Monday, March 9, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

  • Bengaluru Focus

    ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಸಾಲಬಾಧೆ ತಾಳಲಾರದೆ ಬೆಂಗಳೂರಿನ 50 ವರ್ಷದ ವ್ಯಕ್ತಿ ಆತ್ಮಹತ್ಯೆ

    Positive News | ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ಮನೆಯಲ್ಲಿ ಸಿಲುಕಿದ್ದ ಪುಟ್ಟ ಮಕ್ಕಳ ರಕ್ಷಣೆ; ಕಳೆದುಹೋದ ಮೊಬೈಲ್ ಕ್ಷಣಾರ್ಧದಲ್ಲಿ ವಾಪಸ್

    ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

    GBA News | ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ ಚುನಾವಣೆಗೆ ದಿನಗಣನೆ ಆರಂಭ: ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

  • Bengaluru Focus

    ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಸಾಲಬಾಧೆ ತಾಳಲಾರದೆ ಬೆಂಗಳೂರಿನ 50 ವರ್ಷದ ವ್ಯಕ್ತಿ ಆತ್ಮಹತ್ಯೆ

    Positive News | ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ಮನೆಯಲ್ಲಿ ಸಿಲುಕಿದ್ದ ಪುಟ್ಟ ಮಕ್ಕಳ ರಕ್ಷಣೆ; ಕಳೆದುಹೋದ ಮೊಬೈಲ್ ಕ್ಷಣಾರ್ಧದಲ್ಲಿ ವಾಪಸ್

    ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

    GBA News | ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ ಚುನಾವಣೆಗೆ ದಿನಗಣನೆ ಆರಂಭ: ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

Google India Top Searches In 2022 | ಗೂಗಲ್ ನಲ್ಲಿ 2022ರ ವರ್ಷದಲ್ಲಿ ಅತಿಹೆಚ್ಚು ಸರ್ಚ್ ಮಾಡಿದ ಟಾಪ್-5 ಚಿತ್ರಗಳು ಯಾವುದು? ಸೆಲೆಬ್ರೆಟಿಗಳು ಯಾರು? ಸುದ್ದಿಗಳು ಯಾವುದು ಗೊತ್ತಾ? ಇಲ್ಲಿದೆ Interesting ಮಾಹಿತಿ

by Bengaluru Wire Desk
December 29, 2022
in BW Special, Public interest
Reading Time: 2 mins read
0
ಗೂಗಲ್ ಟ್ರೆಂಡ್ಸ್ ಚಿತ್ರ

ಗೂಗಲ್ ಟ್ರೆಂಡ್ಸ್ ಚಿತ್ರ

ಬೆಂಗಳೂರು, ಡಿ.29 www.bengaluruwire.com : ಕರೋನಾ ಸೋಂಕು ಹರಡುವ ಭೀತಿಯ ನಡುವೆಯೇ ಎಲ್ಲರೂ ಹೊಸ ವರ್ಷ 2023ರನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ. 2022ರ ಅಂತ್ಯದಲ್ಲಿರುವ ಸಂದರ್ಭದಲ್ಲಿ ಈ ವರ್ಷ ಗೂಗಲ್ ಇಂಡಿಯಾ(Google India) ದಲ್ಲಿ ಅತಿಹೆಚ್ಚು ಟ್ರೆಂಡಿಂಗ್ (Trending) ಆಗಿರೋ ವಿಷಯಗಳು ಯಾವುದು? ಜನರು ಗೂಗಲ್ ನಲ್ಲಿ ಯಾವುದನ್ನು ಹುಡುಕಲು ಹೆಚ್ಚು ಕಾತುರರಾಗಿದ್ದರು?  ಇಲ್ಲಿದೆ ಕುತೂಹಲಕಾರಿ ಅಂಶಗಳು.

ಟಾಪ್-5 ಸರ್ಚಸ್ ವಿಷಯಗಳು :

ಭಾರತದಲ್ಲಿ 2022ರಲ್ಲಿ ಗೂಗಲ್ ನಲ್ಲಿ ಜನರು ಅತಿಹೆಚ್ಚು ಹುಡುಕಾಟ ನಡೆಸಿದ ಟಾಪ್-5 ಸರ್ಚಸ್ (Searches) ಯಾವುದು ಗೊತ್ತಾ? 1) ಇಂಡಿಯನ್ ಪ್ರಿಮಿಯರ್ ಲೀಗ್ (Indian Premier League), 2) ಕೋವಿನ್ (COWIN), 3) ಫೀಫಾ ವರ್ಲ್ಡ್ ಕಪ್ (FIFA WORLD CUP), 4) ಏಷ್ಯಾ ಕಪ್ (ASIA CUP), 5) ಐಸಿಸಿ ಟಿ20 ವರ್ಲ್ಡ್ ಕಪ್ (ICC T20 WORLD CUP) ಎಂಬ ಕ್ರೀಡಾ ವಿಚಾರಗಳ ಬಗ್ಗೆ ಅತಿಹೆಚ್ಚು ಹುಡುಕಾಟ ನಡೆಸಿದ್ದರು ಎಂದು ಗೂಗಲ್ ಟ್ರೆಂಡ್ ತಿಳಿಸಿದೆ.

ಕಾಂತಾರ ಚಿತ್ರದ ಪೋಸ್ಟರ್

ಗೂಗಲ್ ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಚಲನಚಿತ್ರಗಳು ಯಾವುದು? :

2022 ಇಸವಿಯಲ್ಲಿ ಭಾರತೀಯರು ಗೂಗಲ್ ನಲ್ಲಿ ಹುಡುಕಿದ ಟಾಪ್-1 ಚಿತ್ರಗಳಲ್ಲಿ ‘ಬ್ರಹ್ಮಾಸ್ತ್ರ : ಭಾಗ ಒಂದು’ ಚಲನ ಚಿತ್ರವು ಮೊದಲ ಸ್ಥಾನದಲ್ಲಿದೆ(Brahmhastra : Part One Shiva). 2) ಕೆಜಿಎಫ್ – 2 ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಜಗತ್ತಿನಾದ್ಯಂತ ತೆರೆಕಂಡ ಯಶಸ್ವಿ ಕನ್ನಡ ಚಲನಚಿತ್ರ (K.G.F : Chapter 2) 3) 1990ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ನರಮೇಧವನ್ನು ಚಿತ್ರೀಕರಿಸಿರುವ ಚಿತ್ರ ‘ಕಾಶ್ಮೀರಿ ಫೈಲ್ಸ್’  (The Kashmir Files) 4) ನೆಟ್ಟಿಗರು ಅತಿಹೆಚ್ಚು ಸರ್ಚ್ ಮಾಡಿದ ನಾಲ್ಕನೇ ಚಿತ್ರ ಎಸ್.ಎಸ್.ರಾಜಮೌಳಿ ನಿರ್ದೇಶನ ತೆಲುಗಿನ ಚಿತ್ರ ‘ಆರ್ ಆರ್ ಆರ್’ ಆಗಿದೆ (RRR) 5) ಇನ್ನು ಕನ್ನಡ ಭಾಷೆಯ ‘ಕಾಂತಾರ’ (Kantara) ಬಾಕ್ಸ್ ಆಫೀಸ್ ಗಳಿಕೆ ಹಾಗೂ ಚಿತ್ರರಸಿಕರನ್ನು ಅತಿಹೆಚ್ಚು ಸೆಳೆದ ಚಿತ್ರವಾಗಿದ್ದು, ಗೂಗಲ್ ನಲ್ಲಿ 20222ರಲ್ಲಿ ಅತಿಹೆಚ್ಚು ಸರ್ಚ್ ಮಾಡಿದ ಐದನೇ ಚಲನಚಿತ್ರವಾಗಿದೆ.

ಅತಿ ಹೆಚ್ಚು ಸರ್ಚ್ ಮಾಡಿರುವ ವ್ಯಕ್ತಿಗಳು ಯಾರು?:

ನಟಿ ಸುಶ್ಮಿತಾಸೇನ್

1)            ನೂಪುರ್ ಶರ್ಮ (Nupur Sharma) ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದು, ಟಿವಿ ಚಾನಲ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರಾಜಕೀಯ ಮುಖಂಡರಾಗಿದ್ದಾರೆ. 2) ದ್ರೌಪದಿ ಮುರ್ಮು (Droupadi Murmu ಬುಡಕಟ್ಟು ಪಂಗಡಕ್ಕೆ ಸೇರಿದ ) ದೇಶದ ಮೊಟ್ಟ ಮೊದಲ ರಾಷ್ಟ್ರಪತಿಯಾಗಿದ್ದಾರೆ. ಗೂಗಲ್ ನಲ್ಲಿ ಅತಿಹೆಚ್ಚು ಸರ್ಚ್ ಮಾಡಿದ ಎರಡನೇ ವ್ಯಕ್ತಿಯಾಗಿದ್ದಾರೆ. 3) ರಿಶಿ ಸುನುಕ್ (Rishi Sunak) ಭಾರತೀಯ ಮೂಲದ ಬ್ರಿಟನ್ ಪ್ರಧಾನಿಯಾಗಿದ್ದಾರೆ. 4) ಲಲಿತ್ ಮೋದಿ (Lalit Modi) ದೇಶದ ದೊಡ್ಡ ಬ್ಯುಸಿನೆಸ್ ಮೆನ್ ಹಾಗೂ ಮಾಜಿ ಕ್ರಿಕೆಟ್ ಆಡಳಿತಾಧಿಕಾರಿ. 5) ನಟಿ ಸುಶ್ಮಿತಾಸೇನ್ (Sushmita Sen) 5ನೇ ಅತಿಹೆಚ್ಚು ಸರ್ಚ್ ಮಾಡಿದ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ.

ಟಾಪ್-5 ಸುದ್ದಿಗಳು ಯಾವುದು? :

1)            ಲತಾ ಮಂಗೇಷ್ಕರ್ ಸಾವನ್ನಪ್ಪಿರುವ ವಿಷಯ (Lata Mangeshkar passing) 2) ಭಾರತೀಯ ರ್ಯಾಪರ್ ಮತ್ತು ಹೋರಾಟಗಾರ ಸಿಧು ಮೂಸೆ ವಾಲಾ ಸಾವಿನ ವಿಚಾರ (Sidhu Muse wala passing) 3) ರಷ್ಯಾ ಮತ್ತು ಉಕ್ರೇನ್ ಯುದ್ಧ (Russia Ukraine War) 4) ಉತ್ತರಪ್ರದೇಶ ಚುನಾವಣಾ ಫಲಿತಾಂಶ (Uttarpradesh Election Results) 5) ಭಾರತದಲ್ಲಿ ಕೋವಿಡ್19 ಪ್ರಕರಣಗಳು (Covid-19 Cases In India)

ಟಾಪ್-5 ಪ್ರಶ್ನೆಗಳು :

ನೆಟ್ಟಿಗರು ಯಾವ ವಿಚಾರಕ್ಕೆಲ್ಲಾ ಹೆಚ್ಚು ತಲೆ ಕೆಡೆಸಿಕೊಂಡು ಗೂಗಲ್ ನಲ್ಲಿ ಪ್ರಶ್ನೆ ಹಾಕಿದ್ದಾರೆ ಅಂತ ತಿಳಿದರೆ ನಿಮಗೆ ಆಶ್ಚರ್ಯ ಆಗಬಹುದು. ಅಂತಹ ಟಾಪ್-5 ಪ್ರಶ್ನೆಗಳು ಯಾವುದೆಂದರೆ : 1) ಅಗ್ನಿಪಥ್ ಯೋಜನೆ ಎಂದರೇನು? (What Is Agneepath Schmeme?), 2) ನ್ಯಾಟೊ ಎಂದರೇನು? (What is NATO?), 3) ಎನ್ ಎಫ್ ಟಿ ಎಂದರೇನು? (What Is NFT?) 4) ಪಿಎಫ್ ಐ ಎಂದರೇನು? (What Is PFI?)  5) 4ರ ಸ್ಕ್ವೇರ್ ರೂಟ್ ಯಾವುದು?  (What Is The Square Root Of 4?)

ಕೇಂದ್ರ ಸರ್ಕಾರ 2022ರಲ್ಲಿ ಜಾರಿಗೆ ತಂದ ಅಗ್ನಿಪಥ್ ಯೋಜನೆಯು ಕಮಿಷನ್ಡ್ ರ್ಯಾಂಕ್ ಕೆಳಗಿನ ಹುದ್ದೆಗಳಿಗೆ ಭೂಸೇನೆ, ವಾಯು ಸೇನೆ ಹಾಗೂ ನೌಕಸೇನೆಯಲ್ಲಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಲು ದೇಶದ ಯುವಜನರಿಗೆ ಅವಕಾಶ ನೀಡುವ ಯೋಜನೆಯಾಗಿದೆ. ಈ ಯೋಜನೆ ಬಗ್ಗೆ ಗೂಗಲ್ ನಲ್ಲಿ ಅತಿಹೆಚ್ಚು ಜನರು ಹುಡುಕಾಟ ನಡೆಸಿದ್ದಾರೆ. ಇನ್ನು ಟಾಪ್-2 ಸ್ಥಾನದ ಸರ್ಚಸ್ ನಲ್ಲಿ ಸ್ಥಾನಪಡೆದಿರುವ ವಿಷಯ ನ್ಯಾಟೋ ಪದವಾಗಿದೆ. ಉತ್ತರ ಅಟ್ಲಾಂಟಿಂಕ್ ಒಪ್ಪಂದ (NATO) ಎಂದರೆ 28 ಯೂರೋಪಿಯನ್ ದೇಶಗಳೂ ಹಾಗೂ 2 ಉತ್ತರ ಅಮೆರಿಕ ರಾಷ್ಟ್ರಗಳು ಸೇರಿದಂತೆ 30 ಸದಸ್ಯ ದೇಶಗಳು ಮಿಲಿಟರಿ ಹಾಗೂ ರಾಜಕೀಯ ವಿಚಾರದಲ್ಲಿ ಅಂತರ ಸರ್ಕಾರೀ ಮೈತ್ರಿ ಮಾಡಿಕೊಂಡಿರುವ ಒಪ್ಪಂದವಾಗಿದೆ.

ಇದನ್ನೂ ಓದಿ : BW Special | Yettinahole Water Project | ಎತ್ತಿನಹೊಳೆ ತಿರುವು ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣ : ಇದೇ ಡಿಸೆಂಬರ್ ಅಂತ್ಯದಿಂದ ಪ್ರಾಯೋಗಿಕವಾಗಿ ನೀರು ಪೂರೈಕೆ

ಟಾಪ್-3ನೇ ಸ್ಥಾನದಲ್ಲಿರುವ ಎನ್ ಎಫ್ ಟಿ ಎಂದರೆ, ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ವ್ಯವಹರಿಸುವ ಕ್ರಿಪ್ಟೋ ಕರೆನ್ಸಿ ಮಾದರಿಯ ಡಿಜಿಟಲ್ ಆಸ್ತಿಯಾಗಿದೆ. ಟಾಪ್-4ನೇ ಸ್ಥಾನದಲ್ಲಿ ಪಿಎಫ್ ಐ ಎಂದರೇನು ಎಂದು ಬಹಳಷ್ಟು ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಪ್ಯೂಪುಲರ್ ಫ್ರಂಟ್ ಆಫ್ ಇಂಡಿಯಾ ಎಂದು ಕರೆಯಲ್ಪಡುವ ಪಿಎಫ್ ಐ ದೇಶದಲ್ಲಿನ ಇಸ್ಲಾಮಿಕ್ ರಾಜಕೀಯ ಸಂಘಟನೆಯಾಗಿದೆ. ಈ ಸಂಘಟನೆಯನ್ನು ಕೇಂದ್ರ ಸರ್ಕಾರದ ಗೃಹ ಇಲಾಖೆ, ಕಾನೂನು ಬಾಹಿರ ಕೃತ್ಯ ಕಾಯ್ದೆಯಡಿ 2022ರ ಸೆಪ್ಟೆಂಬರ್ 28ರಿಂದ 5 ವರ್ಷಗಳ ಕಾಲ ನಿಷೇಧ ಹೇರಿದೆ. ಇನ್ನು ಟಾಪ್-5 ಸರ್ಚ್ ನಲ್ಲಿ ಗಣಿತದ ವಿಷಯವಾಗಿರುವ 4ರ ಸ್ಕ್ರೇರ್ ರೂಟ್ ಯಾವುದು ಎಂಬ ಪ್ರಶ್ನೆಯನ್ನು ಹೆಚ್ಚಿನ ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ.

ಕೋವಿಡ್ ಲಸಿಕೆ ಪಡೆದ ಪ್ರಮಾಣಪತ್ರದ ಸಾಂದರ್ಭಿಕ ಚಿತ್ರ

ಹೇಗೆ? ಎಂಬ ಆರಂಭಿಕ ಪ್ರಶ್ನೆಯೊಂದಿಗೆ ಹುಡುಕಿದ ಟಾಪ್-5 ವಿಷಯಗಳು :

  1. ಹೇಗೆ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು? (How to Download Vaccination Certificate?), 2) ಪಿಟಿಆರ್ ಸಿ ಚಲನ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ? (How To Download PTRC Challen?), 3) ಹೇಗೆ ಪೋರ್ನ್ ಸ್ಟಾರ್ ಮಾರ್ಟಿನ್ ಪಾನೀಯವನ್ನು ಕುಡಿಯುವುದು? (How To Drink Pornstar martini?) 4) ಇ-ಶ್ರಮ್ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ? (How To Make E-SHRAM Card?) 5) ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಬೇಧಿ ನಿಲ್ಲಿಸುವುದು ಹೇಗೆ? (How To Stop Motions During Pregnancy?) ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

2022ರ ಇಸವಿಯಲ್ಲಿ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಹೆಚ್ಚಿನ ಜನರು ಹುಡುಕಿದ್ದು, ಈ ವಿಷಯವು ಟಾಪ್-1 ಸ್ಥಾನ ಪಡೆದಿದೆ. ಇನ್ನು ವೃತ್ತಿಪರ ತೆರಿಗೆ ನೋಂದಣಿ ಪ್ರಮಾಣಪತ್ರ ಪಡೆಯುವ ಚಲನ್ ಹೇಗೆ ಡೌನ್ ಲೋಡ್ ಮಾಡಿಕೊಳ್ಳಬಹುದೆಂದು ಅತಿಹೆಚ್ಚಾಗಿ ಹುಡುಕಿದ ವಿಷಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಬ್ರಿಟನ್ ನಲ್ಲಿ ಅತಿಹೆಚ್ಚು ಖ್ಯಾತಿ ಪಡೆದಿರೋ ಕಾಕ್ ಟೈಲ್ ಪೋರ್ನ್ ಸ್ಟಾರ್ ಮಾರ್ಟಿನ್ ಪಾನೀಯವನ್ನು ಹೇಗೆ ಕುಡಿಯುವುದು ಎಂದು ಗೂಗಲ್ ನಲ್ಲಿ ಅತಿಹೆಚ್ಚು ಮಂದಿ ಹುಡುಕಿದ್ದಾರೆ. ಇನ್ನು ಟಾಪ್-5 ವರ್ಗದಲ್ಲಿ 4ನೇ ಸ್ಥಾನಪಡೆದಿರುವ ಇ-ಶ್ರಮ ಕಾರ್ಡ್ ಕುರಿತ ಪ್ರಶ್ನೆಯಾಗಿದೆ. ಇದೊಂದು ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ ರೂಪಿಸಿದ ಯೋಜನೆಯಾಗಿದೆ. ಇ-ಶ್ರಮ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸಲಿದೆ. ಇನ್ನು ಐದನೇ ಪ್ರಶ್ನೆ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಬೇಧಿ ನಿಲ್ಲಿಸುವ ಪರಿಹಾರವೇನು? ಎಂದು ಹಲವರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

#Defence News | ಭಾರತೀಯ ಸೇನೆಯಿಂದ ಡಿ.30ರಂದು ಕರ್ನಾಟಕ ಸೇರಿದಂತೆ 8 ರಾಜ್ಯಗಳ 75 ಕುಗ್ರಾಮಗಳಲ್ಲಿ ಹಲವು ಕಾರ್ಯಕ್ರಮಗಳ ಆಯೋಜನೆ

Next Post

#PMNarendraModi Mother | ‘ಭವ್ಯವಾದ ಶತಮಾನವು ದೇವರ ಪಾದ ಸೇರಿದೆ’ : ಪ್ರಧಾನಿ ಮೋದಿ ತಾಯಿ ಹೀರಾಬೇನ್ ಮೋದಿ ಪಂಚಭೂತಗಳಲ್ಲಿ ಲೀನ

Next Post
ಪ್ರಧಾನಿ ನರೇಂದ್ರ ಮೋದಿ ಅಗಲಿದ ತಮ್ಮ ತಾಯಿ ಹೀರಾಬೇನ್ ಮೋದಿಯವರ ಚಿತೆಗೆ ಅಗ್ನಿಸ್ಪರ್ಶ ನೆರವೇಸಿದ ಸಂದರ್ಭ (ಚಿತ್ರ ಕೃಪೆ : ಡಿಡಿ ಮತ್ತು ಎಎನ್ಐ)

#PMNarendraModi Mother | ‘ಭವ್ಯವಾದ ಶತಮಾನವು ದೇವರ ಪಾದ ಸೇರಿದೆ’ : ಪ್ರಧಾನಿ ಮೋದಿ ತಾಯಿ ಹೀರಾಬೇನ್ ಮೋದಿ ಪಂಚಭೂತಗಳಲ್ಲಿ ಲೀನ

ನಮ್ಮ ಮೆಟ್ರೊ ರೈಲು ರಾತ್ರಿ ವೇಳೆ ಸಂಚರಿಸುತ್ತಿರುವ ದೃಶ್ಯ (ಸಾಂದರ್ಭಿಕ ಚಿತ್ರ)

#Namma Metro News | NewYear2023 | ಹೊಸ ವರ್ಷದ ಸಂಭ್ರಮಾಚರಣೆಗೆ ಡಿ.31ರಂದು ಮಧ್ಯರಾತ್ರಿ 2ರವರೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ

Please login to join discussion

Like Us on Facebook

Follow Us on Twitter

Recent News

ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಸಾಲಬಾಧೆ ತಾಳಲಾರದೆ ಬೆಂಗಳೂರಿನ 50 ವರ್ಷದ ವ್ಯಕ್ತಿ ಆತ್ಮಹತ್ಯೆ

March 9, 2026

Positive News | ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ಮನೆಯಲ್ಲಿ ಸಿಲುಕಿದ್ದ ಪುಟ್ಟ ಮಕ್ಕಳ ರಕ್ಷಣೆ; ಕಳೆದುಹೋದ ಮೊಬೈಲ್ ಕ್ಷಣಾರ್ಧದಲ್ಲಿ ವಾಪಸ್

March 9, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಸಾಲಬಾಧೆ ತಾಳಲಾರದೆ ಬೆಂಗಳೂರಿನ 50 ವರ್ಷದ ವ್ಯಕ್ತಿ ಆತ್ಮಹತ್ಯೆ

March 9, 2026

Positive News | ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ಮನೆಯಲ್ಲಿ ಸಿಲುಕಿದ್ದ ಪುಟ್ಟ ಮಕ್ಕಳ ರಕ್ಷಣೆ; ಕಳೆದುಹೋದ ಮೊಬೈಲ್ ಕ್ಷಣಾರ್ಧದಲ್ಲಿ ವಾಪಸ್

March 9, 2026

ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

March 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d