Tuesday, June 10, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ದೇಶದ ರಾಷ್ಟ್ರೀಯ ಆರೋಗ್ಯ ನೀತಿಯ ಗಮನ “ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆ” ಅಭಿವೃದ್ಧಿಪಡಿಸುವುದಾಗಿದೆ : ಜೆ.ಪಿ.ನಡ್ಡಾ

  • Bengaluru Focus

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire
    ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ದೇಶದ ರಾಷ್ಟ್ರೀಯ ಆರೋಗ್ಯ ನೀತಿಯ ಗಮನ “ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆ” ಅಭಿವೃದ್ಧಿಪಡಿಸುವುದಾಗಿದೆ : ಜೆ.ಪಿ.ನಡ್ಡಾ

  • Bengaluru Focus

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home News Wire

ಚಿನ್ನದ ದರ ಒಂದು ವರ್ಷದಲ್ಲಿ ಬರೋಬ್ಬರಿ ಶೇ.35, ಬೆಳ್ಳಿ ಶೇ.36ರಷ್ಟು ಏರಿಕೆ : ಗಗನಮುಖಿಯಾದ ಅಮೂಲ್ಯ ಲೋಹಗಳು

1991ರಲ್ಲಿ 24 ಕ್ಯಾರೇಟ್ ಶುದ್ಧ ಚಿನ್ನದ ದರ 10 ಗ್ರಾಮಿಗೆ ಕೇವಲ 3,466 ರೂ. ಇತ್ತು.

by Bengaluru Wire Desk
October 31, 2024
in News Wire, Uncategorized
Reading Time: 1 min read
0

ನವದೆಹಲಿ, ಅ.31 www.bengaluruwire.com : ಚಿನ್ನದ ಬೆಲೆ ಅಂತರರಾಷ್ಟ್ರೀಯ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಗಗನಮುಖಿಯಾಗಿದೆ. ಕಳೆದ ಒಂದು ವರ್ಷದಲ್ಲಿ 10 ಗ್ರಾಂ ಶುದ್ಧ ಚಿನ್ನದ (ಶೇ 99.9 ಪರಿಶುದ್ಧತೆ) ಬೆಲೆಯಲ್ಲಿ ಶೇ 35ರಷ್ಟು ಏರಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ಹೇಳಿದೆ.

ದೀಪಾವಳಿಗೆ ಮುಂಚಿತವಾಗಿ ಆಭರಣ ವ್ಯಾಪಾರಿಗಳ ದೃಢವಾದ ಖರೀದಿಯ ನಡುವೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆಯು 10 ಗ್ರಾಮ್ ಗೆ ರೂ 1,000 ರಷ್ಟು ಏರಿಕೆಯನ್ನು ಕಂಡು 82,000 ಗಡಿಯನ್ನು ದಾಟಿದೆ. ಆಲ್-ಇಂಡಿಯಾ ಸರಾಫಾ ಅಸೋಸಿಯೇಷನ್ ​​ಪ್ರಕಾರ, 99.9 ಪ್ರತಿಶತ ಶುದ್ಧತೆಯ ಹಳದಿ ಲೋಹವು ದೆಹಲಿಯಲ್ಲಿ 10 ಗ್ರಾಂಗೆ 82,400 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಹಿಂದಿನ ಅವಧಿಯಲ್ಲಿ, 99.9% ಮತ್ತು 99.5% ಶುದ್ಧತೆಯ ಚಿನ್ನವು ಕ್ರಮವಾಗಿ 10 ಗ್ರಾಂಗೆ 81,400 ಮತ್ತು 81,000 ರೂ.ನಷ್ಟಿತ್ತು.

ಕಳೆದ ವರ್ಷದ ಅಕ್ಟೋಬರ್ 29ರಂದು ಶುದ್ಧ ಚಿನ್ನದ ಬೆಲೆಯು 10 ಗ್ರಾಂಗೆ ₹61.200 ದರವಿತ್ತು. ಬುಧವಾರದ ವಹಿವಾಟಿನಲ್ಲಿ ₹82,400ಕ್ಕೆ ಮುಟ್ಟಿದೆ. ಒಟ್ಟಾರೆ ಒಂದು ವರ್ಷದ ಅವಧಿಯಲ್ಲಿ ₹21,200ರಷ್ಟು ಹಳದಿ ಲೋಹದ ದರವು ಏರಿಕೆಯಾಗಿದೆ. ಬೆಳ್ಳಿ ಲೋಹದ ದರ ಪ್ರತಿ ಕೆಜಿಗೆ ಸದ್ಯ 1,01,000 ರೂ., ನಷ್ಟಾಗಿದೆ. ಬೆಳ್ಳಿ ಬೆಲೆ ಕಳೆದ ವರ್ಷ ಅಕ್ಟೋಬರ್ 29 ರಂದು ಕೆಜಿಗೆ 74,000 ರೂ. ನಷ್ಟಿತ್ತು. ಈ ಒಂದು ವರ್ಷದಲ್ಲಿ 36% ರಷ್ಟು ಜಿಗಿತವನ್ನು ದಾಖಲಿಸಿದೆ.

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಚಿನ್ನದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತ ಮಾಡಿತ್ತು. ಇದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಜಾಗತಿಕ ಬಿಕ್ಕಟ್ಟಿನ ಪರಿಣಾಮ ಧಾರಣೆಯು ಏರಿಕೆಯ ಹಾದಿ ಹಿಡಿದಿದೆ. 

ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ನ ಸರಕು ಸಂಶೋಧನೆಯ ವಿಶ್ಲೇಷಕ ಮಾನವ್ ಮೋದಿ ಪ್ರಕಾರ, ಯುಎಸ್ ಮತ್ತು ಜಪಾನ್‌ನಲ್ಲಿ ಹೆಚ್ಚಿದ ರಾಜಕೀಯ ಅನಿಶ್ಚಿತತೆ ಮತ್ತು ಬಡ್ಡಿದರಗಳ ಮೇಲೆ ಹೆಚ್ಚಿನ ಸೂಚನೆಗಳ ನಿರೀಕ್ಷೆಯಿಂದ ಸುರಕ್ಷಿತ ಹೂಡಿಕೆಯಾದ ಚಿನ್ನದ ಮೇಲಿನ ಬೇಡಿಕೆ ಹೆಚ್ಚಾದ ಕಾರಣ ಚಿನ್ನದ ಬೆಲೆಗಳು ದಾಖಲೆಯ ಎತ್ತರವನ್ನು ತಲುಪಿದೆ ಎಂದು ಹೇಳಿದರು.

“ಭಾರತದಲ್ಲಿ ಹಬ್ಬದ ಋತುವಿನಲ್ಲಿ ಹಳದಿ ಲೋಹದ ಬೇಡಿಕೆಯ ಜೊತೆಗೆ, ಮುಂಬರುವ ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಗೆಲುವಿನ ನಿರೀಕ್ಷೆಯಲ್ಲಿ ಮಾರುಕಟ್ಟೆಯ ಬೆಟ್‌ಗಳ ಪರಿಣಾಮ ಚಿನ್ನದ ಲೋಹದ ಮೇಲಾಗಿದೆ. ಈ ಆಶಾವಾದವು ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ” ಎಂದು ಎಲ್ ಕೆಪಿ ಸೆಕ್ಯುರಿಟಿಸ್ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದರು.

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇನ್ನೂ ಶಮನಗೊಂಡಿಲ್ಲ. ಇದು ಸರಕು ಸಾಗಣೆ ಮತ್ತು ವಿಮಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಅಮೆರಿಕ ಬಾಂಡ್ ಗಳಿಕೆ ಇಳಿಕೆಯಾಗಿದೆ. ಡಾಲರ್ ಮೌಲ್ಯ ಕಡಿಮೆಯಾಗಿದೆ. ಹಾಗಾಗಿ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ದೃಷ್ಟಿ ನೆಟ್ಟಿದ್ದಾರೆ. ಇದರಿಂದ ಬೆಲೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. 

ಧನ್ ತೇರಸ್ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಸ್ಟ್ಯಾಂಡರ್ಡ್ ಚಿನ್ನದ (ಶೇ.99.5 ಶುದ್ಧತೆ) ದರದಲ್ಲಿ ಏರಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ 10 ಗ್ರಾಂಗೆ ₹1 ಸಾವಿರ ಏರಿಕೆಯಾಗಿದ್ದು, ₹82,000 ತಲುಪಿದೆ.

ನಾಲ್ಕು ದಶಕದಲ್ಲಿ ಚಿನ್ನದ ಬೆಲೆ ಸಾಗಿ ಬಂದ ಹಾದಿ :

1991ರಲ್ಲಿ 24 ಕ್ಯಾರೇಟ್ ಶುದ್ಧ ಚಿನ್ನದ ದರ 10 ಗ್ರಾಮ್ ಕೇವಲ 3,466 ರೂ. ಇತ್ತು. 2001 ರಲ್ಲಿ 4,300 ರೂ., 2011ನೇ ಇಸವಿಯಲ್ಲಿ 26,400 ರೂ., 2021ನೇ ಇಸವಿಯಲ್ಲಿ 10 ಗ್ರಾಮ್ ಹಳದಿ ಲೋಹದ ಬೆಲೆ 48,720 ರೂ. ನಷ್ಟಿತ್ತು. ಇದೀಗ ಅ.30ರಂದು 82,400 ರೂ. ನಷ್ಟಾಗಿದೆ.

ಕಳೆದ ವರ್ಷ ನವೆಂಬರ್ ಒಂದರಂದು 916 ಹಾಲ್ ಮಾರ್ಕ್ ಒಂದು ಗ್ರಾಮ್ ಚಿನ್ನದ ದರವು 5,287 ರೂ. ಇತ್ತು, 2024ರ ಏಪ್ರಿಲ್ 1 ರಂದು 6028.8 ಏರಿಕೆಯಾಗಿ 6 ಸಾವಿರ ರೂ.‌ ಗಡಿದಾಟಿತು. ಅಲ್ಲಿಂದ ಏರಿಕೆಯಾದ ಚಿನ್ನದ ದರವು ಇಳಿಕೆಯಾಗದೆ ಸೆ.20 ರಂದು 7024.5 ರೂ. ಏರಿಕೆಯಾಗಿ 7,000 ರೂ. ದಾಟಿ ಅ.30ಕ್ಕೆ 7525.2 ರೂ. ಬಂದು ನಿಂತಿದೆ.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...
Previous Post

BW EXCLUSIVE | ರಾಜ್ಯ ಸರ್ಕಾರ- ಬೆಂಗಳೂರು ವಿವಿ ನಿಯಮ ಉಲ್ಲಂಘನೆ : ಜ್ಞಾನಭಾರತಿ ಕ್ಯಾಂಪಸ್ 673 ಎಕರೆ ಜೀವ ವೈವಿಧ್ಯತಾ ವನಕ್ಕೆ ಗಂಡಾಂತರ!!

Next Post

Viral Video News | ದೀಪಾವಳಿ ಬೆಳಕಲ್ಲಿ ಮಿಂದಿರುವ ನೋಯ್ಡಾ ಸಿಟಿಯ ವೈಮಾನಿಕ ನೋಟದ ಸುಂದರ ವಿಡಿಯೋ ವೈರಲ್

Next Post

Viral Video News | ದೀಪಾವಳಿ ಬೆಳಕಲ್ಲಿ ಮಿಂದಿರುವ ನೋಯ್ಡಾ ಸಿಟಿಯ ವೈಮಾನಿಕ ನೋಟದ ಸುಂದರ ವಿಡಿಯೋ ವೈರಲ್

ಕನ್ನಡ- ಕನ್ನಡಿಗರನ್ನು ಹಿಯಾಳಿಸುವುದು ನಾಡದ್ರೋಹ : ಸರ್ಕಾರದಿಂದ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Please login to join discussion

Like Us on Facebook

Follow Us on Twitter

Recent News

ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

June 9, 2025

ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

June 9, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

June 9, 2025

ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

June 9, 2025

Inspirational News | ಎನ್‌ಸಿಸಿ ಕೆಡೆಟ್‌ಗಳ ಎವರೆಸ್ಟ್ ವಿಜಯ: ಅಸಾಧ್ಯವನ್ನು ಸಾಧಿಸಿದ ಹದಿಹರೆಯದ ವೀರರು : ಕೆಡೆಟ್ ಗಳ ಅನುಭವ ಇಲ್ಲಿದೆ

June 9, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d