Saturday, May 31, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ: ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ

    ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್

    ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯ ಸಮಸ್ಯೆಗೆ ಶೀಘ್ರ ಪರಿಹಾರ : ಸಚಿವ ಕೆ.ಜೆ.ಜಾರ್ಜ್

    ಅಯೋಧ್ಯೆ: ಜೂನ್ 5 ರಿಂದ ರಾಮಮಂದಿರದಲ್ಲಿ ಏಳು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ; ಸಿಎಂ ಯೋಗಿ ಭಾಗಿ

    ರಾಜ್ಯದಲ್ಲಿ ₹15,441.17 ಕೋಟಿ ಬಂಡವಾಳ ಹೂಡಿಕೆಗೆ ಉನ್ನತಾಧಿಕಾರ ಸಮಿತಿ ಒಪ್ಪಿಗೆ

    ಸಾರ್ವಜನಿಕರಿಗೆ ಸಿಹಿಸುದ್ದಿ: 2ನೇ ಮತ್ತು 4ನೇ ಶನಿವಾರ, ಭಾನುವಾರಗಳಲ್ಲೂ ರಾಜ್ಯದ ಈ 35 ಉಪನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ

    Inspiration News | ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸಿನ ಚಾಲಕನ ಮಗ ಈಗ ಐಎಫ್‌ಎಸ್‌ ಅಧಿಕಾರಿ!

    ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಈಗ ಚುನಾವಣೆಯಾದರೆ ಬಿಜೆಪಿಗೆ ಬಹುಮತ ಸಾಧ್ಯತೆ ; ಸಿದ್ದರಾಮಯ್ಯ ಇನ್ನೂ ಮುಖ್ಯಮಂತ್ರಿ ಆಯ್ಕೆಯಲ್ಲಿ ಟಾಪ್ : ಪೀಪಲ್ಸ್ ಪಲ್ಸ್ ಸಮೀಕ್ಷಾ ವರದಿ

    ಕರೋನಾ ವೈರಸ್ ಗ್ರಾಫಿಕ್ ಚಿತ್ರ

    ಬೆಂಗಳೂರಿನಲ್ಲಿ ಕೋವಿಡ್ ಏರಿಕೆ: ಆತಂಕ ಬೇಡ, ಎಚ್ಚರಿಕೆಯಿರಲಿ ; ಸರ್ಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

  • Bengaluru Focus

    ಮಣಿವಣ್ಣನ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹೆಚ್ಚುವರಿ ಜವಾಬ್ದಾರಿ

    ಕಾಲ್ನಡಿಗೆ ಮೂಲಕ ಕೋರಮಂಗಲ ಸುತ್ತಮುತ್ತ 3.5 ಕಿ.ಮೀ ನಡೆದು ಪಾದಚಾರಿ ಮಾರ್ಗ- ರಸ್ತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್

    BW EXCLUSIVE | ಬೆಂಗಳೂರು ಮಾಸ್ಟರ್ ಪ್ಲಾನ್ ತಿದ್ದುಪಡಿ -2025 ಅಧಿಸೂಚನೆ : ಹೊಸದಾಗಿ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಲಾಭವೇ? ನಷ್ಟವೇ?

    ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್

    ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯ ಸಮಸ್ಯೆಗೆ ಶೀಘ್ರ ಪರಿಹಾರ : ಸಚಿವ ಕೆ.ಜೆ.ಜಾರ್ಜ್

    ಬಿಡಿಎ ಬಡಾವಣೆ ಕುರಿತ ಗ್ರಾಫಿಕ್ಸ್ ಸಾಂದರ್ಭಿಕ ಚಿತ್ರ

    ಅಗತ್ಯವಿರುವ ಮೂಲಸೌಕರ್ಯ ಒದಗಿಸದೆ ಹೊಸ ಬಡಾವಣೆ ಬೇಡ: ಶಾಸಕ ಸುರೇಶ್ ಕುಮಾರ್ ಆಗ್ರಹ

    BW NEWS IMPACT | ಉಲ್ಲಾಳ ಕೆರೆ ಸಂಪರ್ಕಿಸುವ ರಾಜಕಾಲುವೆ ಹೂಳು-ಜೊಂಡಿಗೆ ಮುಕ್ತಿ : ಬೃಹತ್ ನೀರುಗಾಲುವೆ ಸ್ವಚ್ಛತೆ ಆರಂಭ!!

    BW EXCLUSIVE | ಸರ್ಕಾರ ಬದಲಾಗಿದ್ದಕ್ಕೆ ಬೆಂಗಳೂರಿನ ಕೆರೆಗಳ ಪ್ರವಾಹ ನಿಯಂತ್ರಿಸುವ ಸ್ಲೂಸ್ ಗೇಟ್ ಯೋಜನೆಗೆ ಕತ್ತರಿ ಬಿದ್ದಿದೆ!!

    ಕರೋನಾ ವೈರಸ್ ಗ್ರಾಫಿಕ್ ಚಿತ್ರ

    ಬೆಂಗಳೂರಿನಲ್ಲಿ ಕೋವಿಡ್ ಏರಿಕೆ: ಆತಂಕ ಬೇಡ, ಎಚ್ಚರಿಕೆಯಿರಲಿ ; ಸರ್ಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

    ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ಬಿ-ಸ್ಮೈಲ್‌ಗೆ : ತೆರವಾದ ಎರಡು ಸಿಇ ಪೋಸ್ಟ್ ಗಳ ನೇಮಕಕ್ಕೆ ಸರ್ಕಾರ ಆದೇಶ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ: ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ

    ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್

    ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯ ಸಮಸ್ಯೆಗೆ ಶೀಘ್ರ ಪರಿಹಾರ : ಸಚಿವ ಕೆ.ಜೆ.ಜಾರ್ಜ್

    ಅಯೋಧ್ಯೆ: ಜೂನ್ 5 ರಿಂದ ರಾಮಮಂದಿರದಲ್ಲಿ ಏಳು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ; ಸಿಎಂ ಯೋಗಿ ಭಾಗಿ

    ರಾಜ್ಯದಲ್ಲಿ ₹15,441.17 ಕೋಟಿ ಬಂಡವಾಳ ಹೂಡಿಕೆಗೆ ಉನ್ನತಾಧಿಕಾರ ಸಮಿತಿ ಒಪ್ಪಿಗೆ

    ಸಾರ್ವಜನಿಕರಿಗೆ ಸಿಹಿಸುದ್ದಿ: 2ನೇ ಮತ್ತು 4ನೇ ಶನಿವಾರ, ಭಾನುವಾರಗಳಲ್ಲೂ ರಾಜ್ಯದ ಈ 35 ಉಪನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ

    Inspiration News | ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸಿನ ಚಾಲಕನ ಮಗ ಈಗ ಐಎಫ್‌ಎಸ್‌ ಅಧಿಕಾರಿ!

    ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಈಗ ಚುನಾವಣೆಯಾದರೆ ಬಿಜೆಪಿಗೆ ಬಹುಮತ ಸಾಧ್ಯತೆ ; ಸಿದ್ದರಾಮಯ್ಯ ಇನ್ನೂ ಮುಖ್ಯಮಂತ್ರಿ ಆಯ್ಕೆಯಲ್ಲಿ ಟಾಪ್ : ಪೀಪಲ್ಸ್ ಪಲ್ಸ್ ಸಮೀಕ್ಷಾ ವರದಿ

    ಕರೋನಾ ವೈರಸ್ ಗ್ರಾಫಿಕ್ ಚಿತ್ರ

    ಬೆಂಗಳೂರಿನಲ್ಲಿ ಕೋವಿಡ್ ಏರಿಕೆ: ಆತಂಕ ಬೇಡ, ಎಚ್ಚರಿಕೆಯಿರಲಿ ; ಸರ್ಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

  • Bengaluru Focus

    ಮಣಿವಣ್ಣನ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹೆಚ್ಚುವರಿ ಜವಾಬ್ದಾರಿ

    ಕಾಲ್ನಡಿಗೆ ಮೂಲಕ ಕೋರಮಂಗಲ ಸುತ್ತಮುತ್ತ 3.5 ಕಿ.ಮೀ ನಡೆದು ಪಾದಚಾರಿ ಮಾರ್ಗ- ರಸ್ತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್

    BW EXCLUSIVE | ಬೆಂಗಳೂರು ಮಾಸ್ಟರ್ ಪ್ಲಾನ್ ತಿದ್ದುಪಡಿ -2025 ಅಧಿಸೂಚನೆ : ಹೊಸದಾಗಿ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಲಾಭವೇ? ನಷ್ಟವೇ?

    ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್

    ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯ ಸಮಸ್ಯೆಗೆ ಶೀಘ್ರ ಪರಿಹಾರ : ಸಚಿವ ಕೆ.ಜೆ.ಜಾರ್ಜ್

    ಬಿಡಿಎ ಬಡಾವಣೆ ಕುರಿತ ಗ್ರಾಫಿಕ್ಸ್ ಸಾಂದರ್ಭಿಕ ಚಿತ್ರ

    ಅಗತ್ಯವಿರುವ ಮೂಲಸೌಕರ್ಯ ಒದಗಿಸದೆ ಹೊಸ ಬಡಾವಣೆ ಬೇಡ: ಶಾಸಕ ಸುರೇಶ್ ಕುಮಾರ್ ಆಗ್ರಹ

    BW NEWS IMPACT | ಉಲ್ಲಾಳ ಕೆರೆ ಸಂಪರ್ಕಿಸುವ ರಾಜಕಾಲುವೆ ಹೂಳು-ಜೊಂಡಿಗೆ ಮುಕ್ತಿ : ಬೃಹತ್ ನೀರುಗಾಲುವೆ ಸ್ವಚ್ಛತೆ ಆರಂಭ!!

    BW EXCLUSIVE | ಸರ್ಕಾರ ಬದಲಾಗಿದ್ದಕ್ಕೆ ಬೆಂಗಳೂರಿನ ಕೆರೆಗಳ ಪ್ರವಾಹ ನಿಯಂತ್ರಿಸುವ ಸ್ಲೂಸ್ ಗೇಟ್ ಯೋಜನೆಗೆ ಕತ್ತರಿ ಬಿದ್ದಿದೆ!!

    ಕರೋನಾ ವೈರಸ್ ಗ್ರಾಫಿಕ್ ಚಿತ್ರ

    ಬೆಂಗಳೂರಿನಲ್ಲಿ ಕೋವಿಡ್ ಏರಿಕೆ: ಆತಂಕ ಬೇಡ, ಎಚ್ಚರಿಕೆಯಿರಲಿ ; ಸರ್ಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

    ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ಬಿ-ಸ್ಮೈಲ್‌ಗೆ : ತೆರವಾದ ಎರಡು ಸಿಇ ಪೋಸ್ಟ್ ಗಳ ನೇಮಕಕ್ಕೆ ಸರ್ಕಾರ ಆದೇಶ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home BW Special

BW Special | Tirupati Karnataka Bhvana Rooms | ರಾಜ್ಯದ ತಿರುಪತಿ ಭಕ್ತರಿಗೆ ಗುಡ್ ನ್ಯೂಸ್ : ಆಗಸ್ಟ್ ವೇಳೆಗೆ ತಿರುಪತಿಯಲ್ಲಿ ಕರ್ನಾಟಕ ಭವನದ 194 ಸುಸಜ್ಜಿತ ಕೊಠಡಿಗಳು ಭಕ್ತರಿಗೆ ಲಭ್ಯ

ಮುಜರಾಯಿ ಇಲಾಖೆಯು ರಾಜ್ಯದ ಬಡವರ್ಗದ ಯಾತ್ರಾರ್ಥಿಗಳಿಗಾಗಿ 50 ಕೊಠಡಿಗಳನ್ನು ಮೀಸಲಿಟ್ಟು, ಅದಕ್ಕೆ ಕಡಿಮೆ ಬಾಡಿಗೆ ದರ ವಿಧಿಸುವ ಚಿಂತನೆ ನಡೆಸುತ್ತಿದೆ.

by Bengaluru Wire Desk
June 30, 2023
in BW Special, Public interest
Reading Time: 2 mins read
0
ತಿರುಪತಿ ತಿರುಮಲದಲ್ಲಿನ ಕರ್ನಾಟಕ ಭವನದಲ್ಲಿ ನೂತನವಾಗಿ ಅಭಿವೃದ್ಧಿಯಾಗುತ್ತಿರುವ ಕೊಠಡಿಗಳ ಚಿತ್ರ.

ತಿರುಪತಿ ತಿರುಮಲದಲ್ಲಿನ ಕರ್ನಾಟಕ ಭವನದಲ್ಲಿ ನೂತನವಾಗಿ ಅಭಿವೃದ್ಧಿಯಾಗುತ್ತಿರುವ ಕೊಠಡಿಗಳ ಚಿತ್ರ.

ತಿರುಪತಿ , ಜೂ.29 www.bengalruwire.com : ತಿರುಮಲ ತಿರುಪತಿಯಲ್ಲಿ ರಾಜ್ಯದ ಯಾತ್ರಾರ್ತಿಗಳಿಗೆ ಎರಡು ಬ್ಲಾಕ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ವಸತಿ ಕೊಠಡಿಗಳ ನಿರ್ಮಾಣ ಕಾರ್ಯ, ಕಲ್ಯಾಣ ಮಂಟಪ, ಊಟದ ಮನೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳು 2024ರ ಏಪ್ರಿಲ್- ಮೇ ತಿಂಗಳಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕದ ಯಾತ್ರಾರ್ಥಿಗಳ ಅನುಕೂಲಕ್ಕೆಂದು 132 ಕೊಠಡಿಗಳ ಮೊದಲ ಬ್ಲಾಕ್ ಹಾಗೂ 110 ಕೊಠಡಿಗಳ ಎರಡನೇ ಬ್ಲಾಕ್, 36 ವಿವಿಐಪಿ ರೂಮ್ ಗಳಿರುವ ಸೂಟ್ ಬ್ಲಾಕ್, 500 ಜನರು ಕೂರಬಹುದಾದ ಕಲ್ಯಾಣ ಮಂಟಪ ಹಾಗೂ 250 ಮಂದಿ ಸಾಮರ್ಥ್ಯದ ಊಟದ ಹಾಲ್, 13 ಕೊಠಡಿಗಳನ್ನು, 12 ವಸತಿ ನಿಲಯಗಳನ್ನು  (Dormitories) ನಿರ್ಮಿಸುತ್ತಿದೆ. ಅಲ್ಲದೆ ಕರ್ನಾಟಕ ಭವನದ 84 ಕೊಠಡಿಗಳ ನವೀಕರಣ ಕಾರ್ಯ ನಡೆಯುತ್ತಿದೆ. ಒಟ್ಟಾರೆ 220 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಮುಜರಾಯಿ ಇಲಾಖೆಯು ಅನುದಾನ ನೀಡುತ್ತಿದ್ದು, ಈ ಕಾಮಗಾರಿಯನ್ನು ಟಿಟಿಡಿ ದೇವಸ್ಥಾನ ಟ್ರಸ್ಟ್ ನಡೆಸುತ್ತಿದೆ. ಸದ್ಯ ಕರ್ನಾಟಕದ ಯಾತ್ರಾರ್ಥಿಗಳಿಗೆ ಕರ್ನಾಟಕ ಭವನದಲ್ಲಿ ಕೇವಲ 24 ಕೊಠಡಿಗಳಷ್ಟೇ ಲಭ್ಯವಿದೆ.

ಹೊಸ ಮತ್ತು ಹಳೆಯ ಕೊಠಡಿ ಅಭಿವೃದ್ಧಿ ಕಾರ್ಯಗಳ ಸ್ಥಿತಿಗತಿ :

ಈಗಾಗಲೇ ಕರ್ನಾಟಕ ಭವನದ ಹಳೆಯ 84 ಕೊಠಡಿಗಳ ನವೀಕರಣ ಕಾಮಗಾರಿ ಪೈಕಿ 24 ಕೊಠಡಿಗಳು ಪೂರ್ಣವಾಗಿದ್ದು, 29 ರೂಮುಗಳ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಉಳಿದ 29 ಕೊಠಡಿಗಳು ಸೇರಿದಂತೆ 84 ರೂಮ್ ಗಳ ರಿನೋವೇಶನ್ ಪೂರ್ಣಗೊಳ್ಳಲಿದೆ. ಅದೇ ರೀತಿ ಎರಡನೇ ಬ್ಲಾಕ್ ನಲ್ಲಿನ 110 ಕೊಠಡಿಗಳ ನಿರ್ಮಾಣ ಕಾರ್ಯ ಅಂತಿಮ ಘಟ್ಟದಲ್ಲಿದೆ. ಪ್ರಸ್ತುತ ಈ ಬ್ಲಾಕ್ ನಲ್ಲಿ ಪ್ಲಂಬಿಂಗ್ ಕಾರ್ಯ, ಪೈಂಟಿಂಗ್ ಹಾಗೂ ಪೀಠೋಪಕರಣಗಳ ಜೋಡಣಾ ಕಾರ್ಯಗಳು ನಡೆಯುತ್ತಿವೆ. ಆಗಸ್ಟ್ 15ರ ವೇಳೆಗೆ ಈ ಬ್ಲಾಕ್ ಉದ್ಘಾಟನೆಗೊಳ್ಳಲಿದ್ದು, ಬಳಿಕ ರಾಜ್ಯದ ಯಾತ್ರಾರ್ಥಿಗಳ ಬಳಕೆಗೆ ಲಭ್ಯವಾಗಲಿದೆ. ಒಟ್ಟಾರೆ ಆಗಸ್ಟ್ ವೇಳೆಗೆ ರಾಜ್ಯದ ಭಕ್ತರಿಗೆ 194 ಸುಸಜ್ಜಿತ ಕೊಠಡಿಗಳು ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕಾಮಗಾರಿ ನಡೆಯುತ್ತಿರುವ ಹಾಗೂ ಪೂರ್ಣಗೊಂಡ ಕಟ್ಟಡದ ಚಿತ್ರಗಳು ಈ ಕೆಳಗಿನ ಫೊಟೋ ಸ್ಲೈಡಿಂಗ್ ನಲ್ಲಿದೆ :

ಒಂದನೇ ಬ್ಲಾಕ್ ನಲ್ಲಿ ಸದ್ಯ ಪ್ರೀಕ್ಯಾಸ್ಟ್ ಗೋಡೆಗಳನ್ನು ನಿರ್ಮಿಸುವ ಕಾರ್ಯ ಪೂರ್ಣಗೊಂಡಿದ್ದು, ನೆಲಹಾಸು ಹಾಕುವ, ಗೋಡೆಗಳಿಗೆ ಬಣ್ಣ ಬಳೆಯುವ, ನೀರು ಪೂರೈಕೆಯ ಪೈಪ್ ಹಾಗೂ ಒಳಚರಂಡಿ ಪೈಪ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಏಪ್ರಿಲ್- ಮೇ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕಳೆದ ವರ್ಷದ ಪ್ರವಾಹ ಪರಿಸ್ಥಿತಿ- ಎತ್ತರದ ಪ್ರದೇಶದಲ್ಲಿ ಸಾಗಣೆ ಸವಾಲು :

ಈ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಹೊಣೆಯನ್ನು ತಿರುಪತಿ ತಿರುಮಲದ ಟಿಟಿಡಿ ಸಂಸ್ಥೆಯು ವಹಿಸಿಕೊಂಡಿದ್ದು, ಮುಜರಾಯಿ ಇಲಾಖೆಯು 2021ರ ಡಿಸೆಂಬರ್ 27ರಂದು ಈ ಯೋಜನೆ ಅನುಷ್ಠಾನವನ್ನು ಎರಡು ವರ್ಷದ ಒಳಗಾಗಿ ಅಂದರೆ ಡಿಸೆಂಬರ್ 2023ರ ಒಳಗೆ ಪೂರ್ಣಗೊಳಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ 2022ರಲ್ಲಿ ಸತತ ಮೂರು ತಿಂಗಳು ಕಾಲ ತಿರುಮಲದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ, ಬೆಟ್ಟ ಪ್ರದೇಶವಾಗಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಸಾಮಗ್ರಿಗಳನ್ನು ಟ್ರಕ್ ಗಳಲ್ಲಿ ತಿರುಮಲಕ್ಕೆ ಸಾಗಿಸುವುದು ಒಂದು ಸವಾಲಾಗಿದೆ. ಹೀಗಾಗಿ ಕಾಮಗಾರಿಯಲ್ಲಿ ಕೊಂಚ ವಿಳಂಬವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

50 ಕೊಠಡಿಗಳಿಗೆ ಕಡಿಮೆ ದರ ವಿಧಿಸುವ ಸಾಧ್ಯತೆ? :

ತಿರುಪತಿಯ ಜಗದ್ವಿಖ್ಯಾತ ಶ್ರೀ ವೆಂಕಟೇಶ್ವರನ ದರ್ಶನಕ್ಕೆಂದು ದೇಶ, ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ತಿರುಮಲಕ್ಕೆ ಭೇಟಿ ಕೊಡುತ್ತಾರೆ. ಅದರಲ್ಲೂ ರಾಜ್ಯದ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಸಾವಿರಾರು ಬಡವರು ಮತ್ತು ಮಧ್ಯಮ ವರ್ಗದವರು ವೆಂಕಟೇಶ್ವರ ದರ್ಶನಕ್ಕೆ ರಾಜ್ಯದಿಂದ ಆಗಮಿಸುತ್ತಾರೆ. ಈ ವರ್ಗದವರ ದೃಷ್ಟಿಯಿಂದ ನವೀಕರಣಗೊಂಡ 50 ರೂಮುಗಳಿಗೆ ಕಡಿಮೆ ದರ ವಿಧಿಸುವ ಚಿಂತನೆಯಿದೆ. ಅಲ್ಲದೆ ಹೊಸದಾಗಿ ನಿರ್ಮಿಸುವ ವಿವಿಧ ಸೌಲಭ್ಯಗಳ ಕೊಠಡಿಗಳಿಗೆ ಪ್ರತಿದಿನಕ್ಕೆ 1,100 ರೂ.ನಿಂದ 6,000 ರೂ. ತನಕ ಬಾಡಿಗೆ ದರ ವಿಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : Chandrayan-3 Moon Mission | ಚಂದ್ರಯಾನ-3ಕ್ಕೆ ಮುಹೂರ್ತ ಫಿಕ್ಸ್ : ಜು.13ಕ್ಕೆ ನಭಕ್ಕೆ ಚಿಮ್ಮಲಿದೆ GSLV MK-3

ತಿರುಮಲ ಬೆಟ್ಟದ ಕೆಳಗೂ ರಾಜ್ಯದ ಆಸ್ತಿ ಅಭಿವೃದ್ಧಿ :

ತಿರುಪತಿ ಬೆಟ್ಟದ ಕೆಳಗೆ ರಾಜ್ಯ ಸರ್ಕಾರದ ಆಸ್ತಿ ಇದೆ. ಅದನ್ನು ಕೂಡ ಅಭಿವೃದ್ಧಿಪಡಿಸಿ ಅದರಿಂದ ಬರುವ ಆದಾಯವನ್ನು ತಿರುಮಲದಲ್ಲಿರುವ ಕರ್ನಾಟಕ ಭವನ ನಿರ್ವಹಣೆಗೆ ಬಳಸುವ ಬಗ್ಗೆ ಚಿಂತಿಸಲಾಗುತ್ತಿದೆ. ತಿರುಮಲದಲ್ಲಿ ಬೇರೆ ರಾಜ್ಯಗಳು ಹೊಂದಿರುವ ಆಸ್ತಿಗಳಿಗೆ ಹೋಲಿಸಿದರೆ ಕರ್ನಾಟಕ ಅತಿ ಹೆಚ್ಚಿನ ಆಸ್ತಿ ಅಂದರೆ ಸುಮಾರು ಏಳು ಎಕರೆ ಜಾಗ ಹೊಂದಿದೆ ಇದನ್ನು ಯಾತ್ರಾರ್ಥಿಗಳ ಸೌಲಭ್ಯ ಹಾಗೂ ಅನುಕೂಲಕ್ಕೆ ಬಳಸಿಕೊಳ್ಳ ಬೇಕು ಎನ್ನುವ ನಿಟ್ಟಿನಲ್ಲಿ ಇನ್ನೂ ಅನೇಕ ಕ್ರಮ ಕೈಗೊಳ್ಳುವ ಆಲೋಚನೆ ಇದೆಎಂದು ಯಲಹಂಕ ಶಾಸಕರೂ ಆಗಿರುವ ಟಿಟಿಡಿ ಸದಸ್ಯ ವಿಶ್ವನಾಥ್ ಈ ಹಿಂದೆ ತಿರುಪತಿ ತಿರುಮಲದಲ್ಲಿ ಮುಜರಾಯಿ ಇಲಾಖೆಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದಾಗ ತಿಳಿಸಿದ್ದರು.

ಮುಜರಾಯಿ ಆಯುಕ್ತರು ಏನಂತಾರೆ?:

“ರಾಜ್ಯದ ಭಕ್ತರಿಗಾಗಿ ತಿರುಪತಿ ತಿರುಮಲದಲ್ಲಿ ನಮ್ಮ ಇಲಾಖೆಯ ಅನುದಾನದಲ್ಲಿ 362 ಕೊಠಡಿಗಳು ಲಭ್ಯವಾಗುವ ಕಾಮಗಾರಿ ಪ್ರಸ್ತುತ ಚಾಲ್ತಿಯಲ್ಲಿದೆ. ಈ ಎಲ್ಲಾ ಕಾಮಗಾರಿಗಳು ಮುಂದಿನ ವರ್ಷದ ಜನವರಿ- ಫೆಬ್ರವರಿ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಕಾಮಗಾರಿಗಳನ್ನು ಟಿಟಿಡಿ ವತಿಯಿಂದ ಕೈಗೊಳ್ಳಲಾಗುತ್ತಿದೆ. ನೈಸರ್ಗಿಕ ಕಾರಣಗಳಿಂದಾಗಿ ಕಾಮಗಾರಿಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೂ ದೊಡ್ಡ ಯೋಜನೆಯಾದ ಕಾರಣ ಸ್ವಲ್ಪ ಮಟ್ಟಿಗಿನ ವಿಳಂಬ ಸರ್ವೇ ಸಾಮಾನ್ಯ. ಯೋಜನೆ ಸಂಪೂರ್ಣವಾದರೆ ರಾಜ್ಯದ ಯಾತ್ರಾರ್ಥಿಗಳಿಗೆ ಬಹಳ ಪ್ರಯೋಜಕಾರಿಯಾಗಲಿದೆ. ಮೊದಲ ಹಂತದಲ್ಲಿ 110 ಕೊಠಡಿಗಳ ಬ್ಲಾಕ್ ಆಗಸ್ಟ್ ವೇಳೆಗೆ ಉದ್ಘಾಟನೆಯಾಗುವುದು. 84 ಕೊಠಡಿಗಳ ನವೀಕರಣ ಕಾರ್ಯವೂ ಪೂರ್ಣಗೊಳ್ಳುತ್ತದೆ.”

  • ಬಸವರಾಜೇಂದ್ರ.ಎಚ್, ಆಯುಕ್ತರು, ಮುಜರಾಯಿ ಇಲಾಖೆ

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...

Previous Post

Chandrayan-3 Moon Mission | ಚಂದ್ರಯಾನ-3ಕ್ಕೆ ಮುಹೂರ್ತ ಫಿಕ್ಸ್ : ಜು.13ಕ್ಕೆ ನಭಕ್ಕೆ ಚಿಮ್ಮಲಿದೆ GSLV MK-3

Next Post

NICE ROAD TOLL FEES HIKE | ನೈಸ್ ರಸ್ತೆ ಟೋಲ್ ದರ ಶೇ.13ರಷ್ಟು ಏರಿಕೆ : ಜು.1ನೇ ರಿಂದಲೇ ಪರಿಷ್ಕೃತ ಸುಂಕ ಜಾರಿ

Next Post
ನೈಸ್ ರಸ್ತೆಯ ಸಾಂದರ್ಭಿಕ ಚಿತ್ರ

NICE ROAD TOLL FEES HIKE | ನೈಸ್ ರಸ್ತೆ ಟೋಲ್ ದರ ಶೇ.13ರಷ್ಟು ಏರಿಕೆ : ಜು.1ನೇ ರಿಂದಲೇ ಪರಿಷ್ಕೃತ ಸುಂಕ ಜಾರಿ

ನಟಿ ತಮನ್ನಾ ಮತ್ತು ನಟ ವಿಜಯ್ ವರ್ಮಾ ಲಸ್ಟ್ ಸ್ಟೋರಿಸ್ 2 ಚಿತ್ರದ ದೃಶ್ಯ

Lust Stories 2 | ‘ಲಸ್ಟ್ ಸೋರಿಸ್ 2’ ಸರಣಿ ಚಿತ್ರದಲ್ಲಿ ತಮನ್ನಾ, ವಿಜಯ್ ವರ್ಮಾ ಬೋಲ್ಡ್ ದೃಶ್ಯಗಳು "ಆ" ಸೈಟಿಗೆ ಅಪಲೋಡ್?

Please login to join discussion

Like Us on Facebook

Follow Us on Twitter

Recent News

ಮಣಿವಣ್ಣನ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹೆಚ್ಚುವರಿ ಜವಾಬ್ದಾರಿ

May 30, 2025

ಕಾಲ್ನಡಿಗೆ ಮೂಲಕ ಕೋರಮಂಗಲ ಸುತ್ತಮುತ್ತ 3.5 ಕಿ.ಮೀ ನಡೆದು ಪಾದಚಾರಿ ಮಾರ್ಗ- ರಸ್ತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್

May 30, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಮಣಿವಣ್ಣನ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹೆಚ್ಚುವರಿ ಜವಾಬ್ದಾರಿ

May 30, 2025

ಕಾಲ್ನಡಿಗೆ ಮೂಲಕ ಕೋರಮಂಗಲ ಸುತ್ತಮುತ್ತ 3.5 ಕಿ.ಮೀ ನಡೆದು ಪಾದಚಾರಿ ಮಾರ್ಗ- ರಸ್ತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್

May 30, 2025

BW EXCLUSIVE | ಬೆಂಗಳೂರು ಮಾಸ್ಟರ್ ಪ್ಲಾನ್ ತಿದ್ದುಪಡಿ -2025 ಅಧಿಸೂಚನೆ : ಹೊಸದಾಗಿ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಲಾಭವೇ? ನಷ್ಟವೇ?

May 30, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d