Wednesday, June 18, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ತೈಲ ಬೆಲೆ ಏರಿಕೆ: ಆರ್ಥಿಕತೆ, ಜನಸಾಮಾನ್ಯರ ಮೇಲೆ ಪರಿಣಾಮ; ಸರ್ಕಾರದ ಮಧ್ಯಪ್ರವೇಶಕ್ಕೆ ಎಫ್‌ಕೆಸಿಸಿಐ ಆಗ್ರಹ

    ಬೆಂಗಳೂರಿನ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೊಸದಾಗಿ ಆಯ್ತೆಯಾದ 51 ಮಂದಿ ಡ್ರೈವರ್ ಕಮ್ ಕಂಡೆಂಕ್ಟರ್ ಸಿಬ್ಬಂದಿಗೆ ನೇಮಕಾತಿ ಆದೇಶ ವಿತರಿಸಿದರು.

    8 ವರ್ಷಗಳ ಬಳಿಕ KSRTCಯಲ್ಲಿ ನೇಮಕಾತಿ: 2000 ಚಾಲಕ-ನಿರ್ವಾಹಕರಿಗೆ ನಿಯೋಜನಾ ಆದೇಶ ವಿತರಣೆ

    ಕ್ವಾಂಟಮ್ ಯುಗಕ್ಕೆ ಭಾರತ ಪ್ರವೇಶ: ಡಿಆರ್‌ಡಿಓ-ಐಐಟಿ ದೆಹಲಿಯಿಂದ ಕ್ವಾಂಟಮ್ ಸುರಕ್ಷಿತ ಸಂವಹನ ಯಶಸ್ವೀ ಪ್ರಯೋಗ

    2027ರಲ್ಲಿ ಭಾರತದಲ್ಲಿ ಮುಂದಿನ ಜನಗಣತಿ: ಕೇಂದ್ರ ಸರ್ಕಾರದ ಅಧಿಕೃತ ಅಧಿಸೂಚನೆ

    ಮೊಬೈಲ್ ಹಾಜರಾತಿ ಜುಲೈ 1 ರಿಂದ ಕಡ್ಡಾಯ: ವೈದ್ಯರು ಸಿಬ್ಬಂದಿ ಲಭ್ಯತೆ ಸುಧಾರಣೆಗೆ ಕ್ರಮ

    UK F-35 Fighter Jet

    ಬ್ರಿಟಿಷ್ ಎಫ್-35 ಫೈಟರ್ ಜೆಟ್ ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ: ಭಾರತ-ಯುಕೆ ಸಹಕಾರಕ್ಕೆ ಸಾಕ್ಷಿ

    ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ.

    ಸಾರಿಗೆ ಸಿಬ್ಬಂದಿ ಮೇಲಿನ ಹಲ್ಲೆ: ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ರಾಮಲಿಂಗಾ ರೆಡ್ಡಿ ಪತ್ರ

    16ನೇ ಹಣಕಾಸು ಆಯೋಗದ ಸಭೆ : ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಹಂಚಿಕೆ ಕನಿಷ್ಠ ಶೇ.50ರಷ್ಟು ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ

    ಅಹಮದಾಬಾದ್ ವಿಮಾನ ದುರಂತ: ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ, ಪರಿಹಾರ ಕಾರ್ಯಗಳಿಗೆ ಚುರುಕು

  • Bengaluru Focus

    ಕಮಲ್ ಹಾಸನ್ ‘ಥಗ್ ಲೈಫ್’ ಸಿನಿಮಾ ವಿರುದ್ಧ ಪ್ರತಿಭಟನೆ: ಪ್ರವೀಣ್ ಶೆಟ್ಟಿ ಮನೆಗೆ ಪೊಲೀಸ್ ನೋಟಿಸ್, ಸರ್ಪಗಾವಲು

    ಬೆಂಗಳೂರಿನ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೊಸದಾಗಿ ಆಯ್ತೆಯಾದ 51 ಮಂದಿ ಡ್ರೈವರ್ ಕಮ್ ಕಂಡೆಂಕ್ಟರ್ ಸಿಬ್ಬಂದಿಗೆ ನೇಮಕಾತಿ ಆದೇಶ ವಿತರಿಸಿದರು.

    8 ವರ್ಷಗಳ ಬಳಿಕ KSRTCಯಲ್ಲಿ ನೇಮಕಾತಿ: 2000 ಚಾಲಕ-ನಿರ್ವಾಹಕರಿಗೆ ನಿಯೋಜನಾ ಆದೇಶ ವಿತರಣೆ

    ಭಾರತೀಯ ಸಂಸ್ಕೃತಿಯ ಸಂರಕ್ಷಣೆಗೆ ಸಂತರ ಪಾತ್ರ ಅತ್ಯಗತ್ಯ: ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ

    ಯಲಹಂಕ ವಲಯದಲ್ಲಿ ಕಟ್ಟಡಗಳ ನಿಯಮ ಉಲ್ಲಂಘನೆ : 12 ಸ್ಥಳಗಳಲ್ಲಿ ವ್ಯತಿರಿಕ್ತ ಭಾಗಗಳ ತೆರವು ಕಾರ್ಯಾಚರಣೆ

    ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ.

    ಸಾರಿಗೆ ಸಿಬ್ಬಂದಿ ಮೇಲಿನ ಹಲ್ಲೆ: ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ರಾಮಲಿಂಗಾ ರೆಡ್ಡಿ ಪತ್ರ

    BW SPECIAL | ಕಬ್ಬನ್‌ ಪಾರ್ಕ್‌ನಲ್ಲಿ ನವೀಕೃತ ‘ನಮ್ಮ ಬೆಂಗಳೂರು ಅಕ್ವೇರಿಯಂ’: ಜಲಸಂಪತ್ತಿನ ವಿಸ್ಮಯ ಲೋಕ ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ

    ಶೇ.100 ಸಮೀಕ್ಷೆ ಪೂರ್ಣಗೊಳಿಸಲು ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ: ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್

    Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

    ಬೆಂಗಳೂರಿನ ಪಕ್ಷಿನೋಟ (ಸಾಂದರ್ಭಿಕ ಚಿತ್ರ)

    ಬೆಂಗಳೂರಿನ ಕಟ್ಟಡಗಳಲ್ಲಿ ನೆಲ ಅಂತಸ್ತು ಸಂಪೂರ್ಣವಾಗಿ ‘ಸ್ಟಿಲ್ಟ್ ಪಾರ್ಕಿಂಗ್’ ಕಡ್ಡಾಯ : ನಗರಾಭಿವೃದ್ಧಿ ಇಲಾಖೆಯಿಂದ ಹೊಸ ಕರಡು ಅಧಿಸೂಚನೆ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire
    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ತೈಲ ಬೆಲೆ ಏರಿಕೆ: ಆರ್ಥಿಕತೆ, ಜನಸಾಮಾನ್ಯರ ಮೇಲೆ ಪರಿಣಾಮ; ಸರ್ಕಾರದ ಮಧ್ಯಪ್ರವೇಶಕ್ಕೆ ಎಫ್‌ಕೆಸಿಸಿಐ ಆಗ್ರಹ

    ಬೆಂಗಳೂರಿನ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೊಸದಾಗಿ ಆಯ್ತೆಯಾದ 51 ಮಂದಿ ಡ್ರೈವರ್ ಕಮ್ ಕಂಡೆಂಕ್ಟರ್ ಸಿಬ್ಬಂದಿಗೆ ನೇಮಕಾತಿ ಆದೇಶ ವಿತರಿಸಿದರು.

    8 ವರ್ಷಗಳ ಬಳಿಕ KSRTCಯಲ್ಲಿ ನೇಮಕಾತಿ: 2000 ಚಾಲಕ-ನಿರ್ವಾಹಕರಿಗೆ ನಿಯೋಜನಾ ಆದೇಶ ವಿತರಣೆ

    ಕ್ವಾಂಟಮ್ ಯುಗಕ್ಕೆ ಭಾರತ ಪ್ರವೇಶ: ಡಿಆರ್‌ಡಿಓ-ಐಐಟಿ ದೆಹಲಿಯಿಂದ ಕ್ವಾಂಟಮ್ ಸುರಕ್ಷಿತ ಸಂವಹನ ಯಶಸ್ವೀ ಪ್ರಯೋಗ

    2027ರಲ್ಲಿ ಭಾರತದಲ್ಲಿ ಮುಂದಿನ ಜನಗಣತಿ: ಕೇಂದ್ರ ಸರ್ಕಾರದ ಅಧಿಕೃತ ಅಧಿಸೂಚನೆ

    ಮೊಬೈಲ್ ಹಾಜರಾತಿ ಜುಲೈ 1 ರಿಂದ ಕಡ್ಡಾಯ: ವೈದ್ಯರು ಸಿಬ್ಬಂದಿ ಲಭ್ಯತೆ ಸುಧಾರಣೆಗೆ ಕ್ರಮ

    UK F-35 Fighter Jet

    ಬ್ರಿಟಿಷ್ ಎಫ್-35 ಫೈಟರ್ ಜೆಟ್ ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ: ಭಾರತ-ಯುಕೆ ಸಹಕಾರಕ್ಕೆ ಸಾಕ್ಷಿ

    ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ.

    ಸಾರಿಗೆ ಸಿಬ್ಬಂದಿ ಮೇಲಿನ ಹಲ್ಲೆ: ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ರಾಮಲಿಂಗಾ ರೆಡ್ಡಿ ಪತ್ರ

    16ನೇ ಹಣಕಾಸು ಆಯೋಗದ ಸಭೆ : ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಹಂಚಿಕೆ ಕನಿಷ್ಠ ಶೇ.50ರಷ್ಟು ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ

    ಅಹಮದಾಬಾದ್ ವಿಮಾನ ದುರಂತ: ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ, ಪರಿಹಾರ ಕಾರ್ಯಗಳಿಗೆ ಚುರುಕು

  • Bengaluru Focus

    ಕಮಲ್ ಹಾಸನ್ ‘ಥಗ್ ಲೈಫ್’ ಸಿನಿಮಾ ವಿರುದ್ಧ ಪ್ರತಿಭಟನೆ: ಪ್ರವೀಣ್ ಶೆಟ್ಟಿ ಮನೆಗೆ ಪೊಲೀಸ್ ನೋಟಿಸ್, ಸರ್ಪಗಾವಲು

    ಬೆಂಗಳೂರಿನ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೊಸದಾಗಿ ಆಯ್ತೆಯಾದ 51 ಮಂದಿ ಡ್ರೈವರ್ ಕಮ್ ಕಂಡೆಂಕ್ಟರ್ ಸಿಬ್ಬಂದಿಗೆ ನೇಮಕಾತಿ ಆದೇಶ ವಿತರಿಸಿದರು.

    8 ವರ್ಷಗಳ ಬಳಿಕ KSRTCಯಲ್ಲಿ ನೇಮಕಾತಿ: 2000 ಚಾಲಕ-ನಿರ್ವಾಹಕರಿಗೆ ನಿಯೋಜನಾ ಆದೇಶ ವಿತರಣೆ

    ಭಾರತೀಯ ಸಂಸ್ಕೃತಿಯ ಸಂರಕ್ಷಣೆಗೆ ಸಂತರ ಪಾತ್ರ ಅತ್ಯಗತ್ಯ: ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ

    ಯಲಹಂಕ ವಲಯದಲ್ಲಿ ಕಟ್ಟಡಗಳ ನಿಯಮ ಉಲ್ಲಂಘನೆ : 12 ಸ್ಥಳಗಳಲ್ಲಿ ವ್ಯತಿರಿಕ್ತ ಭಾಗಗಳ ತೆರವು ಕಾರ್ಯಾಚರಣೆ

    ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ.

    ಸಾರಿಗೆ ಸಿಬ್ಬಂದಿ ಮೇಲಿನ ಹಲ್ಲೆ: ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ರಾಮಲಿಂಗಾ ರೆಡ್ಡಿ ಪತ್ರ

    BW SPECIAL | ಕಬ್ಬನ್‌ ಪಾರ್ಕ್‌ನಲ್ಲಿ ನವೀಕೃತ ‘ನಮ್ಮ ಬೆಂಗಳೂರು ಅಕ್ವೇರಿಯಂ’: ಜಲಸಂಪತ್ತಿನ ವಿಸ್ಮಯ ಲೋಕ ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ

    ಶೇ.100 ಸಮೀಕ್ಷೆ ಪೂರ್ಣಗೊಳಿಸಲು ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ: ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್

    Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

    ಬೆಂಗಳೂರಿನ ಪಕ್ಷಿನೋಟ (ಸಾಂದರ್ಭಿಕ ಚಿತ್ರ)

    ಬೆಂಗಳೂರಿನ ಕಟ್ಟಡಗಳಲ್ಲಿ ನೆಲ ಅಂತಸ್ತು ಸಂಪೂರ್ಣವಾಗಿ ‘ಸ್ಟಿಲ್ಟ್ ಪಾರ್ಕಿಂಗ್’ ಕಡ್ಡಾಯ : ನಗರಾಭಿವೃದ್ಧಿ ಇಲಾಖೆಯಿಂದ ಹೊಸ ಕರಡು ಅಧಿಸೂಚನೆ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home News Wire

ಎಪಿಎಲ್ ಕಾರ್ಡುಗಳಿಗೆ ಮೇ 2023ರಿಂದ ಪಡಿತರ ನೀಡದ ಆಹಾರ ಇಲಾಖೆ? : ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ವರ್ಗಾವಣೆ ಎಂಬ ಚಕ್ರವ್ಯೂಹ!!

by Bengaluru Wire Desk
November 21, 2024
in News Wire, Public interest
Reading Time: 2 mins read
0
ಪಡಿತರ ಚೀಟಿದಾರರ ಕುಟುಂಬಕ್ಕೆ ಆಹಾರ ಧಾನ್ಯ ವಿತರಿಸುತ್ತಿರುವ ಸಾಂದರ್ಭಿಕ ಚಿತ್ರ

ಪಡಿತರ ಚೀಟಿದಾರರ ಕುಟುಂಬಕ್ಕೆ ಆಹಾರ ಧಾನ್ಯ ವಿತರಿಸುತ್ತಿರುವ ಸಾಂದರ್ಭಿಕ ಚಿತ್ರ

ಬೆಂಗಳೂರು, ನ.21 www.bengaluruwire.com : ರಾಜ್ಯದಲ್ಲಿ ಬಡವರ ಬಿಪಿಎಲ್ ಕಾರ್ಡ್ ರದ್ದು ವಿವಾದ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ ರಾಜ್ಯ ಸರ್ಕಾರ ಸಿಎಂ, ಡಿಸಿಎಂ ಹಾಗೂ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.

ಅರ್ಹರಲ್ಲದವರು ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದು, ಇದನ್ನು ಪರಿಶೀಲನೆ ಮಾಡಿ ಎಪಿಎಲ್‌ಗೆ ವರ್ಗಾಯಿಸಲಾಗುತ್ತಿದೆ ಹೊರತು ರದ್ದುಗೊಳಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಇಂದು ವಿಧಾನಸೌಧದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಮೂಲಗಳ ಪ್ರಕಾರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಪಿಎಲ್ ಕಾರ್ಡ್ ದಾರರಿಗೆ 2023ರ ಮೇನಿಂದ ಮಾಸಿಕ ಪಡಿತರಗಳನ್ನು ಹಂಚಿಕೆ ಮಾಡಲಾಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ಈ ಕಾರ್ಡ್ ಗಳಿಗೂ ಪಡಿತರ ಹಂಚಿಕೆಯಾಗುತ್ತಿದ್ದರೂ, ರಾಜ್ಯ ಸರ್ಕಾರ ಮಾತ್ರ ಎಪಿಎಲ್ ಕಾರ್ಡ್ ದಾರರಿಗೆಂದು ಅಕ್ಕಿಯನ್ನು ಕೇಂದ್ರದಿಂದ ಖರೀದಿಸುವ ಗೋಜಿಗೆ ಹೋಗದೆ ಪಡಿತರ ನೀಡುತ್ತಿಲ್ಲ. 

ವಿಧಾನಸೌಧದ ಬ್ಯಾಂಕ್ವಿಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಆಹಾರ ಸಚಿವ ಕೆ.ಎಚ್.ಮುನಿಯಪ್ಪ. ಆಯುಕ್ತರಾದ ವಿ.ಜ್ಯೋತ್ಸ್ನಾ ಜೊತೆಗಿದ್ದರು.

ಎಪಿಎಲ್ ಕಾರ್ಡಿಗೆ ಪಡಿತರ ತಡೆಹಿಡಿದಿರುವುದು ಏಕೆ?:

ಹೀಗಾಗಿ 25.62 ಲಕ್ಷ ಎಪಿಎಲ್ ಕಾರ್ಡಿನ 87.88 ಲಕ್ಷ ಸದಸ್ಯರಿಗೆ (ಏಕ ಸದಸ್ಯ ಪಡಿತರ ಚೀಟಿಗೆ 5 ಕೆಜಿ ಅಕ್ಕಿ, ಒಂದು ಕೆಜಿಗಿಂತ ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10 ಕೆಜಿ ಪಡಿತರ ನೀಡಬೇಕು) ರಾಜ್ಯದಲ್ಲಿ ಅಕ್ಕಿ ವಿತರಣೆಯಾಗುತ್ತಿಲ್ಲ. ಹಾಗಾದರೆ ಇವರ್ಯಾರು ನಾಡಿನ ಮತದಾರು ಮತ್ತು ನಾಗರೀಕರಲ್ಲವೇ. ಅರ್ಹ ಎಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಪಡೆಯುವ ಸೌಲಭ್ಯವನ್ನು ರಾಜ್ಯ ಸರ್ಕಾರ ನಿರಾಕರಿಸುತ್ತಿರುವುದಾದರೂ ಯಾಕೆ? ಎಂಬ ಪ್ರಶ್ನೆ ಉದ್ಭವಿಸಿದೆ.

ಹೀಗೆಂದಾದ ಮೇಲೆ ಅನರ್ಹ ಬಿಎಪಿಎಲ್ ಕಾರ್ಡ್ ದಾರರನ್ನು ಎಪಿಎಲ್ ಕಾರ್ಡಿಗೆ ಸೇರಿಸುವುದೆಂದರೆ ಅವರಿಗೆ ಪಡಿತರ ವಿರತಣೆ ಮಾಡದಂತೆ ಕ್ರಮ ಕೈಗೊಂಡಿರುವುದು ಎಂದೇ ಅರ್ಥ‌ ಎನ್ನಲಾಗುತ್ತಿದೆ.

ನ.20ರಲ್ಲಿರುವಂತೆ ರಾಜ್ಯದಲ್ಲಿ (ಕೇಂದ್ರ ಸರ್ಕಾರ ಅಂತ್ಯೋದಯ ಅನ್ನಯೋಜನೆ AAY ಮತ್ತು ಬಿಪಿಎಲ್ ವರ್ಗದಲ್ಲಿ 1,13,12,463 ಕಾರ್ಡ್ ಹಂಚಿಕೆಯಾಗಿದ್ದರೆ ಹಾಗೂ ರಾಜ್ಯ ಸರ್ಕಾರ ನೀಡಿರುವ 11,84,625 ಬಿಪಿಎಲ್ ಕಾರ್ಡ್ ಗಳಿವೆ) ಒಟ್ಟು ಅಂತ್ಯೋದಯ, ಬಿಪಿಎಲ್ ಕಾರ್ಡ್ ಗಳ ಸಂಖ್ಯೆ 1,24,97,088 ಕಾರ್ಡ್ ಗಳು ನೀಡಿದ್ದರೆ, 25,62,343 ಎಪಿಎಲ್ ಕಾರ್ಡ್ ಗಳನ್ನು ವಿತರಿಸಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ವಿವರಿಸಿದ್ದಾರೆ.

ಆಹಾರ ಇಲಾಖೆ ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗೆ ಮಾಹಿತಿ ಅಲಭ್ಯ :

ಒಂದು ತಿಂಗಳ ಹಿಂದೆಯಷ್ಟೇ ಸಾಮಾನ್ಯ ನಾಗರೀಕರು ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳು ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ವಿತರಣೆ, ಕಾರ್ಡ್ ದಾರರ ಮಾಹಿತಿ, ಯಾವುದೇ ಪಡಿತರ ಕೇಂದ್ರಗಳಿಗೆ ಹಂಚಿಕೆಯಾಗಿರುವ ಪಡಿತರ ಆಹಾರ ಹಂಚಿಕೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಎನ್ ಐಸಿ (NIC) ನಿರ್ವಹಿಸುತ್ತಿರುವ ಆಹಾರ ಇಲಾಖೆಯ ವೆಬ್ ಸೈಟನ್ನು‌ ನೋಡಬಹುದಿತ್ತು. ಆದರೀಗ ಡ್ಯಾಷ್ ಬೋರ್ಡ್ ಮಾಹಿತಿಯೂ ಸೇರಿದಂತೆ ಪಡಿತರಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳಾವುದೂ ನೋಡದಂತೆ ನಿರ್ಬಂಧಿಸಲಾಗಿದೆ. ಈ ಮಾಹಿತಿಯನ್ನು ಕೇವಲ ಆಹಾರ ಸಚಿವರು, ಇಲಾಖೆ ಕಾರ್ಯದರ್ಶಿ ಮತ್ತು ಆಯುಕ್ತರು ನೋಡಲಷ್ಟೇ ಅನುವಾಗುವಂತೆ ಭದ್ರಪಡಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿದೆ.

ಇನ್ನೊಂದೆಡೆ ಈಗಿರುವ 1.24 ಕೋಟಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಗಳ ಸಂಖ್ಯೆಯನ್ನು ಕನಿಷ್ಟ 15-16 ಲಕ್ಷ ಕಾರ್ಡ್ ಗಳನ್ನು ರದ್ದು ಮಾಡುವ ಉದ್ದೇಶವಿದೆ. ಹೀಗಾಗಿ ಎನ್ ಐಸಿ ಮಾಹಿತಿಗಳು ಹೊರಗಿನವರಿಗೆ ಪರಿಶೀಲಿಸಲು ಸಿಕ್ಕರೆ ಕಷ್ಟವಾದೀತು ಎಂಬ ಕಾರಣಕ್ಕೆ ಆಹಾರ ಇಲಾಖೆ ವೆಬ್ ಸೈಟ್ ನಲ್ಲಿ ಸಂಪೂರ್ಣ ಮಾಹಿತಿ ಲಭಿಸದಂತೆ ನಿಯಂತ್ರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ahara.kar.nic.in ವೆಬ್ ಸೈಟಿನಲ್ಲಿ ನೀಡಿದ ಯಾವುದೇ ಆಪ್ಶನ್ ಕ್ಲಿಕ್ ಮಾಡಿದರೂ ಸೇವೆ ಲಭ್ಯವಿರುವುದಿಲ್ಲ (Service unavailable) ಎಂಬ ಸಂದೇಶ ಕಂಡುಬರುತ್ತಿದೆ.

ಕಾರ್ಡ್ ದಾರರಿಗೆ ಜೂನ್- ಜುಲೈ ತಿಂಗಳ ಡಿಬಿಟಿ ಹಣ ಕೈಸೇರಿಲ್ಲ :

ಪಡಿತರ ಚೀಟಿಯೊಂದರ ಸಾಂದರ್ಭಿಕ ಚಿತ್ರ.

ಪ್ರಸ್ತುತ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ನಿಗದಿಪಡಿಸಿದೆ. ಆದರೆ, ಅಕ್ಕಿಯ ಕೊರತೆಯಿಂದಾಗಿ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದು, ಉಳಿದ 5 ಕೆಜಿ ಅಕ್ಕಿಗೆ ಜುಲೈ 2023 ರಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಪ್ರತಿ ಕೆಜಿಗೆ 34 ರೂ.ನಂತೆ ಸದಸ್ಯರೊಬ್ಬರಿಗೆ ತಲಾ 170 ರೂ.ನಂತೆ 1.24 ಕೋಟಿ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳಿಗೆ ಮಾಸಿಕ 700 ರಿಂದ 800 ಕೋಟಿ ರೂ. ಹಣ ನೀಡುವುದು ಸರ್ಕಾರದ ಬೊಕ್ಕಸಕ್ಕೆ ಭಾರವಾಗಿದೆ. ಹೀಗಾಗಿ ಈಗಲೂ ರಾಜ್ಯದ ಹಲವು ಭಾಗಗಳಲ್ಲಿ ಫಲಾನುಭವಿಗಳಿಗೆ ಜೂನ್- ಜುಲೈ ತಿಂಗಳಿಂದ ಡಿಬಿಟಿ ಮೂಲಕ ಹಣ ಪಾವತಿಯಾಗಿಲ್ಲ.

ರಾಜ್ಯದಲ್ಲಿ ಶೇಕಡ 70-80 ರಷ್ಟು ಬಿಪಿಎಲ್ ಕಾರ್ಡ್‌ಗಳು ಇರಲು ಸಾಧ್ಯವಿಲ್ಲ. ಹೀಗಾಗಿ ವೈಜ್ಞಾನಿಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಮನೆ, ಕಾರು ಹೊಂದಿರುವವರ ಮತ್ತು ಆದಾಯ ತೆರಿಗೆ ಪಾವತಿಸುವ ಕುಟುಂಬದ ಬಿಪಿಎಲ್ ಕಾರ್ಡುಗಳು ಮಾತ್ರ ರದ್ದಾಗಿದ್ದು, ಅರ್ಹ ಫಲಾನುಭವಿಗಳ ಕಾರ್ಡ್ ರದ್ದಾಗಿದ್ದರೆ ಮುಖ್ಯಮಂತ್ರಿಗಳ ಸೂಚನೆಯಂತೆ, ಒಂದು ವಾರದ ಒಳಗಾಗಿ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. 

ವಿಧಾನಸೌಧದ ಸಾಂದರ್ಭಿಕ ಚಿತ್ರ

ಆದಾಯ ತೆರಿಗೆ ಪಾವತಿ ಹಾಗೂ ಸರ್ಕಾರಿ ನೌಕರರ ಒಟ್ಟು 1,02,509 ಕಾರ್ಡ್ ಗಳ ಪೈಕಿ 76,176 ಕಾರ್ಡ್ ಗಳನ್ನು ಪರಿಶೀಲಿಸಲಾಗಿದೆ. ಇನ್ನೂ 17,710 ಕಾರ್ಡುಗಳ ಪರಿಶೀಲನೆ ಪ್ರಗತಿಯಲ್ಲಿದೆ. ಈಗಾಗಲೇ ಪರಿಶೀಸಿರುವ ಕಾರ್ಡ್ ಗಳ ಪೈಕಿ 59,370 ಕಾರ್ಡ್ ಗಳನ್ನು ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಗಳಿಗೆ ಸೇರಿಸಲಾಗಿದೆ. 8,647 ಕಾರ್ಡ್ ಗಳನ್ನು ಅಮಾನತ್ತಿನಲ್ಲಿರಿಸಲಾಗಿದೆ. 16,806 ಕಾರ್ಡ್ ಗಳನ್ನು ಬಿಪಿಎಲ್ ಕಾರ್ಡ್ ನಲ್ಲೇ ಮುಂದುವರೆಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿಗೆ ಸಂಬಂಧಿಸಿದಂತೆ ತಾಂತ್ರಿಕ ಕಾರಣಗಳಿಂದ ಕೆಲವು ಅರ್ಹ ಫಲಾನುಭವಿಗಳ ಹೆಸರು ಬಿಟ್ಟು ಹೋಗಿದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳ ಅವರ ಗಮನಕ್ಕೆ ತರಲಾಗಿದೆ. ಇಂದು ಈ ಬಗ್ಗೆ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದು, ಶೀಘ್ರವೇ ಈ ಸಮಸ್ಯೆ ಬಗೆಹರಿಸಲಿದ್ದೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ವಿವರಿಸಿದ್ದಾರೆ.

2011ರ ಜನಗಣತಿಯಂತೆ ಶೇ.65.96 ಬಿಪಿಎಲ್ ಕಾರ್ಡ್ ವಿತರಣೆ :

ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿದಾರರನ್ನು ಪತ್ತೆಹಚ್ಚಲು ಕ್ರಮವಹಿಸಿದೆ. ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಯನ್ನು 2011ರ ಜನಗಣತಿ ಸಮೀಕ್ಷೆ ಪ್ರಕಾರ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ.65.96 ಪ್ರಮಾಣದಲ್ಲಿ ವಿತರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಂತ್ಯೋದಯ ಅನ್ನ ಯೋಜನೆ (AAY) ಹಾಗೂ ಆದ್ಯತಾ ಕುಟುಂಬ/ಬಿಪಿಎಲ್ ಕಾರ್ಡ್ ನ ಅಡಿ 4,34,48,260 ಸದಸ್ಯರಿದ್ದಾರೆ. ಇನ್ನು 25,62,343 ಎಪಿಎಲ್ ಕಾರ್ಡ್ ನಡಿ 87,88,188 ಸದಸ್ಯರಿದ್ದಾರೆ. ಅಂತ್ಯೋದಯ ಅನ್ನ ಯೋಜನೆಯಲ್ಲಿ ಪ್ರತಿ ಪಡಿತರ ಚೀಟಿಗೆ ಅಕ್ಕಿ 21 ಕೆಜಿ ಹಾಗೂ 14 ಕೆಜಿ ಜೋಳ ಅಥವಾ ರಾಗಿ ಸೇರಿದಂತೆ ಒಟ್ಟಾರೆ 35 ಕೆಜಿ ಪಡಿತರ ನೀಡುತ್ತಿದ್ದು, ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯನಿಗೆ 5 ಕೆಜಿಯಲ್ಲಿ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಅಥವಾ ಜೋಳ ನೀಡಲಾಗುತ್ತಿದೆ. ಸದ್ಯ ನಿಗದಿತ ಪ್ರಮಾಣದಲ್ಲಿ ಅಕ್ಕಿ ಕೊರತೆಯ ಕಾರಣಕ್ಕೆ ರಾಜ್ಯ ಸರ್ಕಾರ ಕಾರ್ಡ್ ದಾರಿಗೆ ನೇರವಾಗಿ ಲಾಭ ವರ್ಗಾವಣೆಯಡಿ ಹಣ ನೀಡುತ್ತಿದೆ.

ಇನ್ನು 25.62 ಲಕ್ಷ ಎಪಿಎಲ್ ಕಾರ್ಡಿನ 87.88 ಲಕ್ಷ ಸದಸ್ಯರಿಗೆ (ಏಕ ಸದಸ್ಯ ಪಡಿತರ ಚೀಟಿಗೆ 5 ಕೆಜಿ ಅಕ್ಕಿ, ಒಂದು ಕೆಜಿಗಿಂತ ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10 ಕೆಜಿ ಪಡಿತರ ನೀಡಬೇಕು) ದುರದೃಷ್ಟವಶಾತ್ ಎಪಿಎಲ್ ಕಾರ್ಡಿಗೆ ಅಕ್ಕಿ ಅಥವಾ ಪಡಿತರ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿದೆ. ಇದರಿಂದಾಗಿ 87.88 ಲಕ್ಷ ಎಪಿಎಲ್ ಕಾರ್ಡ್ ದಾರರಿಗೆ ಪಡಿತರ ಇಲ್ಲದಂತಾಗಿದೆ. ಈ ಅನ್ಯಾಯ ಸರಿಪಡಿಸಬೇಕೆಂದು ಹಲವು ತಿಂಗಳಿಂದ ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಎಂಬ ದೂರುಗಳಿವೆ.

ಅಧಿವೇಶನ ಆರಂಭದ ಒಳಗೆ ಬಿಪಿಎಲ್ ಕಾರ್ಡ್ ಮರಳಿಸಲು ವಿಪಕ್ಷ ಆಗ್ರಹ :

Karnataka Assembly
ವಿಧಾನಸಭೆಯ ಒಳಾಂಗಣದ ಸಾಂದರ್ಭಿಕ ಚಿತ್ರ.

ಈ ಮಧ್ಯೆ ಒಂದೇ ಸಮನೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವ ಬಗ್ಗೆ ಸಾರ್ವಜನಿಕರು ಪಡಿತರ ಅಂಗಡಿಗಳ ಎದುರು ಬಂದು ತಮ್ಮ ಆಕ್ರೋಶ ಹೊರಹಾಕುತ್ತಿದ್ದರೆ, ವಿಪಕ್ಷ ಬಿಜೆಪಿ ನಾಯಕರು ಬಡವರಿಗೆ ರದ್ದುಪಡಿಸಿರುವ ಬಿಪಿಎಲ್ ಕಾರ್ಡ್ ಮರಳಿ ನೀಡದಿದ್ದರೆ ಹಾಗೂ ಪಡಿತರ ಚೀಟಿ ರದ್ದು ಪ್ರಕ್ರಿಯೆ ತಕ್ಷಣವೇ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಅಲ್ಲದೇ ಮುಂದಿನ ಅಧಿವೇಶನದ ಒಳಗೆ ರದ್ದು ಮಾಡಿದ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಬಡವರಿಗೆ ನೀಡಬೇಕುಮ ಇಲ್ಲವಾದಲ್ಲಿ ಸದನದ ಒಳಗೆ ಹೊರಗೆ ತೀವ್ರ ಹೋರಾಟ ಮಾಡುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗುಡುಗಿದ್ದಾರೆ.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...
Previous Post

ಗಯಾನಾ ದೇಶದ ಅತ್ಯುನ್ನತ ನಾಗರೀಕ ಗೌರವ ಪುರಸ್ಕಾರ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

Next Post

2026ರ ವೇಳೆಗೆ ರಾಜ್ಯದ 5 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್ ಅಳವಡಿಕೆ : 10 ವರ್ಷಗಳಲ್ಲಿ ಸರ್ಕಾರಿ ಬೊಕ್ಕಸಕ್ಕೆ 100 ಕೋಟಿ ರೂ. ಉಳಿತಾಯ

Next Post
ಸೌರ ವಿದ್ಯುತ್ ಫಲಕ ಅಳವಡಿಕೆಯಾದ ಸರ್ಕಾರಿ ಆಸ್ಪತ್ರೆಯೊಂದರ ಸಾಂದರ್ಭಿಕ ಚಿತ್ರ.

2026ರ ವೇಳೆಗೆ ರಾಜ್ಯದ 5 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್ ಅಳವಡಿಕೆ : 10 ವರ್ಷಗಳಲ್ಲಿ ಸರ್ಕಾರಿ ಬೊಕ್ಕಸಕ್ಕೆ 100 ಕೋಟಿ ರೂ. ಉಳಿತಾಯ

ದೇವನಹಳ್ಳಿಯಲ್ಲಿ ತಲೆ ಎತ್ತಿರುವ ಅಕ್ಕಾ ಕೆಫೆ ಮತ್ತು ಬೇಕರಿಯ ಹೊರಾಂಗಣ ನೋಟ.

AKKA CAFE | ಮಹಿಳಾ ಉದ್ಯಮಿಗಳ ಸಬಲೀಕರಣಕ್ಕಾಗಿ ತಲೆ ಎತ್ತುತ್ತಿದೆ ಅಕ್ಕಾ ಕೆಫೆ!! ನೀವು ಕೂಡ ಅಕ್ಕಾ ಕೆಫೆ- ಕಿಯೋಸ್ಕ್ ತೆರೆಯಬೇಕಾ? ಇಲ್ಲಿದೆ ಮಾಹಿತಿ

Please login to join discussion

Like Us on Facebook

Follow Us on Twitter

Recent News

ಕಮಲ್ ಹಾಸನ್ ‘ಥಗ್ ಲೈಫ್’ ಸಿನಿಮಾ ವಿರುದ್ಧ ಪ್ರತಿಭಟನೆ: ಪ್ರವೀಣ್ ಶೆಟ್ಟಿ ಮನೆಗೆ ಪೊಲೀಸ್ ನೋಟಿಸ್, ಸರ್ಪಗಾವಲು

June 18, 2025
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ತೈಲ ಬೆಲೆ ಏರಿಕೆ: ಆರ್ಥಿಕತೆ, ಜನಸಾಮಾನ್ಯರ ಮೇಲೆ ಪರಿಣಾಮ; ಸರ್ಕಾರದ ಮಧ್ಯಪ್ರವೇಶಕ್ಕೆ ಎಫ್‌ಕೆಸಿಸಿಐ ಆಗ್ರಹ

June 17, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕಮಲ್ ಹಾಸನ್ ‘ಥಗ್ ಲೈಫ್’ ಸಿನಿಮಾ ವಿರುದ್ಧ ಪ್ರತಿಭಟನೆ: ಪ್ರವೀಣ್ ಶೆಟ್ಟಿ ಮನೆಗೆ ಪೊಲೀಸ್ ನೋಟಿಸ್, ಸರ್ಪಗಾವಲು

June 18, 2025
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ತೈಲ ಬೆಲೆ ಏರಿಕೆ: ಆರ್ಥಿಕತೆ, ಜನಸಾಮಾನ್ಯರ ಮೇಲೆ ಪರಿಣಾಮ; ಸರ್ಕಾರದ ಮಧ್ಯಪ್ರವೇಶಕ್ಕೆ ಎಫ್‌ಕೆಸಿಸಿಐ ಆಗ್ರಹ

June 17, 2025
ಬೆಂಗಳೂರಿನ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೊಸದಾಗಿ ಆಯ್ತೆಯಾದ 51 ಮಂದಿ ಡ್ರೈವರ್ ಕಮ್ ಕಂಡೆಂಕ್ಟರ್ ಸಿಬ್ಬಂದಿಗೆ ನೇಮಕಾತಿ ಆದೇಶ ವಿತರಿಸಿದರು.

8 ವರ್ಷಗಳ ಬಳಿಕ KSRTCಯಲ್ಲಿ ನೇಮಕಾತಿ: 2000 ಚಾಲಕ-ನಿರ್ವಾಹಕರಿಗೆ ನಿಯೋಜನಾ ಆದೇಶ ವಿತರಣೆ

June 17, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d