Sunday, June 15, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    16ನೇ ಹಣಕಾಸು ಆಯೋಗದ ಸಭೆ : ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಹಂಚಿಕೆ ಕನಿಷ್ಠ ಶೇ.50ರಷ್ಟು ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ

    ಅಹಮದಾಬಾದ್ ವಿಮಾನ ದುರಂತ: ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ, ಪರಿಹಾರ ಕಾರ್ಯಗಳಿಗೆ ಚುರುಕು

    Air India Plane Crash | ಏರ್ ಇಂಡಿಯಾ ಭಾರೀ ವಿಮಾನ ದುರಂತ: 242 ಜನರಿದ್ದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಪತನ 

    Weather News | ಮಳೆಗಾಲದ ಆರ್ಭಟ: ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್ : ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಸಾಂದರ್ಭಿಕ ಚಿತ್ರ

    Railway News | ರೈಲ್ವೇ ಪ್ರಯಾಣಿಕರಿಗೆ ಸಂತಸದ ಸುದ್ದಿ : 24 ಗಂಟೆ ಮುಂಚಿತವಾಗಿ ಸೀಟು ಖಚಿತ!

    ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಇಂಧನ ಇಲಾಖೆ ಮತ್ತು ಬೆಸ್ಕಾಂ ವತಿಯಿಂದ ಸ್ಥಾಪಿಸಲಾದ ಸೋಲಾರ್ ಘಟಕವನ್ನು ಲೋಕಾರ್ಪಣೆಗೊಳಿಸಿದರು.

    ಕುಸುಮ್‌- ಸಿ ಯೋಜನೆಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್: ಸಿಎಂ ಸಿದ್ದರಾಮಯ್ಯ

    ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಮುಂದೂಡಿಕೆ: ತಾಂತ್ರಿಕ ದೋಷವೇ ಕಾರಣ

    DCM DK Shivakumar

    ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

    ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

  • Bengaluru Focus

    ಶೇ.100 ಸಮೀಕ್ಷೆ ಪೂರ್ಣಗೊಳಿಸಲು ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ: ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್

    Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

    ಬೆಂಗಳೂರಿನ ಪಕ್ಷಿನೋಟ (ಸಾಂದರ್ಭಿಕ ಚಿತ್ರ)

    ಬೆಂಗಳೂರಿನ ಕಟ್ಟಡಗಳಲ್ಲಿ ನೆಲ ಅಂತಸ್ತು ಸಂಪೂರ್ಣವಾಗಿ ‘ಸ್ಟಿಲ್ಟ್ ಪಾರ್ಕಿಂಗ್’ ಕಡ್ಡಾಯ : ನಗರಾಭಿವೃದ್ಧಿ ಇಲಾಖೆಯಿಂದ ಹೊಸ ಕರಡು ಅಧಿಸೂಚನೆ

    ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದ್ದ 3.12 ಎಕರೆ ಭೂಮಿ ವಶಕ್ಕೆ: ಬಿಡಿಎ ಕಾರ್ಯಾಚರಣೆ

    Weather News | ಮಳೆಗಾಲದ ಆರ್ಭಟ: ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್ : ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಬನ್ನೇರುಘಟ್ಟದಲ್ಲಿ ಗರ್ಭಿಣಿ ಜೀಬ್ರಾ ‘ಕಾವ್ಯ’ ಸಾವು: ಆಘಾತ ಮತ್ತು ಕ್ಯಾಪ್ಚರ್‌ ಮಯೋಪತಿ ಕಾರಣವಿರುವ ಶಂಕೆ

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    16ನೇ ಹಣಕಾಸು ಆಯೋಗದ ಸಭೆ : ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಹಂಚಿಕೆ ಕನಿಷ್ಠ ಶೇ.50ರಷ್ಟು ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ

    ಅಹಮದಾಬಾದ್ ವಿಮಾನ ದುರಂತ: ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ, ಪರಿಹಾರ ಕಾರ್ಯಗಳಿಗೆ ಚುರುಕು

    Air India Plane Crash | ಏರ್ ಇಂಡಿಯಾ ಭಾರೀ ವಿಮಾನ ದುರಂತ: 242 ಜನರಿದ್ದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಪತನ 

    Weather News | ಮಳೆಗಾಲದ ಆರ್ಭಟ: ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್ : ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಸಾಂದರ್ಭಿಕ ಚಿತ್ರ

    Railway News | ರೈಲ್ವೇ ಪ್ರಯಾಣಿಕರಿಗೆ ಸಂತಸದ ಸುದ್ದಿ : 24 ಗಂಟೆ ಮುಂಚಿತವಾಗಿ ಸೀಟು ಖಚಿತ!

    ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಇಂಧನ ಇಲಾಖೆ ಮತ್ತು ಬೆಸ್ಕಾಂ ವತಿಯಿಂದ ಸ್ಥಾಪಿಸಲಾದ ಸೋಲಾರ್ ಘಟಕವನ್ನು ಲೋಕಾರ್ಪಣೆಗೊಳಿಸಿದರು.

    ಕುಸುಮ್‌- ಸಿ ಯೋಜನೆಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್: ಸಿಎಂ ಸಿದ್ದರಾಮಯ್ಯ

    ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಮುಂದೂಡಿಕೆ: ತಾಂತ್ರಿಕ ದೋಷವೇ ಕಾರಣ

    DCM DK Shivakumar

    ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

    ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

  • Bengaluru Focus

    ಶೇ.100 ಸಮೀಕ್ಷೆ ಪೂರ್ಣಗೊಳಿಸಲು ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ: ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್

    Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

    ಬೆಂಗಳೂರಿನ ಪಕ್ಷಿನೋಟ (ಸಾಂದರ್ಭಿಕ ಚಿತ್ರ)

    ಬೆಂಗಳೂರಿನ ಕಟ್ಟಡಗಳಲ್ಲಿ ನೆಲ ಅಂತಸ್ತು ಸಂಪೂರ್ಣವಾಗಿ ‘ಸ್ಟಿಲ್ಟ್ ಪಾರ್ಕಿಂಗ್’ ಕಡ್ಡಾಯ : ನಗರಾಭಿವೃದ್ಧಿ ಇಲಾಖೆಯಿಂದ ಹೊಸ ಕರಡು ಅಧಿಸೂಚನೆ

    ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದ್ದ 3.12 ಎಕರೆ ಭೂಮಿ ವಶಕ್ಕೆ: ಬಿಡಿಎ ಕಾರ್ಯಾಚರಣೆ

    Weather News | ಮಳೆಗಾಲದ ಆರ್ಭಟ: ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್ : ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಬನ್ನೇರುಘಟ್ಟದಲ್ಲಿ ಗರ್ಭಿಣಿ ಜೀಬ್ರಾ ‘ಕಾವ್ಯ’ ಸಾವು: ಆಘಾತ ಮತ್ತು ಕ್ಯಾಪ್ಚರ್‌ ಮಯೋಪತಿ ಕಾರಣವಿರುವ ಶಂಕೆ

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home Bengaluru Focus

ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘಕ್ಕೆ 14 ವರ್ಷಗಳ ಬಳಿಕ ಪ್ರಥಮ ಚುನಾವಣೆ – ಹೇಗೆ ನಡೆಯಲಿದೆ ಈ ಎಲೆಕ್ಷನ್ ಗೊತ್ತಾ?

ಸಹಕಾರ ಸಂಘಗಳ ಉಪನಿಬಂಧಕರಾಗಿ ನಿವೃತ್ತರಾದ ದೊಡ್ಡತಮ್ಮೇಗೌಡ ಚುನಾವಣಾಧಿಕಾರಿ | 1 ರಿಂದ 9 ಬ್ಲಾಕ್ ಗಳಲ್ಲಿ ಒಟ್ಟಾರೆ 1176 ಸದಸ್ಯರಿಗೆ ಸೆಪ್ಟೆಂಬರ್ 29ರ ಭಾನುವಾರ ಮತದಾನ ಮಾಡುವ ಅವಕಾಶ | ಪ್ರತಿ ಮತದಾರನಿಗೂ ಒಟ್ಟು 20 ಮಂದಿಗೆ ಮತ ಹಾಕಬಹುದು

by Bengaluru Wire Desk
September 26, 2024
in Bengaluru Focus
Reading Time: 2 mins read
0
Sir M Vishveshwariah Layout welfare Association

ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಲಾಂಛನ.

ಬೆಂಗಳೂರು, ಸೆ.26 www.bengaluruwire.com : ಬಿಡಿಎ ನಿರ್ಮಿಸಿದ ಸರ್.ಎಂ.ವಿಶ್ವೇಶ್ವರಯ್ಯ 1 ರಿಂದ 9ನೇ ಬ್ಲಾಕ್ ಗಳ ಬಡಾವಣೆ ನಿವೇಶನದಾರರನ್ನು ಪ್ರತಿನಿಧಿಸುವ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಪ್ರಾಂಭವಾದ 15 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಇದೇ ಸೆಪ್ಟೆಂಬರ್ 29 ಭಾನುವಾರ ನಡೆಯುತ್ತಿದೆ. ಇದು ಬಡಾವಣೆ ನಿವಾಸಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

2003-2004ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 1 ರಿಂದ 9 ಬ್ಲಾಕ್ ಗಳಲ್ಲಿ ಬಡಾವಣೆಯಲ್ಲಿ ನಿವೇಶನವನ್ನು ರಚಿಸಿ ಅರ್ಹ ಅರ್ಜಿದಾರರಿಗೆ 9 ಬ್ಲಾಕ್ ಗಳಲ್ಲಿ ರಚಿಸಲಾಗಿದ್ದ 17,000 ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಇದಾದ ಬಳಿಕ 2010ರ ಮಾರ್ಚ್ 30ರಂದು ಬಡಾವಣೆಯ ನಾಗರೀಕರ ಅನುಕೂಲಕ್ಕೆಂದು ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ನಿವಾಸಿಗಳ ಮತ್ತು ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘ ನೋಂದಣಿಯಾಗಿ ಜಾರಿಗೆ ಬಂದಿತ್ತು. ಆದರೆ 16-02-2013ರಂದು ಸಂಘದ ಹೆಸರನ್ನು “ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ”ವೆಂದು ಅಸೋಸಿಯೇಷನ್ ಬೈಲಾಗೆ ತಿದ್ದುಪಡಿ ತಂದು ಬದಲಾವಣೆ ಮಾಡಲಾಗಿದೆ.

ಸಂಘದ ಪದಾಧಿಕಾರಿಗಳ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರಿರುವ ಮತ ಪತ್ರ.

2010ರ ಇಸವಿಯಿಂದ ಸಂಘ ಸ್ಥಾಪನೆಯಾದಾಗಿನಿಂದ ಈವರೆಗೆ ಮೂರು ವರ್ಷಗಳಿಗೊಮ್ಮೆ ಚುನಾವಣೆಗಳು ನಿಗದಿಯಾಗಿದ್ದರೂ ಸಂಘದ ಅಧ್ಯಕ್ಷರಾಗಿ ಡಿ.ಎಸ್.ಗೌಡರು ಹಾಗೂ ಅವರ ನೇತೃತ್ವದ ತಂಡವೇ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಮೂರು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ 2024ರ ಸೆಪ್ಟೆಂಬರ್ 29ರ ಭಾನುವಾರ ನಡೆಯುತ್ತಿರುವ ಚುನಾವಣೆಗೆ ಇದೇ ಮೊದಲ ಬಾರಿಗೆ ರಮೇಶ್.ಎನ್. ನೇತೃತ್ವದಲ್ಲಿ ಸರ್.ಎಂ.ವಿ.ಎಲ್.ಬೆಳವಣಿಗೆ ಸುಧಾರಕ ತಂಡ” (SMVL GROWTH REFORMERS TEAM) ವು ಹಾಲಿ ಅಧ್ಯಕ್ಷರಾಗಿರುವ ಡಿ.ಎಸ್.ಗೌಡರ ಬಣಕ್ಕೆ ಸ್ಪರ್ಧೆ ನೀಡುತ್ತಿದೆ.

ಸಹಕಾರ ಸಂಘಗಳ ಉಪನಿಬಂಧಕರಾಗಿ ನಿವೃತ್ತರಾದ ದೊಡ್ಡತಮ್ಮೇಗೌಡ ಎಂಬುವರು ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಚುನಾವಣಾ ಅಧಿಕಾರಿಯಾಗಿದ್ದು, ಈಗಾಗಲೇ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಸೆ.16ರಂದು ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಸೆ.21ರಂದು ಉಮೇದುವಾರಿಕೆ ಸಲ್ಲಿಸಲು ಕಡೆಯ ದಿನಾಂಕವಾಗಿತ್ತು. ಇನ್ನು ಅದೇ ದಿನ ಸಂಜೆ 5 ಗಂಟೆ ಉಮೇದುವಾರಿಕೆ ಅರ್ಜಿ, ನಾಮಪತ್ರಗಳ ಪರಿಶೀಲನೆ ನಡೆದು ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿತ್ತು. ಸೆ.23ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿತ್ತು. ಅದೇ ದಿನ ಸಂಜೆ 5 ಗಂಟೆಯ ಬಳಿಕ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಒಟ್ಟಾರೆ 38 ಮಂದಿ ಅಂತಿಮವಾಗಿ 20 ಸ್ಥಾನಗಳಿಗೆ ಸ್ಪರ್ಧೆ ನೀಡಲು ಕಣದಲ್ಲಿದ್ದಾರೆ.

ಸರ್ವ ಸದಸ್ಯರ ಸಭೆ ಹಾಗೂ ಚುನಾವಣೆ :

ಸೆ.29ರ ಭಾನುವಾರ 3ನೇ ಬ್ಲಾಕ್ ನಲ್ಲಿರುವ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಡಿ.ಎಸ್.ಗೌಡ ಅವರ ಅಧ್ಯಕ್ಷತೆಯಲ್ಲಿ 10 ಗಂಟೆಗೆ 2023-24ರ ಸರ್ವ ಸದಸ್ಯರ ಸಭೆ ನಡೆಯಲಿದೆ. ತದನಂತರ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯ ತನಕ ಚುನಾವಣೆ ನಡೆಯಲಿದೆ.

ಸಂಘದ ಚುನಾವಣೆಯು ಹೇಗೆ ನಡೆಯುತ್ತೆ? :

ಒಬ್ಬ ಮತದಾರನಿಗೆ 20 ಹುದ್ದೆಗಳಿಗೆ 20 ಮತ ಹಾಕುವ ಹಕ್ಕಿದೆ :

ಕಾರ್ಯಕಾರಿ ಸಮಿತಿಯ 20 ಸ್ಥಾನಗಳಿಗೆ 28 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿರುವ ಮತಪತ್ರ

ಸಂಘದ ಚುನಾವಣೆ ನಡೆಯುವ ಬಗ್ಗೆ ಬೆಂಗಳೂರು ವೈರ್ ಜೊತೆ ಮಾತನಾಡಿದ ಚುನಾವಣಾಧಿಕಾರಿ ದೊಡ್ಡತಮ್ಮೇಗೌಡ, “ಮತದಾನ ಮಾಡಲು ಆಗಮಿಸುವವರು ತಪ್ಪದೇ ಸಂಘವು ವಿತರಿಸಿದ ಗುರುತಿನ ಚೀಟಿಯನ್ನು ತರುವುದನ್ನು ಖಡ್ಡಾಗೊಳಿಸಲಾಗಿದೆ. ಪ್ರತಿಯೊಬ್ಬ ಸಂಘದ ಸದಸ್ಯರು ಚುನಾವಣೆ ನಡೆಯುವ ಸ್ಥಳಕ್ಕೆ ಆಗಮಿಸಿ ತಮ್ಮ ಗುರ್ತಿನ ಕಾರ್ಡ್ ತೋರಿಸಿ ಮತಚೀಟಿಯನ್ನು ಹಾಗೂ ತಲಾ ಎರಡು ಮತಪತ್ರವನ್ನು ಪಡೆಯಬೇಕು. ಪ್ರತಿ ಮೂರು ಬ್ಲಾಕ್ ಬಡಾವಣೆಗೆ ಒಂದರಂತೆ ಒಟ್ಟು ಮೂರು ಬೂತ್ ಗಳನ್ನು ಮಾಡಲಾಗುತ್ತದೆ. ಪ್ರತಿ ಸದಸ್ಯ ಅಥವಾ ಮತದಾರ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಜಿ ಹೀಗೆ ತಲಾ ಒಂದೊಂದು ಹುದ್ದೆಗೆ ಒಂದೊಂದು ಮತ ಚಲಾಯಿಸಬೇಕು. ಅಂದರೆ ಒಟ್ಟಾರೆ 5 ಮಂದಿ ಪದಾಧಿಕಾರಿ ಹುದ್ದೆ ಅಭ್ಯರ್ಥಿಗೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವ ಯಾವುದೇ 15 ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕಲು ಅವಕಾಶವಿದೆ. ಅಂದರೆ ಸಂಘದ 20 ಸ್ಥಾನಗಳಿಗೆ ಮತಹಾಕುವ ಅವಕಾಶವಿದೆ” ಎಂದಿದ್ದಾರೆ.

“ನಿಗದಿಪಡಿಸಿದ ಬೂತ್ ನಲ್ಲಿ ತಮ್ಮ ಬಳಿಯಿರುವ ಎರಡು ಮತಪತ್ರದ ಪೈಕಿ ಒಂದು ಮತಪತ್ರದಲ್ಲಿ ಸ್ಪರ್ಧಿಸುತ್ತಿರುವ ಐದು ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸಿರುವ 10 ಅಭ್ಯರ್ಥಿಗಳ ಹೆಸರಿರುತ್ತದೆ. ಹಾಗೇ ಮತ್ತೊಂದು ಮತಪತ್ರದಲ್ಲಿ ಸ್ಪರ್ಧೆಯಲ್ಲಿರುವ 20 ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ 28 ಅಭ್ಯರ್ಥಿಗಳ ಹೆಸರಿರುತ್ತದೆ. ಅದರಲ್ಲಿ ತಮಗೆ ಸೂಕ್ತರೆನಿಸಿದ ಹೆಸರಿನ ಮುಂದೆ ಸ್ವಸ್ತಿಕ್ ಸೀಲ್ ಒತ್ತಿ ತಮ್ಮ ಮತ ಚಲಾಯಿಸಬಹುದು. ಆನಂತರ ಮತಪತ್ರವನ್ನು ನಿಗದಿತ ಸ್ಥಳದಲ್ಲಿ ಇಟ್ಟಿರುವ ಆಯಾ ಮತ ಪೆಟ್ಟಿಗೆಗೆ ಹಾಕಬೇಕು” ಎಂದು ಅವರು ಮತದಾರರಿಗೆ ಮಾಹಿತಿ ನೀಡಿದ್ದಾರೆ.

“ಸೆ.29ರಂದು ಸಂಜೆ 4 ಗಂಟೆಗೆ ಚುನಾವಣೆ ಮತದಾನದ ಅವಧಿ ಮುಗಿದ ಬಳಿಕ, ಮತಗಳ ಎಣಿಕೆ ಅಭ್ಯರ್ಥಿಗಳ ಮುಂದೆ ನಡೆಯಲಿದ್ದು, ಆದಾದ ಬಳಿಕ ಚುನಾವಣಾ ಫಲಿತಾಂಶ ಪ್ರಕಟಣೆ ಮಾಡುತ್ತೇವೆ” ಎಂದು ಚುನಾವಣಾಧಿಕಾರಿ ತಮ್ಮೇಗೌಡ ತಿಳಿಸಿದ್ದಾರೆ.

ಹೀಗಿರಲಿದೆ ಮತದಾರನ ಗುರುತಿನ ಚೀಟಿ

ಸಂಘ ಪ್ರಾರಂಭವಾದಾಗಿನಿಂದ ಇದು ಮೊದಲ ಚುನಾವಣಾ ಸ್ಪರ್ಧೆ :

1 ರಿಂದ 9 ಬ್ಲಾಕ್ ಗಳಲ್ಲಿನ ಬಡಾವಣೆ ನಿವಾಸಿಗಳು ಹಾಗೂ ಸಂಘದ ಸದಸ್ಯರಲ್ಲೂ ಸಂಘ ಪ್ರಾರಂಭವಾದಗಿನಿಂದಲೂ ಒಂದು ಬಾರಿಯೂ ಎದುರಾಳಿ ಸ್ಪರ್ಧೆಯಾಗದೇ ಕೇವಲ ಅವಿರೋಧವಾಗಿ ಆಯ್ಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ತಾವು ಮತ ಹಾಕುತ್ತಿರುವ ಬಗ್ಗೆ ಸಂಘದ ಸದಸ್ಯರು ಹಾಗೂ ಮತದಾರರೂ ಆಗಿರುವ ಬಡಾವಣೆಯ ನಿವಾಸಿಗಳು ಹರ್ಷಗೊಂಡಿದ್ದಾರೆ. ಹೀಗಾಗಿ ಈ ಚುನಾವಣೆಯು ಮಹತ್ವ ಪಡೆದುಕೊಂಡಿದೆ. ಸಂಘದಲ್ಲಿ ಒಟ್ಟಾರೆ 1176 ಮತದಾರರಿದ್ದು, ಸೆ.29ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಸಂಘದ ಮತದಾರರು ಕಾತುರರಾಗಿದ್ದಾರೆ. ಈ ಬಾರಿ ಹೊಸಬರಿಗೆ ಅವಕಾಶ ನೀಡುವ ಹುಮ್ಮಸ್ಸಿನಲ್ಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಘದಲ್ಲಿ ಹೆಚ್ಚಿನ ಸದಸ್ಯತ್ವ ಪಡೆಯುವ ಅಗತ್ಯತೆ ಹೆಚ್ಚಾಗಿದೆ :

ಒಂದರಿಂದ 9ನೇ ಬಡಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ನಿವೇಶನಗಳಲ್ಲಿ ಮನೆಗಳು ಬಂದಿದ್ದು, ಇದೀಗ ಸಾವಿರಾರು ಜನರು ವಿವಿಧ ಬ್ಲಾಕ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಬಡಾವಣೆಯ ವ್ಯಾಪ್ತಿಯಲ್ಲಿ ರಸ್ತೆ, ಬೀದಿ ದೀಪ, ಕಸ ವಿಲೇವಾರಿ, ಸುರಕ್ಷತೆ, ಕೆರೆ- ಉದ್ಯಾನವನ ಸಂರಕ್ಷಣೆ, ಕುಡಿಯುವ ನೀರು ಮತ್ತಿತರ ವಿಷಯಗಳಲ್ಲಿ ಒಂದಿಲ್ಲೊಂದು ಕೊರತೆ, ಸಮಸ್ಯೆಗಳು ಕಂಡು ಬರುತ್ತಿರುತ್ತದೆ. ಹೀಗಾಗಿ ಇವೆಲ್ಲವುಗಳನ್ನು ನಿವಾರಿಸಿ ಬಡಾವಣೆಯ ನಿವಾಸಿಗಳಿಗೆ ಸ್ಪಂದಿಸುವ, ಉತ್ತಮ ಆಡಳಿತ ನೀಡುವವರಿಗೆ ಮತ ಹಾಕಲು ಮತದಾರರು ನಿರ್ಧರಿಸಿದ್ದಾರೆ.

17 ಸಾವಿರ ನಿವೇಶನದಾರರಿದ್ದರೂ 1176 ಸಂಘದ ಸದಸ್ಯತ್ವ ಯಾಕೆ ? :

1 ರಿಂದ 9ನೇ ಬ್ಲಾಕ್ ವರೆಗೆ ಬಿಡಿಎ 17,000ಕ್ಕೂ ಹೆಚ್ಚು ನಿವೇಶನಗಳನ್ನು ರಚಿಸಿ ಅರ್ಹ ಅರ್ಜಿದಾರರಿಗೆ ನಿವೇಶನ ಹಂಚಿಕೆ ಮಾಡಿದೆ. 2010ರಿಂದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆಯಾದರೂ 2024ನೇ ಸೆಪ್ಟೆಂಬರ್ ವರೆಗೆ ಕೇವಲ 1176 ಮಂದಿ ಸದಸ್ಯರಿದ್ದಾರೆ. ಬಡಾವಣೆಯಲ್ಲಿ ಈಗಾಗಲೇ ಸಾಕಷ್ಟು ನಿವೇಶನದಾರರು ಮನೆ ಕಟ್ಟಿಕೊಂಡು ಬಂದಿದ್ದು, ಬಡಾವಣೆಯಲ್ಲಿ ಜನಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೂ ಸದಸ್ಯರ ಸಂಖ್ಯೆ ಹೆಚ್ಚಾಗಿಲ್ಲ. ಇನ್ನು ಮುಂದೆ ಚುನಾಯಿಸಿ ಆರಿಸಿ ಬರುವ ಆಡಳಿತ ಮಂಡಳಿಯು ಹೆಚ್ಚಿನ ಸಂಖ್ಯೆಯಲ್ಲಿ ಹೊಸದಾಗಿ ಸದಸ್ಯರನ್ನು ಸಂಘಕ್ಕೆ ಸೇರ್ಪಡೆ ಮಾಡುವ ಅಗತ್ಯವಿದೆ ಎಂದು ಸಂಘದ ಸದಸ್ಯರೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...
Previous Post

KWIN CITY | ಬೆಂಗಳೂರಿನ ಅಭಿವೃದ್ಧಿ ವೇಗಕ್ಕೆ ಕ್ವಿನ್ ಸಿಟಿ ಕೀಲಿ ಕೈ – ಹೈಟೆಕ್ ನಗರ ನಿರ್ಮಾಣಕ್ಕೆ ಸಿಕ್ಕೇ ಬಿಟ್ಟಿತು ಚಾಲನೆ

Next Post

ನಕಲಿ ಪಾಸ್ ಪೋರ್ಟ್ ಬಳಸಿಕೊಂಡು ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ನೀಲಿ ಚಿತ್ರತಾರೆ ಬಂಧನ

Next Post

ನಕಲಿ ಪಾಸ್ ಪೋರ್ಟ್ ಬಳಸಿಕೊಂಡು ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ನೀಲಿ ಚಿತ್ರತಾರೆ ಬಂಧನ

BDA Nagarabhavi Property

BDA News | ನಾಗರಬಾವಿಯಲ್ಲಿ ಬಿಡಿಎನಿಂದ ಒತ್ತುವರಿ ತೆರವು ಕಾರ್ಯಾಚರಣೆ : 40ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟು ನೆಲಸಮ ; 460 ಕೋಟಿ ರೂ. ಮೌಲ್ಯದ ಆಸ್ತಿ ವಶ

Please login to join discussion

Like Us on Facebook

Follow Us on Twitter

Recent News

ಶೇ.100 ಸಮೀಕ್ಷೆ ಪೂರ್ಣಗೊಳಿಸಲು ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ: ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್

June 14, 2025

Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

June 14, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶೇ.100 ಸಮೀಕ್ಷೆ ಪೂರ್ಣಗೊಳಿಸಲು ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ: ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್

June 14, 2025

Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

June 14, 2025

16ನೇ ಹಣಕಾಸು ಆಯೋಗದ ಸಭೆ : ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಹಂಚಿಕೆ ಕನಿಷ್ಠ ಶೇ.50ರಷ್ಟು ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ

June 13, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d