯ ಲಕ್ಷಣವಾಗಿದೆ. ಇಂತಹ ಊರಿನಲ್ಲಿ ಪುರಾಣ ಕಾಲದ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಪ್ರಮುಖವಾದುದು. ಇಲ್ಲಿನ ಬ್ರಹ್ಮರಥೋತ್ಸವವನ್ನು ಬಾರಕೂರಿನ ಊರ ಹಬ್ಬವಾಗಿ ಸ್ಥಳೀಯರು ಆಚರಿಸುತ್ತಾರೆ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಒಂದೇ ಪಾಣಿಪೀಠದಲ್ಲಿ ಸ್ಥಾಪಿಸಲ್ಪಟ್ಟಿರುವ ಪಂಚಲಿಂಗಗಳು

ಇದೇ ಪ್ರಥಮ ಬಾರಿಗೆ ಬಾರ್ಕೂರಿನ ಹಿರಿಯ ಪುರೋಹಿತರಾದ ವೇದಮೂರ್ತಿ ಬಿ.ಹೃಷಿಕೇಶ ಬಾಯರಿ ಹಾಗೂ ಅವರ ಮನೆಯವರು ಇತಿಹಾಸ ಪ್ರಸಿದ್ಧ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮಾ.19ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಬೆಳ್ಳಿ ಪಲ್ಲಕ್ಕಿಯನ್ನು ಸೇವಾ ರೂಪದಲ್ಲಿ ಮಾ.19ರಂದು  ಸಮರ್ಪಿಸಿದ್ದಾರೆ.

ಸೇವಾ ರೂಪದಲ್ಲಿ ದೇವಸ್ಥಾನಕ್ಕೆ ಬೆಳ್ಳಿ ಪಲ್ಲಕ್ಕಿ ಸಮರ್ಪಿಸಿದ ವೇದಮೂರ್ತಿ ಬಿ.ಹೃಷಿಕೇಶ ಬಾಯರಿ (ಎಡದಿಂದ ಮೊದಲನೆಯವರು)

ದೇವಸ್ಥಾನದ ಸ್ಥಳ ಪುರಾಣವೇನು? :
ಪುರಾಣಕಾಲದಲ್ಲಿ ಮಾರ್ಕಾಂಡೇಯ ಮುನಿಗಳು ಭೂ ಸಂಚಾರದಲ್ಲಿರುವಾಗ ಶಿವನ ತಪಸ್ಸಿಗೆ ಯೋಗ್ಯ ಸ್ಥಳದ ಅನ್ವೇಷಣೆಯಲ್ಲಿರುವಾಗ ಉತ್ತರಗಾಮಿನಿ ಸೀತಾ ನದಿಯ ತಟ ಬಾರಕನ್ಯಾಪರ ಪ್ರಶಸ್ತ ಸ್ಥಳ ಎಂದು ಅಶರೀರವಾಣಿ ಕೇಳಿಬಂತು. ಅದರಂತೆ ಈಗಿನ ಈ ಬಾರಕೂರಿನಲ್ಲಿ ತಪಸ್ಸನ್ನು ಮಾಡಿ ಈಶ್ವರನನ್ನು ಭೂಮಿಗೆ ಬರುವಂತೆ ಮಾಡಿದರು.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹೊರ ನೋಟ

ಮಾರ್ಕಾಂಡೇಯರಿಗೆ ಒಲಿದ ಶಿವ ಶ್ರೀ ಪಂಚಲಿಂಗೇಶ್ವರನಾಗಿ ಪ್ರತಿಷ್ಠಿತನಾದನೆಂದು ಪ್ರತೀತಿ ಇದೆ. ಪಾರ್ವತಿ ಸಹಿತನಾದ ಶ್ರೀ ಶಿವನು ಇಲ್ಲಿ ಒಂದೇ ಪಾಣಿ ಪೀಠದಲ್ಲಿ 5 ಲಿಂಗಗಳಲ್ಲಿ ಅವಿರ್ಭೂತನಾಗಿದ್ದಾನೆ. 1. ವಾಮದೇವ 2. ಸದ್ಯೋಜಾತ 3. ಈಶಾನಾ 4. ತತ್ಪುರುಷ 5. ಅಘೋರ ಎಂಬ ಐದು ಹೆಸರುಗಳಿಂದ ಪ್ರತಿಷ್ಠಿತನಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ.

ಪುರಾಣ ಕಾಲದಿಂದ ಕಲಿಯುಗದವರೆಗೆ ಇಲ್ಲಿ ಆಳ್ವಿಕೆ ಮಾಡಿದ ಹಲವು ಚಕ್ರವರ್ತಿಗಳು, ಮಹಾರಾಜರು  ಬಾರಕೂರನ್ನು ರಾಜಧಾನಿಯಾಗಿ ಮಾಡಿಕೊಂಡು ಪಂಚಲಿಂಗೇಶ್ವರನನ್ನು ಸಂಸ್ಥಾನದ ಪ್ರಮುಖ ದೇವರಾಗಿ ಸೀಮೆಯ ಒಡೆಯನಾಗಿ ಪೂಜೆ ಮಾಡುತ್ತಾ ಬಂದರು. ದ್ವಾಪರಾಯುಗದಲ್ಲಿ ಧರ್ಮರಾಯನು ಕೂಡಾ ಪೂಜಿಸಿದ ಬಗ್ಗೆ ಕಥೆಗಳಲ್ಲಿ ಉಲ್ಲೇಖಗಳಿವೆ. ತುಳುನಾಡಿನ ಅಳಿಯಕಟ್ಟಳೆ ಪರಂಪರೆಯ ಕೊನೆಯಲ್ಲಿ ವಿಜಯನಗರದ ಅರಸರು, ಅಳುಪರು, ಪಂಚಲಿಂಗೇಶ್ವರನನ್ನು ಆರಾಧಿಸಿ ರಾಜ್ಯಭಾರ ಮಾಡಿದರು.

ರಜತ ಪಲ್ಲಕ್ಕಿ ಹಸ್ತಾಂತರಕ್ಕೂ ಮುನ್ನ ಮಾ.19ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಸುಮಾರು 18 ಸೀಮೆಯ ಜನರ ಆರಾಧ್ಯ ದೇವರು :
ಸುಮಾರು 18 ಸೀಮೆ (ಹಳ್ಳಿಯ) ಜನರ ಆರಾಧ್ಯ ದೇವರಾದ ಶ್ರೀ ಪಂಚಲಿಂಗೇಶ್ವರ ಸ್ವಾಮಿಯ ಉತ್ಸವದ ದಿನದಂದು ಬಿಲ್ಲ ಸೀಮೆಯಿಂದ-ವಡೇರ ಹೋಬಳಿ ಬೈಂದೂರಿನವರೆಗೆ ಸಾಮಂತರನ್ನು ಪ್ರಸಾದ ಸ್ವೀಕಾರಕ್ಕಾಗಿ ಆಮಂತ್ರಿಸುವ ಪದ್ಧತಿ ಇಂದು ಕೂಡಾ ಚಾಲ್ತಿಯಲ್ಲಿದೆ. ಕಣ್ಣೂರು, ಹೊಸಾಳ, ಹನೇಹಳ್ಳಿ, ಹೇರಾಡಿ, ಪಾಂಡೇಶ್ವರ, ಹಂದಾಡಿ, ಐರೋಡಿ, ಬಾಳೇಕುದ್ರು, ಚಾಂತಾರು, ಯಡ್ತಾಡಿ, ಕಾವಡಿ, ಕೋಡಿ- ಕನ್ಯಾನ, ಕುಮ್ರಗೋಡು ಯಡಬೆಟ್ಟು-ಕಚ್ಚೂರು ಹೆಬ್ರಿ-ಪೆರ್ಡೂರು ಶಿವಪುರ-ಸೂರಾಲು, ಅಲ್ಲಾರು ಮುಂತಾದ ಅನುಪಾಸಿನ ಹಳ್ಳಿಗಳಿಂದ (ಪತಿ ಮನೆಯಿಂದ ಕಾಣಿಕೆ ನೀಡಿ) ಶಿವಾನುಗ್ರಹಕ್ಕೆ ಪಾತ್ರರಾಗುತ್ತಿದ್ದರು.

ಯಾವೆಲ್ಲ ರೀತಿಯ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ?:
ಅಭಿಷೇಕ ಪ್ರಿಯನಾದ ಈಶ್ವರನಿಗೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿನಿತ್ಯ ತ್ರಿಕಾಲಪೂಜೆ ಆಚರಣೆ ಇದ್ದು, ಯುಗಾದಿ, ಸಿಂಹ ಮಾಸದಲ್ಲಿ ಸೋಣೆ ಆರತಿ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಧನುರ್ಮಾಸದಲ್ಲಿ ಧನು ಪೂಜೆ, ಮಕರ ಸಂಕ್ರಾಂತಿ, ಶಿವರಾತ್ರಿ ಹಾಗೂ ವಾರ್ಷಿಕ ರಥೋತ್ಸವ ಪ್ರಮುಖ ಉತ್ಸವವಾಗಿರುತ್ತದೆ. ರುದಾಭಿಷೇಕ, ಬಿಲ್ವಾರ್ಚನೆ,
ಏಕಾದಶರುದ್ರ, ಕಿರಿರಂಗ ಪೂಜೆ, ಓಲಿರಂಗ ಪೂಜೆ, ಶತರುದ್ರಾಭಿಷೇಕ ಪ್ರಮುಖ ಸೇವೆಯಾಗಿರುತ್ತದೆ.

ಮಾ.19ರಂದು ಸಂಜೆ ಬಾರಕೂರಿನ ಕಲ್ಲು ಚಪ್ಪರದಿಂದ ರಥಬೀದಿಯಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ಪಂಚಲಿಂಗೇಶ್ವರ ಪಲ್ಲಕ್ಕಿ ಉತ್ಸವ ನೆರವೇರಿತು.

ಗರ್ಭಗುಡಿಯ ಒಳಗೆ 5 ಲಿಂಗಗಳಿದ್ದರೂ ಭಕ್ತರಿಗೆ 3 ಲಿಂಗಗಳು ಮಾತ್ರ ಗೋಚರಿಸುತ್ತವೆ. ಗರ್ಭಗುಡಿಯ ಹೊರ ಭಾಗದಲ್ಲಿ ಶ್ರೀ ಗಣಪತಿ ಹಾಗೂ ಲಕ್ಷ್ಮೀನಾರಾಯಣ ಸ್ವಾಮಿಯ ವಿಗ್ರಹಗಳದ್ದು, ಈಶ್ವರನ ಜತೆಯಲ್ಲಿ ವಿಷ್ಣು ಕೂಡಾ ಬಂದು ನೆಲೆಸಿದನೆಂಬ ಪುರಾಣ ಕಥೆ ಇದೆ.

ಬಾರ್ಕೂರು ಅಲುಪ ಸಾಮ್ರಾಜ್ಯದ ಪ್ರಾಚೀನ ರಾಜಧಾನಿಯಾಗಿತ್ತು. ಇದನ್ನು ಬಾರಹಕನ್ಯಾಪುರ ಎಂದು ಕರೆಯಲಾಗುತ್ತಿತ್ತು ಮತ್ತು ನಂತರ ಬರಕ್ಕನೂರು ಎಂದು ಕರೆಯಲಾಯಿತು. ಇಲ್ಲಿನ ಅರಸರನ್ನು ತುಳುವ ಅರಸರು ಎನ್ನಲಾಗುತ್ತಿತ್ತು. ಅವರು ತುಳು ಭಾಷೆಯನ್ನು ಮಾತನಾಡುತ್ತಿದ್ದರು. ಬಾರ್ಕೂರಿನಲ್ಲಿ ಕಂಡುಬರುವ ಅನೇಕ ಪ್ರಾಚೀನ ಶಾಸನಗಳು ತುಳು ಭಾಷೆಯಲ್ಲಿವೆ. ಇವು ತುಳುನಾಡಿನ ಇತಿಹಾಸದ ಅವಿಭಾಜ್ಯ ಅಂಗಗಳಾಗಿವೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

Obscene Content On OTT |”ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸೃಜನಶೀಲತೆ ಹೆಸರಲ್ಲಿ ಅಶ್ಲೀಲ ದೂರು ಗಂಭೀರ ಪರಿಗಣನೆ”

Next Post

Injaz International Scam | ಇಂಜಾಜ್ ಇಂಟರ್ ನ್ಯಾಷನಲ್ ಬಹುಕೋಟಿ ಹಗರಣ : ಇ.ಡಿ.ಯಿಂದ 20.16 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

Next Post
ಜಾರಿ ನಿರ್ದೇಶನಾಲಯದ ಲಾಂಛನ

Injaz International Scam | ಇಂಜಾಜ್ ಇಂಟರ್ ನ್ಯಾಷನಲ್ ಬಹುಕೋಟಿ ಹಗರಣ : ಇ.ಡಿ.ಯಿಂದ 20.16 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರಿನ ಹೆಸರಘಟ್ಟ ಕೆರೆಯ ಚಿತ್ರ

BW Special | 75 Heritage Water Sites | ದೇಶದ 75 ಪಾರಂಪರಿಕ ಜಲಮೂಲ ಪಟ್ಟಿ : ಹೆಸರಘಟ್ಟ ಕೆರೆ ಸೇರಿ ರಾಜ್ಯದ 5 ಜಲತಾಣಗಳಿಗೆ ಪಟ್ಟ

Please login to join discussion

Like Us on Facebook

Follow Us on Twitter

Recent News

ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d