Saturday, March 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

PM MODI MAYBACH S 650 CAR | ಪ್ರಧಾನಿ ಮೋದಿಯ ಅತ್ಯಾಧುನಿಕ ಕಾರಿನ Exclusive News ಇಲ್ಲಿದೆ ನೋಡಿ

ಸ್ಫೋಟಕಗಳು, ಎಕೆ-47 ರೈಫಲ್ ನಂತಹ ಶಸ್ತ್ರಾಸ್ತ್ರಗಳ ದಾಳಿಯಿಂದ ರಕ್ಷಿಸುವ ಸಾಮರ್ಥ್ಯ| ಹಲವು ವಿಶೇಷತೆಗಳನ್ನು ಒಳಗೊಂಡ ಈ ಕಾರಿನ ಮಾರುಕಟ್ಟೆ ಮೌಲ್ಯ 12 ಕೋಟಿ ರೂ. | ಬೆಂಗಳೂರು ವೈರ್ ಬಳಿ ಆ ಕಾರಿನ ನೈಜ ಖರೀದಿ ಮೌಲ್ಯ ಹಾಗೂ ಮತ್ತಿತರ ಮಾಹಿತಿ ಲಭ್ಯ

by Bengaluru Wire Desk
December 29, 2021
in BW Special, News Wire
Reading Time: 2 mins read
0

ನವದೆಹಲಿ, (www.bengaluruwire.com) : ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ವಾಹನಗಳ ಪಟ್ಟಿ ಹೊಸ ಮಾರುಕಟ್ಟೆಯಲ್ಲಿ 12 ಕೋಟಿ ರೂ. ಮೌಲ್ಯದ ಮೇಬ್ಯಾಚ್ ಎಸ್ 650 ಗಾರ್ಡ್ ಮರ್ಸಿಡೀಸ್ ಬೆನ್ಜ್ (Mercedes-Maybach S 650 Guard) ಕಾರು ಇತ್ತೀಚೆಗೆ ಸೇರ್ಪಡೆಯಾಗಿದ್ದಲ್ಲ ಬದಲಿಗೆ ಈ ವಾಹನವು ಏಪ್ರಿಲ್ ನಲ್ಲೇ ರಿಜಿಸ್ಟ್ರೇಷನ್ ಆಗಿ ಬಳಕೆಯಲ್ಲಿತ್ತು.

ಕಾರು ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಮರ್ಸಿಡೀಸ್ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹೊಂದಿದ್ದು, ಶಸ್ತ್ರಸಜ್ಜಿತ ಕಾರಾಗಿದ್ದು, ಪ್ರಧಾನಿಯವರ ಅಧಿಕೃತ ಓಡಾಟಕ್ಕೆ ಬಳಸುವ ರೇಂಜ್ ರೋವರ್ ವೋಗ್ ಹಾಗೂ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೆ ನವದೆಹಲಿಯ ಹೈದರಾಬಾದ್ ಹೌಸ್ ಗೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಪ್ರಧಾನಿ ನರೇಂದ್ರ ಮೋದಿ ಮೇಬ್ಯಾಚ್ ಎಸ್ 650 ಗಾರ್ಡ್ ಮರ್ಸಿಡೀಸ್ ಕಾರಿನಲ್ಲಿ ಬಂದಿಳಿದಾಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಕಾರು ಕಂಡು ಬಂದಿತ್ತು.

ಮರ್ಸೀಡಸ್ ಮೇಬ್ಯಾಚ್ ಎಸ್-650 ಗಾರ್ಡ್ ಕಾರು ಅತಿಹೆಚ್ಚು ಭದ್ರತೆಯ ಹೊಂದಿದ ಕಾರಾಗಿದೆ. ಈ ಕಾರಿನ ಗಾಜು ಹಾಗೂ ವಾಹನದ ಹೊರಮೈ ವ್ಯವಸ್ಥೆ ಎಕೆ-47 (AK-47 Rifles) ರೈಫಲ್ ಗುಂಡಿನ ದಾಳಿಯನ್ನು ಸಮರ್ಥವಾಗಿ ತಾಳಿಕೊಳ್ಳಬಲ್ಲದು. ಈ ಕಾರಿನ ಮಾರುಕಟ್ಟೆ ಮೌಲ್ಯ 12 ಕೋಟಿ ರೂಪಾಯಿ ಎನ್ನಲಾಗಿದೆ. 2010 ರ ಇಆರ್ ವಿ (Explosive Resistant Vehicle) ಶ್ರೇಯಾಂಕ ಹೊಂದಿರುವ ಮೇಬ್ಯಾಚ್ ಮರ್ಸಿಡೀಸ್ ಕಾರು ಕೇವಲ ಎರಡು ಮೀಟರ್ ಅಂತರದಿಂದ 15 ಕೆಜಿ ಸ್ಪೋಟಕ ಬಳಸಿ ಸ್ಪೋಟಿಸುವ ಬಾಂಬ್ ದಾಳಿಯನ್ನು ತಾಳಿಕೊಳ್ಳುವ ಶಕ್ತಿ ಹೊಂದಿದೆ.

ಬೆಂಗಳೂರು ವೈರ್ ನಲ್ಲಿ ಎಕ್ಸ್ ಕ್ಲೂಸಿವ್ ಮಾಹಿತಿ : 4.37 ಕೋಟಿ ರೂ.ಗೆ ಕಾರು ಖರೀದಿ :

ಪ್ರಧಾನಿ ನರೇಂದ್ರ ಮೋದಿಯವರು ಬಳಸುವ ಡಿಎಲ್ 2ಸಿ- ಬಿಸಿ- 5944 ನೋಂದಣಿಯಿರುವ ಮರ್ಸೀಡಸ್ ಮೇಬ್ಯಾಚ್ ಎಸ್-650 ಗಾರ್ಡ್ ಕಪ್ಪು ಬಣ್ಣದ ಕಾರು 2020 ಆಗಸ್ಟ್ ನಲ್ಲಿ ತಯಾರಿಕೆಯಾಗಿದ್ದು, 7ನೇ ಏಪ್ರಿಲ್ 2021ರಂದು ನೋಂದಣಿಯಾಗಿದೆ. ಈ ದುಬಾರಿ ವಾಹನದ ಮಾರುಕಟ್ಟೆ ಮೌಲ್ಯ ಸರಿ ಸುಮಾರು 12 ಕೋಟಿ ರೂ. ಆಗಿದೆ. ಆದರೆ ಕೇಂದ್ರ ಸರ್ಕಾರದ ಮಾಲೀಕತ್ವ ಹೊಂದಿದ ಈ ಕಾರನ್ನು 4,37,25,845 ರೂ.ಗಳನ್ನು ನೀಡಿ ಖರೀದಿಸಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ಖಚಿತಪಡಿಸಿವೆ. 17.93 ಅಡಿ ಉದ್ದ ಹಾಗೂ 6.27 ಅಡಿ ಅಗಲ ಹೊಂದಿದ ಈ ಕಾರಿನ ತೂಕ 4,350 ಕಿಲೋ ಗ್ರಾಂ (4.35 Tonnes) ಆಗಿದ್ದರೆ, ವಾಹನಗಳು ಪೂರ್ಣರೀತಿಯಲ್ಲಿ ಪ್ರಯಾಣಿಕರಿಂದ ಭರ್ತಿಯಾದರೆ 4,870 ಕೆ.ಜಿ ತೂಕ ಹೊಂದಲಿದೆ.

ಮರ್ಸೀಡಸ್ ಮೇಬ್ಯಾಚ್ ಎಸ್-650 ಗಾರ್ಡ್ ಕಾರಿನ ವಿಶೇಷತೆಗಳು

  • ವಾಹನದ ಕಿಟಕಿ ಗಾಜು ಹಾಗೂ ಹೊರಮೈ ಎಕೆ-47 ಗುಂಡಿನ ದಾಳಿ ತಡೆಯಬಲ್ಲದು
  • 12 ಕೋಟಿ ರೂ. ಮೌಲ್ಯದ ಅತಿಹೆಚ್ಚು ಭದ್ರತೆಯ ಅತ್ಯಾಧುನಿಕ ದುಬಾರಿ ಕಾರು
  • 2010ರ ಇಆರ್ ವಿ ಶ್ರೇಯಾಂಕ ಹೊಂದಿದ ಕಾರು
  • 2 ಮೀಟರ್ ಅಂತರದಲ್ಲಿ 15 ಕೆ.ಜಿ.ವರೆಗಿನ ಸ್ಪೋಟಕ ತಾಳಿಕೊಳ್ಳುವ ಸಾಮರ್ಥ್ಯ
  • ಕಿಟಕಿ ಗಾಜು ಒಳಭಾಗ ಪಾಲಿಕಾರ್ಬೊನೇಟ್ ಕೋಟಿಂಗ್ ರಕ್ಷಣೆ
  • ಗ್ಯಾಸ್ ದಾಳಿಯಾದರೂ ಕಾರಿನ ಒಳಗಿದ್ದವರಿಗೆ ಪ್ರತ್ಯೇಕ ಗಾಳಿ ಪೂರೈಕೆ ವ್ಯವಸ್ಥೆ
  • ಟೈರ್ ಪಂಕ್ಚರ್ ಆದರೂ ಕಾರು ಓಡಿಸಬಹುದು
  • ಇಂಧನ ಟ್ಯಾಂಕ್  ಹಾನಿಯಾಗದಂತೆ ತಡೆಯುವ ತಂತ್ರಜ್ಞಾನ ಬಳಕೆ
  • ಗಂಟೆಗೆ ಗರಿಷ್ಠ ವೇಗ ಮಿತಿ 160 ಕಿ.ಮೀ

ಈ ಕಾರಿನ ಕಿಟಕಿ ಗಾಜುಗಳ ಒಳಭಾಗವನ್ನು ಪಾಲಿಕಾರ್ಬೊನೇಟ್ ಕೋಟಿಂಗ್ ನಿಂದ ತಯಾರು ಮಾಡಲಾಗಿದ್ದು, ಕಾರಿನ ಹೊರಭಾಗದಲ್ಲಿ ಯಾವುದೇ ಬ್ಲಾಸ್ಟ್ ಆದರೂ ಅದನ್ನು ತಾಳಿಕೊಂಡು, ಕಾರಿನ ಒಳಗಿದ್ದವರನ್ನು ಸಂರಕ್ಷಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಒಂದೊಮ್ಮೆ ಕಾರಿನ ಮೇಲೆ ಯಾವುದೇ ಸಂಭಾವ್ಯ ಗ್ಯಾಸ್ ದಾಳಿಯಾದಲ್ಲಿ, ಮೇಬ್ಯಾಚ್ ಎಸ್-650 ಗಾರ್ಡ್ ಕಾರಿನ ಒಳ ಕ್ಯಾಬಿನ್ ನಲ್ಲಿ ಪ್ರಯಾಣಿಸುವರು ಉಸಿರಾಡಲು ಪ್ರತ್ಯೇಕ ಆಮ್ಲಜನಕ ಪೂರೈಸುವ ವ್ಯವಸ್ಥೆಯಿದೆ.

ಮರ್ಸೀಡಸ್ ಮೇಬ್ಯಾಚ್ ಎಸ್-650 ಗಾರ್ಡ್ ಕಾರು ಆರು ಲೀಟರ್ ಟ್ವಿನ್ ಟರ್ಬೋ ವಿ12 ಎಂಜಿನ್ ಹೊಂದಿದ್ದು, 516 ಬಿಎಚ್ ಪಿ ಸಾಮರ್ಥ್ಯ ಹೊಂದಿದೆ. ಈ ಕಾರಿನ ಗರಿಷ್ಠ ವೇಗ ಮಿತಿಯನ್ನು ಪ್ರತಿ ಗಂಟೆಗೆ 160 ಕಿಲೋ ಮೀಟರ್ ನಿಗಧಿಪಡಿಸಲಾಗಿದೆ. ಎಸ್-650 ಗಾರ್ಡ್ ಕಾರಿನ ಇಂಧನ ಟ್ಯಾಂಕ್ ಮೇಲೆ ವಿಶೇಷ ವಸ್ತುವಿನ ಹೊದಿಕೆ ಹಾಕಲಾಗಿರುತ್ತದೆ. ಒಂದೊಮ್ಮೆ ಇಂಧನ ಟ್ಯಾಂಕ್ ದುಷ್ಕರ್ಮಿಗಳ ದಾಳಿ ಅಥವಾ ಅಪಘಾತದಿಂದ  ಹಾನಿಯಾದರೂ, ಆ ಫ್ಯುಯೆಲ್ ಟ್ಯಾಂಕ್ ನಿಂದ ಇಂಧನ ಸೋರಿಕೆಯಾಗದಂತೆ ತಡೆಯುವಲ್ಲಿ ಸಹಕಾರಿಯಾಗಿದೆ. ಈ ಕಾರಿನ ಟೈರ್ ಅನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದ್ದು, ಒಂದೊಮ್ಮೆ ಕಾರಿನ ಚಕ್ರ ಹಾಳಾದರೆ ಅಥವಾ ಪಂಕ್ಚರ್ ಆದರೂ ಸಹ ಫ್ಲಾಟ್ ಆದ ಚಕ್ರವೂ ಸೂಕ್ತ ರೀತಿ ಚಲಿಸಲು ಯೋಗ್ಯವಾಗುವ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಇನ್ನು ಮೇಬ್ಯಾಚ್ ಎಸ್-650 ಗಾರ್ಡ್ ಕಾರಿನ ಒಳ ವಿನ್ಯಾಸ ಕಣ್ಣಿಗೆ ಮುದನೀಡುವಂತಿದ್ದು, ಕೂರುವ ಆಸನದಲ್ಲೇ ಬಾಡಿ ಮಸಾಜರ್, ಆರಾಮದಾಯಕವಾಗಿ ಕಾಲು ನೀಡಿ ಕೂರಲು ಹೆಚ್ಚುವರಿ ಸ್ಥಳದ ಸೌಲಭ್ಯವನ್ನು ಈ ಕಾರು ಹೊಂದಿದೆ.

ವಿಶೇಷ ಭದ್ರತಾ ಪಡೆಯಿಂದ ಇಂತಹ ಕಾರುಗಳ ಖರೀದಿಗೆ ಮುನ್ನ ಮೌಲ್ಯಮಾಪನ :

ಸಾಮಾನ್ಯವಾಗಿ ಇಂತಹ ಹೆಚ್ಚು ಭದ್ರತೆಯ ಕಾರುಗಳನ್ನು ರಾಷ್ಟ್ರ ಅಥವಾ ರಾಜ್ಯದ ಮುಖ್ಯಸ್ಥರನ್ನು ರಕ್ಷಿಸುವ ಹೊಣೆಹೊತ್ತ ವಿಶೇಷ ಭದ್ರತಾ ಪಡೆ (Special Protection Group or SPG) ಇಂತಹ ಕಾರು ಖರೀದಿಗೆ ಮನವಿ ಮಾಡುತ್ತವೆ. ಒಂದು ರಾಷ್ಟ್ರದ ಪ್ರಧಾನಿ, ರಾಷ್ಟ್ರಪತಿ ಮತ್ತಿತರ ಗಣ್ಯರ ರಕ್ಷಣೆ ಹೆಚ್ಚು ಮಾಡುವ ಅಗತ್ಯವಿದ್ದಲ್ಲಿ ಯಾವ ರೀತಿಯ ರಕ್ಷಣೆ ಅಗತ್ಯವಿದೆ ಎಂಬುದನ್ನು ಮೌಲ್ಯಮಾಪನ ಮಾಡಿ ಅದಕ್ಕೆ ಸರಿಹೊಂದುವ ಕಾರನ್ನು ಗಣ್ಯರ ಓಡಾಟಕ್ಕೆ ಎಸ್ ಪಿಜಿ ಖರೀದಿಸುತ್ತದೆ. ಸಾಮಾನ್ಯವಾಗಿ ಎಸ್ ಪಿಜಿ ಶತ್ರುಗಳಿಂದ ಗಣ್ಯರನ್ನು ರಕ್ಷಿಸಲು ಒಂದೇ ಮಾದರಿಯ ಎರಡು ಕಾರುಗಳನ್ನು ಖರೀದಿಸುತ್ತದೆ ಎಂದು ಕರನ್ ಬೈಕ್.ಕಾಮ್ ಎಂಬ ವೆಬ್ ಸೈಟ್ ನ ವರದಿ ತಿಳಿಸಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

BW EXCLUSIVE | BBMP LEGAL CELL PUNCTURE | ಬಿಬಿಎಂಪಿಯಲ್ಲಿ ಕಾನೂನು ಕೋಶವೇ ಪಂಕ್ಚರ್….!

Next Post

Hindu Temples | ರಾಜ್ಯದ ಹಿಂದೂ ದೇವಾಲಯಗಳ ನಿಯಂತ್ರಣ ಸಡಿಲಕ್ಕೆ ಕಾಂಗ್ರೆಸ್ ವಿರೋಧ

Next Post
ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಸಾಂದರ್ಭಿಕ ಚಿತ್ರ

Hindu Temples | ರಾಜ್ಯದ ಹಿಂದೂ ದೇವಾಲಯಗಳ ನಿಯಂತ್ರಣ ಸಡಿಲಕ್ಕೆ ಕಾಂಗ್ರೆಸ್ ವಿರೋಧ

DCIM100MEDIADJI_0084.JPG

Bangalore Lakes Encroachment | ಬೆಂಗಳೂರಿನ ಕೆರೆ ಒತ್ತುವರಿ ತೆರವಿಗೆ ಇನ್ನೆಷ್ಟು ಕಾಲ ಬೇಕು ಪಾಲಿಕೆ ಅಧಿಕಾರಿಗಳೇ?

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d