Saturday, March 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

BW SPECIAL REPORT | KSRTC BUS BAD CONDITION | ಕೆಎಸ್ ಆರ್ ಟಿಸಿ ಬಸ್ ಟೈರ್ ಸ್ಟೋಟದಿಂದ ಬಹಿರಂಗವಾಯ್ತು ಡಕೋಟಾ ಬಸ್ ಗಳ ಓಡಾಟ….!??

ಗಡಿ ಭಾಗದ ಜಿಲ್ಲೆಯೆಂಬ ತಾರತಮ್ಯಕ್ಕೆ ಮತ್ತೆ ಒಳಗಾಯ್ತಾ ಚಾಮರಾಜನಗರ ? | ನಿಗಧಿತ ಓಡಾಟದ ಮಿತಿ ಮೀರಿ, ವಿಮಾ ಅವಧಿಯೂ ಮುಗಿದ ಕೆಎಸ್ ಆರ್ ಟಿಸಿ ಬಸ್ ಗಳು ಈಗಲೂ ಸಂಚರಿಸುತ್ತಿದೆಯಾ? |ಕರೋನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ದುರುಂತದ ಬಳಿಕ ಮತ್ತೊಂದು ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುತ್ತಾ ರಾಜ್ಯ ಸರ್ಕಾರ? | ಗುಂಡ್ಲುಪೇಟೆ ಡಿಪೋ ವ್ಯಾಪ್ತಿಯಲ್ಲಿ ಡಕೋಟಾ ಬಸ್ ಗಳದ್ದೇ ಕಾರುಬಾರು?

by Bengaluru Wire Desk
September 17, 2021
in BW Special, News Wire, Photo Gallery
Reading Time: 3 mins read
0

ಚಾಮರಾಜನಗರ, (www.bengaluruwire.com) : ಗುಂಡ್ಲೇಪೇಟೆಯಿಂದ ಚಾಮರಾಜನಗರಕ್ಕೆ ಸಾಗುವ ಮಾರ್ಗ ಮಧ್ಯದ ಹುಡಿಗಾಲದಲ್ಲಿ ಶುಕ್ರವಾರ ಬೆಳಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ)ಗೆ ಸೇರಿದ ಬಸ್ ನ ಮುಂಭಾಗದ ಟೈರ್ ಸಿಡಿದು ಚಾಲಕನ ಸಮಯಪ್ರಜ್ಞೆಯಿಂದ ಬಸ್ ನಲ್ಲಿದ್ದ 65 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಬೆಂಗಳೂರು ವೈರ್ ಗೆ ಲಭ್ಯವಾದ ಸಾರಿಗೆ ಇಲಾಖೆ ದಾಖಲೆ ಪ್ರಕಾರ ಈ ಬಸ್ ನ ಇನ್ಸ್ ಶುರೆನ್ಸ್ ಅವಧಿ ಮುಗಿದು ಒಂದು ವರ್ಷ ಆಗಿದೆ…. ! ಸಾಮಾನ್ಯ ನಾಗರೀಕರು ಇನ್ ಶ್ಯುರೆನ್ಸ್ ಅವಧಿ ಮುಗಿದ ವಾಹನಗಳಿಗೆ ದಂಡ ಹಾಕುವ ಸರ್ಕಾರವೇ ತನ್ನ ಅಧೀನದ ಕೆಎಸ್ ಆರ್ ಟಿಸಿ ಬಸ್ ನ ವಿಮೆಯನ್ನು ನವೀಕರಿಸಿಕೊಳ್ಳುವ ಗೋಜಿಗೆ ಹೋಗಿಲ್ಲ ಎಂಬುದು ಬಹಿರಂಗವಾಗಿದೆ. ಈ ಪ್ರಕರಣದಿಂದಾಗಿ ಕೆಎಸ್ ಆರ್ ಟಿಸಿ ಬಸ್ ಗಳ ಸ್ಥಿತಿಗತಿ ಬಗ್ಗೆ ಸಾಕಷ್ಟು ಪ್ರಶ್ನೆ ಹಾಗೂ ಚರ್ಚೆ ಉದ್ಭವಾಗುತ್ತಿದೆ.

ಚಾಮರಾಜನಗರ ವಿಭಾಗ ಗುಂಡ್ಲುಪೇಟೆ ಡಿಪೋ ಗೆ ಸೇರಿದ ಮಾರ್ಗಸಂಖ್ಯೆ 62ಕ್ಕೆ ಸೇರಿದ ಕೆಎ-10ಎಫ್-0006 ರಿಜಿಸ್ಟ್ರೇಷನ್ ನಂಬರ್ ನ ಈ ಕೆಎಸ್ ಆರ್ ಟಿಸಿ ಬಸ್ ಅವಧಿ ಮೀರಿದ ಬಸ್ ಎಂದು ಮೂಲಗಳು ತಿಳಿಸಿದ್ದು, ಸಾರ್ವಜನಿಕರ ಪ್ರಯಾಣಕ್ಕೆ ಸೂಕ್ತವಾಗಿರಲಿಲ್ಲ ಎಂದು ತಿಳಿದು ಬಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ರಾಜಧಾನಿಯಿಂದ ದೂರವಿರುವ ಜಿಲ್ಲೆಗಳಲ್ಲಿ ಅವಧಿ ಮೀರಿದ ಡಕೋಟಾ ಬಸ್ ಗಳನ್ನು ಕೆಎಸ್ ಆರ್ ಸಿ ಈಗಲೂ ಓಡಿಸ್ತಿದೆ ಎಂಬುದಕ್ಕೆ ಇವತ್ತು ನಡೆದ ಘಟನೆಯೇ ಸಾಕ್ಷಿಯಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ 53 ಫುಲ್ ಟಿಕೆಟ್, 7 ಪಾಸ್ ಪಡೆದವರು ಹಾಗೂ ಐವರು ಹಿರಿಯ ನಾಗರೀಕರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದಿದ್ದು, ಪ್ರಯಾಣಿಕರ ಸ್ಟೇಟಸ್ ರಿಪೋರ್ಟ್ ನಿಂದ ತಿಳಿದು ಬರುತ್ತೆ.

ಟೈರ್ ಸ್ಪೋಟಗೊಂಡ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ 65 ಪ್ರಯಾಣಿಕರಿದ್ದರು ಎಂಬುದಕ್ಕೆ ದಾಖಲೆ

“ಬೆಳಗ್ಗೆ 10.15ಕ್ಕೆ ಗುಂಡ್ಲುಪೇಟೆಯಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಚಾಮರಾಜನಗರ ಮಾರ್ಗದ ಕಡೆ ಬರುವಾಗ 10.50ರ ಸಂದರ್ಭದಲ್ಲಿ ಹುಡಿಗಾಲ ಎಂಬಲ್ಲಿ ಬಸ್ ಟೈರ್ ಸ್ಟೋಟಗೊಂಡಿತು. ಈ ಸಂದರ್ಭದಲ್ಲಿ ಬಸ್ ನಲ್ಲಿ 65 ಜನ ಪ್ರಯಾಣಿಕರಿದ್ದರು. ಮುಖ್ಯರಸ್ತೆಯಾದ್ದರಿಂದ ಹಲವು ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದವು. ಏಕಾ ಏಕಿ ಬಸ್ ಮುಂಭಾಗದ ಟೈರ್ ಸ್ಪೋಟಗೊಂಡಾಗ ಕೊಂಚ ಗಾಬರಿಯಾದೆ ಆದರೂ ಯಾವುದೇ ರೀತಿ ಬಸ್ ಅಪಘಾತವಾಗದಂತೆ ಶ್ರಮ ಮೀರಿ ಎಚ್ಚರಿಕೆ ವಹಿಸಿ ಬಸ್ಸನ್ನು ನಿಲ್ಲಿಸಲು ಯಶಸ್ವಿಯಾದೆ. ಬಸ್ ನಲ್ಲಿದ್ದ ಅಷ್ಟು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಘಟನೆ ಬಳಿಕ ಬೇರೆ ಬಸ್ಸಿನಲ್ಲಿ ಅವರನ್ನು ಕಳುಹಿಸಿಕೊಡಲಾಯಿತು.”

– ಶಿವಕುಮಾರ್, ಕೆಎಸ್ ಆರ್ ಟಿಸಿ ಬಸ್ ಚಾಲಕ

ಟೈರ್ ಸ್ಪೋಟಗೊಂಡ ಬಸ್ ಫುಲ್ ರಿಪೇರಿಗೆ ಬಂದಿತ್ತಾ?

ವಿಷಯ ಗೊತ್ತಿದ್ದರೂ ಡಿಪೋ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ಯಾಕೆ?

ಕೆಎ-10ಎಫ್-0006 ಕೆಎಸ್ ಆರ್ ಟಿಸಿ ಬಸ್ ನ ಮುಂಭಾಗ ಹಾಗೂ ಹಿಂಭಾಗದ ಚಕ್ರಗಳು ಸಾಕಷ್ಟು ಸವೆದಿದ್ದು, ಅವುಗಳನ್ನು ಬದಲಿಸಿ ಹೊಸ ಟೈರ್ ಗಳನ್ನು ಹಾಕಬೇಕು. ಅದರಲ್ಲೂ ಮುಂಭಾಗದ ಚಕ್ರಗಳಿಗೆ ಎ-ದರ್ಜೆಯ ಚಕ್ರಗಳನ್ನು ಫಿಟ್ ಮಾಡುವಂತೆ ಬಸ್ ಚಾಲಕ ಶಿವಕುಮಾರ್ ಗುಂಡ್ಲುಪೇಟೆ ಘಟಕದ ಅಧಿಕಾರಿಗಳಿಗೆ ಕೋರಿದ್ದರು. ಇದಲ್ಲದೆ ಈ ಬಸ್ ನ ಸ್ಟೇರಿಂಗ್ ಸಾಕಷ್ಟು ಅಲ್ಲಾಡುತ್ತಿದ್ದು, ಬ್ರೇಕ್ ಕೂಡ ಕಮ್ಮಿಯಿತ್ತು. ಅದೇ ರೀತಿ ಬಸ್ ನ ಮುಂಭಾಗದ ಎಂಜಿನ್ ಜಾಯಿಂಟ್ ಗಳು ಸಿಕ್ಕಾಪಟ್ಟೆ ಶಬ್ದ ಬರುತ್ತಿದ್ದು, ಒಟ್ಟಾರೆ ಈ ಬಸ್ ಅನ್ನು ದುರಸ್ಥಿಪಡಿಸುವಂತೆ ಆ ಬಸ್ ನ ಚಾಲಕ, ಡಿಪೋ ಚಾರ್ಜ್ ಮೆನ್ ರಾಜಶೇಖರ್ ಹಾಗೂ ಮ್ಯಾನೇಜರ್ ಜೈಕುಮಾರ್ ಗೆ ಮೌಖಿಕವಾಗಿ 15 ದಿನಗಳ ಹಿಂದೆಯೇ ತಿಳಿಸಿ ಬಸ್ಸನ್ನು ಆ ಡಿಪೋನಲ್ಲೇ ಬಿಟ್ಟು ಬಂದಿದ್ದರಂತೆ.

ಆದರೆ ಒಂದು ವಾರಗಳ ಕಾಲ ಈ ಡಕೋಟಾ ಬಸ್ಸನ್ನು ರಿಪೇರಿಯೂ ಮಾಡದೆ ಬೇರೆ ಬಸ್ ಕೊಟ್ಟು, ಆನಂತ್ರ ಡಿಪೋನಲ್ಲಿ ಬಸ್ ಗಳ ಕೊರತೆ ಬಂದಾಗ ಮತ್ತದೇ ಬಸ್ಸನ್ನು ರಿಪೇರಿ ಮಾಡದೆ ರಸ್ತೆಗೆ ಇಳಿಸಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ.

– ಎಸ್.ಟಿ.ಸೋಮಶೇಖರ್, ಸಹಕಾರ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು

“ಬೆಳಗ್ಗೆಯಿಂದ ಸದನದ ಕಾರ್ಯಕಲಾಪದಲ್ಲಿ ಪಾಲ್ಗೊಂಡಿದ್ದ ಕಾರಣ ಶುಕ್ರವಾರ ಬೆಳಗ್ಗೆ ಹುಡಿಗಾಲದಲ್ಲಿ ಕೆಎಸ್ ಆರ್ ಟಿಸಿ ಬಸ್ ಚಕ್ರ ಸ್ಪೋಟ ವಿಚಾರದ ಕುರಿತ ಮಾಹಿತಿ ಲಭ್ಯವಾಗಿಲ್ಲ. ಘಟನೆ ಸಂಬಂಧ ಹಾಗೂ ಸುಸ್ಥಿತಿಯಲ್ಲಿಲ್ಲದ ಬಸ್ ಸರಿಪಡಿಸುವ ಬಗ್ಗೆ ಡಿಪೋ ಮ್ಯಾನೇಜರ್ ಗೆ ಮಾಹಿತಿ ಇದ್ದೂ ಅದನ್ನು ಸರಪಡಿಸಿಲ್ಲ ಏಕೆ? ಎಂಬ ಬಗ್ಗೆ ಗುಂಡ್ಲುಪೇಟೆ ಡಿಪೋ ಮ್ಯಾನೇಜರ್ ಬಳಿ ಮಾತನಾಡಿ ವಿಚಾರಣೆ ನಡೆಸುತ್ತೇನೆ. ಹಾಗೂ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಡಿಪೋ ವ್ಯಾಪ್ತಿಯಲ್ಲಿ ಅವಧಿ ಮೀರಿದ ಕೆಎಸ್ ಆರ್ ಟಿಸಿ ಬಸ್ ಸಂಚಾರ ಕುರಿತಂತೆ ಸಾರಿಗೆ ಸಚಿವರ ಜೊತೆ ಮಾತನಾಡುತ್ತೇನೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ.”

– ಎಸ್.ಟಿ.ಸೋಮಶೇಖರ್, ಸಹಕಾರ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು

ಪ್ರತಿದಿನ ಸರಾಸರಿ 292 ಕಿ.ಮೀ ಸಂಚರಿಸುತ್ತೆ ಡಕೋಟ ಬಸ್….!

ಪ್ರತಿದಿನ ಸರಾಸರಿ 292 ಕಿ.ಮೀ ನಷ್ಟು ರಸ್ತೆಯಲ್ಲಿ ಓಡಾಡುವ ಈ ಡಕೋಟಾ ಬಸ್ ನಲ್ಲಿ ಪ್ರಯಾಣಿಕರು ಜೀವ ಪಣಕ್ಕಿಟ್ಟುಕೊಂಡೇ ಓಡಾಡುವ ಪರಿಸ್ಥಿತಿಯಿದೆ. ಪ್ರತಿದಿನ ಗುಂಡ್ಲುಪೇಟೆ ಮತ್ತು ಚಾಮರಾಜನಗರ ನಡುವೆ 66 ಕಿಮೀ ಒಂದು ಟ್ರಿಪ್ ನಂತೆ 4 ಟ್ರಿಪ್ ಹಾಗೂ ತೆರಕನಾಂಬಿಯಿಂದ ಗುಂಡ್ಲುಪೇಟೆ ನಡುವೆ ಶಾಲಾ ಮಕ್ಕಳನ್ನು ಬೆಳಗ್ಗೆ 7.15ರಿಂದ 9.30ರ ತನಕ ಕರೆದೊಯ್ಯಲಾಗುತ್ತೆ. ವಿಮಾ ಅವಧಿ, ವಾಹನದ ಕಾರ್ಯಕ್ಷಮತಾ ಮಟ್ಟವೂ ಮೀರಿದ್ದರೂ ಪ್ರಯಾಣಿಕರು ಅದರಲ್ಲೂ ಶಾಲಾ ಮಕ್ಕಳು ಅಪಾಯದ ಪರಿಸ್ಥಿತಿಯಲ್ಲೇ ಓಡಾಡ ಬೇಕಾದ ಅನಿವಾರ್ಯತೆಯಿದೆ.

ಗುಂಡ್ಲುಪೇಟೆ ಡಿಪೋ ಗುಜುರಿ ಬಸ್ ಗಳು ಈಗಲೂ ಸಂಚಾರ?

ಗುಂಡ್ಲುಪೇಟೆ ಡಿಪೋನಲ್ಲಿ ಒಟ್ಟು 115 ರಿಂದ 120 ಕೆಎಸ್ ಆರ್ ಟಿಸಿ ಬಸ್ ಗಳಿವೆ. 10 ಲಕ್ಷ ಕಿ.ಮೀ ಮೀರಿದ ಬಸ್ ಗಳನ್ನು ಸ್ಕ್ರಾಪ್ ಅಥವಾ ಗುಜರಿಗೆ ಹಾಕ್ತೀವಿ ಅಂತ ಹೇಳೋ ಡಿಪೋ ಅಧಿಕಾರಿಗಳು ಬಹುತೇಕ ಬಸ್ ಗಳು 15 ಲಕ್ಷ ಕಿ.ಮೀ ಸಂಚರಿಸಿದ್ದರೂ ಅವುಗಳನ್ನು ಗುಜುರಿಗೆ ಹಾಕದೆ ರಸ್ತೆ ಮೇಲೆ ಓಡಾಟಕ್ಕೆ ಬಿಟ್ಟಿದ್ದಾರೆ. ಬಸ್ ನಲ್ಲಿ ವಾಹನಗಳ ಓಡಾಡಿದಾಗ ಕಿ.ಲೋ ಮೀಟರ್ ದಾಖಲಾಗುತ್ತದೆಂದು ಡ್ಯಾಷ್ ಬೋರ್ಡ್ ನಲ್ಲಿನ ಮೀಟರ್ ಬಾಕ್ಸ್ ಓಡದಂತೆ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಬಸ್ ಸುಸ್ಥಿತಿಯಲ್ಲಿದ್ದಿದ್ದರೆ ಟೈರ್ ಸ್ಪೋಟ ಏಕೆ ಆಗುತ್ತಿತ್ತು?

“ಕೆಎ-10ಎಫ್- 006 ಕೆಎಸ್ ಆರ್ ಟಿಸಿ ಬಸ್ ಎಲ್ಲ ರೀತಿಯಲ್ಲೂ ಕಂಡೀಷನ್ ಚೆನ್ನಾಗಿದೆ. ಈ ಬಸ್ಸಿನ ಬ್ರೇಕ್ ಮತ್ತು ಎಂಜಿನ್ ಚೆನ್ನಾಗಿದೆ. ಕೆಎಸ್ ಆರ್ ಟಿಸಿ ಈ ಬಸ್ ಗಳಿಗೆ ನಾವು ಇನ್ಶುರೆನ್ಸ್ ಮಾಡಿಸೋದಿಲ್ಲ. ಸಾರಿಗೆ ನಿಗಮದಲ್ಲಿ ಆಂತರಿಕವಾಗಿ ಪರಿಹಾರ ನೀಡುವ ವ್ಯವಸ್ಥೆಯಿದೆ. ಈ ಬಸ್ ನ ಇನ್ ಶ್ಯುರೆನ್ಸ್ ಅವಧಿ ಜುಲೈ 2020ರಲ್ಲಿ ಮುಗಿದಿದೆ ಎಂಬ ಬಗ್ಗೆ ಪರಿಶೀಲಿಸುತ್ತೇವೆ. ಬಸ್ ಚಕ್ರ ಸ್ಪೋಟವಾಗಿ 30 ಮೀಟರ್ ತನಕ ಮುಂದೆ ಚಲಿಸಿದೆ. ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಪೋಟದ ಬಗ್ಗೆ ತಾಂತ್ರಿಕ ಪರಿಣಿತರಿಗೆ ವರದಿ ನೀಡುವಂತೆ ತಿಳಿಸಲಾಗಿದೆ.”

– ಬಿ.ಶ್ರೀನಿವಾಸ್, ವಿಭಾಗೀಯ ನಿಯಂತ್ರಕರು, ಚಾಮರಾಜನಗರ

ಚಾಮರಾಜನಗರ ವಿಭಾಗೀಯ ನಿಯಂತ್ರಕ ಬಿ.ಶ್ರೀನಿವಾಸ್ ಖುದ್ದಾಗಿ ಘಟನೆ ನಡೆದ ಸ್ಥಳಕ್ಕೆ ಹೋಗಿ ಅಲ್ಲಿ ಬಸ್ ನ ಸ್ಥಿತಿಗತಿಯನ್ನು ನೋಡಿ ಈ ಮಾತು ಹೇಳಿದ್ದಾರೆ. ಆದರೆ ಬಸ್ ಉತ್ತಮ ಕಂಡೀಷನ್ ಇದ್ದಿದ್ದೇ ಆದರೆ ಬಸ್ ಟೈರ್ ಸ್ಪೋಟವಾಗುವ ಪ್ರಮೇಯ ಬರುತ್ತಿರಲಿಲ್ಲ. ಬ್ರೇಕ್ ಸುಸ್ಥಿತಿಯಲ್ಲಿದ್ದರೆ ಚಾಲಕ ಬ್ರೇಕ್ ಹಿಡಿದ ಕೂಡಲೇ ಬ್ರೇಕ್ ಆ ರೀತಿ ಕಿತ್ತುಬಂದಿರುತ್ತಿರಲಿಲ್ಲ ಅಲ್ಲವೇ? ಪೂರ್ತಿಯಾಗಿ ಸವೆದು ಟೈರ್ ಬಾಲ್ಡ್ ಆಗಿದ್ದರಿಂದಲೇ ಬಸ್ ಟೈರ್ ಸ್ಪೋಟವಾಗಿದೆ ಎಂದು ತಿಳಿದು ಬಂದಿದೆ.

ಕೆಎ- 10ಎಫ್ – 0006 ಬಸ್ ಕುರಿತ ಮಾಹಿತಿ :

ಬಸ್ ತಯಾರಿಕೆ ವರ್ಷ ಮತ್ತು ಅದರ ಚಾಸಿಸ್ ನಂ. : 2010 / ಎಂಎಟಿ412076ಎಒಎಫ್11591

ಬಸ್ ತಯಾರಿಕ ಕಂಪನಿ ಹಾಗೂ ಮಾಡೆಲ್ : ಟಾಟಾ ಮೋಟಾರ್ಸ್ ಲಿ. / 53ಸಿ ಯೂರೋ- III

ಕೆಎಸ್ ಆರ್ ಟಿಸಿ ಬಸ್ ಖರೀದಿಸಿದ ದಿನಾಂಕ : 23- 06- 2020

ಬಸ್ ಚಾಲನಾ ಫಿಟ್ ನೆಸ್ ಅವಧಿ : 27- 07- 2022

ಬಸ್ ವಿಮೆ ಅವಧಿ : 25-07-22019 ರಿಂದ 24-07-2020

ಪಾಲಿಸಿ ನಂಬರ್ : 3523431ಕೆಎ10ಎಫ್0006

ವಿಮಾ ಕಂಪನಿ : ಕರ್ನಾಟಕ ಸರ್ಕಾರಿ ವಿಮಾ

ಈ ಭಾಗದಲ್ಲಿ ಸೂಕ್ತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರದ ಕಾರಣ ಹಿಂದುಳಿದ ಜಿಲ್ಲೆ ಚಾಮರಾಜನಗರದಲ್ಲಿ ಅನಿವಾರ್ಯವಾಗಿ ಬಡ ಪ್ರಯಾಣಿಕರು ಮತ್ತು ಸಾಮಾನ್ಯ ಜನರು ಕೆಎಸ್ ಆರ್ ಟಿಸಿ ಸಾಮಾನ್ಯ ಬಸ್ ಗಳನ್ನೇ ತಮ್ಮ ದಿನನಿತ್ಯದ ಓಡಾಟಕ್ಕೆ ಬಳಸುತ್ತಾರೆ. ಹೀಗಾಗಿ ಸಾರಿಗೆ ಇಲಾಖೆ ಈ ಭಾಗದಲ್ಲಿ ಸುಸ್ಥಿತಿಯಲ್ಲಿರುವ ಹಾಗೂ ಕಾರ್ಯಕ್ಷಮತೆ ಹೊಂದಿದ ಬಸ್ ಗಳನ್ನು ಕಾರ್ಯಾಚರಣೆಗೆ ಬಿಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರೀಕರ ಆಗ್ರಹವಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

ಉಲ್ಲಾಳು ವಾರ್ಡ್ ನಲ್ಲಿ ಬಿಡಿಎ ಕಾರ್ಯಾಚರಣೆ : ಅಕ್ರಮ ಶೆಡ್ ತೆರವು ಮಾಡಿ – 40.57 ಕೋಟಿ ರೂ. ಮೌಲ್ಯದ ತನ್ನ ಸ್ವತ್ತು ಸ್ವಾಧೀನಕ್ಕೆ ಪಡೆದ ಪ್ರಾಧಿಕಾರ

Next Post

ದೇಶದಲ್ಲಿ ಸೆ.17 ರಂದು ನೀಡಿದ ಕೋವಿಡ್ ಲಸಿಕೆಯಲ್ಲಿ ರಾಜ್ಯದ ಪಾಲು ಶೇ.11 ರಷ್ಟು : ಲಸಿಕೆ ನೀಡುವುದರಲ್ಲಿ ಕರ್ನಾಟಕ ನಂ.1 – ಸಚಿವ ಡಾ.ಸುಧಾಕರ್

Next Post

ದೇಶದಲ್ಲಿ ಸೆ.17 ರಂದು ನೀಡಿದ ಕೋವಿಡ್ ಲಸಿಕೆಯಲ್ಲಿ ರಾಜ್ಯದ ಪಾಲು ಶೇ.11 ರಷ್ಟು : ಲಸಿಕೆ ನೀಡುವುದರಲ್ಲಿ ಕರ್ನಾಟಕ ನಂ.1 - ಸಚಿವ ಡಾ.ಸುಧಾಕರ್

MP Sadananda Gowda Morphed Video | ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ : ಸಂಸದ ಸದಾನಂದಗೌಡ ಸ್ಪಷ್ಟನೆ

Please login to join discussion

Like Us on Facebook

Follow Us on Twitter

Recent News

ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d