Friday, May 30, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ: ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ

    ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್

    ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯ ಸಮಸ್ಯೆಗೆ ಶೀಘ್ರ ಪರಿಹಾರ : ಸಚಿವ ಕೆ.ಜೆ.ಜಾರ್ಜ್

    ಅಯೋಧ್ಯೆ: ಜೂನ್ 5 ರಿಂದ ರಾಮಮಂದಿರದಲ್ಲಿ ಏಳು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ; ಸಿಎಂ ಯೋಗಿ ಭಾಗಿ

    ರಾಜ್ಯದಲ್ಲಿ ₹15,441.17 ಕೋಟಿ ಬಂಡವಾಳ ಹೂಡಿಕೆಗೆ ಉನ್ನತಾಧಿಕಾರ ಸಮಿತಿ ಒಪ್ಪಿಗೆ

    ಸಾರ್ವಜನಿಕರಿಗೆ ಸಿಹಿಸುದ್ದಿ: 2ನೇ ಮತ್ತು 4ನೇ ಶನಿವಾರ, ಭಾನುವಾರಗಳಲ್ಲೂ ರಾಜ್ಯದ ಈ 35 ಉಪನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ

    Inspiration News | ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸಿನ ಚಾಲಕನ ಮಗ ಈಗ ಐಎಫ್‌ಎಸ್‌ ಅಧಿಕಾರಿ!

    ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಈಗ ಚುನಾವಣೆಯಾದರೆ ಬಿಜೆಪಿಗೆ ಬಹುಮತ ಸಾಧ್ಯತೆ ; ಸಿದ್ದರಾಮಯ್ಯ ಇನ್ನೂ ಮುಖ್ಯಮಂತ್ರಿ ಆಯ್ಕೆಯಲ್ಲಿ ಟಾಪ್ : ಪೀಪಲ್ಸ್ ಪಲ್ಸ್ ಸಮೀಕ್ಷಾ ವರದಿ

    ಕರೋನಾ ವೈರಸ್ ಗ್ರಾಫಿಕ್ ಚಿತ್ರ

    ಬೆಂಗಳೂರಿನಲ್ಲಿ ಕೋವಿಡ್ ಏರಿಕೆ: ಆತಂಕ ಬೇಡ, ಎಚ್ಚರಿಕೆಯಿರಲಿ ; ಸರ್ಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

  • Bengaluru Focus

    ಕಾಲ್ನಡಿಗೆ ಮೂಲಕ ಕೋರಮಂಗಲ ಸುತ್ತಮುತ್ತ 3.5 ಕಿ.ಮೀ ನಡೆದು ಪಾದಚಾರಿ ಮಾರ್ಗ- ರಸ್ತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್

    BW EXCLUSIVE | ಬೆಂಗಳೂರು ಮಾಸ್ಟರ್ ಪ್ಲಾನ್ ತಿದ್ದುಪಡಿ -2025 ಅಧಿಸೂಚನೆ : ಹೊಸದಾಗಿ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಲಾಭವೇ? ನಷ್ಟವೇ?

    ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್

    ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯ ಸಮಸ್ಯೆಗೆ ಶೀಘ್ರ ಪರಿಹಾರ : ಸಚಿವ ಕೆ.ಜೆ.ಜಾರ್ಜ್

    ಬಿಡಿಎ ಬಡಾವಣೆ ಕುರಿತ ಗ್ರಾಫಿಕ್ಸ್ ಸಾಂದರ್ಭಿಕ ಚಿತ್ರ

    ಅಗತ್ಯವಿರುವ ಮೂಲಸೌಕರ್ಯ ಒದಗಿಸದೆ ಹೊಸ ಬಡಾವಣೆ ಬೇಡ: ಶಾಸಕ ಸುರೇಶ್ ಕುಮಾರ್ ಆಗ್ರಹ

    BW NEWS IMPACT | ಉಲ್ಲಾಳ ಕೆರೆ ಸಂಪರ್ಕಿಸುವ ರಾಜಕಾಲುವೆ ಹೂಳು-ಜೊಂಡಿಗೆ ಮುಕ್ತಿ : ಬೃಹತ್ ನೀರುಗಾಲುವೆ ಸ್ವಚ್ಛತೆ ಆರಂಭ!!

    BW EXCLUSIVE | ಸರ್ಕಾರ ಬದಲಾಗಿದ್ದಕ್ಕೆ ಬೆಂಗಳೂರಿನ ಕೆರೆಗಳ ಪ್ರವಾಹ ನಿಯಂತ್ರಿಸುವ ಸ್ಲೂಸ್ ಗೇಟ್ ಯೋಜನೆಗೆ ಕತ್ತರಿ ಬಿದ್ದಿದೆ!!

    ಕರೋನಾ ವೈರಸ್ ಗ್ರಾಫಿಕ್ ಚಿತ್ರ

    ಬೆಂಗಳೂರಿನಲ್ಲಿ ಕೋವಿಡ್ ಏರಿಕೆ: ಆತಂಕ ಬೇಡ, ಎಚ್ಚರಿಕೆಯಿರಲಿ ; ಸರ್ಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

    ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ಬಿ-ಸ್ಮೈಲ್‌ಗೆ : ತೆರವಾದ ಎರಡು ಸಿಇ ಪೋಸ್ಟ್ ಗಳ ನೇಮಕಕ್ಕೆ ಸರ್ಕಾರ ಆದೇಶ

    ಲಾಲ್ ಬಾಗ್‌ನಲ್ಲಿ 150 ವರ್ಷಗಳ ಇತಿಹಾಸದ ಫೈಕಸ್ ವೃಕ್ಷ ಧರೆಗೆ!

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ: ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ

    ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್

    ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯ ಸಮಸ್ಯೆಗೆ ಶೀಘ್ರ ಪರಿಹಾರ : ಸಚಿವ ಕೆ.ಜೆ.ಜಾರ್ಜ್

    ಅಯೋಧ್ಯೆ: ಜೂನ್ 5 ರಿಂದ ರಾಮಮಂದಿರದಲ್ಲಿ ಏಳು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ; ಸಿಎಂ ಯೋಗಿ ಭಾಗಿ

    ರಾಜ್ಯದಲ್ಲಿ ₹15,441.17 ಕೋಟಿ ಬಂಡವಾಳ ಹೂಡಿಕೆಗೆ ಉನ್ನತಾಧಿಕಾರ ಸಮಿತಿ ಒಪ್ಪಿಗೆ

    ಸಾರ್ವಜನಿಕರಿಗೆ ಸಿಹಿಸುದ್ದಿ: 2ನೇ ಮತ್ತು 4ನೇ ಶನಿವಾರ, ಭಾನುವಾರಗಳಲ್ಲೂ ರಾಜ್ಯದ ಈ 35 ಉಪನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ

    Inspiration News | ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸಿನ ಚಾಲಕನ ಮಗ ಈಗ ಐಎಫ್‌ಎಸ್‌ ಅಧಿಕಾರಿ!

    ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಈಗ ಚುನಾವಣೆಯಾದರೆ ಬಿಜೆಪಿಗೆ ಬಹುಮತ ಸಾಧ್ಯತೆ ; ಸಿದ್ದರಾಮಯ್ಯ ಇನ್ನೂ ಮುಖ್ಯಮಂತ್ರಿ ಆಯ್ಕೆಯಲ್ಲಿ ಟಾಪ್ : ಪೀಪಲ್ಸ್ ಪಲ್ಸ್ ಸಮೀಕ್ಷಾ ವರದಿ

    ಕರೋನಾ ವೈರಸ್ ಗ್ರಾಫಿಕ್ ಚಿತ್ರ

    ಬೆಂಗಳೂರಿನಲ್ಲಿ ಕೋವಿಡ್ ಏರಿಕೆ: ಆತಂಕ ಬೇಡ, ಎಚ್ಚರಿಕೆಯಿರಲಿ ; ಸರ್ಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

  • Bengaluru Focus

    ಕಾಲ್ನಡಿಗೆ ಮೂಲಕ ಕೋರಮಂಗಲ ಸುತ್ತಮುತ್ತ 3.5 ಕಿ.ಮೀ ನಡೆದು ಪಾದಚಾರಿ ಮಾರ್ಗ- ರಸ್ತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್

    BW EXCLUSIVE | ಬೆಂಗಳೂರು ಮಾಸ್ಟರ್ ಪ್ಲಾನ್ ತಿದ್ದುಪಡಿ -2025 ಅಧಿಸೂಚನೆ : ಹೊಸದಾಗಿ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಲಾಭವೇ? ನಷ್ಟವೇ?

    ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್

    ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯ ಸಮಸ್ಯೆಗೆ ಶೀಘ್ರ ಪರಿಹಾರ : ಸಚಿವ ಕೆ.ಜೆ.ಜಾರ್ಜ್

    ಬಿಡಿಎ ಬಡಾವಣೆ ಕುರಿತ ಗ್ರಾಫಿಕ್ಸ್ ಸಾಂದರ್ಭಿಕ ಚಿತ್ರ

    ಅಗತ್ಯವಿರುವ ಮೂಲಸೌಕರ್ಯ ಒದಗಿಸದೆ ಹೊಸ ಬಡಾವಣೆ ಬೇಡ: ಶಾಸಕ ಸುರೇಶ್ ಕುಮಾರ್ ಆಗ್ರಹ

    BW NEWS IMPACT | ಉಲ್ಲಾಳ ಕೆರೆ ಸಂಪರ್ಕಿಸುವ ರಾಜಕಾಲುವೆ ಹೂಳು-ಜೊಂಡಿಗೆ ಮುಕ್ತಿ : ಬೃಹತ್ ನೀರುಗಾಲುವೆ ಸ್ವಚ್ಛತೆ ಆರಂಭ!!

    BW EXCLUSIVE | ಸರ್ಕಾರ ಬದಲಾಗಿದ್ದಕ್ಕೆ ಬೆಂಗಳೂರಿನ ಕೆರೆಗಳ ಪ್ರವಾಹ ನಿಯಂತ್ರಿಸುವ ಸ್ಲೂಸ್ ಗೇಟ್ ಯೋಜನೆಗೆ ಕತ್ತರಿ ಬಿದ್ದಿದೆ!!

    ಕರೋನಾ ವೈರಸ್ ಗ್ರಾಫಿಕ್ ಚಿತ್ರ

    ಬೆಂಗಳೂರಿನಲ್ಲಿ ಕೋವಿಡ್ ಏರಿಕೆ: ಆತಂಕ ಬೇಡ, ಎಚ್ಚರಿಕೆಯಿರಲಿ ; ಸರ್ಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

    ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ಬಿ-ಸ್ಮೈಲ್‌ಗೆ : ತೆರವಾದ ಎರಡು ಸಿಇ ಪೋಸ್ಟ್ ಗಳ ನೇಮಕಕ್ಕೆ ಸರ್ಕಾರ ಆದೇಶ

    ಲಾಲ್ ಬಾಗ್‌ನಲ್ಲಿ 150 ವರ್ಷಗಳ ಇತಿಹಾಸದ ಫೈಕಸ್ ವೃಕ್ಷ ಧರೆಗೆ!

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home Bengaluru Focus

ರಾಜಧಾನಿಯ ಕೋವಿಡ್ ಶವಸಂಸ್ಕಾರಕ್ಕೆ ಸೆಂಟ್ರಲ್ ಕಂಟ್ರೋಲ್ ರೂಮ್ ನಿಗಾ

ಕುರುಬರಹಳ್ಳಿ ನೂತನ ಸ್ಮಶಾನ ನಿರ್ಮಾಣ ಕಾರ್ಯ ಅಂತಿಮ ಹಂತದ ಸಿದ್ಧತೆ | ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಾಮೂಹಿಕ ಶವಸಂಸ್ಕಾರಕ್ಕೆ ಮೀಸಲು | ಬೆಟ್ಟಹಳ್ಳಿಯಲ್ಲೂ ಮೂರು- ನಾಲ್ಕು ದಿನಗಳಲ್ಲಿ ನೂತನ ಸ್ಮಶಾನ ಸಾರ್ವಜನಿಕರ ಬಳಕೆಗೆ ಸಿದ್ದ

by Bengaluru Wire Desk
April 23, 2021
in Bengaluru Focus, BW Special
Reading Time: 1 min read
10
ಬಿಬಿಎಂಪಿ ಕೇಂದ್ರೀಯ ನಿಯಂತ್ರಣ ಕಚೇರಿ ಚಿತ್ರ

ಬಿಬಿಎಂಪಿ ಕೇಂದ್ರೀಯ ನಿಯಂತ್ರಣ ಕಚೇರಿ ಚಿತ್ರ

ಬೆಂಗಳೂರು : ಕೋವೀಡ್ ಸೋಂಕಿನಿಂದ ಮೃತಪಡುತ್ತಿರುವವರ ಪ್ರಮಾಣ ದಿನೇ ದಿನೇ ಒಂದೇ ಸಮನೆ ಏರಿಕೆಯಾಗ್ತಿದೆ. ಮಾರ್ಚ್ 22ರಂದು ದಿನವೊಂದಕ್ಕೆ ಕೋವಿಡ್ ನಿಂದ ಸಾವನ್ನಪ್ಪುವವರ ಪ್ರಮಾಣ 4 ಇದ್ದಿದ್ದು ಏಪ್ರಿಲ್ 22ರ ವೇಳೆಗೆ 68ಕ್ಕೆ ಏರಿಕೆಯಾಗಿದೆ. ಒಂದೇ ತಿಂಗಳಲ್ಲಿ ಸಾವಿನ ನಾಗಾಲೋಟ 897ಕ್ಕೆ ಏರಿಕೆಯಾಗಿದೆ.

ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿನ 12 ವಿದ್ಯುತ್ ಚಿತಾಗಾರದ ಮೇಲಿನ ಒತ್ತಡ ತಗ್ಗಿಸಲು ಬೆಂಗಳೂರು ಜಿಲ್ಲಾಡಳಿತ ತಾವರೆಕೆರೆ ಬಳಿಯ ಕುರುಬರಹಳ್ಳಿ ಗ್ರಾಮದಲ್ಲಿ 4 ಎಕರೆ ಸರ್ಕಾರಿ ಜಾಗದಲ್ಲಿ ಹಾಗೂ ದಾಸನಪುರ ಹೋಬಳಿಯ ಗಿಡ್ಡೇನಹಳ್ಳಿ ಸರ್ಕಾರಿ ಭೂಮಿಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದವರನ್ನು ಸುಡಲು ಅಗತ್ಯ ಮೂಲಭೂತ ಸೌಕರ್ಯವನ್ನು ತುರ್ತಾಗಿ ಕಲ್ಪಿಸುತ್ತಿದೆ. ಆ ಪೈಕಿ ತಾವರೆಕೆರೆ ಗ್ರಾಮದಲ್ಲಿನ ಸ್ಮಶಾನ ಶನಿವಾರ ಅಥವಾ ಭಾನುವಾರದಿಂದ ಅಂತ್ಯಸಂಸ್ಕಾರ ನಡೆಸಲು ಸಿದ್ಧವಾಗಲಿದೆ.

ಈಗಾಗಲೇ ತಾವರೆಕೆರೆ ಬಳಿಯ ಕುರುಬರಹಳ್ಳಿ ಗ್ರಾಮ ಈ ಸರ್ಕಾರಿ ಭೂಮಿಯಲ್ಲಿ ದೊಡ್ಡ ಮಟ್ಟದಲ್ಲಿ ಕಟ್ಟಿಗೆಗಳನ್ನು ಸಂಗ್ರಹಿಸಿಡಲಾಗಿದೆ. ಈ ಸ್ಮಶಾನಕ್ಕೆ ಬಂದು ಹೋಗಲು ರಸ್ತೆ, ಮೃತದೇಹವನ್ನಿಟ್ಟು ಸುಡಲು ಅನುವಾಗುವಂತೆ ಮೇಲ್ಚಾವಣಿ, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬರುವವರಿಗೆ ಪಿಪಿಇ ಕಿಟ್ ಹಾಗೂ ಅಗತ್ಯ ಧಾರ್ಮಿಕ ಕ್ರಿಯೆ ನಡೆಸಲು ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತದಿಂದ ಬೋರ್ ವೆಲ್ ಅನ್ನು ಈ ಉದ್ದೇಶಕ್ಕಾಗಿ ಕೊರೆಸಲಾಗಿದೆ. ಈ ಜಾಗದಲ್ಲಿ ಏಕ ಕಾಲಕ್ಕೆ 20 ರಿಂದ 25 ಮೃತ ದೇಹಗಳನ್ನು ಕಟ್ಟಿಗೆಗಳಿಂದ ಸುಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

ಅದೇ ರೀತಿ ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿಯ ಗಿಡೇಡನಹಳ್ಳಿ ಸರ್ವೆ ನಂಬರ್ 80ರಲ್ಲಿ ಸರ್ಕಾರಿ ಕರಾಬು ಭೂಮಿ 80 ಎಕರೆ ಜಾಗವಿದ್ದು, ಆ ಪೈಕಿ 4 ಎಕರೆ ಜಾಗದಲ್ಲಿ ಕಟ್ಟಿಗೆಯಿಂದ ಸುಡುವ ಸ್ಮಶಾನ ನಿರ್ಮಿಸಲು ಈಗಾಗಲೇ ಭರದಿಂದ ಕೆಲಸ ಆರಂಭವಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಈ ಸ್ಮಶಾನವೂ ಕೋವಿಡ್ ನಿಂದ ಸಾವನ್ನಪ್ಪಿದವರ ಶವ ಸಂಸ್ಕಾರಕ್ಕೆ ಲಭ್ಯವಾಗಲಿದೆ.

ನಗರದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿರುವುದನ್ನು ಗಮನಿಸಿದ ಬೆಂಗಳೂರು ನಗರ ಜಿಲ್ಲಾಡಳಿತ 4 ತಾಲ್ಲೂಕುಗಳಲ್ಲಿನ 10 ಸ್ಥಳಗಳಲ್ಲಿರುವ 24.16 ಎಕರೆ ಸರ್ಕಾರಿ ಜಮೀನಿನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಾರ್ವಜನಿಕ ಸ್ಮಶಾನ ಹಾಗೂ ವಿದ್ಯುತ್ ಚಿತಾಗಾರ ನಿರ್ಮಾಣ ಉದ್ದೇಶಕ್ಕಾಗಿ ಒಂದು ವಾರದ ಹಿಂದೆ ಹಸ್ತಾಂತರಿಸಿದೆ. ಈ ಪೈಕಿ ಗಿಡ್ಡೇನಹಳ್ಳಿಯಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲು ಸ್ಮಶಾನ ಸಿದ್ದವಾಗುತ್ತಿದೆ. ಶನಿವಾರ ಅಥವಾ ಭಾನುವಾರ ಕುರುಬರಹಳ್ಳಿಯಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

– ಜೆ.ಮಂಜುನಾಥ್, ಬೆಂಗಳೂರು ನಗರ ಜಿಲ್ಲಾಧಿಕಾರಿ

ಬೆಂಗಳೂರು ಜಿಲ್ಲಾಡಳಿತ ನೀಡಿರುವ 24 ಎಕರೆಗಳ ಪೈಕಿ ಕುರುಬರಹಳ್ಳಿ ಹಾಗೂ ಗಿಡ್ಡೇನಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಸ್ಮಶಾನಗಳನ್ನು ಯಾರು ನಿರ್ವಹಣೆ ಮಾಡಬೇಕು?  ಯಾರು ಸ್ಮಶಾನದ ಉಸ್ತುವಾರಿ ವಹಿಸಬೇಕು? ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ಬಳಿಕ ಅವುಗಳ ಸ್ವಚ್ಛತೆ ಯಾರು ಮಾಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ನಗರ ಜಿಲ್ಲಾಡಳಿತ ನೀಡಿದ ಕೆಲವು ಸಣ್ಣ ಜಾಗಗಳನ್ನು ಪಾಲಿಕೆ ಬೇರೆ ಉದ್ದೇಶಗಳಿಗೆ ಬಳಸಲಿದೆ.

– ಗೌರವಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ

ಈ ಹಿಂದೆ ಪಾಲಿಕೆ ವ್ಯಾಪ್ತಿಯಲ್ಲಿರುವ 7 ವಿದ್ಯುತ್ ಚಿತಾಗಾರಗಳಲ್ಲಿ ಆಂಬುಲೆನ್ಸ್ ಗಳಲ್ಲಿ ತರಲಾಗುತ್ತಿರುವ ಕೋವಿಡ್ ನಿಂದ ಮೃತಪಟ್ಟವರ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲು ಮಾರುದ್ದ ಕ್ಯೂ ನಿಲ್ಲುವ ಪ್ರಮಾಣ ಹೆಚ್ಚಾಗುತ್ತಿದ್ದು, ಅಂತ್ಯ ಸಂಸ್ಕಾರಕ್ಕೆ ತಗಲುವ ಸಮಯ ಹೆಚ್ಚಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಏ.21ರಂದು ಬಿಬಿಎಂಪಿ ಮುಖ್ಯ ಆಯುಕ್ತರು 7ರ ಬದಲು ಪಾಲಿಕೆಯ 12 ವಿದ್ಯುತ್ ಚಿತಾಗಾರಗಳಲ್ಲಿ ಸಾಮಾನ್ಯ ಶವಗಳಲ್ಲದೆ, ಕೋವಿಡ್ ನಿಂದ ಮೃತಪಟ್ಟವರ ಶವಗಳನ್ನು ಅಂತ್ಯ ಸಂಸ್ಕಾರ ನಡೆಸಲು ಆದೇಶಿಸಿದ್ದರು.

ಸೆಂಟ್ರಲ್ ಕಂಟ್ರೂಲ್ ರೂಮ್ ಮೂಲಕ ವಿದ್ಯುತ್ ಚಿತಾಗಾರಗಳ ನಿಯಂತ್ರಣ

12 ವಿದ್ಯುತ್ ಚಿತಾಗಾರಗಳ ಮೇಲಿನ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಲು ಸೆಂಟ್ರಲ್ ಕಂಟ್ರೋಲ್ ರೂಮ್ ಮೂಲಕ ಅರ್ಧಗಂಟೆಗೊಮ್ಮೆ ಪರಿಸ್ಥಿತಿ ಅವಲೋಕಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿನಿಂದ ಮೃತಪಡುವವರ ಶವವನ್ನು ಯಾವ ವಿದ್ಯುತ್ ಚಿತಾಗಾರಕ್ಕೆ ಕೊಂಡೊಯ್ಯಬೇಕು ಎಂಬುದನ್ನು ಕೇಂದ್ರೀಯ ನಿಯಂತ್ರಣ ಕೊಠಡಿಯಿಂದಲೇ ಪಾಲಿಕೆಯ ಶವಸಾಗಿಸುವ ವಾಹನದ ಚಾಲಕರಿಗೆ ಅಥವಾ ಖಾಸಗಿ ಆಂಬುಲೆನ್ಸ್ ಚಾಲಕರಿಗೆ ಮಾಹಿತಿ ರವಾನಿಸಲಾಗುತ್ತದೆ. ಈ ವಾಹನದ ಜೊತೆ ಕೋವಿಡ್ ನಿಯಮಾವಳಿ ಅನ್ವಯ ಅಂತ್ಯ ಸಂಸ್ಕಾರ ನಡೆಸಲು ನರ್ಸ್ ಒಬ್ಬರನ್ನು ಜೊತೆಗೆ ಕಳುಹಿಸಲಾಗುತ್ತೆ. ಇದರಿಂದ ವಿದ್ಯುತ್ ಚಿತಾಗಾರಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ ಮೆಂಟ್ ಸಿಸ್ಟಮ್ (ಸಿಎಚ್ ಬಿಎಮ್ಎಸ್) ಹಾಗೂ ವಿದ್ಯುತ್ ಚಿತಾಗಾರಗಳ ಉಸ್ತುವಾರಿ ವಹಿಸಿರುವ ವಿಶೇಷ ಆಯುಕ್ತ ರಂದೀಪ್ ಹೇಳಿದ್ದಾರೆ.

ಸಾರ್ವಜನಿಕರು ಕರೋನಾ ಸೋಂಕಿನಿಂದ ಆಸ್ಪತ್ರೆ ಅಥವಾ ಮನೆಯಲ್ಲಿ ಮೃತರಾದವರನ್ನು ಉಚಿತವಾಗಿ ವಿದ್ಯುತ್ ಚಿತಾಗಾರಕ್ಕೆ ಸಾಗಿಸಲು 080-22493202 ಅಥವಾ 080-22493203, ಮೊಬೈಲ್ ಅಥವಾ ವಾಟ್ಸಪ್ ಮೂಲಕ 8792162736 ನಂಬರ್ ಬಿಬಿಎಂಪಿ ಸಹಾಯವಾಣಿಗೆ ಬೆಳಗ್ಗೆ 7 ರಿಂದ ರಾತ್ರಿ 10ರ ವರೆಗೆ ಕರೆ ಮಾಡಬಹುದು.

ಪಾಲಿಕೆಯಲ್ಲಿನ 12 ವಿದ್ಯುತ್ ಚಿತಾಗಾರಗಳಲ್ಲಿ ಹೆಣ ಸುಡುವ ಒಟ್ಟು 24 ಯಂತ್ರಗಳ ಪೈಕಿ ಒಂದು ಯಂತ್ರ ದುರಸ್ಥಿತಿಯಲ್ಲಿದೆ. ಒಂದು ಹೆಣ ಸುಡಲು ಒಂದು ಯಂತ್ರಕ್ಕೆ 1 ಗಂಟೆಯೆಂದರೂ 10 ಗಂಟೆಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಶವಗಳನ್ನು ಅಂತ್ಯಕ್ರಿಯೆ ಮಾಡಬಹುದಾಗಿದೆ. ಹೀಗಾಗಿ ಇಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪಾಲಿಕೆಯು 12 ಚಿತಾಗಾರಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ.

ಬೆಂಗಳೂರು ಗ್ರಾಮಾಂತರ, ರಾಜಧಾನಿಯ ಸುತ್ತಮುತ್ತಲ ಜಿಲ್ಲೆಗಳ ಕೋವಿಡ್ ನಿಂದ ಮೃತಪಟ್ಟ ಮೃತದೇಹಗಳನ್ನು ಇಲ್ಲಿಗೆ ತರಲಾಗುತ್ತಿದೆ. ಹೀಗಾಗಿ ಒತ್ತಡ ಹೆಚ್ಚಾಗಿದೆ. ನಗರದ ಹೊರವಲವಯದಲ್ಲಿರುವ ಕುರುಬರಹಳ್ಳಿ ಹಾಗೂ ಗಿಡ್ಡೇನಹಳ್ಳಿಯಲ್ಲಿ ಸಾಮೂಹಿಕ ಶವಸಂಸ್ಕಾರಕ್ಕೆ ಸ್ಮಶಾನ ಸಿದ್ದವಾದರೆ ಬೆಂಗಳೂರಿನ ಹೊರಗಿನಿಂದ ಬರುವ ಶವಗಳನ್ನು ಆ ಸ್ಥಳದಲ್ಲಿ ದಫನ್ ಮಾಡಬಹುದು. ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿನ ಚಿತಾಗಾರದ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಮೃತಪಡುತ್ತಿರುವ ಅಂಕಿಸಂಖ್ಯೆಯನ್ನು ವಿಶ್ಲೇಷಿಸಿದಾಗ ಬೆಂಗಳೂರಿನ, ಕಳೆದ ವರ್ಷದ ಅಕ್ಟೋಬರ್ ತಿಂಗಳಿನ (897) ಅಂಕಿ- ಸಂಖ್ಯೆಯನ್ನು ಏಪ್ರಿಲ್ ಅಂತ್ಯಕ್ಕೆ ಮುನ್ನವೇ ಮುಟ್ಟುವ ಸಾಧ್ಯತೆಯಿದೆ. ನಗರದಲ್ಲಿ ಈ ತಿಂಗಳಿನ 22ರ ತಾರೀಖಿನವರೆಗೆ ಒಟ್ಟಾರೆ 820 ಜನರು ಇಹಲೋಕ ತ್ಯಜಿಸಿರುವುದು ಬಿಬಿಎಂಪಿ ವರದಿಯಿಂದ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ನಾಗರೀಕರು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕೆನ್ನುವುದು ಬೆಂಗಳೂರು ವೈರ್ ಕಾಳಜಿ.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...

Previous Post

Covid News | ಮೆಡಿಕಲ್ ಆಕ್ಸಿಜನ್ – ರೆಮಿಡಿಸಿವಿರ್ ಇಂಜಕ್ಷನ್ ಲಭ್ಯತೆ ಕುರಿತ ಸಹಾಯ ಕೇಂದ್ರ ರಾಜ್ಯದಲ್ಲಿ ಆರಂಭ

Next Post

BW SPECIAL | Oxygen Express | ಕೋವಿಡ್ ವಿರುದ್ಧದ ಹೋರಾಟದಲ್ಲಿ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಕಾರ್ಯಾಚರಣೆ ಹೇಗಿರುತ್ತೆ ಗೊತ್ತಾ?

Next Post

BW SPECIAL | Oxygen Express | ಕೋವಿಡ್ ವಿರುದ್ಧದ ಹೋರಾಟದಲ್ಲಿ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಕಾರ್ಯಾಚರಣೆ ಹೇಗಿರುತ್ತೆ ಗೊತ್ತಾ?

BW EXCLUSIVE | ರಾಜ್ಯದಲ್ಲಿ ಮೆಡಿಕಲ್ ಆಕ್ಸಿಜನ್ ಪೂರೈಕೆ : ವಾಸ್ತವ ಕಟುಸತ್ಯ ಏನು ?

Please login to join discussion

Like Us on Facebook

Follow Us on Twitter

Recent News

ಕಾಲ್ನಡಿಗೆ ಮೂಲಕ ಕೋರಮಂಗಲ ಸುತ್ತಮುತ್ತ 3.5 ಕಿ.ಮೀ ನಡೆದು ಪಾದಚಾರಿ ಮಾರ್ಗ- ರಸ್ತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್

May 30, 2025

BW EXCLUSIVE | ಬೆಂಗಳೂರು ಮಾಸ್ಟರ್ ಪ್ಲಾನ್ ತಿದ್ದುಪಡಿ -2025 ಅಧಿಸೂಚನೆ : ಹೊಸದಾಗಿ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಲಾಭವೇ? ನಷ್ಟವೇ?

May 30, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕಾಲ್ನಡಿಗೆ ಮೂಲಕ ಕೋರಮಂಗಲ ಸುತ್ತಮುತ್ತ 3.5 ಕಿ.ಮೀ ನಡೆದು ಪಾದಚಾರಿ ಮಾರ್ಗ- ರಸ್ತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್

May 30, 2025

BW EXCLUSIVE | ಬೆಂಗಳೂರು ಮಾಸ್ಟರ್ ಪ್ಲಾನ್ ತಿದ್ದುಪಡಿ -2025 ಅಧಿಸೂಚನೆ : ಹೊಸದಾಗಿ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಲಾಭವೇ? ನಷ್ಟವೇ?

May 30, 2025

ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ: ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ

May 30, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d