ಬೆಂಗಳೂರು, ಜೂ.01 www.bengaluruwire.com : ದೇಶದಲ್ಲಿ ಇದೇ ಮೊದಲ ಬಾರಿಗೆ ಎನ್ನಬಹುದಾದ ಒಂದು ವಿಶಿಷ್ಟ ಉಪಕ್ರಮಕ್ಕೆ ಬೆಂಗಳೂರಿನಲ್ಲಿ ಚಾಲನೆ ದೊರೆತಿದೆ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಎನ್ಎಸ್ಎಸ್ ಮತ್ತು ಎನ್ಸಿಸಿ ಸ್ಕೌಟ್ಗಳು, ಡ್ರಗ್ಸ್ ಮತ್ತು ತಂಬಾಕು ನಿಯಂತ್ರಣದ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಪೊಲೀಸ್ ಮಾರ್ಷಲ್ಸ್ ಆಗಿ ಸಜ್ಜಾಗಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ನೇತೃತ್ವದಲ್ಲಿ ಆರಂಭವಾಗಿರುವ ಈ ಉಪಕ್ರಮವು, ಯುವ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ. ಖ್ಯಾತ ಆಂಕೊಲಾಜಿಸ್ಟ್ ಡಾ.ವಿಶಾಲ್ ರಾವ್ ಕೂಡ ಪೊಲೀಸ್ ಮಾರ್ಷಲ್ಸ್ ಯೋಜನೆಯ ಚಾಲನೆ ಕಾರ್ಯಕ್ರಮಕ್ಕೆ ಹೆಗಲು ನೀಡಿದ್ದಾರೆ.

ಈ ಅನನ್ಯ ಯೋಜನೆಯಡಿಯಲ್ಲಿ, ಯುವ ವಿದ್ಯಾರ್ಥಿಗಳು ಪೊಲೀಸ್ ಪಡೆಯೊಂದಿಗೆ ಕೈಜೋಡಿಸಿ ರಸ್ತೆಗಿಳಿದು ಡ್ರಗ್ಸ್ ಪಿಡುಗು ಮತ್ತು ತಂಬಾಕು ನಿಯಂತ್ರಣದ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ತಂಬಾಕು ಸೇವನೆಯು ಡ್ರಗ್ಸ್ ವ್ಯಸನಕ್ಕೆ ಹೆಬ್ಬಾಗಿಲು ಎಂಬ ಅಂಶವನ್ನು ಒತ್ತಿ ಹೇಳುವ ಮೂಲಕ, ಯುವ ಪೀಳಿಗೆಯನ್ನು ಈ ಮಾರಕ ವ್ಯಸನಗಳಿಂದ ದೂರವಿರಿಸಲು ಪ್ರಯತ್ನಿಸಲಾಗುತ್ತಿದೆ.
ಪೊಲೀಸ್ ಮಾರ್ಷಲ್ಸ್ ಪರಿಕಲ್ಪನೆ:

* ವಿದ್ಯಾರ್ಥಿಗಳನ್ನು ‘ಪೊಲೀಸ್ ಮಾರ್ಷಲ್ಸ್’ ಎಂದು ಕರೆಯಲಾಗುತ್ತದೆ.

* ಅವರು ತಮ್ಮ ಸಹಪಾಠಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ನಡೆಸುತ್ತಾರೆ.
* ಸಂಬಂಧಪಟ್ಟ ಪೊಲೀಸ್ ಠಾಣೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಾರೆ.
ಪೊಲೀಸ್ ಮಾರ್ಷಲ್ಸ್ ಏಕೆ? :
* ಮಾದಕವಸ್ತುಗಳ ವ್ಯವಹಾರವು ವಿಶ್ವದ 3ನೇ ಅತಿದೊಡ್ಡ ಆದಾಯ ಉತ್ಪಾದಿಸುವ ವ್ಯವಹಾರವಾಗಿದೆ.
* ಭೂಮಿಯ ಯಾವ ಭಾಗವೂ ಡ್ರಗ್ಸ್ ಸ್ಪರ್ಶಿಸದೆ ಉಳಿದಿಲ್ಲ.
* ಹದಿಹರೆಯದ ವರ್ಷಗಳು ಯಾರಾದರೂ ಡ್ರಗ್ಸ್ ಪ್ರಯೋಗಕ್ಕೆ ಒಳಗಾಗಲು ಹೆಚ್ಚು ಸಂಭವನೀಯ ಸಮಯವಾಗಿದೆ.
ಈ ಕಾರ್ಯಕ್ರಮವು ಪೊಲೀಸ್ ಮತ್ತು ಸಾರ್ವಜನಿಕರನ್ನು ಒಂದೇ ವೇದಿಕೆಗೆ ತರುವ ಮೂಲಕ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದೆ. ಕಳೆದ 8 ವರ್ಷಗಳಿಂದ ವಿವಿಧ ಸಾಮಾಜಿಕ ಸಮಸ್ಯೆಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಆರೋಹಣ್ ಫೌಂಡೇಶನ್ ಸಹ ಈ ಉಪಕ್ರಮದಲ್ಲಿ ಕೈಜೋಡಿಸಿದೆ. ಜವಾಬ್ದಾರಿಯುತ ನಾಗರಿಕರನ್ನು ಭವಿಷ್ಯದ ಸಮಾಜಕ್ಕೆ ಕೊಡುಗೆಯಾಗಿ ನೀಡುವುದು ಅವರ ಗುರಿಯಾಗಿದೆ.