Friday, May 16, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

    Video News | ಭಾರ್ಗವಾಸ್ತ್ರ: ಡ್ರೋನ್ ದಾಳಿಗಳನ್ನು ಸಮರ್ಥವಾಗಿ ಎದುರಿಸಿ ಧ್ವಂಸ ಮಾಡುವ ಪ್ರಯೋಗ ಯಶಸ್ವಿ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಬಿ-ಖಾತಾ ಅವಧಿ 3 ತಿಂಗಳವರೆಗೆ ವಿಸ್ತರಣೆ : ಜಿಪಿಎ, ಅಗ್ರೀಮೆಂಟ್ ದಾರರಿಗೂ ಬಿ-ಖಾತಾ ವಿತರಣೆಗೆ ಚಿಂತನೆ

    Court News | ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿ.ಆರ್. ಗವಾಯಿ ಪ್ರಮಾಣವಚನ ಸ್ವೀಕಾರ

    ಆದಾಯ ತೆರಿಗೆ ವಿವರ ಸಲ್ಲಿಕೆಗೆ ಸಿದ್ಧರಾಗಿರಿ : ಎಲ್ಲಾ 7 ನಮೂನೆಗಳ ಅಧಿಸೂಚನೆ ಪ್ರಕಟ

    “ಪಾಕ್ ಅಣ್ವಸ್ತ್ರ ಬೆದರಿಕೆಗಳಿಗೆ ಭಾರತ ಮಣಿಯಲ್ಲ” – “ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” : ಪ್ರಧಾನಿ ಮೋದಿ ಶತ್ರು ರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ

    Video News | ಭಾರತದ ಪ್ರಮುಖ ಸಶಸ್ತ್ರ ಬಲ : ಲಕ್ನೋದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಉತ್ಪಾದನಾ ಘಟಕ ಉದ್ಘಾಟನೆ

    ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳ ವಿಜಯ ಯಾತ್ರೆ ಮುಂದೂಡಿಕೆ

    ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಘೋಷಣೆ

  • Bengaluru Focus

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

    ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

    ಇಂದಿನಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಜಿಬಿಎ ರಚನೆ ಬಗ್ಗೆ ಕಾಂಗ್ರೆಸ್- ಬಿಜೆಪಿ ಪರ ವಿರೋಧ

    ಬೆಂಗಳೂರು: ಅತ್ತಿಬೆಲೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊಸ ಹವಾನಿಯಂತ್ರಿತ ಬಿಎಂಟಿಸಿ ಬಸ್ ಸೇವೆ!

    ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

    ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಬಿಬಿಎಂಪಿಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ಕಡ್ಡಾಯ

    BBMP Head Office Image

    GBA Complete Information | ಇತಿಹಾಸ ಪುಟ ಸೇರಲಿದೆ ಬಿಬಿಎಂಪಿ, ಜಿಬಿಎ ಅಸ್ಥಿತ್ವಕ್ಕೆ : ಮೇ 15ರಿಂದ ಬೆಂಗಳೂರಿನ ಆಡಳಿತದಲ್ಲಿ ಮಹತ್ವದ ಬದಲಾವಣೆ!!

    ಬಿಡಿಎ ಆಯುಕ್ತರ ಸರ್ವಾಧಿಕಾರಿ ಧೋರಣೆ ಆರೋಪ : ಎನ್‌ಪಿಕೆಎಲ್ ಓಪನ್ ಫೋರಂನಿಂದ ಪ್ರಾಧಿಕಾರದ ಸಭೆ ಬಹಿಷ್ಕಾರ

    “ಕದನ ವಿರಾಮ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನಾಡಬಾರದು”

    ಸಂಚಾರಿ ಕಾವೇರಿ : ಬಿಐಎಸ್ ಪ್ರಮಾಣಿತ ಶುದ್ಧ ಕುಡಿಯುವ ನೀರು ನಿಮ್ಮ ಮನೆ ಬಾಗಿಲಿಗೆ

    ಶ್ರೀನಗರದಿಂದ ಶೇರ್ - ಇ -ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ಜನ ವಿದ್ಯಾರ್ಥಿಗಳು ರೈಲಿನಲ್ಲಿ ಸುರಕ್ಷಿತವಾಗಿ ನವದೆಹಲಿ ತಲುಪಿದ್ದಾರೆ.

    ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ನವದೆಹಲಿಗೆ : ಸೋಮವಾರ ಸಂಜೆ ವೇಳೆಗೆ ಬೆಂಗಳೂರಿಗೆ ವಾಪಸ್

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

    Video News | ಭಾರ್ಗವಾಸ್ತ್ರ: ಡ್ರೋನ್ ದಾಳಿಗಳನ್ನು ಸಮರ್ಥವಾಗಿ ಎದುರಿಸಿ ಧ್ವಂಸ ಮಾಡುವ ಪ್ರಯೋಗ ಯಶಸ್ವಿ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಬಿ-ಖಾತಾ ಅವಧಿ 3 ತಿಂಗಳವರೆಗೆ ವಿಸ್ತರಣೆ : ಜಿಪಿಎ, ಅಗ್ರೀಮೆಂಟ್ ದಾರರಿಗೂ ಬಿ-ಖಾತಾ ವಿತರಣೆಗೆ ಚಿಂತನೆ

    Court News | ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿ.ಆರ್. ಗವಾಯಿ ಪ್ರಮಾಣವಚನ ಸ್ವೀಕಾರ

    ಆದಾಯ ತೆರಿಗೆ ವಿವರ ಸಲ್ಲಿಕೆಗೆ ಸಿದ್ಧರಾಗಿರಿ : ಎಲ್ಲಾ 7 ನಮೂನೆಗಳ ಅಧಿಸೂಚನೆ ಪ್ರಕಟ

    “ಪಾಕ್ ಅಣ್ವಸ್ತ್ರ ಬೆದರಿಕೆಗಳಿಗೆ ಭಾರತ ಮಣಿಯಲ್ಲ” – “ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” : ಪ್ರಧಾನಿ ಮೋದಿ ಶತ್ರು ರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ

    Video News | ಭಾರತದ ಪ್ರಮುಖ ಸಶಸ್ತ್ರ ಬಲ : ಲಕ್ನೋದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಉತ್ಪಾದನಾ ಘಟಕ ಉದ್ಘಾಟನೆ

    ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳ ವಿಜಯ ಯಾತ್ರೆ ಮುಂದೂಡಿಕೆ

    ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಘೋಷಣೆ

  • Bengaluru Focus

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

    ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

    ಇಂದಿನಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಜಿಬಿಎ ರಚನೆ ಬಗ್ಗೆ ಕಾಂಗ್ರೆಸ್- ಬಿಜೆಪಿ ಪರ ವಿರೋಧ

    ಬೆಂಗಳೂರು: ಅತ್ತಿಬೆಲೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊಸ ಹವಾನಿಯಂತ್ರಿತ ಬಿಎಂಟಿಸಿ ಬಸ್ ಸೇವೆ!

    ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

    ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಬಿಬಿಎಂಪಿಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ಕಡ್ಡಾಯ

    BBMP Head Office Image

    GBA Complete Information | ಇತಿಹಾಸ ಪುಟ ಸೇರಲಿದೆ ಬಿಬಿಎಂಪಿ, ಜಿಬಿಎ ಅಸ್ಥಿತ್ವಕ್ಕೆ : ಮೇ 15ರಿಂದ ಬೆಂಗಳೂರಿನ ಆಡಳಿತದಲ್ಲಿ ಮಹತ್ವದ ಬದಲಾವಣೆ!!

    ಬಿಡಿಎ ಆಯುಕ್ತರ ಸರ್ವಾಧಿಕಾರಿ ಧೋರಣೆ ಆರೋಪ : ಎನ್‌ಪಿಕೆಎಲ್ ಓಪನ್ ಫೋರಂನಿಂದ ಪ್ರಾಧಿಕಾರದ ಸಭೆ ಬಹಿಷ್ಕಾರ

    “ಕದನ ವಿರಾಮ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನಾಡಬಾರದು”

    ಸಂಚಾರಿ ಕಾವೇರಿ : ಬಿಐಎಸ್ ಪ್ರಮಾಣಿತ ಶುದ್ಧ ಕುಡಿಯುವ ನೀರು ನಿಮ್ಮ ಮನೆ ಬಾಗಿಲಿಗೆ

    ಶ್ರೀನಗರದಿಂದ ಶೇರ್ - ಇ -ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ಜನ ವಿದ್ಯಾರ್ಥಿಗಳು ರೈಲಿನಲ್ಲಿ ಸುರಕ್ಷಿತವಾಗಿ ನವದೆಹಲಿ ತಲುಪಿದ್ದಾರೆ.

    ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ನವದೆಹಲಿಗೆ : ಸೋಮವಾರ ಸಂಜೆ ವೇಳೆಗೆ ಬೆಂಗಳೂರಿಗೆ ವಾಪಸ್

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home Bengaluru Focus

ಸರ್ಕಾರಿ ಅಧಿಕಾರಿಯೊಳಗಿದ್ದ ಒಬ್ಬ  ಮಾನವತಾವಾದಿ…!! : ಬಿಬಿಎಂಪಿ ARO ಜಿ.ಎಲ್.ನಾರಾಯಣಸ್ವಾಮಿ ನಿವೃತ್ತಿ ತನಕವೂ ಸಾರ್ಥಕ ಸೇವೆ

ಇವರು ತಮ್ಮ ಜೊತೆ ಇದ್ದರೆ ನಗರ ಆಡಳಿತ ಸೇಫ್, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿದ್ದರೆ ಸಾರ್ವಜನಿಕರಿಗೆ ಸಹಾಯ, ಸಹಕಾರ ಫಿಕ್ಸ್ ಎಂಬಷ್ಟರ ಮಟ್ಟಿಗೆ ಜನಾನುರಾಗಿ ಅಧಿಕಾರಿಯಾಗಿ ಎಲ್ಲರಿಗೂ ಮಾದರಿಯಾಗಿದ್ದರು G.L.ನಾರಾಯಣಸ್ವಾಮಿ.

by Bengaluru Wire Desk
March 28, 2025
in Bengaluru Focus, Public interest
Reading Time: 2 mins read
0

ಬೆಂಗಳೂರು, ಮಾ.28 www.bengaluruwire.com : ವೈದ್ಯಕೀಯ ಚಿಕಿತ್ಸೆಗೆ ಮೇಯರ್ ಅನುದಾನ, ವಿವಿಧ ರೀತಿಯ ಮನೆ ಕಂದಾಯ ಸಮಸ್ಯೆ, ನೌಕರರ ಉದ್ಯೋಗಕ್ಕೆ ಸಂಬಂಧಿಸಿದ ಅಹವಾಲು….ಹೀಗೆ ಯಾರೇ ತಮಗೆ ಸಮಸ್ಯೆ ಎಂದು ಬಂದರೂ ಪಾಲಿಕೆ ಕಚೇರಿಯಲ್ಲಿ ಸಮಾಧಾನದಿಂದ ಅವರನ್ನು ಕೂಡಿಸಿ, ಅವರ ಅಳಲನ್ನು ಆಲಿಸಿ ಅವರಿಗೆ ಸಂತೃಪ್ತಿಯಾಗುವಂತಹ ಪರಿಹಾರ ಒದಗಿಸುವ ಅವರ ನಿರಪೇಕ್ಷೆಯಿಂದ ಮಾಡುತ್ತಿದ್ದ ಆ ಕಾಯಕ ಒಂದೆರಡು ದಿನಕ್ಕೆ ಸೀಮಿತವಾಗಿರಲಿಲ್ಲ…. ನಿತ್ಯ ನಿರಂತರವಾಗಿತ್ತು …..!! 

ತಮ್ಮ 30 ವರ್ಷಗಳ ಕಾಯಕದಲ್ಲಿ ಸಹದ್ಯೋಗಿಗಳು, ಮೇಲಾಧಿಕಾರಿಗಳು, ಸಾರ್ವಜನಿಕರು ಹೀಗೆ ಸಾವಿರಾರು ಜನರ ಪ್ರೀತಿ, ಗೌರವವನ್ನು ಸಂಪಾದಿಸಿದ ಬಿಬಿಎಂಪಿಯ ಆಡಳಿಗಾರರ ಆಪ್ತಕಾರ್ಯದರ್ಶಿ ಹಾಗೂ ಸಹಾಯಕ ಕಂದಾಯ ಅಧಿಕಾರಿ ಜಿ.ಎಲ್.ನಾರಾಯಣಸ್ವಾಮಿ ಇದೇ ಮಾ.29 ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ. ಈ ವಿಷಯವೇ ಅವರ ಅಪಾರ ಸಹದ್ಯೋಗಿಗಳು, ಇವರಿಂದ ಸಹಾಯ ಪಡೆದ ನೂರಾರು ಮಂದಿಗೆ ಸಾಕಷ್ಟು ಬೇಸರ ಮೂಡಿಸಿದೆ. ನಮ್ಮೊಡನೆ ಸದಾ ಹಸನ್ಮುಖರಾಗಿ ಕೆಲಸ ಮಾಡಿಕೊಂಡಿದ್ದ ನಾರಾಯಣಸ್ವಾಮಿ ರಿಟೈರ್ ಆಗುತ್ತಿದ್ದಾರೆ ಎಂಬುದು ಜೀರ್ಣಿಸಿಕೊಳ್ಳಲಾಗುತ್ತಿಲ್ಲ.

ನಿವೃತ್ತಿಗೆ ಒಂದು ವಾರ ಮುಂಚಿನಿಂದಲೇ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಅವರ ಚೇಂಬರ್ ಗೆ ಸಾಕಷ್ಟು ಮಂದಿ ಆಗಮಿಸಿ ನಾರಾಯಣಸ್ವಾಮಿ ಅವರನ್ನು ಹಾರ, ಶಾಲು ಹಾಕಿ, ಹೂಗುಚ್ಛ ನೀಡಿ ಸನ್ಮಾನಿಸುತ್ತಿರುವುದನ್ನು ಗಮನಿಸಿದರೆ ಇವರ ಜೀವನಪ್ರೀತಿ, ಮಾನವತೆ ಹಾಗೂ ಪರೋಪಕಾರ ಗುಣವನ್ನು ಮೆಚ್ಚಿ ಜನರು ಇವರನ್ನು ಅಭಿನಂದಿಸುತ್ತಿರುವುದು ಸಾಕ್ಷಿಯಾಗಿದೆ.

30 ವರ್ಷಗಳಲ್ಲಿ 29 ಬಾರಿ ವರ್ಗಾವಣೆ :

ಜಿ.ಎಲ್.ನಾರಾಯಣಸ್ವಾಮಿ ಅವರು ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ರಾಕೇಶ್ ಸಿಂಗ್ ಆಪ್ತಕಾರ್ಯದರ್ಶಿಯಾಗಿದ್ದ ಸಂದರ್ಭದ ಚಿತ್ರ.

ತಮ್ಮ ಸುಧೀರ್ಘ 30 ವರ್ಷಗಳ ಸೇವಾವಧಿಯಲ್ಲಿ 29 ಬಾರಿ ವರ್ಗಾವಣೆಯಾಗಿದ್ದಾರೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. 2001-02ರಲ್ಲಿ ಮೇಯರ್ ಚಂದ್ರಶೇಖರ್ ಅವರಿಂದ ಮೊದಲ್ಗೊಂಡು ಪದ್ಮಾವತಿ ತನಕ ಐವರು ಮೇಯರ್ ಗಳಿಗೆ ಆಪ್ತ ಸಹಾಯಕರಾಗಿ, ಆಪ್ತ ಕಾರ್ಯದರ್ಶಿಯಾಗಿ, ಇಬ್ಬರು ಆಡಳಿತಾಧಿಕಾರಿಗಳು, ಇಬ್ಬರು ಆಯುಕ್ತರು ಹಾಗೂ ಇಬ್ಬರು ಆಡಳಿತ ಪಕ್ಷದ ನಾಯಕರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿ ನಗರ ಆಡಳಿತದಲ್ಲಿ ನಾರಾಯಣಸ್ವಾಮಿ ಅಪಾರ ಅನುಭವ ಗಳಿಸಿದ್ದಾರೆ. ಹೀಗಾಗಿಯೇ ಕೌನ್ಸಿಲ್ ವಿಷಯದಲ್ಲಿ ಮೇಯರ್ ಗಳು, ಆಯುಕ್ತರು, ಆಡಳಿತಾಧಿಕಾರಿಗಳು ಜನಪರ ನಿರ್ಣಯ ಕೈಗೊಳ್ಳುವಲ್ಲಿ ನಾರಾಯಣಸ್ವಾಮಿ ಅವರ ಸಲಹೆ, ಕರಾರುವಕ್ ಸಮರ್ಥನೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಗರದ ಲಕ್ಷಾಂತರ ನಾಗರೀಕರ ಮೇಲೆ ಪರಿಣಾಮ ಬೀರಿದೆ.

ಟೈಪಿಸ್ಟ್ ಹುದ್ದೆಯಿಂದ ಮೇಯರ್ ಪಿಎಸ್ ತನಕ :

1995ರ ಏಪ್ರಿಲ್ ನಲ್ಲಿ ಆಗಿನ ಬೆಂಗಳೂರು ನಗರ ಪಾಲಿಕೆಯಲ್ಲಿ ಟೈಪಿಸ್ಟ್ ಹುದ್ದೆಗೆ ಆಯ್ಕೆಯಾಗಿ ಮಲ್ಲೇಶ್ವರದ ಕಂದಾಯ ವಿಭಾಗದಲ್ಲಿ ಸೇವೆ ಆರಂಭಿಸಿ, ತಮ್ಮ ಚತುರತೆ, ಕೆಲಸದ ಮೇಲಿನ ಶೃದ್ಧೆ, ಸಾರ್ವಜನಿಕ ಸೇವೆ ಮೇಲಿನ ಪ್ರೀತಿಯಿಂದಾಗಿ ಹಂತ ಹಂತವಾಗಿ ಬೆಳೆಯುತ್ತಾ ಬಂದರು.

ಅದುವರೆಗೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವತ್ತಿನ ಮಾಲೀಕರಿಂದ ಕಂದಾಯ ಸಂಗ್ರಹಕ್ಕೆ ನಗರದಲ್ಲಿ ಸೂಕ್ತ ಮಾನದಂಡವಾಗಲಿ, ಮಾರ್ಗಸೂಚಿಯಾಗಲಿ ಇರಲಿಲ್ಲ.‌ ಇದರಿಂದ ಪಾಲಿಕೆ ಕಂದಾಯ ಸಂಗ್ರಹದಲ್ಲಿ ತಾರತಮ್ಯ ಕಂಡುಬರುತ್ತಿತ್ತು. ಅಲ್ಲದೇ ಕಂದಾಯ ಸಂಗ್ರಹದಲ್ಲೂ ಸಮಸ್ಯೆ ಉಂಟಾಗುತ್ತಾ ಆರ್ಥಿಕ ಸಂಪನ್ಮೂಲ ಕಡಿಮೆಯಾಗಿತ್ತು.

ರಾಜಧಾನಿಯಲ್ಲಿ SAS ಏಕರೂಪ ತೆರಿಗೆ ಪದ್ಧತಿ ಜಾರಿಗೆ ತಂದ ರುವಾರಿ :

ಬೆಂಗಳೂರಿನ ಪಕ್ಷಿನೋಟ.

2000-2001ರ ಇಸವಿಯಲ್ಲಿ ನಗರದಾದ್ಯಂತ ಸ್ವಯಂಘೋಷಣಾ ಆಸ್ತಿ ತೆರಿಗೆ ಪದ್ಧತಿ (SAS) ವ್ಯವಸ್ಥೆಯಡಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಮಾನದಂಡ ರೂಪಿಸಿ ಏಕರೂಪ ದರವನ್ನು ನಿಗದಿಪಡಿಸಿ ಅದನ್ನು ಅನುಷ್ಠಾನ ಮಾಡುವಲ್ಲಿ ನಾರಾಯಣಸ್ವಾಮಿ ಅವರ ಕೊಡುಗೆ ಪ್ರಮುಖವಾದದ್ದು. ಎಸ್ ಎಎಸ್ ಪದ್ಧತಿ ಅಳವಡಿಕೆಯಿಂದಾಗಿ ಬಿಬಿಎಂಪಿಯ ಕಂದಾಯ ಆದಾಯ ನೋಡು ನೋಡುತ್ತಿದ್ದಂತೆ ದ್ವಿಗುಣಗೊಂಡಿತು. ಇದರಿಂದಾಗಿ ಆಡಳಿತ ಯಂತ್ರ ಚುರುಕಾಯಿತು. ಈ ಮಹತ್ತರ ಕಾರ್ಯ ಕೈಗೊಂಡ ನಾರಾಯಣಸ್ವಾಮಿ ಗಣನೀಯ ಸೇವೆಯನ್ನು ಪರಿಗಣಿಸಿ ಪಾಲಿಕೆಯ ಅಂದಿನ ಆಯುಕ್ತರಾದ ಅಶೋಕ್ ದಳವಾಯಿ ಅವರು ಇವರಿಗೆ ನಗರದ ಪ್ರತಿಷ್ಠಿತ ಪ್ರಶಸ್ತಿಯಾದ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದರು.

ನಗರದಲ್ಲಿ ಪಾರ್ಕಿಂಗ್ ಶುಲ್ಕ ರದ್ಧತಿಗೆ ಕಾರಣಕರ್ತರು :

2004-05ನೇ ಸಾಲಿನಲ್ಲಿ ಆರ್.ನಾರಾಯಣಸ್ವಾಮಿ ಬಿಎಂಪಿಯ ಮೇಯರ್ ಆಗಿದ್ದರು. ಆಗ ನಗರದಾದ್ಯಂತ ಅನಧಿಕೃತ ಪಾರ್ಕಿಂಗ್ ಶುಲ್ಕ ಸಂಗ್ರಹ ದೊಡ್ಡ ಸಮಸ್ಯೆಯಾಗಿ ಲಕ್ಷಾಂತರ ವಾಹನ ಮಾಲೀಕರಿಗೆ ತೊಂದರೆಯಾಗಿತ್ತು. ಆಗ ಮೇಯರ್ ಆಪ್ತ ಸಹಾಯಕರಾಗಿದ್ದ ಜಿ.ಎಲ್.ನಾರಾಯಣಸ್ವಾಮಿ ನಗರದಲ್ಲಿ ಪಾರ್ಕಿಂಗ್ ಶುಲ್ಕ ರದ್ಧತಿ ಮಾಡುವಂತೆ ನೀಡಿದ ಸಲಹೆಯನ್ನು ನಗರ ಪಾಲಿಕೆ ಯಥಾವತ್ ಜಾರಿ ಮಾಡಿತ್ತು. ಈ ವಿಷಯ ರಾಷ್ಟ್ರೀಯ ಸುದ್ದಿಯಾಗಿ, ನಗರದ ನಾಗರೀಕರಿಂದ ಈ ನಿರ್ಧಾರಕ್ಕೆ ಅಭೂತಪೂರ್ವ ಸ್ವಾಗತ, ಶ್ಲಾಘನೆ ವ್ಯಕ್ತವಾಗಿತ್ತು.

ಕೋವಿಡ್ ಸೋಂಕು ಲೆಕ್ಕಿಸದೇ ಜನರ ಮನೆಗಳಿಗೆ ಆಹಾರ ಕಿಟ್ ವಿತರಣೆ :

ಕೋವಿಡ್ ಸಂದರ್ಭದಲ್ಲಿ ಕೊಳಗೇರಿಯ ಜನತೆಯ ಮನೆ ಮನೆಗಳಿಗೆ ತೆರಳಿ ಆಹಾರ ಕಿಟ್ ವಿತರಿಸಿದ ಸಂದರ್ಭ.

2020 ಹಾಗೂ 2021ರಲ್ಲಿ ಕೋವಿಡ್ ಸೋಂಕು ಬಂದು ಇಡೀ ಜಗತ್ತಿಗೆ ಜಗತ್ತೇ ನಲುಗಿ ಹೋಗಿತ್ತು. ಲಕ್ಷಾಂತರ ಜನರನ್ನು ಆಪೋಶನ ತೆಗೆದುಕೊಂಡ ಈ ಸಂದರ್ಭದಲ್ಲಿ ಎಲ್ಲೆಲ್ಲೂ ಜೀವಭಯ, ಪ್ರಾಣಭಯ ಕಾಡುತ್ತಿತ್ತು. ನೆರೆಹೊರೆಯವರು ಅಕ್ಕಪಕ್ಕದ ಮನೆಗೆ ಹೋಗುವುದಿರಲಿ, ದೂರದಿಂದ ಮಾತನಾಡಿಸಲು ಕಷ್ಟವಾಗಿದ್ದಂತಹ ಪರಿಸ್ಥಿತಿ…..!! ಇಂತಹ ಸಂದರ್ಭದಲ್ಲಿ ಕೋವಿಡ್ ಸೋಂಕು ನಿಯಂತ್ರಣ, ನಿರ್ವಹಣೆ ಹಾಗೂ ಜಾಗೃತಿ ಕಾರ್ಯವು ಅತ್ಯಂತ ಅಗತ್ಯವಾಗಿತ್ತು. ನಾರಾಯಣ ಸ್ವಾಮಿ ಎಷ್ಟೋ ಸಂದರ್ಭದಲ್ಲಿ ಕೋವಿಡ್ ಬಂದು ತಮ್ಮ ತಮ್ಮ ಮನೆಗಳಲ್ಲೇ, ಗುಡಿಸಲುಗಳಲ್ಲೇ ಕ್ವಾರಂಟೈನ್ ಆದ ಸಾವಿರಾರು ಮನೆಗಳಿಗೆ, ಕೊಳಗೇರಿಗಳಿಗೆ, ಅಪಾರ್ಟ್ ಮೆಂಟ್ ಗಳಿಗೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸ್ವತಃ ತೆರಳಿ ರೋಗಿಗಳಿಗೆ ಅಗತ್ಯವಾದ ಔಷಧಿ, ಅನ್ನ-ಆಹಾರ, ದಿನಸಿ ಪೂರೈಸಿದ್ದಲ್ಲದೆ, ಅಗತ್ಯವಿದ್ದವರಿಗೆ ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿದ್ದಾರೆ. ಆನಂತರ ತಾವೂ ಸೋಂಕಿನಿಂದ ಬಳಲಿ ಕ್ವಾರಂಟೈನ್ ಆಗಿದ್ದರು.

ಮಾದರಿ ಚುನಾವಣೆ ಕೆಲಸಗಳಿಗೆ ಪ್ರಶಸ್ತಿ :

2018ರ ಇಸವಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಿಬ್ಬಂದಿಗೆ ಪಾರದರ್ಶಕ ಹಾಗೂ ಸುಗಮವಾಗಿ ಚುನಾವಣೆ ನಡೆಸಲು ಅಗತ್ಯವಾದ ಮಾದರಿ ಕೆಲಸ ಕಾರ್ಯಗಳನ್ನು ಮಾಡಿದ್ದಕ್ಕಾಗಿ ಸಹಾಯಕ ಚುನಾವಣಾಧಿಕಾರಿಯಾಗಿ ಕೆಲಸ ಮಾಡಿದ ನಾರಾಯಣಸ್ವಾಮಿ ಅವರಿಗೆ ಚುನಾವಣಾ ಆಯೋಗದಿಂದ ಉತ್ತಮ ಸೇವಾ ಪ್ರಶಸ್ತಿ ಲಭಿಸಿತ್ತು.

“ಜನಸೇವೆ ಮಾಡಿದ ಸಂತೃಪ್ತಿ ಸದಾ ಇದೆ” :

ಹೀಗೆ ತಮ್ಮ ವೃತ್ತಿ ಜೀವನದ ಪ್ರತಿ ಹಂತದಲ್ಲೂ ಪರೋಪಕಾರಿಯಾಗಿ ದುಡಿದ ನಾರಾಯಣಸ್ವಾಮಿ ನಿವೃತ್ತಿ ಹೊಂದುತ್ತಿದ್ದಾರೆ. ತಾವು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಬೆಂಗಳೂರು ವೈರ್ ಜೊತೆ ಮಾತನಾಡುತ್ತಾ, “ಕಳೆದ 30 ವರ್ಷಗಳಿಂದ ಸ್ಥಳೀಯಾಡಳಿತ ಸಂಸ್ಥೆಯಾಗಿರುವ ಬಿಬಿಎಂಪಿಯಲ್ಲಿ ಕಂದಾಯ, ಆಸ್ತಿಪಾಸ್ತಿ, ರಸ್ತೆ ಸಮಸ್ಯೆ, ಬೃಹತ್ ಯೋಜನೆ, ವೈದ್ಯಕೀಯ ಸಹಾಯ, ಬಡವರಿಗೆ ಒಂಟಿಮನೆ ಯೋಜನೆ, ತಳ್ಳುವ ಗಾಡಿ, ಕೆರೆ-ರಾಜಕಾಲುವೆ ಹೀಗೆ ನಾನಾ ಸಮಸ್ಯೆ, ಸವಾಲುಗಳಿಗೆ, ಸಹಾಯ ಕೇಳಿ ಬಂದವರಿಗೆ ನನ್ನ ಕೈಲಾದ ಮಟ್ಟಿಗೆ ಜನ ಸೇವೆ ಮಾಡಿದ್ದೇನೆ. ಪರಿಹಾರ ದೊರೆತ ಸಾವಿರಾರು ಜನರು ಖುಷಿಯಿಂದ ತಮಗೆ ಅಭಿನಂದನೆ ಸಲ್ಲಿಸಿದ್ದಾರೆ. ಒಟ್ಟಾರೆ ಸಾರ್ವಜನಿಕ ಸೇವೆ ಮಾಡಿದ ಸಂತೃಪ್ತಿಯಿದೆ” ಎಂದು ನಗುಮೊಗದಿಂದಲೇ ಹೇಳಿದರು.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...

Previous Post

ಕರ್ನಾಟಕ ಪತ್ರಕರ್ತೆಯರ ಸಂಘದಿಂದ ಮಹಿಳಾ ದಿನಾಚರಣೆ

Next Post

BBMP Budget Live | ಬಿಬಿಎಂಪಿ 2025-26ನೇ ಸಾಲಿನ ಆಯವ್ಯಯ ಅಂದಾಜು ಮಂಡನೆ ; ಇಂದು ಬೆಳಗ್ಗೆ ನೇರಪ್ರಸಾರ

Next Post

BBMP Budget Live | ಬಿಬಿಎಂಪಿ 2025-26ನೇ ಸಾಲಿನ ಆಯವ್ಯಯ ಅಂದಾಜು ಮಂಡನೆ ; ಇಂದು ಬೆಳಗ್ಗೆ ನೇರಪ್ರಸಾರ

BBMP BUDGET | ಬಿಬಿಎಂಪಿಯಲ್ಲಿ 2025-26ನೇ ಸಾಲಿಗೆ ₹19,927.08 ಕೋಟಿ ರೂ. ಮೊತ್ತದ ಬೃಹತ್ ಬಜೆಟ್

Please login to join discussion

Like Us on Facebook

Follow Us on Twitter

Recent News

Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

May 16, 2025
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ತಮ್ಮ 63ನೇ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬದೊಂದಿಗೆ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಕಾಲಕಳೆದರು.

ಡಿಸಿಎಂ ಡಿ.ಕೆ.ಶಿವಕುಮಾರ್ 63ನೇ ಹುಟ್ಟುಹಬ್ಬ : ಕಬಿನಿ ವನ್ಯ ಪರಿಸರದಲ್ಲಿ ವಿಹಾರ ; ಸಿಂಹ ದತ್ತು ಪಡೆದ ಯುವ ಕಾಂಗ್ರೆಸ್

May 15, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

May 16, 2025
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ತಮ್ಮ 63ನೇ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬದೊಂದಿಗೆ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಕಾಲಕಳೆದರು.

ಡಿಸಿಎಂ ಡಿ.ಕೆ.ಶಿವಕುಮಾರ್ 63ನೇ ಹುಟ್ಟುಹಬ್ಬ : ಕಬಿನಿ ವನ್ಯ ಪರಿಸರದಲ್ಲಿ ವಿಹಾರ ; ಸಿಂಹ ದತ್ತು ಪಡೆದ ಯುವ ಕಾಂಗ್ರೆಸ್

May 15, 2025
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಇಂದಿನಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಜಿಬಿಎ ರಚನೆ ಬಗ್ಗೆ ಕಾಂಗ್ರೆಸ್- ಬಿಜೆಪಿ ಪರ ವಿರೋಧ

May 15, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d