Saturday, June 14, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    16ನೇ ಹಣಕಾಸು ಆಯೋಗದ ಸಭೆ : ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಹಂಚಿಕೆ ಕನಿಷ್ಠ ಶೇ.50ರಷ್ಟು ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ

    ಅಹಮದಾಬಾದ್ ವಿಮಾನ ದುರಂತ: ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ, ಪರಿಹಾರ ಕಾರ್ಯಗಳಿಗೆ ಚುರುಕು

    Air India Plane Crash | ಏರ್ ಇಂಡಿಯಾ ಭಾರೀ ವಿಮಾನ ದುರಂತ: 242 ಜನರಿದ್ದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಪತನ 

    Weather News | ಮಳೆಗಾಲದ ಆರ್ಭಟ: ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್ : ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಸಾಂದರ್ಭಿಕ ಚಿತ್ರ

    Railway News | ರೈಲ್ವೇ ಪ್ರಯಾಣಿಕರಿಗೆ ಸಂತಸದ ಸುದ್ದಿ : 24 ಗಂಟೆ ಮುಂಚಿತವಾಗಿ ಸೀಟು ಖಚಿತ!

    ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಇಂಧನ ಇಲಾಖೆ ಮತ್ತು ಬೆಸ್ಕಾಂ ವತಿಯಿಂದ ಸ್ಥಾಪಿಸಲಾದ ಸೋಲಾರ್ ಘಟಕವನ್ನು ಲೋಕಾರ್ಪಣೆಗೊಳಿಸಿದರು.

    ಕುಸುಮ್‌- ಸಿ ಯೋಜನೆಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್: ಸಿಎಂ ಸಿದ್ದರಾಮಯ್ಯ

    ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಮುಂದೂಡಿಕೆ: ತಾಂತ್ರಿಕ ದೋಷವೇ ಕಾರಣ

    DCM DK Shivakumar

    ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

    ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

  • Bengaluru Focus

    Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

    ಬೆಂಗಳೂರಿನ ಪಕ್ಷಿನೋಟ (ಸಾಂದರ್ಭಿಕ ಚಿತ್ರ)

    ಬೆಂಗಳೂರಿನ ಕಟ್ಟಡಗಳಲ್ಲಿ ನೆಲ ಅಂತಸ್ತು ಸಂಪೂರ್ಣವಾಗಿ ‘ಸ್ಟಿಲ್ಟ್ ಪಾರ್ಕಿಂಗ್’ ಕಡ್ಡಾಯ : ನಗರಾಭಿವೃದ್ಧಿ ಇಲಾಖೆಯಿಂದ ಹೊಸ ಕರಡು ಅಧಿಸೂಚನೆ

    ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದ್ದ 3.12 ಎಕರೆ ಭೂಮಿ ವಶಕ್ಕೆ: ಬಿಡಿಎ ಕಾರ್ಯಾಚರಣೆ

    Weather News | ಮಳೆಗಾಲದ ಆರ್ಭಟ: ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್ : ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಬನ್ನೇರುಘಟ್ಟದಲ್ಲಿ ಗರ್ಭಿಣಿ ಜೀಬ್ರಾ ‘ಕಾವ್ಯ’ ಸಾವು: ಆಘಾತ ಮತ್ತು ಕ್ಯಾಪ್ಚರ್‌ ಮಯೋಪತಿ ಕಾರಣವಿರುವ ಶಂಕೆ

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    16ನೇ ಹಣಕಾಸು ಆಯೋಗದ ಸಭೆ : ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಹಂಚಿಕೆ ಕನಿಷ್ಠ ಶೇ.50ರಷ್ಟು ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ

    ಅಹಮದಾಬಾದ್ ವಿಮಾನ ದುರಂತ: ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ, ಪರಿಹಾರ ಕಾರ್ಯಗಳಿಗೆ ಚುರುಕು

    Air India Plane Crash | ಏರ್ ಇಂಡಿಯಾ ಭಾರೀ ವಿಮಾನ ದುರಂತ: 242 ಜನರಿದ್ದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಪತನ 

    Weather News | ಮಳೆಗಾಲದ ಆರ್ಭಟ: ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್ : ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಸಾಂದರ್ಭಿಕ ಚಿತ್ರ

    Railway News | ರೈಲ್ವೇ ಪ್ರಯಾಣಿಕರಿಗೆ ಸಂತಸದ ಸುದ್ದಿ : 24 ಗಂಟೆ ಮುಂಚಿತವಾಗಿ ಸೀಟು ಖಚಿತ!

    ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಇಂಧನ ಇಲಾಖೆ ಮತ್ತು ಬೆಸ್ಕಾಂ ವತಿಯಿಂದ ಸ್ಥಾಪಿಸಲಾದ ಸೋಲಾರ್ ಘಟಕವನ್ನು ಲೋಕಾರ್ಪಣೆಗೊಳಿಸಿದರು.

    ಕುಸುಮ್‌- ಸಿ ಯೋಜನೆಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್: ಸಿಎಂ ಸಿದ್ದರಾಮಯ್ಯ

    ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಮುಂದೂಡಿಕೆ: ತಾಂತ್ರಿಕ ದೋಷವೇ ಕಾರಣ

    DCM DK Shivakumar

    ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

    ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

  • Bengaluru Focus

    Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

    ಬೆಂಗಳೂರಿನ ಪಕ್ಷಿನೋಟ (ಸಾಂದರ್ಭಿಕ ಚಿತ್ರ)

    ಬೆಂಗಳೂರಿನ ಕಟ್ಟಡಗಳಲ್ಲಿ ನೆಲ ಅಂತಸ್ತು ಸಂಪೂರ್ಣವಾಗಿ ‘ಸ್ಟಿಲ್ಟ್ ಪಾರ್ಕಿಂಗ್’ ಕಡ್ಡಾಯ : ನಗರಾಭಿವೃದ್ಧಿ ಇಲಾಖೆಯಿಂದ ಹೊಸ ಕರಡು ಅಧಿಸೂಚನೆ

    ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದ್ದ 3.12 ಎಕರೆ ಭೂಮಿ ವಶಕ್ಕೆ: ಬಿಡಿಎ ಕಾರ್ಯಾಚರಣೆ

    Weather News | ಮಳೆಗಾಲದ ಆರ್ಭಟ: ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್ : ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಬನ್ನೇರುಘಟ್ಟದಲ್ಲಿ ಗರ್ಭಿಣಿ ಜೀಬ್ರಾ ‘ಕಾವ್ಯ’ ಸಾವು: ಆಘಾತ ಮತ್ತು ಕ್ಯಾಪ್ಚರ್‌ ಮಯೋಪತಿ ಕಾರಣವಿರುವ ಶಂಕೆ

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home Bengaluru Focus

Bangalore Heavy Rain Warning | ರಾಜಧಾನಿಯಲ್ಲಿ ಇಂದು ಮತ್ತು ನಾಳೆ ಸಾಧಾರಣದಿಂದ ಭಾರೀ ಮಳೆ ಸಾಧ್ಯತೆ…! ; ಗಾಳಿಮಳೆ ಸಂದರ್ಭ ಅನಗತ್ಯವಾಗಿ ಸಂಚರಿಸದಂತೆ ತಜ್ಞರ ಎಚ್ಚರಿಕೆ

ನಗರದಲ್ಲಿ ಗುರುವಾರ ರಾತ್ರಿ ಸರಾಸರಿ 26 ಮಿ.ಮೀ ಮಳೆಯಾಗಿದೆ | ನಗರದ ರಾಜಕಾಲುವೆಗಳಲ್ಲಿದೆ 127 ಮಳೆನೀರು ಮಟ್ಟ ಮಾಪನ ಸೆನ್ಸರ್ ಗಳು | ನಗರದಲ್ಲಿ 96 ಮಳೆಹಾನಿ ಸ್ಥಳಗಳಿವೆ ಎಚ್ಚರ

by Bengaluru Wire Desk
April 15, 2022
in Bengaluru Focus, News Wire
Reading Time: 1 min read
0
ಮಳೆಯ ಸಾಂದರ್ಭಿಕ ಚಿತ್ರ

ಮಳೆಯ ಸಾಂದರ್ಭಿಕ ಚಿತ್ರ

ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದ್ದು, ಇಂದು ಮತ್ತು ನಾಳೆ ಕೂಡ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ವಿಧರ್ಭದಿಂದ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಟರ್ಫ್ ಕಂಡು ಬಂದಿದೆ. ಇದರಿಂದ ಆ ಭಾಗಗಳಲ್ಲಿ ವಾಯುಭಾರತ ಕುಸಿತದಿಂದ ಅತ್ತ ಕಡೆ ಮೋಡದ ಚಲನೆಯಿರಲಿದೆ. ಅಲ್ಲದೆ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಕಾರಣ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಶುಕ್ರವಾರ ಮತ್ತು ಶನಿವಾರ ಚದುರಿದ ಮತ್ತೆ ಕೆಲವೆಡೆ ವ್ಯಾಪಕ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(KSNDMC)ದ ಮಾಜಿ ನಿರ್ದೇಶಕ ಹಾಗೂ ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಸಾಮಾನ್ಯವಾಗಿ ಮುಂಗಾರು ಪೂರ್ವ ಮಳೆಯು ಭಾರೀ ಗಾಳಿ, ಗುಡುಗು- ಮಿಂಚು ಹಾಗೂ ಅಬ್ಬರಿಸಿ ಮಳೆಯಾಗುವ ಕಾರಣ ಆ ಸಂದರ್ಭದಲ್ಲಿ ರಸ್ತೆಯಲ್ಲಿ ಹಾಗೂ ಹೊರಗಡೆ ಸಂಚರಿಸದಿರುವುದೇ ಉತ್ತಮ ಎಂದು ಅವರು ನಗರದ ಜನತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿವರ್ಷವೂ ಮುಂಗಾರು ಪೂರ್ವ ಮಳೆಗೂ ಮುನ್ನವೇ ಮರದ ಹಳೆಯ ರೆಂಬೆಕೊಂಬೆ, ದುರ್ಬಲ ಮರಗಳನ್ನು ಕಡಿದು ಹಾಕುವುದು, ರಾಜಕಾಲುವೆ, ವಾರ್ಡ್ ನಲ್ಲಿನ ಮಳೆ ನೀರು ಮೋರಿಗಳಲ್ಲಿನ ಹೂಳುಗಳನ್ನು ತೆರವುಗೊಳಿಸುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅಲ್ಲದೆ ಪಾದಚಾರಿ ಮಾರ್ಗಗಳಲ್ಲಿ ಹಾಳಾದ ಸಿಮೆಂಟ್ ಸ್ಲಾಬ್ ಗಳನ್ನು ಬದಲಾಯಿಸಬೇಕು. ಆದರೆ ಈ ವಿಚಾರದಲ್ಲಿ ಬಿಬಿಎಂಪಿಯೂ ಪ್ರತಿಬಾರಿಯೂ ಎಡುವುತ್ತಲೇ ಇದೆ. ಹಾಗಾಗಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುವ ಸಮಸ್ಯೆ ಮಾತ್ರ ಇತ್ಯರ್ಥವಾಗಿಲ್ಲ. ರಾಜಕಾಲುವೆ ಸಂಪರ್ಕಿಸುವ ಮೋರಿಗಳಿಗೆ ರಸ್ತೆಯಲ್ಲಿ ಹರಿಯುವ ನೀರು ಹೋಗದ ಕಾರಣ ಮೇಲ್ಬಾಗದಲ್ಲಿ ನೀರು ನಿಂತು ಅವಘಡಗಳು ಸಂಭವಿಸುತ್ತಿರುತ್ತೆ.

ನಗರದಲ್ಲಿ ಇನ್ನೆರಡು ದಿನ ಮುಂಗಾರು ಪೂರ್ವ ಮಳೆಯಾಗುವ ಹಿನ್ನಲೆಯಲ್ಲಿ ಬಿಬಿಎಂಪಿಯು ಕೈಗೊಳ್ಳಲಿರುವ ಕ್ರಮಗಳ ಕುರಿತಂತೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ನಗರದ ರಾಜಕಾಲುವೆಗಳಲ್ಲಿದೆ 127 ಮಳೆನೀರು ಮಟ್ಟ ಮಾಪನ ಸೆನ್ಸರ್ ಗಳು :

ಸಾಂದರ್ಭಿಕ ಚಿತ್ರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು 105 ಮಳೆ ಮಾಪನ ಕೇಂದ್ರವನ್ನು ಅಳವಡಿಸಿದೆ. ಅಲ್ಲದೆ ನಗರ ವಿವಿಧ ಕಡೆಗಳಲ್ಲಿ 12 ಹವಾಮಾನ ಮಾಪನ ಕೇಂದ್ರಗಳನ್ನು ನಿರ್ಮಿಸಿದೆ. ಇದು ಸಾಲದು ಎಂಬಂತೆ ಈ ಹಿಂದೆ ನಗರದಲ್ಲಿ ಪ್ರಮುಖ 27 ಸ್ಥಳಗಳ ರಾಜಕಾಲುವೆಯಲ್ಲಿ ಮಳೆನೀರು ಮಟ್ಟದ ಮಾಪನ ಮಾಡುವ ಸೆನ್ಸರ್ ಗಳನ್ನು ಹಾಕಿ ಅವುಗಳನ್ನು ಕೆಎಸ್ಎನ್ಎಂಡಿಸಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು. ಕಳೆದ  ಮೂರು ತಿಂಗಳ ಹಿಂದೆ ಮತ್ತೆ 100 ಕಡೆಗಳಲ್ಲಿ ಈ ರೀತಿಯ ಸೆನ್ಸರ್ ಅಳವಡಿಸಲಾಗಿದೆ. 804 ಕಿ.ಮೀ ಉದ್ದದ ಈ ರಾಜಕಾಲುವೆಗಳಲ್ಲಿ ಮಳೆ ನೀರಿನ ಮಟ್ಟ ಅಪಾಯಕಾರಿ ಮಟ್ಟದ ದಾಟಿದಲ್ಲಿ ಈ ಸೆನ್ಸಾರ್ ಗಳು ಕೆಎಸ್ಎನ್ಎಂಡಿಸಿ ಕೇಂದ್ರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಲಿದೆ. ವಾಸ್ತವ ಸಮಯದ ಆಧಾರದಲ್ಲಿ (Real Time Basis) ಸೌರವಿದ್ಯುತ್ ಆಧಾರಿತ ಈ ಸೆನ್ಸರ್ ಗಳು ಸಂದೇಶವನ್ನು ಕಳುಹಿಸಲಿದೆ. ಇವುಗಳನ್ನು ಆಧರಿಸಿ ಬಿಬಿಎಂಪಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

ಗುರುವಾರ ರಾತ್ರಿ ಸರಾಸರಿ ಎಷ್ಟೆಷ್ಟು ಮಳೆಯಾಗಿದೆ ?

ಬುಧವಾರ ನಗರದಲ್ಲಿ ಸರಾಸರಿ 15 ಮಿಲಿ ಮೀಟರ್ ಮಳೆಯಾಗಿದ್ದರೆ, ನಿನ್ನೆ ರಾತ್ರಿಯಿಡೀ ನಗರದ ಹಲವೆಡೆ ಸರಾಸರಿಯಾಗಿ 25 ರಿಂದ 26 ಮಿಲಿ ಮೀಟರ್ ಮಳೆಯಾಗಿದೆ. ಆ ಪೈಕಿ ನಗರದ 14 ಕಡೆಗಳಲ್ಲಿ 40 ಮಿ.ಮೀಗಿಂತ ಹೆಚ್ಚು ಮಳೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯ ನೈರುತ್ಯ ಭಾಗದಲ್ಲಿ ನಿನ್ನೆ ಹೆಚ್ಚು ಮಳೆಯಾಗಿದೆ. ವಿದ್ಯಾಪೀಠದಲ್ಲಿ ಅತಿಹೆಚ್ಚು ಅಂದರೆ 89.5 ಮಿ.ಮೀ, ಸಂಪಂಗಿರಾಮನಗರ 53.5 ಮಿ.ಮೀ, ಸಾರಕ್ಕಿ 62 ಮಿ.ಮೀ, ಬೊಮ್ಮನಹಳ್ಳಿಯ ಹಗದೂರಿನಲ್ಲಿ 45.5 ಮಿ.ಮೀ, ಬಿಳೆಕಳ್ಳಿ 45 ಮಿ.ಮೀ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ 45 ಮಿ.ಮೀ, ರಾಜರಾಜೇಶ್ವರ ನಗರದ ಪ್ರದೇಶದಲ್ಲಿ 43 ಮಿ.ಮೀ ಸೇರಿದಂತೆ ನಗರದ ಹಲವು ಕಡೆಗಳಲ್ಲಿ 30 ಮಿ.ಮೀಗಿಂತ ಹೆಚ್ಚು ಮಳೆಯಾಗಿದೆ.

ಕಾಮಾಕ್ಯ ಚಿತ್ರಮಂದಿರದ ಬಳಿ 62ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ :

ಆದ್ದರಿಂದ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತ 62ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿಟ್ಟಿದ್ದ ದವಸ ಧಾನ್ಯಗಳು ಸೇರಿದಂತೆ ದಿನಬಳಕೆಯ ವಸ್ತುಗಳು ಹಾಳಾಗಿದೆ. ರಾತ್ರಿ ಸುರಿದ ಮಳೆಗೆ ಕಾಮಾಕ್ಯ ಬಳಿಯ ಬಿಎಂಟಿಸಿ ಬಸ್ ನಿಲ್ದಾಣದ ಗೋಡೆ ಕುಸಿದು ದ್ವಿತೀಯ ಹಂತದ ಮಳೆನೀರು ಕಾಲುವೆ ಮೇಲೆ ಬಿದ್ದು ನೀರು ಹರಿಯುವಿಕೆಗೆ ತೊಂದೆರೆಯಾಗಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

“ಬಿಬಿಎಂಪಿ ಬೃಹತ್ ನೀರುಗಾಲುವೆ ಅಧಿಕಾರಿಗಳು ವಿಷಯ ತಿಳಿದು ಇಂದು ಬೆಳಗ್ಗೆಯಿಂದಲೇ ಮಳೆ ನೀರುಗಾಲುವೆಗೆ ಅಡ್ಡಲಾಗಿದ್ದ ಕುಸಿದ ಗೋಡೆ ಹಾಗೂ ಬಿಡಿಎ ಅಳವಡಿಸಿದ್ದ ನೀರಿನ ಪೈಪ್ ಮತ್ತಿತರ ವಸ್ತುಗಳನ್ನು ತೆರವುಗೊಳಿಸಿ, ನೀರು ಹರಿಯುವಿಕೆಗೆ ಅನುವು ಮಾಡಿಕೊಡಲಾಗಿದೆ. ಈ ಹಿಂದೆ ನಗರದಲ್ಲಿ ಸುರಿದ ಮಹಾಮಳೆಯಾದಗಲೂ ಈ ಭಾಗದಲ್ಲಿ ತೊಂದರೆಯಾಗಿರಲಿಲ್ಲ. ಬಿಎಂಟಿಸಿ ಗೋಡೆ ಕುಸಿದಿದ್ದೆ ನಿನ್ನೆ ಹಲವು ಮನೆಗಳಿಗೆ ನೀರು ನುಗ್ಗಲು ಕಾರಣ” ಎಂದು ಬಿಬಿಎಂಪಿಯ ಬೃಹತ್ ನೀರುಗಾಲುವೆ ಪ್ರಧಾನ ಎಂಜಿನಿಯರ್ ಸುಗುಣ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ನಗರದಲ್ಲಿ 96 ಮಳೆಹಾನಿ ಸ್ಥಳಗಳಿವೆ ಎಚ್ಚರ :

ಸಾಂದರ್ಭಿಕ ಚಿತ್ರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ ಮಳೆಹಾನಿ ಸಂಭವಿಸಬಹುದಾದ 209 ಪ್ರದೇಶಗಳಿದ್ದವು. ಅಂತಹ ಸ್ಥಳಗಳಲ್ಲಿ ಹಂತ ಹಂತವಾಗಿ ಮಳೆಹಾನಿ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಈ ಸಂಖ್ಯೆಯನ್ನು 96ಕ್ಕೆ ಇಳಿಸಲಾಗಿದೆ. ಸದ್ಯ ನಗರದಲ್ಲಿ 28 ಸ್ಥಳಗಳಲ್ಲಿ ಮಳೆಹಾನಿ ಸಂಭವಿಸುವ ಅಪಾಯಕಾರಿ ಸ್ಥಳಗಳಿದ್ದರೆ, ಮಳೆಯಾದರೆ ಸಾಮಾನ್ಯವಾಗಿ ಮಳೆಯಿಂದ ತೊಂದರೆಗೊಳಗಾಗಬಹುದಾದ 68 ಸ್ಥಗಳಿವೆ ಎಂದು ಬಿಬಿಎಂಪಿ ಅಧಿಕಾರಿ ಸುಗುಣ ಹೇಳಿದ್ದಾರೆ.

ಗುರುವಾರ ಸುರಿದ ಮಳೆಯಿಂದ ಓಕಳಿಪುರ ಕೆಳ ಸೇತುವೆ, ಶಿವಾನಂದ ವೃತ್ತ, ಮೆಜಿಸ್ಟಿಕ್ ಕೆಳಸೇತುವೆ, ಮಲ್ಲೇಶ್ವರ ಸಂಪಿಗೆ ರಸ್ತೆ, ಪೀಣ್ಯ, ಯಶವಂತಪುರ, ಜಾಲಹಳ್ಳಿ, ಹೆಬ್ಬಾಳ, ಆರ್.ಟಿ.ನಗರ, ಮಲ್ಲೇಶ್ವರ, ಶೇಷಾದ್ರಿಪುರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕ್ ನಗರ, ಚಿಕ್ಕಪೇಟೆ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಉತ್ತಮ ಮಳೆಯಾದ ಕಾರಣ ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಂತು ವಾಹನ ಸವಾರರು ರಸ್ತೆಗುಂಡಿ ತಿಳಿಯದೇ ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸುತ್ತಿದ್ದರು.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...
Previous Post

#Viral Video | ಶ್ರೀ ಸೀತಾರಾಮ ಕಲ್ಯಾಣ ಕಾರ್ಯಕ್ರಮದಲ್ಲಿ ಹನುಮ ದೇವರ ದರ್ಶನ!? ವಿಡಿಯೋ ವೈರಲ್

Next Post

Metro TBM- Lavi | ಎಂಜಿ ರಸ್ತೆ ಮೆಟ್ರೋ ಸುರಂಗ ಮಾರ್ಗದಿಂದ ಹೊರಬಂದ ಟಿಬಿಎಮ್ – ಲವಿ

Next Post

Metro TBM- Lavi | ಎಂಜಿ ರಸ್ತೆ ಮೆಟ್ರೋ ಸುರಂಗ ಮಾರ್ಗದಿಂದ ಹೊರಬಂದ ಟಿಬಿಎಮ್ - ಲವಿ

BBMP Office Fire Accident | ಬಿಬಿಎಂಪಿ ಚೀಫ್ ಎಂಜಿನಿಯರ್ ಕಚೇರಿಯಲ್ಲಿ ಅಗ್ನಿ ಆಕಸ್ಮಿಕ ; ಕಚೇರಿ ಕಡತಗಳು, ಪೀಠೋಪಕರಣ ಭಸ್ಮ

Please login to join discussion

Like Us on Facebook

Follow Us on Twitter

Recent News

Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

June 14, 2025

16ನೇ ಹಣಕಾಸು ಆಯೋಗದ ಸಭೆ : ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಹಂಚಿಕೆ ಕನಿಷ್ಠ ಶೇ.50ರಷ್ಟು ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ

June 13, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

June 14, 2025

16ನೇ ಹಣಕಾಸು ಆಯೋಗದ ಸಭೆ : ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಹಂಚಿಕೆ ಕನಿಷ್ಠ ಶೇ.50ರಷ್ಟು ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ

June 13, 2025

ಅಹಮದಾಬಾದ್ ವಿಮಾನ ದುರಂತ: ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ, ಪರಿಹಾರ ಕಾರ್ಯಗಳಿಗೆ ಚುರುಕು

June 13, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d