ಬೆಂಗಳೂರು, ನ. 5 www.bengaluruwire.com : ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ (BUWJ) 25 ಸ್ಥಾನಗಳಿಗೆ ನವೆಂಬರ್ 9ರಂದು ನಡೆಯಲಿರುವ ಬಹುನಿರೀಕ್ಷಿತ ಚುನಾವಣೆಗೆ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿದ್ದು, ಅಂತಿಮವಾಗಿ 22 ಸ್ಥಾನಗಳಿಗೆ 41 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೂರು ಕಾರ್ಯದರ್ಶಿ ಸ್ಥಾನಗಳಿಗೆ ಅವಿರೋಧ ಆಯ್ಕೆಯಾದ ಕಾರಣ ಆ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿಲ್ಲ.
ಚುನಾವಣಾಧಿಕಾರಿಗಳಿಂದ ಸೂಚನೆ :
ಬುಧವಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ವಿ. ನಂಜುಂಡಪ್ಪ ಅವರು ಅಭ್ಯರ್ಥಿಗಳ ಸಭೆಯನ್ನು ನಡೆಸಿದರು. ಅವರು, “ಚುನಾವಣಾ ಪ್ರಚಾರವು ರಚನಾತ್ಮಕವಾಗಿರಲಿ ಮತ್ತು ಎಲ್ಲರೂ ಕ್ರೀಡಾ ಮನೋಭಾವನೆಯಿಂದ ಚುನಾವಣೆ ಎದುರಿಸಬೇಕು. ಸುಗಮ ಮತದಾನಕ್ಕೆ ಅಭ್ಯರ್ಥಿಗಳು ಸೂಕ್ತ ಸಹಕಾರ ನೀಡಬೇಕು,” ಎಂದು ಸೂಚಿಸಿದರು.

ಬೆಂಗಳೂರು ನಗರ ಜಿಲ್ಲಾ ಘಟಕದಲ್ಲಿ ಒಟ್ಟು 458 ಮಂದಿ ಅರ್ಹ ಮತದಾರರಿದ್ದು, ಮತದಾನ ಪ್ರಕ್ರಿಯೆಗಾಗಿ ಎರಡು ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ನಂಜುಂಡಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಎಸ್. ನರಸಿಂಹ ಮೂರ್ತಿ ಸಹ ಉಪಸ್ಥಿತರಿದ್ದರು.
ಪ್ರಮುಖ ಹುದ್ದೆಗಳಿಗೆ ಸ್ಪರ್ಧೆ :
ಬಿಯುಡಬ್ಲ್ಯುಜೆನ ಚುನಾವಣೆಯು ಪ್ರಮುಖ ಹುದ್ದೆಗಳಿಗೆ ಜಿದ್ದಾಜಿದ್ದಿನ ಸ್ಪರ್ಧೆಗೆ ಸಾಕ್ಷಿಯಾಗಿದೆ.
ಒಂದು ಅಧ್ಯಕ್ಷ ಸ್ಥಾನ ; ಮೂವರು ಕಣದಲ್ಲಿ :
ಈ ಸ್ಥಾನಕ್ಕಾಗಿ ಎಸ್. ಸೋಮಶೇಖರ್ (ಗಾಂಧಿ), ಮು. ವೆಂಕಟೇಶಯ್ಯ, ಎ. ಬಿ. ಶಿವರಾಜ್ ಸೇರಿದಂತೆ ಮೂವರು ಕಣದಲ್ಲಿದ್ದಾರೆ.
ಮೂವರು ಉಪಾಧ್ಯಕ್ಷ ಸ್ಥಾನ : ಐವರು ಕಣದಲ್ಲಿ :
ಡಾ. ಕೆ. ಎಸ್. ಸ್ವಾಮಿ, ಎಚ್ ಕೆ ಬಸವರಾಜ್, ಬಿ. ಟಿ ಶ್ರೀನಿವಾಸ್, ಪರಿಮಳ ಎಚ್.ಎಸ್, ಕೆ ಎಂ. ಜಕ್ರಿಯ ಸೇರಿದಂತೆ ಐವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಒಂದು ಪ್ರಧಾನ ಕಾರ್ಯದರ್ಶಿ ಸ್ಥಾನ ಮೂವರು ಸ್ಪರ್ಧೆ:
ಕೆ.ಸಿ. ವೇದಮೂರ್ತಿ, ಎನ್. ಶ್ರೀನಾಥ್, ಆರ್. ಜಯಕುಮಾರ್ ಗೌಡ ಸ್ಪರ್ಧಾಳುಗಳು.
ಒಂದು ಖಜಾಂಚಿ ಸ್ಥಾನ : ಇಬ್ಬರು ಹಣಾಹಣಿ
ಎಸ್ ಡಿ. ಚಿಕ್ಕಣ್ಣ ಮತ್ತು ಟಿ. ಮೋಹನ್ ನಡುವೆ ನೇರ ಹಣಾಹಣಿ.
ಒಂದು ರಾಜ್ಯ ಕಾರ್ಯಕಾರಿ ಸಮಿತಿ ಸ್ಥಾನ : ಮೂವರು ಕಣದಲ್ಲಿ :
ಎಂ ಪಿ ಶರತ್ ಚಂದ್ರ, ಎಚ್ ಆರ್ ರವೀಶ್, ಕೆ. ವಿ. ಪರಮೇಶ್ ಈ ಮೂವರೂ ಸ್ಪರ್ಧೆಯಲ್ಲಿದ್ದಾರೆ.
ಅವಿರೋಧ ಆಯ್ಕೆ ಹಾಗೂ ಕಾರ್ಯಕಾರಿ ಸಮಿತಿ :
ಒಟ್ಟು 25 ಸ್ಥಾನಗಳ ಪೈಕಿ, 3 ಕಾರ್ಯದರ್ಶಿ ಹುದ್ದೆಗಳಿಗೆ ಕೆ. ಹರೀಶ್, ಕೆ ಎಲ್ ಲೋಕೇಶ್, ಮತ್ತು ಗೋದಾವರಿ ಡಿ ಎಸ್ ಅವರು ನಾಮಪತ್ರ ಸಲ್ಲಿಸಿದ್ದು, ಈ ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ಖಚಿತವಾಗಿದೆ.
ಜಿಲ್ಲಾ ಕಾರ್ಯಕಾರಿ ಸಮಿತಿ 15 ಸ್ಥಾನ : 22 ಸ್ಪರ್ಧಿಗಳು
ಈ ಪ್ರಮುಖ ಸಮಿತಿಯ 15 ಸ್ಥಾನಗಳಿಗಾಗಿ ಸುಂದರೇಶ್ ಬಿ ಕೆ, ರಮಾಕಾಂತ್ ಗುಗ್ರಿ, ಎನ್ ಶಿವಾನಂದ್, ಆರ್ ರಾಜಗಿರಿ ಪ್ರದೀಪ್, ಹೋಮೇಶ್ ಮೂರ್ತಿ, ಶ್ಯಾಮ್.ಎಸ್, ಕೃಷ್ಣೇಗೌಡ, ಗಂಗರಾಜು, ಲಿಂಗರಾಜು ಡಿ.ನೊಣವಿನಕೆರೆ, ಎಸ್. ಎಮ್. ಕೃಷ್ಣ, ಶರಣಬಸಪ್ಪ, ಚನ್ನವೀರಪ್ಪ ಜಿ.ಆರ್, ಬಿ ಎನ್. ರಾಮಚಂದ್ರ, ಮಂಜುನಾಥ್ ನೀಲೆಸೊಗೆ, ಹನುಮಂತರಾಜು ಬಿ.ಕೆ, ರವಿಕಾಂತ್ ಕುಂದಾಪುರ, ನಟರಾಜ್ ಬಿ.ಪಿ, ಗಂಡಸಿ ಸದಾನಂದ ಸ್ವಾಮಿ, ಈ ಬಸವರಾಜು, ಡಿ.ಎಲ್.ಹರೀಶ್, ಮೋಹನ್ ಕುಮಾರ್ ಬಿ.ಎನ್, ಗಗನ್ ಕುಮಾರ್ ಎ.ವಿ ಹಾಗೂ ಹೋಮೇಶ್ ಮೂರ್ತಿ ಸೇರಿದಂತೆ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಮತದಾರರಿಗೆ ಪ್ರಮುಖ ಮಾಹಿತಿ :
ಒಬ್ಬ ಅರ್ಹ ಮತದಾರ, ಕಣದಲ್ಲಿ ಎಷ್ಟು ಜನ ಪ್ರತಿಸ್ಪರ್ಧಿಗಳಿದ್ದರೂ ಸಹ ಅಧ್ಯಕ್ಷ ಸ್ಥಾನಕ್ಕೆ ಒಂದು, ಉಪಾಧ್ಯಕ್ಷ ಸ್ಥಾನ ಮೂರು, ಪ್ರಧಾನ ಕಾರ್ಯದರ್ಶಿ ಒಂದು ಸ್ಥಾನ, ಖಜಾಂಚಿ ಸ್ಥಾನಕ್ಕೆ ಒಂದು, ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 15, ರಾಜ್ಯ ಕಾರ್ಯಕಾರಿ ಸಮಿತಿಯ ಒಂದು ಸ್ಥಾನಕ್ಕೆ ಖಡ್ಡಾಯವಾಗಿ ಮತ ಚಲಾವಣೆ ಮಾಡಬೇಕು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.























