ಬೆಂಗಳೂರು, ನ.25 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority – GBA) ರಚನೆ ಮತ್ತು ಹೊಸ ಐದು ನಗರ ಪಾಲಿಕೆಗಳ ಸ್ಥಾಪನೆಯ ಹಿನ್ನೆಲೆಯಲ್ಲಿ, ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 94 ಮಂದಿ ಸಹಾಯಕ ಸಿಬ್ಬಂದಿಯನ್ನು ನೂತನ ಪ್ರಾಧಿಕಾರ ಮತ್ತು ಪಾಲಿಕೆಗಳಿಗೆ ಮರು ನಿಯೋಜಿಸಿ ಕಛೇರಿ ಆದೇಶ ಹೊರಡಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉಪ ಆಯುಕ್ತರು (ಆಡಳಿತ) ರವರು ನವೆಂಬರ್ 24, 2025 ರಂದು ಈ ಕುರಿತು ಆದೇಶ ನೀಡಿದ್ದಾರೆ. ಇದರಲ್ಲಿ 35 ಪ್ರಥಮ ದರ್ಜೆ ಸಹಾಯಕರು (ಪ್ರ.ದ.ಸ) ಮತ್ತು 59 ದ್ವಿತೀಯ ದರ್ಜೆ ಸಹಾಯಕರು (ದ್ವಿ.ದ.ಸ) ಸೇರಿದ್ದಾರೆ.
ಹಿನ್ನೆಲೆ ಮತ್ತು ಆದೇಶದ ವಿವರ:
ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಆದೇಶ ಮತ್ತು ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024 ರನ್ವಯ, ಬಿಬಿಎಂಪಿಗೆ ಮಂಜೂರಾಗಿದ್ದ ವಿವಿಧ ವೃಂದದ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಹೊಸದಾಗಿ ರಚಿಸಲಾದ ಐದು ನಗರ ಪಾಲಿಕೆಗಳಿಗೆ ಮರು ಹಂಚಿಕೆ ಮಾಡಲಾಗಿದೆ.

ಈ ಪ್ರಕ್ರಿಯೆಯ ಭಾಗವಾಗಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಅದಕ್ಕೂ ಕೆಳಗಿನ ವೃಂದದ ಅಧಿಕಾರಿ/ಸಿಬ್ಬಂದಿಯನ್ನು ಸ್ಥಳನಿಯುಕ್ತಿಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿತ್ತು.
ಈ ಸೂಚನೆಯ ಮೇರೆಗೆ, ಹಳೆಯ ಬಿಬಿಎಂಪಿ ಕೇಂದ್ರ ಕಚೇರಿಯಿಂದ ಈ ಕೆಳಕಂಡ ಕಚೇರಿಗಳಿಗೆ ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮರು ಸ್ಥಳನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.
ವರ್ಗಾವಣೆಗೊಂಡ ಪ್ರಥಮ ದರ್ಜೆ ಸಹಾಯಕರು (35) : ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 35 ಪ್ರಥಮ ದರ್ಜೆ ಸಹಾಯಕರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ದಕ್ಷಿಣ, ಉತ್ತರ, ಪೂರ್ವ, ಮತ್ತು ಕೇಂದ್ರ ನಗರ ಪಾಲಿಕೆಗಳಿಗೆ ನಿಯೋಜಿಸಲಾಗಿದೆ.
ದಕ್ಷಿಣ ನಗರ ಪಾಲಿಕೆ (South City Corporation): ಅನಿಲ್ ಕುಮಾರ್ ಬಿ, ಗಗನ್.ಎಸ್, ಸಂತೋಷ್ ಸುರೇಶ್ ಮಲ್ಲಜ್ಜನವರ್, ನಾರಾಯಣ ವಿ, ಸರಸ್ಕೃತಿ ಎಂ, ರಾಕೇಶ್ ಬಿ, ಮತ್ತು ಲಕ್ಷ್ಮಿ ಎ.ಎಸ್. (ಒಟ್ಟು 7)
ಉತ್ತರ ನಗರ ಪಾಲಿಕೆ (North City Corporation): ಬಿ ಚಂದ್ರಶೇಖರ್, ಸುನೀಲ್ ಸಿಂಧ, ಆರ್. ಬಿ. ಲೋಕೇಶ, ಕೃಷ್ಣಗೌಡ ಜಿ ಬಿ, ಗೋವಿಂದರಾಜ, ಮತ್ತು ನಾರಾಯಣಸ್ವಾಮಿ ಕೆ. (ಒಟ್ಟು 6)
ಕೇಂದ್ರ ನಗರ ಪಾಲಿಕೆ (Central City Corporation): ಸಂಗೀತ್ ಕುಮಾರ್ ಟಿ, ಮಹದೇವ ಕುಮಾರ್ ಎಂ.ಬಿ, ಶೇರಿನಾ, ರವೀಂದ್ರ ಎಸ್, ನವೀನ್ ಕುಮಾರ್ ಸಿ.ಹೆಚ್, ಸಾಯಬಣ್ಣ, ಎನ್.ಗಣೇಶ್, ಆರ್.ಲೊಕೇಶ್, ಮೊಹಮ್ಮದ್ ಜುಫಿಯಾನ್, ಮತ್ತು ಕಾವ್ಯ ಎಲ್. (ಒಟ್ಟು 10)
ಪೂರ್ವ ನಗರ ಪಾಲಿಕೆ (East City Corporation): ಸೌಮ್ಯ ಎಸ್. (ಒಟ್ಟು 1)
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA): ನಾಗವೇಣಿ. ಎನ್ (ಮಾಹಿತಿ ತಂತ್ರಜ್ಞಾನ ವಿಭಾಗ), ಸೌಂದರ್ಯ ಜಿ (ಕಾನೂನು ವಿಭಾಗ), ಅನನ್ಯ ಸಿ (ಉಪ ನಿರ್ದೇಶಕರು ತೋಟಗಾರಿಕೆ), ಸುಧಾಕರ್ರೆಡ್ಡಿ ಎಸ್.ಇ (ಮಾಹಿತಿ ತಂತ್ರಜ್ಞಾನ ವಿಭಾಗ), ಎನ್. ಶ್ರೀಧರ್ (ಅರಣ್ಯ ವಿಭಾಗ), ಅನಂತ ವಿ (ಮುಖ್ಯ ಆರೋಗ್ಯಾಧಿಕಾರಿ), ಸಿರಾಜ್ ಅಹಮ್ಮದ್ (ಪ್ರಧಾನ ಅಭಿಯಂತರರ ಕಾರ್ಯಾಲಯ), ಮತ್ತು ಉಮಾ ಮಹೇಶ್ವರಿ . ಸಿ (ಮುಖ್ಯ ಅಭಿಯಂತರರು). (ಒಟ್ಟು 8)
ಇತರೆ: ರಾಜಶ್ರೀ ಕೋಕಟನೂರು (ಆರೋಗ್ಯಾಧಿಕಾರಿ-ಕ್ಲಿನಿಕಲ್), ಜ್ಯೋತಿ ಆರಾ (ಮುಖ್ಯ ಅಭಿಯಂತರರು). (ಒಟ್ಟು 2)
ವರ್ಗಾವಣೆಗೊಂಡ ದ್ವಿತೀಯ ದರ್ಜೆ ಸಹಾಯಕರು (59)
ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 59 ದ್ವಿತೀಯ ದರ್ಜೆ ಸಹಾಯಕರನ್ನು ಸಹ ವಿವಿಧ ನಗರ ಪಾಲಿಕೆ ಮತ್ತು ಪ್ರಾಧಿಕಾರದ ಕಚೇರಿಗಳಿಗೆ ವರ್ಗಾಯಿಸಲಾಗಿದೆ.
ದಕ್ಷಿಣ ನಗರ ಪಾಲಿಕೆ: ರಾಘವೇಂದ್ರ, ರೆಹನಾ ಬೇಗಂ, ಈರಮ್ಮ, ರಾಜು ಆರ್, ತ್ರಿಲೋಕ್ ಚಂದ್ರ, ಕೆ.ಎನ್ ಉದಯ್, ಆರ್ ಮಣಿ, ಜ್ಯೋತಿಲಕ್ಷ್ಮೀ ಹೆಚ್, ಲತಾ ಪಿ, ಜ್ಯೋತಿ ಬೀರಪ್ಪ ಅರ್ಜಿನಾಳ, ಪ್ರೇಮ ಬಸನಗೌಡ ಭಂಟನೂರು, ಕೌಸಲ್ಯ ಜಿ ಕೆ, ಗಂಗೂಬಾಯಿ ನರಗುಂದ, ಚಂದ್ರಶೇಖರ್, ಹನುಮಂತ ಭಜಂತ್ರಿ, ಸಬೀನ್ ತಾಜ್ ಎನ್, ಕೃಪಾ ಶಂಕರ್ ಜಿ.ಕೆ ಮತ್ತು 50ನೇ ಮತ್ತು 57ನೇ ಸಿಬ್ಬಂದಿ. (ಒಟ್ಟು 20)
ಕೇಂದ್ರ ನಗರ ಪಾಲಿಕೆ: ಸತೀಶ್ ಕುಮಾರ್, ಸಿ.ಅಭಿಲಾಷ, ದಿವಾಕರ್ ವಿ, ಶಾಂತ ರಾಜು ಹೆಚ್, ಮಹೇಶ್ ಕುಮಾರ್ ಎಂಎನೊ, ಡಿ.ಪಿ.ಪುಷ್ಪಾ, ಎನ್. ರಾಮಕೃಷ್ಣ, ಸುದೀಂದ್ರ ಕೆ, ತಿಮ್ಮಪ್ಪ ಜಿ, ಜ್ಯೋತಿ, ಮಂಜಣ್ಣ, ಮಂಜುನಾಥ.ಕೆ, ಮತ್ತು ಭಾಗ್ಯಲಕ್ಷ್ಮಿ ಎ, ಹಾಗೂ 8, 42 ಮತ್ತು 59ನೇ ಸಿಬ್ಬಂದಿ. (ಒಟ್ಟು 15)
ಉತ್ತರ ನಗರ ಪಾಲಿಕೆ: ಕನಕಪ್ಪ, ಸವಿತಾ ಆರ್.ಡಿ, ಜೈ ಮಾರುತಿ, ಚಿ ಬಾಬು, ನಿರ್ಮಲಾ ಎಸ್, ಅರುಣಾ ಬಿ, ನೇತ್ರಾವತಿ, ಶಿವ ಕುಮಾರ್ ಸಿ.ಎಸ್, ಮತ್ತು ಶಶಿಕುಮಾರ್ ಎಸ್. (ಒಟ್ಟು 9)
ಪೂರ್ವ ನಗರ ಪಾಲಿಕೆ: ಅಂಬಿಕಾ ಕೆ.ಎಂ, ಪವನ್ ಕುಮಾರ್ ಟಿ, ಮತ್ತು ಜಗದೀಶ್ ಎನ್. (ಒಟ್ಟು 3)
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA): ಗಾಯತ್ರಿ ಆರ್ (ಕಾನೂನು ವಿಭಾಗ), ಮುನಿರಾಜ್.ಎನ್ (ಪ್ರಧಾನ ಅಭಿಯಂತರರ ಕಾರ್ಯಾಲಯ). (ಒಟ್ಟು 2)
ಇತರೆ: ಕೆ.ನರಸಿಂಹ (ಮುಖ್ಯ ಅಭಿಯಂತರರು ಯೋಜನೆ), ಕೃಷ್ಣ, ಕಾರ್ತಿಕ್, ನಾರಾಯಣಸ್ವಾಮಿ, ಕುಮಾರ್ ಎಂ.ಜಿ, ತೇಜಸ್. ಎಸ್, ಬಿ.ಕೆ ನರಸಿಂಹ ಮೂರ್ತಿ, ಆರ್ ರಾಜ್ ಪ್ರಣೀತ್, ರಾಘವೇಂದ್ರ ಕೆ, ಎನ್ ನರಸಿಂಹ ರಾವ್, ಸಬೀನ್ ತಾಜ್ ಎನ್, ಸಿ.ಎಂ.ರಾಜ್, ಶಂಕರ್ ಬಸವರಾಜು ಬಮ್ಮಶೆಟ್ಟಿ, ಮತ್ತು 52, 53, 54, 55ನೇ ಸಿಬ್ಬಂದಿ. (ಒಟ್ಟು 10)
ಷರತ್ತುಗಳು ಮತ್ತು ಸೂಚನೆಗಳು:
ವರ್ಗಾವಣೆಗೊಂಡ ನೌಕರರು ಕೂಡಲೇ ಹೊಸದಾಗಿ ನಿಯೋಜಿಸಲಾದ ನಗರ ಪಾಲಿಕೆಗಳು/ಕಚೇರಿಗಳಲ್ಲಿ ಹಾಜರಾತಿ ಸಲ್ಲಿಸಬೇಕು. ಸಂಬಂಧಪಟ್ಟ ನಗರ ಪಾಲಿಕೆಯ ಆಯುಕ್ತರುಗಳು ವರ್ಗಾವಣೆಗೊಂಡ ಸಿಬ್ಬಂದಿಯನ್ನು ಆಯಾ ನಗರ ವ್ಯಾಪ್ತಿಯಲ್ಲಿ ಅಗತ್ಯವಿರುವೆಡೆ ಮರು ಸ್ಥಳ ನಿಯುಕ್ತಿಗೊಳಿಸುವುದು.
ಮುಖ್ಯವಾಗಿ, ನಗರ ಪಾಲಿಕೆಗಳ ಆಯುಕ್ತರುಗಳು ಸರ್ಕಾರದ ಆದೇಶದಂತೆ ಮರು ಹಂಚಿಕೆ ಮಾಡಿರುವ ಹುದ್ದೆಗಳನ್ನು ಕಛೇರಿವಾರು ನಿಗದಿಪಡಿಸಿ, ಆ ಹುದ್ದೆಗಳಿಗನುಸಾರವಾಗಿ ಮಾತ್ರ ವೇತನ ಪಾವತಿಸಬೇಕು. ಹೆಚ್ಚುವರಿ ಹುದ್ದೆಗಳಿಗೆ ವೇತನ ಪಾವತಿಸುವಂತಿಲ್ಲ, ಮತ್ತು ಹಾಗಿದ್ದಲ್ಲಿ ಆಯುಕ್ತರೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಎಚ್ಚರಿಸಲಾಗಿದೆ.























