Monday, March 9, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

  • Bengaluru Focus

    ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಸಾಲಬಾಧೆ ತಾಳಲಾರದೆ ಬೆಂಗಳೂರಿನ 50 ವರ್ಷದ ವ್ಯಕ್ತಿ ಆತ್ಮಹತ್ಯೆ

    Positive News | ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ಮನೆಯಲ್ಲಿ ಸಿಲುಕಿದ್ದ ಪುಟ್ಟ ಮಕ್ಕಳ ರಕ್ಷಣೆ; ಕಳೆದುಹೋದ ಮೊಬೈಲ್ ಕ್ಷಣಾರ್ಧದಲ್ಲಿ ವಾಪಸ್

    ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

    GBA News | ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ ಚುನಾವಣೆಗೆ ದಿನಗಣನೆ ಆರಂಭ: ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

  • Bengaluru Focus

    ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಸಾಲಬಾಧೆ ತಾಳಲಾರದೆ ಬೆಂಗಳೂರಿನ 50 ವರ್ಷದ ವ್ಯಕ್ತಿ ಆತ್ಮಹತ್ಯೆ

    Positive News | ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ಮನೆಯಲ್ಲಿ ಸಿಲುಕಿದ್ದ ಪುಟ್ಟ ಮಕ್ಕಳ ರಕ್ಷಣೆ; ಕಳೆದುಹೋದ ಮೊಬೈಲ್ ಕ್ಷಣಾರ್ಧದಲ್ಲಿ ವಾಪಸ್

    ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

    GBA News | ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ ಚುನಾವಣೆಗೆ ದಿನಗಣನೆ ಆರಂಭ: ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

BW EXCLUSIVE | LED STREET LIGHTS | ಬೆಂಗಳೂರು ಬೀದಿ ದೀಪಗಳಿಗೆ ಎಲ್ ಇಡಿ ಅಳವಡಿಸುವ ಪ್ರಾಜೆಕ್ಟ್ ಫ್ಲಾಪ್….!

ಬೆಂಗಳೂರಿನ 4.85 ಲಕ್ಷ ಬೀದಿ ದೀಪಗಳಿಗೆ LED ಲೈಟ್ ಅಳವಡಿಸುವ ಯೋಜನೆ |ಯೋಜನೆ ಜಾರಿಗೆ ವಿಫಲವಾದ ಬಿಎಸ್ ಪಿಎಲ್ ಸಂಸ್ಥೆಯ ಗುತ್ತಿಗೆ ರದ್ದುಪಡಿಸಿದ ಬಿಬಿಎಂಪಿ ಚೀಫ್ ಕಮಿಷನರ್ | ಜಾಗತಿಕ ಟೆಂಡರ್ ಕರೆದಿದ್ದ ಯೋಜನೆ ವಿಫಲವಾಗಲು ಕಾರಣವೇನು? ಓದಿ ಬೆಂಗಳೂರು ವೈರ್ ನ EXCLUSIVE REPORT.

by Bengaluru Wire Desk
December 18, 2021
in Bengaluru Focus, BW Special
Reading Time: 2 mins read
0
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಉಳಿತಾಯ ಮಾಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ವಿವಿಧ ರೀತಿಯ ಬೀದಿ ದೀಪಗಳನ್ನು ಬದಲಿಸಿ ಎಲ್ ಇಡಿ ಲೈಟ್ಸ್ ಅಳವಡಿಸಲು ಜಾಗತಿಕ ಟೆಂಡರ್ ಕರೆದು ಪ್ರಭಾವಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಎರಡು ಮುಕ್ಕಾಲು ವರ್ಷವಾದರೂ ಇನ್ನು ಯೋಜನೆ ಕಾರ್ಯಗತವಾಗಿಲ್ಲ. ಈ ಕಾರಣಕ್ಕೆ ಬೆಂಗಳೂರು ಸ್ಟ್ರೀಟ್ ಲೈಟಿಂಗ್ ಪ್ರೈವೇಟ್ ಲಿಮಿಟೆಡ್ (BSPL) ಗೆ  ನೀಡಿದ್ದ ಗುತ್ತಿಗೆಯನ್ನು ಬಿಬಿಎಂಪಿಯು ರದ್ದುಪಡಿಸಿದೆ.

ಅಂತರಾಷ್ಟ್ರೀಯ ಟೆಂಡರ್ ಕರೆದು, ರಾಜಧಾನಿಯ 198 ವಾರ್ಡ್ ನಲ್ಲಿನ ಬೀದಿಗಳಲ್ಲಿ ಹೈಟೆಕ್ ಎಲ್ ಇಡಿ ಬೀದಿ ದೀಪ ಅಳವಡಿಸಿ ವಿದ್ಯುತ್ ಉಳಿತಾಯ ಮಾಡುತ್ತೇನೆ ಎಂದು ಹೊರಟಿದ್ದ ಬಿಬಿಎಂಪಿಗೆ ಭಾರೀ ಹಿನ್ನಡೆಯಾಗಿದೆ. ರಾಜಧಾನಿಯಲ್ಲಿ ಒಟ್ಟು 4,85,246 ವಿವಿಧ ರೀತಿಯ ಬೀದಿ ದೀಪಗಳನ್ನು ಹೊಂದಿದೆ. ಆ ಜಾಗದಲ್ಲಿ ಎಲ್ ಇಡಿ ದೀಪ ಅಳವಡಿಸಿ ವಿದ್ಯುತ್ ಉಳಿತಾಯ ಮಾಡುವ ಯೋಜನೆ ಅನುಷ್ಠಾನಕ್ಕೆ ಮಾಡಬೇಕಿದ್ದ ಬಿಎಸ್ ಪಿಎಲ್, ಆ ಯೋಜನೆ ಜಾರಿಗೆ ತರಲು ಅಸಮರ್ಥವಾಗಿದ್ದನ್ನು ಉಲ್ಲೇಖಿಸಿ, ಯೋಜನೆ ಅನುಷ್ಠಾನ ಮಾಡುವಂತೆ ಬಿಬಿಎಂಪಿಯು ಈ ಹಿಂದೆ ಬಿಎಸ್ ಪಿಎಲ್ ಗೆ ನೀಡಿದ್ದ ಸ್ವೀಕೃತ ಪತ್ರ (Letter Of Acceptence)ವನ್ನು ಹಿಂಪಡೆದಿದೆ. ಜೊತೆಗೆ ಗುತ್ತಿಗೆ ರದ್ದತಿ ಮಾಡಿದೆ.

ಬಿಎಸ್ ಪಿಎಲ್ ನ ನಿರ್ದೇಶಕರುಗಳಿಗೆ ಡಿ.3ರಂದು ಗುತ್ತಿಗೆ ರದ್ಧತಿ ನೋಟಿಸ್ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಬಿಎಸ್ ಪಿಎಲ್ ನಡುವೆ 1-03-2019ರಂದು ವಿದ್ಯುತ್ ಕಾರ್ಯಕ್ಷಮತೆ ಗುತ್ತಿಗೆ (EPC) ಒಪ್ಪಿಗೆ ಮಾಡಿಕೊಂಡಿದ್ದು, ಆ ಗುತ್ತಿಗೆಯ ಷರತ್ತನ್ನು ಪೂರೈಸಲು ಬಿಎಸ್ ಪಿಎಲ್ ವಿಫಲವಾಗಿದೆ. ಸೂಕ್ತ ಕಾಲಾವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ವಿದ್ಯುತ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಎಲ್ ಇಡಿ ವಿದ್ಯುತ್ ದೀಪಗಳನ್ನು ಹಂತ ಹಂತವಾಗಿ ಅಳವಡಿಸಬೇಕಿತ್ತು. ಆ ನಿಟ್ಟಿನಲ್ಲಿ ಬಿಎಸ್ ಪಿಎಲ್ ಯೋಜನೆಗೆ ಅಗತ್ಯವಾದ ಹಣಕಾಸು ವಹಿವಾಟು, ಆ ಸಂಬಂಧದ ಸಂಸ್ಥೆಯು ಕಾರ್ಯಗತಗೊಳಿಸಿದ ಯೋಜನೆಯ ವಿವರಗಳನ್ನು ನಿಗಧಿಪಡಿಸಿದ ಕಾಲಾವಧಿಯಲ್ಲಿ ಬಿಬಿಎಂಪಿಗೆ ನೀಡಲು ವಿಫಲವಾಗಿದೆ.  ಒಟ್ಟಾರೆ ಯೋಜನೆ ಜಾರಿಯಲ್ಲಿ ಸಮಾಧಾನಕರ ಪ್ರಗತಿಯನ್ನು ಬಿಎಸ್ ಪಿಎಲ್ ತೋರಿಸುವಲ್ಲಿ ಸೋತಿದೆ ಎಂದು ಗುತ್ತಿಗೆ ರದ್ದತಿ ನೋಟಿಸ್ ನಲ್ಲಿ ತಿಳಿಸಿದ್ದಾರೆ.

ಎಲ್ ಇಡಿ ಬೀದಿ ದೀಪ ಅಳವಡಿಕೆ ಯೋಜನೆ ಹಿಂದೆ – ಮುಂದೆ :

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ವ್ಯವಸ್ಥೆಯಲ್ಲಿ ವಿದ್ಯುತ್ ಕಾರ್ಯಕ್ಷಮತೆ ತಂದು ವಿದ್ಯುತ್ ಉಳಿತಾಯದ ಹಣವನ್ನು ಹಂಚಿಕೆ ಮಾಡುವ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (PPP Model)  ಯೋಜನೆ ಜಾರಿಗೆ ತರಲು ಅಂತರಾಷ್ಟ್ರೀಯ ಹಣಕಾಸು ನಿಗಮ (IFC) ಜೊತೆ 30-11-2017ರಂದು ಬಿಬಿಎಂಪಿ ಕರಾರು ಒಪ್ಪಂದ ಮಾಡಿಕೊಂಡಿತ್ತು. ಅದಾದ ಬಳಿಕ  ಐಎಫ್ ಸಿಯು ಜಾಗತಿಕ ಟೆಂಡರ್ ಕರೆದಿದ್ದು, ಅದರಲ್ಲಿ ಯೋಜನೆ ಅನುಷ್ಠಾನಕ್ಕೆ ಶಾಪೂರ್ಜಿ ಪಲ್ಲೊಂಜಿ ಮತ್ತು ಕಂಪನಿ ಪ್ರೈ.ಲಿ,  ಎಸ್ಎಂಸಿ ಇನ್ ಫ್ರಾಸ್ಟ್ರಕ್ಚರ್ ಪ್ರೈ.ಲಿ ಹಾಗೂ ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಪ್ರೈ.ಲಿ ಮೂರು ಕಂಪನಿಗಳ ಒಕ್ಕೂಟವು ಟೆಂಡರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಇದಾದ ನಂತರ ಈ ಮೂರು ಕಂಪನಿಗಳು ಯೋಜನೆ ಅನುಷ್ಠಾನಕ್ಕಾಗಿ ಬೆಂಗಳೂರು ಸ್ಟ್ರೀಟ್ ಲೈಟಿಂಗ್ಸ್ ಪ್ರೈ.ಲಿ. (BSPL) ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದವು.

ನಗರದಲ್ಲಿರುವ 4.85 ಲಕ್ಷ ವಿವಿಧ ಬಗೆಯ ಬೀದಿ ದೀಪಗಳನ್ನು ಐದು ಹಂತಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಲು ಹಾಗೂ ಯೋಜನೆ ಅನುಷ್ಠಾನಕ್ಕಾಗಿ ಸ್ವಂತಂತ್ರ್ಯ ಎಂಜನಿಯರಿಂಗ್ ಸಂಸ್ಥೆಯ ಸೇವೆ ಪಡೆಯಲು ಬಿಬಿಎಂಪಿಯು ಇಂಟರ್ ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಮೂಲಕ ಟೆಂಡರ್ ಕರೆದಿತ್ತು. ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಪ್ರೈ ಲಿ (PWC). ಸಂಸ್ಥೆಯು ಯಶಸ್ವಿ ಬಿಡ್ ದಾರರಾಗಿ ಆ ಟೆಂಡರ್ ಪಡೆದಿತ್ತು. ಆನಂತರ ಬಿಬಿಎಂಪಿ, ಬಿಎಸ್ ಪಿಎಲ್ ಹಾಗೂ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಯೋಜನೆ ಜಾರಿಗಾಗಿ ಪ್ರತ್ಯೇಕವಾಗಿ ತ್ರಿಪಕ್ಷಿಯ ಅಗ್ರಿಮೆಂಟ್ ಮಾಡಿಕೊಂಡಿದ್ದವು.

ಗುತ್ತಿಗೆ ಕರಾರು ಸಂಬಂಧ ಹಲವು ಬಾರಿ ಶೋಕಾಸ್ ನೋಟಿಸ್ ನೀಡಿದ್ದ ಪಾಲಿಕೆ :

ಎಲ್ ಇಡಿ ಬೀದಿ ದೀಪ ಅಳವಡಿಕೆ ಯೋಜನೆ ಸಂಬಂಧ ಬಿಬಿಎಂಪಿಯು, ಬೆಂಗಳೂರು ಸ್ಟ್ರೀಟ್ ಲೈಟಿಂಗ್ಸ್ ಜೊತೆ ಮಾಡಿಕೊಂಡ ಇಪಿಸಿ ಒಪ್ಪಂದ 13.06.2019 ರಿಂದ ಜಾರಿಗೆ ಬಂದಿತ್ತು. ಅದರಂತೆ 180 ದಿನಗಳ ಒಳಗಾಗಿ (18-06-2020) ಶಾಪೂರ್ಜಿ ಪಲ್ಲೊಂಜಿ ಮತ್ತು ಕಂಪನಿ ಪ್ರೈ.ಲಿ,  ಎಸ್ಎಂಸಿ ಇನ್ ಫ್ರಾಸ್ಟ್ರಕ್ಚರ್ ಪ್ರೈ.ಲಿ ಹಾಗೂ ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಪ್ರೈ.ಲಿ ಸಂಸ್ಥೆಯು ಸ್ಥಾಪಿಸಿದ ಬೆಂಗಳೂರು ಸ್ಟ್ರೀಟ್ ಲೈಟಿಂಗ್ಸ್ ಕಂಪನಿಯು ಹಣಕಾಸು ಸಂಬಂಧಿಸಿದ ಮಾಹಿತಿಯನ್ನು ಬಿಬಿಎಂಪಿಗೆ ಸಲ್ಲಿಸಿರಲಿಲ್ಲ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಬಿಎಸ್ ಪಿಎಲ್ ವಿದ್ಯುತ್ ಕಾರ್ಯಕ್ಷಮತೆ ಕರಾರನ್ನು ಪಾಲಿಸುವಲ್ಲಿ ಸೋತಿತ್ತು. ಹೀಗಾಗಿ ಬಿಬಿಎಂಪಿ ವಿಶೇಷ ಆಯುಕ್ತರು ಮೂರು ಬಾರಿ ಹಾಗೂ ಪಾಲಿಕೆ ಆಯುಕ್ತರು ಒಂದು ಬಾರಿ ಶೋಕಾಸ್ ನೋಟಿಸ್ ನೀಡಿದ್ದರು. ಹೀಗಿದ್ದರೂ ಯೋಜನೆ ಕುರಿತಂತೆ ಬಿಎಸ್ ಪಿಎಲ್ ತೃಪ್ತಿದಾಯಕ ಪ್ರಗತಿ ತೋರಿಸಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಾಲಿಕೆ ಚೀಫ್ ಕಮಿಷನರ್ ಬೀದಿ ದೀಪಗಳಿಗೆ ಎಲ್ ಇಡಿ ಅಳವಡಿಕೆ ಯೋಜನೆ ಜಾರಿಗಾಗಿ , ಬಿಎಸ್ ಪಿಎಲ್ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನೇ ರದ್ದುಪಡಿಸಿ ಆದೇಶಿದ್ದಾರೆ.

ಯೋಜನೆ ಜಾರಿಗೆ 30 ತಿಂಗಳ ಗಡುವು ಮುಗಿಯುತ್ತಾ ಬಂದರೂ ಫೇಸ್-1 ಸಮೀಕ್ಷೆ ಮುಗಿದಿಲ್ಲ :

ಇಪಿಸಿ ಒಪ್ಪಂದ ಜಾರಿಗೆ ಬಂದ 10 ತಿಂಗಳಲ್ಲಿ ಮೊದಲ ಹಂತವಾಗಿ ಒಂದು ಲಕ್ಷ ಬೀದಿ ದೀಪಗಳ ಸರ್ವೆ ಕಾರ್ಯ ಪೂರ್ಣಗೊಳಿಸಬೇಕಿತ್ತು. ಆನಂತರ ಎರಡನೇ ಹಂತದಲ್ಲಿ 15 ತಿಂಗಳ ಒಳಗಾಗಿ, ಹೀಗೆ ಒಟ್ಟು ಐದು ಹಂತಗಳಲ್ಲಿ ಬಿಬಿಎಂಪಿಯ 198 ವಾರ್ಡ್ ಗಳಲ್ಲಿ 4.85 ಲಕ್ಷ ಬೀದಿ ದೀಪಗಳ ಸಮೀಕ್ಷೆ ನಡೆಸಿ ವರದಿ ನೀಡಬೇಕಿತ್ತು. ಇದೇ ಡಿಸೆಂಬರ್ 2021ರ ಒಳಗಾಗಿ ಐದನೇ ಹಂತದ ಬೀದಿ ದೀಪಗಳ ಸರ್ವೆ ಕಾರ್ಯ ಪೂರ್ಣಗೊಳಿಸಿ ವರದಿ ನೀಡಬೇಕಿತ್ತು. ಆದ್ರೆ 30 ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಫೇಸ್-1 ಹಂತದಲ್ಲೇ ಈ ಯೋಜನೆ ಇರೋದನ್ನು ಗಮನಿಸಿದ್ರೆ, ಯಾವ ಮಟ್ಟದಲ್ಲಿ ಎಲ್ ಇಡಿ ಬೀದಿ ದೀಪದ ಯೋಜನೆ ಹಳ್ಳ ಹಿಡಿದಿತ್ತು, ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಸಿಗಲ್ಲ.

ಈ ಬೆಳವಣಿಗೆಯಿಂದ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್, ವೈಟ್ ಟಾಪಿಂಗ್ ಯೋಜನೆ, ಘನತ್ಯಾಜ್ಯ ವಿಲೇವಾರಿ ಮತ್ತಿತರ ವಿಷಯದಲ್ಲಿ ಬೀಗುತ್ತಿರುವ ಬಿಬಿಎಂಪಿಗೆ ಸಾರ್ವಜನಿಕರ ಅನುಕೂಲಕ್ಕಾಗಿ, ಬೀದಿ ದೀಪಗಳಿಗೆ ಹೂಡಿಕೆಯಿಲ್ಲದೆ ಎಲ್ ಇಡಿ ಲೈಟ್ ಹಾಕುವ ಹಾಗೂ ವಾರ್ಷಿಕ 55 ಕೋಟಿ ರೂಪಾಯಿ ನಿರ್ವಹಣೆ ವೆಚ್ಚ ಉಳಿತಾಯ ಮಾಡುವಂತಹ ಯೋಜನೆ ನೆಲಕಚ್ಚಿದ್ದು, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಗಾದೆಯಂತಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

KMF Duplicate Ghee | ಮೈಸೂರಿನಲ್ಲಿ ಕೆಎಂಎಫ್ ಹೆಸರಿನಲ್ಲಿ ನಕಲಿ ತುಪ್ಪದ ಜಾಲ ಪತ್ತೆ : 11 ಟನ್ ಕಲಬೆರೆಕೆ ತುಪ್ಪ ವಶಕ್ಕೆ

Next Post

ನೋಂದಣಿಯಾಗದ ಕಾರು ಕಂಬಕ್ಕೆ ಡಿಕ್ಕಿ : ಚಾಲಕ ಸುರಕ್ಷಿತ

Next Post

ನೋಂದಣಿಯಾಗದ ಕಾರು ಕಂಬಕ್ಕೆ ಡಿಕ್ಕಿ : ಚಾಲಕ ಸುರಕ್ಷಿತ

Covid19 News Update | ದೇಶದಲ್ಲಿ 572 ದಿನಗಳಲ್ಲೇ 82,267ರಷ್ಟು ಕಡಿಮೆ ಸಕ್ರಿಯ ಪ್ರಕರಣ...!

Please login to join discussion

Like Us on Facebook

Follow Us on Twitter

Recent News

ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಸಾಲಬಾಧೆ ತಾಳಲಾರದೆ ಬೆಂಗಳೂರಿನ 50 ವರ್ಷದ ವ್ಯಕ್ತಿ ಆತ್ಮಹತ್ಯೆ

March 9, 2026

Positive News | ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ಮನೆಯಲ್ಲಿ ಸಿಲುಕಿದ್ದ ಪುಟ್ಟ ಮಕ್ಕಳ ರಕ್ಷಣೆ; ಕಳೆದುಹೋದ ಮೊಬೈಲ್ ಕ್ಷಣಾರ್ಧದಲ್ಲಿ ವಾಪಸ್

March 9, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಸಾಲಬಾಧೆ ತಾಳಲಾರದೆ ಬೆಂಗಳೂರಿನ 50 ವರ್ಷದ ವ್ಯಕ್ತಿ ಆತ್ಮಹತ್ಯೆ

March 9, 2026

Positive News | ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ಮನೆಯಲ್ಲಿ ಸಿಲುಕಿದ್ದ ಪುಟ್ಟ ಮಕ್ಕಳ ರಕ್ಷಣೆ; ಕಳೆದುಹೋದ ಮೊಬೈಲ್ ಕ್ಷಣಾರ್ಧದಲ್ಲಿ ವಾಪಸ್

March 9, 2026

ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

March 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d