Saturday, March 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

BW EXCLUSIVE | BIG NEWS | ಕ್ರೈಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಕೆ – 200 ಕೋಟಿ ರೂ. ಹಗರಣ!!? ; ಕಳಪೆ ಬಟ್ಟೆ ಪೂರೈಕೆಗೆ ಕಾರ್ಟೆಲ್ ದುಷ್ಟಕೂಟ ಸೃಷ್ಟಿ

ರಾಜ್ಯಪಾಲರ ಕಚೇರಿಗೆ ಸಲ್ಲಿಕೆಯಾದ ದೂರಿನಲ್ಲಿ ಶಾಲಾ ಸಮವಸ್ತ್ರ ಪೂರೈಕೆಯಲ್ಲಿನ ಅವ್ಯವಹಾರ ಬಯಲು | ಅನಾಮಿಕ ವ್ಯಕ್ತಿಯಿಂದ ಗೌರ್ನರ್, ಮುಖ್ಯಮಂತ್ರಿ ಸೇರಿದಂತೆ 37 ಸರ್ಕಾರಿ ಇಲಾಖೆಗಳ ಮುಖ್ಯಸ್ಥರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಕೆ – ತನಿಖೆಗೆ ಆಗ್ರಹ | ಬಡ ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಬಟ್ಟೆ ಪೂರೈಸುವಲ್ಲಿ ಕಾರ್ಟೇಲ್ ನಿರ್ಮಿಸಿಕೊಂಡು ಸರ್ಕಾರಕ್ಕೆ ಕೋಟ್ಯಾಂತರ ರೂ. ಪಂಗನಾಮ ಹಾಕಿದ ಆರೋಪ

by Bengaluru Wire Desk
October 8, 2023
in BW Special, News Wire, Public interest
Reading Time: 2 mins read
0
ಕ್ರೈಸ್ ಶಾಲಾ ಮಕ್ಕಳು ವಿಧಾನಸೌಧದ ಬಳಿಯ ಗಾಂಧಿಪ್ರತಿಮೆ ಬಳಿ ಸಮವಸ್ತ್ರ ಧರಿಸಿ ನಿಂತಿರುವ ಸಾಂದರ್ಭಿಕ ಚಿತ್ರ. (ಚಿತ್ರಕೃಪೆ : ಎಕ್ಸ್/ಕ್ರೈಸ್ )

ಕ್ರೈಸ್ ಶಾಲಾ ಮಕ್ಕಳು ವಿಧಾನಸೌಧದ ಬಳಿಯ ಗಾಂಧಿಪ್ರತಿಮೆ ಬಳಿ ಸಮವಸ್ತ್ರ ಧರಿಸಿ ನಿಂತಿರುವ ಸಾಂದರ್ಭಿಕ ಚಿತ್ರ. (ಚಿತ್ರಕೃಪೆ : ಎಕ್ಸ್/ಕ್ರೈಸ್ )

ಬೆಂಗಳೂರು, ಅ.08 www.bengaluruwire.com : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (KREIS) ಹಾಗೂ ಸಮಾಜ ಕಲ್ಯಾಣ ಇಲಾಖೆ (Social Welfare Department) ಹಾಸ್ಟೆಲ್ ಗಳು ಸೇರಿದಂತೆ ರಾಜ್ಯದಲ್ಲಿನ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ (Uniforms) ಪೂರೈಕೆ ಮಾಡುವಲ್ಲಿ ಐವರು ಪೂರೈಕೆದಾರರು ಅಕ್ರಮವಾಗಿ ಕಾರ್ಟೆಲ್ ಸೃಷ್ಟಿಸಿಕೊಂಡಿದ್ದಾರೆ. ಈ ಮೂಲಕ ಕಳೆದ 8 ವರ್ಷಗಳಿಂದ 200 ಕೋಟಿ ರೂ.ಗಿಂತಲೂ ಹೆಚ್ಚಿಗೆ ರಾಜ್ಯ ಸರ್ಕಾರಕ್ಕೆ ವಂಚನೆಯಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ.

“ಪ್ರೌಡ್ ಕರ್ನಾಟಕ ಸಿಟಿಜನ್” ಎಂಬ ಹೆಸರಿನಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಸಚಿವರು, ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ನಿಗಮದ ಆಯುಕ್ತರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಸಚಿವರು ಸೇರಿದಂತೆ ಹಲವು ಇಲಾಖೆಗಳ ಮುಖ್ಯಸ್ಥರಿಗೆ 37 ಇಮೇಲ್ ಗಳ ಮೂಲಕ ವಿವರವಾಗಿ ದೂರು ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ದುಷ್ಟ ನಿಯಂತ್ರಣ ಕೂಟ ರಚಿಸಿಕೊಂಡು ರಾಜ್ಯದಲ್ಲಿನ 5 ಲಕ್ಷಕ್ಕೂ ಹೆಚ್ಚಿನ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ನೀಡಿ ಆ ಮೂಲಕ ನೂರಾರು ಕೋಟಿ ರೂ. ಹಣವನ್ನು ಸರ್ಕಾರಕ್ಕೆ ನಷ್ಟ ಮಾಡುತ್ತಿರುವ ಬಗ್ಗೆ ವಿಶಲ್ ಬ್ಲೋಯರ್  (whistleblower) ಕೆಲಸವನ್ನು ಅನಾಮಿಕ ವ್ಯಕ್ತಿ ಮಾಡಿದ್ದಾರೆ. ಇದರ ದಾಖಲೆ “ಬೆಂಗಳೂರು ವೈರ್” ಗೆ ಲಭ್ಯವಾಗಿದೆ.

ತಮ್ಮ ದೂರಿನಲ್ಲಿ ಈ ಕಾರ್ಟೇಲ್ ಗಳನ್ನು ಯಾರು ನಿಯಂತ್ರಿಸುತ್ತಿದ್ದಾರೆ? ಹೇಗೆಲ್ಲಾ ಕಳಪೆ ಸಮವಸ್ತ್ರಗಳನ್ನು ಶಾಲೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ? ಇವುಗಳ ಗುಣಮಟ್ಟ ಎಂತದ್ದು? ಶಾಲಾ ಯೂನಿಫಾರ್ಮ್ ಪೂರೈಕೆ ಮಾಡುವಲ್ಲಿ ಹೊಸ ಪೂರೈಕೆದಾರರನ್ನು ಬರಲು ಬಿಡದಂತೆ ತಡೆಯುವ ಹುನ್ನಾರ ಹೇಗೆ ಮಾಡಲಾಗುತ್ತಿದೆ? ಎಂಬುದನ್ನು ವಿಸ್ತ್ರತವಾಗಿ ತಿಳಿಸಿದ್ದಾರೆ.

“ಪ್ರೌಡ್ ಕರ್ನಾಟಕ ಸಿಟಿಜನ್” ಎಂಬ ಅನಾಮಿಕ ವ್ಯಕ್ತಿ ಕ್ರೈಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಕ್ಕಳ ಶಾಲಾ ಸಮವಸ್ತ್ರ ಪೂರೈಕೆಯಲ್ಲಿ ಹಗರಣದ ಸಂಬಂಧ ರಾಜ್ಯಪಾಲರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸುವಂತೆ ಗೌರ್ನರ್ ಕಚೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದ ದಾಖಲೆ.

ಕಳೆದ ಎಂಟು ವರ್ಷಗಳಿಂದ ಮಲ್ಲಿಕಾರ್ಜುನ್, ಪಾಟೀಲ್, ಶ್ರೀಕಾಂತ್ ಕುರುವಲ್ಲಿ, ಪುಟ್ಟಸ್ವಾಮಿ ಹಾಗೂ ಮಂಜು ಎಂಬುವರು ಕ್ರೈಸ್ ಶಿಕ್ಷಣ ಸಂಸ್ಥೆಗಳ ಸೊಸೈಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿನ ಶಾಲಾ ಮಕ್ಕಳಿಗೆ ಯೂನಿಫಾರ್ಮ್ ನೀಡುವ ಕಾರ್ಯಾದೇಶ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (KHDC)ದ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಕಾರ್ಟೆಲನ್ನು ಮಲ್ಲಿಕಾರ್ಜುನ್ ಎಂಬ ವ್ಯಕ್ತಿ ಉಸ್ತುವಾರಿ ವಹಿಸಿದ್ದು, ಆತನ ಮಗ ಮಂಜು ಕೂಡ ಈ ಕಾರ್ಟೆಲ್ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ಕಾರ್ಟೇಲ್ ಎಷ್ಟು ಪ್ರಬಲವಾಗಿದೆಯೆಂದರೆ ಈ ನಿಯಂತ್ರಣ ಕೂಟವನ್ನು ಬಿಟ್ಟು ಹೊಸ ಅಥವಾ ಹೊರಗಿನ ಪೂರೈಕೆದಾರನಿಗೆ ಈ ಟೆಂಡರ್ ಗಳನ್ನು ಪಡೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೂ ಇದನ್ನು ನಿಯಂತ್ರಿಸಲು ಸಾಧ್ಯವಾಗದು ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಪಾಲಿಸ್ಟರ್ ಕಾಟನ್ ಬದಲಿಗೆ ವಿಸ್ಕೋಸ್ ಕಳಪೆ ಬಟ್ಟೆ ಪೂರೈಕೆ ಆರೋಪ :

ಕ್ರೈಸ್ ಶಿಕ್ಷಣ ಸಂಸ್ಥೆಗಳ ಸೊಸೈಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿನ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಯೂನಿಫಾರ್ಮ್ ಪೂರೈಕೆ ಮಾಡುವುದರೊಂದಿಗೆ ಈ ಕಾರ್ಟೆಲ್ ನಲ್ಲಿನ ವ್ಯಕ್ತಿಗಳು ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ. ಕರ್ನಾಟಕದಲ್ಲಿ 2021-22ನೇ ಸಾಲಿನ ಹಾಗೂ 2022-23ರ ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಕೆ ಮಾಡುವಾಗ ನೀಡಿರುವ ಖರೀದಿ ಆದೇಶದಲ್ಲಿ ಮಕ್ಕಳಿಗೆ ಪಾಲಿಸ್ಟರ್ ಕಾಟನ್ ದರ್ಜೆಯ ಯೂನಿಫಾರ್ಮ್ ಪೂರೈಕೆ ಮಾಡುವಂತೆ ಸ್ಪಷ್ಟವಾಗಿ ಸೂಚನೆ ನೀಡಲಾಗಿತ್ತು. ಆದರೆ ಬಡ ಮಕ್ಕಳೇ ಹೆಚ್ಚಾಗಿ ಓದುವ ಈ ಶಾಲೆಗಳಿಗೆ ಪಾಲಿಸ್ಟರ್ ವಿಸ್ಕೋಸ್ ದರ್ಜೆಯ ಸಮವಸ್ತ್ರಗಳನ್ನು ಪೂರೈಕೆ ಮಾಡಲಾಗಿತ್ತು. ಈ ದರ್ಜೆಯ ಸಮವಸ್ತ್ರವು ಸಾಕಷ್ಟು ಕಳಪೆಯಾಗಿದ್ದು, ಪಾಲಿಸ್ಟರ್ ಕಾಟನ್ ಬೆಲೆಗಿಂತ ಶೇಕಡ 50ರಷ್ಟು ಕಡಿಮೆಯಿದ್ದು, ಮಕ್ಕಳಿಗೆ ಹಾನಿಕಾರಕವಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಕ್ರೈಸ್ ಶಾಲಾ ಮಕ್ಕಳು ಬೆಂಗಳೂರಿನ ಯಲಹಂಕದಲ್ಲಿ ನಡೆದ ಏರ್ ಶೋ-2023 ಕಾರ್ಯಕ್ರಮದಲ್ಲಿ ಶಾಲಾ ಸಮವಸ್ತ್ರದೊಂದಿಗೆ ಭಾಗವಹಿಸಿದ್ದ ಕ್ಷಣ.

ಸ್ಯಾಂಪಲ್ ಟೆಸ್ಟಿಂಗ್ ನಲ್ಲಿ ಸತ್ಯ ಬಯಲು :

ಈ ರೀತಿ ಪೂರೈಕೆ ಮಾಡಿರುವ 100 ಯೂನಿಫಾರ್ಮ್ ಗಳ ಸ್ಯಾಂಪಲ್ ಗಳನ್ನು ಗುಣಮಟ್ಟ ಪರೀಕ್ಷೆಗೆ ನೀಡಿದಾಗ ಕೆಎಚ್ ಡಿಸಿ ನೀಡಿದ ಖರೀದಿ ಆದೇಶದ ಅನ್ವಯ ಒಂದೇ ಒಂದು ಪಾಲಿಸ್ಟರ್ ಕಾಟನ್ ಸಮವಸ್ತ್ರಗಳು ಆ 100 ಬಟ್ಟೆಗಳಲ್ಲಿರಲಿಲ್ಲ. ಬದಲಿಗೆ ಸಂಪೂರ್ಣವಾಗಿ ಪಾಲಿಸ್ಟರ್ ವಿಸ್ಕೋಸ್ ಬಟ್ಟೆಯಾಗಿತ್ತು. ಹೀಗಾಗಿ ಕ್ರೈಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಖುದ್ದಾಗಿ 2021-22 ಹಾಗೂ 2022-23ನೇ ಸಾಲಿನಲ್ಲಿ ಈ ಮೇಲಿನ ಸಂಬಂಧಿಸಿದ ವ್ಯಕ್ತಿಗಳು ಪೂರೈಸಿದ ಯೂನಿಫಾರ್ಮ್ ಗಳನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದರೆ ಸತ್ಯ ತಿಳಿಯುತ್ತದೆ ಎಂದು ಖಾರವಾಗಿ ತಿಳಿಸಿದ್ದಾರೆ.

ಪ್ರತಿವರ್ಷವೂ ಈ ಕಾರ್ಟೆಲ್ ಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಅಡಿಯಿಂದ ಕನಿಷ್ಟ 40 ಕೋಟಿ ರೂ. ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ 15 ಕೋಟಿ ರೂ. ಮೊತ್ತ ಸೇರಿದಂತೆ ಒಟ್ಟು 55 ಕೋಟಿ ರೂ. ಮೊತ್ತದ ಆರ್ಡರ್ ಗಳನ್ನು ಪಡೆಯುತ್ತಾರೆ. ಆದರೆ ಈ ಉತ್ಪಾದಕರು ಕೇವಲ 20 ಕೋಟಿ ರೂ. ಹಣಕ್ಕೆಲ್ಲಾ ಶಾಲಾ ಸಮವಸ್ತ್ರವನ್ನು ಉತ್ಪಾದಿಸುತ್ತಾರೆ. ಬಹಳ ಕೆಟ್ಟ ವಾತಾವರಣದಲ್ಲಿ ಈ ಬಟ್ಟೆಗಳನ್ನು ತಯಾರಿಸಲಾಗುತ್ತಿದೆ. ಉಳಿದ ಹಣವೆಲ್ಲಾ ಇವರಿಗೆ ಲಾಭ….!! ಇದರಿಂದ ಸರ್ಕಾರಕ್ಕೆ ವರ್ಷಂಪ್ರತಿ ಕೋಟ್ಯಾಂತ ರೂಪಾಯಿ ನಷ್ಟವಾಗುತ್ತಿದೆ ಎಂದು ದೂರಿದ್ದಾರೆ.

2023-24ರಲ್ಲೂ ಇದೇ ಪೂರೈಕೆದಾರರಿಗೆ ಆರ್ಡರ್ ಲಭಿಸಿದೆ :

2021-22 ಹಾಗೂ 2022-23ನೇ ಸಾಲಿನಲ್ಲಿ ಪೂರೈಸಿದ ಬಟ್ಟೆಗಳ ಗುಣಮಟ್ಟವನ್ನು ಪರೀಕ್ಷಿಸಿ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಸಮವಸ್ತ್ರಗಳನ್ನು ಪೂರೈಕೆ ಮಾಡುವಂತೆ ಹಲವಾರು ಜನರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದರು. ಆದರೆ ಇದೇ ಕಾರ್ಟೆಲ್ ತಂಡಗಳಿಗೆ ಈ ವರ್ಷವೂ ಶಾಲಾ ಸಮವಸ್ತ್ರ ಪೂರೈಕೆ ಮಾಡಲು ಅವಕಾಶ ದೊರಕಿದೆ. ಆದರೆ ಈ ಬಾರಿ ನಿಗಮದಿಂದ ನೀಡಲಾದ ನಿಗದಿತ ಸೂಚನೆಗಳಲ್ಲಿ ಶೇ.30ರಷ್ಟು ಪಾಲಿಸಿದ್ದು, ಶೇ.70ರಷ್ಟು ಸೂಚನೆಗಳನ್ನು ಪಾಲಿಸಿಲ್ಲ ಎಂದು ರಾಜ್ಯಪಾಲರಿಗೆ ಇ-ಮೇಲ್ ಮೂಲಕ ಸಲ್ಲಿಸಿದ ಕಂಪ್ಲೆಂಟ್ ನಲ್ಲಿ ತಿಳಿಸಲಾಗಿದೆ.

ಈ ಇಲಾಖೆಗಳಲ್ಲಿ ಸದಾ ಬೀಡು ಬಿಡುವ ಕಾರ್ಟೆಲ್ ಸದಸ್ಯರು :

ಕ್ರೈಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಳಪೆ ಗುಣಮಟ್ಟದ ಶಾಲಾ ಸಮವಸ್ತ್ರ ಪೂರೈಕೆ ಸಂಬಂಧ ಕಾರ್ಟೆಲ್ ರಚಿಸಿಕೊಂಡವರ ಉಸ್ತುವಾರಿ ವಹಿಸಿರುವ ಮಲ್ಲಿಕಾರ್ಜುನ್ ಎಂದು ದೂರುದಾರರು ಆರೋಪಿಸಿರುವ ವ್ಯಕ್ತಿ.

ಈ ಕಾರ್ಟೆಲ್ ಎಷ್ಟು ಪ್ರಬಲವಾಗಿದೆಯಂದರೆ ಇದರ ಒಬ್ಬಲ್ಲ ಒಬ್ಬ ಸದಸ್ಯ ಯಾವಾಗಲೂ ಕೆಎಚ್ ಡಿಸಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಚೇರಿ (BCM), ಬಿಬಿಎಂಪಿ ಹಾಗೂ ಕ್ರೈಸ್ ಆಫೀಸ್ ಗಳಲ್ಲಿ ಬೀಡುಬಿಟ್ಟಿರುತ್ತಾರೆ. ಹೊರಗಿನಿಂದ ಹೊಸದಾಗಿ ಶಾಲಾ ಸಮವಸ್ತ್ರ ಪೂರೈಕೆ ಮಾಡಲು ಹೊಸ ಮಾರಾಟಗಾರ ಬಂದು ಈ ಕಚೇರಿಗಳಲ್ಲಿ ರಿಜಿಸ್ಟರ್ ಆಗಲು ಬಿಡುವುದಿಲ್ಲ. ಇದಕ್ಕೆ ಒಂದು ಪ್ರಧಾನ ಸಾಕ್ಷಿಯೆಂದರೆ ಈತನಕ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಸಿಸಿಟಿವಿ ಹಾಕಲು ಈ ಕಾರ್ಟೆಲ್ ಕೂಟ ಅವಕಾಶ ನೀಡಿಲ್ಲ ಎಂದರೆ, ಈ ಕಚೇರಿಗಳ ಅಧಿಕಾರಿ, ಸಿಬ್ಬಂದಿ ಎಷ್ಟರ ಮಟ್ಟಿಗೆ ಇವರ ಕೈಗೊಂಬೆಯಾಗಿ ಕುಣಿಯುತ್ತಿರುವುದು ಇದರಿಂದ ಸ್ಟಷ್ಟವಾಗಿದೆ.

ರಾಜ್ಯ ಸರ್ಕಾರವು ಸ್ಪರ್ಧಾತ್ಮಕ ದರದಲ್ಲಿ ಎಲ್ಲಾ ಮಾರಾಟಗಾರರಿಗೆ ತಮ್ಮ ಉತ್ಪನ್ನಗಳನ್ನು ಪೂರೈಸಲು ಸಮನಾದ ಅವಕಾಶಗಳನ್ನು ಕೊಟ್ಟಿರುವಾಗ ಕೇವಲ ನಾಲ್ಕೈದು ಮಂದಿ ಕಳೆದ ಎಂಟು ಹತ್ತು ವರ್ಷಗಳಿಂದ ಶಾಲಾ ಸಮವಸ್ತ್ರ ಪೂರೈಸುವ ಆರ್ಡರ್ ಗಳನ್ನು ಪಡೆಯುತ್ತಿದ್ದು, ಹೊಸ ಮಾರಾಟಗಾರರು ಈ ಇಲಾಖೆಗಳಲ್ಲಿ ರಿಜಿಸ್ಟರ್ ಮಾಡಲು ಬಿಡದಿರುವುದು ದುರದೃಷ್ಟಕರ ಎಂದು “ಪ್ರೌಡ್ ಕರ್ನಾಟಕ ಸಿಟಿಜನ್” ತಮ್ಮ ಇಮೇಲ್ ನಲ್ಲಿ ತಿಳಿಸಿದ್ದಾರೆ.

ಕಳಪೆ ಸಮವಸ್ತ್ರ ಪೂರೈಕೆ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹ :

ಕಳಪೆ ಸಮವಸ್ತ್ರ ಪೂರೈಕೆ ಸಂಬಂಧ ಸಂಬಂಧಿಸಿದ ಇಲಾಖೆಗಳು ಈ ಕಾರ್ಟೆಲ್ ಸದಸ್ಯರು ಪೂರೈಸಿರುವ ಉತ್ಪನ್ನಗಳ ಬಗ್ಗೆ ಗುಣಮಟ್ಟ ಪರೀಕ್ಷೆ ನಡೆಸಬೇಕು. ಅಲ್ಲಿಯವರೆಗೆ ಇವರಿಗೆ ನೀಡುವ ಬಿಲ್ ಮೊತ್ತವನ್ನು ತಡೆಹಿಡಿಯಬೇಕು. ಒಂದೊಮ್ಮೆ ಈ ಕಾರ್ಟೆಲ್ ಸದಸ್ಯರು ತಪ್ಪಿತಸ್ಥರು ಎಂದು ಕಂಡುಬಂದಲ್ಲಿ, ಇವರನ್ನು ಕಪ್ಪುಪಟ್ಟಿಗೆ ಸೇರಿಸಿ. ಇಲ್ಲವಾದರೆ, ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸುವ ಹೊಸ ಮಾರಾಟಗಾರರಿಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ಈ ಕಾರ್ಟೆಲ್ ಗಳ ಗೂಂಡಾಯಿಸಮ್ ನಿಂದ ಹೊಸಬರು ಕೆಎಚ್ ಡಿಸಿ ಹೊಸ್ತಿಲು ತುಳಿಯಂದಾಗಿದೆ ಎಂದು ಅವರು ದೂರಿದ್ದಾರೆ.

ಶಾಲಾ ಸಮವಸ್ತ್ರ ಪೂರೈಕೆಗೆ ಇ-ಟೆಂಡರ್ ವಿಧಾನ ಬಳಕೆಗೆ ಸಲಹೆ :

ಸರ್ಕಾರವು ಬಡ ಶಾಲಾ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಯೂನಿಫಾರ್ಮ್ ಪೂರೈಸುವ ಸಂಬಂಧ ಹೊಸ ಹೊಸ ದಾರಿಗಳನ್ನು ಕಂಡು ಕೊಳ್ಳಬೇಕಿದೆ. ಇ- ಟೆಂಡರ್ ನಂತಹ ವಿಧಾನಗಳಿಂದ ಯೂನಿಫಾರ್ಮ್ ಖರೀದಿಸಿದಲ್ಲಿ ನೈಜ ಮಾರಾಟಗಾರರು ಟೆಂಡರ್ ನಲ್ಲಿ ಭಾಗವಹಿಸಿ ಗುಣಮಟ್ಟದ ಬಟ್ಟೆಗಳನ್ನು ಕಡಿಮೆ ಬೆಲೆಯಲ್ಲಿ ಪೂರೈಸಿದರೆ, ಸರ್ಕಾರಕ್ಕೆ ಆ ಮೂಲಕ ಕೋಟ್ಯಾಂತರ ರೂಪಾಯಿ ಹಣ ಉಳಿತಾಯವಾಗಲಿದೆ ಎಂದು ಸಲಹೆ ನೀಡಿದ್ದಾರೆ.

ತಮ್ಮಲ್ಲೇ ವಿವಿಧ ಇಲಾಖೆಗಳ ಹಂಚಿಕೆ – ವಾರ್ಷಿಕ ಕನಿಷ್ಠ 250 ಕೋಟಿ ರೂ. ಆರ್ಡರ್ :

ಕಾರ್ಟೆಲ್ ನಲ್ಲಿನ ಸದಸ್ಯರು ಹೇಗೆ ವಿವಿಧ ಇಲಾಖೆಗಳನ್ನು ತಮ್ಮಲ್ಲೇ ವಿಭಾಗಿಸಿಕೊಂಡು ಅಲ್ಲಿ ಸರ್ಕಾರದ ಆರ್ಡರ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಕೆಲವು ಸ್ಯಾಂಪಲ್ ಗಳನ್ನು ದೂರುದಾರರು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ :

ಕ್ರೈಸ್, ಸಮಾಜ ಕಲ್ಯಾಣ ಇಲಾಖೆ ಶಾಲಾ ಸಮವಸ್ತ್ರ ಪೂರೈಕೆ ಮಲ್ಲಿಕಾರ್ಜುನ್ ಕಾರ್ಟೆಲ್ ಗೆ, ಪರಿಶಿಷ್ಠ ಪಂಗಡಗಳ ಇಲಾಖೆ ಶ್ರೀಕಾಂತ್ ಕುರಿವಲ್ಲಿಗೆ ಹಾಗೂ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಚೇರಿ, ಬಿಬಿಎಂಪಿ, ಇತರ ಕಾರ್ಪೊರೇಷನ್ ಗಳು ಮತ್ತು ಎಲೆಕ್ಟ್ರಿಕಲ್ ಬೋರ್ಡ್ ಮಂಡಳಿಗಳಲ್ಲಿ ಸಾಮಗ್ರಿಗಳ ಪೂರೈಕೆ ಚಂದ್ರಶೇಖರ್ ಎಂಬುವರಿಗೆ ಹಂಚಿಕೊಳ್ಳಲಾಗಿದೆ. ಇದು ಕೇವಲ ಸ್ಯಾಂಪಲ್ ಗಳಷ್ಟೆ. ಇದೇ ಐದಾರು ಮಂದಿ ಕಾರ್ಟೆಲ್ ಗಳ ಸದಸ್ಯರು ತಮ್ಮಲ್ಲೇ ಪ್ರತಿವರ್ಷ ವಿವಿಧ ಇಲಾಖೆಗಳಿಂದ ಏನಿಲ್ಲವೆಂದರೂ 250 ಕೋಟಿ ರೂ.ನಷ್ಟು ಆರ್ಡರ್ ಪಡೆಯುತ್ತಾರೆ ಎಂದು “ಪ್ರೌಡ್ ಕರ್ನಾಟಕ ಸಿಟಿಜನ್” ಆರೋಪಿಸಿದ್ದಾರೆ.

ಒಟ್ಟಾರೆ ರಾಜ್ಯದ ಹಳ್ಳಿಗಾಡು, ನಗರ ಪ್ರದೇಶಗಳಲ್ಲಿನ 5 ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಸಿರುವ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯಡಿಯಲ್ಲಿ ರಾಜ್ಯಾದ್ಯಂತ ನೂರಾರು ಶಾಲೆಗಳಿದ್ದು, 2023-24ನೇ ಸಾಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ಒಟ್ಟಾರೆ 2,05,108 (2.05 ಲಕ್ಷ) ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇನ್ನು ಸಮಾಜ ಕಲ್ಯಾಣ ಇಲಾಖೆಯಡಿ ಹಲವು ನಿಗಮಗಳು, ಮಂಡಳಿಗಳು ಬರುತ್ತಿದ್ದು, ಅವುಗಳ ಹಾಸ್ಟೆಲ್ ಗಳಲ್ಲಿ ಲಕ್ಷಾಂತರ ಬಡ ಶಾಲಾ ಮಕ್ಕಳು ಓದುತ್ತಿದ್ದಾರೆ. ಹೀಗಿರುವಾಗ ಸರ್ಕಾರದ ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವಿದೆ. “ಪ್ರೌಡ್ ಕರ್ನಾಟಕ ಸಿಟಿಜನ್” ಆರೋಪಿಸಿದಂತೆ ದುಷ್ಟಕೂಟ ಕಾರ್ಟೆಲ್ ಗಳಿಂದ ಈ ರೀತಿ ಕಳಪೆ ಗುಣಮಟ್ಟ ಸಮವಸ್ತ್ರ ಖರೀದಿ ಮಾಡುವುದಕ್ಕಿಂತ ದೇಶಾದ್ಯಂತ ಪಾರದರ್ಶಕತೆ ಕಾಯ್ದುಕೊಳ್ಳುವ ಇ- ಟೆಂಡರ್, ಇ-ಪ್ರಕ್ಯೂರ್ ಮೆಂಟ್ ವಿಧಾನವನ್ನು ಈ ಖರೀದಿ ವಿಷಯದಲ್ಲೂ ಅಳವಡಿಸಿಕೊಂಡು ಮುಂದುವರೆದರೆ ಶಾಲಾ ಮಕ್ಕಳಿಗೆ ಗುಣಮಟ್ಟದ ಯೂನಿಫಾರ್ಮ್ ಲಭ್ಯವಾಗಲಿದೆ.

ವಿಶಲ್ ಬ್ಲೋವರ್ ಅರ್ಥವೇನು? :

ಒಬ್ಬ ವ್ಯಕ್ತಿ, ಸಾಮಾನ್ಯವಾಗಿ ಉದ್ಯೋಗಿ, ಖಾಸಗಿ ಅಥವಾ ಸಾರ್ವಜನಿಕ ಸಂಸ್ಥೆಯೊಳಗೆ ನಡೆಯುವ ಕಾನೂನುಬಾಹಿರ, ಅನೈತಿಕ, ಅಕ್ರಮ, ಅಸುರಕ್ಷಿತ ಅಥವಾ ಮೋಸದ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುತ್ತಾನೆ. ಆತನನ್ನು ವಿಶಲ್ ಬ್ಲೋವರ್ ಅಥವಾ ಶಿಳ್ಳೆ ಹೊಡೆಯುವವನು

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

Video News | ಆನೇಕಲ್ ಪಟಾಕಿ ದುರಂತ : 12 ಜನ ಸಾವು, ಏಳು ಮಂದಿಗೆ ಗಂಭೀರ ಗಾಯ : ಮೃತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ : ಡಿಸಿಎಂ ಡಿ ಕೆ ಶಿವಕುಮಾರ್

Next Post

Namma Metro News | ಇಂದಿನಿಂದ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ನೇರಳೆ ಮಾರ್ಗದಲ್ಲಿ ಸಂಪೂರ್ಣ ಮೆಟ್ರೋ ಸಂಚಾರ ಆರಂಭ : ಟಿಕೆಟ್ ದರ, ಸಮಯದ ಮಾಹಿತಿ ಇಲ್ಲಿದೆ

Next Post
ನಮ್ಮ ಮೆಟ್ರೊ ರೈಲಿನ ಸಾಂದರ್ಭಿಕ ಚಿತ್ರ

Namma Metro News | ಇಂದಿನಿಂದ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ನೇರಳೆ ಮಾರ್ಗದಲ್ಲಿ ಸಂಪೂರ್ಣ ಮೆಟ್ರೋ ಸಂಚಾರ ಆರಂಭ : ಟಿಕೆಟ್ ದರ, ಸಮಯದ ಮಾಹಿತಿ ಇಲ್ಲಿದೆ

Brand Bengaluru | "ನನ್ನ ಸ್ವತ್ತು", ಸ್ವಯಂ ಚಾಲಿತ ನಕ್ಷೆ ಅನುಮೋದನೆ ಯೋಜನೆ ಜಾರಿ : ಡಿಸಿಎಂ ಡಿ.ಕೆ. ಶಿವಕುಮಾರ್

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d