Monday, June 9, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ದೇಶದ ರಾಷ್ಟ್ರೀಯ ಆರೋಗ್ಯ ನೀತಿಯ ಗಮನ “ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆ” ಅಭಿವೃದ್ಧಿಪಡಿಸುವುದಾಗಿದೆ : ಜೆ.ಪಿ.ನಡ್ಡಾ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

  • Bengaluru Focus

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

    Thug Life | ಕಮಲ್ ಹಾಸನ್ ‘ಥಗ್ ಲೈಫ್’ ಚಿತ್ರಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯವಿಲ್ಲ : ಕ್ಷಮೆ ಕೇಳಲು ನಿರಾಕರಿಸಿದ ನಟ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ದೇಶದ ರಾಷ್ಟ್ರೀಯ ಆರೋಗ್ಯ ನೀತಿಯ ಗಮನ “ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆ” ಅಭಿವೃದ್ಧಿಪಡಿಸುವುದಾಗಿದೆ : ಜೆ.ಪಿ.ನಡ್ಡಾ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

  • Bengaluru Focus

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

    Thug Life | ಕಮಲ್ ಹಾಸನ್ ‘ಥಗ್ ಲೈಫ್’ ಚಿತ್ರಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯವಿಲ್ಲ : ಕ್ಷಮೆ ಕೇಳಲು ನಿರಾಕರಿಸಿದ ನಟ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home Bengaluru Focus

ಬೆಂಗಳೂರಿನ ಲ್ಯಾಂಡ್ ಮಾರ್ಕ್ ಗೆ ಕುತ್ತು? : ಬಸವನಗುಡಿ ವಾರ್ಡ್ ಇನ್ಮುಂದೆ  ದೊಡ್ಡ ಗಣಪತಿ ವಾರ್ಡ್, ಹನುಮಂತನಗರ ವಾರ್ಡ್ ಗವಿಗಂಗಾಧರೇಶ್ವರ ಹೆಸರಿಗೆ ಬದಲಾವಣೆ – ಬಿಬಿಎಂಪಿ 225 ವಾರ್ಡ್ ಪುನರ್ವಿಂಗಡಣೆಯಲ್ಲಿ 16 ವಾರ್ಡ್ ಗಳ ಹೆಸರು ಬದಲು

ಬಿಜೆಪಿ ಶಾಸಕರು ಪ್ರತಿನಿಧಿಸುವ ಮೂರು ವಿಧಾನಸಭಾ ಕ್ಷೇತ್ರದಲ್ಲಿ ತಲಾ ಮೂರು ವಾರ್ಡ್ ಗಳ ಹೆಸರು ಬದಲಾವಣೆ

by Bengaluru Wire Desk
September 25, 2023
in Bengaluru Focus, Public interest
Reading Time: 2 mins read
0
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.25 www.bengaluruwire.com : ಕಾಂಗ್ರೆಸ್ ನೇತೃತ್ವದ ಸರ್ಕಾರ ಬೃಹತ್ ಬೆಂಗಳೂರು ನಗರ ಪಾಲಿಕೆ (BBMP)ಯಲ್ಲಿ 225 ವಾರ್ಡ್ ಪುನರ್ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಸೋಮವಾರ ಪ್ರಕಟಸಿದ್ದು (ಸೆ.25),  ಕರಡು ಅಧಿಸೂಚನೆಯಲ್ಲಿದ್ದ 16 ವಾರ್ಡ್ ಹೆಸರುಗಳನ್ನು ಅಂತಿಮವಾಗಿ ಬದಲಿಸಿದೆ.

ಈ 16 ವಾರ್ಡ್ ಗಳ ಪೈಕಿ 3 ಬಿಜೆಪಿ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಮೂರು ವಾರ್ಡ್‌ಗಳ ಹೆಸರನ್ನು‌ ಮುಲಾಜಿಲ್ಲದೆ ಬದಲಾಯಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ (ಶಾಸಕ ಕೆ.ಗೋಪಾಲಯ್ಯ), ರಾಜಾಜಿನಗರ (ಶಾಸಕ ಎಸ್.ಸುರೇಶ್ ಕುಮಾರ್) ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರ (ಶಾಸಕ ಎಲ್.ಎ ರವಿಸುಬ್ರಮಣ್ಯ) ದಲ್ಲಿ ತಲಾ ಮೂರು ವಾರ್ಡ್ ಗಳ ಹೆಸರು ಬದಲಾವಣೆಯಾಗಿದೆ. ಅದರಲ್ಲೂ ಬಸವನಗುಡಿಯ ಕ್ಷೇತ್ರದಲ್ಲಿ 198ನೇ ವಾರ್ಡ್ ಬಸವನಗುಡಿ ಹೆಸರನ್ನು ದೊಡ್ಡ ಗಣಪತಿಯೆಂದೂ, ಹಲವು ದಶಕಗಳಿಂದ ಸ್ಥಳೀಯ ಜನರಿಗೆ ಹಾಗೂ ಬೆಂಗಳೂರಿನ ಸಂಸ್ಕೃತಿ ಹೆಗ್ಗುರುತಿನ ಹೆಸರಿದ್ದ 200ನೇ ವಾರ್ಡ್ ಗಿರಿನಗರ ಹೆಸರನ್ನು ಸ್ವಾಮಿ ವಿವೇಕಾನಂದ ವಾರ್ಡ್ ಎಂದೂ ಹಾಗೂ ಬಸವನಗುಡಿಗೆ ಕಲಶಪ್ರಾಯವಾಗಿದ್ದ 196ನೇ ವಾರ್ಡ್ ಹನುಮಂತನಗರ ಹೆಸರನ್ನು ಗವಿಗಂಗಾಧರೇಶ್ವರ ಹೆಸರಿಗೆ ಬದಲಾಯಿಸಲಾಗಿದೆ.

ಈ ಹಿಂದೆ 198 ವಾರ್ಡ್ ಹಾಗೂ 243 ವಾರ್ಡ್ ಮಾಡಿದಾಗಲೂ ಗಿರಿನಗರ, ಹನುಮಂತನಗರ ಹಾಗೂ ಬಸವನಗುಡಿ ಹೆಸರುಗಳು ವಾರ್ಡ್ ಪುನರ್ವಿಂಗಡಣೆ ಮಾಡಿದ್ದರೂ ಹಳೆಯ ಹೆಸರುಗಳನ್ನು ತೆಗೆದಿರಲಿಲ್ಲ. ಇದೀಗ 225 ವಾರ್ಡ್ ಗಳ ಅಂತಿಮ ಅಧಿಸೂಚನೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಸರ್ಕಸ್ ಮಾಡಿದೆ. 16 ವಾರ್ಡ್ ಗಳ ಹೆಸರು 225 ವಾರ್ಡ್ ಗಳ ಪುನರ್ ವಿಂಗಡಣೆ ಕರಡು ತಯಾರಿಸುವಾಗ ಇದ್ದ ಹೆಸರು ಅಂತಿಮ ಅಧಿಸೂಚನೆಯಲ್ಲಿ ಬದಲಾವಣೆ ಮಾಡಲಾಗಿದೆ.

16 ವಾರ್ಡ್ ಗಳ ಹೆಸರು ಬದಲಾಗಿರುವ ವಿವರ :

ಕ್ರಮ ಸಂಖ್ಯೆವಿಧಾನಸಭಾ ಕ್ಷೇತ್ರಪುನರ್ವಿಂಗಡಣೆಯಾದ ವಾರ್ಡ್ ಸಂಖ್ಯೆ ಮತ್ತು ಹೆಸರು (ಆವರಣದಲ್ಲಿರುವುದು ಹಳೆಯ ಹೆಸರು)
1)ಮಹಾಲಕ್ಷ್ಮಿಲೇಔಟ್46. ರಾಜೀವ್ ನಗರ (ಮಾರಪ್ಪನಪಾಳ್ಯ)
 47. ಡಾ.ಪುನೀತ್ ರಾಜ್ ಕುಮಾರ್ (ನಂದಿನಿ ಲೇಔಟ್)
 50. ನಾಲ್ವಡಿ ಕೃಷ್ಣರಾಜ ಒಡೆಯರ್ (ಡಾ.ಪುನೀತ್ ರಾಜ್ ಕುಮಾರ್)
2)ರಾಜಾಜಿನಗರ130. ಶ್ರೀ ರಾಮಮಂದಿರ (ಪ್ರಕಾಶ್ ನಗರ)
 131. ಶಿವನಗರ (ಶ್ರೀರಾಮಮಂದಿರ)
 132. ರಾಜಾಜಿನಗರ (ಶಿವನಗರ)
3)ಬಸವನಗುಡಿ196. ಗವಿಗಂಗಾಧರೇಶ್ವರ (ಹನುಮಂತನಗರ)
 198. ದೊಡ್ಡ ಗಣಪತಿ (ಬಸವನಗುಡಿ)
 200. ಸ್ವಾಮಿ ವಿವೇಕಾನಂದ (ಗಿರಿನಗರ)
4)ಮಹದೇವಪುರ98. ಹೂಡಿ (ಬೆಲತ್ತೂರು)
 99. ಭೈರತಿ (ಹೂಡಿ)
5)ಯಶವಂತಪುರ27. ಲಿಂಗಧೀರನಹಳ್ಳಿ (ಬ್ಯಾಡರಹಳ್ಳಿ)
6)ಸರ್ವಜ್ಞನಗರ83.ಸುಬ್ಬಯ್ಯನಪಾಳ್ಯ (ಕೆಎಸ್ ಎಫ್ ಸಿ ಲೇಔಟ್)
7)ಶಿವಾಜಿನಗರ118. ಸಂಪಂಗಿರಾಮನಗರ (ಎಸ್.ಆರ್.ನಗರ)
8)ಶಾಂತಿನಗರ167. ಅಶೋಕ್ ನಗರ (ಶಾಂತಲಾ ನಗರ)
9)ಚಿಕ್ಕಪೇಟೆ165. ಬಿ.ವೆಂಕಟರೆಡ್ಡಿ ನಗರ (ಸೋಮೇಶ್ವರ ನಗರ)

ನಿರೀಕ್ಷೆಯಂತೆಯೇ ನಗರಾಭಿವೃದ್ಧಿ ಇಲಾಖೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸಂಬಂಧಿಸಿದಂತೆ 225 ಕರಡು ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆಯನ್ನು ಆ.18 ರಂದು ಕರ್ನಾಟಕ ರಾಜ್ಯಪತ್ರ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಿತ್ತು. ಈ ಕರಡಿನ ವಾರ್ಡ್ ವಾರು ಪುನರ್ ವಿಂಗಡಣೆ ಕುರಿತಂತೆ ಸಾರ್ವಜನಿಕರು – ಸಂಸ್ಥೆಗಳಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಆಹ್ವಾನಿಸಿತ್ತು. ಬಿಬಿಎಂಪಿ ವಾರ್ಡುಗಳ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಮುಖ್ಯ ಆಯುಕ್ತರಾಗಿರುವ ತುಷಾರ್ ಗಿರಿನಾಥ್, ಆಗಸ್ಟ್ 8ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸರ್ಕಾರಕ್ಕೆ ಆಗಸ್ಟ್ 14ರಂದು ವಾರ್ಡ್ ವಾರು ಕರಡು ಪುನರ್ ವಿಂಗಡಣಾ ವರದಿಯನ್ನು ಸಲ್ಲಿಸಿದ್ದರು. ಇದನ್ನು ಒಪ್ಪಿದ ಸರ್ಕಾರವು 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಕರಡು ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲಾಗಿತ್ತು.

ಬಿಬಿಎಂಪಿ ವ್ಯಾಪ್ತಿಗೆ 2021ರ ನವೆಂಬರ್ 20ರಂದು ವಾರ್ಡುಗಳ ಪುನರ್ ವಿಂಗಡಣೆಗಾಗಿ ರಚಿಸಲಾಗಿದ್ದ ಸಮಿತಿಯ ಶಿಫಾರಸ್ಸಿನ ಅನ್ವಯ, ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು 243 ವಾರ್ಡುಗಳಾಗಿ ವಿಂಗಡಣೆಗೊಳಿಸಿ ಅಧಿಸೂಚಿಸಲಾಗಿತ್ತು. ಆದರೆ ಈ ಅಧಿಸೂಚನೆಯನ್ನು ಪ್ರಶ್ನಿಸಿ, ಅದರ ವಿರುದ್ಧ ದಾಖಲಾಗಿದ್ದ ರಿಟ್ ಅರ್ಜಿಗಳನ್ನು, ಹೈಕೋರ್ಟ್ 2022ರ ಸೆಪ್ಟೆಂಬರ್ 16ರ ಆದೇಶದಲ್ಲಿ ವಜಾಗೊಳಿಸಿತ್ತು. ಈ ಆದೇಶವನ್ನು, ಪ್ರಶ್ನಿಸಿ ಮಾಜಿ ಮೇಯರ್ ಬಿ.ಎಸ್. ಮಂಜುನಾಥ ರೆಡ್ಡಿ ಮತ್ತು ಇತರರು ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ರಿಟ್ ಅಪೀಲು ದಾಖಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ದ್ವಿಸದಸ್ಯ ನ್ಯಾಯಪೀಠ ಈ ವರ್ಷದ ಜೂನ್ 19ರಂದು, ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ ವಿಂಗಡಣೆ ಕುರಿತಂತೆ  ನಿಗದಿತ ಮಾರ್ಗಸೂಚಿಗಳು ಮತ್ತು ಕಾನೂನಿನ ಸಂಬಂಧಿತ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ 12 ವಾರಗಳ ಸಮಯವನ್ನು ನೀಡಿತ್ತು. ಇದರ ಆಧಾರದ ಮೇಲೆ  ರಾಜ್ಯ ಸರ್ಕಾರವು ಪಾಲಿಕೆ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ಗಳ ಪುನರ್ ವಿಂಗಡಣಾ ಆಯೋಗವನ್ನು ಜೂನ್ 23ರಂದು ಪುನರ್ ರಚಿಸಿ ಆದೇಶಿಸಿತ್ತು.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರ ನವೆಂಬರ್ 20ರಂದು 243 ಬಿಬಿಎಂಪಿ ಕೌನ್ಸಿಲರ್ ಗಳನ್ನು ನಿಗದಿಪಡಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದು ಪಾಲಿಕೆ ಪುರಪಿತೃಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಿತ್ತು. ಇದರ ಆಧಾರದ ಮೇಲೆ ಪ್ರಸ್ತುತ 225 ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲಾಗಿದ್ದು, ಸೆ.25ರಂದು ಈ ಬಗ್ಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಹೀಗಾಗಿ ಸೋಮವಾರದಿಂದಲೇ ನಗರದಲ್ಲಿ 225 ವಾರ್ಡ್ ಗಳು ಅಧಿಕೃತವಾಗಿ ಚಾಲ್ತಿಗೆ ಬಂದಂತಾಗಿದೆ.

ಬ್ರಾಂಡ್ ಬೆಂಗಳೂರಿನ ಮೂಲ ಹೆಸರುಗಳ ಬದಲಾವಣೆ ಬಗ್ಗೆ ಮಾಜಿ ಮೇಯರ್ ಹೇಳಿದ್ದೇನು?:

“ಐವತ್ತು ವರ್ಷಗಳ ಹಿಂದೆ ಬಸವನಗುಡಿ ವಾರ್ಡ್ ಹೆಸರು ಬಸವೇಶ್ವರ ಎಂದಾಗಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಈ ವಾರ್ಡ್ ಹೆಸರನ್ನು ಬಸವನಗುಡಿ ಎಂದು ಹೆಸರಿಡಲಾಯಿತು. ಈಗ ದೊಡ್ಡ ಗಣಪತಿ ಎಂದು ಹೆಸರು ಬದಲಾಯಿಸಲಾಗಿದೆ. ಹನುಮಂತ ನಗರ ವಾರ್ಡ್ ನಲ್ಲಿ ಶ್ರೀರಾಮ ಹಾಗೂ ಹನುಮಂತನನ್ನು ಅಪ್ಪಿಕೊಂಡಿಕೊಂಡಿರುವ ಬೃಹದಾಕಾರದ ಪ್ರತಿಮೆಯಿರುವ ಬಹಳ ಹಳೆಯ ದೇವಸ್ಥಾನದಿಂದ ಹನುಮಂತನಗರ ಎಂದೇ ಎಲ್ಲೆಡೆ ಜನ ಜನಿತವಾಗಿತ್ತು. ಈಗ ಅದನ್ನು ಗವಿಗಂಗಾಧರೇಶ್ವರ ಎಂದು ಬದಲಾವಣೆ ಮಾಡಲಾಗಿದೆ. ಅದೇ ರೀತಿ 40 ವರ್ಷಗಳ ಹಿಂದೆ ಕೃಷ್ಣಭಟ್ ಎಂಬುವರು ಲೇಔಟ್ ಮಾಡಿದ್ದ ಸ್ಥಳವನ್ನು ಗಿರಿನಗರ ಮಾಡಲಾಗಿತ್ತು. ಆ ಹೆಸರು ಈಗ ಸ್ವಾಮಿ ವಿವೇಕಾನಂದ ಎಂದು ಹೆಸರು ನೀಡಿದ್ದಾರೆ. ಬೆಂಗಳೂರಿನ ಹೆಗ್ಗುರುತಾಗಿರುವ ಈ ಹೆಸರುಗಳನ್ನು ಬದಲಾಯಿಸಿದ್ದು ಬಹಳ ಬೇಸರದ ಸಂಗತಿ. ಬಿಬಿಎಂಪಿಗೆ ಕೂಡಲೇ ಚುನಾವಣೆ ನಡೆಸಿ ಕೌನ್ಸಿಲ್ ಆಡಳಿತ ಬಂದರೆ ಸಾಮಾನ್ಯ ನಾಗರೀಕರಿಗೆ ಅನುಕೂಲವಾಗಲಿದೆ.”

– ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...
Previous Post

ಕಾವೇರಿ ನೀರು ವಿವಾದ : ನಾಳೆ “ಬೆಂಗಳೂರು ಬಂದ್” ಗೆ 250ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ : ಸೆ.29ಕ್ಕೂ “ಕರ್ನಾಟಕ ಬಂದ್” – ಸಂಘಟನೆಗಳ ಮಧ್ಯೆ ಮೂಡದ ಒಮ್ಮತ

Next Post

BW SPECIAL | BBMP NAMMA CLINIC | ಬಿಬಿಎಂಪಿಯ ನಮ್ಮ ಕ್ಲಿನಿಕ್ ಗಳಲ್ಲಿ ಈವರೆಗೆ 4.84 ಲಕ್ಷ ಹೊರ ರೋಗಿಗಳಿಂದ ಆರೋಗ್ಯ ಸೇವೆ ಬಳಕೆ : ಔಷಧಿ ಕೊರತೆ ನಿವಾರಿಸಲು ಆಗ್ರಹ

Next Post
ಬಿಬಿಎಂಪಿ ನಮ್ಮ ಕ್ಲಿನಿಕ್ ವೊಂದರ ಸಾಂದರ್ಭಿಕ ಚಿತ್ರ.

BW SPECIAL | BBMP NAMMA CLINIC | ಬಿಬಿಎಂಪಿಯ ನಮ್ಮ ಕ್ಲಿನಿಕ್ ಗಳಲ್ಲಿ ಈವರೆಗೆ 4.84 ಲಕ್ಷ ಹೊರ ರೋಗಿಗಳಿಂದ ಆರೋಗ್ಯ ಸೇವೆ ಬಳಕೆ : ಔಷಧಿ ಕೊರತೆ ನಿವಾರಿಸಲು ಆಗ್ರಹ

WildLife News | ಮೈಸೂರು ಸಿಐಡಿ ಅರಣ್ಯ ಘಟಕದಿಂದ ಮನೆಯಲ್ಲಿ ಅಕ್ರಮವಾಗಿ 9 ಜಾತಿಯ ಹಾವು ಹಾಗೂ ಅಪರೂಪದ ಬೆಕ್ಕುಗಳನ್ನು ಸಾಕಿದ್ದ ಓರ್ವನ ಬಂಧನ

Please login to join discussion

Like Us on Facebook

Follow Us on Twitter

Recent News

ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

June 8, 2025
ವಿಧಾನಸೌಧದ ಸಾಂದರ್ಭಿಕ ಚಿತ್ರ

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

June 8, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

June 8, 2025
ವಿಧಾನಸೌಧದ ಸಾಂದರ್ಭಿಕ ಚಿತ್ರ

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

June 8, 2025

ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

June 7, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d